ವನಮಾಲಾಧರ ಕೃಷ್ಣ
ವನರುಹಲೋಚನ ತನ್ವನೀತೆ ಶ್ರೀ ತುಳಸಿಯ ಪ.
ಅಚ್ಚುತ ಧರಿಸಿಹ ಅಚ್ಚ ಶ್ರೀ ತುಳಸಿಯ
ಇಚ್ಛಿಸಿದಾ ಮುನಿ ಇಚ್ಛೆ ಪೂರೈಸಿದ
ಸಚ್ಚಿದಾನಂದ ಮೂರುತಿ 1
ದಾನವಾಂತಕನ ದಾನವ ಕೊಡುತಲಾ
ಮಾನುನಿ ಚಿಂತಿಸೆ ಕಾಮಿನಿ ರುಕ್ಮಿಣಿ
ಶ್ರೀನಿಧಿಗೆ ಸಮವೆಂದಾಮುನಿಗೆ ತೂಗಾ
ನಂದದೊಳಗಿತ್ತ ಮಾನುನಿ ತುಳಸಿಯ 2
ಪರಿಪರಿ ಭಾಗ್ಯಕೆ ಸರಿಮಿಗಿಲಾದ
ಪರಿಮಳ ತುಳಸಿಯ ಸುರಮುನಿ ಧರಿಸುತ
ಸ್ಮರಿಸುತ ಹರಿಯನು ವರದ ಶ್ರೀ ಶ್ರೀನಿವಾಸ
ಪೊರೆವನೆಂದ್ವರದಿಹ 3