ಕೇಶವಾಯೆನ್ನಿರಯ್ಯ ಹಾಗಂದೂ
ಪಾಶವ ಕಡಿಯಿರಯ್ಯ ಪ
ಕೇಶವ ನಾಮವ ಭಜಿಸುತ್ತಲೀಗ
ಆಸÉ ಕ್ಲೇಶಗಳನ್ನು ನೀಗಿರಿ ಬೇಗ ಅ.ಪ.
ವರದೂರ್ವಾಪುರದಲ್ಲಿ ನಿರುತನಾಗಿದ್ದು ತಾ
ಪರಮ ದಾಸರಿಗೆಲ್ಲ ಹರಿ ಭಾಸವಪ್ಪಾ
ಶರಣರ ಪಾಲಕ ಚನ್ನಕೇಶವರಾಯ
ಪರಬ್ರಹ್ಮ ರೂಪದಿ ಮೆರೆವ ಗೋಪಾಲ 1
ತರಳ ಪ್ರಲ್ಹಾದ ಕೇಶವನನ್ನು ಸ್ಮರಿಸಲು
ದುರುಳ ತಾತನ ಕೊಂದು ಕಂದನ ಪೊರೆದಾ
ಸರಳೆ ಪಾಂಚಾಲೆಯು ಸಭೆಯಲ್ಲಿ ಮೊರೆಯಿಡೆ
ತರುಣಿಗಕ್ಷಯವಿತ್ತು ಶ್ರೀಹರಿ ಪೊರೆದಾ 2