ಒಟ್ಟು 43 ಕಡೆಗಳಲ್ಲಿ , 23 ದಾಸರು , 43 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗಿನ್ನ ನಾನಧಿಕ ಇಂದಿರೇಶಾ ಎನಗೆ ನಾಥನು ಉಂಟು ಅನಾಥನು ನೀನು ಪ ಕುಲಗೋತ್ರ ನಿನಗಿಲ್ಲ ಕುಲಗೋತ್ರ ಎನಗುಂಟು ಲಲಿತರೂಪನು ನಾನು ಅರೂಪ ನೀನೂ ಚೆಲುವ ಸುಗುಣಿಯು ನಾನು ಅಗುಣರೂಪನು ನೀನು ಬಲಹೀನನು ನೀನು ಸಬಲ ನಾನು ದೇವಾ 1 ನಾಮಧೇಯನು ನಾ ಅನಾಮಧೇಯನು ನೀನು ಕಾಮಕಾಮುಕ ನಾ ಅಕಾಮಿ ನೀನು ಪಾರನು ನಾ ಅಪಾರನು ನೀನಯ್ಯಾ ನೇಮಬದ್ಧನು ನಾ ಅನೇಮಿ ನೀನು 2 ಗತಿಯು ನೀನೆಗೈಯ್ಯ ಸದ್ಗತಿಯು ನಿನಗಾರಯ್ಯ ವ್ರತನೇಮ ಎನಗುಂಟು ನಿನಗಾವುವೋ ಸತತಮಾನಿಯು ನಾನು ಅಮಾನಿ ನೀನಯ್ಯ ವಿತತಕರ್ಮಿಯು ನಾನು ಕರ್ಮಹೀನನು ನೀನು 3 ಪತಿತಪಾತಕಿ ನಾನು ಪತಿತಪಾವನನು ನೀನು ರತಿಬದ್ಧನು ನಾ ವಿರತಿಯು ನೀನು ಶ್ರೀತಜನರಪಾಲ ಆಶ್ರಿತ ನಾನು ನಿನಗೈಯ್ಯ ಸತತಪಾಲಕ ನೀನು ಪಾಲ್ಯ ನಾನು 4 ದೂತರಾಧಮ ನಾನು ದೂತವತ್ಸಲ ನೀನು ಆತುರನು ನಾನು ನಿಜದಾತ ನೀನು ನೀತ ಗುರುಜಗನ್ನಾಥವಿಠಲರೇಯ ತಾತ ನೀ ಎನಗಯ್ಯ ನಿನಗಾವ ತಾತಾ 5
--------------
ಗುರುಜಗನ್ನಾಥದಾಸರು
(ಅ) ಏನೆಂದು ಪೇಳಲೋ ರಾಮ ನಿನ್ನಾ ದೀನವತ್ಸಲತೆಯ ಆಶ್ರಿತ ಪ್ರೇಮ ಪ ಕಲ್ಲಾಗಿ ಪಥದಲ್ಲಿ ಬಿದ್ದ | ಮುನಿ ವಲ್ಲಭೆಯನು ಸಲಹಿದ ಸುಪ್ರಸಿದ್ಧ ಕಲ್ಲೆದೆಯವ ನಾನು ಸಿದ್ಧ | ಎನ್ನ ಅನಿರುದ್ಧ 1 ಪಶುಜಾತಿ ಸುಗ್ರೀವ ಮುಖರ | ನೀ ಹಸನಾಗಿ ಪೊರೆದದ್ದು ಕೇಳಿದೆ ವಿವರ ವಶವಲ್ಲದಿಂದ್ರಿಯನಿಕರವುಳ್ಳ ಪಶುಪ್ರಾಯ ನಾನಯ್ಯ ರಕ್ಷಿಸೋ ಚತುರ 2 ಚೆಂಡಾಲನಾದ ಗುಹನ | ಕೈ ಗೊಂಡು ಕಾಪಾಡಿದೆ ಕುರುಣದಿಂದವನ ಖಂಡಿತ ಪೇಳುವೆ ಘನ್ನ | ಕರ್ಮ ಚೆಂಡಾಲ ನಾನು ಶ್ರೀ ಕಾಂತ ಪ್ರಸನ್ನ 3
--------------
ಲಕ್ಷ್ಮೀನಾರಯಣರಾಯರು
--------------ಗುಡಿವಾಸಾ ಪ ------ತಾಪತ್ರಯಗಳಿಂದ ------ರದೆ ಬಂದೆ ಭೂಪಾ ನೀ ಕರುಣದಿ ಪೊರೆಯೆನ್ನ ಅ.ಪ ಸೂರ್ಯ ನೇತ್ರಾಗದಾಧರ----ಸುಂದರಗಾತ್ರಾ ಇಂದಿರಾ ಹೃದಯಾನಂದಾ ವಿಶ್ವೇಶ ಮು- ಮಾಧವ ಗೋವಿಂದಾ ಸಿಂಧು ಶಯನ ಆಶ್ರಿತ ಜನ ರಕ್ಷಕ ಮಂದರಧರ ಹರಿ ಮಂಗಳದಾಯಕ 1 ಸುರಮುನಿ ವಂದ್ಯ ದೇವ ದೇವಾದಿ ದೇವ ವರದಾ ಮಹಾನುಭಾವ ಕರುಣಸಾಗರನಿಲಯಾ ಕಮಲನಾಭ ಸ್ಥಿರಹರಿ ಪುರಿಗೀಯಾ ಪರಮಭಕ್ತನಾದ ಕರಿರಾಜನ ಕಾಯ್ದ ಇಂದು ಪಾದ 2 ಶಂಕರನುತ ಶಾಶ್ವತ ಜಗತ್ಕರ್ತ ಪಂಕಜೋದ್ಭವನ ಪಿತ ಶಂಕೆಯಿಲ್ಲದೆ ದೈತ್ಯರಾ ಭೇದಿಸಿ------ನೆನಿಸಿದ ಧೀರಾ ಕಿಂಕರನಾನು ನಿಮ್ಮ ಕೀರ್ತಿ ಕೊಂಡಾಡುವೆ ಪುಂಕಾಲದಿ (?) ಸಲಹೊ ಹೊನ್ನಪುರ 'ಹೊನ್ನವಿಠ್ಠಲಾ’ 3
--------------
ಹೆನ್ನೆರಂಗದಾಸರು
(ಗೋಕರ್ಣಮಠದ ವಿಠಲ ದೇವರು) ವಿಠ್ಠಲದೇವಾ ವಿಬುಧ ಸಂಜೀವ ರಟ್ಟು ಮಾಡದಿರೆನ್ನ ರಿಭುಗಳ ಕಾವಾ ಪ. ಪಾಂಡವಸೂತ ಪರಮವಿಖ್ಯಾತಾ ಪುಂಡಲೀಕಗೆ ಸರ್ವ ಪುರುಷಾರ್ಥದಾತಾ 1 ಸ್ವರ್ಣವದಾತ ಸುವರ್ಣವರೂಥಾ ಗೋಕರ್ಣಮಠೀಯ ದುಗ್ಧಾರ್ಣವನಾಥ 2 ಆಶ್ರಿತ ಸುರ ವೃಕ್ಷ ಅಸುರೇಶ ವನದಕ್ಷ ಸ್ವಾಶ್ರಯ ಕೊಡು ಶೇಷಗಿರಿಶಿಖರಾಧ್ಯಕ್ಷ 3
--------------
ತುಪಾಕಿ ವೆಂಕಟರಮಣಾಚಾರ್ಯ
ಊರ್ವಶಿ : ಬಂದ ಕಾಣೆ ಗೋವಿಂದ ಕ್ಷೀರ- ಸಿಂಧುಶಯನ ವನದಿಂದ ಇಂದಿರೇಶ ಮುದದಿಂದ ಮೌನಿಮುನಿ- ವೃಂದದಿಂದ ಸ್ತುತಿವಂದನೆಗೊಳ್ಳುತ1 ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು ಕಾಸಿಗೆ ಮಾರುವ ರೊಟ್ಟಿ ದಾಸರ ಕೂಡಿ ಜಗಜಟ್ಟಿ ಬಹು ದೇಶವ ತಿರುಗುವ ಶೆಟ್ಟಿ ದೂಷಣಾರಿ ಪಾದಾಶ್ರಿತಜನರಭಿ- ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ2 ದೊಡ್ಡವನೈ ಮಹಾರಾಯ ಹಳೆ ದುಡ್ಡಿಗೆ ನೀಡುವ ಕೈಯ ಅಡ್ಡಿಗೈದರೆ ಬಿಡನಯ್ಯ ಇವ ಬಡ್ಡಿಕೇಳುವ ತಿಮ್ಮಯ್ಯ ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ3 ತಿರುಪತಿಗೆ ಪ್ರತಿಯಾಗಿ ಪಡು ತಿರುಪತಿಯೆಂದಿಹ ಯೋಗಿ ಮೆರಸುವನೈ ಸ್ಥಿರವಾಗಿ ಶ್ರೀ ವರ ವೆಂಕಟ ಲೇಸಾಗಿ ಶರಣರು ಏನೆಂದು ಸಂತೋಷಿಪ ಕರುಣಾಕರ ಚಪ್ಪರ ಶ್ರೀನಿವಾಸನು4 ಈ ಪರಿಯಲಿ ಒಲಿದಿಪ್ಪಾ ಬಹು ಕಾಪಟ್ಯರಿಗೆ ತಾನೊಪ್ಪನಮ್ಮ ಗೋಪಾಲಕ ಜಗದಪ್ಪ ಶ್ರೀಪರಮಾತ್ಮ ನಾನಾಪರಿ ವಿಭವದಿ ಗೋಪುರದಲಿ ತಾ ವ್ಯಾಪಿಸಿ ನಿಂದನು5 ರಂಭೆ : ನಾರೀವರ್ಯಾರಮ್ಮ ನೋಡಲು ಸಾರಹೃದಯರಮ್ಮ ತೋರಣಛತ್ರಚಾಮರ ಬಿರುದುಗಳಿಂದ ಭೂರಿ ವಿಭವದಿಂದ ಸಾರಿಬರುವರಮ್ಮ1 ಕರದಿ ಕಲಶವಿಹುದು ಶಾಲಿನ ನಿರಿ ಮುಂದಿರುತಿಹುದು ಬೆರಳಿನೊಳುಂಗುರು ವರ ದ್ವಾದಶನಾಮ ಧರಿಸಿ ಸಮಂತ್ರೋಚ್ಚರಿಸುತ ಬರುವರು2 ಮಂದಿಗಳೊಡ್ಡಿನಲಿ ಬರುವರು ಮಂದಸ್ಮಿತದಲಿ ಚಂದದಿ ಜನಗಳ ಸಂದಣಿ ಮಧ್ಯದಿ ಇಂದಿರೆಯರಸನ ಧ್ಯಾನದಿ ಬರುವರು3 ಹಿಂಗದೆ ಬರುತಿಲ್ಲಿ ಮನಸಿನ ಇಂಗಿತವರಿತಿಲ್ಲಿ ಬಂಗಾರದ ಭೂಷಣಸಮುದಾಯದಿ ಅಂಗಜಪಿತನಿಗೆ ಶೃಂಗಾರಗೈವರು4 ವಿಪ್ರೋತ್ತಮರ ಗುಣ- ಕೆಂತು ಸೈರಣೆಯಾಂತು ನಾನಿರಲಿ ಚಿಂತಿತಾರ್ಥವನೀವ ಲಕ್ಷ್ಮೀ- ಸಂತಸದಿ ಪೂಜಾದಿ ಸತತಿ- ಯಾಂತಕೊಂಡಿಹೇಕಾಂತಭಕ್ತರು1 ಕೀರ್ತಿಯನು ಧರಿಸಿ ಮ- ತಾವೆಂದು ಧರ್ಮವನು ಪಾಲಿಸಿ ಸಿಂಧುಶಯನನ ಚಾರುಚರಣ- ದ್ವಂದ್ವಕಾನತರಾಗಿ ಲೋಕದಿ ವಂದ್ಯರೆನಿಸಿಯಾನಂದ ಪರರಿವ- ರೆಂದು ಶ್ರೀಗೋವಿಂದ ನಡೆಸುವ2 ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ ವಾದಗೈವ ಕುವಾದಿಗಳ ಮನ- ಭೇದಿಸುತ ನಿಜವಾದ ಮಾರ್ಗವ ಸಾಧುಗಳಿಂದ ದೃಢವಾದ ಮಾತಿದು3 ಮೇಗರೆಡಂಭಮಾತಲ್ಲ ಧನಿಯ ಕು- ಗೊಂಬರೆ ಎಲ್ಲ ಸಂತಸ ಸಂಭ್ರಮದಿ ವೇದ್ಯಾಂಬುನಿಧಿಯಲಿ ತುಂಬಿರುವರೀ ಕುಂಭಿನಿಯೊಳು ಜ- ಸಂಬಡುವುದು ವಾಸಿಷ್ಠಗೋತ್ರಜ- ರೆಂಬ ವಿಪ್ರಕದಂಬಪೂಜ್ಯರು4 ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1 ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ ಮಹಾಲೀಲೆ2 ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ ಲೀಲೆಯ ನಾನರಿಯೆ3 ಫಾಲೇಂದು ಕುಂದದ ವರ್ಣಕೋಲು ಚಾಮರಗಳ ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು4 ಚಂಡವೈಶ್ವಾನರನ ತೇಜಾಖಂಡದಿಂದೋರಂತೆ ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ5 ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ ಆದಿನಾರಾಯಣ ಮದುಸೂದನನೆ ಮುದದಿ6 ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು ನಾದಿನಿ ಕೇಳಿದರ ಪರಿಯನೀ ದಯದಿಂದುಸುರು7 ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ- ದೇವನಾಗಮನವೆಲ್ಲನೂ ದೀವಟಿಗೆ ಸೇವೆಯೆಂದು ಪೇಳುವರು ಭಾವುಕರು ಮನದೊಳಂದು1 ಸಾಯನವನು ಸುರಿದು ಸಾವಿರ ಸಾಲದು ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ3 ದೈತ್ಯವಿನಾಶನ ಜಯಜಯ ಜಾಹ್ನವಿತಾತ ಜಯಜಯ ಜಗದಾತ ಆಶ್ರಿತ ಸುರಭೂಜ ತೋರುತ ಒಲಿದು4 * * * ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ- ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ1 ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2 ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ- ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ3 ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ- ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ4 ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5 ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ- ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ6 ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ- ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ7 ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ- ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ8 ನಿತ್ಯ ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ9 ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ10 ನೋಡೆ ತಂಗಿ ನಮ್ಮ ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ11 ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ- ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12
--------------
ತುಪಾಕಿ ವೆಂಕಟರಮಣಾಚಾರ್ಯ
ಕದರ ಮಂಡಲಗಿಯ ಕರುಣಿ ಹನುಮರಾಯ |ಸದುಗುಣವಂತನೆ ಹಣುವಂತನೆ ಪ ಅಂಜನೆಯ ವರಸೂನು ಆಶ್ರಿತ ಕಾಮಧೇನುಮಂಜುಳ ಗಾನ ಗೀತ ಪರಮ ವಿಖ್ಯಾತ ಸಂಜೀವನವ ತಂದ ವ್ಯೋಮ ಮಾರ್ಗದಿ ಬಂದಅಂಜದ ಗುಣವಂತನೆ ಹಣುವಂತನೆ1 ಅಮಿತ ಜಾಮಾತ ಮುಖ್ಯ ಪ್ರಾಣನಾಥ ವಿಶಾಲ ಗುಣವಂತನೆ ಹಣುವಂತನೆ 2 ಕ್ಷೋಣಿಯೊಳು ಕನಕದಾಸನ ನೆರಳು ಅನಕ ಏನು ಬಲಿಸಿದೆಯೊ ಔಷಧಿಯ ಕುಣುಕ ನೀನಿದ್ದರೆ ಕನಕ ಪ್ರಾಣ ತೆರಳುವ ತನಕ ಶ್ರೀನಿಧೇ ಆದಿಕೇಶವ ಎನ್ನ ಜನಕ3
--------------
ಕನಕದಾಸ
ಕರುಣಾನಿಧಿ ನೀ ಶ್ರೀರಾಮ ನಿನ್ನ ಚರಣ ಸೇವಿಪರಾನತ ಪ್ರೇಮ ಪ. ಕರುಣ ತೋರುತ್ತೆನ್ನ ಪೊರೆ ರಾಮ ನಿನ್ನ ಸ್ಮರಣೆ ನಿರುತ ನೀಡೆಲೊ ಶ್ರೀರಾಮ ಅ.ಪ. ಆಶ್ರಿತ ಜನರಿಗೆ ನೀನಲ್ಲದೆ ನಿ ನ್ನಾಶ್ರಯಗೊಡದಿರೆ ಗತಿ ಕಾಣೆ ಸ್ತೋತ್ರದಿ ಸ್ತುತಿಸುವೆ ನಿನ್ನಾಣೆ ಜಗತ್ರಯ ಸಲಹೊ ಕೋದಂಡಪಾಣಿ 1 ಭವಭಯಭಂಜನ ಶ್ರೀರಾಮ ಎನ್ನ ಭಯವ ಬಿಡಿಸೊ ಜಾನಕಿ ರಾಮ ಕವಿಗೇಯ ನೀನೆ ಜಗದಭಿರಾಮ ಎನಗೆ ಜವನ ಬಾಧೆಯ ಬಿಡಿಸೊ ರಘುರಾಮ 2 ತಂದೆ ಶ್ರೀ ಶ್ರೀನಿವಾಸ ನೀನೆ ಎನಗೆ ಬಂದ ಕಷ್ಟದಿ ಸಲಹುವ ನೀನೆ ಮುಂದೋರಿ ಸಲಹೋ ತಾಯಿ ಗುರು ನೀನೆ ಇನ್ನೂ ಸಂದೇಹವಿಲ್ಲ ಕೇಳೆಲೊ ರಾಮ 3
--------------
ಸರಸ್ವತಿ ಬಾಯಿ
ಗುರುವೇ ರಾಘವೇಂದ್ರ ಪ ಗುರುವೆ ಆಶ್ರಿತ ಸುರತರುವೆನುತಲಿನಿನ್ನ ಚರಣ ನಂಬಿದವರಿಗೆ ಪರಮಾನುಗ್ರಹ ಮಾಳ್ಪ ಅ.ಪ ಮಂತ್ರಾಲಯದಲಿ ನೀನಿಂತುನಿರಂತರ ಸಂತರಿಷ್ಟಾರ್ಥವ ಸಲಿಸುತಲಿರುವೆ 1 ದೃಢ ಮಾಡಿ ಅವರ ಆದರಿಸುವೆ ಸತತ2 ಭವ ದುರಿತವ ತರಿವೆ ಗುರುರಾಮವಿಠಲನ ಶರಣರಗ್ರಣಿಯೆ 3
--------------
ಗುರುರಾಮವಿಠಲ
ಚನ್ನಾಗಿ ಸ್ತುತಿಸುವ ರಾ ಆಶ್ರಿತ ಜನರಾಧಾರಾ ಪ ನಾರದವರದನ ಯೋಗಿಗಳ ಹೃದಯ ಯೋಗವಿಲಾಸನ ಯಾದವ ಕುಲೋದ್ಭವನ ಭಾಗೀರಥಿಯ ಪಡೆದ ಧೀರನಾ ಪಾಂಡವ ಪಕ್ಷಕನಾ 1 ವೇದಗೋಚರನೆ ವೇಣುನಾದ ಶ್ರೀ ವೇಂಕಟ ಶ್ರೀಶನಾ ಸಾಧು ಸಜ್ಜನರ ಸರ್ವದಿ ಸಲಹುವ ಸಕಲಲೋಕ ಕರ್ತನಾ ಆದಿ ಮೂರುತಿ ಅನೇಕ ಚರಿತನ ಅನಂತ ಅವತಾರನಾ ಮನುಜರ ಪೋಷಕನಾ 2 ಗಾನಲೋಲ ಶ್ರೀಕರುಣಕೃಪಕ್ಷಾನ ಕಾಮಿತ ಫಲವೀವನಾ ಕಮಲಸಂಭವ ವಪಿತನ ಮಾನಾಭಿಮಾನ ಮಹಾನುಭಾವ---------------- ಆದ ಅವನಾ 3
--------------
ಹೆನ್ನೆರಂಗದಾಸರು
ತಾಳು - ತಾಳು - ತಾಳಬೇಕೆನ್ನುವಿರೋ ಗುರುವೇ ಪ ಇನ್ನೆಷ್ಟುದಿನ ತಾಳಬೇಕೋ ತಿಳಿಯಾದೋ ಅ.ಪ. ಆಶ್ರಿತಜನ ರಕ್ಷಕನೆಂದೂ ನಂಬಿದೇನೊ ಪ್ರಭುವೇ | ಪಾದ ಶ್ರೀ ರಾಘವೇಂದ್ರ ಪ್ರಭವೇ 1 ತನುವಿನೊಳಗೆ ಬಲವು ಇಲ್ಲಾ ಮನದೊಳಗೆ ಧೃಡಾವಿಲ್ಲ ಇನ್ನಾದರು ದಯಮಾಡಿ ಸಲಹಯ್ಯ ಪ್ರಭವೇ2 ದುರಿತ ರಾಶಿಗಳ ನಾಶಗೊಳಿಸೆ ನಿನ್ಹೊರತ್ಯಾರಿಲ್ಲ ಪ್ರಭುವೇ ತ್ವರಿತದಿ ಕರುಣ ಕಟಾಕ್ಷದಿ ನೋಡು ಶ್ರೀ ರಾಘವೇಂದ್ರ ಗುರುವೇ 3 ಈ ಸಂಸಾರ ಶರಧಿಯೋಳ್ ಮುಳುಗಿ ಬಳಲಿದೆ ಗುರುವೇ ಘಾಸಿಗೊಂಡಿಹೆ ಕೃಪೆಮಾಡೈ ಶ್ರೀ ರಾಘವೇಂದ್ರ ಗುರುವೇ 4 ತಡೆಮಾಡದೆ ಕಡೆಹಾಯಿಸೋ ಶ್ರೀ ರಾಘವೇಂದ್ರ ಪ್ರಭವೇ 5
--------------
ರಾಧಾಬಾಯಿ
ದರ್ಭಶಯನ ಶ್ರೀರಾಮದೇವರ ಸ್ತೋತ್ರ ಪಂಕ ಕಳೆಯೊ ಎನ್ನ | ಕರುಣಾರಸ ಪೂರ್ಣ ಪ ಲಂಕೇಶನನು ಜಗ್ವೊಲಿದ ಹರಿಯೇ | ಆಶ್ರಿತರಿಗೆ ಧೊರೆಯೇ ಅ.ಪ. ಭವ ವಿಮುಕ್ತನಹನೂಕವಿ ಜನ ನುತ ಸತ್ಪ್ರವರ ನಿನ್ನ ಲೀಲಾ | ಲೋಕ ಶಿಕ್ಷೆಗನುಕೂಲ |ತವಕದಿ ಗೈದೆ ವಿವಿಧ ಪೂಜೆಗಳನ್ನ | ನವ ಪಾಪಾಣಗಳನ್ನ 1 ಶರಧಿ ಸಿಂಧು ಪತಿಯ ನೋಡೀ | ದರ್ಭಶಯನ ಮಾಡೀಕಪ್ಪುಗೊರಳ ಸಖ ಕುಪಿತನಾಗೆ ನೀನೂ | ಬೆದರಿ ಬಿನ್ನವಿಸಿದನೂಒಪ್ಪಿ ಬಂಧಿಸಿದೇ ಸೇತುವೆಯನ್ನಾ | ಭಕ್ತರಿಗೆ ಪ್ರಸನ್ನಾ 2 ಸಿರಿ ಮಾಧವ ಶ್ರೀನಲ್ಲಾ | ಗುರು ಗೋವಿಂದ ವಿಠ್ಠಲ |ಮಾತು ಮಾತಿಗೆ ಕೊಡು ತವ ಲೀಲಾ | ಉಚ್ಚರಿಸುವ ಸೊಲ್ಲಾ 3
--------------
ಗುರುಗೋವಿಂದವಿಠಲರು
ದಾತ ಸನ್ಮುನಿಗಣ - ನಾಥ ಕಾಮಿತ ಕಲ್ಪವೃಕ್ಷಾ - ಕಲ್ಪವೃಕ್ಷಾ ಆಶ್ರಿತಜನದಕ್ಷಾ ಪ ಧಾತ ಮುಖ ಸುರಮುನಿಯ ಸಂತತಿ ಪ್ರೀತಿ ಪೂರ್ವಕದಿಪ್ಪ ಕಾರಣ ಜೋತಿ ವೃಂದಾವನದಿ ತಾ ನಿ - ರ್ಭೀತ ಮಹಿಮೆಯ ತೋರ್ಪಜಗದಿ ಅ.ಪ ಬಿಕ್ಷುನಾಯಕ ಸರ್ವಾಪೇಕ್ಷದಾಯಕನೆಂಬ ಬಿರಿದು ನೆಂಬ ಬಿರಿದು ಪೊತ್ತಿಹ ಪಾಪ ತÀರಿದು ಪಾದ ಪದುಮವ ವಕ್ಷೋಮಂದಿರದೊಳಗೆ ತಾನಪ - ರೋಕ್ಷಕರಿಸೀ ಸರ್ವಜನರಾ - ಪೇಕ್ಷ ಪೂರ್ತಿಸಿ ಮೆರೆವ ಗುರುವರ 1 ಕ - ಮಂಡುಲಧರ ಹಂಸರೂಪಾ ಅಮಿತ ಪ್ರತಾಪ ಕರ ಮಾ - ತ್ರಿಜಗ - ಸುಜನ ಮನ್ಮನೋ - ಪುಂಡರೀಕ ನಿವಾಸ ನಿರ್ಮಲ 2 ಕಿಟಜ ಸರಿದ್ವರ - ತಟವಾಸ ಗುರುಜಗನ್ನಾಥ ಜಗನ್ನಾಥ ವಿಠಲ ಗುಣಗಾಥ ತಟನಿ ಲಹರೀ ಮಧ್ಯ ತನ ಹೃ ತ್ಪುಟ ಸುನಾವಿಯ ಮಾಡಿ ಸಂತತ ಅಟನಗೈಯುತ ಜಗದಿರಾಜಿಪ ಚಟುಲ ವಿಕ್ರಮ ಕರುಣಸಾಗರ 3
--------------
ಗುರುಜಗನ್ನಾಥದಾಸರು
ನಂಬು ನಂಬು ಶ್ರೀನರಹರಿ ಪಾದವÀ ನರನೇ ಪಾಮರನೆ ಪಾತಕ ಕೃಷ್ಣಾ ಮೂರ್ತಿಯನ್ನೇ ಪ ಸಾಧು ಸಜ್ಜನ ಸಂತರ ಸಲಹುವ ಸಕಲ ಲೋಕ ಕರ್ತನಾ ಮೇದಿನಿ ಭಕ್ತರ ಮನದಲಿ ಚರಿಸುವ ಮಂಗಳ ಮಹಿಮನ ಆದಿಮೂರುತಿ ಆನೇಕ ಚರಿತಾ ಅನಂತ ಅವತಾರನಾ ಅನುದಿನ ಮರೆಯದೆ ನೀ ಯಿನ್ನಾ 1 ಶ್ರೀನಿವಾಸ ಆಶ್ರಿತ ಜನಪೋಷಕ ಶಾಶ್ವತನಾಗಿಹನಾ ಗಾನಲೋಲ ಶ್ರೀವೇಣುನಾದನ ಕರಿರಾಜ ವರದನ ದಾನವಾಂತಕನ ದಶರಥತನಯನ ದೇವಾದಿದೇವನ್ನ ಮಾನವ ಮದನ ಜನಕನಾದನಾ 2 ಭೂಸುರ ನಾಯಕನ ಮಾಧವ ಗೋವಿಂದನ ಮುಕ್ಕುಂದನಾದ ಅವನಾ 'ಹೆನ್ನೆವಿಠ್ಠಲನಾ’ 3
--------------
ಹೆನ್ನೆರಂಗದಾಸರು
ನಾರಾಯಣ ನಿನ್ನ ನಂಬಿದೆ ಲಕ್ಷ್ಮೀ-ನಾರಾಯಣ ನಿನ್ಹೊರತು ಪೊರೆವ ದೈವವೆಲ್ಲಿದೆ ಪ ನಾ ಮೀರಿ ದುಷ್ಕರ್ಮವ ಮಾಡಿದೆಅಪಾರಮಹಿಮ ದಯಾನಿಧೇ ಅ.ಪ ನಾನಾ ಯೋನಿಗಳಿಂದ ಬಂದೆನೋಮಾನತಾಳಲಾರದೆ ಬಲು ನೊಂದೆನೋದೀನರಕ್ಷಕ ಎನ್ನ ಗತಿ ಮುಂದೇನೋಮಾನದಿಂದಲಿ ಪಾಲಿಸುವಂಥ ದೊರೆ ನೀನೋ1 ದಾಸರ ಮನ ಉಲ್ಲಾಸನೆಶ್ರೀಶ ಆಶ್ರಿತ ಜನರ ಪೋಷನೆಸಾಸಿರ ಅನಂತಮಹಿಮನೆಕ್ಲೇಶನಾಶ ಮಾಡಿಸೋ ಶ್ರೀನಿವಾಸನೆ 2 ರಂಗನಗರ ಉತ್ತುಂಗನೆಗಂಗಾಜನಕ ಗರುಡತುರಂಗನೆ ಉ-ತ್ತುಂಗ ಗುಣಗಳಂತರಂಗನೆ ಅ-ನಂಗನ ಪೆತ್ತ ರಂಗವಿಠಲನೆ 3
--------------
ಶ್ರೀಪಾದರಾಜರು
ನೀನಹುದೊ ನಮ್ಮೊಡಿಯ ಘನ ಗುರು ನಾ ನಿಮ್ಮ ಕಂಡೆ ಅಯ್ಯ ಧ್ರುವ ನಾ ನಿಮ್ಮ ಪರಿವಾರ ನಾ ನಿಮ್ಮ ಕಿಂಕರ ನೀ ನಮ್ಮ ಸಹಕಾರ ಬಡಿವಾರ 1 ನಾ ನಿಮ್ಮ ಬಾಲಕ ನೀ ನಮ್ಮ ಪಾಲಕ ನಾ ನಿಮ್ಮ ಸೇವಕ ನೀ ನಮ್ಮ ರಕ್ಷಕ 2 ನಾ ನಿಮ್ಮ ಉದ್ಧೇಶ ನೀ ನಮ್ಮ ಪ್ರಾಣೇಶ ನಾ ನಿಮ್ಮ ಸಹವಾಸ ನೀ ನಮ್ಮ ಅಭ್ಯಾಸ 3 ನಾ ನಿಮ್ಮ ಅಣುಗ ನೀ ನಮ್ಮ ಸರ್ವಾಂಗ ನಾ ನಿಮ್ಮ ಬಳಗ ನೀ ನಮ್ಮ ಬಳಗ 4 ನಾ ನಿಮ್ಮ ಶರಣ ನೀ ನಮ್ಮ ಕರುಣ ನಾ ನಿಮ್ಮ ನಿರ್ಗುಣ ನೀ ನಮ್ಮ ಭೂಷಣ 5 ನಾ ನಿಮ್ಮ ನಿರ್ಮಿತ ನೀ ನಮ್ಮ ಸಹಿತ ನಾ ನಿಮ್ಮ ಆಶ್ರಿತ ನೀ ನಮ್ಮ ಸುದಾತ 6 ನಾ ನಿಮ್ಮ ಅಂಕಿತವೃತ್ತಿ ನಿಮ್ಮ ನಮ್ಮ ವಸ್ತುಗತಿ ನಾ ನಿಮ್ಮ ಮಹಿಪತಿ ನೀ ನಮ್ಮ ಶ್ರೀಪತಿ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು