ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೀವನ ಶಟವಿ ಹೇಳುವೆ ಕೇಳುಜೀವನವೆಂಬುವ ಮಾತೇ ಶಟವಿದೇವ ಚಿದಾನಂದ ನೀನಿಹೆಶಟವಿ ಎಲೆ ಜೀವನ ಶಟವಿ ಪ ಒಗೆತನ ಶಟವಿ ಎಲೆ ಜೀವನ ಶಟವಿ 1 ಆರ ಸಂಗಡ ಜಗಳವು ಶಟವಿಆರನಾದರು ಅಣಕಿಪೆ ಶಟವಿಊರು ನನ್ನದೆಂಬ ಶಟವಿ ಎಲೆ ಜೀವನ ಶಟವಿ 2 ನನ್ನದು ನನ್ನದು ಎಂಬೆ ಶಟವಿನಿನ್ನ ತಂದೆಯು ಹೋದನೆ ಶಟವಿನನ್ನದೆನೆ ನಾಚಿಕೆ ಬಾರದು ಶಟವಿ ಜೀವನ ಶಟವಿ3 ಗುರು ಹಿರಿಯರ ನೀ ನಿಂದಿಪೆ ಶಟವಿಗುಣ ನಿನಗೇನೇನಿಲ್ಲವೊ ಶಟವಿಬರಿದೇ ಬಯಲಿಗೆ ಹಂಬಲಿಪೆ ಶಟವಿ ಎಲೆ ಜೀವನ ಶಟವಿ4 ಶರೀರವು ಸ್ಥಿರವಲ್ಲವು ಶಟವಿತೆರಳುವೆ ನೀನು ಬೆಳಗಿಗೆ ಶಟವಿತರಳನ ಆರ ಕೈಯಲಿಟ್ಟೆ ಶಟವಿ ಎಲೆ ಜೀವನ ಶಟವಿ 5 ನಿನ್ನ ಸಂಸಾರ ಸುಳ್ಳಿದು ಶಟವಿನೀರಲಿ ಅಕ್ಷರ ಬರದಂತೆ ಶಟವಿನಿನ್ನನು ಏನಂತ ಕಂಡಿಹೆ ಶಟವಿ ಎಲೆ ಜೀವನ ಶಟವಿ 6 ನಿನಗೆ ಅನಂತ ಜನ್ಮವು ಶಟವಿನೀನು ಹೆಣ್ಣು ಗಂಡಲ್ಲ ಶಟವಿನಿನಗೆ ಹೇಳಲು ಹೆಸರಿಲ್ಲ ಶಟವಿ ಎಲೆ ಜೀವನ ಶಟವಿ 7 ಪಾಪದ ವಿದ್ಯದ ಮೂಲದಿ ಶಟವಿರೂಪಿಗೆ ಬಂದಿಹೆ ನೀನೀಗ ಶಟವಿ ಆ ಪರಿಚಂದ್ರನು ಹೊಳೆದಂತೆ ಶಟವಿ ಎಲೆ ಜೀವನ ಶಟವಿ 8 ಭೂಪ ಚಿದಾನಂದನ ಹೊಂದೆಲೋ ಶಟವಿರೂಪು ವಿರೂಪು ಆಗುವಿ ಶಟವಿದೀಪದೊಳು ನಿಜದೀಪ ನೀ ಶಟವಿ ಎಲೆ ಜೀವನ ಶಟವಿ 9
--------------
ಚಿದಾನಂದ ಅವಧೂತರು
ತೊರೆದು ಪೋಗುವುದುಚಿತವೇ | ಶ್ರೀ ಗುರುವರ ಹರಣ ನೀಗುವುದುಚಿತವೇ ಪ. ಕಮಲ ನಂಬಿ ಇರುವಂಥ ತರಳೆಯ ಜರಿದು ಮೋಸದಿ ಇಂತು ಅ.ಪ. ಆರನಾ ಪೂಜಿಸಲಿ | ಪರಿಪರಿಯಿಂದ ಆರನಾ ಸ್ತುತಿಗೈಯ್ಯಲಿ | ಪೇಳೆನ್ನ ಗುರುವೆ ತೋರದು ಮನಸಿಗೆ ಬೇರೊಂದು ಮತಿ ಇನ್ನು ಕಾರುಣ್ಯಮೂರ್ತಿ ಮತ್ತಾರ ಸೇವಿಸಲಿನ್ನು ಧಾರುಣಿಯೊಳ್ ನಿಮ್ಮ ಹೊರತಿ ನ್ನಾರು ಕಾಯುವರಿಲ್ಲವೆಂದು ಸೇರಿದವಳನು ಬಿಟ್ಟು ಶ್ರೀ ಗುರು ಮಾರನಯ್ಯನ ಪುರಕೆ ಪೋಪರೆ 1 ತುಪ್ಪ ಸಕ್ಕರೆ ಸವಿದಾ | ಶುಭತನುವಿನ್ನು ಒಪ್ಪವಾಯಿತೆ ಶಿಖಿಗೆ | ಕ್ಷಣ ಮಾತ್ರದಲ್ಲಿ ಅಪ್ಪಾವು ಅತಿರಸ ಮೆಲ್ಲುವ ಇಚ್ಛೆಯು ತೃಪ್ತಿಯಾಯಿತೆ ಪೇಳಿ ಅಪ್ಪಯ್ಯ ನಿಮಗಿನ್ನು ಅಪ್ಪ ಅಮ್ಮ ಸರ್ವಬಳಗವು ತಪ್ಪದಲೆ ನೀವೆಂದು ನಂಬಿದೆ ಒಪ್ಪಿಕೊಂಡೊಂಬತ್ತು ವರುಷವು ಇಪ್ಪ ರೀತಿಯ ಬಯಲು ಮಾಡಿ2 ಕಡುಕೃಪೆಯಿಂದಲಿ | ಪೇಳಿದ ಗೋಪ್ಯ ಒಡಲೊಳು ನೆನೆಯುತಲಿ | ಕುಣಿದಾಡುತಿದೆ ಒಡಲೊಳು ದೃಢಭಕ್ತಿಯೊಳ್ ನಂಬಿ ಬಿಡದೆ ನಿಮ್ಮಡಿಗಳು ನಡುವೆ ಬಂದೆಡರುಗಳ್ ಕಡೆಹಾಯ್ದು ಮಿಡುಕದೆ ಅಡಿಗಡಿಗೆ ಬೆಂಬಿಡದೆ ಚರಣವ ಪಿಡಿದು ಕೇಳಲು ಅಭಯವಿತ್ತ ನುಡಿಗಳೆಲ್ಲವು ಎತ್ತ ಪೋಯಿತೊ ಕಡಲಶಯನನ ಮಾಯವಕಟಾ 3 ಹಿಂದೊಬ್ಬರನು ಕಾಣೆನೊ | ನಿಮ್ಮಂದದಿ ಮುಂದೊಬ್ಬರನು ಕಾಣೆನೊ | ಈ ಕರುಣದವರ ಒಂದೊಂದು ಗುಣ ಗಣ ಬಂದು ಸ್ಮರಣೆ ಮನಕೆ ಕಂದಿ ಕುಂದಿಸುತಿದೆ ನೊಂದು ಬೆಂದು ಪೋದೆ ಚಂದವೇ ಇದು ಪೋಪ ತೆರವು ತಂದೆ ಸೈರಿಸಲಾರೆ ಗುರುವರ ತಂದೆ ಮುದ್ದುಮೋಹನರೆನಿಸಿದ ಸುಂದರಾತ್ಮಕ ಸುಗುಣಪೂರ್ಣ 4 ಎನ್ನಂತೆ ಬಳಲುವರು | ನಿಮ್ಮಯ ಶಿಷ್ಯ ರುನ್ನಂತೆ ಇರುತಿಹರೊ | ಬಹು ಭಕ್ತಿ ಉಳ್ಳವರು ಮನ್ನಿಸುತವರ ಸಂಪನ್ನ ಸಲಹಬೇಕು ಬಿನ್ನಪವಿದು ಕೇಳು ಮನ್ನಿಸು ಕೃಪಾಳು ಇನ್ನು ಸೈರಿಸೆ ಸೈರಿಸೆನು ನಿಮ್ಮ ಘನ್ನ ಮೂರ್ತಿಯ ಮನದಿ ತೋರೈ ಇನ್ನು ಗೋಪಾಲಕೃಷ್ಣವಿಠ್ಠಲನು ಭವ 5
--------------
ಅಂಬಾಬಾಯಿ
ನಿಧಾನವೆ ಕೇಳಿ ಸಜ್ಜನವೇ ಇಂದು ಜಿನ ಶಕ್ತಿಯಾನಂದದಾರಾಧನ ಪ ಒಂದು ಮನದಲಿ ವದಗಿನ್ನು ಒಂದು ಮನದಲಿ ವದಗಿನ್ನು ನೀವೆಲ್ಲಾ ವಂದದಾರುತಿಯಾ ಬೆಳಗುವಾ 1 ಒಂದು ಮಾರ್ಗವಿಡಿದು ಬಂದು ಗುರುಮುಖದಿಂದ ಒಂದನೆ ಭಕ್ತಿ ತಿಳಿದಿನ್ನು ಒಂದನೆ ಭಕ್ತಿ ತಿಳಿದು ಪರೀಕ್ಷಿತಿಯಂತೆ ವಂದನಾರುತಿಯಾ ಬೆಳಗುವಾ 2 ಎರಡಕ ಮೀರದಾ ಎರಡಕ್ಷರದಿಂದ ಎರಡನೆ ಭಕ್ತಿ ತಿಳಿದಿನ್ನು ಎರಡನೇ ಭಕ್ತಿ ತಿಳಿದು ನಾರದರಂತೆ ಎರಡನಾರತಿಯಾ ಬೆಳಗೀರೇ 3 ಮೂರು ಬಲಿಯನೆದಾಟಿ ಮೂರು ರತ್ನವಗಂಡು ಮೂರನೇ ಭಕ್ತಿ ತಿಳಿದಿನ್ನು ಮೂರನೇ ಭಕ್ತಿ ತಿಳಿದು ಪ್ರಲ್ಲಾದನಂತೆ ಮೂರನಾರತಿಯಾ ಬೆಳಗೀರೇ 4 ನಾಕುಸ್ಥಾನವ ಮುಟ್ಟಿ ನಾಕರಂತವ ನೋಡಿ ನಾಕನೇ ಭಕ್ತಿ ತಿಳಿದಿನ್ನು ನಾಕನೇ ಭಕ್ತಿ ತಿಳಿದು ಜನಕನಂತೆ ನಾಕನಾರತಿಯಾ ಬೆಳಗೀರೇ 5 ಐದುಕ್ಲೇಶಗಳ್ಹಿಂಗಿ ಐದರೊಂದನೆ ಮಾಡಿ ಐದನೇ ಭಕ್ತಿ ತಿಳಿದಿನ್ನು ಐದನೇ ಭಕ್ತಿ ತಿಳಿದು ಗರುಡನಂತೆ ಐದನಾರತೀಯ ಬೆಳಗೀರೆ 6 ಆರನೇ ಭಕ್ತಿ ಆರು ಸಂಗವ ಮೀರಿ ಆರು ಪರಿಯಾಗದೇ ಆರನೇ ಭಕ್ತಿ ತಿಳಿದಿನ್ನು ಆರನೇ ಭಕ್ತಿ ತಿಳಿದು ಪುಂಡಲೀಕನಂತೆ ಆರನಾರತಿಯಾ ಬೆಳಗೀರೆ 7 ಏಳು ವ್ಯಸನವ ಬಿಟ್ಟು ಏಳು ಧಾತುವ ಕಂಡು ಏಳನೇ ಭಕ್ತಿ ತಿಳಿದಿನ್ನು ಏಳನೇ ಭಕ್ತಿ ತಿಳಿದು ಹನುಮಂತನಂತೆ ಏಳನಾರತಿಯಾ ಬೆಳಗೀರೆ 8 ಎಂಟು ಮದಗಳ ಜರಿದು ಎಂಟು ಸಿದ್ಧಿಯ ತೊರೆದು ಎಂಟನೆ ಭಕ್ತಿ ತಿಳಿದಿನ್ನು ಎಂಟನೇ ಭಕ್ತಿ ತಿಳಿದು ಅರ್ಜುನ ನಂತೆ ಎಂಟನೇ ಭಕ್ತಿ ಯಾರತಿಯಾ ಬೆಳಗೀರೆ 9 ಒಂಭತ್ತರನೇ ಬಲಿದು ಒಂಭತ್ತರ ನೆಗೆಲಿದು ಒಂಭತ್ತರನೇ ಭಕ್ತಿ ತಿಳಿದಿನ್ನು ಒಂಭತ್ತರನೇ ಭಕ್ತಿ ತಿಳಿದು ಬಲಿಯಂದದಿ ಒಂಭತ್ತನಾರತಿಯಾ ಬೆಳಗೀರೆ 10 ಗುರು ಮಹಿಪತಿ ಸುತಬ ಹೊರವ ದೇವಿಗೆ ಧರಿಯೊಳೀಪರಿಯಲಿ ನೀವು ಧರಿಯೊಳೀಪರಿ ನೀವು ಮಾಡಲಿಕೀಗ ಪರಮ ಆನಂದಾದೋರುವದು 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನವರ ಸಂಗ ಎಂತಹದಯ್ಯಾ ಅನಂತ ಜನ್ಮದ ಪಾಪ ಪುಂಜರ ನಾನು ಪ ಬಾರೆ ಸುಜನರ ಮನಕೆ ತಾರೆ ಗಂಗೋದಕವ ಸೇರೆ ನಿನ್ನಡಿಗಳಲಿ ಸಾರೆ ಉತ್ತಮರ ಕೀರ್ತಿ ಬೀರೆ ನಿನ್ನಯ ಮಹಿಮೆ ಕೋರೆ ನಿರ್ಮಳ ದಾರಿಯಾ ನೀರೆಯರ ಶಶಿಬಿಂಬ ಮೋರೆ ಬಣ್ಣಕೆ ಮೆಚ್ಚಿ ಕಾರ್ಯ ಕಾರಣ ಜರಿದು ಭಾರಿ ತಿರುಗವನಿಗೆ1 ಏಕಾದಶಿ ದಿನ ಬೇಕೆಂದು ಮನವಿಟ್ಟು ಪಾಕನ್ನ ಮಾಡಿಸುವನೊ ನೇಕಪರಿ ಮಾಡಿಸುವನೊ ಪೋಕತನದಲ್ಲಿ ವಿವೇಕ ರÀಹಿತನಾಗಿ ಗೋಕುಲವ ಹಳಿದು ಕೋ ವಾರೆವಿದ್ದವನಿಗೆ2 ಪರರ ವಡವೆಯ ನೋಡಿ ಧರಿಸಲಾರದೆ ಮನ ಮರಗಿ ನಿಷ್ಠುರನಾಡಿ ಇರಳು ಹಗಲೂತ್ತ- ಮರ ಬೈದು ಪಾಪಕ್ಕೆ ಗುರಿಯಾಗಿ ನಸುನಗುತ ಪಿರಿದು ದುರ್ವಿಷಯದೊಳು ಹೊರಳಿ ಹಕ್ಕಲನಾಗಿ ಮರಳಿ ಜನಗಳಲ್ಲಿ ಜನಮವಾಗುವನಿಗೆ 3 ಅತಿಥಿ ಅಭ್ಯಾಗತರ ಕಂಡು ಸ್ಮರಿಸದೆ ಮತಿಹೀನವಾಗಿ ಭ- ಕುತಿ ಲೇಸ ತಾ ತಾ ಕೊಂಬೆನಯ್ಯಾ ಆರನಾರನಾದರು ಕರಿಯೆ ಚತುರೋಕ್ತಿಯಲಿ ನೆನೆಸಿ ಪ್ರತಿ ಯಾರು ನಿನಗೆಂದು ಗರ್ವದಲ್ಲಿದ್ದವನಿಗೆ 4 ಆದಿಯಲಿ ಬಂದದ್ದು ಅಂತ್ಯದಲಿ ಪೋಗುವ ಹಾದಿಯನು ತಿಳಿತಿಳಿದು ಕ್ರೋಧವನು ಬಿಡದೆ ಕಾದುವೆನು ಹಲ್ಲು ಕಡಿದು ಸಾಧುಗಳ ನೋಡದಲೆ ವೇದಾರ್ಥಗಳ ಓದಿ ಶೋಧಿಸಿ ಕೇಳಿ ವಾದವನು ಮಾಡಿ ಸಂಪಾದಿಸುವ ದುರ್ಧರನಿಗೆ5 ದುರ್ಧನಕೆ ಕೈಕೊಡುವೆ | ಮೊದಲೆ ಕನಸಿನೊಳಗಾದರೂ ಗುಣಿಸುವೆ ಪರರ ಹಿಂಸೆಯನು ಬಿಡೆ ಕ್ಷಣವಾದರು ತನುವಿನ ಕ್ಲೇಶದಲಿ ದಿನವ ಹಾಕಿದೆ ವ್ಯರ್ಥ ದಣಿದಣಿದು ಈ ಪರಿಯನು ಮಾಡಿದವನಿಗೆ 6 ಹುಟ್ಟಿದಾರಭ್ಯವಾಗಿ ಶಿಷ್ಟಾಚಾರವ ತೊರೆದು ಕೆಟ್ಟ ಬಾಳಿದೆ ಧರಣೀಲೀ ಸುಟ್ಟ ಸಂಸಾರದೊಳು ಸಟಿಯಾಡಿ ಗುಟ್ಟಗುಂದಿದೆ ವಿಜಯವಿಠ್ಠಲ ನಿನ್ನ ನೆರೆ ಮರೆದು ಕೆಟ್ಟು ನರಕಕ್ಕೆ ಮನಮುಟ್ಟಿ ಬೀಳುವವನಿಗೆ 7
--------------
ವಿಜಯದಾಸ
ಆತನ ಪಾಡುವೆನನವರತ |ಪ್ರೀತಿಯಿಂದಲಿ ತನ್ನ ಭಕುತರ ಸಲಹುವ ಪಆವಾತನ ಕೀರ್ತಿಯನುಪರೀಕ್ಷಿತ ಕೇಳೆ |ಪಾವನನಾದನು ಮೂಜಗವರಿಯೆ ||ಭಾವಶುದ್ಧಿಯಲಿ ಶುಕನಾರನು ಪೊಗಳುವ |ಆವಗಂ ಪ್ರಹ್ಲಾದನಾದವನ ನೆನೆವನಯ್ಯ 1ಶಿಲೆಯ ಬಾಲೆಯ ಮಾಡಿದ ಪಾದವಾರದು |ನಳಿನ ಸಂಭವನನು ಪೆತ್ತವನಾರು ||ಕಲಿಯುಗದ ಮನುಜರಿಗೆ ಆರನಾಮವುಗತಿ |ಇಳೆಯ ಭಾರವನಿಳುಹಿ ಸಲಹಿದರಾರಯ್ಯ 2ದ್ರುಪದನ ಸುತೆಯ ಮಾನರಕ್ಷಕನಾರು |ನೃಪಧರ್ಮನಿಗೆ ಸಂರಕ್ಷಕನಾರು |ಕೃಪೆಯಿಂದ ವಿದುರನ ಮನೆಯಲುಂಡವನಾರು |ಆಪತ್ಕಾಲದಿ ಗಜವ ಸಲಹಿದರಾರಯ್ಯ 3ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ |ರಥವ ಪಿಡಿದು ನಡೆಸಿದವನಾರೊ ||ಪೃಥಿವಿಯೆಲ್ಲವಬಲಿ ಆರಿಗೊಪ್ಪಿಸಿದನು |ಮತಿವಂತ ಧ್ರುವನ ರಕ್ಷಕನಾರು ಪೇಳಯ್ಯ 4ಸಾಗರನ ಮಗಳಿಗೆ ಆರ ನಾಮವೆಗತಿ |ಯೋಗದಿ ನಾರದನಾರ ಭಜಿಪನಯ್ಯ ||ರಾಗರಹಿತ ಹನುಮಂತನೊಡೆಯನಾರು |ಭಾಗವತರ ಪ್ರಿಯ ಪುರಂದರವಿಠಲ 5
--------------
ಪುರಂದರದಾಸರು