ಒಟ್ಟು 5 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯ ನಿನ್ನ ಸಮರನ್ಯಾರ ಕಾಣೆ ಪ ತರತಮ ಪಂಚಭೇದವರ ಮಾರ್ಗವ ತೋರೋ ಅ.ಪ ತ್ರಿವಿಧ ಜೀವರಿಗೆ ಹರಿ ಕಾರಣ ಕರ್ತನೆಂದು ವಿವಿಧ ಗತಿಗಳೆಂದು ಶ್ರವಣ ಮನನ ಮಾಡಿಸೊ 1 ಪರಮಾತ್ಮ ಜೀವಾತ್ಮ ಪರಸ್ಪರ ಭೇದವೆಂದು ಅರುಹಿಸೊ ನಿನ್ನವರಿಂದನುದಿನ ಗುಣಸಿಂಧು 2 ನಿಜ ಸಿದ್ಧಾಂತ ಸುಜನರಿಗೆ ಬೋಧಿಸಿದ ಭುಜಗ ಶಯನನ ಭಕ್ತ ವಿಜಯ ರಾಮದಾಸವರ್ಯಾ 3 ಅಂಕಿತಗಳ ಕೊಟ್ಟು ಆದರಿಸುವೆ ಸದಾ 4 ಭಾಗ್ಯನಿಧಿ ದಾಸರ ಶಿಷ್ಯಾಗ್ರೇಸರ ಎನ್ನ ಯೋಗ್ಯತೆ ತಿಳಿಸಿ ಗುರುರಾಮವಿಠಲನ ತೋರೋ 5
--------------
ಗುರುರಾಮವಿಠಲ
ಗುರುವೇ ರಾಘವೇಂದ್ರ ಪ ಗುರುವೆ ಆಶ್ರಿತ ಸುರತರುವೆನುತಲಿನಿನ್ನ ಚರಣ ನಂಬಿದವರಿಗೆ ಪರಮಾನುಗ್ರಹ ಮಾಳ್ಪ ಅ.ಪ ಮಂತ್ರಾಲಯದಲಿ ನೀನಿಂತುನಿರಂತರ ಸಂತರಿಷ್ಟಾರ್ಥವ ಸಲಿಸುತಲಿರುವೆ 1 ದೃಢ ಮಾಡಿ ಅವರ ಆದರಿಸುವೆ ಸತತ2 ಭವ ದುರಿತವ ತರಿವೆ ಗುರುರಾಮವಿಠಲನ ಶರಣರಗ್ರಣಿಯೆ 3
--------------
ಗುರುರಾಮವಿಠಲ
ಗೌರೀದೇವಿ ಮಾತಾಡೇ ಎನ್ನ ಮೌನದ ಗೌರೀ ಯಾತಕಚಲಮನ ಸೋತವನೊಡನೆ ಮಾತಾಡೇ ಗೌರಿ ಮಾತಾಡೇ ಪ ನಸುನಗೆ ಮುಖವಿದು ಬಾಡಿ ಕೆಂದುಟಿಯು ಎಸೆದಿರಲು ನಾನೋಡಿ ವಸುಧೆಯೊಳಗೆ ನಾ ಜೀವಿಸಲಾರೆ ಘಸಘಸವ್ಯಾತಕೆ ತುಂಬಿತÀು ಅರಗಿಣಿ 1 ಕ್ಷಣ ಬಿಟ್ಟಿರಲಾರೆ ಅಮ್ಮ ಷಣ್ಮುಖ ಗಣಪರ ತಾಯೆ ನೀ ಬಾರೇ ವಸುಧೆಯೊಳಗೆ ನಾ ಜೀವಿಸಲಾರೆ ಘಸಘಸವ್ಯಾತಕೆ ತುಂಬಿತು ಅರಗಿಣಿ 2 ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ- ರಾಧವು ಇದ್ದರು ತಾಳೇ ಪಾದ ಕಿಂಕಿಣಿಯೇ ಆದರಿಸುವೆ ನಾ ಆದರಿಸುವೆನೇ 3
--------------
ಶ್ರೀದವಿಠಲರು
ದುರಿತ ವಿಪಿನ ದಾವಾ ಪ ಹರಿಸಿ ಕೈಪಿಡಿವ ಕರುಣಾನಿಧಿಯೆ ಅ.ಪ ಜಮದಗ್ನಿಕುಮಾರಾ ನಿನ್ನನು ಸಮವಿರಹಿತ ಉತ್ತಮ ಪದವಿಯೊಳಿ ಟ್ಟಮಿತ ಸುಖಪಡಿಸಿ ಆದರಿಸುವೆ ಸದಾ 1 ಬನ್ನಬಡುವೆನು ಭವಾರ್ಣವದೊಳುಯೆನ್ನ ಜನ್ಮಜನ್ಮದಘವನ್ನು ಬಿಡಿಸಿ ಕಾಯೊ 2 ಗರಳಪುರದದೊರಿಯೆ ನಿನ್ನ ಸಂ ಸ್ಮರಣೆ ಕೊಡೊ ಹರಿಯೆ ಪರಮ ಪುರುಷ ಶ್ರೀ ಗುರುರಾಮ ವಿಠಲ 3
--------------
ಗುರುರಾಮವಿಠಲ