ಉಪಾಯಗಾರತ್ತಿಗೆಯ ಮಹಾತ್ಮೆಯು
ಶಿಪಾಯಿಗಳೆಲ್ಲಾ ತಿಳಿದಿಹರು ಪ
ಅಪಾಯವು ಜನರೆ ಬಲ್ಲರು ಅ.ಪ
ಮನೆಗೊಬ್ಬರಿಗೂಟಕೆ ಹೇಳಿ | ಭೋ-
ಜನ ಸಹಾಯ ನಮಗಿಲ್ಲವೆಂದು
ಉಪಚಿರಸುತ ಆಡುತಿಹಳು ಕಾಂತೆ 1
ನುಚ್ಚಕ್ಕಿ ಅನ್ನ ಗೊಡ್ಡುಸಾರೇಸಾಕು
ನೂರಾರು ಜನರು ಬರಲಿ ಜೋಕೆ 2
ಅಳಿಯಗೆ ದೀಪಾವಳಿಗೆ ಕೊಡೋಣ
ಮಗುಟ ಪಾತ್ರೆಗಳಿಹುದು
ಕೆಲಸವಾದರೇಸಾಕು ಗುರುರಾಮ ವಿ
ಠಲನೆ ಬಲ್ಲ ಬಿಡಿ ಎಂತೆಂದು 3