ವಾಸುದೇವನ ಭಜಿಸೊ ಪ
ವೇಷಹಾಕಿದರೇನು ವೇದಾರ್ಥ ತಿಳಿದೀತೆ ಅ.ಪ
ಉದರಂಭರಣಕ್ಕಾಗಿ ಪದ ಪದ್ಯಗಳ ಹೇಳಿ
ತುದಿಮೊದಲಿಲ್ಲದ ದೋಷಕೆ ಗುರಿಯಾಗಿ
ಸದಮಲನೆಂದರೆ ಸರ್ವರು ನಗರೇನೊ 1
ದುರಿತ ಪರಿಹರವೆಂದು
ಆಡುತಲಿದೆ ಶೃತಿಯು
ಕರಣತ್ರಯವು ಶುದ್ಧಿಯಿರ ಬೇಕದಕೆ ಮುಖ್ಯ
ಕಾರಣ ಬಾಯಿಂದ ನುಡಿದರೇನಾಯಿತು2
ಪಂಚಸದ್ವರ್ಣಾವು ಪರಮಾತ್ಮನ ನಾಮ
ವಂಚನೆ ಇದರೊಳಿಲ್ಲಾ
ಸರ್ವರು ನುಡಿವರು ಗರ್ವವೇತಕೆ ನಿನಗೆ 3
ಕಾಲಕಾಲಕೆ ಹರಿಯೋಲಗವ ಮಾಡಿ
ವೇಳೆಗೆ ದೊರೆತದ್ದು ಭುಂಜಿಸುತಲಿ ಲಕ್ಷ್ಮೀ-
ಲೋಲನ ಕಂಡ ಕಂಡಲಿ ಸ್ಮರಣೆಗೈದೂ 4
ಹೊರಗೆ ಡಂಭವ ಬಿಡು ಒಳಗೆ ನಿಶ್ಚಲನಾಗು
ಪರರಿಗೆ ಹಿತವ ತೋರು
ಗುರುರಾಮವಿಠಲನು ಕರುಣದಿ ಕೈಪಿಡಿದು
ಪರಮಸೌಖ್ಯವನೀವ ನಿಜಭಕ್ತನಾದರೆ 5