(ಋ) ತಾತ್ತ್ವಿಕ ಕೃತಿಗಳು
ಜಗವ ಪೆತ್ತಿಹ ಪ್ರಭು ನೀನಯ್ಯ ಶ್ರೀರಂಗದ ವಿಜಯ ಪ
ಸಾಸಿರ ಶೀರ್ಷನೆ ಸಾಸಿರನೇತ್ರನೆ
ಭಾಸಿಸುವಾನಂತ ಪಾದನೆ ಹಸ್ತನೆ 1
ಆದಿಮಧ್ಯಾಂತರಹಿತ ಅಸಂಖ್ಯನಾಮನೆ
ಆಧಾರಮೂರುತಿ ಸಾಧುಸಂರಕ್ಷಕ 2
ಆಖಿಲಾಂಡಕೋಟಿ ಬ್ರಹ್ಮಾಂಡ ನಾಯಕನೆ
ಸಕಲಚರಾಚರ ಕರ್ತೃವು ನೀನೆ 3
ಚರಂಗಳೆಲ್ಲ ಯೀ ಭೂಮಿತಳವೋ
ಪರಮನಾಭಿಯೆ ಆಕಾಶವಯ್ಯ 4
ಶಿರವೇ ವೈಕುಂಠ ಕವಿಗಳೆ ದಶದಿಕ್ಕು
ಉರುತರ ಮನಸೇ ಮನ್ಮಥನಹುದು 5
ಹರಿಯ ಪಾಶ್ರ್ವಂಗಳೆ ಹಗಲು ರಾತ್ರಿಗಳು
ಪರಮವೇದಂಗಳು ಸಕಲಶರೀರವು 6
ಮುಖ ಭುಜ ತೊಡೆ ಪಾದಗಳಲಿ ವರ್ಣಂಗಳ
ಸುಕರದಿ ಪಡೆದ ಭೂಸೂತ್ರಧಾರಿಯು ನೀಂ7
ಇಂದ್ರ ಮೊದಲಾದ ದೇವರೆಲ್ಲ ನಿನ್ನಯ ಮುಖ
ಚಂದ್ರಸೂರ್ಯರ ಕಣ್ಣಿನಿಂದ ಪಡೆದಾತನೆ 8
ಮಗುವಾದೆನ್ನ ಪಿಡಿ ಮೂಜಗದೊಡೆಯ
ಹಗರಣ ಹರಿಯೊ ಜಾಜಿಕೇಶವ 9