ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವುದೆÉಮ್ಮನು ಜಗವ ಕಾವ ಕರುಣಿಯೆ ಪ. ಈವುದೆಮಗೆ ಸಕಲಸುಖವÀ ದೇವ ಲಕುಮಿನಾರಾಯಣ ಅ.ಪ. ಕಮಲಕರ್ಣಿಕಾ ಮಧ್ಯದಲ್ಲಿ ವಿಮಲ ವಿಹಂಗಪತಿಯ ಶಿರದಿಕಮಲಭವನು ಬಿಡದೆ ಪೂಜಿಪ ಅಮರಕುಲಲಲಾಮ ವಿಭುವೆ 1 ಮಧ್ವಮುನಿಯ ಕರಗಳೆಂಬೊ ಪದುಮಗಳಿಂದ ಪೂಜಿತ ಚರಣಗೆದ್ದು ಕುಜನತತಿಯ ಸುಜನರುದ್ಧರಿಸುವ ಗುಣನಿಧಿಯೆ 2 ಶಂಖಚಕ್ರ ಗದಾಪದುಮ ಆಂಕಗಳಿಂದ ಶೋಭಿತ ಕರಪಂಕಜಾಕ್ಷ ಪಯೋಧಿಶಯನ ಶಂಕೆಯಿಲ್ಲದೆ ಹಯವದನ3
--------------
ವಾದಿರಾಜ