ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆನಿ ಮನ ಅನುದಿನದಿ ಅನಮಾನಿಸದೆ ನೀ ಪ ನೆನಿಮನ ಶ್ರೀ ಸತ್ಯಜ್ಞಾನರ ಅನಘಹೃದ್ವನಜದಲಿ ಘನ ದಿನ ಮಣಿಯವೊಲ್ ಮಿನುಗುವನ ಗುಣ ಗಣ ತನು ಮರೆದು ಕುಣಿಕುಣಿದು ಹರುಷದಿ ಅ.ಪ ಊನರು ಹರಿಗೆಂದು ಚೇತÀನರ ಅವನಾಧೀನರು ಅಹುದೆಂದು ವಿಸ್ತರಿಸಿ ಪೇಳಿದ ದಿನಪಾಲಕದೇವ ಶ್ರೀ ಪವಮಾನ ಮತ ಅಂಬುಧಿಯೊಳನುದಿನ ತೀರ್ಥರ ಮಾನದಂಘ್ರೀಯ 1 ಕಮಲಾಪ್ತಗಧೀಕವಾದ ತೇಜದಲಿ ಪೊಳೆಯುವ ಕಮಲಾಪತಿಯ ಸುಪಾದಾ ಅತಿ ವಿಮಲತನ ಹೃತ್ಕಮಲದೊಳಿಟ್ಟು ಸದಾ ಭಯಹಾರಿ ಕರದ್ವಯ ಕಮಲದಿಂ ಸೇವಿಸುತ ಮೈಮುಖ ಕಮಲ ಸಂಭವ ಪಿತನ ಪೂತನ 2 ಕೇಂದ್ರನೊಳು ಭುವಿಗಿಳಿದು ಸಜ್ಜನರ ಪೊರೆವದ ಕಿಂದ್ರಿಯಂಗಳ ಗೆಲಿದು ಸನ್ಯಾಸ ಕೊಂಡು ಇಂದ್ರ ಹರಿಹರ ಶೀತ ರಘುಕುಲ ಇಂದ್ರನಾವ ಉ ಪೇಂದ್ರ ಶಿರಿಗೋವಿಂದ ವಿಠಲನ ಭಜಿಸಿ ರಾಜ ಮ ಹೇಂದ್ರಿಯ ತನುವಿಟ್ಟ ಗುರುಪದ 3
--------------
ಅಸ್ಕಿಹಾಳ ಗೋವಿಂದ
ಪಡಕೋ ನೀನ್ಹಿಡಕೋ ರಂಗ ಶಾಯಿನಾಮವ ಕಡಕೋ ನೀ ದುಡಕೋ ನಿಖಿಲೇಶನ ಪ್ರೇಮ ಪ ಜನಮೆಚ್ಚಿ ವಂದಿಸಲು ನಿನಗೆ ಬಂದದ್ದೇನೋ ಜನದೂಷಿಸಳಿದರೆ ನಿನಗೆ ಕುಂದೇನೋ ಮನಮೆಚ್ಚಿ ನಡೆದು ಬಿಡದನುದಿನದಿ ಗಳಿಸುವಿ ನೀ ಚಿನುಮಯ ಮನುಮುನಿವಿನಮಿತರ ಧ್ಯಾನ 1 ಅಹುದೆಂದು ಇಹ್ಯದವರು ಭವಬಂಧ ತೊಲಗಿಪರೆ ಸಹಿಸದೆ ಅಲ್ಲೆಂದು ಭವಕೆ ನೂಕುವರೆ ಕುಹುಕಿಗಳ ಎದೆಮೆಟ್ಟೆ ಸಹಿಸಿಬಂದ ನಿಂದೆಗಳ ಪಡಿ ದೃಢದಿ ಅಹಿಶಾಯೆ ಅಡಿಭಕ್ತಿ 2 ದೂಷಣ ಭೂಷಣನುಮೇಷ ಸಮಭಾವಿಸಿ ನಾಶನೆನಿಸುವ ಜಗದ ವಾಸನೆಯ ಕಡಿದು ದಾಸಜನರೊಡೆಯ ಮಮಶ್ರೀಶ ಶ್ರೀರಾಮನಡಿ ಧ್ಯಾಸದೊಳಗಿಟ್ಟುಪಡಿ ಲೇಸೆನಿಪ ಮುಕ್ತಿ 3
--------------
ರಾಮದಾಸರು
ಪರಮ ಲಾಲಿಸು ಪುರಾಣವನು ನೀನುದ್ಧರಿಸಿ ಲೋಕಗಳಾಳ್ವ ಧರ್ಮಸಾರವನು ಪಸ್ಟೃಯ ಕ್ರಮವ ಸೂಚಿಸಲು ಮಾಯೆಯಷ್ಟಪ್ರಕೃತಿಯಾಗಲದು ಸರ್ಗ ಮೊದಲುಅಷ್ಟರಾಧಾರದ ಮೇಲೂ ಭೂತಪುಟ್ಟಿಸಿದ ಭೌತಿಕ ಪ್ರತಿಸರ್ಗವೆನಲು 1ವಿವರಿಸುತಿರೆ ವಂಶಗಳನು ಮತ್ತುವಿವಿಧ ಮನುಗಳಹ ವಿಸ್ತಾರವನ್ನುಅವರ ವಂಶಾವಳಿಗಳನು ಪೇಳಿಧ್ರುವವಾದ ಪುರುಷಾರ್ಥ ದಾರಿದೋರ್ಪುದನು 2ಇಹ ಪರಗಳ ಸುಖದಿರವ ಮೋಕ್ಷಬಹ ಯುಕ್ತಿ ಸಹ ಪೇಳ್ವ ಬಹು ಗ್ರಂಥದೊಲವಅಹುದೆಂದು ತಿರುಪತಿಯಾಳ್ವ ಬಹುಮಹಿಮ ವೆಂಕಟನಾಥ ಮನ್ನಿಸು ದೇವಾ 3 ಓಂ ಯೋಗಿನಾಂ ಪತಯೇ ನಮಃ
--------------
ತಿಮ್ಮಪ್ಪದಾಸರು
ಪರಮಾತ್ಮನೆ ನೀ ಸರಿ ಎಂದು ಕರಗದ ತಮದಲ್ಲಿ ಸೇರುವದೆ ಪ ಜೀವ ಪರಮಾತ್ಮಗೆ ಭೇದವ ಆವಾವ ಕಾಲಕ್ಕೆಯಿಲ್ಲವೆಂದು ದೇವನ ಬಳಿಗೆ ನೀ ದೂರಾಗಿ ಈ ವಸುಧೆಯೊಳು ಬದುಕುವರೆ 1 ಭೇದ ಜೀವಕೆ ಜೀವ ಎಂದಿ ಗಾದರು ಇಲ್ಲವೆಂದು ನುಡಿದು ಈ ದುರಾಚಾರದಲ್ಲಿ ನಡೆದು ಮಾದಿಗನಂತೀಗ ಮಾರ್ಮಲಿದು2 ಜಡ ಪರಮಾತ್ಮ ಜಡ ಜಡಕೆ ಜಡ ಜೀವಕೆ ಅಭೇದವೆಂದು ಕಡುಗರ್ವದಿಂದಲಿ ಉಚ್ಚರಿಸಿ ಮಡಿದು ನರಕಕ್ಕೆ ಉರುಳುವರೆ 3 ಅರಸಿನ ಬಳಿಗೆ ತೋಟಿಗ ಬಂದು ಅರಸೆ ನೀನೆ ನಾನೆಂದಡೆ ಉರವಣಿಸಿ ಕೊಲ್ಲಿಸಿ ಅವನ ಶೆರಿಯ ಹಾಕದೆ ಮನ್ನಿಸುವನೆ 4 ದಾಸನ ದಾಸನು ಎಂದು ಏಸು ಜನ್ಮಕೆ ಅಹುದೆಂದು ದ್ವೇಷವು ತೊರೆದು ನೆನಿಸಿದರೆ ಮೀಸಲಾಗಿಡುವ ವಿಜಯವಿಠ್ಠಲಾ 5
--------------
ವಿಜಯದಾಸ
ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿ ಅರಣೋದಯದಲೆದ್ದು ಭಕ್ತಿಪೂರ್ವಕವಾಗಿ ಕಠಿಣಶ್ರಮದಿ ಮಾಳ್ಪ ಪಾಪರಾಶಿಗಳ ಪರಿಹರಿಸುತ್ತ ಸಂತ್ಯೆಸುವಾ ಪ ಭಾಗೀರಥಿ ಸರಸ್ವತಿ ಯಮುನಾ ವಾರಾಣಾ ಶ್ರೀ ಗೋದ ಫಲ್ಗುಣಿ ಶೋಣಭದ್ರಾ ನರ್ಮ ದಾ ಗಂಡಕಿ ಭಿಮರಥಿ ತುಂಗಭದ್ರೆ ಪ್ರಯಾಗ ತ್ರಿವೇಣಿ ಹೇಮಾ ವೇಗವತಿ ಗಾಯತ್ರೀ ಕಾಶಿಮಣಿಕರ್ಣಿ ಕಾ ಗೌತಮಿ ವಿಯದ್ಗಂಗಾ ಕುಮುದ್ವತೀ ಸಿಂಧು ಪಾಪಾಘನಾಶಿನೀ 1 ಸರಯು ಜಯಮಂಗಳ ಜಮದಗ್ನಿ ವರತಾಮ್ರ ಪರಣಿ ಯೋಗಾನಂದ ಕೃತಮಾಲಕುಹು ಮಹೇ ಧುನಾಶಿ ಗರುಡ ಮದಿರಾ ಮರುದ್ವತಿ ಸ್ವರ್ಣಮುಖರಿ ವರ ಝರತಾಪಿನಿ ಕಾಳಿ ಸೌ ಪರಣಿ ದಕ್ಷಿಣೋತ್ತರಪಿನಾಕಿ ಕಪಿಲ ಶೀತಳ ಕಾನಂದ ಕುರಮುಖಿ ಪ್ರಣವಸಿದ್ಧ 2 ಕಾವೇರಿ ಸಿಧು ಮಾಲತಿ ಗಾರ್ಗಿಣಿ ಹರಿ ಕುಂದ ಕುಂದಿನಿ ಶೈವ ದೇವವತಿ ಪಾತಾಳ ಗಂಗಾ ಪುನಹ ನೀರಾ ಕುಮಾರಧಾರಾ ಸಾವಿತ್ರಿ ದಾನ್ಯಮಾಲಾ ಪುಷ್ಪವತಿ ಲೋಕ ಸಿಂಧು ಧರ್ಮಕು ಭವ ನಾಶಿನಿ ವರದಾ ಮಲಾಪಹಾರಿ 3 ಸ್ವಾಮಿ ಪುಷ್ಕರಣಿ ಮಾನಸ ಚಂದ್ರ ಪುಷ್ಕರಣಿ ಭೂಮಂಡಲದೊಳುತ್ತಮೋತ್ತಮ ತ್ರಿಪುಷ್ಕರಣಿ ನಿತ್ಯ ಪದ್ಮಸರ ಚಂದ್ರಭಾಗತೀರ್ಥ ವಾಮನ ಮಯೂರ ಪಂಪಾಸರೋವರ ಪುಣ್ಯ ಧಾಮ ವ್ಯಾಸ ಸಮುದ್ರ ಧವಳಗಂಗಾ ಸುಸಾ ರೋಮಹರ್ಷತೀರ್ಥ 4 ದ್ವಾರಕಾನಗರ ಸಾಲಗ್ರಾಮ ಟರರ ಬದರಿ ಕೇ ದಾರ ನರನಾರಾಯಣ ಶ್ರೀ ಮಜ್ಜಗನ್ನಾಥ ಶ್ರೀ ಮುಷ್ಣ ಮಂದರ ಮೈನಾಕ ಕೈಲಾಸ ಕಂಚಿ ಶ್ರೀರಂಗನಾಥ ನೈಮಿಷ ದ್ವೈತವನ ಚಂಪ ಕಾರುಣ್ಯ ಕಾಶಿ ಪಂಪಾವಂತಿಕಾ ಪುರಿ ಹರಿದ್ವಾರ ಛಾಯಾಪಿಪ್ಪಲ 5 ಕೇದಾರ ಸಾಗರ ಮಂದಾಕಿನಿ ಕುಸುಮವತಿ ಆದಿಸುಬ್ರಹ್ಮಣ್ಯ ಕೋಟೇಶ್ವರ ನಂದಿ ವೇದಪಾದ ಯಯಾತಿ ಗಿರಿ ಕಾಲಹಸ್ತಿ ಕೌ ಮೋದಕೀ ಪಾಡುರಂಗ ಕ್ಷೇತ್ರ ಶ್ರೀ ವಿಷ್ಣು ಪಾಟಲೀ ಮಂತ್ರಾಲಯ6 ಮಂದರ ಮಲಯ ಕೈವಲ್ಯನಾಥ ಕಾಶೀರ ಜಾಂಬವತಿ ವೃಂ ಶ್ರೀ ವಿರೂಪಾಕ್ಷ ಕುಂದರ ನಂದಪುರಿ ಮಾಯಾ ಶ್ರೀವತ್ಸ ಗಂಧಮಾದನ ಚಿತ್ರಕೂಟ ದ್ವಾ ನರಾಚಲಾಸೌಭದ್ರಿ ಆದಿನಾಥ 7 ಈ ಮಹಿಮಂಡಲದೊಳಿಪ್ಪ ತೀರ್ಥಕ್ಷೇತ್ರ ನಾಮಗಳ ಕಾಲತ್ರಯದಲ್ಲಿ ಸರಿಸುತಿಹ ಧೀಮಂತರಿಗೆ ಸಂಚಿತಾಪ ಪರಿಹರದಾನಂತರದಲಿ ಸೋಮಾರ್ಕರುಳನಕ ಸಕಲ ಭೋಗಗಳ ಸು ತ್ರಾಮಲೊಕದ ಲುಣಿಸಿ ಕರುಣಾಳು ಪ್ರಾತ್ಯಕೆ ಸ್ವ ಅಹುದೆಂದು ಸೂತ ಶೌನಕಣೆ ಪೇಳ್ದ8 ಈ ಭರತ ಖಂಡದೊಳಗುಳ್ಳ ತೀರ್ಥಕ್ಷೇತ್ರ ವೈಭವಾಬ್ಜ ಭವಾಂಡ ಪಾರನದೊಳಗೆ ಹರಿ ಪರಮಕಾರುಣ ದಿಂದ ಸ್ತ್ರೀಬಾಲ ಗೋವಿಪ್ರಮಾತ ಪಿತೃಗಳ ಧನ ಲೋಭದಿಂದಲಿಕೊಂದ ಪಾತಕವ ಪರಿಹರಿಸಿ ಬೇಡಿದಿಷ್ಟಾರ್ಥಗಳನು 9
--------------
ಜಗನ್ನಾಥದಾಸರು
ಎಂಥ ಗಾಡಿಕಾರನೆ ಯಶೋದೆ ನಿನ್ನ ಮಗ ಏಕಾಂತಕಾಂತೆರೊಳಾಡುವ ಕೊಂಕು ನೋಡುವ ಪ.ಮುಗುಳುನಗೆಗಳಿಂದ ಮಡದೇರ ಕಂಚುಕದಬಿಗುಹಿನ ಮಲಕ ಬಿಟ್ಟ ಬಹಳ ದಿಟ್ಟಉಗುರೊತ್ತಿ ಗುರುತು ಪೊಂಬುಗುರಿಗಳೆಮ್ಮವೆಮೊಗ್ಗು ಮೊಲೆಗಳ ಪಿಡಿದು ಮೊನೆ ನೋಡಿದ 1ತೋಳೆರಡನು ತಳಕಿಕ್ಕಿ ಇವಿಗೋ ದುಂಡುಮೊಲೆ ಎನಗಂದವೆಂದು ಮೋಹನಸಿಂಧುತಾಳಿದ್ದ ಕೊರಳೊಳು ತನ್ನ ಪದಕದೊಳುಮೇಲದೆಯೆಂದಪ್ಪಿದ ಬಿಗಿದಪ್ಪಿದ 2ರಾಕೇಂದುಮುಖಿಗೆರಾಹುಬಂದು ತೊಡರಿತುಈಕೆಗೆ ಮೋಸವೆಂದು ಎತ್ತಿದ ಬಂದುಜೋಕೆ ಮಾಡುವೆನೆಂದುಜಡಿದುಮಾರವೇಣಿಯಸಾಕಿ ಉಪಕಾರವೆಂದಸಚ್ಚಿದಾನಂದ3ಎಲೆಲೆ ನಾಭಿ ಒಲ್ಪಕಾಯಳೆ ನಾವು ಮುಟ್ಟಿ ಕೆಂಪಿನಾಮೊಲೆ ಮೊಗ್ಗು ಕಪ್ಪಾದವೆಂದು ಮುಟ್ಟಿ ಅಹುದೆಂದುಅಲಕದ ಪೆಳಲ ಬಿಟ್ಟು ಅಹಿರಿಪು ನವಿಲುಥರಅಲರ್ಗಳಾರ್ಮುಡಿಗಟ್ಟಿದ ಅಂಜಬ್ಯಾಡೆಂದ 4ಚದುರೇರೆನ್ನ ವಂಚಿಸಿ ಚಿನ್ನಿಪಾಲು ತನಿವಣ್ಣುಇದೀಗ ಬಚ್ಚಿಟ್ಟರೆಂದು ಯದುಕುಲೇಂದುಮುದ್ದು ಬಟುಗಲ್ಲದಿ ಮೊನೆವಲ್ಗಳ ನಾಟಿಸಿಅಧರಾಮೃತ ಪೀರಿದ ಅತಿಕೊಬ್ಬಿದ 5ಮುಡಿಯ ತೋರಕ ಕೊಡ ಮಲಿ ಭಾರಕಬಡನಡು ಮುರಿವದೆಂದು ನಗೆಯಲ್ಲವೆಂದುಜಡಿತದೊಡ್ಯಾಣವ ಜಾಣೆ ಕಟಿಗೆ ಬಿಗಿದುಡಿಗೆ ಕರವನಿಡಿದ ದುಡುಕು ಮಾಡಿದ 6ಮೃಗಮದಬಾವನ್ನ ಮಘಮಘಿಪ ಪೂಮಾಲೆಝಗಝಗಿಪ ಭೂಷಣವ ಜಾತಿ ಮೌಕ್ತಿಕವಮುಗುದೇರಿಗಿತ್ತ ಮೋಹಿಪ ಪ್ರಸನ್ನವೆಂಕಟಜಗಕೊಬ್ಬ ಚೆಲುವನಮ್ಮ ಜಯಿಸಿದ ನಮ್ಮ 7
--------------
ಪ್ರಸನ್ನವೆಂಕಟದಾಸರು
ಏಳು ಶ್ರೀ ಗುರುರಾಯ ಬೆಳಗಾಯಿತಿಂದುಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ ಪ.ಏಳುಗುರುರಾಘವೇಂದ್ರ ಏಳು ದಯಾಗುಣಸಾಂದ್ರಏಳು ವೈಷ್ಣವ ಕುಮುದಚಂದ್ರ ಶ್ರೀ ರಾಘವೇಂದ್ರ ಅ.ಪ.ಅಶನವಸನಗಳಿಲ್ಲವೆಂಬವ್ಯಸನಗಳಿಲ್ಲಮುಸುಕ್ಹಾಕಿ ಮೋಸದಲೆ ಮೋಹಿಸಿದೆನೆಲ್ಲಅಸುರಾರಿಯ ಸ್ಮರಿಸದೆ ಪಶುವಿನೊಲು ಈ ದೇಹವಸುಮತಿಯೊಳು ಬಹಳ್ಹಸಗೆಟ್ಟಿತಲ್ಲ 1ನಾನು ನನ್ನದು ಎಂದು ಹೀನಮನಸಿಗೆ ತಂದುಏನು ಮಾಡುವಕರ್ಮನಾನೆ ಅಹುದೆಂದುಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೊಂದುನೀನೆ ಉದ್ಧರಿಸಯ್ಯ ದೀನ ದಯಾಸಿಂಧು 2ಅನ್ಯರ ಕೈಯಲ್ಲಿ ನಿನ್ನವರನಿರಿಸುವುದುಅನ್ಯಾಯವಾಯ್ತುಪಾವನ್ನಗುರುರಾಯಎನ್ನ ಮಾತಲ್ಲವಿದು ನಿನ್ನ ಮಾತೇ ಸರಿಮನ್ನಿಸಿ ಆಗು ಪ್ರಸನ್ನ ಗುರುರಾಯ 3ವೇದ ಶಾಸ್ತ್ತ್ರಗಳನ್ನು ಓದಿ ಪೇಳ್ದವನಲ್ಲಭೇದಾಭೇದವನು ತಿಳಿಯಲಿಲ್ಲಸಾಧು ಸಜ್ಜನರ ಸಹವಾಸ ಮೊದಲಿಲ್ಲಹಿಂದಾಗಿಮಾನಮಾರಿಸಿದಿ ಉಳಿಸಲಿಲ್ಲ4ಆಸೆಗೊಳಗಾದೆನೊ ಹೇಸಿ ಮನುಜನು ನಾನುಕ್ಲೇಶಭವಸಾಗರದೊಳೀಸುತಿಹೆನೊಏಸುಜನ್ಮದಿ ಎನ್ನಘಾಸಿಮಾಡಿದೆ ಮುನ್ನದಾಸನಾಗುವೆ ತೋರೊ ಪ್ರಸನ್ನವೆಂಕಟನ 5
--------------
ಪ್ರಸನ್ನವೆಂಕಟದಾಸರು
ಶ್ರೀ ಸತ್ಯಜ್ಞಾನರುನಮನ ಅನುದಿನದಿ ಅನುಮಾನಿಸದೇ ನೀ ಪನೆನೆ ಮನವೆ ಶ್ರೀ ಸತ್ಯಜ್ಞಾನರ ಅನಘಹೃದ್ವನ ಜದಲಿಘನದಿನ ಮಣಿಯ ವೊಳ್ ಮಿನುಗುವನಗುಣಗಣ ತನು ಮರೆದು ಕುಣಿ ಕುಣಿದು ಹರುಷದಿ ಅ.ಪಜಾÕನಾತ್ಮ ಪರನೆಂದು ಮಿಕ್ಕಾದದಿತಿಯರು ಊನರು ಹರಿಗೆಯಚೇತನರು ಅವಾನಧಿರು ಅಹುದೆಂದುವಿಸ್ತರಿಸಿ ಪೇಳಿದ ದಿನ ಪಾಲಕದೇವ ಶ್ರೀಪವಮಾನ ಮತ ಅಂಬುಧಿಯೊಳನುದಿನಮ್ಞಿನ ನೆನಿಸಿದ ನಮ್ಮ ಸತ್ಯಜ್ಞಾನತೀರ್ಥರ ಮಾನದಂಘ್ರಿಯ 1ಕಮಲಾಪ್ತ ಗಧಿಕನಾದ ತೇಜದಲಿ ಪೊಳೆಯುವಕಮಲಾಪತಿಯ ಸುಪಾದಾ ಅತಿ ವಿಮಲತನ
--------------
ಸಿರಿಗೋವಿಂದವಿಠಲ