ಭಜನೆಯೊಂದೇ ಸಾಲದೇ ರಂಗಯ್ಯನ
ಭಜನೆಯೊಂದೇ ಸಾಲದೇ ಪ
ಅನುದಿನ ಸ್ಮರಿಸಲು
ಭಜಕರ ದುರಿತವ ತರಿಯುವ ಪರಿಯ ಅ.ಪ.
ಹಿಂದೆ ನೋಡಜಮಿಳ ತರಳ ಪ್ರಲ್ಹಾದರ
ಚಂದದಿ ಮೆರೆದ ಗೋಪಾಲ ಬಾಲಕರ
ವೃಂದಾವನದೊಳಿದ್ದ ಗೋಪಸೇವಕರ 1
ಕೋಮಲೆ ದ್ರೌಪದಿ ಸಭೆಯೊಳು ಸ್ಮರಿಸಲು
ಭಾಮೆಗಕ್ಷಯವಿತ್ತ ಕ್ರೂರ ರಕ್ಷಕನ
ಪ್ರೇಮದಿ ಅಹÀಲ್ಯೇ ಶಿಲೆಯೊಳು ಭಜಿಸಲು
ಸ್ವಾಮಿ ತಾನೊಲಿದು ಮುಕ್ತಿಯ ಕೊಟ್ಟ ಹರಿಯ 2
ದಶರಥನಲಿ ಬಂದು ದಶಕಂಠನನು ಕೊಂದು
ವಸುಮತಿಯನು ಪೊರೆದ ಶ್ರೀ ಹರಿಯ
ಪಶÀುಪತಿ ಸಖನಾದ ಪನ್ನಗಶಯನನಅಸುರರ ತರಿದ ಶ್ರೀ ಚನ್ನಕೇಶವನ 3