ನೀ ಯಾಕ ಮನವೇ ಚಿಂತಿಸಿ ಬಳಲುವೆ ಬರಿದೇ |
ಶ್ರೀಯರಸನ ಮೊರೆ ಹೋಗದೇ ಪ
ಸಾಧುರಾ ಸಂಗ ಜರಿದು ಕುಜನರ ನೆರೆವಿಡಿದು |
ಮೇದಿನಿಯೊಳು ನಿನ್ನ ನೀ ಮರೆದು 1
ಇರಲು ಮುಳ್ಳಿನಾಗ್ರದಲಿ ಹೀನ ಕೀಟಕಾವಳಿ |
ಪೊರೆವಾನಿತ್ತು ಆಹಾರದಯಲೀ 2
ಮನುಜರಿಗೆ ತಲೆವಾಗಿ ಗೇಣು ವಡಕಲಾಗಿ |
ಮನಸಾ ಹಿಡಿವರೇ ಪರರು ಹೋಗಿ 3
ಹುಟ್ಟಿಸಿದಾ ದೇವನು ಹುಲ್ಲು ಮೇಯಿಸುವನೇನು |
ಅಷ್ಟಾಸಾಯಸ ಬಡದಿರು ನೀನು 4
ಅನುದಿನ ಗುರುಮಹಿಪತಿ ಚರಣಾ |
ತಂದಿದಿರುಡುವ ನಿಧಾನಾ 5