ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾದನಾದ ಸುನಾದವ ತಿಳಿದವ ನಾದ ಮೂರುತಿ ನಿಜನಾದ ಪ ಆರು ಅರಿಗಳು ಅವರನು ಗೆಲುವೊಡೆ ಆಶ್ರಯ ತಾನಿದೆ ನಾದಧೀರತನದಲಿಹ ನಾಲ್ವರ ಸಾಧಿಸೆ ದಿಟವು ತಾನಿದೆ ನಾದ 1 ಅಷ್ಟಮದಂಗಳನೆಲ್ಲವ ತಿಳಿವೊಡೆ ಆದಿಯಹುದು ಈ ನಾದದುಷ್ಟರು ಐವರ ದೃಢವನು ಕೆಡಿಸಲು ದೃಷ್ಟಿಗೆ ತಾನಿದೆ ನಾದ 2 ಮೂರು ಮೂರು ಮೂರೆನಿಸುವ ತ್ರಿಪುಟಿಯ ಮೂಲನಾಶವಿದೆ ನಾದಚೋರರು ಸಪ್ತಾ ಸಪ್ತರು ಎಂಬರ ಭೇದಿಸೆ ತಾನಿದೆ ನಾದ3 ಎರಡರ ಭೇದವನೆಲ್ಲವನಳಿವೊಡೆ ಎಡೆದೆರಪಿಲ್ಲದ ನಾದಭರಿತವನಂದಾನಂದವ ತುಳುಕುವ ಭಾಗ್ಯವು ತಾನಿದೆ ನಾದ 4 ನಾದದಿ ನಿತ್ಯವು ಬೆರೆತಿಹ ಪುರುಷನೆ ನಾದ ಚತುರ್ಮಖನಾದವಾದರಹಿತ ಚಿದಾನಂದ ಗುರುವಿನ ಪಾದದೊಳಗೆ ಅವನಾದ 5
--------------
ಚಿದಾನಂದ ಅವಧೂತರು
ಬಲುದೊಡ್ಡವನೇನೆಪ ಅಕ್ಕಕÉೀಳುವರೇನೆ ಅ.ಪ ಕೃಷ್ಣಸರಸಿಜೋದ್ಭವಗಿತ್ತನೆ ಗಾರುಡಿವಿದ್ಯವೆ 1 ಕೃಷ್ಣಸುರರಿಗೆ ಹಂಚಿಚನೆ ಅಂಗನೆಯಾಗಿ ಹೀಂಗೆ ಮಾಡೋದು ವಂಚನೆಯಲ್ಲವೆ ಇದು ವಂಚನೆಯಲ್ಲವೆ 2 ಭೂಮಿಯನೆತ್ತಿದನೆ ಇದುಮೋಸದ ವಿದ್ಯವೆ 3 ಕೃಷ್ಣನು ನರಹರಿ ಆದನೆ ಇದು ಘೋರಕೃತ್ಯವೆ 4 ಕೃಷ್ಣ ಇಂದ್ರನ ಸಲಹಿದನೆ ಇದು ಯಾತರೆ ನ್ಯಾಯವೆ 5 ಕೃಷ್ಣ ಭೂಪರ ತರಿದನೆ ಅವನು ಘಾತುಕನಲ್ಲವೆ 6 ಕೃಷ್ಣ ಅಡವಿಯೊಳ್ ಚರಿಸಿದನೆ ಒಡೆಂiÀiರ ಲಕ್ಷಣವೆ 7 ಕೃಷ್ಣಗೋಪೆರ ಕೂಡಿದನೆ ಪಾಪವಲ್ಲವೆ 8 ಕೃಷ್ಣ ದೈತ್ಯರ ನಳಿಸಿದನೆ ಭಂಡನಲ್ಲವೇ 9 ಕೃಷ್ಣ ಧರ್ಮವನುಳುಹುವನೆ ಅಕ್ಕ ಕೋಪ ಬೇಡವೇ 10 ಕೃಷ್ಣವಿಠಲನೆ ಅವನು ಶ್ರೀ ಕೃಷ್ಣವಿಠಲನೆ ಅತನು ಶ್ರೀಕೃಷ್ಣವಿಠಲನು ಅವನಾದರೆ ಜೀಯನೆ ಅವನೆಮಗೆ ಅಕ್ಕ ಜೀಯನೆ ಅವನೆಮಗೆ11
--------------
ಕೃಷ್ಣವಿಠಲದಾಸರು