ಇಂದಿನ ದಿನವೆ ಸುದಿನ | ಗೋ
ವಿಂದನ ಸ್ಮರಣೆಯ ಗೈದುದರಿಂದ ಪ
ನಾಳೆ ಏಕಾದಶಿ ಹರಿದಿನವೆನಲಾ
ವೇಳೆಗೆ ವುಳಿವೆವೋ ಅಳಿವೆವೋ ಅರಿಯೆವು
ತಾಳವಾದ್ಯತಂಬೂರಿಗಳಿಲ್ಲವೆಂ
ದಾಲೋಚಿಸೆ ಹರಿಭಜನೆಯು ದುರ್ಲಭ 1
ಗೀತವಿದ್ಯಾಕೋವಿದರಿಹರೆನ್ನುತ
ಯಾತರ ದಾಸರ ಪದಗಳು ಎನುತಲಿ
ಮಾತನಾಡಿ ಕಾಲವ ಕಳೆದೊಡೆ ಇ
ನ್ನಿತರ ಕಾಲವು ದೊರಕುವುದಿಲ್ಲ2
ದಾಸರ ಪದದೊಳಗಿರುವ ಮಹತ್ವವು
ಲೇಶವಿಲ್ಲ ಸಂಗೀತ ಸ್ವರದೊಳು
ಭಾಸುರಾಂಗ ಮಾಂಗಿರಿಪತಿ ಸಲಹುವ
ದಾಸರಪದ ತಾಳಗಳಿಗೊಲಿವಾ 3