ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಯಾದರು ಮಾಡಬೇಕು ಕೆಲಸ ಪ ಅಲ್ಲೇನು ಇಲ್ಲೇನು ಬಲ್ಲಂಥಾವನಾದರೆ ತಾನು ಅ.ಪ ಶರೀರ ಸಂಬಂಧಿಗಳಿಗಾಗಿ | ಮೂರು ಕರಣದಿಂದಲಿ ಅನುವಾಗಿ ಕರೆಕರೆಪಡುತಲಿ ಅರೆನಿಮಿಷವಾದರೆ ಬಿಡದೆ 1 ತ್ತರವಾದ ಕಟ್ಟಾಜ್ಞೆ ಅಲ್ಲಿ ನ- ರರ ಕಾಟವು ಇಲ್ಲಿ ಸುರರ ನಿಬಂಧನೆಯಲ್ಲಿ 2 ಬಾಲ್ಯ ಯೌವನ ಕೌಮಾರ | ಮುಪ್ಪು ಲೀಲೆಯಿಂದಲಿ ಕೆಲವರು ಗೋಳಾಡುತಲಿ ಕೆಲವರು3 ಸ್ವಲ್ಪಾದರು ಸತ್ಕರ್ಮ ಮಾಡೆ | ಫಣಿ- ಅಲ್ಪರಿವುದು ಯಾಕೆ 4 ಇಪ್ಪತ್ತು ನಾಲ್ಕು ತತ್ವಗಳಿಂದ | ನ- ಕ್ಲುಪ್ತಗೈದಿರುವನು ಆಪ್ತ ಎಂದಿಗೂ ನಮಗವನು 5
--------------
ಗುರುರಾಮವಿಠಲ
ನನಗ್ಯಾಕೆ ಬಡತನವು ಸನಕಾದಿನುತ ನಿನ್ನ ಬೆನ್ನು ಬಲವಿರಲು ಪ ಪುಂಡಗಂಡನು ಇರಲು ಹೆಂಡತಿಯ ಭೋಗ ಭೂ ಮಂಡಲದೊಳಗಿನ್ನುತ್ವವ್ಯಾಕೋ ಭಂಡರಕ್ಕಸಹರ ಪುಂಡಮಂಡಲತ್ರಯದೋ ಮಂಡೆ ಮೇಲಿರಲು 1 ಜನರಿಗೆ ಕಾಣದ ಧನವ ಕೂಡಿಟ್ಟು ಅನುದಿನ ಹಿಗ್ಗುವವರಿಗೆ ಬಡತನವುಂಟೇನೊ ಧಣಿಯಾಗಿ ಮೂಲೋಕವನು ಉದರದಿಟ್ಟಾಳ್ವ ಪಾದ ಮನಮಂದಿರದಿರಲು 2 ಕಲ್ಪಿತಸಂಸಾರ ಅಲ್ಪೆಂದು ನಿಜವಾಗಿ ಕಲ್ಪಿಸಿಕೊಂಡವರು ಅಲ್ಪರೇನಯ್ಯ ಕಲ್ಪತರು ಶ್ರೀರಾಮನ ಕಲ್ಪಾಂತರರಿಬಳಿ ಕಲ್ಪರಲ್ಲಿಗೆ ಹೋಗಿ ಅಲ್ಪರಿವರೇನೊ 3
--------------
ರಾಮದಾಸರು
ಲೋಕನೀತಿ 1 ಕಾಮಧೇನು ಕಲ್ಪತರು ಕಾಮಿತಾರ್ಥವನೀವ ಹರಿಯೇ ಎನಗಿರೆ ಎನಗ್ಯಾತಕೆ ಚಿಂತೆ ಕಾಮಿತಾರ್ಥವನೀವ ದೊರೆಯಿರಲು ಯನಗ್ಯಾತರ ಕೊರೆತೆ ಹರಿಕಾವದೇವ ನೀನಿರಲು ಕೋಳಿ ತನ್ನ ಮರಿಗೆ ಹಾಲುಕೊಟ್ಟು ಸಾಕುವದೆ ಕಾಳ ರಾತ್ರಿಯು ಕಳೆದು ಹರಿ ಉದಿಸುವನೆಂದು ಕೋಳಿಕೂಗಿದರೂ ಏಳದೆ ಮಲಗಿ ಕಾಲಕಳೆವರು ಮನುಜರುಹರಿಯೆ ಕಾಲಕೂಟ ಸಮ ಕಾಮಿತಾರ್ಥವ ಬೇಡುವರು ಕಾಲದೂತರು ಬರುವ ವ್ಯಾಳೆತನಕ ನಿನಧ್ಯಾನಿಸದೆ ಕಾಲಕಳೆವರು ಮನುಜರು ಕಾಲಮೂರುತಿ ನೀನೆ ಎಂದರಿಯರು ಹರಿ ಕಾಲ ಅಕಾಲ ನಿನಗುಂಟೆ ಎನಗುಂಟೆ ದೇವ ನೀ ಎನಗೆ ಇಂಥಾ ಕೀಳು ಬುದ್ಧಿಯ ಕೊಡದಿರೊ, ಏಳು ಬೆಟ್ಟದ ಒಡೆಯ ಶ್ರೀ ಶ್ರೀನಿವಾಸ 2 ಬೆಳಗೆದ್ದು ಹರಿ ನಿನ್ನ ಧ್ಯಾನಿಸದೆ ಪರಧ್ಯಾನ ಪರನಿಂದೆಯಲ್ಲಿಹರು ನಿತ್ಯ ನಿನ್ನ ಧ್ಯಾನ ಬಿಟ್ಟು ಬೆಳಗಾಗೆ ನಿನ್ನ ಸೂರ್ಯರಶ್ಮಿ ಬಿದ್ದರೂ ಏಳರು ಶಯನ ಬಿಟ್ಟು ಈ ಜಗದಿ ದೇವ ಈ ಕಲಿ ಜನರು ಇಂಥಾ ಬೆಳಗ ಎನಗೀಯದೆ ನೀ ಎನ್ನೊಳಗಿದ್ದು ಬೆಳಗಿನ ಜಾವದಿ ನಿನ್ನ ಕಳೆಕಳೆರೂಪ ಎನಗೆ ತೋರೋ ಘಳಿರನೆ ಶ್ರೀ ಶ್ರೀನಿವಾಸ 3 ಎರಡನೆ ಜಾವದಲಿ ಹುಂಜ ಹರಿಪೂರ್ವದಲಿ ಬರುವ ಏಳಿರೆಂದು ಕೂಗಲು ಸತಿ ಸಹಿತ ಕಾಮಕೇಳಿಯಲಿಹರು ಮೂರನೆ ಝಾವದಲಿ ಹರಿ ಉದಿಸಿ ಬ್ರಾಹ್ಮೀಮುಹೂರ್ತದೊಳು ಹರಿ ಬೆಳಕೀವ ಲೋಕಕೆ ಎಂದು ಕೂಗುವುದು ಕೋಳಿ ಕೇಳಿ ಕರ್ಣದಲಿ ಶಯನ ಬಿಟ್ಟೇಳರೊ ಈ ಜಗದಿ ಮೂರೆರಡು ಶತಶ್ವಾಸ ಜಪ ಮಾಡಿಸುವ ಹರಿಭಕ್ತ ಹನುಮನೆಂದರಿಯದೆ ಮಲಗಿ ಕಾಲ ಎರಗಿ ಬರುವುದು ಆಯುಷ್ಯವೆಂದರಿಯದೆ ಭಾರತೀಪತಿ ಅಂತರ್ಯಾಮಿ ನಿನ್ನಧ್ಯಾನಿಸದೆ ಇಹರಲ್ಲೋ ಈ ಜಗದಿ ಶ್ರೀ ಶ್ರೀನಿವಾಸ ಎನ್ನ ನೀನವರ ಸಂಗ ಸೇರಿಸದೆ ಕಾಯೊ ಹರಿಯೆ ಎನ್ನ ದೊರೆಯೆ 4 ಸೂರ್ಯನಂತರ್ಯಾಮಿ ನೀನಲದೆ ಮತ್ಯಾರಿಹರು ಹರಿ ಸೂರ್ಯಾಂತರ್ಗತ ಸೂರ್ಯನಾರಾಯಣ ಸೂರ್ಯಕೋಟಿ ತೇಜದಿ ಮೆರೆವೆ ಸೂರ್ಯ ಸಹಸ್ರ ಉದಿಸಿದಂತೆ ಬರುವೆ ಕರ್ಮ ನೀ ಮಾಡಿಸಿ ಪೆರ್ಮೆಯಿಂದವರ ಕಾಯ್ವ ಶರ್ವಾದಿವಂದಿತ ಗರ್ವರಹಿತ ವೈಕುಂಠಪತಿ ನೀ ನಿನ್ನವರ ಕಾಯಲು ಸರ್ವದಾ ಅವರಿಗೆ ವಲಿದು ಕಾವೆ ಆದಿನಾರಾಯಣ ಶ್ರೀ ಶ್ರೀನಿವಾಸ ಕಾಯೆನ್ನ ಸೂರ್ಯಾಂತರ್ಗತ ವೆಂಕಟೇಶಾ 5 ಹಗಲಿರುಳು ಎನ್ನದೆ ನಿನ್ನ ಸ್ತುತಿಪರು ಭಕ್ತರು ಅಘಹರನೆ ನಿನ್ನ ಪ್ರೇರಣೆಯಿಂದಲವರಿರಲು ಬಗೆಬಗೆಯ ರೂಪದಿ ಬಂದವರ ಸಲಹುವೆ ನಗೆ ಮೊಗದ ಶ್ರೀ ರಮೆಯರಸ ಲಕ್ಷ್ಮೀಶ ನಿನ್ನ ಬಗೆ ಅರಿತಿಹರಾರಿರೀಜಗದಿ ಪಗಲಿರುಳೆನ್ನದೆ ನೀನವರಲ್ಲಿದ್ದು ಸಲಹಲು ಬಗೆವರೆ ಅನ್ಯರಿಗೆ ಅಲ್ಪರಿವರೆ ನಿನ್ನವರು ಜಗದಾಖ್ಯ ವೃಕ್ಷನೀನಿರಲು ನಿನ್ನ ಭಕ್ತರು ನಿನಗಲ್ಲದೆ ಜಗದೊಡೆಯ ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ಹರಿದಾಟ ನಿಲಿಸು ಮನದಘದೂರ ಸುಖಸಾರ ಎರಗುವೆನು ತವಪದಕೆ ಸ್ಮರಿಸಿ ನಿಮ್ಮುಪಕಾರ ಪ ಸಂತಸವ ಕೊಡು ಎನ್ನ ಅಂತರಂಗದಿ ನಿಂತು ಕಂತುಪಿತ ಚಿಂತಿಪರ ಚಿಂತಾಮಣಿ ಪ್ರಭುವೆ 1 ಅಲ್ಪಮನಸಿನ ಕುಕಲ್ಪನೆಯ ಪರಿಹರಿಸು ಅಲ್ಪರಿವ ದೀನರಿಗೆ ಕಲ್ಪತರು ನೀನು 2 ನಾಮಾಡಿದಪರಾಧ ಪ್ರೇಮದಿಂ ಕ್ಷಮಿಸು ಶ್ರೀ ರಾಮ ಮಮಪ್ರಾಣೇಶ ಪ್ರೇಮಾಬ್ಧಿನಿಲಯ 3
--------------
ರಾಮದಾಸರು