ಒಟ್ಟು 235 ಕಡೆಗಳಲ್ಲಿ , 44 ದಾಸರು , 215 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲ ತಾಪತ್ರಯದ ಚಿಂತೆ ಬಗಳಗೆ ಹತ್ತಿಹುದುಸೊಲ್ಲು ಸೊಲ್ಲಿಗೆ ನೆನೆವ ಚಿಂತೆ ಎನಗೆ ಹತ್ತಿಹುದು ಪ ಮಡದಿ ಸುತರು ಮನೆಯ ಪಶುವು ಬಗಳೆಗೆ ಹತ್ತಿಹುದುಷಡು ಚಕ್ರಂಗಳ ಭೇದಿಪುದೆಲ್ಲಾ ಎನಗೆ ಹತ್ತಿಹುದುಕೊಡು ಕೊಳ್ಳುವುದು ಹಾಕುವುದೆಲ್ಲಾ ಬಗಳೆಗೆ ಹತ್ತಿಹುದುಎಡೆದೆರಪಿಲ್ಲದೆ ನಾದವ ಕೇಳುವುದೆನಗೆ ಹತ್ತಿಹುದು 1 ನಿತ್ಯ ನಿತ್ಯದ ಪರಾಮರಿಕೆಯು ಬಗಳೆಗೆ ಹತ್ತಿಹುದುಮತ್ತೆ ಭ್ರೂಮಧ್ಯದ ಅರಿವೆಯ ಹುಚ್ಚು ಎನಗೆ ಹತ್ತಿಹುದುಬಿತ್ತಿ ಬೆಳೆಯುವುದು ಮಳೆಯಿಲ್ಲೆಂಬುದು ಬಗಳೆಗೆ ಹತ್ತಿಹುದುಎತ್ತೆತ್ತಲು ತಾ ಬೆಳಕ ನೋಡುವುದು ಎನಗೆ ಹತ್ತಿಹುದು 2 ಭಕುತರ ಬದುಕನು ಹಸನು ಮಾಡುವುದು ಬಗಳೆಗೆ ಹತ್ತಿಹುದುಭಕುತಿಯ ಶರಧಿಲಿ ಮುಳುಗಾಡುವುದು ಎನಗೆ ಹತ್ತಿಹುದುಸದಾ ಕಾಲವು ಕಾದಿರುತಿಹುದು ಬಗಳೆಗೆ ಹತ್ತಿಹುದುಚಿದಾನಂದ ಶ್ರೀ ಬಗಳೆಯ ಭಜಿಪುದು ಎನಗೆ ಹತ್ತಿಹುದು 3
--------------
ಚಿದಾನಂದ ಅವಧೂತರು
(ಅ) ಶ್ರೀಹತಿಸ್ತುತಿಗಳು ಜಗದುದರನು ಹರಿ ಸೂತ್ರಧಾರಂ ನಗಿಸುವ ಅಳಿಸುವ ಕಾರಕನಿವ ತಾಂ ಪ ಪರಿಪರಿ ಸೃಷ್ಟಿಸುತಾ ಸಲಹುವನು ಅರಿವಿಂದವುಗಳ ಲಯಗೈಸುವನು ಭರಿತನು ಸಕಲ ಚರಾಚರಂಗಳಲಿ ನಿರುತವೆಲ್ಲ ತರತಮದಿಂದಾರಿಸಿ ಇರುವನು ಪರಮಾತ್ಮನು ಸರ್ವೇಶಂ 1 ನಿತ್ಯನಿರ್ಮಲನು ಸತ್ಯಸನಾತನು ಅತ್ಯಂತನು ಗುರುವನಂತನು ಮೃತ್ಯುನಿಯಾಮಕ ಮುಕ್ತಿಪ್ರದನು ಭೃತ್ಯವರ್ಗ ಸಂರಕ್ಷ ಶಕ್ತನು ಮತ್ತೊಂದಕು ಸಹ ಮೂಲನು 2 ಅಣೋರಣೀವನು ಮಹತೋಮಹೀಮನು ಗುಣಗಣಭರಿತನಗಣ್ಯನು ಕ್ಷಣಮಾದಲನು ಕಂಟಕನು ಕಾಲನು ತೃಣಮೊದಲು ಬ್ರಹ್ಮಾಂಡನು ಧೀರನು ಘನಮಹಿಮನು ಶ್ರೀ ಜಾಜೀಶಂ 3
--------------
ಶಾಮಶರ್ಮರು
(ಮಂಗಳೂರಿನ ಪ್ರಾಣದೇವರನ್ನು ನೆನೆದು) ಪಾಲಿಸೆನ್ನ ಪಾವಮಾನಿ ಪಾವನಾತ್ಮ ಸುಜ್ಞಾನಿ ಪ. ಮೂರ್ಲೋಕದ ಸಚರಾಚರಜಾಲದಂತರಂಗ ಕರುಣಿ ಅ.ಪ. ಮೂರವತಾರವ ಗೈದು ಮುರಾರಿಯ ಪೂಜಿಸಿದೆ ಪಾರಮೇಷ್ಠಿಪದ ಪೊಂದಿದೆ ಭಾರತಿಮನೋಹರ 1 ಪಾರಗಾಣರು ನಿನ್ನ ಮಹಿಮೆ ಫಾಲನಯನಾದಿಗಳು ಕ್ರೂರಕರ್ಮಿಗಳೇನರಿವರು ಶ್ರೀರಾಮಶರಣ್ಯ 2 ಅರಿವರ್ಗಗಳತಿಕ್ರಮವ ಧಿಕ್ಕರಿಸೈ ಸುಜ್ಞಾನವಿತ್ತು 3 ಸರ್ವಾಪರಾಧಗಳನು ಸಾಧುವರದ ಕ್ಷಮಿಸು ಗರ್ವಹಂಕಾರವೀಯದೆ ಗಜವರದನ ಭಕ್ತಿಯಿತ್ತು 4 ಕರಣೀಕಾಗ್ರಣಿ ಮಂಗಲಪುರವರ ಪ್ರಾಣೇಶ ವರ ಲಕ್ಷ್ಮೀನಾರಾಯಣ ಶರಣಾಗತರೀಶ 5
--------------
ತುಪಾಕಿ ವೆಂಕಟರಮಣಾಚಾರ್ಯ
ಅಚ್ಯುತ ಅಡಿಗಡಿ ಗೆಚ್ಚರಿಕ್ಹೇಳುತಾನೋ ಪ ಮೆಚ್ಚಿ ಬಿಡದೆ ಎನಗೆಚ್ಚರಿಕ್ಹೇಳುತಾನೋ ಹುಚ್ಚರಾಗಿ ಇಹ್ಯಮೆಚ್ಚಲು ಮುಂದೆಮ ಕಿಚ್ಚುಕಾಣೆನುತಾನೋಅ.ಪ ನಿಂದೆ ಬಿಡೆನ್ನುತಾನೋ ಜಗವಿದು ಕುಂದುವುದೆನುತಾನೋ ನಿನಗಿದು ಒಂದು ಇಲ್ಲೆನುತಾನೋ ಬಂದದ್ದು ತಿಳೀದಿರೆ ಮುಂದೆ ನಿನಗೆ ಭವಬಂಧ ಬಿಡದೆನುತಾನೋ 1 ನಿಶ್ಚಲಾಗೆನ್ನುತಾನೋ ಮನ ಬಹು ಸ್ವಚ್ಛಮಾಡೆನ್ನುತಾನೋ ತನು ಮುಚ್ಚಿ ಭಜಿಸೆನ್ನುತಾನೋ ಬಚ್ಚಿಟ್ಟು ಭಜಿಸಲು ಇಚ್ಛೆಯಂತಿರ್ದು ನಿನ್ನ ಮೆಚ್ಚಿಕೊಂಬೆನ್ನುತಾನೋ 2 ಮರೆವು ತಾರೆನುತಾನೊ ನಿಚ್ಚವಾ ದರಿವು ತಿಳಿಯೆನುತಾನೋ ಅರಿವಿನ ಕುರಹು ಕಾಣೆನುತಾನೋ ಪರಮ ಶ್ರೀರಾಮನ ತರಣಿ ಕಂಡು ಹರಷದ್ಹಾಡೆನುತಾನೋ 3
--------------
ರಾಮದಾಸರು
ಅಜ್ಞಾನಿ ಜೀವನಿಗೆ ಅಭಿಮಾನ ಬಹಳ ಸುಜ್ಞಾನಿಯಾ ನುಡಿಯ ಲಕ್ಷಿಸನು ಕೇಳಾ ಪ ಬುದ್ಧಿ ಮನದೇಹಗಳು ತಾನೆಂದು ತಿಳಿಯುತಲಿ ಇದ್ದುದನು ಮರೆತು ತಾ ಜಾಣನೆನಿಸುವನು ಒದ್ದಾಡುತಿದ್ದರೂ ಅಭಿಮಾನವನೆ ಹÉೂತ್ತು ಗುದ್ದಾಡುತಲಿ ತಾನು ಸುಖವ ಹುಡುಕುವನು 1 ಸಟಿಯಾದ ಸಂಸಾರ ದಿಟವೆಂದು ನಂಬುತಲಿ ಸೆಟೆದಾಡುತಿರುವೆಯೋ ತಿಳಿದು ನೋಡಾ ಹಟವ ಹಿಡಿಯಲು ಬೇಡ ತೋರ್ಪುದೇ ದಿಟವೆಂದು ನಟನೆಯಾ ಮಾತಲ್ಲವೆನೆ ಕೇಳನವನು 2 ಅರಿ ನೀನು ನಿನ್ನ ಅರಿವಿನಾ ಹೊರತು ನೀ ಸುಖ ಪೊಂದಲಾರೆ ಆರು ಸುಖಪಡೆದಿಲ್ಲ ಅಜ್ಞಾನದಿಂದೆನಲು ಇರಲಿ ಹೋಗೆಂದೆನುತ ಮೋರೆ ಹೊರಳಿಸುವಾ 3 ಬಾಳುವೆಯು ನಿಜವೆಂದು ನಂಬಲಿವನಾ ಗೋಳು ಗಾಳಿಯನೆ ಗುದ್ದಿ ಮೈ ನೊಯ್ಸಿಕೊಂಡಂತೆ ಕೇಳು ಚಿತ್ರದೊಳಿರುವ ಬೆಂಕಿ ತಾ ದಿಟವೆಂದು ಮೇಲೆ ನೀರೆರೆದಂತೆ ಎನೆ ಕೇಳನವನು 4 ಗೊಡ್ಡು ಮಾತೆಂದು ತಾ ಜ್ಞಾನಕೆರವಾಗುತಲಿ ದಡ್ಡತನವನೆ ತೋರಿ ದುಃಖಿಯಾಗುವನು ಶುದ್ಧಜ್ಞಾನವನಂಬಿ ತನ್ನ ತಾ ತಿಳಿಯದಲೆಬುದ್ಧ ಶಂಕರನುಕ್ತಿಗೆರವಾಗುತಿಹನು 5
--------------
ಶಂಕರಭಟ್ಟ ಅಗ್ನಿಹೋತ್ರಿ
ಅಡಿಗೆಯನು ಮಾಡಬೇಕಣ್ಣ - ನಾನೀಗ ಜ್ಞಾನದಡಿಗೆಯನು ಮಾಡಬೇಕಣ್ಣ ಪ ಅಡಿಗೆಯನ್ನು ಮಾಡಬೇಕುಮಡಿಸಬೇಕು ಮದಗಳನ್ನುಒಡೆಯನಾಜ್ಞೆಯಿಂದ ಒಳ್ಳೆಸಡಗರದಲಿ ಮನೆಯ ಸಾರಿಸಿ ಅ ತನ್ನ ಗುರುವ ನೆನೆಯ ಬೇಕಣ್ಣತನುಭಾವವೆಂಬ ಭಿನ್ನ ಕಲ್ಮಶವಳಿಯ ಬೇಕಣ್ಣಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ 1 ತತ್ವಭಾಂಡವ ತೊಳೆಯ ಬೇಕಣ್ಣ - ಸತ್ಯಾತ್ಮನಾಗಿಅರ್ತಿ ಅಕ್ಕಿಯ ಮಥಿಸಬೇಕಣ್ಣಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನುಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ 2 ಜನನ ಸೊಂಡಿಗೆ ಹುರಿಯಬೇಕಣ್ಣ - ನಿಜವಾಗಿ ನಿಂತುತನುವು ತುಪ್ಪವ ಕಾಸಬೇಕಣ್ಣಕನಕಗಿರಿ ಕಾಗಿನೆಲೆಯಾದಿಕೇಶವನ ದಾಸಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ 3
--------------
ಕನಕದಾಸ
ಅದು ನಿರಾಲಂಬ ಅದು ನಿರಾಲಂಬಅದು ನಿರಾಲಂಬ ಕೇಳದು ನಿರಾಲಂಬ ಪ ತನು ಹಂಗು ಇಲ್ಲದೆ ಮನ ಹಂಗು ಇಲ್ಲದೆತನಗೆ ತಾನಿಹುದದು ನಿರಾಲಂಬ 1 ಬುದ್ಧೀಂದ್ರಿಯಕೆ ಅತ್ತ ಅಹಂಕಾರಕೆ ಅತ್ತಸುದ್ದಿಲ್ಲದಹುದದು ನಿರಾಲಂಬ 2 ಇಂದ್ರಿಯಕೆ ನಿಲುಕದೆ ಇಂದ್ರಿಯಕೆ ಸುಖಿಸದೆಇಂದ್ರಿಯಗಳರಿಯದುದು ನಿರಾಲಂಬ3 ಅರಿವುದು ಕಾಣದೆ ಮರೆವುದುತೋರದೆ ಅದು ಚಿದಾನಂದ ಅದು ನಿರಾಲಂಬ 4 ಬಹಿರಂತಲ್ಲದೆ ಬೇರೆಂಬುದಿಲ್ಲದೆಮಹಾ ಬೆಳುದಿಂಗಳದೆ ನಿರಾಲಂಬ 5
--------------
ಚಿದಾನಂದ ಅವಧೂತರು
ಅನಂತ ಯೋನಿಯೊಳಗೆ ಅನಂತ ಜನ್ಮತಿರುಗಿಅನಂತ ಯುಗಯುಗಂಗಳಲಿ ಸತ್ತು ಹುಟ್ಟೆಅನಂತನಾಟವೆಯೆಂದು ಅರಿವು ಇಲ್ಲದೆ ಹೋಗಿಅನಂತ ದುಃಖಸಾಗರದಿ ಹಿರಿದು ಬಳಲುವಿರಿ 1 ವಿಶ್ವತೈಜಸ ಪ್ರಾಜ್ಞ ಮೂವರೆಂದೆನಿಸಿವಿಶ್ವದೊಳು ನಾನಾ ರೂಪಗಳ ತಾಳಿವಿಶ್ವದೊಳ ಹೊರಗೆಲ್ಲ ಪೂರ್ಣ ತಾನೆಂದೆನಲುವಿಶ್ವಾತ್ಮಕನು ನೀವು ಮತ್ತಾರು ತಿಳಿಯಿರೋ 2 ಮೂರವಸ್ಥೆಗಳಲ್ಲಿ ಮೂರು ಮೂರ್ತಿಗಳಾಗಿತೋರುತಿಹ ನಾನಾ ಬಗೆ ಲೀಲೆಗಳನುಭೂರಿ ಸಂಸಾರಗಳ ದುಃಖ ಸುಖವೆಂದೆನಿಸಿತೋರಿ ನೋಡಿಪನವನು ಮತ್ತಾರು ತಿಳಿಯಿರೋ 3 ಸತಿ ಪುರುಷರಾಗಿಹನು ಸುತನು ತಾನಾಗಿಹನುಖತಿಯು ಶಾಂತಿಯು ಕಾಮವಾಗಿ ತಾನಿಹನುಅತಿ ಕುಲಗಳಾಗಿಹನು ಅತಿ ಜಂತುವಾಗಿಹನುಮಿತಿಯಿಲ್ಲದಾಗಿಹನು ನೀವಾರು ತಿಳಿಯಿರೋ 4 ಈ ವಾಕ್ಯಗಳನೇ ನೀವಾರಮುಂದುಸುರದಲೆಸಾವದಾನದಿ ತಿಳಿದು ನೋಡಿದೇವ ಚಿದಾನಂದ ಗುರು ತಾನೀಗ ನಿಜವೆಂದುಸಾವದಾನದಿ ಕಂಡು ಕಡೆಹಾಯಿರೋ 5
--------------
ಚಿದಾನಂದ ಅವಧೂತರು
ಅಪ್ಪ ಕೇಳೋ ಬೇಡಿಕೊಂಬೆ ನಿನ್ನ ತಿಳಿಯಪ್ಪಒಪ್ಪಿ ಮಾತನ್ನಾಡಿಸಿದರೆ ನೀನೆ ಜಗದಪ್ಪ ಪ ನಾನದಾರು ಬಂದೆನೆಲ್ಲಿಗೆ ಎನ್ನುತ ನೀನಪ್ಪನಾನು ಹೋಗುವೆ ಎಲ್ಲಿಗೆ ಎಂದು ಚಿಂತಿಸು ನೀನಪ್ಪನೀನು ಸುಳಿಗಾಳಿಯ ಶಾವದ ತೆರದಂದದಿ ಇಹೆಯಪ್ಪನಾನಾ ಭವವಾಚರಿಸುತಿಹೆ ಆದಿ ಅಂತ್ಯವಿಲ್ಲಪ್ಪತನುವ ನೆಚ್ಚಬೇಡ ಮೊದಲಿನ ತನುವದೇನಾಯಿತಪ್ಪತನಯ ಸತಿಯರನೆಲ್ಲ ಬಿಟ್ಟುಬಂದೆ ನೀನುಮನೆ ಕಟ್ಟುವೆ ನೀನು ಮೊದಲಿನ ಮನೆ ಏನಾಯಿತಪ್ಪಾನಿನಗೆ ಕುಲವು ಎಷ್ಟಾದವು ಎಣಿಸಿಕೊಳ್ಳಪ್ಪ2 ಹಿಂದೆ ಮುಂದೆ ಕಾಣದಂತೆ ತಿರುಗಿ ತಿರುಗಿ ಅಪ್ಪಬೆಂದು ಬೆಂದು ಓಡಾಡುತಿಹೆ ಸ್ವರ್ಗ ನರಕಕಪ್ಪಎಂದೆಂದಿಗೂ ಅರಿವಾಗದ ಮರೆವು ಮುಚ್ಚಿ ಅಪ್ಪಅಂಧಕಾರ ಸಂಸಾರದಿ ಕಳವಳಿಸುತ ಅಪ್ಪ3 ಕಣ್ಣುಯಿದ್ದು ಕಣ್ಣಿಗೀಗ ಬೀಳಬೇಡವಪ್ಪನಿನ್ನ ನರಿವುದಕ್ಕೆ ಮನುಜ ಜನ್ಮ ಸಾಧನವಪ್ಪಹೊನ್ನು ಹೆಣ್ಣು ಮಣ್ಣು ಎನಗೆ ಬೇಡ ಬೇಡಪ್ಪಎನ್ನ ಬೋಧೆ ಕೇಳದಿರಲು ಕೆಟ್ಟುಹೋದೆಯಪ್ಪ 4 ವಾಸನದಿಂದ ತಿರುಗುವೆ ರಾಟಾಳರಂತಪ್ಪದೇಶಿಕ ಸದ್ಗುರು ಹೊಂದು ದೇವನಹೆಯಪ್ಪನಾಶವಹವು ನಾನಾ ಗುಣಗಳು ಜೀವನ ತನುವು ಅಪ್ಪಈಶ ಚಿದಾನಂದನಹೆ ಜನ್ಮವಳಿದು ಅಪ್ಪ 5
--------------
ಚಿದಾನಂದ ಅವಧೂತರು
ಅರಿ ನಿನ್ನಯ ನಿಜವನು ಜೀವಾ ಅರಿವಿಂದೆ ನೀನೆ ಆ ದೇವಾ ಪ ಸಾರಿ ಪೇಳಿತು ಈ ನುಡಿ ಶಾಸ್ತ್ರ ಅರಿತು ನೋಡಲು ನೀನೆ ಕೃತಾರ್ಥ ದೇಹಮನಗಳ ತ್ಯಾಗದಿಂದೆ ಉಳಿವುದಾ ನಿಜವೊಂದೇ 1 ಈ ಬೋಧಾದಾ ಅನುಭವ ಪಡೆಯೈ ನಾಶಮಾಡು ಈ ಮನವಾ ಈಶಜೀವರಾ ಐಕ್ಯದ ನಿಜವಾ ಪೇಳ್ದ ಶಂಕರದೇವಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಅರಿವರಾರೆಲೋ ನಿನ್ನ ಅಗಮ್ಯ ಚರಿತ ಚರಣದಾಸರ ಪರಮ ಆನಂದಭರಿತ ಪ ದೇವರುಂಟೆಂಬ ಕೆಲವಾಧಾರಪುಟ್ಟಿಸಿದಿ ದೇವರಿಲ್ಲೆಂಬ ಹಲವು ಆಧಾರ ತೋರಿಸಿದಿ ಜೀವಬ್ರಹ್ವೈಕ್ಯೆಂಬುಪಾಯಗಳ ಸ್ಥಾಪಿಸಿದಿ ಆವರೀತಿಗು ಕಾವದೇವ ನಾನೆಂದಿ 1 ಜೀವವೆ ಮಾಯೆಯೆಂದು ಕಾಯವೆ ಕರ್ಮವೆಂದು ಭಾವಿಗಳ ಕೈಯಿಂದ ಬರೆಸಿದೆಯೋ ನಿಂದು ಜೀವಜೀವರಲಿ ಜಡ ಜೀವ ಬೇರೆನಿಸಿದಿ ಜೀವಜೀವರ ಜೀವ ಚೈತನ್ಯರೂಪ 2 ವೇದ ಸುಳ್ಳೆಂಬ್ಹಲವು ವಾದಿಗಳ ನಿರ್ಮಿಸಿದಿ ವೇದ ಅಹುದೆಂಬ ನಿಜವಾದಿಗಳ ಪುಟ್ಟಿಸಿದಿ ನಾದಬ್ರಹ್ಮವುಯೆಂಬ ಹಾದಿ ರಚಿಸಿದಿ ಸರ್ವಸಾಧನಕೆ ಒಲಿದು ಪ್ರಸನ್ನ ನೀನಾದಿ 3 ಬಗೆಬಗೆಯ ವಚನದಿಂ ಬಗೆಬಗೆಯ ನಿಗಮದಿಂ ಬಗೆಬಗೆಯ ರೂಪದಿಂ ನಿಗವಿಟ್ಟು ಸರ್ವರನು ಬಗೆಗೊಂಡು ಬೆಳಗುವೆಯೊ ಜಗಭರಿತನಾಗಿ 4 ಅವಸಾಧನವೊಲ್ಲೆ ಜಾವಜಾವಕೆ ನಿಮ್ಮ ದಿವ್ಯಸ್ಮರಣೆಯ ಎನ್ನ ಭಾವದೊಳು ನಿಲಿಸಿ ದೇವದೇವರ ದೇವ ದೇವ ಶ್ರೀರಾಮ ತವ ಸೇವಕನೆನಿಸೆನ್ನ ಕಾಯೊ ಕೈಪಿಡಿದು 5
--------------
ರಾಮದಾಸರು
ಅರಿವಿನ ಅರಿವಾ ತಿಳಿ ಜೀವಾ ಆನಂದರೂಪದ ಸಿರಿಯಾ ಅದೇ ನೀನು ಜೀವಾ ಜೀವಾ ಅದೇ ನೀನು ಜೀವಾ ಪ ಅನಿಸಿಕೆಯಡಗಲು ಉಳಿಯುವ ಸತ್ಯವೆ ನೀನಿಹೆ ನೀನಿಹೆ ಮನಸಿನ ತೋರಿಕೆಅಡಗುವಿಕೆಗಳಿಂ ಬೇರಿಹೆ ಬೇರಿಹೆ ಈ ನಾನೆಂಬುದು ಮನಸಿನದು ಆನಾನೆ ನೀನಾಗಿರುವಿ ಅದೇ ನಿಜವು ಜೀವಾ 1 ಪರಿ ನೋಡು ನೀ ನೋಡು ನೀ ನಾನಾವಿಧಗಳು ಪುಸಿಯಾಗಿಹವೈ ದೂಡು ನೀ ದೂಡು ನೀ ಆನಂದಾತ್ಮನೆ ನೀನಿರುವೀ ಆನಂದದಿಂದಲಿ ತಿಳಿಯೈಶಂಕರಾನಂದಬೋಧಾ ತಿಳೀನೀನೆ ನಿನ್ನೋಳ್ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಅರಿವೆ ಮಹದ್ವರವೆ ನೀನೆ ಪರಕೆಪರಮ ಪರಮಸೂತ್ರನು ಪ ತ್ರಿಕಾಲ ಬಲ್ಲಿ ನೀ ತ್ರಿಲೋಕವನು ಬಲ್ಲಿ ತ್ರಿದ್ವಿಶಾಸ್ತ್ರವ ಬಲ್ಲಿ ತ್ರಿಯೊಂದ್ವೇದವ ಬಲ್ಲಿ 1 ತ್ರಿವರ್ಗರಳಿಬಲ್ಲಿ ತ್ರಿದ್ವಿಗುಣ ಕಳಿಬಲ್ಲಿ ತ್ರಿನಾಲ್ಕು ಗೆಲ್ಲಬಲ್ಲಿ ತ್ರಿಸಪ್ತರೊದಿಬಲ್ಲಿ 2 ತ್ರಿಸದ್ವಾರಬಲ್ಲಿ ತ್ರಿಣಯರಸ್ಥಲಬಲ್ಲಿ ತ್ರಿತ್ರೀಯಬಂಧನ ಬಲ್ಲಿ ತ್ರಿವಿಧದಿ ಹರಿಬಲ್ಲಿ 4 ತ್ರಿದ್ವಯ ಮೂಲವ ಬಲ್ಲಿ ತ್ರಿದಶಸ ಭೇದವ ಬಲ್ಲಿ ತ್ರಿಕೂಟಕಳೆ ತ್ರಿಪಂಚದುಳಿ ಬಲ್ಲಿ 5 ವರದ ಶ್ರೀರಾಮ ಚರಿತ ಪೊಗಳಬಲಿ ್ಲ ಕರುಣದಿಂದೆನ್ನೊಳು ಬೆರದೇಕನಾಗೆಲೊ 6
--------------
ರಾಮದಾಸರು
ಆತ್ಮನ ಕೊಂಬುವರಾರು ಅವರಿಗೆ ಸರಿಯಾರುಆತ್ಮನು ಅವನೆ ಗುರುವು ಅವನೆ ಅವನೆ ಈಶ್ವರ ಕೇಳಿಪ ಘಟದ ದೀವಿಗೆಯಂತೆ ಪಟದ ಚಿತ್ರದಂತೆಅಡವಿಯ ಅಗ್ನಿಯಂತೆ ನಿಜವನೆತ್ತಿ ತೋರಿದಂತೆ 1 ಪಡೆದ ದೇವತೆಯಂತೆ ಮರುಳನರಿವಿನಂತೆ ಉರಗನಹೆಡೆಯು ಗಿರಿಯ ಧೂಮದ ತೆರದಿ ಕಾಣಿಸಿದಂತೆ 2 ಮರೆಯ ವೇಷದಂತೆ ಭರಣಿಯ ರಸದಂತೆಅರಿವೆಯ ರತುನ ಧರಣಿ ಸ್ವರ್ಗವು ಸ್ಥಿರದಿ ಕಾಣಿಸಿದಂತೆ3 ಕೂಳದ ತಾವರೆಯಂತೆ ಘನ ಮರೆಯ ರವಿಯಂತೆಜಲದ ಬಡಬಾನಲಗಿನ ಪ್ರಭೆಯು ಬೆಳಗಿ ತೋರಿಸಿದಂತೆ 4 ಪರಿ ಆತ್ಮನ ನಿಜವತಾ ಪರದೈವವೆಂದರಿವಭೂಪ ಚಿದಾನಂದ ರೂಪನೇ ತಾನಾಗಿ ವ್ಯಾಪಿಸಿಕೊಂಡಿಹ ಜಗದ 5
--------------
ಚಿದಾನಂದ ಅವಧೂತರು
ಆಮಿತ ಮಹಿಮೋಪೇತ ವಿಠಲ ಸಲಹೋ ಪ. ವಿಮಲಮತಿ ಇತ್ತಿವಗೆ ಕಾಮಿತಾರ್ಥವನೇಅ.ಪ. ತೈಜಸನೆ ನೀನಾಗಿ ನಿಜಯಾರ್ಯನುಗ್ರಹವಯೋಜಿಸಿಹೆ ಸ್ವಪ್ನದಲಿ ಕಾರುಣ್ಯಮೂರ್ತೇಭ್ರಾಜಿಷ್ಣು ಸುಜ್ಞಾನ | ವೈರಾಗ್ಯ ಭಾಗ್ಯಗಳಮಾಜದಲೆ ಕರುಣಿಸೆಂದಾನಮಿಪೆ ಹರಿಯೇ 1 ಹೇ ಸದಾಶಿವ ವಂದ್ಯ | ಕ್ಲೇಶತೋಷಗಳಲ್ಲಿಭಾಸಿಸಲಿ ತವನಾಮ | ಮೀಸಲದ ಮನದೀ |ಆಶುಗತಿಮತ ಪೊಂದಿ | ದಾಸದೀಕ್ಷಾಕಾಂಕ್ಷಿವಾಸವಾನುಜ ಇವನ | ದಾಸನೆಂದೆನಿಸೋ 2 ಭವ ಉತ್ತರಿಪಸದ್ವಿದ್ಯ ಪಾಲಿಪುದು ಮಧ್ವಾಂತರಾತ್ಮಾ 3 ಹರಿಗುರೂ ಸದ್ಭಕ್ತಿ | ದುರ್ವಿಷಯನಾಸಕ್ತಿಎರಡು ಮೂರ್ಭೇದಗಳ | ಅರಿವ ನೀನಿತ್ತೂತರತಮದ ಸುಜ್ಞಾನ | ಕರುಣಿಸುವುದೆಂದೆನುತಕರಿವರದ ಭಿನ್ನವಿಪೆ ಪ್ರಾರ್ಥನೆಯ ಸಲಿಸೋ 4 ಕಾಯ ಬೇಕೋ 5
--------------
ಗುರುಗೋವಿಂದವಿಠಲರು