ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವ ಜೋಡಿಸಿ ಎಲ್ಲರಿಗೊಂದಿಸಿ ಪ. ಎಲ್ಲರಿಗೊಂದಿಸಿ ಫುಲ್ಲನಾ¨sನÀ ಮುಖ್ಯವಲ್ಲಭೆಯರುನಾವು ಗೆಲ್ಲಬೇಕೆಂದುಅ.ಪ. ಮಡದಿ ಇಂದಿರಾದೇವಿ ಕಡೆಗಣ್ಣನೋಟದಿ ಪಡೆದಾಳು ಲೋಕಬ್ರಹ್ಮರುದ್ರಾದಿ ಪಾದಂಗಳಿಗೆ ನೀವೆ ಮಹಾಲಕ್ಷ್ಮಿಪಾದಂಗಳೆಗೆ ನೀವೆ ಮಹಾಲಕ್ಷ್ಮಿ ದೇವಿಯಶುಭಾಂಗಿಯ ಮೊದಲೆ ಬಲಗೊಂಬೆ 1 ಪರಮೇಷ್ಠಿ ಪರಮೇಷ್ಠಿ ಪಾದ ಪದ್ಮವನೆ ಮೊದಲೆ ಬಲಗೊಂಬೆ2 ವಾಣಿ ಅಜನ ಪಟ್ಟದರಾಣಿ ಪನ್ನಂಗ ವೇಣಿಜಾಣಿ ಕೊಡು ಎಮಗೆ ಮತಿಗಳಜಾಣಿ ಕೊಡು ಎಮಗೆ ಮತಿಗಳ ನಿನ್ನಪಾದರೇಣುವ ಮೊದಲೆ ಬಲಗೊಂಬೆ 3 ಪಾದ ವನಜವ ಮೊದಲೆ ಬಲಗೊಂಬೆ4 ಭಾರತಿ ನಿನ್ನ ಪಾದವಾರಿಜ ಚರಣವ ಬಾರಿ ಬಾರಿಗೆ ಸ್ಮರಿಸುವೆಬಾರಿ ಬಾರಿಗೆ ಸ್ಮರಿಸುವೆ ನಮಗಿನ್ನುತೋರೆ ಬೇಗ ಮತಿಗಳು5 ಇಂದ್ರನ ಗೆದ್ದು ಸುಧೆಯ ತಂದ ಮಾತೆಯ ಬಂಧನ ಕಡೆದ ಬಲು ಧೀರಬಂಧನ ಕಡೆದ ಬಲುಧೀರನಾದ ಖಗೇಂದ್ರನ ಮೊದಲೆ ಬಲಗೊಂಬೆ6 ಸಾಸಿರ ಮುಖದಿಂದ ಶ್ರೀಶನ ಸ್ತುತಿಸಿದವಾಸುದೇವಗೆ ಹಾಸಿಗೆವಾಸುದೇವಗೆ ಹಾಸಿಗೆ ಯಾದಶೇಷಗೆ ಮೊದಲೆ ಬಲಗೊಂಬೆ7 ಅಪಾರ ಮಹಿಮನೆ ತ್ರಿಪುರಸಂಹಾರಕಚಂದ್ರ ಶೇಖರನೆ ಸರ್ವೇಶ ಚಂದ್ರ ಶೇಖರನೆ ಸರ್ವೇಶ ನಿನ್ನಪಾದದ್ವಂದ್ವವ ಮೊದಲೆ ಬಲಗೊಂಬೆ 8 ವಾರುಣಿ ಅಪರ್ಣಾದೇವಿಯರು ಕರುಣಿಸಿನಮಗೆ ಕಾಲಕಾಲಕರುಣಿಸಿನಮಗೆ ಕಾಲಕಾಲಕೆರಾಮೇಶನ ತರುಣಿಯರೆ ಗೆದ್ದು ಬರಬೇಕ9
--------------
ಗಲಗಲಿಅವ್ವನವರು
ನಲ್ಲೆಯರು ನಮೋ ಎಂಬೆವು ಸುರರಎಲ್ಲರ ಬಲಗೊಂಬೆವು ಪ. ಚಲ್ವೆ ಕಂಗಳೆಯರಿಗೆ ಹೊಲ್ಲವು ಎನುತಿರೆಹೊಲ್ಲ ತನವೆಲ್ಲ ಹೊರಗ್ಹಾಕಿ ಬಾಹೊಅ.ಪ. ಅಗಣಿತ ಮಹಿಮ ಹೌದೆಂದುಅಗಣಿತ ಮಹಿಮಎನುತಿರೆಮಗನ ಮುಂದಾಗಿ ಬಲಗೊಂಬೆ1 ಸಾಗರಶಯನಗೆ ಆಗುವ ಹಾಸಿಗೆ ಬ್ಯಾಗನೆ ವರವ ಕೊಡುವೋನುಬ್ಯಾಗನೆ ವರವ ಕೊಡುವ ನಾಗೇಂದ್ರನಮೋ ಎಂಬÉ ನಮ್ಮ ಗೆಲಿಸೆಂದು 2 ನಂದಿವಾಹನ ಶಿವನ ಮುಂದಾಗಿ ಬಲಗೊಂಬೆ ಇಂದಿಗೆ ಪಂಥಗೆಲಿಸೆಂದುಇಂದಿಗೆ ಪಂಥಗೆಲಿಸೆಂದು ಬ್ರಹ್ಮನ ಕಂದನ ಮೊದಲೆ ಬಲಗೊಂಬೆ 3 ಸೌಪರ್ಣವಾರುಣಿ ಅಪರ್ಣ ದೇವಿಯರು ಸೌಕರ್ಯದಿಂದ ನಮ್ಮ ಪಂಥಸೌಕರ್ಯದಿಂದ ನಮ್ಮ ಪಂಥಗೆಲಿಸೆಂದುಕರವ ಮುಗಿವೆವು ಕ್ಷಣಕ್ಕೊಮ್ಮೆ 4 ಇಂದು ರಾಮೇಶನನುಗಾಲ ನೆನೆಯುತ ಮುಂದಕ್ಕೆ ಹೆಜ್ಜೆನಿಡುವೋಣ5
--------------
ಗಲಗಲಿಅವ್ವನವರು
ಲೋಕನೀತಿಯ ಪದಗಳು 448 ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡುನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳುಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗ ಪ್ರ-ಸನ್ನ ಮೂರುತಿಯಾಗುರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನುಭೂಸುರರಿಗಿತ್ತು ಮನ್ನಿಸು ಉದಾರನಾಗುಮನ್ನೆಯರೆಲ್ಲರು ಬಂದುನಿನ್ನನೋಲೈಸಲೆಂದು ಅಪರ್ಣೆಪರಿಸಿದಳು 1 ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚಕೋಟಿ ಗಜದಾನ ಶತಕೋಟಿಯಶ್ವದಾನಗಳಮೀಟಾದ ಬ್ರಾಹ್ಮರಿಗಿತ್ತು ಕೀರ್ತಿವಂತನಾಗು ಕಿ-ರೀಟ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-ರೀಟ ರತ್ನಕಾಂತಿಗಳ ಕೋಟಿ ನಿನ್ನ ಪಾದದಲ್ಲಿಧಾಟಿಯಾಗಿರುವನಾಗುಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿಜೂಟ ಭಕ್ತನಾಗು 2 ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗುಪೆತ್ತವರ ನೋಡಿ ನಲಿವುತ್ತಿರಲು ಭೂಸುರರುಮುತ್ತಿನಕ್ಷತೆಯನಾಂತುಪೃಥ್ವಿಯ ವೊಳಗೆಲ್ಲಾ ಸ-ರ್ವೋತ್ತಮ ಪುರುಷನಾಗೆನುತ್ತಮಸ್ತಕದಿ ತಳಿವುತ್ತ ಪರಸಿದರು 3 ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-ಗೇಂದ್ರ ನೀನಾಗುಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗಇಂದಿರೆ ಪರಸಿದಳು4 ಧೀರನಾಗುದಾರನಾಗು ಸೂರಿಜನವಾರಕೆ ಮಂ-ದಾರನಾಗು ಸಂಗರ ಶೂರನಾಗು ವೈರಿ ಜ-ಝ್ಝೂರನಾಗು ಮಣಿಮಯ ಹಾರನಾಗುವೀರಾಧಿವೀರ ನೀನಾಗುಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗುಕಾರುಣ್ಯಸಾಗರನಾಗು ಕಾಮಿತಫಲಿದನಾಗುಶ್ರೀ ರಾಮೇಶನಪಾದಾಬ್ಜ ವಾರಿಜ ಭಕ್ತನಾಗೆಂದುಶಾರದೆ ಪರಸಿದಳು5
--------------
ಕೆಳದಿ ವೆಂಕಣ್ಣ ಕವಿ
ಶ್ರೀ ಮಧ್ವರಾಯರ ಸೇವೆ ದೊರಕುವುದುಜನುಮ ಸಫಲ ಕಾಣಿರೋ ಪಶ್ರೀಮದಾನಂದ ತೀರ್ಥರ ಪಾದವ ನೆನೆವರುಸಾಮಾನ್ಯಸುರರುಕಾಣಿ-ಬೊಮ್ಮನಆಣಿಅ.ಪಜಗತು ಸತ್ಯವು ಅಲ್ಲ ಜಡ-ಜೀವ ಭೇದವಲ್ಲಅಗುಣನು ಪರಬೊಮ್ಮನು-||ಹೀಗೆ ನುಡಿವ ಜನರ ನಿಗಮಶಾಸ್ತ್ರದಿ ಗೆದ್ದುಜಗ ಸತ್ಯ ಸಗುಣ ಬ್ರಹ್ಮ ಎಂದು ಪೇಳುವ 1ಹರಿಸರ್ವೋತ್ತಮನಿತ್ಯತರುವಾಯ ರಮಾದೇವಿತರುವಾಯ ವಿಧಿಪ್ರಾಣರುಸರಸ್ವತಿಭಾರತಿಗರುಡ ಅನಂತ ರುದ್ರತರುವಾಯ ಆರು ದೇವಿಗಳು 2ಸೌಪರ್ಣಿವಾರುಣಿದೇವಿ ಅಪರ್ಣಾದೇವಿಯರು ಸಮರುದ್ವಿಪದಿ ಮನ್ವಾದಿಗಳು ||ಈಪರಿತಾರತಮ್ಯ ಜಪ-ಧ್ಯಾನಾರ್ಚನೆಯಿಂದಅಪವರ್ಗದನ ಸೇವೆಯ ಮಾಡಿರೊ ಎಂಬ 3ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿಚೆಂದದಿಂದಲಿ ಲಾಲಿಸಿ ||ಇಂದಿರಾರಮಣ ಗೋವಿಂದನೇ ದೈವವೆಂದು |ಸಂದೇಹವಿಲ್ಲದೆ ಸಾಧಿಸಿ-ಮಾಯೀ ಸೋಲಿಸಿ 4ಹಿಮಗಿರಿಯಿಂದ ಸೇತುವೆಯ ಪರ್ಯಂತರಭ್ರಮಿಸುತ ಸುಜನರಿಗೆ ||ಕ್ರಮತತ್ತ್ವ ಬೋಧಿಸಿ ಕಮಲನಾಭನಮೂರ್ತಿಕ್ರಮವರಿತು ಸ್ಥಾಪಿಸಿ ಪೂಜಿಸಿರೆಂದ 5ಭೂತಳದೊಳು ರೌಪ್ಯಪುರದಿ ನೆಲಸಿ ಗೆದ್ದುಧಾತ್ರೀ ಮುದ್ರೆಯ ತೋರಿಸಿ ||ಈತನೇ ಹನುಮಂತ ಈತನೇ ಭೀಮಸೇನಈತನೇ ಭವಿಷ್ಯದ ಬ್ರಹ್ಮಜೀವೋತ್ತಮ6ಶ್ರೀಮದನಂತನೆ ಅನಂತಕಾಲಕೆಯೆಂದುಯಮಕ ಭಾರತ ತೋರಿಸಿಸ್ವಾಮಿ ಸರ್ವಾಂತರ್ಯಾಮಿ | ಸರ್ವಗುಣಪೂರ್ಣನೆಂದುಪ್ರೇಮಿಪುರಂದರವಿಠಲನ ದಾಸನಾದ7
--------------
ಪುರಂದರದಾಸರು