ಸುಗ್ಗಿ ಸುಕಾಲಾಯಿತು ಜಗದೊಳಗೆ
ಅಗ್ಗಳತ್ಯಾಯಿತು ಗುರುದಯಲೆನಗೆ ಧ್ರುವ
ಭಕ್ತಿ ಭೂಮಿಯು ಕೈಗೊಟ್ಟಿತು ಪೂರ್ಣ
ತತ್ವೋಪದೇಶ ತಿಳಿಯಿತು ನಿಧಾನ
ಭಕ್ತರಿಗಿದರಿಡುವದು ಅನುದಿನ
ಮುಕ್ತಿಯ ಫಲ ಮುನಿಜನರಾಭಣ 1
ಮಳೆಗರಿಯಿತು ಮಹಾಗುರುದಯ ಕರುಣ
ಬೆಳೆಬೆಳೆಯಿತು ಮಹಾ ಸುಙÁ್ಞನದ ಸ್ಫುರಣ
ತಿಳಿಯಿತು ಬರವಿದು ಭವಬಂಧನ
ಕಳೆಯಿತು ಕಾಂಕ್ಷೆ ಹುಟ್ಟುವ ಹೊಂದುಣ2
ಮನೋಹರವಾಯಿತು ಗುರುಕೃಪೆಯಿಂದ
ಜನವನದೊಳು ಕಾಣಿಸಿದ ಗೋವಿಂದ
ಅನುಭವ ಸುಖವಿದು ಬ್ರಹ್ಮಾನಂದ
ಘನಸುಖಪಡೆದ ಮಹಿಪತಿ ಇದರಿಂದ 3