ಈ ವಿಬುಧರ ಸಂಗವೆ ಮಹಾಪ್ರಮೋದ
ದುರ್ಲಭ ಜ್ಞಾನಿಯ ನಿಜಾತ್ಮಬೋಧ
ಭಾಗ್ಯವಿದೇ ಬಹುಜನ್ಮದ ಪುಣ್ಯ
ಯೋಗ್ಯರಬೋಧಾ ದೊರಕುವುದಣ್ಣ
ಬೋಗ್ಯದಿ ಲಂಪಟನಾದವಗಿನ
ಅಗ್ಗದಿ ಸಿಗುವದೆ ಸಜ್ಜನರನ್ನಾ
ಸ್ವರ್ಗದಿ ಸಿಗದಿಹ ಸಂತರ ಬೋಧ
ದುರ್ಲಭ ಜ್ಞಾನಿಯ ನಿಜಾತ್ಮಬೋಧ 1
ಉಪದೇಶದಿ ಈ ಭವವನು ಕಡಿವಾ
ಬಾಧೆಯ ಸುಡುವಾ ಮುಕುತಿಯ ಕೊಡುವಾ
ಹೃದಯದೊಳಿರುವಾ ಆತ್ಮಸ್ವರೂಪ
ಜ್ಞಾನದಿ ತಿಳುಹಿನಿ ಮೋದವ ಕೊಡುವಾ
ಸ್ವಾನು ಭವಾನಂದಾನ್ವಿತರೂಪ
ಸನ್ನುತ ಶಂಕರಗುರುಸ್ವರೂಪ2