ಅಕ್ಷಯವಾಗುವುದು ನಿಮಗೆ ಪ
ಕುಕ್ಷಿಯೊಳೆಲ್ಲವ ಪೊಂದಿರುವಾತನ
ಕುಕ್ಷಿಗೆ ಹಿತಕರ ಭಿಕ್ಷೆಯೆಂದೆನ್ನುತ ಅ.ಪ
ಹೊಟ್ಟಿಗೆ ಇಲ್ಲದೆ ಬಂದಿಲ್ಲ ಕೊಟ್ಟರೆ
ಪುಟ್ಟದ ಕಟ್ಟನು ತರುವೆವು
ಅಷ್ಟು ಪಾಪಗಳ ಮಾಡಲು
ಕೃಷ್ಣ ದಯೆಯ ತಂಬಿಟ್ಟನು ಕೊಡುವೆವು 1
ಶ್ರಾವಣ ಮಾಸದ ಶನಿವಾರ
ಯಾವನು ಕೊಡುವನೊ ಮನಸಾರ
ಜೀವನ ಕ್ಲೇಶದ ಪರಿಹಾರ
ಭಾವದಿ ಪೊಂದುವ ಸುಖಸಾರ 2
ಮೋಸವಿಲ್ಲದವು ದಾಸ ಪ್ರಸನ್ನ
ತೋಷಣ ವೈಭವ ಶ್ರೀಶನೆ ಬಲ್ಲನು
ಸಾಸಿರ ಸಾಸಿರ ನಾಣ್ಯದ ಕಾರ್ಯವ
ವೀಸಕೆ ಮಾಡುವ ದಾಸರ ಗುಂಪಿದು3