ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಬುಜಾಕ್ಷನಬಂಟನೆನೆವರಿಗೆ ನಂಟನಿಂಬರಿಗೆ ನೆಲೆವಂತ ವರದ ಹನುಮಂತ ಪ.ಜಲಧಿಯನು ದಾಂಟಿ ಜಾನಕಿಗೆ ತಲೆವಾಗಿ ನೀನಲಿದಕ್ಷಯ ನಿಶಾಟಾದ್ಯರರಿದೆಸತಿರಘುಕುಲೇಂದ್ರನಂಘ್ರಿಯ ಕಂಡು ಅಸಹಾಯದಿಹÀಲವು ಸಾಹಸ ಮಾಡಿದಖಿಳ ಕಪಿನಾಥ 1ಕಿರ್ಮೀರ ಬಕ ಹಿಡಿಂಬಕ ಕೀಚಕಾದಿಖಳದುರ್ಮತಿ ಕದಳಿವನಕೆಮತ್ತಕರಿಯೆನಿರ್ಮಳಾನನೆ ದ್ರೌಪದಿಯ ಭಂಗಪಡಿಸಿದ ಕುಕರ್ಮಿ ಕೌರವರಿಗಶನಿಯೆ 2ಶ್ರೀ ಬಾದರಾಯಣಾಜÕದಿ ತತ್ವಸಾರಾರ್ಥನೀ ಬೋಧಿಸಿದೆ ನಿಜ ವೈಷ್ಣವ ಜನಕೆಈ ಭುವಿಗೆ ಕಶ್ಮಲ ಕುವಾದಿಗಳ ಗೆದ್ದಬ್ಜನಾಭಿ ಪ್ರಸನ್ನವೆಂಕಟೇಶಗರ್ಪಿಸಿದೆ 3
--------------
ಪ್ರಸನ್ನವೆಂಕಟದಾಸರು