ಶ್ರೀ ಮನೋಹರ ಹರಿಯಾಪಾರ ವ್ಯಾಪಾರ ಪ
ಶ್ರೀ ಮಹಾಲಕುಮಿ ಮನಕೆ ಗೋಚರಿಸಿದದರಪಾರ ಅ.ಪ.
ಕುಂಭಿಣಿ ಪರಮಾಣುಗಳನು
ಅಂಬುಕಣಗಳನ್ನು ಗಣನೆ
ಗಿಂಬುಗೈದು ತಿಳಿಯಬಹುದು
ಅಂಬುಜಾಕ್ಷನ ಗುಣವಗಣಿತ 1
ನಿಕರ ತೋಡಿ ಪುಡುಕಿ
ನೀರಜಾಕ್ಷನ ನೆಲೆಯ ಕಾಣದು
ಜಗದ ಜನರ ಭಾವನೆಗಿನ್ನು
ಸಿಗುವನೆ ಅಚಿಂತ್ಯಮಹಿಮ 2
ಭಜಕ ಜನರ ಮನಕೆ ತನ್ನ
ನಿಜ ಕರ್ತೃತ್ವವನು ತೋರಿ
ನಿಜ ಸುಜ್ಞಾನವಿತ್ತು ಪೊರೆವ
ವಿಜಯಸಾರಥಿ ಕರಿಗಿರೀಶ 3