ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುತ್ತಬೇಕು ಜನ್ಮವೆತ್ತಬೇಕು ಪ ಕತ್ತಲೆ ಸಂಸಾರದೊಳು ಹೊತ್ತು ಹೊರೆಯ ನಿತ್ಯ ಅ.ಪ ಭರತಖಂಡದೊಳು ಪುಟ್ಟಿ ಮರುತ ಮತವ ಪೊಂದಿಕೊಂಡು ಗುರುಕೃಪೆಯನು ಪಡೆದು ಹರಿ ಸರ್ವೋತ್ತಮನೆಂದರಿಯೋ ತನಕ 1 ಅರಿಷಡ್ವರ್ಗವನ್ನೆ ತ್ಯಜಿಸಿ ದುರುಳರ ಸಂಗ ಕತ್ತರಿಸಿ ಪರಿ ಕಾರ್ಯ ಕರ್ಮದೊಳು ಹರಿಯು ತೋರುವ ತನಕ 2 ಬಿಂಬ ವಿಜಯ ರಾಮಚಂದ್ರ - ವಿಠಲರಾಯನು ಹೃದಯ ಅಂಬರದೊಳಗೆ ಪೊಳೆದು ಅಂಬವಿರಜೆಯಲಿ ಮುಳುಗೊ ತನಕ 3
--------------
ವಿಜಯ ರಾಮಚಂದ್ರವಿಠಲ