ತಾಳಲಾರೆನು ದೇವ ಪಾಪ ತಪ್ಪಿಸಿ ಬೇಗ
ಸಂಜೀವ ಕಾಳಭೈರವನಿಗಪ್ಪಣೆಯ ಕೊಡೊ ದೈತ್ಯಕುಲ
ಕಾಲ ಬಿಡಿಸುವುದೆನ್ನ ನೋವ ಪ.
ನರಹರಿಯೆ ಸರ್ವತ್ರ ಇರುವಂಥ ನಿನಗೆ ನಾ-
ನರುಹಲೇನಿಹುದಿನ್ನು ಜೀಯ
ಉರಿಯನುಗುಳುವ ಘೋರ ಶರಗಳೋಲ್ ಪ್ರತಿನಿಮಿಷ
ವಿರಿವುತಿದೆ ಬಲ್ಲಿ ಮಹರಾಯ
ತರಹರಿಸಿ ದಿನದಿನಕೆ ಕರುಗುತಿಹ ಮದ್ದೇಹ
ಸ್ಥಿರವಾಗಲೀ ನಿನ್ನ ಪಾಯ
ದರ ಚಕ್ರ ಶಾಙ್ರ್ಗನಂದಕ ಚರ್ಮಗದೆಗಳನು
ಧರಿಸಿ ವೋಡಿಸು ಶತ್ರುಮಾಯ 1
ಕಾಶೀಶ ಕಳುಹಿಸಿದ
ಪೈಶಾಚ ದಕ್ಷಿಣಾಗ್ನಿಯನು
ದೋಷವೆಣಿಸದ ಅಂಬರೀಷನಲಿ ಮುನಿದ ದು-
ರ್ವಾಸ ಮುನಿಕೃತ ಕೃತ್ರಿಮವನು
ನಾಶಗೈದಖಿಳಗುಣ ಭೂಷಣನೆ ನಿನಗೆನ್ನ
ಪೋಷಣೆಯು ಬಹು ಭಾರವೇನು 2
ಸರ್ವಶಕ್ತಿಯೆ ನಿನಗೆದುರ್ವಾದ್ಯವುಂಟೆ ಗುರು
ಶರ್ವ ಸುರನಾಥ ಮುಖವಂದ್ಯ
ಗೀರ್ವಾಣ ಪಕ್ಷಜನ ನಿರ್ವಹಿಸಿ ನೀನೆ ಯೆನ-
ಗಿರ್ವೆ ಗತಿಯಾಗಿ ಸುರವಂದ್ಯ
ಬರ್ವ ದುರಿತಗಳ ಮಹದೂರ್ವಣೆಗೆ ಪುಡಿಗೈದು
ಗರ್ವಿ ವೈರಿಗಳ ಸದೆ ಬಡಿದು
ಪೂರ್ವದಿಂದಲಿ ಸೇವೆ ಸ್ವೀಕರಿಸು ಸರ್ಪವರ
ಪರ್ವತೇಶನೆ ಬೇಗ ಒಲಿದು 3