(ಮಹಿಷಿ ಅಶ್ವತ್ಥನಾರಾಯಣ ದೇವರು)
ತಪ್ಪಾ ಕ್ಷಮಿಸು ಕಲ್ಪತರುರೂಪ ತವಪಾದ-
ಕೊಪ್ಪಿಸಿದೆನು ಯೆನ್ನನು
ಅಪ್ಪಳಿಸಖಿಳಾಂತರಾಯವತಿದಯದಿ ತಿ-
ಮ್ಮಪ್ಪರಾಜನೆ ನೀನೆಂದರಿತು ಬಂದಿರುವೆನು ಪ.
ಮಂಗಲ ಮಹಿಮೆ ಮಾತಂಗ ವರದ ಶುಭ
ತುಂಗಾತೀರದಿ ನಿಂದು ತಾರಕನೆಂದು
ಭವ ಭಯ
ಭಂಗದ ಮಹಿಮನೆಂದರಿತು ಬಂದಿಹೆನಿಂದು
ಅಂಗದಾದಿ ದೇವೇಂದ್ರ ಸಂಸ್ತುತ
ತುಂಗಬಲ ಹನುಮತ್ಪ್ರತಿಷ್ಠಿತ
ಅಂಗುಟಾಗ್ರದೊಳಖಿಳಪಾವನ
ಗಂಗೆಯನು ಪಡದಾದಿ ಪುರುಷ 1
ಪಾವಕ ದಿಋಖ(?) ದೇವ ಸತ್ಸುಖಗಣ
ಭಾವನ ಭಜಕೇಷ್ಟಸಿದ್ಧಿದನೇ
ಮಾವನ ಮಗನೊಳಗುಸುರಿದ ನುಡಿಯನು
ಕಾವೆನಿಂದಿರುವಿಲ್ಲಿ ಕರುಣಾವಾರಿಧಿ ಕೃಷ್ಣಾ
ಈ ವಸುಂಧರೆಯಲ್ಲಿ ಘಟಿಸುವ
ನೋವುಗಳ ಸಂಬಂಧಗೊಳಿಸದೆ
ಶ್ರೀವನಿತೆಯೊಡಗೂಡಿ ನಿನ್ನ ಕ-
ರಾವಲಂಬನವಿತ್ತು ಕರುಣಿಸು 2
ತ್ರಿವಿಧ ತಾಪಗಳು ಭರಿಸಲಾರದೆ ವಂದು
ನೆವನದಿಂದಲಿ ಬಂದು ನುಡಿದೆನಿಂದು
ಪವಮಾನವಂದಿತ ಪತಿತ ಪಾವನನೆ ನೀ-
ವಹಿಸಿ ರಕ್ಷಿಪುದೆಂದು ಒರೆವೆನು ಗುಣಸಿಂಧು
ವಿರಿಂಚಿ ರಮಾ ವರಪ್ರದ
ಭಾರ ನಿನ್ನಲಿರಿಸಿದವನನು
ತವಕದಲಿ ಕಾಪಾಡು ವೆಂಕಟ
ಮಹಿಷಿ ಕ್ಷೇತ್ರ ಪಾಲನ3