ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಆರು ರಾಗ:ನಾಟಿ ಝಂಪೆತಾಳ ಅಘಟ್ಯಘಟಿನಾಟ್ವೀ ಪುಲಿಂದಾ ಶ್ರೀಪತೇಸ್ತನುಃ ನೃಪಜಾಸ್ಮರಪೀಡಾಂ ತಾಂ ಕಥಯಂತೀ ಹರೇದಘಮ್ ನಿತ್ಯ ಸಂತೋಷ ಜಯತು ಜಯ ಲಕ್ಷ್ಮೀಶಾ ವೆಂಕಟೇಶಾ 1 ಪದ್ಮಜಾಕೃತಯಾತ್ರೆ ಪ್ರದ್ಮವಿಕಸಿತ ನೇತ್ರಾ ಪ್ರದ್ಮಾಜಾಸನ ಮುಖ್ಯ ಪದ್ಮನಾಭಾಖ್ಯ 2 ಗುರ್ವನುಗ್ರಹ ಗಮ್ಯ ಗುರುಗುಣಾರ್ಣವಸೌಮ್ಯ ಗುರ್ವನಂತಾದ್ರೀಶ ಗುರುಸುಪ್ರಕಾಶ3 ವಚನ ಪುರುಷನ ಪಾದ ನಿತ್ಯ ಮರೆಯದಲೆ ಮನದಲ್ಲಿ ಕರವ ವರಬುದ್ಧಿಯಲಿ ಎನ್ನ ಶಿರಮೆಟ್ಟಿ ಕರಮುಗಿದು ಕೊರವಂಜಿ ಕಥೆಯ 1 ಮುನ್ನಾಗಿ ನಾರೀಕುಲ ತನ್ನ ಕಾರ್ಯಕೆ ಕಳುಹಿ ಎನ್ನ ಕಾರ್ಯಕೆ ಅನ್ಯ ತನ್ನ ಕಾರ್ಯವು ಮತ್ತೆ ಮಾಡುವರಲ್ಲ ಚನ್ನವಾಗಿ2 ಉಬ್ಬುಬ್ಬಿ ವನಿತೆಯರು ಈ ರೀತಿ ಅವಲಂಬಿ ಗಂಭೀರಕೊರವಿ ಮುಖ ಬಾಯ್ವಳಗ್ಹಲ್ಲು ಎಂಬುವದು ಒಂದಿಲ್ಲ ಲಂಭಕರ್ಣಗಳಿಹವು ಲಂಭಕುಚಗಳು ಮತ್ತ ಲಂಬೋದರಿ ಯೆನಿಸಿಕೊಂಬುವಳು ತಾನು 3 ಜಡೆಗಳ ಧರಿಸಿ ಧೀರ ಮಾಡಿ ಸಾರ ಚಾರುನವಧಾನ್ಯಗಳ ಪೂರ ಚಾರು ತಿಲಕವನಿಟ್ಟು ಹಾರ ಗೀರುಕಂಕಣ ಕೈಗೆ ಚಾರು ತಾ ಐವತ್ತು ಪೂರ ವಯದವಳಾಗಿ ತೋರುತಿಹಳು4 ಮಣಿ ಮಾಲೆಗಳ ಧರಿಸಿ ಮಣಿ ಮೇಲೆ ಕರ್ಪೂರ ಮಣಿಯು ಮೇಲೆ ಸಾಲ್ಹಿಡಿದು ವಿವಿಧಮಣಿ ಬಾಲಕನ ಉಡಿಯಲ್ಲಿ ಕೋಲು ಕೈಯಲಿ ಪಿಡಿದು ನಡೆದಳಾಗ 5 ರಾಗ:ಶ್ರೀರಾಗ ಆದಿತಾಳ ಗಿರಿಯಿಂದಲಿ ನಾರಾಯಣ ಪುರಕೆ ಬಂದಳು ಪುರದ ಬಾಗಿಲುಗಳನ್ನೆಲ್ಲ ತ್ವರದಿ ದಾಟಿದಳು ತಿರವಿದ ಸೆರಗು ತಿರುಗಿ ಹೊದೆಯುತಲೆ ತಿರುಗಾಡುತ ಬಂದಳು ತಿರುಕೊಂಬುವರಂತೆ ಮನೆ ಮನೆ ಬಾಗಿಲನು ಮೆಟ್ಟುತಿಹಳು ಮನಸಿಗೆ ಬಂದ್ಹಾಂಗೆ ಧ್ವನಿಮಾಡುತಿಹಳು ಮನಗೊಟ್ಟು ಕೇಳಿರಿ ಎನ್ನ ತಾಯಿಗಳಿರಾ ಮನದ ಮಾತುಗಳ್ಹೇಳುವೆ ಮನೆಯವ್ವಗಳಿರಾ 1 ಹಿಂದಾದದ್ದು ಹೇಳೇನು ಇಂದಾದದ್ದು ಮತ್ತೆ ಚಂದಾಗಿ ಪೇಳೇನು ಮುಂದಾಗುವದೆಲ್ಲಾ ಹಿಂದಕ್ಕೆ ನಾ ಬಹಳ ಮಂದಿಗ್ಹೇಳಿದೆನು ಒಂದೂ ಸುಳ್ಳಾಗಿಲ್ಲ ಸಂದೇಹವಿಲ್ಲ 2 ಸಾಮಭೇದವ ಬಲ್ಲೆ ಸಾಮುದ್ರಿಕಿ ಬಲ್ಲೆ ಹೈಮಾದಿ ಜ್ವರಕೌಷಧ ನಾ ಮಾಡಲು ಬಲ್ಲೆ ಕಾಮಿನಿಯರಿಗಾದ ಕಾಮಜ್ವರ ಬಲ್ಲೆ ಕೌಮಾರಿಗಳಿಗಂತು ನಾ ಮುಂಚೆ ಬಲ್ಲೆ 4 ಭೂತ ಬಿಡಿಸಲು ಬಲ್ಲೆ ಬೇತಾಳವ ಬಲ್ಲೆ ಮಾತಾಡದ ಮೂಕರನು ಮಾತಾಡಿಸಬಲ್ಲೆ ನೀತಿನುಡಿಗಳ ಬಲ್ಲೆ ಜ್ಯೋತಿಷ್ಯವ ಬಲ್ಲೆ ಕೂತು ಕೇಳಿದರೆಲ್ಲ ಮಾತ್ಹೇಳಲು ಬಲ್ಲೆ5 ಹಸನಾಗಿ ಪೇಳುವೆ ಕುಶಲಾದವಾಣಿ ಹುಸಿಯಲ್ಲವಿದು ಎನ್ನ ಹಸುಗೂಸಿನಾಣಿ ಅಸು ಹೋದರು ನಾನಲ್ಲ ಹುಸಿಯಾಡುವ ಕೊರವಿ ವಸುಧೆಯೊಳಗೆ ನಾ ಹೆಸರಾದ ಕೊರವಿ6 ನರನಾರಾಯಣಲಿ ಇರುವಂಥ ಕೊರವಿ ವರನಂತಾದ್ರೀಶನ ನೆರವುಳ್ಳ ಕೊರವಿ ಕೊರವಿ ಮಾತನು ಕೇಳಿ ಪುರದ ನಾರಿಯರು ಅರಸನ ರಾಣಿಗೆ ತ್ವರದಿ ಪೇಳಿದರು7 ರಾಗ:ಪೂರ್ವಿರಾಗ ಭಿಲಂದಿ ತಾಳ ಬಂದಳಮ್ಮ ಇಲ್ಲೆ ಜನರು ನೆರೆದು ಬಹಳ ಆತುರ ಪಟ್ಟು ಕೇಳುತಿಹರÀುಪ ಮಾತನಾಡುತಿಹಳು ಮುದದಿ ಕೇಳಿ ದ್ಹೇಳುವಳು ಮುದಕಿಯಾಗಿ ತೋರುತಿಹಳು 1 ತನ್ನ ಮಕ್ಕಳಾಣೆ ಕೊಡುತಿಹಳು 2 ನರನಾರಾಯಣರು ಎಲ್ಲಿ ಇವರೊ ಅಲ್ಲೆ ಇರುವಳಂತೆ ವರದನಂತಾದ್ರೀಶ ಕೊಟ್ಟ ವರವುಳ್ಳ ಕೊರವಿಯಂತೆ 3 ರಾಗ:ಕನ್ನಡ ಕಾಂಬೋದಿ ಅಟತಾಳ ಬೇಗ ಅರಸನ ಪಟ್ಟದ ರಾಣಿ ಪನ್ನಗವೇಣಿ 1 ತಿರುಗಿ ಬಂದರು ಮತ್ತಲ್ಲೆ ಕೊರವಿ ಇದ್ದಲ್ಲೆ 2 ಎಂದು ಕರೆದರು ಕಯ್ಯ ಬೀಸುತ ಕಣ್ಣುತಿರುವುತ 3 ನುಡಿದಾಳೀಪರಿ ವಾಣಿ ಮಾತಿನ ಜಾಣೆ 4 ಆಕೆ ಸೌಭಾಗ್ಯದ ಒಡವಿ ಹುಟ್ಟನಾ ಬಡವಿ 5 ನೋಡಿ ಎನ್ನ ಒಡವೆಯ ನೋಡಿರಿ ಮಾತನಾಡಿರಿ 6 ಎನ್ನ ಕರಿದಾಳೆಂಬುವದು ಅಪಹ್ಯಾಸವಿದು 7 ನಕ್ಕು ಮಾತಾಡುವಿರಾ ಬಂಡು ಮುದಕಿಯ ಕಂಡು 8 ಅಂಜಿ ಮಾತಾಡಿದರಾಗ ವಿನಯದಿ ಬೇಗ9 ಒಮ್ಮೆಗಾದರುದಕ್ಕೀತೆ ಆಡೋದು ರೀತೆ10 ಬಂದು ನಡೆದಳು ಮುಂದೆ ಆನಂದದಿಂದ11 ಅರಮನೆಗೆ ಬಾಗಿಲೊಳಗೆ ಅಂಗಳದೊಳಗೆ 12 ಕೋಲುಕೋಲೆಂದು ಪಾಡುವಳು ಮಾಯಾತೋರುವಳು 13 ರಾಗ:ಶಂಕರಾಭರಣ ಆದಿತಾಳ ಕೋಲೆನ್ನ ಕೋಲು ಲೀಲೆಕೊಂಡಾಡುತಲಿ ಪ ಭರದಿಂದೊದೆಯುತಿರೆ ತಿರುಗಿ ಕಾಲ್ಹಿಡಕೊಂಡು ಪರಿಪರಿಸ್ತುತಿಸಿದಾ 1 ನೋಡಿ ಸಹಿಸದೆ ಕೊಲ್ಲಾಪುರಕೆ ನಡೆದಳು 2 ಹರಿ ವೈಕುಂಠದಿಂ ಧರೆಗಿಳಿದನು 3 ಹುತ್ತಮನೆಯ ಮಾಡಿ ಗುಪ್ತದಲ್ಲಿರುತಿಹ4 ನೆತ್ತಿಯ ಒಡಕೊಂಡು ಭಕ್ತನ ಸಲುಹಿದೆ 5 ಗುರುವಕರೆದ ಅವನಿಂದ ತಲೆ ಗಾಯವ ಕಳೆದನು 6 ತಾ ಬೇಡಿ ಸ್ವಾಮಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಏನು ಹೇಳಲಿ ಕೂಸಿನ ಚರ್ಯಮಾನಿನಿ ಉಳಿದದ್ದ ಆಶ್ಚರ್ಯ ಪ ಪುಟ್ಟಿದೇಳನೆಯ ದಿನವೆ ಬಾಲಗ್ರಹ ಬಂದುಎಷ್ಟು ಕಾಡಿದಳು ನಮ್ಮಪ್ಪನಸೃಷ್ಟಿಪಾಲಕ ಸಿರಿವಿಷ್ಣು ದಯದಿಂದಕಷ್ಟ ಕಳೆದು ನಮ್ಮ ಕೂಸು ಉಳಿದಿತೇ 1 ಒಂದು ಮಾಸದ ಕೂಸು ಅಂದು ಬಂಡಿಯ ಕೆಳಗೆಹೊಂದಿಸಿ ಮಲಗಿಸಿದ್ದೆನೇ ನಾನುಅಂದು ಹಸಿದು ಮುಖದಿಂದ ಬೆರಳನೆ ಚೀಪಿಬಂಧ ಕಳೆದು ಹೀಂಗೆ ಬದುಕಿತೇ 2 ದುಷ್ಟತನವು ಬಹಳ ಎಂದು ಒರಳಿಗೆಕಟ್ಟಿಹಾಕಿದೆ ಇವನ ಒಂದಿನಾಬೆಟ್ಟದಂತೆರಡು ಮರಗಳು ಬೀಳಲು ಮಧ್ಯ ಪುಟ್ಟ ನಮ್ಮಪ್ಪ ಹ್ಯಾಂಗೆ ಬದುಕಿತೆ 3 ಅಂಗಳದೊಳಗೆ ಆಡುತ ಕುಳಿತಿದ್ದ ಕೂಸಿನಾ-ಮಂಗಳಾ ಘಾಳಿ ಬಂದೊಯಿತೆಅಂಗನೇರೆಲ್ಲರೂ ಅಳುತ ಕೂತೇವಲ್ಲೆ ನರ-ಸಿಂಗನಾ ಕರುಣದಿಂದುಳಿದಿತೆ 4 ನೀರು ಕುಡಿದು ಯಮುನೆ ಮೇಲೆ ಆಡಲು ಕೂಸುಘೋರ ಪಕ್ಷಿಯು ಬಂದು ನುಂಗಿತೆಪೋರರೆಲ್ಲರು ನೋಡಿ ಗಾಬರಿಯಾಗಲು ಮತ್ತೆಕಾರಿತವನ ಬಕ ಸೋಜಿಗವೆ 5 ಕತ್ತೆಗಳನು ಕೊಂದು ತಾಳಫಲವು ಗೋಪ-ಪುತ್ರರಿಗೆ ಉಣ್ಣ ಕೊಟ್ಟಿಹನಂತೆಚಿತ್ರಚರಿತನ ನಂದಬಾಲನ ಚರಿತೆ ಏಕಾವೃತದಿಂದಲಿ ಪೇಳಲಳವೇನೆ 6 ಕರುಗಳ ಕಾಯುತಿರಲು ವತ್ಸವೇಷದಿದುರುಳನೊಬ್ಬನು ಬಂದಿಹನಂತೆಅರಿಯದಾ ಕೂಸಿನಾ ಕಾಲ್ಪಿಡಿದುಬೆರಳ ಮರದ ಮೇಲಕ್ಕೆ ತೂರಿದನಂತೆ 7 ಏಳೇ ವರ್ಷದವ ಕೇಳೆ ಗೋವರ್ಧನಏಳು ದಿವಸ ಎತ್ತಿದನಂತೆಬಾಳುವ ಗೋಪಿಯರ ಪಾಲನೆ ಮಾಡಿದನೀಲವರ್ಣನ ಎಷ್ಟು ವರ್ಣಿಸಲೆ 8 ಬಾಲನಾದರು ನಿನ್ನ ಹಾಳು ದೈತ್ಯನ ಕೊಂದು ಬ-ಹಳ ಕುತ್ತುಗಳಿವೆ ಕೇಳಿದೇನೆಬಾಲಕರಿಬ್ಬರು ಲೋಲರಿಬ್ಬರು ನಮ್ಮ ಬಾಲಕರೇನೇ ಸ್ವರ್ಗಪಾಲನು ಇಳೆಯೊಳು ಉದಯಿಸಿದನೇ 9 ಮಂದಗಮನೆ ಎನ್ನ ಕಂದನಾಟಗಳನ್ನುಮಂದಿಯ ದೃಷ್ಟಿಯ ಭಯದಿಂದ ನಾನುಒಂದೂ ಹೇಳದೆ ಹೀಗಾನಂದ ಬಡುವೆನು ನಾನುಚಂದ್ರವದನೆ ರೋಹಿಣಿ ಕೇಳೆ 10 ಗೋಪಿ ಸುಖಿಸುತಿಹಳು 11
--------------
ಇಂದಿರೇಶರು
ಬರತಾರಂತ್ಹೇಳೆ ಬಾಲೆಕರೆಯಲು ಬಾಯಿಮಾತಿನಲೆಬರತಾರಂತ್ಹೇಳೆ ಪ. ರಂಗನ ಪಾದಕಮಲ ಭೃಂಗಳೆ ದ್ರೌಪದಿಮಂಗಳಾದೇವಿ ರುಕ್ಮಿಣಿ ಸಖಿಯೆಮಂಗಳಾದೇವಿ ರುಕ್ಮಿಣಿ ಕರೆಯಲು ಅಂಗಳದೊಳಗೆ ಬರುತಾಳೆ ಸಖಿಯೆ 1 ಇಂದಿರೇಶನೆಂಬೊ ಚಂದ್ರಗೆಚಕೋರ ಕುಂದದಂಥವಳ ಸುಭದ್ರಾ ಸಖಿಯೆಕುಂದದಂಥವಳೆ ಸುಭದ್ರೆ ಕರೆಯಲೆ ಬಂದಳು ಭಾಮೆ ಎದುರಲಿ ಸಖಿಯೆ 2 ನಗ ಧರನ ಮುಖವೆಂಬೊ ಮುಗಿಲಿಗೆನವಿಲಸುಗಣಿರೈವರ ಮಡದಿಯರುಸುಗುಣರೈವರ ಮಡದಿಯರು ಕರೆಯಲುಮೂರ್ಜಗದ ಮೋಹನೆಯರು ಬರ್ತಾರೆ ಸಖಿಯೆ3 ಹರಿಯಾಗ್ರಜ ತನ್ನ ಹಿರಿಯರ ಕೂಡಿಕೊಂಡುಬರುವನು ಪರಮ ಹರುಷದಿ ಸಖಿಯೆಬರುವನು ಪರಮ ಹರುಷದಿ ಈ ಮಾತುದೊರೆಗಳಿಗೆ ಹೇಳೆ ವಿನಯದಿ ಸಖಿಯೆ4 ಎಲ್ಲರೂ ಮುತ್ತುರತ್ನ ಝಲ್ಲಿ ವಸ್ತ್ರಗಳಿಟ್ಟುಚಲುವ ಪ್ರದ್ಯುಮ್ನನ ಒಡಗೂಡಿ ಸಖಿಯೆಚಲುವ ಪ್ರದ್ಯುಮ್ನನ ಒಡಗೂಡಿ ಐವರಿಗೆ ಮಲ್ಲಿಗೆ ತೂರಾಡಿ ಕರೆಯಲಿ ಸಖಿಯೆ5 ಅಷ್ಟೂರು ಬಗೆಬಗೆ ಪಟ್ಟಾವಳಿಯನುಟ್ಟುಧಿಟ್ಟ ಸಾಂಬನ ಒಡಗೂಡಿಧಿಟ್ಟ ಸಾಂಬನ ಒಡಗೂಡಿ ಐವರಿಗೆ ಬುಕ್ಕಿಟ್ಟು ತೊರ್ಯಾಡಿ ಕರೆಯಲಿ ಸಖಿಯೆ6 ಮಾನಿನಿ ಮಾನಿನಿ ಸಹಿತಾಗಿ ರಮಿಅರಸುಮಾನದಲಿ ಐವರನ ಕರೆಸುವ ಸಖಿಯೆ7
--------------
ಗಲಗಲಿಅವ್ವನವರು
ಬಾಲಕೃಷ್ಣ ಇಂದುವದನೆ ಎನ್ನ ಕಂದನ ನೋಡೆ ಪ ಮಂದಿರದೊಳಗೆಷ್ಟು ಚಂದದಿಂದಾಡುವನೆ ಅ.ಪ ದೃಷ್ಟಿ ಮಾಲೆಯ ಕಟ್ಟಿಪೆ ಕೊರಳೊಳುದೃಷ್ಟಿ ಆಗುವುದಲ್ಲೆ ಪುಟ್ಟ ನಮ್ಮಪ್ಪನಿಗೆ 1 ನಗುವನು ಬೆಳದಿಂಗಳ ಹಗಲೆ ಬಂದಿಹುದೇನೆನಗುತ ನಿಂತಿರುವ ಸುಗುಣವಂತನ್ನ ಎನ್ನಬಗಲೊಳಗೆತ್ತಿಕೊಂಬುವೆನೆ 2 ದಧಿ ಪೇಯ ಪಿಡಿಯನು ಒಂದಿ£ 3 ಅಂಗಿ ಕುಂಚಿಗಿ ಹಾಕಿ ಶೃಂಗರಿಸುವೆನುಅಂಗಳದೊಳಗೆಷ್ಟು ಮಂಗಳ ತೋರುವನೆ 4 ಕೂಸಿನಿಂದಲೆ ಗೋಷ್ಟ ಭೂಷಿತವಾಗಿದೆಸಂತೋಷಿಸುತ ಇಂದಿರೇಶನು ನಲಿವನು 5
--------------
ಇಂದಿರೇಶರು
ಹೊರಗ್ಹೋಗಿ ಆಡಬೇಡವೋ ಕಂದಾ ಮಹಾನಂದಾ ಬಹುಸರಸಿಜಾಕ್ಷಿಯರು ದೂರುವರೋ ಗೋವಿಂದಾ ಬಾ ಮನೆಗೆ ಮುಕುಂದಾ ಪ ಹೆಂಗಸ ಕೊಂದನೆಂಬುವರು ಮನೆ ಅಂಗಳದೊಳಗೆ ಬಚ್ಚಿಟ್ಟು ಕೊಂಬುವರೋಶೃಂಗಾರದಲಿ ಮೋಹಿಸುವರೋ ತಮ್ಮ ಕಂಗಳಿಂದಲಿನೋಡಿ ದೃಷ್ಟಿ ಬಿಡುವರೋ1 ಕಳ್ಳತನವ ಕಲಿಸುವರೋ ಏನ ಬಲ್ಲೆ ಕಂದಮ್ಮ ನೀ ಸುಳ್ಳಕಲಿಸುವರೋಒಳ್ಳೆಯವರಲ್ಲ ಗೋಪಿಯರು ಗ್ರಾಮದಲೆ ನಿಲ್ಲಲು ಕೆಟ್ಟ ಸೊಲ್ಲನಾಡುವರೋ2 ಸುಂದರ ಸೌಭಾಗ್ಯನಿಧಿಯೇ ನಿನ್ನಒಂದು ಕ್ಷಣವು ಬಿಟ್ಟು ಇರಲಾರೆ ಹರಿಯೇ ಇಂದಿರೇಶನಸುರ ದೊರೆಯೇ 3
--------------
ಇಂದಿರೇಶರು
ಕಲ್ಯಾಣಂ ತುಳಸೀ ಕಲ್ಯಾಣಂ ಪಕಲ್ಯಾಣವು ನಮ್ಮ ಕೃಷ್ಣ ಶ್ರೀ ತುಳಸಿಗೆ |ಬಲ್ಲಿದಶ್ರೀವಾಸುದೇವನಿಗೆಅ.ಪಅಂಗಳದೊಳಗೆಲ್ಲ ತುಳಸೀವನವ ಮಾಡಿ |ಶೃಂಗಾರವ ಮಾಡೆ ಶೀಘ್ರದಿಂದ ||ಕಂಗಳ ಪಾಪವ ಪರಿಹರಿಸುವ ಮುದ್ದು |ರಂಗಬಂದಲ್ಲಿ ನೆಲಸಿಹನು 1ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು |ತಂದ ಶ್ರೀಗಂಧಾಕ್ಷತೆಗಳಿಂದ ||ಸಿಂಧುಶಯನನ ವೃಂದಾವನದಲಿ ಪೂಜಿಸೆ |ಕುಂದದ ಭಾಗ್ಯ ಕೊಡುತಿಹಳು 2ಉತ್ಥಾನ ದ್ವಾದಶಿದಿವಸದಲ್ಲಿ ಕೃಷ್ಣ-|ಉತ್ತಮ ತುಲಸಿಗೆ ವಿವಾಹವ ||ಚಿತ್ತ ನಿರ್ಮಲರಾಗಿ ಮಾಡಿದವರಿಗೆ |ಉತ್ತಮ ಗತಿ¬ೂವ ಪುರಂದರವಿಠಲ 3
--------------
ಪುರಂದರದಾಸರು