ಒಟ್ಟು 2968 ಕಡೆಗಳಲ್ಲಿ , 112 ದಾಸರು , 1882 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿಜಾನಕೀಪತಿ ವಿಠಲ ನೀನಿವನ ಕಾಯೋಗರುಡ ಶೇಷಾದಿ ಮನೋ ಮಾನಿ ಪ್ರೇರಕನೆ ಹರಿಯೇ ಪ ಮಂದ ಜನರುದ್ಧಾರಿ | ತಂದೆ ಮುದ್ದು ಮೋಹನ್ನನಂದನರ ದ್ವಾರದಿಂ | ಪೊಂದಿ ಅಂಕಿತವಾ |ಅಂದ ಸತ್ಸಾಧನವ | ಮುಂದುವರಿಪಲಿಕಾಂಕ್ಷೆಯಿಂದ ಸತ್ಕಾರ್ಯ ಪ್ರತಿ | ಬಂಧ ಪರಿಹರಿಸೋ 1 ಪಾದ | ವನಜ ಆಶ್ರಿತಗೇ 2 ಭಾವಜಾರಿಯ ಮಿತ್ರ | ಭಾವುಕರ ಪರಿಪಾಲಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ |ಪಾವಮಾನಿಯ ಪ್ರೀಯ | ನೀವೊಲಿದು ಭಕ್ತನ್ನತೀವರುದ್ಧರಿಸೆಂದು | ದೇವ ಭಿನ್ನವಿಪೇ3
--------------
ಗುರುಗೋವಿಂದವಿಠಲರು
ಸಿರಿಯನನುರಾಗದಿ ಭಜಿಸುವೆನು 1 ಕ್ಷೀರಸಾಗರಾತ್ಮಜೆಯರಸ ಕೃಪಾವಾರಿಧಿ ಸರ್ವೇಶ | ಅ ಪಾರಗುಣಾರ್ಣವ ಜಗದೀಶ ಬೆಂಬಿಡದಿರು ಶ್ರೀಶಾ 2 ಸದಾ ಸದ್ಭಕ್ತ ಜನಪ್ರೇಮಿ ವಿನುತ ನಂಬಿದವನೆ ನಿಷ್ಕಾಮಿ 3 ಪ್ರಪಂಚಕು ಟುಂಬಿ ಸದಾನಂದ 4 ದುರ್ವಿಷಯ ಸುಟ್ಟು ನಿನ್ನ ಚಿಂತೆ ಮನಕೆ ಕೊಟ್ಟು 5 ಸಂಜೀವ 6 ದುರ್ಜನರ ಬಿಟ್ಟೆ ದೈತ್ಯರನ್ನು ಪರ ಮೇಷ್ಠಿ ಪೊಗಳುತಿಹನು ಎನ್ನಳವೆ ಶಿಷ್ಟರ ದೊರೆ ನೀನು 7 ಭೂಮಿಯನೆ ತ್ತಿದೆ ಕೋರೆದಾಡೆಯಲಿ ಸಾಕಾಗದೆ ನಿರುತವು ಭಜಿಸುವ ಶಶಿ ಶೇಖರ ಮೋದದಲಿಎಂದುಸು ರುತಲಿದೆ ವೇದದಲಿ 8 ಕಂಬದೊಳವÀ ತರಿಸಿದೆ ಮೋದದೊಳು ಮನಸರು ಭಲಾ ಎನಲು 9 ಬಲಿಯಯಾಗ ಮಂಟಪಕ್ಕೆ ಪೋಗಿ ಯೋಗಿ 10 ಸಮುದ್ರ ವನ್ನೊತ್ತಿದೆ ಜಗಜಟ್ಟಿ ನಾಚರಿಸಲು ಮನವಿಟ್ಟಿ 11 ಸತಿ ಸತ್ಕೀರ್ತಿಯ ಪಡೆದು ಜಗದಿ ಮೆರೆದೆ 12 ಮೆರೆದೆ ಕೌರವರ ಭೀಮನಿಂ ಕೊಲ್ಲಿಸಿದೆ 13 ಜನಾದ್ಯರ ಗೆದ್ದು ಸುಮನಸಾಳಿ ಯರಸಂ ಹರಿಸಿದನಾ ಶೂಲಿ 14 ಕೃತಯುಗದ ಧರ್ಮ ನಡೆಸಿದೆಯ್ಯಾ ಎನ್ನ ಪಾಲಿಸಯ್ಯ ಜೀಯಾ 15 ಜನರುನೆನೆಯಲು ತಾ ಇಷ್ಟಾರ್ಥವ ಪಡೆವರು ಸದಾ ತನ್ನ ಸಂತರೊಳಗಿಡುವನು16 ಸುಜನ ಕಾಮಿತದಾಯಕ ರಕ್ಷ ಕೋಮಲಾಂಗ ನೂತನ ಪುರಿ ಮಂದಿರ ಕುಜನನಿಕರ ಶಿಕ್ಷಾ | ವರದ ರಾಜನಿಖಿಲ ಸಂರಕ್ಷಾ 17
--------------
ಗುರುರಾಮವಿಠಲ
ಸಿರಿವರನ ಕರುಣಕ್ಕೆ ಪಾತ್ರ ನಾನಾದೆ ಪರಮ ಹರಿಭಕ್ತನಾಗಿ ಬಾಗಿ ಶರಣೆಂದು ಪ ಪರಿಪರಿಯಿಂದೊರೆದ ಕುಲಗುರುವಿನ ವಾಕ್ಯಗಳ ತರದೆ ತುಸು ಗಣಿತಕ್ಕೆ ಮರಣಭೀತಿಲ್ಲದೆ ಹರಿಸರ್ವೋತ್ತಮನೆಂಬ ವರಮಂತ್ರ ಪಠಿಸಿದ ಪರಮಪ್ರಹ್ಲಾದರಿಗೆ ನಿರುತ ಶರಣೆಂದು 1 ಪನ್ನಂಗಶಯನ ಉನ್ನತ ಮಹಿಮೆಗಳ ತನ್ನೊಳಗೆ ತಾ ತಿಳಿದು ಭಿನ್ನ ಭೇದವಿಲ್ಲದೆ ಗನ್ನಗತಕನಾದ ಅಣ್ಣನಿಗೆ ಮಹ ನೀತಿ ಯನ್ನು ಪೇಳಿದ ವಿಭೀಷಣಗಿನ್ನು ಶರಣೆಂದು 2 ವನಧಿಯನ್ನು ಲಂಘಿಸಿ ದನುಜಕುಲ ಸಂಹರಿಸಿ ವನಜನಾಭನ ಸೇವೆ ಮನುಮುಟ್ಟಿ ಗೈದು ಜನನಮರಣವ ಗೆಲಿದು ಘನಪದವಿ ಗಳಿಸಿದ ಹನುಮರಾಯರ ಪದಕೆ ಮಣಿದು ಶರಣೆಂದು 3 ತರಳತನದಲಿ ನಿಖಿಲ ಧರೆಭೋಗಗಳ ತೊರೆದು ಹರಿಮಂತ್ರ ಜಪಮಾಡಿ ಸ್ಥಿರಪದವ ಪಡೆದ ಪರಮಕಂಟಕ ಗೆಲಿದವರಿಗರಿತು ಶರಣೆಂದು 4 ನಿತ್ಯನಿರ್ಮಲ ನಿಖಿಲಕರ್ತ ಶ್ರೀರಾಮನಡಿ ಭಕ್ತರೆನಿಸಿದ ಮಹ ನಿತ್ಯಾತ್ಮರ ಸತ್ಯಪಾದಗಳೆನ್ನ ನೆತ್ತಿಯೊಳ್ಪೊತ್ತು ನಿಜ ಚಿತ್ತದಿಂ ನೆನೆನೆನೆದು ನಿತ್ಯಶರಣೆಂದು 5
--------------
ರಾಮದಾಸರು
ಸೀತಾಪತಿವಿಠಲ ದಾಸಳ ನಿರ್ಯಾಣ ಪದ ಮಾಧವನಾ ಪುರ ಸೇರಲು ಬೇಗ ಪ. ಪುಟ್ಟಿದಾರಭ್ಯದಿ ನಿಷ್ಟೆನೇಮದೊಳಿದ್ದು ಕಷ್ಟಪರಂಪರೆ ಸಹಿಸುತ ಜಗದಿ ಹರಿಯ ಕರುಣದಿ ಗುರುಕೃಪೆ ಪಡೆದಿ 1 ಹಿರಿಯೂರೆನ್ನುವ ಪುರ ವರ ವೇದಾವತಿ ತೀರ ಪರಮ ಸಾತ್ವಿಕರಲ್ಲಿ ಜನುಮ ತಳೆದಿ ತುಳಸಿಯ ವರದಿ ಮುದ್ದಿನಿಂ ಬೆಳೆದಿ 2 ಶಿಷ್ಟ ಸಂಪ್ರದಾಯ ಕಟ್ಟಿನೊಳಗೆ ನಿನ ಗಷ್ಟಮ ವರುಷದಿ ಮದುವೆಯ ಮಾಡಿ ಹರುಷವಗೂಡಿ ಹರಿಯ ಕೊಂಡಾಡಿ3 ಸತಿ ರುಕ್ಮಿಣೀಬಾಯಿ ಹೆಸರಿನಿಂ ಬಾಳ್ವೆಯ ಬಹು ಅಲ್ಪಕಾಲ ಕೊಟ್ಟನೆ ಸಿರಿಲೋಲ ಮುಸುಕಿತು ಮಾಯಜಾಲ 4 ಸಂಸಾರ ಕೈಕೊಂಡು ವಂಶಕೊಬ್ಬನ ಪಡೆದು ಕಂಸಾರಿ ಕರುಣದಿ ಇರುತಿರೆ ನೀನು ವಿಧಿ ತಂದೊಡ್ಡಿದನು 5 ಎರಡು ವರ್ಷದ ಮಗುವ ಕರದಲ್ಲಿ ಕೈಕೊಂಡು ಪರಿಪರಿ ಕಷ್ಟದಿ ಶಿಶುವ ಬೆಳೆಸಿದೆ ವಿದ್ಯೆ ಕಲಿಸಿದೆ ಪುತ್ರಗ್ಹರಸಿದೆ 6 ಒಬ್ಬ ಆ ಮಗನರ್ಥಿ ಸಂಸಾರವನೆ ಕಂಡು ಉಬ್ಬಿ ಹರುಷಾದಲ್ಲಿ ಇರುತಿರೆ ನೀನು ಮೊಮ್ಮಕ್ಕಳನು ಪಡೆದೆ ನಾಲ್ವರನು 7 ಘಟಿಸುತ ಸ್ವಪ್ನದಿ ಸೇವೆಗೈಯ್ಯೆಂದು ಅಭಯವನಂದು ಕೊಡಲು ದಯಸಿಂಧು 8 ಮರುದಿನ ಮನೆಯಲ್ಲೆ ಭರದಿ ಸೇವೆಯ ಕೊಂಡು ಹರಿವಾಯುಗಳನಿಟ್ಟು ಸುತ್ತುವರಿಯುತ್ತ ಎಡವಿ ಬೀಳುತ್ತ ಪ್ರದಕ್ಷಿಣೆ ಬರುತಾ 9 ಒಲಿದು ಆ ಭಕ್ತಿಗೆ ವರನೇತ್ರವಿತ್ತನು ನಳಿನನಾಭನ ಭಕ್ತ ಘಟಿಕಾಚಲನಿಲಯ ಭಾರತಿಪ್ರೀಯ ದಿವಿಜರ ಒಡೆಯ 10 ಭಕ್ತಿ ವಿರಕ್ತಿ ಜ್ಞಾನವು ಚಿತ್ತದಿ ಮೂಡಿ ಸೋತ್ತಮರಾದ ಶ್ರೀ ವಿಬುಧರ ದಯದಿ ಮೋಕ್ಷಸಾಧನದಿ ದಿನಗಳ ಕಳೆದಿ 11 ಶ್ರವಣ ಕೀರ್ತನ ಸ್ಮರಣೆ ಮನನಾದಿಗಳನೆಲ್ಲ ತವಕದಿ ಕೈಕೊಂಡು ಮೋದದಿ ಮೆರೆದಿ ಕಷ್ಟವ ಮೆರೆದಿ ಹರಿಗುರು ದಯದಿ 12 ಪ್ರಥಮ ಯಾಮದಲೆದ್ದು ಜಿತಮನದಿಂದ ಶ್ರೀ ಪತಿಯ ಸ್ತೋತ್ರಗಳನ್ನು ವದನದಿ ಸತತ ಪರಿಯಂತ 13 ಉಚ್ಛಸ್ವರದಿ ನೀನು ಪಾಡಿದ್ಹಾಡುಗಳಿಂದು ಅಚ್ಚಳಿಯದೆ ನಮ್ಮ ಸ್ಮರಣೆಯೊಳ್ನಿಂತು ಹರುಷವನಾಂತು ಮರೆಯುವುದೆಂತು 14 ವೃದ್ಧಾಪ್ಯ ತಲೆದೋರೆ ಇದ್ದೊಬ್ಬ ಪುತ್ರನು ಪದ್ಮನಾಭನ ಪುರ ಸೇರಿ ನಿನ್ನಗಲಿ ದುಃಖದಿ ಬಳಲಿ ತೊಳಲಿದೆ ಬಳಲಿ 15 ಪೌತ್ರರಿಬ್ಬರು ನಿನ್ನ ಹೆತ್ತಮ್ಮನಂದದಿ ಚಿತ್ತದಿ ತಿಳಿದಿನ್ನು ಸಲಹುತ್ತಿರಲು ಹರಿದಯ ಬರಲು ದುಃಖ ಮರೆಯಲು 16 ಕಲ್ಯಾಣನಗರದಿ ಕಿರಿಯ ಮೊಮ್ಮಗನಿರೆ ಆಹ್ಲಾದದಿಂದ ನೀನವನಲ್ಲಿ ಇರಲು ಸದ್ಗುರು ಬರಲು ಜ್ಞಾನವೆರೆಯಲು 17 ಹರಿದಾಸಕೂಟದ ವರ ಅಂಕಿತವ ಕೊಂಡು ಗುರುಕರುಣವ ಪೊಂದಿ ನೀ ನಮಗೆಲ್ಲ ಸನ್ಮಾರ್ಗಕ್ಕೆಲ್ಲ ಮೊದಲಾದೆಯಲ್ಲ 18 ಶ್ರೀ ತಂದೆ ಮುದ್ದುಮೋಹನದಾಸರ ದಯದಿ ಸೀತಾಪತಿವಿಠ್ಠಲನ್ನ ಒಲಿಸಿದೆ ಧ್ಯಾನದೋಳ್ತಂದೆ ಆನಂದಪಡೆದೆ 19 ಕಂಚಿ ಕಾಳಹಸ್ತಿ ಶ್ರೀ ರಂಗಯಾತ್ರೆಯ ಸಂಚಿಂತನೇಯಿಂದ ಗೈದೆಯೆ ನೀನು ಗಳಿಸಿದೆ ಇನ್ನು ಭಕುತಿಯ ಪೊನ್ನು 20 ಉಡುಪಿ ಮಂತ್ರಾಲಯ ಸೇತು ರಾಮೇಶ್ವರ ಕಡು ಭಕ್ತಿಯಲಿ ತಿರುಪತಿ ಕ್ಷೇತ್ರ ಚರಿಸಿ ಕಷ್ಟವ ಸಹಿಸಿ ಶ್ರೀ ಹರಿಗೆ ಅರ್ಪಿಸಿ 21 ಕಡುಕೃಪೆಯಿಂದಂದು ಕಣ್ಣನ್ನೆ ಕೊಟ್ಟಂತ ಮೃಡಪಿತ ಘಟಿಕಾಚಲೇಶನ್ನ ಕೂಡಿ ಕಣ್ತುಂಬ ನೋಡಿ ತನುವನೀಡಾಡಿ22 ಅಂತರಂಗದ ಬಿಂಬ ಸರ್ವಾಂತರ್ಯಾಮಿ ಎಂ ತೆಂಬಂಥ ಚಿಂತನೆ ಸಂತತಗೈದೆ ಅಭಿಮಾನ ತೊರೆದೆ ದ್ವಂದ್ವ ಸಹಿಸಿದೆ 23 ವ್ರತನೇಮ ಜಪತಪ ಸತತದಿಗೈಯ್ಯುತ್ತ ಕ್ಷಿತಿವಾರ್ತೆಗೆಳಸಾದೆ ಮನವನ್ನೆ ಸೆಳೆದು ಹರಿಪಾದಕ್ಕೆರದು ಹಿತವನ್ನೆ ಮರೆದು 24 ಭಾಗವತಾದಿ ಸಚ್ಛಾಶ್ತ್ರ ಶ್ರವಣಗೈದು ಜಾಗ್ರತಳಾದಿ ಭೂಸುರರ ಸೇವೆಯಲಿ ಸೂಕ್ಷ್ಮಧರ್ಮದಲಿ ಪುಣ್ಯಗಳಿಸುತಲಿ 25 ಸತತಬಿಂಬಕ್ರಿಯ ವ್ರತವಂದೆ ಕೈಕೊಂಡು ಜತನದಿ ಮರೆಯದೆ ಪ್ರತಿಕಾರ್ಯದಲ್ಲಿ ಅರ್ಪಿಸಿ ಹರಿಯಲ್ಲಿ ಇದ್ದೆ ಮೋದದಲಿ 26 ಮುಖ್ಯಪ್ರಾಣನ ದಯ ಮುಖ್ಯಮಾಡುತ ಇನ್ನು ಅಕ್ಕರೆ ಭಕ್ತಿಯ ತೋರಿದೆ ನೀನು ಬೆನ್ನು ಬಿಡದವನು ನಿನ್ನ ಸಲಹಿದನು 27 ಭಾರತಿಪತಿ ಮುಖ್ಯಪ್ರಾಣಾಂತರ್ಗತನೆಂಬ ವಾರುತಿ ಇಲ್ಲದ ವಚನವೆ ಇಲ್ಲಾ ನಿನ್ನ ಈ ಸೊಲ್ಲ ಮರೆಯಲೊಶವಲ್ಲ 28 ಶ್ರೀ ರಾಮಚಂದ್ರನ ಆರಾಧನೆಯಗೈದು ಸಾರತತ್ವವ ತಿಳಿದು ಸಾಧಿಸಿ ಪಥವ ಸಹಸ್ರಾರು ಜಪವ ಗೈದೆ ತಪವ 29 ನೀ ಹಾಡಿದ ಸ್ತೋತ್ರ ನಿನ್ನ ಸನ್ಮಾರ್ಗವ ನನ್ನೆಯಿಂದಲಿ ಎರೆದೆ ಹೆಣ್ಣು ಮಕ್ಕಳಿಗೆ ಸ್ಮರಿಸುವರೀಗೆ ಸತ್ಕೀರ್ತಿಯದಾಗೆ 30 ಹರಿ ಗುರು ವರತತ್ವ ದಿವಿಜರಭಿಮಾನಿಗಳ ನಿರುತದಿ ಚಿಂತಿಸಿ ಸಾಧನಗೈದೆ ಕಾಲವ ಕಳೆದೆ ಹರಿಪಾದಕ್ಕೆರೆದೆÀ 31 ಬಿಂಬಾನು ಸಂಧಾನ ಚತುರಳಾಗಿ ನೀನು ಸಂಭ್ರಮದಿಂದ ಶ್ರೀ ಮಧ್ವಶಾಸ್ತ್ರದಲಿ ಮನಸ ನೀಡುತಲಿ ಸುಖ ಸುರಿಯಲಿ 32 ಒದ್ದು ತಾಪತ್ರಯ ಸದ್ಗುರು ಕೃಪೆ ಪೊಂದಿ ಗೆದ್ದೆ ನೀ ಸುಲಭದಿ ಭವದ ಬಂಧನವ ಪಡೆದೆ ಹರಿ ದಯವ ಕೊಟ್ಟಿತೆ ಮುದವ 33 ಪೇಳಲೋಶವೆ ಹೇ ದಯಾಳು ನಿನ್ನಯ ಗುಣ ಬಾಳಿದೆ ಧರೆಯೊಳು ತೊಂಬತ್ತೈದೊರುಷ ವೃದ್ಧಾಪ್ಯದೋಷ ನಿನಗಿಲ್ಲ ಲೇಶ 34 ಇಂದ್ರಿಯಂಗಳು ಎಲ್ಲ ಒಂದು ಕುಗ್ಗದೆ ಒಬ್ಬ ರಿಂದಲು ಸೇವೆಯ ಕೊಳದೆ ಲವಲವಿಕೆ ಯಿಂದಿರುವ ಬಯಕೆ ಸಲಿಸೀತೆ ಮನಕೆ 35 ಕಿರಿಯ ಮೊಮ್ಮೊಗ ರಮಾಕಾಂತನಲ್ಲಿರುತಿರೆ ಕರೆಹೇಳಿ ಕಳುಹಿದ ಹರಿ ತನ್ನ ಪುರಕೆ ಕ್ಲಿಪ್ತಕಾಲಕ್ಕೆ ಆಗೆ ಮನವರಿಕೆ 36 ತೊರೆದೈದು ದಿನ ಅನ್ನ ಹರಿಧ್ಯಾನಂಗತಳಾಗಿ ವರ ಗಂಗೆ ವದನದಿ ಪ್ರಾಶನಗೈದು ಅಭಿಮಾನ ತೊರೆದು ಭ್ರಾಂತಿಯ ಮೆರೆದು 37 ವರಹಜೆ ತುಂಗ ತೀರದಿ ಪ್ರಾಣನಾಥನ ಚರಣಮೂಲದಿ ಶಿವಮೊಗ್ಗ ಕ್ಷೇತ್ರದಲಿ ಹರಿಸ್ಮರಣೆಯಲಿ ಪ್ರಾಣ ಸಲಿಸುತಲಿ 38 ಸ್ವಭಾನುವತ್ಸರ ಭಾದ್ರಪದ ಬಹುಳ ಇದ್ದ ದಶಮಿ ದಿನ ಗುರುವಾರದಲ್ಲಿ ಮಧ್ಯರಾತ್ರಿಯಲಿ ತನು ತೊರೆದಿಲ್ಲಿ 39 ಕೇಶವದೂತರು ಮೀಸಲಿಂದಲಿ ನಿನ್ನ ಘಾಸಿಗೊಳಿಸದೆ ಕರೆದೊಯ್ದರೇನಮ್ಮ ಪೇಳೆ ಎನ್ನಮ್ಮ ಎಲ್ಲಿ ಪೋದ್ಯಮ್ಮ 40 ಹೆತ್ತಮ್ಮಗಿಂತಲೂ ಹೆಚ್ಚಾಗಿ ನಮ್ಮನ್ನು ಅರ್ಥಿಯಿಂ ಬೆಳೆಸಿದೆ ಅಭಿಮಾನದಿಂದ ಅನುರಾಗದಿಂದ ಬಹುಮಾನದಿಂದ 41 ಮೊಮಕ್ಕಳೆಂದರೆ ಬಹು ಪ್ರೀತಿ ನಿನಗಲ್ಲೆ ಒಮ್ಮೆ ನಾಲ್ವರು ಬಂದು ಇರುವೆವು ನಾವು ಆಲ್ಪರಿಯುವೆವು ಅಗಲಿ ಸೈರಿಸೆವು 42 ಅರ್ಥಿಲಿ ರಮಾಕಾಂತ ವಿಠಲಾಂಕಿತ ಕೃಷ್ಣ ಮೂರ್ತಿಯು ಪುತ್ರಗಿಂತಧಿಕದಿ ನಿನ್ನ ಅಂತ್ಯಕ್ರಿಯವನ್ನ ಮಾಡಿದ ಧನ್ಯ 43 ಶ್ರದ್ಧೆಯಿಂದಗ್ರಜನಿಂದ ಕೂಡುತ ನಿನ್ನ ಶುದ್ಧಭಾವದಿಗೈದ ಅಂತ್ಯಸೇವೆಯನು ಸ್ವೀಕರಿಸಿ ನೀನು ಹರಸಿ ಹಿತವನ್ನು 44 ತಿಳಿದು ತಿಳಿಯದೆ ನಾನು ಗೈದಪರಾಧವ ನಲವಿಂದ ಕ್ಷಮಿಸಿ ನಮ್ಮನು ಮನ್ನಿಸಿದೆ ಸಹನವ ತಳದೆ ಬಹು ಪ್ರೀತಿಗೈದೆ 45 ಎಲ್ಲ ಪರಿಯಲಿ ನಮ್ಮ ಕ್ಷಮಿಸಿ ಕಾಪಾಡಮ್ಮ ಬಲ್ಲಿದಳು ನೀನು ಆಶೀರ್ವದಿಸುವುದು ಸುಖವ ತೋರುವುದು ಕೃಪೆಯ ಮಾಡುವುದು 46 ಅಂಜನೆಕಂದ ನಿನ್ನವನೆಂಬ ಅಭಿಮಾನ ರಂಜಿಸೆ ಸಹಜದಿ ನಿನ್ನೊಳು ಮಾತೆ ಜಗದಿ ವಿಖ್ಯಾತೆ ಹರಿಗತಿಪ್ರೀತೆ 47 ಪತಿಗುರು ಪವನ ಹೃದ್ಗತಮೂರ್ತಿ ಚಿಂತನ ರತಳೆ ನಿನ್ನಯ ಚರಿತೆ ಪೇಳ್ದೆ ತಿಳಿದನಿತು ತಪ್ಪನು ಮರೆತು ಲಾಲಿಸು ಮಾತು 48 ಗೋಪಾಲಕೃಷ್ಣವಿಠಲನ ಸದ್ಭಕ್ತಳೆ ಶ್ರೀ ಪಾದಕ್ಕೆರಗಿ ನಾ ಜಯವ ಪಾಡುವೆನು ಧನ್ಯಳೇ ನೀನು ಮಾನ್ಯಳೆ ನೀನು 49
--------------
ಅಂಬಾಬಾಯಿ
ಸೀತಾಮನೋಹರ ವಿಠಲಾ | ಕಾಪಾಡೊ ಇವಳಾ ಪ ಮಾತುಮಾತಿಗೆ ನಿನ್ನ | ಸ್ಮರಣೆ ಸುಖ ಕೊಟ್ಟು ಅ.ಪ. ಮಂಗಳಾಂಗನೇ ಹರಿಯೇ | ಶೃಂಗಾರ ಮೂರುತಿಯೇಭಂಗಗೈ ಅಜ್ಞಾನ | ಸತ್ಸಂಗವನೆ ಕೊಟ್ಟುಸ್ವಾಂಗಾಯ ನಾಮ | ನೀಲಾಂಗ ಶ್ರೀ ಹರಿಯೆಕಂಗಳಿಂದಲಿ ಕಾಂಬ | ಹವಣೆಯನು ತಿಳಿಸೋ 1 ತರತಮಾತ್ಮಕ ಜ್ಞಾನ | ಹರಿಗುರು ಸದ್ಭಕ್ತಿಮರುತ ಮತ ದೀಕ್ಷೆಯನು | ಕರುಣಿಸೋ ಹರಿಯೇದುರಿತಾಳಿ ದುಷ್ಕರ್ಮ | ಪರಿಹರಿಸಲೀವಳಿಗೆಪರಮ ಆನಂದವನೆ | ಕರುಣಿಸೊ ಹರಿಯೇ 2 ಪೇಳ್ವುದೆನಿಹುದೆನಗೆ | ಸರ್ವಜ್ಞ ನೀನಿರುವೆಭವದಿಂದ ಕಡೆಗಿತ್ತು | ಪವನಂತರಾತ್ಮಈ ವಿಧದಭಿನಿಪವ | ನೀವೊಲಿದು ಸಲಿಸೆಂದುದೇವ ಪ್ರಾರ್ಥಿಪೆ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಸೀತಾರಾಮ ಶ್ರೀರಘುರಾಮ ಕಾ ಕುತ್ಸ್ಥರಾಮ ಕರುಣಾಳು ರಾಮ ಪ ಉತ್ತಮ ಗುರುಗಳಿಗೆ ಭಕ್ತಿಯಿಂದಲೆ ಎರಗಿ ಭಕ್ತವತ್ಸಲನ ಚರಿತ್ರೆ ಪೇಳುವೆನು 1 ಆದಿಮೂರುತಿಮಹಿಮೆ ವೇದಂಗಳರಿಯದು ಎನ್ನ ಭೇದಬುದ್ಧಿಗೆ ಇದು ಬೋಧವಾಗುವುದೆ 2 ಪತಿತಪಾವನ ನಿಮ್ಮ ಸ್ತುತಿಯ ಮಾಡುವುದಕ್ಕೆ ಮತಿಯ ಪಾಲಿಸಿ ಸದ್ಗತಿಯ ಕೊಡೆನೆಗೆ 3 ಆದಿಸೃಷ್ಟಿಯಲಿ ಆದುದು ಈ ಆತ್ಮ ಬಾಧೆಯ ಪಡುತಿಹುದು ಭವರೋಗದಲಿ 4 ಜನನ ಮರಣವೆಂಬ ಜಾಡ್ಯವನು ಬಿಡಿಸಿ ನಿನ್ನ ಚರಣದೊಳಿರಿಸೆನ್ನ ಕರುಣವಾರಿಧಿಯೆ 5 ಹೃಷಿಕೇಶವ ಎನ್ನ ಹೃದಯದೊಳಗೆ ಇದ್ದು ವಿಷಯಕೆ ಎನ್ನನು ವಶವ ಮಾಡುವರೇ 6 ದೆ ಮನ್ನಿಸಿ ರಕ್ಷಿಸೊ ಪನ್ನಗಶಯನ 7 ಪಾರ್ಥಸಾರಥಿ ನಿಮ್ಮ ಪಾದವ ನಂಬಿದೆ [ಅರ್ಥಿಯಿಂ] ಪಾವನ ಮಾಡೆನ್ನ ಪರಮಪುರುಷನೆ 8 ನಿಮ್ಮ ಪಾದದ ಭಕ್ತಿ ನಿಮ್ಮ ಪಾದದ ಸ್ತುತಿ ನಿಮ್ಮ ಪೊಗಳುವ ಮತಿಗತಿಯ ಕೊಡೆನಗೆ 9 ತಂದೆತಾಯಿಯು ನೀನೇ ಬಂಧುಬಳಗವು ನೀನೆ ಆ ನಂದದಿಂದಲಿ ಕಾಯೊ ಇಂದಿರಾರಮಣ 10 ಸುರರೆಲ್ಲ ಪೋಗಿ ಮೊರೆಯಿಡಲಾಗಿ ಅರಿತನು ಭೋಗಿಶಯನ ತಾನಾಗಿ11 ವಸುಧೆಯ ಭಾರವನಿಳುಹುವೆನೆಂದು ದಶರಥನುದರದಿ ಜನಿಸಿ ತಾ ಬಂದು 12 ಪಂಕಜನೇತ್ರ ಪರಮಪವಿತ್ರ [ಸು]ಕೋಮಲಗಾತ್ರ ಕೌಸಲ್ಯಪುತ್ರ 13 ಪುತ್ರರ ನೋಡಿ ಸಂತೋಷಗೂಡಿ ಅರ್ತಿಯಿಂದಲೆ ಚೌಲ ಉಪನಯನ ಮಾಡಿ 14 ನೋಡಿ ಕೌಶಿಕನ ಚಿಂತೆಯ ಮಾಡಿ ಕೂಡಿ ಅನುಜನ ಮುನಿವರನೊಡನೆ ವೋಡಿ 15 ಕರೂಶದೇಶಕೆ ಬಂದು ತಾಟಕಿಯನು ಕೊಂದು ಮ ಹ ಸ್ತ್ರೀಯೆಂದು ಆನಂದದಿ ಗ್ರಹಿಸಿ 16 ಮಾರೀಚನ ಹಾರಿಸಿ ಕ್ರತುವನ್ನು ಪಾಲಿಸಿ ತೋರಿಸಿ ಗಂಗೆಯ ಆನಂದದಿಂ ಸ್ತುತಿಸಿ 17 ಮಾಡಿ ಶಿಲೆಯ ಪಾವನ ಮಿಥಿಲಪುರಕೆ ವೋಡಿ ನೋಡಿ ಧನುವ ಮುರಿದು ಜಾನಕಿ ಕೂಡಿ 18 ಮಾರ್ಗದಲ್ಲಾಗ ಭಾರ್ಗವನ ಆಗ್ರಹವ ಬೇಗ ಮುರಿದು ತಾ ಶೀಘ್ರದಿಂ ಬಂದ 19 ಸತಿ ಸಹಿತನಿಂದು ರಾಜ್ಯ ಗ್ರಹಿಸುವೆನೆಂದ ಮಾತೆಗಾನಂದ 20 ಮಾತೆಗೆ ವಂದಿಸಿ ಸೀತೆಯನೊಡಗೊಂಡು ಸು ಮಿತ್ರೆಜಾತನ ಸಹಿತ ರಘುನಾಥ ತಾ ಪೊರಟ 21 ಪೋಗಿ ಜನಕನಿಗಾಗಿ ವನಕೆ ತಾ ಯೋಗಿ 22 ಬೇಗ ಭರತನಿಗಾಗಿ ಪಾದುಕೆಗಳ ಅನು ರಾಗದಿಂದಿತ್ತು ಯೋಗದಿಂ ಪೋಗಿ 23 ಅತ್ರಿಮಹಾಮುನಿ ಇತ್ತ ಆಭರಣವ ವಸ್ತ್ರವ ಗ್ರಹಿಸಿದ ಪುರುಷೋತ್ತಮನು 24 ವಿರಾಧನ ಕೊಂದು ಹರುಷದಿಂ ಬಂದು ಕರುಣದಿಂದ ನಿಂದು ಋಷಿಗಳಿಗಭಯವ[ನಿತ್ತು] 25 ದನುಜೆನಾಸಿಕವರಿದು ಖರದೂಷಣರ ತರಿದು ತಾನೊಲಿದು ಸತಿಗೆ ಗುಹೆಯಲ್ಲಿ ನಲಿದು26 ಬಂದು ರಾವಣ ಜಾನಕಿಯ ಕದ್ದೊಯ್ಯಲಂದು ಕೊಂದು ಮಾರೀಚನ ಗೃಧ್ರಗೆ ಮೋಕ್ಷಾವ [ನಿತ್ತು] 27 ಕಬಂಧನ ಗೆಲಿದು ಪಂಪಾತೀರದಿ ನಲಿದು ಶಬರಿಯಿತ್ತ ಫಲವನ್ನು ಸವಿದು ಹರಿಗೆ ತಾನೊಲಿದು 28 ಕುಟ್ಟಿ ವಾಲಿಯ[ನು] ರವಿಜಗೆ ಪಟ್ಟವ ಕಟ್ಟಿ ಸೃಷ್ಟಿಜಾತೆಯನರಸಲು ಕಪಿಗಳನಟ್ಟಿ 29 [ಭರದಿವಾನರ] ಕೈಲಿ ಉಂಗುರವಿರಿಸೆ ಆ ಮಾರುತಿ ಕಪಿಗಳುವೆರಸಿ ಜಾನಕಿ[ಯ]ನರಸೆ 30 ಶರಧಿಯನ್ಹಾರಿ ಸೀತೆಯ ನೋಡಿ ಗುರುತನು ತೋರಿ ದುರುಳನೊಡನ್ಹೋರಿ ಮಣಿಯ ತಂದನಾಧಾರಿ 31 ವನವನ್ನು ಮುರಿದು ಅಕ್ಷನ ತರಿದು ಅಸ್ತ್ರಕ್ಕೆ ಅ [ವನೊ]ಲಿದು ರಾವಣನೆದುರಲ್ಲಿ ನಲಿದು 32 ಪುರವೆಲ್ಲ ಸುಟ್ಟು ವಿಭೀಷಣನ ಗುಟ್ಟು ಬಾಲ ಶರಧಿಯೊಳಿಟ್ಟು ಕಪಿಗಳ ಸೇರಿದನಷ್ಟು 33 ಭಂಗಿಸಿ ಮಧುವನವ ಭರದಿಂದ [ರಾಮನೆಡೆಗೆ] ಲಂಘಿಸಿ ಮಾತೆಯ ಕಂಡೆವೆಂದೊಂದಿಸಿ ಮಣಿಯನಿರಿಸೆ 34 [ವರರಾಮ] ತಾ ನೋಡಿ ವ್ಯಸ ಮಾಡಿ ಹರಿಯನ್ನು ಕೂಡಿ ಆಲಿಂಗನೆ ಮಾಡಿ 35 ಹರಿಗನ ಕೂಡಿ ಭರದಿಂದಲೋಡಿ ಶರಧಿಯ ನೋಡಿ ಯೋಚನೆ ಮಾಡಿ 36 ವರುಣನ ವಂದಿಸಿ ವಿಭೀಷಣನ ಮನ್ನಿಸಿ ಶರಧಿಯ ಬಂಧಿಸಿ ಅಂಗದನ ಸಂಧಿಗೆ ಕಳುಹಿಸಿ 37 ಇಂದ್ರಜಿತುವೊಡನೆ ಛಂದದಿಂದಲೆ ಕಾದಿ ಬಂದ ಸರ್ಪಾಸ್ತ್ರವ ಖಗನಿಂದ ಬಿಡಿಸಿ 38 ಹಂಗಿಸಿ ರಾವಣನಕಿರೀಟವ ಮೈಯೆಲ್ಲ ನಡುಗಿಸಿ ಭಂಗಿಸಿ ತಾ ಜಗದೊಡೆಯನೆಂದೆನಿಸಿ 39 ಕುಂಭನಿಕುಂಭ ಕುಂಭಕರ್ಣರ ಕೊಂದು ಕುಂಭಿನಿಯೊಳು ನಿಂದನಂಬುಜನಾಭ 40 ಪತಿತಪಾವನ [ನನುಜನ] ಪಿತಾಮಹಾಸ್ತ್ರದಿ ಕಟ್ಟೆ ಹಿತದಿಂದೌಷಧಿ ತಂದ ಮಾರುತನ ಕುಮಾರ 41 ಮಾಯೆ ಸೀತೆಯನರಿ[ಯದೆ] ಮೋಹಪಡು ತ ಉ ಪಾಯದಿಂದಲೆ ಬಂದ ಮಾಯಾವಿಯೆಡೆಗೆ 42 ತಮ್ಮ ಲಕ್ಷ್ಮಣ ತಾನು ಹೆಮ್ಮೆಯಿಂದಲೆ ಕಾದಿ ಒಮ್ಮೆ [ಲೆ] ಅಸ್ತ್ರಗಳ ಸುಮ್ಮಾನದಿಂ ಬಿಟ್ಟು 43 ಸತ್ಯಮೂರುತಿ ಪವಿತ್ರ ತಾನಾದರೆ ಅಸ್ತ್ರವೆ ಶತ್ರುವ ಜಯಿಸಲೆಂದನಾಗ 44 ಎಂದು ಬಾಣವಬಿಡೆ ಇಂದ್ರಜಿತುವ ಕೊಂದು ಆ ನಂದದಿಂ ಲಕ್ಷ್ಮಣನ ಹೊಂದಿತಾ ಬಾಣ 45 ವಿರೂಪಾಕ್ಷ ಯೂಪಾಕ್ಷ ಶೋಣಿತಾಕ್ಪನ ಕೊಂದು ಮ ಕರಾಕ್ಷನ ಕೊಂದ ಮಹಾನುಭಾವರಾವಣನ 46 ಮೂಲಬಲವನ್ನೆಲ್ಲ ಲೀಲೆಯಿಂದಲೆ ನಿ ರ್ಮೂಲನ ಮಾಡಿ[ದ] ಲೀಲಾವಿನೋದದಿ 47 ಬಂಧುಗಳೆಲ್ಲರು ಮರಣ ಪೋಗಲು ಕಂಡು ಬಂದ ರಾವಣನು ತಾನು ಒಂದೆಮನಸಿನಲಿ 48 ಯಾರು ಇಲ್ಲದಾಗ ಚೋರತನದಲ್ಲಿ ನಾರಿಯ ಕದ್ದೊಯ್ದ ಧೀರ ಬಾರೆಂದ [ರಾಮ] 49 ಅಸ್ತ್ರಕ್ಕೆ ಅಸ್ತ್ರವ ಒತ್ತಿ ಬಿಡಲು ಆಗ ಮತ್ತೆ ಆಕಾಶವ ಮುತ್ತಿತು ಬಾಣ 50 ರಾಮರಾವಣರ್ಯುದ್ಧ ನೋಡಿ ಮಹಾಸುರರೆಲ್ಲ ಪ್ರೇಮದಿಂದಲೆ [ಹರಸಿದರು] ಆನಂದಗೂಡಿ 51 ಕತ್ತರಿಸಿದ [ರಾವಣನ]ಶಿರ ಮತ್ತೆ ಬೆಳೆಯಲು ನೋಡಿ ಚಿತ್ತದಿಂ ನೆನೆದು [ರಾಮ] ಬ್ರಹ್ಮಾಸ್ತ್ರದಿಂ ಕಡಿದ 52 ದಶಕಂಠನೆಂತೆಂಬ ಹಸನಾದ ವೃಕ್ಷವ ದಶರಥಸುತವಾತ ಬಂದು ಮುರಿಯಿತು 53 ರಾವಣನೆಂತೆಂಬ ವಾರಣ[ದ ಕೋಡ] ವೀರ ರಾ ಘವನೆಂಬ ಕೇಸರಿಯು ಮುರಿಯಿತು 54 ಪುಲಸ್ತ್ಯಪುತ್ರನೆಂಬ ರಾಜವೃಷಭವನ್ನು ಇಕ್ಷ್ವಾಕು [ಕುಲದ] ವ್ಯಾಘ್ರವು ಭಕ್ಷಿಸಿತಾಗ 55 [ಆಮಹಾ] ರಾಕ್ಷಸೇಂದ್ರನೆಂಬ ಜ್ವಲಿಸುವ ಅಗ್ನಿಯ [ಶ್ರೀ] ರಾಮಜೀಮೂತವು ಬಂದು ಕೆಡಿಸಿತು 56 ಸುರರೆಲ್ಲ ಜಯವೆಂದು ಪುಷ್ಪಗಳರಳನ್ನು ಕರೆಯಲು ಶಿರದಲ್ಲಿ ಧರಿಸಿದ [ತಾ] ಪರಮಪುರುಷನು 57 ರಾಕ್ಷಸೇಂದ್ರ [ವಿಭೀಷಣ]ಗೆ ಮಾಡಿ ರಾಜ್ಯಾ ಭಿಷೇಕವ ಮೂರ್ಜಗದಲಿ ಕೀರ್ತಿ ಪಡೆದ ರಾಘವ 58 ತಂದೆಗೆರಗಿ ಅಗ್ನಿತಂದ ಸೀತೆಯ ನೋಡಿ ಆ ನಂದದಿಂದಲೆ ಕೂಡಿನಿಂದ ರಾಘವನು 59 ಅಜಭವಸುರರೆಲ್ಲ ಭುಜಗಶಯನನ ನೋಡಿ ನಿಜವಾಗಿ ಸ್ತೋತ್ರ ಮಾಡಿದರು ನಿರ್ಮಲದಿ 60 ವೇದವನಿತ್ತು ಅಜನಿಗೆ ಭಾರವ ಹೊತ್ತು [ಆ] ಧಾರುಣಿಯ ತಂದು ಕಂಬದಿಂ ಬಂದು 61 ದಾನವ ಬೇಡಿ ಕ್ಷತ್ರಿಯಕುಲವನೀಡಾಡಿ ಜಾನಕಿಯ ತಂದು ಪ್ರಲಂಬನ ಕೊಂದು 62 ಕಾಳಿಯ ಒತ್ತಿ ಕುದುರೆಯ ಹತ್ತಿ ಜಗ ವೆಲ್ಲ ಸುತ್ತಿ ನಿಮ್ಮ ದರ್ಶನ ಮುಕ್ತಿ 63 ಜಗದೋದ್ಧಾರ ದುರಿತಕ್ಕೆ ದೂರ ಜಗಕೆ ಆಧಾರ ದುಷ್ಟರಿಗೆ ಕ್ರೂರ 64 ಪೃಥುವಿಯ ಪಾಲ ದಿಟ್ಟಗೋಪಾಲ ಸತ್ಯದಲಿ ಶೀಲ ರುಕ್ಮಿಣೀಲೋಲ 65 ಅರಿ ನಿ ಸ್ಸೀಮ ಭಕ್ತರಾಪ್ರೇಮ 66 ವಿಶಾಲನೇತ್ರ ಪರಿಪೂರ್ಣಗಾತ್ರ [ವ ರ] ಸೀತಾಕಳತ್ರ ಸುಗ್ರೀವಮಿತ್ರ 67 [ರಾಜ] ದಶರಥ ಬಾಲ ಜಾನಕೀಲೋಲ ಮೂರ್ಜಗಪಾಲ ಕೀರ್ತಿವಿಶಾಲ 68 ಸತ್ಯಮೂರುತಿ ಪವಿತ್ರ ನೀನೆ ಜಗಕೆ ಕರ್ತನೂ ಕಾರಣಮೂರ್ತಿಯೂ ನೀನೆ 69 ನಂದನಕಂದ ಮುಕುಂದ ಗೋವಿಂದ ಇಂದಿರಾರಮಣ ನೀನೆಂದು ಪೊಗಳಿದರು 70 ಪುಷ್ಪಕವನು ಏರಿ ಲಕ್ಷ್ಮೀಸಹಿತವಾಗಿ [ರಾಮ]<
--------------
ಯದುಗಿರಿಯಮ್ಮ
ಸುಖಖರ ನೀನೆನ್ನುತಾ ಸೂರಿಗಳು ಭಜಿಸುವರೊ ನಿನ್ನ ಪ ಭವಭಯಗಳನೀಡಾಡುತ ಪಾಪರಹಿತರಾಗಿಹರು ಅ.ಪ ಭೂತದಯೆ ಪಶ್ಚಾತ್ತಾಪವಿಖ್ಯಾತಿಯಶೋದಾನ ನೀತಿಮನಃ ಪ್ರೀತಿಧ್ಯಾನ ನಿತ್ಯಾನುಸಂಧಾನ ಶ್ರೀ ತರುಣಿವರ ಪ್ರಾಣಿ ವ್ರಾತಗಳಿಗೆ ಕರ್ತನು ಯಂ ದಾತುರವಿಲ್ಲದೆ ಸರ್ವದ ಜಾತಿ ಧರ್ಮಾಚಾರದಲ್ಲಿ 1 ತನ್ನಂತಿತರರ ನೋಡುತ ಮನ್ನಣೆಯಲಿ ಸತತ ನನ್ನದು ನಾನೆಂಬುದ ಬಿಟ್ಟನ್ಯರ ನಿಂದಿಸದಲೆ ಹರಿ ನಿನ್ನಾಜ್ಞೆಯೊಳಾದುದೆಲ್ಲ ನಿನಗೆ ಸಮರ್ಪಣೆಗೈಯ್ಯುತಾ 2 ಮತಿಗೆಡದೆ ಎಚ್ಚರಿಕೆಯಿಂ ಸುಮಾರ್ಗದಿ ಸಮ್ಮುದದಿ ಪ್ರತಿ ದಿನದಲಿ ಶೃತಿ ಸ್ಮøತಿ ಸಂಮತದಿ ಸತ್ಸಂಗದಿ ಸೀತಾ- ಪತಿ ಗುರುರಾಮ ವಿಠಲ ಯಂದತಿಶಯದಲಿ ಚಿಂತಿಸುತ3
--------------
ಗುರುರಾಮವಿಠಲ
ಸುಖದ ಸುಂದರ ವಿಠಲರಾಯಾ | ಈ |ಭüಕುತಗೆ ವಿಜ್ಞಾನ ಕೊಡು ಜೀಯಾ ಪ ಸುಖತೀರ್ಥ ಶಾಸ್ತ್ರ ಸಮ್ಮತವಾಗಿ | ಈ |ಸುಕವನಕ್ಕೆ ವಾಕ್ಯವದಾಗಲಿ ||ಸಕಲ ಜನರು ಕೇಳಿ ಪಾಡಲಿ | ಇದು |ಮುಕುತಿಗೆ ಸತ್ಪಥವಾಗಲಿ 1 ಆಯುರಾರೋಗ್ಯವು ಪೆಚ್ಚಲಿ | ಕೇಳಿ |ಮಾಯಾವಾದಿಗಳು ಬಾಯ್ಮುಚ್ಚಲಿ ||ಶ್ರೇಯಸ್ಸು ಬಂದು ಕೈಗೂಡಲಿ || ಶ್ರೀ ||ವಾಯುದೇವನು ಪ್ರೀತನಾಗಲಿ 2 ಕರ ಮುಗಿವೆನೊ 3
--------------
ಗುರುಪ್ರಾಣೇಶವಿಠಲರು
ಸುಜನ ಜನ ವತ್ಸಲನ ಸೋಮ ಸೂರ್ಯರ ನಯನ ಸುಗುಣಿ ಗುಣ ಗಂಭೀರನ |ಭುಜಗ ಭೂಷಣ ಕಂಕಣನ ಭುವನ ರಕ್ಷಕನ ಭುಜ ಚತುಷ್ಕಾಯುಧಗಳಿಂದೆಸೆವ ಶುಭ್ರ ರದನ ವಿಜಯ ಮೂರುತಿ ವಿಘ್ನವಿಪಿನ ದಾಹಕನ ವಿಘ್ನೇಶ್ವರಗೆ ಸಹಸ್ರನಮನ 1 ನೀನೆ ಶಾಶ್ವತ ರೂಪ ನಿನ್ನ ಕೀರ್ತಿ ಪ್ರತಾಪ ಖೂನ ಕಂಡುಉಸುರೆನೆಂದರೆ ಶ್ರುತಿಗಳಾಲಾಪ ಮೌನಗೊಂಡವು ಮಿಕ್ಕ ಶೇಷಾದಿಕರ ಸ್ಫೂರ್ತಿ ನಿಂತು ಹೋಗಿರಲು ಗಣಪ | ........................... ನಗೇಶನ ಮಾರ್ಗದ ಕೀಲ ಕೃಪೆ ಮಾಡಿ ತೋರಿದರು ಶ್ರೀನಾಥ ಶ್ರೀಹರಿಯ ಚಾರಿತ್ರ್ಯ ಪೇಳಿಸಲಿಕೆ ಆಧಾರ ನೀನೇ ಸತ್ಯ 2 ಇಂತು ವಿಘ್ನೇಶ್ವರನ ಬಲಗೊಂಡ ಬಳಿಕ ಸಮನಂತರದೊಳಾ ಶಾರದಾಂಬಿಕೆ ಶ್ರೀಪಾದ ಅಂತರಂಗದ ಪೀಠದಾಸನಕೆ ಕರಕೊಳಲು ಬಂದೊದಗು ಜಿವ್ಹಾಗ್ರದಿ | ನಿಂತು ನಡಿಸುವ ನಿನ್ನ ಶಕ್ತಿ..................................... ವಂತೆ ವಿಶ್ರಾಂತೆ ಪಾವನ ಮೂರ್ತೆ ಪ್ರಖ್ಯಾತೆ ವರದಾತೆ ಲೋಕ ಮಾತೆ 3 ಸುಜನ ಭುಜಗ ತ್ರಿಜಗ ಜೀವರ ಜನನಿ ತ್ರಿತಾಪ ಸಂಹಾರಿಣಿ ತ್ರಿದೇಹ ಸಂಚಾರಿಣಿ | ದ್ವಿಜತುರಂಗ ಗಮನಿ ದಿವ್ಯಾಂಬರಾಭರಣಿ ರಜ .........................ಗಜಗಮನಿ ಗಂಧರ್ವಗಾನ ಲೋಲಿನಿ ವಾಣೀ ರತ್ನ ಕೃತಾಂಗಿ ಅನುಕೂಲಿನಿ 4 ಹಸ್ತಿ ಕೃಮಿ ಕೀಟ ಭೃತ್ವಲಯದೊಳಗುಳ್ಳ ...................................... ಕೇವಲ ಪರಬ್ರಹ್ಮ ಸ್ಫುರಣಸ್ಫೂರ್ತಿಯು ತೋರದಾರಿಂದ ಗುರುವಿನ್ಹೊರತು 5 ಜಲಧಿ ಎಂದು ಮೊರೆ ಹೊಕ್ಕೆ ನಿನ್ನ ಶ್ರೀ ಚರಣ .......... ಮಾಡಿ ರಚಿಸುವ 6
--------------
ಭೀಮಾಶಂಕರ
ಸುಜನ ಬುಧಗೇಯ ಮೇದಿನೀ ಸುರವಂದ್ಯ ಶ್ರೀಪಾದರಾಯ ಪ ಸಕಲಶಾಸ್ತ್ರ ಕಲಾಪ ಸನ್ಯಾಸ ಕುಲದೀಪಸಕಲ ಸತ್ಯಸ್ಥಾಪ ಸುಜ್ಞಾನದೀಪಪ್ರಕಟ ಪಾವನರೂಪ ಅರಿಕುಜನ ಮತಲೋಪನಿಕಟ ವರ್ಜಿತ ಪಾಪ ಕೀರ್ತಿ ಪ್ರತಾಪ 1 ಭೃಂಗ ಶುಭ ಚರಿತಾಂಗ ಷಟ್ಫಾಸ್ತ್ರಸÀಂಗ 2 ಸಿರಿಕೃಷ್ಣ ದಿವ್ಯ ಪಾದಾಬ್ಜ ಚಿಂತಾಲೋಲವರ ಹೇಮವರ್ಣಮುನಿಪತಿಯ ಸುಕುಮಾರಗುರುತಿಲಕ ಶ್ರೀಪಾದರಾಯ ಅಮಿತೋದ್ಧಾರಶರಣ ಜನ ಸುರಧೇನು ಭಕ್ತಮಂದಾರ 3
--------------
ವ್ಯಾಸರಾಯರು
ಸುದಯನೆ ಮಲಗಿದ್ಯಾ ತಂದೆ ಗೋವಿಂದ ಇದು ಏನು ಮಾಡಿದ್ಯೋ ಭಕುತರಾನಂದ ಪ ಗಳಿಗೆಬಿಡದೆ ಹೊನ್ನು ಅಳೆದಳೆದು ಬೇಸತ್ತು ಮಲಗಿದಿ ಸುಮ್ಮನೆ ಕಲಿಜನರ ಗತಿಯೇನು 1 ಮಹಂತರ ಅಧಿಕಾರ ಭ್ರಾಂತರೊಶಕೆ ನೀಡಿ ಚಿಂತೆ ಪರಹಿತ ಮರೆದು ಸಂತಸದ್ಹಾವಿನ ಮೇಲೆ 2 ಪ್ರತಿ ವರುಷದುತ್ಸವಕೆ ಅತಿಭಕುತಲಿ ಬರುವ ಸುತರೊಳು ದಯತಪ್ಪಿ ಅತಿ ಆನಂದದಲಿ 3 ರೂಢಿಯ ಮೇಲೆ ಗಾಢನಿದ್ರೆಯೊಳು 4 ಕಾಮಿತಜನರ ಸುರಕಾಮಧೇನಲ್ಲವೆ ನೀನು ಭೂಮಿಪಾಲಿಸು ಏಳು ಸ್ವಾಮಿ ಶ್ರೀರಾಮಯ್ಯ 5
--------------
ರಾಮದಾಸರು
ಸುಂದರ ಮೂರುತಿ ನಂದ ಕಂದ ಶ್ರೀ ಕೃಷ್ಣನ ಕಂಡೆ ಇಂದಿನ ದಿನದೊಳು ಧನ್ಯನಾಗಿ ಅಮೃತಾನ್ನವನುಂಡೆ ಪ ವಿವಿಧ ವಜ್ರವೈಡೂರ್ಯ ಗೋಮೇಧಿಕ ಖಚಿತ ಸುವರ್ಣ ಕಿರೀಟ ಸುವಿಲ ಸತ್ತಿಲದಿಂದೊಪ್ಪುವ ಮಣಿಕ್ವತ ಗೊಂಚಲೆಸೆವ ಲಲಾಟ ಕಪೋಲಗಳ್ಮಾಟ ಕಿರಣದ ನೋಡಾ 1 ಚತುರಸುಂದರ ಭುಜಕೀರ್ತಿ ಶಂಪಾಪರಿಯ ವೈಜಯಂತಿ ಘನತರ ಪೊಳೆವ ಸುವ್ರತ ಮೌಕ್ತಿಕದೇಕಾವಳಿ ಹಾರಪದಗಳ ಪಂಕ್ತೀ ಕನಕ ಕಂಕಣಕರದುಂಗುರ ಶೋಭಿತದರ ಚಕ್ರಗದಾ ಪದ್ಮವರ್ತಿ 2 ಮೇಖಲಾಲಂಕಾರಾ ಕಟ್ಟಿನ ಸಿಂಗಾರಾ ಪಾದದೊಡಪುಗಳು ಪೂರಾ ನರಸಿಂಹವಿಠಲನರಸಿ ಬಣ್ಣಿಪುದು ಶಿರಿ ಬಮ್ಮುಸುರರಿಗೆ ಘೋರಾ 3
--------------
ನರಸಿಂಹವಿಠಲರು
ಸುಮ್ಮನಿರಬ್ಯಾಡಿ ನಿಮ್ಮೊಳು ನೀಟ ನೋಡಿಒಮ್ಮನವ ಮಾಡಿ ಪರಬ್ರಹ್ಮನೊಲು ಕೂಡಿ ಧ್ರುವ ಹೊತ್ತುಗಳಿಯಲು ಬ್ಯಾಡಿ ಹೃತ್ಕಮಲದೊಳು ನೋಡಿ ಅತ್ತಿತ್ತಲಾಗದೆ ಚಿತ್ತಸ್ವಸ್ಥ ಮಾಡಿ ಹತ್ತಿಲಿಹ ವಸ್ತುವನು ಪ್ರತ್ಯಕ್ಷ ಮಾಡಿ ನಿತ್ಯ ನಿಜಾನಂದ ಸುಪಥವು ಗೂಡಿ 1 ಮುತ್ತಿನಂಥ ಜನ್ಮ ವ್ಯರ್ಥಗಳಿಯಲಿ ಬ್ಯಾಡಿ ನಿತ್ಯ ಸಾರ್ಥಕದ ಸಾಧನವ ಮಾಡಿ ಸತ್ಯ ಶಾಶ್ವತದಾವದೆಂದು ಖೂನದಲಿ ಅಡಿ ಕೃತ್ಯಾ ಕೃತ್ಯಾಗುವ ಸ್ವಸುಖ ಬೆರೆದಾಡಿ 2 ದೀನ ಮಹಿಪತಿ ಸ್ವಾಮಿ ತಾನೊಲಿದು ಬಾವ್ಹಾಂಗ ಜ್ಞಾನಾಭ್ಯಾಸವ ಮಾಡಿಕೊಳ್ಳಿ ಬ್ಯಾಗ ಭಾನುಕೋಟಿ ತೇಜ ದೀನದಯಾಳು ತಾಂ ನೆನೆವರಿಗನುಕೂಲವಾಗುತಿಹ್ಯ ಈಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನ್ಯಾತಕೆ ಕಾಲಕಳೆಯುವಿಯೋ ಹೇ ಸುಮ್ಮನ್ಯಾತಕೆ ಕಾಲಕಳಯುವಿ ಪ ಬ್ರಹ್ಮನಯ್ಯನ ವಿಮಲ ಚರಣ ಒಮ್ಮನದಿಂ ಪೊಗಳುತನುದಿನ ನಿರ್ಮಲಪದವಿ ಸಂಪಾದಿಸದೆ ನೀ ಅ.ಪ ಮತ್ತು ನಿನ್ನಗೆ ಹತ್ತಿ ಬರುವುದೆ ನಿತ್ಯ ವೆನಿಪತ್ಯಧಿಕ ಸಮಯವು ಸತ್ಯ ಸರ್ವೋತ್ತಮನ ಪಾದವ ನಿತ್ಯ ಪಾಡುತ ಸಾರ್ಥಕ್ಹೊಂದದೆ 1 ಮೃತ್ಯುಬಾಧೆಯ ಗೆಲಿಸಿ ನಿನ್ನ ಪ ವಿತ್ರನೆನಿಪ ಮಹ ಮೃತ್ಯುಲೋಕದಿ ಉತ್ಪತ್ತಿಯಾಗಿ ರಿಕ್ತಹಸ್ತದ್ಹೋಗ್ವತಿ ಚಿತ್ತಜಪಿತನ್ನರ್ತು ಭಜಿಸದೆ 2 ಭಕ್ತಜನರು ಕೈಯೆತ್ತಿ ಪೇಳಿದ ಸತ್ಯದೋಕ್ತಗಳ್ನಿತ್ಯವೆಂದು ಭಕ್ತವತ್ಸಲ ಸಿರಿಯರಾಮನ ಚಿತ್ತದರಿತು ಮುಕ್ತಿ ಪಡೆಯದೆ 3
--------------
ರಾಮದಾಸರು
ಸುರನರ ವರಗುರು | ಸುರನರ ಪ. ಸುರನರ ವರಗುರು ನಿನ್ನಾ | ದಿವ್ಯ ಚರಣಕ್ಕೆ ಎರಗುವೆ ನಿನ್ನಾ | ಆಹ ಕರುಣದಿಂದೀಕ್ಷಿಸಿ ವರಮತಿ ಪಾಲಿಸಿ ಹರಿಯ ಶ್ರೀ ಚರಣಕ್ಕೆ ಎರಗಿಸು ಮನವನೂ ಅ.ಪ. ಹಣ್ಣೆಂದು ನುಂಗೆ ಪೋದುದಕೇ | ಓದಿ ತಣ್ಣಗೆ ಮಾಡಿದ ಮನಕೇ | ಹರಿ ಯನ್ನು ಓಲೈಸಲು ಮರಕೇ | ಅಡರಿ ಹೆಣ್ಣನ್ನೆ ತೊರೆದನು ವ್ರತಕೇ | ಆಹ ಸಣ್ಣ ರೂಪದಿ ಪುರವನ್ನು ಶೋಧಿಸಿ | ಮುಡಿ ಹೊನ್ನು ಸಲ್ಲಿಸಿ ವಾರ್ತೆಯನ್ನು ಪೇಳಿದ ಧೀರ 1 ರಕ್ಕಸಿಯೊಳು ಪ್ರೇಮದಾಟಾ | ದನುಜ ಗಿಕ್ಕಿದ ಕೂಳಿಗಾರಾಟ | ಅಣ್ಣ ತಕ್ಕೊಂಡ ಎಡೆಯಲ್ಲಿ ಊಟ | ಬಲು ಸೊಕ್ಕಿದರೊಡನೆ ಕಾದಾಟ | ಆಹ ಮಕ್ಕಳ ಕೊಯ್ದವ ನಿಕ್ಕಿದಸ್ತ್ರಕೆ ತಲೆ ಇಕ್ಕದೆ ಪುರವಾಳ್ದ ರಕ್ಕಸಾಂತಕ ದೂತ 2 ಗುರುವಿಗೆ ವರೆದು ತತ್ವಾರ್ಥ | ಮತ್ತೆ ಧರೆಯಲ್ಲಿ ಚರಿಸಿದ ವ್ಯಾಪ್ತಾ | ಮುನಿ ವರರೊಳು ಬಲು ಶ್ರೇಷ್ಠನೀತಾ | ಪೇಳ್ದ ಪರಿಶುದ್ಧ ವೇದ ಭಾವಾರ್ಥ | ಆಹ ಸುರರುಷಿ ಪೂಜಿಪ ಹರಿಗಿರಿಯಲಿ ಸತ್ಯ ವರಸೂನು ಚರಣದಿ ಗುರುಭಕ್ತಿರತ ವ್ರತ 3 ದುಡಿದು ಸ್ವಾಮಿಗೆ ಪ್ರತಿಫಲವಾ | ಬೇಡ ಕೊಂಡ ವ್ರತವಾ | ಗಿರಿ ವಡೆದನು ಕೈ ಜಾರೆ ಶತವಾ ಮಾಡಿ ಗೋಪಿ ಚಂದನವಾ | ಆಹ ಕಡಲ ತೀರದಿ ತನ್ನ ವಡೆಯನ್ನ ನಿಲ್ಲಿಸಿ ಅಡರಿದ ಹಿಮಗಿರಿ ದೃಢಕಾಯ ಹರಿಪ್ರೀಯ 4 ಎಷ್ಟು ವರ್ಣಿಸಲಳವಿವನಾ | ಮಹ ಗುಟ್ಟು ಮಂತ್ರವ ಸಾಧನವನಾ | ಮೂರು ಬಟ್ಟೆ ಮಾಡುವ ನಂಬಿದವನಾ | ಜ್ಞಾನ ಕೊಟ್ಟು ಕಾಯುವ ಕರುಣಿ ಮಾನ್ಯಾ | ಆಹ ದಿಟ್ಟ ಗೋಪಾಲಕೃಷ್ಣವಿಠ್ಠಲ ಬ್ರಹ್ಮನ ಪಟ್ಟ ಕಟ್ಟುವನೆಂದು ಘಟ್ಟಿ ಮನದಲಿಪ್ಪ 5
--------------
ಅಂಬಾಬಾಯಿ