ಒಟ್ಟು 5088 ಕಡೆಗಳಲ್ಲಿ , 132 ದಾಸರು , 3232 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ಪರಮಭಕ್ತಿಲಿ ಎನ್ನ ಶಿರದ ಮೇಲ್ಪೊತ್ತು ಬಿಡದಿರುವೆನನವರತ ಪ ತಾಳಿ ವಿಮಲಭಕ್ತಿ ತಾಳದಂಡಿಗೆ ಸ ಮ್ಮೇಳದೊಡನೆ ತ್ರಿಕಾಲವು ಬಿಡದೆ ನೀಲವರ್ಣನ ಭಜನೆ ಮೇಲಾಗಿ ಮಾಡುವ ರಾಲಯದಿ ನಲಿದಾಲಿಸಾನದಿಂದಪ 1 ನಿಲಯದಂಗಳದೊಳು ತುಲಸಿವನವ ರಚಿಸ ನಿತ್ಯ ಜಲಜನಾಭಂಗೆ ಮಲತ್ರಯಂಗಳ ನೀಗಿ ಮಲಿನಗುಣವ ಕಳೆದು ಸಲಿಸಿ ಶ್ರೀಪಾದಮಂ ಒಲಿಸಿ ಸುಖಿಸುತಿರ್ಪ 2 ತಿಳಕೊಂಡು ಸಂಸಾರ ಕಳವಿನಿಂದುಳಕೊಂಡು ಹೊಳೆವ ಜ್ಞಾನಜ್ಯೋತಿ ಬೆಳಗಿನೋಳ್ನಲಿಯುತ ನಿಲಿಸಿ ಹರಿಪಾದದಿ ಚಲಿಸದೆ ಮನ ಹಂ ಬಲಿಸಿ ತಪವ ಶೇಷಾಚಲಯಾತ್ರೆ ಮಾಳ್ಪಂಥ 3 ಮರೆವು ಮಾಯವ ನೀಗಿ ಅರಿವಿನಾಲಯದೊಳು ಸಿರಿಯರರಸನ ನಿಜ ಚರಿತಂಗಳರಸುತ ಪರಮಸಾಲಿಗ್ರಾಮದ್ವರಮಹಿಮೆಯನರಿತು ನಿರುತದಿಂ ಪೂಜಿಸಿ ಪರಮಪಾವನರೆನಿಪ 4 ಕಾಮಿತಂಗಳ ನೀಗಿ ಕೋಮಲ್ಹøದಯರಾಗಿ ಪ್ರೇಮಪಿಡಿದು ಸರ್ವಭೂಮಿ ಜೀವಂಗಳೊಳ್ ನೇಮನಿತ್ಯದಿ ನಿಸ್ಸೀಮರಾಗಿ ಸತತ ಸ್ವಾಮಿ ಶ್ರೀರಾಮನಾಮಾಮೃತ ಸುರಿಯುವ 5
--------------
ರಾಮದಾಸರು
ಪಾದ ಭಜಿಸಿದವಗನವರತವಿಜಯವಾಗುವದಕ್ಕೆ ಸಂದೇಹವ್ಯಾಕೆ ಪ ಗಜರಾಜ ವರದನಿಗೆ ನಿಜದಾಸರೆಂದೆನಿಸಿದ್ವಿಜಕುಲದಲ್ಲಿ ಮೆರೆವರಾ ಯಿವರ ಅ.ಪ. ಭವ ಬಂಧು ಮುನಿವೃಂದಹೃದಯ ಸಂಶಯ ಹೊಂದಲು (ಹೊಂದಿಸಲು)ವಿಧಿ ವಿಷ್ಣು ಶಿವರೊಳಗೆ ಉತ್ತಮರ ತೋರದಲೆಮದಡ ಭಾವವ ವೊಹಿಸಲು ||ಒದಗಿ ಭೃಗುಮುನಿಗಳೇ ಸರ್ವೇಶ ವೈಕುಂಠಸದನನೆಂದರುಹಿದವರೊ ಯಿವರೊ 1 ಪುರಂದರ ದಾಸರಾಗಿ | ಈ |ಮೇದನೀ ತಳಕೆ ಬರಲೂಸಾಧು ಸಮ್ಮತವಾದ ಪದಪಂಚಲಕ್ಷಕೆ (ತ್ರಿ)ಪಾದವೇ ನ್ಯೂನವಿರಲು | ಆ |ಪಾದವನು ಪೂರ್ತಿಪರು ಮತ್ಪುತ್ರರಿವರೆಂದುಆದಿಯಲಿ ಸೂಚಿಸಿರಲೂ ||ಭೂದೇವ ಜನ್ಮದಿಂದಾ ದಾಸರಭಿಲಾಷೆಸಾಧಿಸಿದ ಸದಯರಿವರೊ ಯಿವರೊ 2 ವೀ ಯೆನಲು ವಿಮಲತೆಯು ಜ ಯೆಂದವಗ ಜಯವುಯ ಯೆನಲು ಯಾಗಫಲವುರಾ ಯೆನಲು ರಾಜ್ಯವು ಯ ಯೆನಲು ಯಮಭಟರುನೋಯಿಸರು ಯಿವನ ಕುಲವೂ ||ಈ ಯಾವದಕ್ಷರವ ಓಂಕಾರ ಸಹ ಪಠಿಸೆಕಾಯಭವ ಪಿತನ ಬಲವೊ ||ಜಾಯಾ ಸಮೇತ ಮೋಹನ್ನ ವಿಠಲನ ಪಾದತೋಯಜ ಭ್ರಮರರಿವರೊ ಯಿವರೊ 3
--------------
ಮೋಹನದಾಸರು
ಪಾದ ಭಜಿಸುವೆ ಅ.ಪಜ್ಞಾನವೆಂಬೊ ನವರತ್ನದ ಮಂಟಪದ ಮಧ್ಯದಲ್ಲಿಗಾನಲೋಲನ ಕುಳ್ಳಿರಿಸಿಧ್ಯಾನದಿಂದ ಭಜಿಸುವೆ1ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿಮುಕ್ತನಾಗಬೇಕು ಯೆಂದು ಮುತ್ತಿನಾರತಿ ಎತ್ತುವೆ 2ನಿನ್ನ ನಾನು ಬಿಡುವನಲ್ಲಎನ್ನ ನೀನು ಬಿಡಲು ಸಲ್ಲಘನ್ನ ಮಹಿಮ ವಿಜಯವಿಠ್ಠಲ ನಿನ್ನ ಭಕ್ತರ ಕೇಳೊ ಸೊಲ್ಲ 3
--------------
ವಿಜಯದಾಸ
ಪಾದ ಮುಖ್ಯ ಪ್ರಾಣ ನಂಬಿದೆ ನಿನ್ನಯ ಪಾದ* ಪ ನಂಬಿದೆ ನಿನ್ನಯ ಪಾದಾಡಂಬರ ತೊಲಗಿಸಿಡಿಂಬದೊಳಗೆ ಹರಿಯ ಬಿಂಬ ಮೊಳೆವಂತೆ ಮಾಡೋ ಅ.ಪ. ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿ ಹಂಸಮಂತರ ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿತಪ್ಪಿಸೋ ಭವವ ಸಮೀಪದ ಜೀವಗೆ ||ಅಪ್ಪನಂದದಿ ಪುಣ್ಯವಪ್ಪಂತೆ ಕರುಣಿಸೊಕಪ್ಪು ವರ್ಣನ ಕೂಡೊಪ್ಪಿಸಿ ಪಾಲಿಸೊ 1 ಸೂತ್ರ ಮಾರುತಉತ್ತರ ಲಾಲಿಸೋ ಉತ್ಕøಮಣದಲ್ಲಿನೆತ್ತಿಯ ದ್ವಾರದಿಂದಲೆತ್ತ ಪೋಗಲೀಸದೆ ||ತತ್ತುವರೊಳು ಜೀವೋತ್ತಮನೆ ಸತ್-ಚಿತ್ತೆನಗೆ ಕೊಡು ಉತ್ತರ ಧರಿಸೊ (ಲಾಲಿಸೋ) 2 ಕಂತು ಜನಕನಲ್ಲಿಮಂತ್ರಿಯೆನಿಸಿ ಸರ್ವರಂತರ್ಯಾಮಿ ಆಗಿ ||ನಿಂತು ನಾನಾ ಬಗೆ ತಂತು ನಡಿಸುವ ಹಂತಕಾರಿ ಗುಣವಂತ ಬಲಾಢ್ಯ 3 ಕಾಯ ಪರಮೇಷ್ಠಿ ಸಂಚಿತಾಗಾಮಿ ಓಡಿಸಿಕೊಂಚ ಮಾಡೋ ಪ್ರಾರಬ್ಧ ವಂಚನೆಗೈಸದೆ ||ಅಂಚಂಚಿಗೆ ಪರಪಂಚವ ಓಡಿಸಿ ಪಂಚವಕ್ತ್ರ ಹರಿಮಂಚದ ಗುರುವೆ 4 ಜಾಗರ ಮೂರುತಿ 5
--------------
ಗುರುವಿಜಯವಿಠ್ಠಲರು
ಪಾದ ವಂದಿಸುವ ಎನ್ನ ಮಂದಿರದಲ್ಲಿ ನಿಲ್ಲೆ ಕೇಳುವದೆನ ಸೊಲ್ಲೆ ಪ ಭವ ಸಿಂಧೂವಿನೊಳು ಬಹು ನೊಂದು ನಿನ್ನ ಬೇಡಿಕೊಂಬೆ ಪಾಲಿಸು ಜಗದಂಬೆ1 ಇಂದಿರೇಶನರಾಣಿ ಮಂದಭಾಗ್ಯನ ಕರುಣ - ದಿಂದಲಿ ಎನ್ನ ನೋಡೆ ನೀ ನಲಿದಾಡೆ 2 ಮಂದಜಾಸನ ಜನನಿ ಸುಂದರ ಸುಗುಣಿ ನಿನ್ನ ಕಂದನು ನಾನಮ್ಮ ಶಿರಿಯೆ ನೀ ಸುಖ ಸುರಿಯೆ 3 ಎಂದಿಗು ಎನ್ನನು ಪೊಂದಿದ ಈ ಭವ ಬಂಧನ ಬಿಡಿಸೆಂದೆ ನಿನ್ನನು ಬೇಡಿಕೊಂಡೆ 4 ದಾತ ಗುರುಜಗನ್ನಾಥ ವಿಠಲನ ಪ್ರೀತಿಯಿಂದ ಎನಗೆ ತೋರೆ, ನೀ ಎನ್ನ ಮನೆಗೆ ಬಾರೆ 5
--------------
ಗುರುಜಗನ್ನಾಥದಾಸರು
ಪಾದ ವನಜ | ಸೂಸಿ ಭಜಿಸಿರೋ |ವ್ಯಾಸ ತೀರ್ಥ ಶಿಷ್ಯರೆಂದು | ಭಾಸಿಸಿದ್ದರೋ ಪ ಪುರಂದರ ಗಡದಿ | ವಾಸರಿದ್ದರಾಪರಮ ಲೋಭಿ ನವ ಕೋಟಿ | ದ್ರವ್ಯವಿದ್ದರಾ 1 ಬಂದ ಕಾರ್ಯ ಮರೆತನೆಂದು | ಹರಿಯು ಚಿಂತಿಸೀಇಂದಿರೇಶ ದ್ವಿಜನಾಗಿ | ಹುಡುಗನಾವೆರಸೀ ||ಬಂದು ಮಗನ ಮುಂಜಿಗಾಗಿ | ಧನವನು ಬಯಸೀ ||ನಂದ ಕಂದ ತಿರುಗುತ್ತಿದ್ದ | ಅಂಗಲಾಚಿಸೀ 2 ಭಿಕ್ಷುಕನ್ನ ಬಿಡದಂತೆ | ಅಂಗಡಿಯಲ್ಲಿಶಿಕ್ಷಿಸೀದ ಆಳುಗಳ | ಲೋಭಿ ತಾನಲ್ಲಿ ||ತ್ರ್ಯಕ್ಷಸೇವ್ಯ ತಿಂಗಳಾರು | ತಿರುಗಿದನಲ್ಲೀಲಕ್ಷಿಸಾದೆ ಮೆರೆಯುತಿದ್ದ | ಕಾಣದಂತಲ್ಲಿ3 ಕಟ್ಟಕಡೆಗೆ ಸವೆದ ನಾಣ್ಯ | ಚೀಲ ವೆಸೆಯುತ್ತಕಟ್ಟು ಮಾಡ್ದ ದುಡ್ಡೊಂದನ್ನು | ಕೊಳ್ಳೆಂದೆನುತ್ತ ||ಅಟ್ಟುಗಳಿಗೆ ಬೇಸರಿಸಿ | ಮುಂದೆ ಹೋಗುತ್ತ |ಥಟ್ಟನ್ಹೋದ ಹಿತ್ತಲಿನ | ಕದವ ಸಾರುತ್ತ 4 ಅಲ್ಲಿನಿಂತ ಲೋಭಿ ಸತಿಯ | ಬಳಿಗೆ ಪೋಗುತ್ತಬಲ್ಲ ಹರಿಯ ಧನವ ಬೇಡ್ದ | ಮುಂಜಿಗೆನ್ನುತ್ತ ||ನಲ್ಲ ಬೈವನೆಂದು ಬೆದರಿ | ಇಲ್ಲವೆನ್ನುತ್ತಚೆಲ್ವ ಸತಿಯು ಪೇಳೆ ಅವಳ | ಮೂಗ್ತಿ ನೋಡುತ್ತ 5 ತವರು ಮನೆಯ ದ್ರವ್ಯದಾನ | ಮಾಡು ನೀನೆಂದಅವಳು ತನ್ನ ಮೂಗುತಿಯ | ಕೊಟ್ಟುದೆ ಛಂದ ||ಇವನು ಅದನ ಸಾಹುಕಾರ್ನ | ಮುಂದಾಕಿ ಅಂದಜವದಿ ನಾನೂರ್ಪಾಕಿ ಹಣ | ತನಗೆ ಬೇಕೆಂದ 6 ನಾಯಕನು ಕೈಲಿ ತೆಗೆದು ನೋಡುತ್ತಲಿರೇಶ್ರೀಯರಸ ಪೋದತಾನು | ಕಣ್ಣಿಗೆ ಮರೇ ||ಕಾಯುತ್ತಿದ್ದ ಆಳು ಹಿಡುಕಿ | ಸಿಗದೆತಾಬರೇನಾಯಕನದ ಭದ್ರಮಾಡಿ | ಸತಿಬಳಿಗೆ ಬರೇ 7 ಬರಿಯ ನಾಸಿಕವ ನೋಡಿ | ಮೂಗ್ತಿ ಎಲ್ಲೆನಲುಸರಿಯ ಪಡಿಸಲಿಕ್ಕೆ ಕೊಟ್ಟು | ಇರುವೆ ನೆನ್ನಲುತ್ವರದಿ ತೋರದಿರೆ ನಿನ್ನ | ಅರೆವೆ ನೆನ್ನಲು |ಬರುವೆ ಬೇಗ ಎಂದು ಪೋಗಿ | ಗರದ ಬಟ್ಟಲು 8 ಕರದಿ ಪಿಡಿದು ತುಳಸಿ ಮುಂದೆ | ಮೊರೆಯ ನಿಡುತಿರೇಗರದ ಬಟ್ಟಲೊಳು ಬಿದ್ದ | ಶಬ್ದವು ಬರೇ ||ಹರುಷದಿ ದಿಗ್ಗನೆ ಎದ್ದು | ಪತಿಗೆ ತಾತೋರೇಗರ ಹೊಡೆದಂತವನಾಗಿ | ಮೋರೆಯ ತೋರೇ 9 ಹೆಂಡತಿಯ ಕೇಳಿ ತಿಳಿದ | ಆದ ಪರಿಯಾಮಂಡೆ ಬಾಗಿ ತಾನು ಆದ | ಹೊಸ ಪರಿಯಾ ||ಕೊಂಡಾಡಿದ ಪತ್ನಿ ಚರ್ಯ | ಹರಿಯ ಭಕ್ತಿಯಬಂಡುಣಿ ಹರಿಪಾದಾಬ್ಜದಿ | ತೊರೆದ ಮನೆಯ 10 ಪಾದ ನಮಿಸೀಬಾರಿ ಬಾರಿ ಹರಿಯ ತತ್ವ | ಕೇಳಿ ಸುಖಿಸೀ 11 ಪುರಂದರ ಸಾರ ಭಾಷೆ | ಪ್ರಾಕೃತ ವೆನಿಸೀ 12 ಮೂರ್ತಿ ಸುಂದರತೊಂಡನಾದ ಮೇಲೆ ತನ್ನ | ಹೃದಯ ಮಂದಿರ ||ಪಿಂಡ ಅಂಡದೊಳಗೆ ಕಂಡು | ಹಿಗ್ಗಿದ ವಿವರ |ಕಂಡವನೆ ಪೇಳ ಬಲ್ಲ | ಅದರ ವಿಸ್ತಾರ 13 ಪೊಂದಿ ಅಪರೋಕ್ಷವನ್ನು | ಸುಜನರುದ್ಧಾರಛಂದದಿಂದ ಮಾಡಿದಂಥ | ದಾಸವರ್ಯರ ||ಅಂದ ಚರಿತೆ ಕೇಳಿ ತೋಷ | ಪೊಂದಿದವರನಂದ ಕಂದ ಪಾಲಿಸುವ | ಬಿಡದೆ ಅವರಾ 14 ಗೋವ ಕಾವ ಗೊಲ್ಲರೊಡೆಯ | ಗೋಪಿಯ ಬಾಲತಾವಕ ಭಕ್ತರ ಪೊರೆವ | ಪಾಂಡವ ಪಾಲಆವ ದಾಸರ ಪೊರೆದಂತೆ ಮೈದುನ ಪಾಲದೇವ ದೇವ ಪೊರೆವ ಗುರು | ಗೋವಿಂದ ವಿಠಲ 15
--------------
ಗುರುಗೋವಿಂದವಿಠಲರು
ಪಾದ ನಿತ್ಯ 1 ವಾಸುದೇವ ನಿನಗೆ ಒಲಿವ ತಾ ಭಾಸುರ ಕೀರ್ತಿ ತರುವ ಬೇಸರಿಸದೆ ಭಾಸಿ ಪಂಥದಿ ವಾಸುದೇವದಾಸರ ಸೇವಿಸು 2 ಕರುಣ ತೋರಿ ಸಲಹುವಂಥ ಗರುಡಗಮನನಿರಲು ನೀನು ಅರಿಯದಂತೆ ಇರಲು ನಿನ್ನ ಮರುಳು ಮನವೆ ಕಾರಣಿದಕೆ 3 ಕೂಡು ಸಜ್ಜನ ಸಂಗ ತವಕದಿ ಜಾಡುಕೋರ್ವ ಹರಿಭಕ್ತರ ನೋಡು ನಿನ್ನಕ್ಷಿ ತೆರೆದು ಮನುಜ 4 ಜಗಜನ್ಮಾದಿ ಕಾರಣ ಅಘಟನಘಟನಾದ ಹರಿಯ ಮಿಗೆ ಧ್ಯಾನವಿಟ್ಟು ಮನವೆ 5 ಸಲ್ಲ ದುರ್ಜನರಾಸಂಗವು ಸಜ್ಜನರಿಗೆ ಅಲ್ಲ ತಿಂದ ತಿಮ್ಮನಂದದಿ ಬೆಲ್ಲ ಬೇವಿನಂತೀ ಸಂಸಾರದಲ್ಲಿ ಸಿಲುಕಬೇಡ ಮನವೆ 6 ಹರುಷದಿಂದ ಜಡದೇಹದೊಳಗಿಹ ಶ್ರೀ ಹರಿ ಎಂದರಿದು ಪರರ ವಾರ್ತೆ ಆಡದೆ ಪರಮಪುರುಷ ಹರಿಯ ನೆನೆ ಮನುಜ 7 ಹದಿನಾಲ್ಕು ಲೋಕದೊಡೆಯ ಒದಗಿರಲು ನಿನ್ನ ಸಾಕೆ ಬರಿದೆ ಚಿಂತೆ ಮಾಡಬೇಡ ಸ್ಮರಿಸು ಹರಿಯ ಚರಣವನ್ನು8 ಸ್ವಕಾರ್ಯ ಸ್ವಾಮಿಕಾರ್ಯ ನಿನ್ನ ಅಖಿಲ ಕಾರ್ಯಾಂಗತನು ಹರಿಯು ಸಖನಂತೆ ಸಲಹುತಿರಲು ಸುಖಿಸು ಅವನ ದಾಸನೆಂದು 9 ಪಾದ ನಿತ್ಯ ಸಂಗ 10 ಸಕಲರಲ್ಲು ಅವನೇ ನಿಂತು ಸಲಹುವನೆಂದರಿತು ನೀ 11 ನಿತ್ಯ ಅಜ್ಞಾನವನ್ನು ಪರಿಹರಿಸುತ ನಿತ್ಯ ವಂದಿಸು ಮನದಿ 12 ಪಾದ ಧ್ಯಾಸದಿಂದ ಅರಿತೆನಲದೆ ಎಂದರಿತು 13 ಪ್ರಾಣನಾಥನೊ ಹರಿ ಶ್ರೀ ರಾಮಚಂದ್ರನೆಂದು ಅರುಹಿಕೊಟ್ಟು ಸಲಹುವರ 14 ತ್ರಿವಿಧ ಜೀವರಿಗೆ ಹರಿಪರದೈವನೆಂದರುಹಿದ ಪರಮಗುರು ಮತವ ಬಿಟ್ಟು 15
--------------
ಸರಸ್ವತಿ ಬಾಯಿ
ಪಾದಂಗಳ ತೋರಿಸೋ ನಾರಾಯಣ ಪಾದಂಗಳ ತೋರಿಸೊ ಪ ಸಾದರ ಭಕುತಿಯ ನಿನ್ನಲಿ ಇರಿಸೋಮೋದದಿ ಭಜಿಪಂತೆ ನನ್ನದು ಪ್ರೇರಿಸೊ ಅ.ಪ. ನಾಗಾದಿ ಕಪ್ಪತ್ತ ಗಿರಿಯನ್ನೆ ಚಿನ್ನವನ್ನಾಗಿಸಿ ಬಿಡಲೆಂದು ಯತ್ನಿಸುತ್ತಿದ್ದನಾಗಾರ್ಜುನನ ನೀಗಲು ಭುವಿಯೊಳುಬೇಗದಿ ಬಂದಿ ವೀರನಾರಾಯಣ 1 ಮೈಯೊಳು ಕವಚವ ಶಿರದಿ ಕಿರೀಟವಕೈಯೊಳು ಚಕ್ರ ಗದಾ ಶಂಖ ಧರಿಸಿರಯ್ಯನೆ ಗದುಗಿನೊಳಿಳಿದು ಆ ದೈತ್ಯನಹೊಯ್ಯಲು ಬಂದ ಶ್ರೀ ವೀರನಾರಾಯಣ 2 ತೋರ ಕನ್ನಡದಲ್ಲಿ ವರ ಕವಿಯಾದ ಕುಮಾರ ವ್ಯಾಸನಿಂದ ಭಾರತ ರಚಿಸಿದಿಧೀರ ಶ್ರೀ ಪುರಂದರದಾಸರು ಕರೆದಿಹಭಾರತಮಲ್ಲ ಶ್ರೀ ವೀರನಾರಾಯಣ 3
--------------
ವೀರನಾರಾಯಣ
ಪಾದಂಗಳ ನಂಬಿದೆ ಕೊನೆಗೆ ಪ ಜ್ಞಾನಿಯ ಜೊತೆ ಸೆರಲಿಲ್ಲ 1 ಭಕ್ತಿಪಥದಿಮನ ವರ್ತಿಸಲಿಲ್ಲ ಯುಕ್ತಿಯಿಂ ವಿಷಯವಿರಕ್ತನಾನಲ್ಲ 2 ಭಾಗವತರ ಪರಿಚರ್ಯವಿಲ್ಲ 3 ತಂತ್ರದೊಳಗೆ ಜಾಣ್ಮೆಯನಗಿನಿತಿಲ್ಲ 4 ಸಂಗತಿ ವರ್ಜಿಸಲಿಲ್ಲ 5 ದುರುಳ ಕಾಮುಕಸಂಗ ಕಿರಿದಾಗಿಲ್ಲ 6 ಶ್ರೀಪುಲಿಗಿರಿ ವರದ ವಿಠಲನೆ 7
--------------
ಸರಗೂರು ವೆಂಕಟವರದಾರ್ಯರು
ಪಾದತೋರೋ ಪದ್ಮಾಕ್ಷ ಬಾರೋ ಪ. ಪಾದಪದ್ಮವ ತೋರೋ ಪದ್ಮಾಕ್ಷ ಬಾರೋ ಆದಿಮಧ್ಯಾಂತ ಸ್ವರೂಪ ಮೈದೋರೋ ಅ.ಪ. ಬಲಿಯನ್ನು ತುಳಿದಂಥ, ಭೂಮಿಯನಳೆದಂಥ ಶಿಲೆಯಾಗಿದ್ದವಳ ಕಲುಷವ ಕಳೆದಂಥ 1 ಶಿಶುರೂಪದಿಂದಲೆ ಶಕಟನ ಒದ್ದಂಥ ಶಶಿಮುಖಿಯಶೋದೆಗೆ ಶಿಶುವೆನಿಸಿ ಮೆರೆದಂಥ 2 ಗೊಲ್ಲರ ಮನೆಮನೆಗೆ ಕಳ್ಳನಂದದಿಪೊಕ್ಕು ನಲ್ಲೆಯರ ಕೈಪಿಡಿಗೆ ನಿಲ್ಲದೋಡುವ ಮುದ್ದು 3 ಕಾಳಿಂಗನ ಫಣೆಯೊಳ್ ಕೋಲಾಹಲದಿ ಕುಣಿದ ಕಾಳಿಂಗನರಸಿಯರಿಗೆ ತಾಲೀ ಭಾಗ್ಯವನಿತ್ತ4 ಕರುತುರುಗಳ ಮರೆಸಿ ದೊರೆ ನಿನ್ನರಸಿದ ಪರಮೇಷ್ಠಿಯೆ ತನ್ನ ಕರದಿಂ ಪೂಜಿಸಿದಂಥ 5 ಮಾವ ಕಂಸನ ಕೊಂದು ತಾಯಿ ದೇವಕಿ ವಸುದೇವಸುತ ವಾಸುದೇವನೆಂದೆನಿಸಿದ 6 ಸಿರಿದೇವಿಯೇ ನಿಜಕರಗಳಿಂದೊತ್ತುವ ಪರಮಪಾವನ ಪದಸರಸೀರುಹ 7 ವರಶೇಷಗಿರಿದೊರೆ ಶರಣರ ಮರೆವರೆ ಶಿರಬಾಗಿ ಬೇಡುವೆ ಭರಿಸೆನ್ನನೆನುವೆ 8
--------------
ನಂಜನಗೂಡು ತಿರುಮಲಾಂಬಾ
ಪಾದದರ್ಶನವೀಯೈ ಜಾನಕೀನಾಥ ಪ ವೇದ ವೇದಾಂತಗಳ ಓದಿದವ ನಾನಲ್ಲ ವಾದ ವಾಕ್ಯಾರ್ಥಗಳ ಭೇದ ಎನಗಿಲ್ಲ ಅ.ಪ ಪಾತಕಂಗಳ ಗೈದು ಭೀತನಾಗಿಹೆನಯ್ಯ ನೀತಿನಿಯಮಗಳಿಂದ ದೂರ ನಾನು ಈತಿ ಬಾಧೆಗಳಿಂದ ನಾ ತಪಿಸುತಿಹೆನಯ್ಯ ಮಾತುಮಾತಿಗೆ ನಿನ್ನ ನಾಮ ಜಪವೀಯೆಂದು 1 ಕೆಸರೊಳಗೆ ಹಾಕುವೆಯೊ ಹೊಸ ಜನುಮವೀಯುವೆಯೊ ಬಿಸಜಾಕ್ಷ ನಿನ್ನ ಮನಬಂದಂತೆ ಮಾಡೊ ಉಸಿರಾಡುವನ್ನೆಗಂ ನಿನ್ನ ಭಜನೆಯ ಗೈಸಿ ರಸ ಕಸಗಳೊಂದೆನಿಸೊ ಮಾಂಗಿರಿಯರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾದಪದ್ಮದೀಕ್ಷಣದ ಸುಖಕಂ||ಅಗಲಲು ಬಾರದೆ ಮನ ದೃಗ್ಯುಗಳವು ಹರಿಪಾದಪದ್ಮದಿ ನೆಲಸೆ ಭಕ್ತರ್‍ತೆಗೆಯದೆ ತಿರುಪತಿ ವೆಂಕಟನಗನಾಥನ ಬೇಡಿಕೊಳ್ಳುತಿಹರೀ ಪರಿುಂಈ ಪಾದಪದ್ಮದೀಕ್ಷಣದ ಸುಖವೇ ಸಾಕುಗೋಪಾಂಗನೆಯರ ಮನಕಮೃತರೂಪಾಗಿರುವ ಪಪದ್ಮವರಳಿದ ಪರಿಯ ಮೃದುವಾಗಿ ತೋರಿಸುವಪದ್ಮಜೆಗೆ ನಿತ್ಯವಾಶ್ರಯವೆನಿಸುವಪದ್ಮಭವ ನೆರೆತೊಳೆದು ಪೂಜಿಸಿದುದೀ ಲೋಕಪದ್ಮಕಾಶ್ರಯವಾಗಿ ತದ್ರೂಪವಾಗಿರುವ 1ಲೋಕಪಾವನ ಗಂಗೆಯನು ಪಡೆದುದೀ ಪಾದಜೋಕೆಯೊಳಗಹಿ ಶಿರದಿ ನೆರೆ ನರ್ತಿಸಿದುದುಬೇಕೆಂದು ಯೋಗಿಗಳ ಹೃದಯಕಮಲದಿ ನೆಲಸಿನೂಕಿ ಭಕ್ತರ ಭವವ ರವಿಯಂತೆ ಹೊಳೆಯುತಿಹ 2ಗೋಪಾಲ ಗೋವುಗಳ ಬಳಿವಿಡಿದು ಸಂಚರಿಸಿಗೋಪಿಯರ ಮನೆಯ ಪಾಲ್ಬೆಣ್ಣೆ ಬಯಸಿಗೋಪ್ಯದಲಿ ನಡೆದವರ ಮನಕಗೋಚರವೆನಿಸಿಗೋಪರೊಡೆಯನ ಮನೆಗೆ ಬಂದು ನೆಲಸುತಲಿರುವ 3ಬಲಿಯ ದಾನವ ಬೇಡಿ ಶಿಲೆಯ ಸತಿಯನು ಮಾಡಿನೆಲನೊತ್ತಿ ಕೌರವನ ಮಕುಟ ಸೋಕಿಥಳಥಳನೆ ಬೆಳಗಿ ತತ್ಸಭೆಯ, ವಿದುರನ ಮನೆಗೆನಲವಿಂದ ನಡೆದವನ ಸಲಹಿದತಿ ಕೋಮಲದ 4ಸುರರು ವಂದಿಸಲವರ ಶಿರದ ಪುಷ್ಪದ ರಾಶಿಸುರಿದು ತಾರಾ ಮಧ್ಯ ಚಂದ್ರನಂತೆನೆರೆಮೆರೆವ ಗುರು ವಾಸುದೇವ ಪಾದ 5ಓಂ ಜಗನ್ನಾಥಾಯ ನಮಃ
--------------
ತಿಮ್ಮಪ್ಪದಾಸರು
ಪಾದವನು ನಂಬಿದೆನೊ ಪರಮಪುರುಷಾ ಪಾವನನ ಮಾಡೆನ್ನ ಶ್ರೀರಂಗನಾಥ ಪ ಪಾದ ಪಾದ ಬಲಿಯ ಪಾದ ಪಾದ 1 ಪಾದ ಪಾದ ಪಾದ ಪಾದ 2 ಪಾದ ಪಾದ ಪಾದ 3 ಪಾದ ಪಾದ ಪಾದ ಪಾದ 4 ದುರುಳ ಕಂಸಾಸುರನ ಎದೆಯ ತುಳಿದ ಪಾದ ಮುಚುಕುಂದಗೆ ಮುಕ್ತಿಯನಿತ್ತ ಪಾದ ಕಿಚ್ಚು ಬಳಸಲು ಪರ್ವತವನೆತ್ತಿದ ಪಾದ5 ಶಿಲೆಯಾದ ಆಹಲ್ಯೆಯನು ಕಾಯ್ದ ಪಾದ ಪಾದ ಹರನ ಧನುವನು ಮುರಿದು ಜಾನಕಿಯ ತಂದ ಪಾದ ಪಾದ 6 ಪಾದ ಪಾದ ಸೇತುಬಂಧನ ಮಾಡಿ ಸೀತೆಯನು ತಂದ ಪಾದ ಪಾದ 7 ಪಾದ ಪಾದ ಪಾದ 8 ರಾಜಸೂಯಾಗದಲಿ ಪೂಜೆಗೊಂಡ ಪಾದ ಪಾದ ದಂತವಕ್ರಾದಿಗಳನು ಸೆಳೆದುಕೊಂಡ ಪಾದ ಪಾದ 9 ಕÀುರುಪಾಂಡವರಿಗೆ ಸಂಧಿಗೈತಂದ ಪಾದ ವಿದುರನಾ ಮನೆಯಲ್ಲಿ ಭೋಜನಗೈದ ಪಾದ ಪಾದ ದುರುಳ ದುರ್ಯೋಧನನ ಉರುಳಿಸಿದ ಶ್ರೀಪಾದ 10 ರಣದೊಳಗೆ ಅರ್ಜುನಗೆ ಸಾರಥಿಯಾದ ಪಾದ ದೊರೆ ಧರ್ಮಾದಿಗಳ [ನು] ಒಲಿದ ಪಾದ ಪಾದ ಪಾದ 11 ಪಾದ ಇಕ್ಷ್ವಾಕು ಶ್ರೀರಾಮರಾರಾಧಿಸಿದ ಪಾದ ಧರ್ಮವರ್ಮಾದಿ ಚೋಳೇಂದ್ರ ಪೂಜಿತ ಪಾದ ಪಾದ 12 ತೊಂಡಮಾನ್ ಚಕ್ರವರ್ತಿಗೊಲಿದು ಬಂದ ಪಾದ ಶೇಷಾದ್ರಿಗಿರಿಯಲ್ಲಿ ನೆಲೆಸಿರ್ಪ ಪಾದ ಪಾದ ಪಾದ 13 ಅಜನ ಯಜ್ಞಕುಂಡದೊಳಗುದಿಸಿ ಬಂದ ಪಾದ ಪಾದ ವ್ಯಾಧರೂಪಿನಲ್ಲಿ ನಡೆತಂದ ಶ್ರೀಪಾದ ಪಾದ 14 ಪಾದ ಯಾದವಾಗಿರಿಯಲ್ಲಿ ನೆಲೆಸಿರ್ಪ ಪಾದ ವರಸಂಧಿಗೃಹದಲ್ಲಿ ವಾಸವಾಗಿಹ ಪಾದ ಪಾದ 15 ಕರುಣದಿಂದರ್ಜುನಿಗೆ ಸಾರಥಿಯಾದ ಪಾದ ಕೈರವಿಣೀ ತೀರದಲಿ ನೆಲೆಸಿರ್ಪ ಪಾದಾ ರುಕ್ಮಿಣೀ ಬಲಭದ್ರರೊಡನೆ ಒಪ್ಪಿದ ಪಾದ ಕರುಣ ವೆಂಕಟಕೃಷ್ಣನೆಂಬೊ ಬಿರುದರಳ್ಳ ಪಾದಾ 16
--------------
ಯದುಗಿರಿಯಮ್ಮ
ಪಾದಸೇವೆಯ ಪಾಲಿಸೋ ಪಂಕಜನಾಭ ಪ ಪಾದಸೇವೆಯ ತೋರೋ ವೇದಗೋಚರ ವ್ಯಾಘ್ರ ಭೂಧರ ವಿಹರಣ ಶ್ರೀಧರ ಹರಿ ನಿನ್ನ ಅ.ಪ ಶೇಷವಾಯುಗಳತಿದೋಷವರ್ಜಿಸಿ ತನು ಶೋಷಿಸಿ ತಪನ ವಿಶೇಷವಾಚರಿಸೆ ದೋಷರಹಿತ ಗುಣಭೂಷಾ ಶೇಷನಿಗೊಲಿದು ಶೇಷಪರ್ವತ ಶಿರೋಭೂಷಣನೆನಿಸಿದ 1 ಬಲಿಚಕ್ರವರ್ತಿಯು ಬಲವೈರಿಯನು ಬಲು ಬಳಲಿಸಿ ರಾಜ್ಯವ ಛಲದಿಂದಾಕ್ರಮಿಸೆ ನಲಿದು ವಾಮನನಾಗಿ ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ಬಲಿಯ ಮೆಟ್ಟಿದ ಧೀರ2 ಪಲಕಾಲ ಶಾಪದಿ ಶಿಲೆಯಾಗಿದ್ದ ಗೌತಮ ಕುಲಸತಿಗೊಲಿದು ನಿರ್ಮಲ ತಪೋವನಕೆ ಸುಳಿದು ಆ ಲಲನೆಯ ಕಲುಷವ ಖಂಡಿಸಿ ಲಲನಾರೂಪವನಿತ್ತು ಸಲಹಿದ ಪಾವನ 3 ತರಣಿತನಯನೆಚ್ಚ ಗರಳಶರವು ಬೇಗ ನರನುತ್ತಮಾಂಗಕೆ ಗುರಿಯಾಗಿ ಬರಲು ಚರಣದುಂಗುಟದಿಂದ ಧರಣೀತಳವನೂರಿ ನರನ ಶಿರವ ಕಾಯ್ದ ನರನಾರಾಯಣ ನಿನ್ನ 4 ಪುಲಿನಾಮದಸುರನು ಛಲದಿ ಮಾಂಡವ್ಯನ ಗಳವಪಿಡಿದು ಬಾಧೆಗೊಳಿಸೆ ವೇಗದಲಿ ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ ಕುಲಜ ಮಾಂಡವ್ಯಗೆ ಒಲಿದ ವರದವಿಠಲ ನಾರಾಯಣ5
--------------
ವೆಂಕಟವರದಾರ್ಯರು
ಪಾದುಕೆಗಳ ಭಾಗ್ಯಶ್ರೀಗುರುವು ಶ್ರೀರಂಗಪಟ್ಟಣಕಾಗಿ ಬಿಜಯಂಗೈದು ಮಠದಲಿಯೋಗಪೀಠದಲಿರ್ದ ಸಮಯದಿ 'ಪ್ರಕುಲ ಬಂದುಆಗ ಚಾತುರ್ಮಾಸ್ಯ ಒದಗಿರಲಾಗಿ ಪ್ರಾರ್ಥನೆಗೈದ ಕಾರಣರಾಗರ'ತನು ವಾಸುದೇವನು ನೆಲಸಿದನು ದಯದಿ 1ತೀರಿ ವ್ರತವನು 'ಶ್ವರೂಪದ ದಾರಿಯಲಿ ಸಂಚರಿಸಿ ಪುನರಪಿಮಾರಹರನಾಲಯದ ಮುಂದಣ ಮಠಕೆ ಬಂದಿರುತಾಸಾರಿ ಸಾಯಂಕಾಲದಲಿ ಕಾವೇರಿಯಲಿ ಸ್ನಾನವನು ಮಾಡಿಯೆನಾರೆಯಣನಾಮವನು ಸ್ಮರಿಸುತ ಬಹುದ ನಾಂ ಕಂಡೆಂ 2ಕಂಡ ಬಳಿಯಲೆ ಭಕ್ತಿಭಾವದಿ ದಂಡದಂತಾನೆರಗೆ ಕೃಪೆುಂಮಂಡೆಯೆತ್ತೇಳಾರು ನೀನೆಂದಾಗ ಮಂದಲಿಸಿಪುಂಡಾರೀಕಾಂಬಕನ ದಾಸನೆ ಗಂಡುಗಲಿಯಾಗಿಹೆಯ ಕ್ಷೇಮವೆಕಂಡೆ'ಂದಿಗೆ ಬಹುದಿವಸಕೆಂದಾಗ ನುಡಿಯುತಿರೆ 3ಆ ಬಳಿಯ ಮನೆುರಲು ಮಾಳಿಗೆ ಶೋಭಿಸುತ ಬೆಳುದಿಂಗಳಿಗೆ ಬಲುಗಾಬರಿಯ ಸಂದಣಿ ಮಹಾನವ'ುಯ ಮಹೋತ್ಸವದಾಕಾಬರಿದ ಮೇಲಿದ್ದ 'ಪ್ರನು ತಾ ಭುಜಿಸಿ ತಾಂಬೂಲಶೇಷವತೂಬಿರಿಯೆ ಮುಕ್ಕುಳಿಸಿ ಗುರುಶಿರದೊಳಗೆ ಬಿದ್ದುದದು4ಹರಹರಾಗುರುಕೃಪೆಯೆಕೋಪವುಬರಬಹುದುನಿನಗೆನುತನುಡಿಯಲು ಗುರುವು ಕಂಡಾ ಬಳಿಯ ಕೇಶವಮೂರ್ತಿಯೆಂಬವನುಅರಿಯದಾದೈ ಮೇಲೆ ಕುಳಿತೀ ಬರುವ ಯತಿಗಳ ನ್ಯಾಯವೇಯೆಂದರುಹಲಾ ದ್ವಿಜಬೆದರಿ ಧುಂ'ುಕ್ಕಿದನು ಭೂತಳಕೆ 5ತಪ್ಪಿದೆನು ದಮ್ಮೈಯ ಗರ್ವವನೊಪ್ಪಿಕೊಳಬೇಕೆನಗೆ ಗತಿಯೇನಪ್ಪುದೋ ಕಂಗಾಣದಾದೆನು ವಾಸುದೇವಾರ್ಯಾತಪ್ಪಿದೆನು ತಪ್ಪಿದೆನು ತಪ್ಪಿದೆ ತಪ್ಪಿದೆನು ತಪ್ಪಿದೆನೆನುತ್ತಲಿಧೊಪ್ಪನಡಗೆಡ'ದರ ತನುವನು ನೋಡ್ದ ಗುರುವರನು 6ತಂದೆ ಬಾ ಯನ್ನಯ್ಯ ಬೆದರದಿರೆಂದಭಯವನು ಕೊಡುತ ಕರುಣಾಸಿಂಧು ವಾಗಮೃತದಲಿ ನೆನಸಿದ ಪರಿಯನೇನೆಂಬೆಕಂದನಪ್ಪನು ಸುಗುಣವಂತನು ಮುಂದಣೀ ದಿವಸಕ್ಕೆ ನಿನಗೆನುತೆಂದು ಮತ್ತವರಾಡಿದುಕ್ತಿಯನೆಂತು ಬಣ್ಣಿಪೆನು 7ಸಹಜ ತಂಬುಲ ಶಿರದ ಮೇಲಕೆ ಬಹುದು ಗುರುಕೃಪೆ ರೂಪವೆತ್ತೀ''ತ ಪ್ರಾಯಶ್ಚಿತ್ತಗೈದುರು 'ರತಿಯನು ಕಲಿಸಿಸಹಜ ಸುಖಸಂ'ತ್ಪದ' ತಾ ಬಹುದುನೊದಗಿಸಿತಾಗಿ ಮುಂದೀಬಹು ಜನರ ಗ್ಠೋಯನು ಬಿಡಿಸಿದುದೆಂದರುತ್ತರವಾ 8ಇರುವುದನುಚಿತ ಜನಸಮೂಹದಿ ಬರುವುದನುಚಿತ ಬರದ ಮಾರ್ಗದಿಕರದು ಮನ್ನಿಸಿ ಜನರ ಕ್ಷೇಮವ ಕೇಳ್ವುದನುಚಿತವುಅರಿಕೆದಟ್ಟಿತು ಮನಕೆ ಗುರು ತಾನುರುಹು ಸಂನ್ಯಾಸವನು ಥೂಯೆಂದಿರದೆ ಮೋರೆಯ ಮೇಲೆ ತಾನುಗುಳಿದನು ಸಿದ್ಧ'ದೂ 9ಪ್ರೇಷೆ ತಾ ಜ್ಞಾನಕ್ಕೆ ಮಾತೃವು ಪ್ರೇಷೆಯೇ ಜ್ಞಾನಕ್ಕೆ ತಂದೆಯುಪ್ರೇಷೆ ಭವಸಾಗರವ ದಾಂಟಿಪ ನಾವೆ ಸುಖಕರವೂಪ್ರೇಷೆ ಸರ್ವೋತ್ಕರುಷವಪ್ಪುದು ಪ್ರೇಷೆಯನ್ನುಚ್ಚರಿಸಿ ಮತ್ತಭಿಲಾಷೆುಂ ಜನಸಂಗಗೈಯ್ಯಲ್ಕಾಯ್ತೆ ನಿಗ್ರಹವೂ 10ಭಲರೆ ಗುರುವರ ಧನ್ಯನಾದೆನು ಮರೆತೆ ತಪ್ಪಿದೆ ಮುಂದೆ ಜನರೊಳಗಿರೆನು ಗುಹೆಯನು ಪೊಕ್ಕು ಮೌನವ್ರತ ಸಮಾಧಿಯಲಿುರುವವೋಲ್ ವೈರಾಗ್ಯವನು ನೀ ಕುರುಣಿಸಿದೆಯೆಂದೆನುತ ನಗುತಲಿಹರುಷದಿಂ ಕಾವೇರಿಗೈತಂದನು ಗುರೂತ್ತಮನು11ಸಾ'ರದ ಸಂಖ್ಯೆಯಲಿ ಮೃತ್ತಿಕೆ ುೀವುದಕ್ಕೆನ್ನುವನು ನೇ'ುಸಿಭಾ'ಸುತ ಪ್ರಣವವನು ಸ್ನಾನವ ಮಾಡಿ ನಿಯಮದಲಿಭಾವವಳಿಸಿ ಕಮಂಡಲವ ಜಲಕೀವ ಸಮಯದಲುಗುಳ್ದ 'ಪ್ರನಭಾವದಲಿ ನಡುಗದಿರು ಸುತನಹನೆಂದ ಗುರುವರನು 12ಏನನೆನ್ನುವೆನಾ ದ್ವಿಜನು ಸುತ 'ೀನನತಿ ಯತ್ನಗಳ ಮಾಡುತಭಾನು'ಂಗೆರಗುತ್ತಲಿದ್ದನು ಪುತ್ರಕಾಮುಕನುಏನು ಕೃಪೆಯೋ ತಿಂಗಳೆರಡಕೆ ಮಾನಿನಿಯು ತಾ ಗರ್ಭದಾಳಿಯೆಸೂನುವನು ತಾ ಪಡೆದಳೀ ಗುರು ಪೇಳ್ದ ದಿವಸದಲಿ 13'ುಂದು ಕಾವೇರಿಯಲಿ ಗುರುವರ ಬಂದು ಮಠಕಾಕ್ಷಣವೆ 'ಪ್ರರಸಂದಣಿಯ ನೆರೆ ಕಳು'ಯೆನಗಪ್ಪಣೆಯ ಕೊಡಲಾಗಿಬಂದು ಮನೆಯೊಳಗಿದ್ದು ರಾತ್ರಿಯು ಸಂದ ಬಳಿಕಾನೈದಿ ನದಿಯೊಳು'ುಂದು ಗುರವರಗೆರಗಲೈದಿಯೆ ಕಾಣೆ ನಾನಲ್ಲಿ 14ಸ್ನಾನಕೈದಿದರೇನೊ ಬಂದರೆ ಕಾಣುವೆನು ನ'ುಸುವೆನುಯೆಂದೇನಾನು ನೋಡಿದೆ ಬಾರದಿರೆ ಮಧ್ಯಾಹ್ನ ಪರಿಯಂತಭಾನು'ಂಗಘ್ರ್ಯವನು ಕೊಟ್ಟು ಮಹಾನುಭಾವರ ನೆನನೆನದು ದುಂಮಾನದಿಂದಿರುತಿದ್ದೆ ಸಾಯಂಕಾಲ ಪರಿಯಂತ 15ಇರುಳಿಗೂ ಬರದಿರಲು ಪಾದುಕೆುರಲು ಪೂಜಿಸಿ ನ'ುಸಿಯಗಲಿದಪರಮ ತಾಪದಿ ಕುದಿದು ರೋದನಗೈದೆ ಪಂಬಲಿಸಿಗುರುವರನೆ ನಿನ್ನಂಘ್ರಿಕಮಲದ ದರುಶನವು ಮರೆಯಾಯ್ತೆ ದೀನನಕರೆದು ಮನ್ನಿಸಿ ಕಾಯ್ದೆಯಲ್ಲೈ ವಾಸುದೇವಾರ್ಯಾ 16ಏನು ಗತಿ ಮುಂದೆನಗೆ ಮಾರ್ಗವದೇನನುಗ್ರ'ಸಿಪ್ಪ ಮಂತ್ರ 'ದೇನು ಜಪಿಸುವ ಮಾನವೆಂತಿದರರ್ಥವೇನಹುದುನಾನರಿಯದವನೆಂಬುದನು ನೀ ಜ್ಞಾನದ್ಟೃಯೊಳರಿದು ರಕ್ಷಿಸುದೀನನನು ಕೈ'ಡಿದು ಬಿಡುವರೆ ವಾಸುದೇವಾರ್ಯಾ 17ಭವಸಮುದ್ರದಿ ಮುಳುಗುತೇಳುತ ಲವಚಿ ತೆಗೆವರ ಕಾಣದಳಲುತಕ'ದು ತಮ ಕಂಗಾಣದಿರೆ ನೀನಾಗಿ ದಯತೋರಿಭವಭವಾಂತರದುರಿತಗಳ ಪರಿಭ'ಸಿಯಭಯವನಿತ್ತು ಸಲ'ದದಿ'ಜವಂದ್ಯನೆಯಗಲಿದೈ ಶ್ರೀ ವಾಸುದೇವಾರ್ಯಾ 18ಅರಿಯೆ ಹೃತ್ಕಮಲದಲಿ ಭಾ'ಪ ಪರಿಯನಿದಿರಿಟ್ಟಿರಲು ನೀ ಶುಭಕರದ ಮೂರುತಿಯಾಗಿ ಗ್ರಂಥಾರ್ಥಗಳ ಶೋಧಿಸಿಯೆಅರಿಯಬೇಕೆಂಬಿಚ್ಛೆ ಬರಲಿಲ್ಲುರುವ ನಿನ್ನಯ ವಾಗಮೃತ ರಸಸುರಿಯೆ ತಾನೇ ಪಾನಗೈಯುತ ಮತ್ತನಾಗಿದ್ದೆ 19ಜೀ'ಸುವೆ ನಾನೆಂತು ಧರೆಯೊಳು ಪಾವನದ ಮೂರುತಿಯ ಕಾಣದೆಭಾವದಲಿ ಸುಖಗೊಳಿಪ ವಾಕ್ಸುಧೆಯರತ ಕಾರಣದಿಂದೇವ ಮರೆಯಪರಾಧ'ದ್ದರು ಕಾವ ಕರುಣೆಗೆ ಕೋಪವೇ ಸಂಜೀವ ನೀ ಭುವನಕ್ಕೆ ತೋರೈ ವಾಸುದೇವಾರ್ಯಾ 20ಮೊರೆುಡುತಲೀ ರೀತಿುಂದಿರುತಿರಲು ಪಾದುಕೆಗಳಿಗೆ ನ'ುಸುತಬರಲು ಪಲ್ಲವ ಬಾಯ್ಗೆ ಗುರುಕೃಪೆುಂದ ತಾನಾಗಿತಿರುಪತಿಯ ವೆಂಕಟನೆ ಮೂರ್ತಿಯ ಧರಿಸಿ ಯತಿವರನೆನಿಸಿದುದನಾಹರುಷದಿಂ ಪಾಡಿದೆನು ಕೀರ್ತನ ನೆವದಿ ಮೈಮರೆದೂ 21
--------------
ತಿಮ್ಮಪ್ಪದಾಸರು