ಒಟ್ಟು 8293 ಕಡೆಗಳಲ್ಲಿ , 131 ದಾಸರು , 4393 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವತಾ ಸ್ತುತಿ ರಾಧೆ ತಿಲಕದ ಒಲುಮೆ ಮೇಲು ರಾಧೇ ನಿನ್ನ ತಿಲಕದೊಲುಮೆ ಪ ತಿಲಕದೊಲುಮೆ ಹರಿ ಬಂಧ ಒಲುಮೆ ಘಿÀಲುಘಿÀಲುಕುಲು ಗೆಜ್ಜೆ ಕಾಲು ರಾಧೇ ನಿನ್ನ ಅ.ಪ. ಕುಂಕುಮ ಕರದು ಹಚ್ಚಿ ವಂಕಿ ಬಾಜು ಬಂದಿನಿಟ್ಟು ಪಂಕಜಾಕ್ಷನೆತ್ತಿಕೊಂಬೊ ತೋಳು ರಾಧೆ ನಿನ್ನ 1 ಉಟ್ಟುದು ಪೈಠಣಿ ಸೀರೆ ತೊಟ್ಟುದು ಬುಟ್ಟುದ ಕುಪ್ಪಸ ಮುಟ್ಟಿದರೆ ಮಾಸುವದು ಶಾಲು ರಾಧೇ ನಿನ್ನ 2 ಕೈಗೆ ಬಂಗಾರದ ಬಳೆ ಕಿವಿಗೆ ಪರಿಜನ ವಾಲೆ ರಂಗಯ್ಯ ಕರೆದರೆ ನೀ ಹೋ ಎಂಬೊ ರಾಧೆ ನಿನ್ನ 3 ಮಂಗಳಸೂತ್ರವು ಬೆಳದಿಂಗಳು ಪೊಳೆವಂತೆ ತೆಂಗು ಬ್ಯಾಳೆ ಮಣಿಯೆಣ್ಣೆ ನೂಲು ರಾಧೆ ನಿನ್ನ 4 ಪಿಲ್ಯ ಕಾಲುಂಗುರ ಕಿರು ಬಲ್ಯ ಆಣಿಮೆಂಟು ಧೈರ್ಯದಲಿ ಮೆರೆವ ಗಿಳಿಗೇಲು ರಾಧೆ ನಿನ್ನ 5 ಚೌರಿ ರಾಗಟಿ ಗೊಂಡೆ ಹೆರಳು ಬಂಗಾರವೂ ಚಂದಿರ ಪ್ರಫುಲ್ಲ ಮುತ್ತಿನ ಬಟ್ಟು ರಾಧೆ ನಿನ್ನ6 ದಿಟ್ಟ ಹಗಲೊಳು ಶ್ರೀದವಿಠಲನ್ನ ಯೇರಿಕೊಂಡು ಬಟ್ಟ ಬಯಲೊಳಗೆ ಕೇಳೇ ರಾಧೆ ನಿನ್ನ 7
--------------
ಶ್ರೀದವಿಠಲರು
ದೇವತಾಸ್ತುತಿ ಮತ್ತು ಗುರುಸ್ತುತಿ ಅರಸಿನಂತೆ ಬಂಟನೋ ಹನುಮರಾಯ ಪ ಅರಸಿನಂತೆ ಬಂಟನೆಂಬುದ ನೀನುಕುರುಹು ತೋರಿದೆ ಮೂರು ಲೋಕಕೆ ಹನುಮ ಅ ಒಡೆಯನಂಬುಧಿಯೊಳು ಪೊಕ್ಕು ದೈತ್ಯನ ಕೊಂದುತಡೆಯದೆ ಶ್ರುತಿಯನಜಗಿತ್ತನೆಂದುಸಡಗರದಿಂದ ಶರಧಿಯ ದಾಂಟಿ ಮಹಿಜೆ ಪೆ-ರ್ಮುಡಿಯ ಮಾಣಿಕವ ರಾಘವಗಿತ್ತೆ ಹನುಮ 1 ಮಂದರಧರ ಗೋವರ್ಧನ ಗಿರಿಯನು ಲೀಲೆ-ಯಿಂದಲಿ ನಿಂದು ನೆಗಹಿದನೆಂದುಸಿಂಧು ಬಂಧನಕೆ ಸಮಸ್ತ ಪರ್ವತಗಳತಂದು ನಳನ ಕೈಯೊಳಗಿತ್ತೆ ಹನುಮ2 ಸಿರಿಧರ ವರ ಕಾಗಿನೆಲೆಯಾದಿಕೇಶವಸುರರಿಗಮೃತವನು ಎರೆದನೆಂದುವರ ಸಂಜೀವನವ ತಂದು ಸೌಮಿತ್ರಿಗಂದುಎರೆದು ಶ್ರೀರಾಮನ ನಿಜದೂತನೆನಿಸಿದೆ ಹನುಮ 3
--------------
ಕನಕದಾಸ
ದೇವದೇವತೆಗಳ ಸ್ತುತಿ ವೀರನ ನೋಡಿರೈ ನರಮೃಗಾಕಾರನ ಪಾಡಿರೈ ಪ ಕಾರ್ಪರ ಋಷಿ ತಪಕೊಲಿದು ಅಶ್ವತ್ಥದಿ ಮೆರೆವಾ ಭಕುತರ ಪೊರೆವಾ ಅ.ಪ ದುರಿತ ತಿಮಿರಕೆ ಸವಿತ ವ್ರಾತ ಸೇವಿತ ತ್ವರಿತ ಮಧ್ಬಂಧು ಪೊರೆಯೊನೀನೆಂದು ಪ್ರಾರ್ಥಿಸುವರಿಗಭೀಷ್ಟಿಯಗರಿಯಲು ದೇವ ತರುಸ್ವಭಾವ 1 ಉಗ್ರನಾದರು ಭಕುತಾಗ್ರಣಿಗಳಿಗೆ ಅನುಗ್ರ ಒಲಿವನು ಶೀಘ್ರ ವಾಗ್ಧೇವಿಯರ ಸನಾಜ್ಞದಿ ನಮಿಸಿ ಪ್ರಹ್ಲಾದ ಸ್ತುತಿಸಲು ಒಲಿದ ಉಗ್ರವದನ ಶಾಲಿಗ್ರಾಮಗಳ ರೂಪದಲಿ ವೃ- ಭಾರ್ಗವಿ ಪ್ರಕಟನಾಗಿಹನ 2 ತೋರಿಸುವದಕೆ ಅಸುರನ ಮಥಿಸಿ ನೆಲಸಿಕರುಣದಿ ದಿವಿಜರೊಡೆಯನ3 ಪೋಪುದು ವೃಜಿನ ತಿಳಿವದು ಮುನ್ನ ಭಾನು ಕರ್ಕಾಟಸ್ಥಾನದಿ ಬರುವ ಕಾಲದಲಿ ತೀರ್ಥಗಳಲ್ಲಿ ಹೃದಯದಿ ಪೊಳಿವ 4 ತರುವರ ಸಂಸ್ಥಾ ಚರಿತ ತ್ರಿಗುಣಾತೀತ ಪದಯುಗಲ ಬಿಡದನುಗಾಲ ಸಾರಿ ಭಜಿಪರಿಗಪಾರ ಸೌಖ್ಯಗಳ ಗರಿವ ವಿಘ್ನವ ತರಿವ5
--------------
ಕಾರ್ಪರ ನರಹರಿದಾಸರು
ದೇವನ ನೆರೆನಂಬಿರೊ ಶ್ರೀವರ ವೇಲಾಪುರಿಯ ಚೆನ್ನಿಗನ ಪ ಕರೆಯರಿಗೊರಳಭವನ ಕೃಪೆಯಿಂದ ದಶಗ್ರೀವ ನೆರೆಭಾಗ್ಯಪಡೆದು ಗರ್ವದೊಳಿರಲು ಅರೆಯಟ್ಟಿ ಶಿರಗಳ ಕುಟ್ಟಿಹಾಕಿ ತನ್ನ ಮೊರೆಹೊಕ್ಕ ವಿಭೀಷಣಗೆ ಪಟ್ಟಗಟ್ಟಿದ 1 ಭಾಗೀರಥಿಯ ತಾಳ್ದ ಮಹೇಶನ ತಲೆ ವಾಗಿಲ ಕಾಯಿಸಿಕೊಂಡಿಹ ಬಾಣನ ತಾಗಿ ತೋಳಕಡಿದ ಸುರನ ಕುಮಾರತಿಗೆ ಭೋಗಿಸುವಂತೆ ತಮ್ಮಗೆ ಕೈವರ್ತಿಸಿ ಕೊಟ್ಟ2 ಲೋಕದೊಳಜಭವಾದಿಗಳಿಂದ ಉಬ್ಬಿದ ಅ- ನೇಕ ರಕ್ಕಸರನೊಟ್ಟಿಗೆ ತಾಹೆನು- ತಾ ಕೊಟ್ಟ ವರವನೆ ಶಿರಮುಟ್ಟಿ ಕೊಂಡಾ ಕರು ಣಾಕರ ವರ ವೇಲಾಪುರಿಯ ಚೆನ್ನಿಗನ 3
--------------
ಬೇಲೂರು ವೈಕುಂಠದಾಸರು
ದೇವರಾಗಬಾರದೇನೆಲೇ ದೆವ್ವಿನಂಥ....... ದೇವರಾಗಬಾರದೇನೆಲೇ ಪ ದೇವರಾಗಬಾರದೇಕೋದೇವನ ಪಾದವನಂಬಿ ಕಾವುಮೀರಿ ಹೋದಮೇಲೆ ಬಾಯಬಿಟ್ಟರೆ ಬರುವುದೇನೆಲೆ ಅ.ಪ ತಂದ ಬುತ್ತಿ ಚೆನ್ನಾಗುಣ್ಣೆಲೆ ನೀನದನು ಒಲ್ಲೆ ನೆಂದರೆ ಬಿಟ್ಟ್ಹೋಗ್ವುದೇನೆಲೆ ಹೇ ಪಾಪಿ ನೀನು ಬಂದಹಾದಿ ನೋಡಿಕೊಳ್ಳೆಲೆ ಮುಂದಿದರಿಯೆಲೆ ಬಿಂದುಮಾತ್ರಸುಖಕೆ ಮೋಹಿಸಿ ಪರ್ವತಾಕಾರ ಪಾಪಹೊತ್ತು ಬಂಧಕ್ಕೀಡಾಗುವುದಿದೇನೆಲೆ 1 ನಾಶನಾಗಿ ಹೋಗುತಾದೆಲೇ ಈ ಜಗವು ಒಂದಿನ ಆಸೆಯೆಂಬ ಕುಳಿ ಧುಮುಕ ಬೇಡೆಲೆ ಮಹನೀತಿವಿಡಿದು ನಾಶವಾಗದಪದವಿ ಗಳಿಸೆಲೇ ಸೋಸಿನೋಡೆಲೆ ಮೋಸಮರವೆಯಿಂ ನಾಶವಾಗದೆ ಹೇಸಿಸಂಸಾರ ನಾಮ ಭಜಿಸಿ 2 ಉಟ್ಟ ಸೀರೆಬಿಟ್ಟು ಹೋಗಿದ್ದ್ಯಂತೆ ಹೇ ಹುಚ್ಚು....... ಎಷ್ಟೋಸಾರಿ ಹುಟ್ಟ್ಹುಟ್ಟಿದರಂತೆ ಈ ಕಾಯಧರಿಸಿ ಬಿಟ್ಟುಹೋಗೇದಸ್ತಿ ಪರ್ವತ್ಹೋಲ್ವಂತೆ ಕೆಟ್ಟು ಬಿದ್ದೈತೆ ದುಷ್ಟಭ್ರಷ್ಟತೆಗಳನ್ನು ಬಿಟ್ಟು ಶಿಷ್ಟಸಂಗಕೆ ಮನವಗೊಟ್ಟು ಸೃಷ್ಟಿ ಗೀರೇಳು ಸೂತ್ರನಾದ ದಿಟ್ಟ ಶ್ರೀರಾಮನಡಿಗೆ ಪೊಂದಿ 3
--------------
ರಾಮದಾಸರು
ದೇವಾದಿ ದೇವ ನಮೋ ಶ್ರೀ ಸತ್ಯದೇವ ಪ ದೇವಾದಿ ದೇವ ಹರಿ ಗೋವಿಂದ ಮುಕುಂದ ಭಾವಜನಕ ಸದ್ಭಾವುಕ ಜನಪ್ರಿಯ ಅ.ಪ. ಶ್ರೀಶಾ ಶಶಿಕೋಟಿ ಸಂಕಾಶ ಸುಶೋಭಿತ ದರಹಾಸ ಸುಜನ ಪರಿಪೋಷ ಸನ್ನುತ ಸರ್ವೇಶ ಈಶಾ ಈ ಸಮಸ್ತ ಜಗದೀಶನೆಂದು ನಿನ್ನ ನಾ ಸ್ತುತಿಸುವೆ ಮನದಾಸೆಯ ಸಲ್ಲಿಸೊ ವಾಸವಾದಿ ಸುರಮಹಿಮ ಪ ರೇಶ ಪೂರ್ಣಗುಣ ದಾಸಜನಾವನ ಕ್ಲೇಶವ ಕಳೆದಿನ್ನು ನೀ ಸರ್ವದ ಎನ್ನ ಪೋಷಿಸು ಕರಿಗಿರಿ ವಾಸ ಶ್ರೀ ನರಹರಿ 1
--------------
ವರಾವಾಣಿರಾಮರಾಯದಾಸರು
ದೇವಾಧಿದೇವ ನೀನಹುದೊ ಶ್ರೀಹರಿ ಕಾವಕರುಣ ನೀನೆ ಮುರಾರಿ ಧ್ರುವ ಕಮಲಭವಾರ್ಜಿತ ಕಾರುಣ್ಯ ಶೀಲ ವಿಮಲ ವಿರಾಜಿತ ಮದನಗೋಪಾಲ 1 ಕನಕಾಂಬರಧರ ಕಸ್ತೂರಿತಿಲಕ ಸನಕಾದಿವಂದ್ಯ ಶರಣ ರಕ್ಷಕ 2 ಅಗಣಿತ ಮಹಿಮ ಅವರುಜ ನೇತ್ರ ನೀನಹುದೊ ನಿಸ್ಸೀಮ 3 ಮುನಿಜನ ಪಾಲಕ ಮಾಮನೋಹರ ಘನಸುಖದಾಯಕ ಸು ಜನ ಸಹಕಾರ 4 ಭಾನುಕೋಟಿತೇಜ ನೀನೆ ಸುಹೃದಯ ದೀನದಯಾಳು ನೀನಹುದೊ ಮಹಿಪತಿಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಾನಾ ಮೂರು ಲೋಕಂಗಳನುನೆರೆ ಕಾವಾನಾ ಶರಣಾಗತ ಸಂ ಜೀವಾನ ರೂಪ ಕಂಡೆ ಕೈಯಡಿಯಾ ಪ ಧಗಧಗಿಸುವ ಕೋಟಿ ದಿವಾಕರ ಕಿರಣಗಳ ಧೃಗುಳುಗಳ ಕಾಂತಿಯ ಮೊಗೆದು ಚೆಲ್ಲುತ ಪಾ ಲೊಗುವ ಕದಪಿಲಿ ಢಾಳಿಪ ಕುಂಡಲಂಗಳಾ 1 ತಿಲಕದ ಕುಡಿವರಿದಿಹ ಪುರ್ಬುಗಳ ಮಂ ಹೇಮ ಚಂಪಕದ ನಾಸಿಕದಾ ಜಲಜ ಕಸ್ತೂರಿ ಕಪ್ಪುರದ ಕಂಪಿನ ಸುಲಿಪಲ್ಲಿನ ಬಾಯಿದೆರೆಯ ಚೆಲುವನುಳ್ಳಾ 2 ತೋರಮಂದಾರ ತುಲಸೀ ವನಮಾಲೆ ಕೊರಳ ಹಾರ ಪೇರುರದಾ ಶ್ರೀ ಚಂದನದಾ ವಾರಿಜಪಾಣಿಯುಗದೆ ಶಂಖಚಕ್ರ ಸ- ರೋರುಹ ಕರದಲಭಯವಿತ್ತು ಸಲಹುವಾ 3 ಅಂದು ಜಘನದಿ ಕರವಿಟ್ಟು ಪೊಂಬಟ್ಟೆಯನುಟ್ಟು ಮಣಿ ಬಿರುಡೆಯವಿಟ್ಟು ಸ ನ್ಮುದದಿ ವೀರಮುದ್ರಿಕೆ ಮಂಡಿಕಾಗಳನಿವಿಟ್ಟು ಮೃದುಪಾದನಖದಿ ಮೂಜಗವ ಬೆಳಗುತಿಹ4 ಪಾವಕ ವರಕಾಂತಿಯ ಗೆಲುವಾ ಜಾಜಿ ಸೇವಂತಿಗೆ ಮೃದುವನು ಸೋಲಿಪಡಿಗಳಾ ಶ್ರೀ ವೆಲಾ ಪುರದ ವೈಕುಂಠೇಶ ವೇಂಕಟಾದ್ರೀಶಾ 5
--------------
ಬೇಲೂರು ವೈಕುಂಠದಾಸರು
ದೇವಿ ನಿನ್ನಯ ಮುಡಿಮ್ಯಾಲಿದ್ದ ಮಲ್ಲಿಗೆ- ಹೂವ ಕೊಡೆ ನೀ ವರವ ಕೊಡೆ ಪ ಕಟ್ಟ್ಟುವೊ ತೊಟ್ಟ್ಟಿಲ್ಹುಟ್ಟುವೊ ಗಂಡು ಮಕ್ಕಳು ಮುತ್ತೈದೆತನವ ಮುದದಿ ಬೇಡುವೆ ಶ್ರೀ ಮಾಲಕ್ಷ್ಮಿಯೆ ನಮಗೆ ದಯಮಾಡೆ 1 ಅಂದಣ ರಥ ಬಂದ್ಹೋಗುವೋ ಹೆಣ್ಣು ಮಕ್ಕಳು ಬಂಧುಗಳಿಗೆಲ್ಲ ಬಲುಕ್ಷೇಮ ಬಂಧುಗಳಿಗೆಲ್ಲ ಬಲುಕ್ಷೇಮ ಇರುವಂತೆ ಇಂದಿರಾದೇವಿ ದಯಮಾಡೆ 2 ದಂಪತಿ ನಲಿಸುತ ಸಂಪತ್ತು ಸೌಭಾಗ್ಯ ಇಂಥ ಮಂದಿರಕೆ ಬಹುಮಾನ ಇಂಥ ಮಂದಿರಕೆ ಬಹುಮಾನಯಿರುವಂತೆ ಸಂತೋಷದಿ ವರವ ದಯಮಾಡೆ 3 ಅನ್ನ ಗೋವ್ಗಳು ದಿವ್ಯ ಕನ್ಯಾ ಭೂದಾನಹಿ- ರಣ್ಯದಾನಗಳ ಹಿತದಿಂದ ಹಿ- ರಣ್ಯದಾನಗಳ ಹಿತದಿಂದ ಮಾಡುವಂತೆ ಸಂ- ಪನ್ನ ನೀ ವರವ ದಯಮಾಡೆ 4 ಇಂದಿಗೆ ಮನೋಭೀಷ್ಟ ಎಂದೆಂದಿಗೆ ನಿನಪಾದ ಹೊಂದಿರಲೆಂದೂ ಮರೆಯದೆ ಹೊಂದಿರಲೆಂದೂ ಮರೆಯದೆ ಭೀಮೇಶಕೃಷ್ಣನ- ರ್ಧಾಂಗಿ ನೀ ವÀರವ ದಯಮಾಡೆ 5
--------------
ಹರಪನಹಳ್ಳಿಭೀಮವ್ವ
ದೇವಿ ನೀ ಗಿರಿಜಾತೆಯು ನಿನ್ನಯ ಕಾಂತ ರಜತಾಖ್ಯಗಿರಿನಾಥನು ನೀನು ಭವಾನಿಯು ನಿನ್ನ ಕಾಂತನು ಭವದೇವನಾಗಿರುವ ಪ ನಿನ್ನ ಯೌವನಭಂಗದ ಭೀತಿಯ ಕಂಡು ವಿಘ್ನೇಶನನು ಪುಟ್ಟಿಸಿ ಪ್ರಣಾತ್ಮಗಳನೊಬ್ಬ ತನುಜಗೆ ಕಲ್ಪಿಸಿ ಕೃತಕೃತ್ಯನಾದ ನಿನ್ನರಸ ಕಾಣಮ್ಮ 1 ನಿನ್ನ ಕಾಂತನು ಪಾರ್ಥನಿಗೆ ಬಾಣವನೀಯಲು ನೀನು ಅಂಜಲಿಕಾಸ್ತ್ರವನು ಪ್ರೇಮದಿ ನಿನ್ನ ಕಾಂಚನ ಚಿತ್ತವರಿತು ಕೊಡಲು ನಿನ್ನೊಳ್ ಪಾರ್ಥಸೂತನ ದಯವೆಷ್ಟೆಂಬೆ 2 ರಾಜೇಶ ಹಯಮುಖನÀ ದಯದಿಂದ ನಿನ್ನ ಪತಿ ವಿಷವ ಜೀರ್ಣಿಸಿಕೊಂಡನು ರಜತಾದ್ರಿಯೊಳಗಿರುವ ಶಿತಿಕಂಠ ಶಂಕರನ ಮಹಿಮೆಯದ್ಭುತವಲ್ಲವೇ ಪೇಳು ಗಿರಿಜೆ 3
--------------
ವಿಶ್ವೇಂದ್ರತೀರ್ಥ
ದೇವಿ ಯಶೋದೆಯು ದೇವ ಶ್ರೀ ಕೃಷ್ಣಗೆ ಪ. ಅಷ್ಟು ಬ್ರಹ್ಮಾಂಡವ ಪೊಟ್ಟೆಯೊಳಿಂಬಿಟ್ಟ ದಿಟ್ಟ ಶ್ರೀ ಕೃಷ್ಣಗೆ ಸೃಷ್ಟಿಯೊಳ್ ಸುಖಿಸೆಂದು 1 ದಿಟ್ಟಡಿಯಿಡುತಲಿ ದಿಟ್ಟ ಲೀಲೆಗಳನ್ನು ನೀ ನಷ್ಟು ತೋರಿಸು ಎಂದು ಪುಟ್ಟ ಶ್ರೀ ಕೃಷ್ಣನ 2 ಅಷ್ಟೈಶ್ವರ್ಯದಿ ದಿಟ್ಟ ಶ್ರೀ ಶ್ರೀನಿವಾಸ ಸುಖಿಸೆಂದು 3
--------------
ಸರಸ್ವತಿ ಬಾಯಿ
ದೇವಿ ಲಕ್ಷಣೆ ಎಮ್ಮ ಸಲಹ ಬೇಕಮ್ಮಭಾವದಲಿ ನೀನಿದ್ದು ಭಾವನಯ್ಯನ ತೋರೀ ಪ ಪಿತನು ಬೃಹತ್ಸೇನ ನಿನಗಾಗಿ ಸ್ವಯಂವರವಹಿತದಿಂದಲೆಸಗುತ್ತ ಲಕ್ಷ್ಯವನೆ ಬಿಗಿದೂ |ಅತಿಶಯದ ಧನುವಿಗೆ ಸಜ್ಜಿಸುತ ಬಾಣವನುಚತುರತೆಲಿ ಭೇದಿಪಗೆ ಸುತೆಯ ಪಣವೆಂದ1 ಮತ್ಸ್ಯ ಯಂತ್ರವಿದಲ್ಲಔಪಚಾರಿಕವೆಲ್ಲ ಸರ್ವವಿಧ ಛನ್ನಾ |ವೈಪರೀತ್ಯದಿ ದ್ವಾರ ಉಪರಿ ಇರುವುದು ಕೇಳಿಕಾಪುರುಷಗಿದು ಕಾಂಬ ಮಾರ್ಗವೇ ಇಲ್ಲ 2 ಸೂತನುತ ಮಾಗಧನು ಕೌತುಕದ ಕೌರವರುಪಾರ್ಥನೂ ಅವನಣ್ಣ ಭೀಮಸೇನಾ |ಆತು ಧನುವನು ಲಕ್ಷ್ಯ ಭೇದಿಸಲೆ ಬೇಕೆಂದುಪೃಥಿವಿಪರು ಮತ್ತಿತರು ಬಂದು ಸೇರಿದರು 3 ಸಜ್ಜುಗೈಯಲು 5ನುವ ಆರಿಂದಲಾಗದಿರೆಲಜ್ಯೆಯಿಂದಲಿ ಮರಳಿ 5ೀಗುವರೆ ಬಹಳ |ಅರ್ಜುನನು ತಾನೊಬ್ಬ ಲಕ್ಷ್ಯವೀಕ್ಷಣ ಶಕ್ತಅರ್ಜುನಾಗ್ರಜ ಹರಿಗೆ ಅಪರಾಧವೆನೆ ಸರಿದ 4 ನೆರೆದ ಸಭೆಯಲ್ಲಿ ಪುಷ್ಪಹಾರವನೆ ಪಿಡಿಯುತ್ತಬರುತ ವೈಯ್ಯಾರದಲಿ ಶಿರಿ ಕೃಷ್ಣ ಕಂಠದಲ್ಲಿ |ಇರಿಸಿ ಪರಮಾನಂದ ಭರಿತಳಾಗಲು ಹರಿಯುಕರಪಿಡಿದು ಹೊರವಂಟ ತನ್ನ ದ್ವಾರಕಿಗೇ 5 ಪರಿ ಪರಿ ಪುಷ್ಪ ವೃಷ್ಟಿಗಳ ಗರೆಯೇ |ದುರುಳರೆದುರಾಗಿ ಸಂಗರಕೆ ಬರುತಿರಲುಹರಿ ಭೀಮರೆದುರಿಸದೆ ದುರುಳರೋಡಿದರು 6 ಮೋದ ಬಡುವಂಥ |ಧೀವರರ ಮನೋಭೀಷ್ಟ ಪೂರ್ಣವನೆ ಗೈಯ್ಯುವನುದೇವ ಗುರು ಗೋವಿಂದ ವಿಠಲ ಕೃಪೆಯಿಂದ 7
--------------
ಗುರುಗೋವಿಂದವಿಠಲರು
ದೇಶದೊಳಗೀ ಕ್ಷೇತ್ರ ಬಲು ಉತ್ತಮಾ ದಾಸೋಹಂ ಎಂದೆನಲು ಗತಿಗೆ ಪಥವ ಕೊಡುವ ಪ ಹರಿಸರ್ವೋತ್ತಮನೆಂದು ನೆರಪಿದಂಥ ಮುನಿ ವರನ ಶಾಪದಲಿ ಪಾವಕನು ಬಂದು ಪರಮತಪ ಮಾಡಿದನು ವರವಿತ್ತ ಪುಷ್ಕರಣಿ ಎನಿಸುವುದು1 ದಿವಿಜರಿಗೆ ಸೋತು ದಾನವರು ಶುಕ್ರಗೆ ಹೇಳಿ ಶಿವನೊಲಿಸೆ ಅಮೃತವ ಮಾಳ್ಪೆನೆಂದು ಕವಿ ಇಲ್ಲೆ ತಪಮಾಡೆ ಅಂದು ಸುರಧೇನು ವಾ ಸವನ ಕೈಕೊಳಲು ಶ್ರೀರಾಮನಿಂದಲಿಗತಿ 2 ರಾಯ ಋಷಿಗಾಧೇಯು ಬ್ರಹ್ಮತ್ವಗೋಸುಗ ಗಾಯತ್ರಿ ಒಲಿಸಿದನು ಈ ಸಿಲೆಯಲೀ ಆಯು ಉಳ್ಳದರೊಳಗೆ ಇಲ್ಲಿ ಕುಳಿತು ಬಂದು ಗಾಯತ್ರಿ ಮಂತ್ರವನು ಜಪಿಸೆ ನರನು ಮುಕ್ತಾ 3 ಅಗಸ್ತೀಶ್ವರವಿಡಿದು ರಾಮಲಿಂಗ ಪರಿಯಂತ ಬಗೆಬಗೆ ತೀರ್ಥ ಎರಡೊಂದು ಪದ್ಮ ಮಿಗೆ ಷೋಡಶಕೋಟಿ ಅರವತ್ತು ಸಾವಿರ ಸೊಗಸಾಗಿವಿಪ್ಪವಿಲ್ಲಿ ಕಾವೇರಿ ಮಧ್ಯದಲ್ಲಿ 4 ರಾಮನಾಥನ ಪುರವೆಂಬೊ ಪೆಸರೆ ಉಂಟು ವ್ಯೋಮಕೇಶನು ನಾಲ್ಕು ಹೆಸರಿನಿಂದಾ
--------------
ವಿಜಯದಾಸ
ದೇಶಿಕರಿಗೆ ದೇವ ನೀನಹುದಯ್ಯ ಲೇಸು ಲೇಸಾಗಿ ಪಾಲಿಸೊ ಎನ್ನಯ್ಯ ಧ್ರುವ ಅನಾಥನಾಥ ನೀನೆ ಸಾನುಕೂಲ ಅನುದಿನ ಮಾಡುವೆ ನೀ ಪ್ರತಿಪಾಲ 1 ಅಣುರೇಣುಕ ಸಾಹ್ಯ ಮಾಡುವ ಸ್ವಾಮಿ ನ್ಯೂನ ನೋಡದೆ ತಪ್ಪು ಮಾಡುವಿ ಕ್ಷಮೆ 2 ನೀನೆ ಸಕಲಕೆಲ್ಲ ಸಲಹುವ ದಾತ ಜನವನದೊಳು ಘನಗುರು ಸಾಕ್ಷಾತ 3 ದೇವಾದೀದೇವ ಶ್ರೀದೇವ ಅವಧೂತ ಭವ ಹರ ಗುರು ನೀನೆ ಸದೋದಿತ 4 ದೀನಮಹಿಪತಿ ಸ್ವಾಮ್ಯಹುದೋ ಕೃಪಾಲ ಭಾನುಕೋಟಿತೇಜ ನೀನೆ ಅಚಲ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇಹಿಯೆಂಬವನೊಡನೆ ನಾಸ್ತಿಯೆನಬೇಡ ಕಾಯೊ ವೆಂಕಟಪತಿಯೆ ಕಾರುಣ್ಯವಾರಿಧಿಯೆ ಪ ಮಾಡಿದಪರಾಧಗಳ ನೋಡಿ ಕ್ಷಮಿಸಿಯೆ ಯೆನಗೆ ರೂಢಿಯೊಳು ಬೆಳೆಸಿರಿಯ ಕೈಗೂಡಿಸಿ ಆಡಿ ತಪ್ಪಿದ ನುಡಿಯ ಕೂಡಿ ನಡೆಸುತ ಮುಂದೆ ಬೇಡಿದಿಷ್ಟವನಿತ್ತು ಮಾತಾಡಬೇಕೆನುತ 1 ನರನಾದ ಕುರಿಯಿದನು ಸಲಹಬೇಕೆಂದೆನುತ ಮೊರೆಯಿಟ್ಟು ನಿನ್ನಡಿಗೆ ಶರಣಾದೆನು ಕರುಣವಾರಿಧಿ ನಿನ್ನ ಚರಣದಾಭರಣನಿಗೆ ಹರಣವನು ಮರೆವಾಗೆ ಸ್ಮರಣೆ ನೀಡೆನುತ 2 ಗುಣವಾದ ಪತ್ರಿಕೆಯ ಕ್ಷಣದೊಳಗೆ ಹರಿದೆನ್ನ ಕಣುಮನಕೆ ದೃಢವಾದ ಗುಣವ ತೋರೆನುತ ಫಣಿಶಯನ ನಿನ್ನಡಿಗೆ ಮಣಿದು ಬೇಡುವೆ ನಾನು ಉಣಲಾಗದೋಗರವ ಉಣಿಸಬೇಡೆನುತ 3 ಕೆಟ್ಟ ಕೆಲಸವನಿದಿರು ದೃಷ್ಟಿಗಿಕ್ಕದೆÀಯೆನ್ನ ಬಿಟ್ಟು ಕಳೆಯಲು ಬೇಡ ಸೃಷ್ಟಿಪಾಲಕನೆ ಇಟ್ಟಡಿಯ ಕಮಲವನು ಮುಟ್ಟಿ ಭಜಿಸುವೆ ನಾನು ಹುಟ್ಟಿದೀ ಬವರದೊಳು ಕಷ್ಟ ಬೇಡೆನುತ 4 ಶುದ್ಧ ಸ್ನಾನವ ತೊರೆದು ಇದ್ದ ಜಪಗಳ ಮರೆದು ಕರ್ಮ ಒದ್ದು ಕಳೆದು ಉದ್ದಂಡವಾಗಿ ನಡೆದಿರ್ದ ಪಾಪಂಗಳನು ತಿದ್ದಿಟ್ಟು ಎನ್ನನುರೆ ಉದ್ಧರಿಸಬೇಕಯ್ಯ 5 ಪೊಡೆವಿಯೊಳಗೆನ್ನಂಥ ಕಡುಮೂರ್ಖರನು ಕಾಣೆ ಮಡದಿಯೆಂಬಡವಿಯೊಳು ಕೈದುಡುಕಿದು ಪಡೆದ ಮಕ್ಕಳ ಮುಂದೆ ಕಡೆ ಹಾಯುವವರಿಲ್ಲ ಒಡೆಯನಾಗಿಯೆ ಯೆನ್ನ ಬಿಡದೆ ಸಲಹೆನುತ 6 ನಾರಿ ಮಕ್ಕಳಿಗೆಲ್ಲ ಮೀರಿದಾಪತ್ತಿನಲಿ ತೋರಿಸುವೆ ನಿನ್ನ ಚರಣಂಗಳೆನುತ ಹಾರೈಸಿದ್ಹರಕೆಯಿದು ಭಾರವಾಗಿಯೆ ಶಿರದಿ ಏರಿದುದನಿಳುಹುವರೆ ದಾರಿ ತೋರೆನುತ 7 ತ್ರಾಹಿ ವೆಂಕಟರಾಯ ಕಾಯೊ ನಿನ್ನಯ ಮಾಯೆ ಮೋಹಿಸುತ ಜಗವೆಲ್ಲ ಬಾಯ ಬಿಡುತಿಹುದು ದೇಹಿಯೆನುತಿಹ ಜನಸಹಾಯನಲ್ಲವೆ ನೀನು ಮಾಯವಾಗದೆ ಮುಂದೆ ಆಯತನ ತೋರೆನುತ 8 ಸುರವಂದ್ಯ ಮುರಮಥನ ಗುರುದೈವ ಪರಮಾತ್ಮ ವರಲಕ್ಷ್ಮಿಕರವೆನಿಪ ಹರಿವೆಂಕಟೇಶ ಮರೆವಾಗದಿರು ಯೆನ್ನ ಕರೆದು ನೆರೆ ಸೌಖ್ಯವನು ಸ್ಥಿರವಾಗು ಎನ್ನೊಡನೆ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ