ಒಟ್ಟು 13912 ಕಡೆಗಳಲ್ಲಿ , 138 ದಾಸರು , 7210 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೊ ಕಾಯೊ ಕಾಮಿತ ಫಲದ ಕಾಯೊ ಕಾಯೊ ಪ ಕಾಯೊ ಕಾಯೊ ಎನ್ನ ಕಾಯಜನಯ್ಯನೆ ಕಾಯದಿದ್ದರೆನ್ನ ಕಾವವರಾರೊ ಅ.ಪ ಎಂದೆಂದಿನ ಕರ್ಮಗಳನೆಣಿಸುತಲಿ ಕಂದಿಸಿ ಕುಂದಿಸಿ ಬಂಧಿಪರೇನೋ 1 ತಾಳಲಾರೆ ಈ ಕಾಲನ ಬಾಧೆಯು ಬೇಳುವೆ ನಿನ್ನಯ ಕಾಲಿಗೆ ಸ್ವಾಮಿ 2 ಆಲಸ ಮಾಡದೆ ಆರ್ತಿಗಳೋಡಿಸಿ ಪಾಲಿಪುದೆನ್ನನು ಪಾವನ ಮೂರ್ತೆ3 ಮಾಡಿದ ಪಾಪಗಳೋಡಿಸಿ ಸುಖದಿಂ ದಾಡಿಸು ಕಣ್ಣಿಗೆ ಕಾಣಿಸಿಕೊಂಡು 4 ವಾಸುದೇವವಿಟ್ಠಲ ನೀ ಎನಗಿನ್ನು ವಾಸಿ ಮಾಡಿಸಿ ಕೀರ್ತಿಯ ಪಡೆಯೊ 5
--------------
ವ್ಯಾಸತತ್ವಜ್ಞದಾಸರು
ಕಾಯೊ ಕಾಯೋ | ಗುರುವರ್ಯ | ಕಾಯೊ ಕಾಯೋ ಪ ಕಾಯೊ ಕಾಯೊ ಗುರುವರ್ಯ ಪರಮ ಪ್ರಿಯಜೀಯ ನಿನ್ನಯ ಪಾದಕೆರಗುವೆನಯ್ಯಾ ಅ.ಪ. ಒಂದರಿತವನಲ್ಲ | ಕಂದನು ಎಣಿಸದೆಬಂದು ಸಲಹೊ | ತಂದೆ ಮುದ್ದು ಮೋಹನ್ನ 1 ಹಿಂದಿನ ಸುಕೃತದಿ | ಬಂದು ಜನಿಸಿದೆನಂದ ಮುನಿಯ ಮತ | ಸಿಂಧುವಿನಲ್ಲಿ 2 ಇಂದಾದರು ತವ | ದ್ವಂದ್ವಪದವ ಮನಮಂದಿರದಲಿ ತೋರಿ | ದಂದುಗ ಬಿಡಿಸೋ 3 ಎಂದಾಗುದೊ ತಂದೆ | ಇಂದಿರೇಶ ಪದದ್ವಂದ್ವ ಸಂದರ್ಶನ | ಸಂಧಿಸೊ ಬೇಗನೆ 4 ತಂದೆ ನಿನ್ನಲಿ ಗುರುಗೋ | ವಿಂದ ವಿಠಲನಅಂದ ಮೂರುತಿಯನು | ಛಂದದಿ ತೋರೊ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಾಯೊ ಬಾರೊ ಹರಿಯೆ ಕರುಣಾ ಪಯೋಂಬುಧಿ ಪ. ಕಾಯೊ ಬಾರೊ ಕರುಣಾಂಬುಧಿ ಕಮಲದ- ಳಾಯತ ನೇತ್ರ ರಸಾಯನ ಸುರಿವುತ ಅ.ಪ. ಸಿಲುಕಿ ಬಾಧೆಗೊಂಡು ಬಹು ಬೆದರುವ ದಾಸನ ಕಾದುಗೊಳ್ಳು ಕಂಬ್ವರಿಗದಾಬ್ಜಧರ ಮಾಧವ ಮಧುಮಥನ ಮನದಿ ವಿನೋದಿಸುವ ಕಥನ ಶ್ರೀ ಪದಾಬ್ಜಾಮೋದಯುಗ ಸಾಸ್ವಾದನಾತ್ಮಕ ವಿನೋದ ನಲಿವುತ 1 ಕತ್ತಲೆ ಮುಸುಕಿರುವ ಸಮಯದಿ ಸುತ್ತ ವ್ಯಾಘ್ರವಿರುವ ವನದಲಿ ಸತ್ವಹೀನವಾದೆತ್ತಿನ ಕೆಡಹುವದುತ್ತಮವೆ ಪುರುಷೋತ್ತಮ ನಿನ್ನಯ ತತ್ವಮಾರ್ಗ ತಿಳಿಸಿ ತ್ರಿಕರಣವೆತ್ತಿ ಬೋಧೆಗೊಳಿಸಿ ಜನೋತ್ತಮನೆನಿಸುತ 2 ಇಂದಿರೇಶ ನಿನ್ನ ಚರಣವನೆಂದಿಗು ನಂಬಿದನ ಬಂಧ ಬಿಡಿಸಿ ಕೃಪೆಯಿಂದ ಪೊರೆವನೆಂಬಂದಕಪಾಯವ ಕರುಣಾಸಿಂಧು ನಿನ್ನ ಕೀರ್ತಿ ಮನೋಗತ ಸಂದಣಗೊಳಿಸುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯೊನೀನೆ ಕರುಣದಿ ಪ ರಾಮರಾಮಯೆಂದು ಪೊಗಳುವನು ಮಹಾರಾಜ ಸಾರ್ವಭೌಮ ಪೂರ್ಣ ಕಾಮನೆ ದಶರಥಾವನೀಶ ಕುಮಾರ 1 ದೇವದೇವನೆ ಕೃಪಾವಲೋಕನದಿ ದೀನಜನರ ನೋಡೊ ನೀದಯಮಾಡೊ ನೀಡೋಯನ್ನದುರಿ- ಜಯಜಯ ಪ್ರಭೋ ಭಂಜನ ಜಗ ಜ್ಜೀವನ ನತಜನ ಸಂಜೀವನಸು- ಶುಭ ಕುಶೀಲವರತಾತ ಸುಪ್ರೀತ2 ಸರಿಸಿಜೋದ್ಭವಾದ್ಯಮರನಾಯಕ ಸಾಧುರಕ್ಷಸ್ಸದ್ಧರ್ಮ ಪಾಲಕ ಮನುಜವೇಷ ದುರ್ಜನ ಕಾಲ ಶರಧಿ ಸೇತು ಬಂಧನ ಕಂಜೇಕ್ಷಣ ಮಾಂ ಪಾಹಿ ರಘುವೀರ 3
--------------
ಗುರುರಾಮವಿಠಲ
ಕಾಯೋ - ಕಾಯೋ ಪ ಕಾಯೋ ಕಾಯೋ ಗುರು - ರಾಯನೆ ತವ ಪದ ತೋಯಜ ಯುಗ ಎನ್ನ ಕಾಯದಲಿಟ್ಟು ಅ.ಪ ಕ್ಷುಲ್ಲಕ ಮನುಜರ - ಸೊಲ್ಲನೆ ನೀಗಿಸಿ ಹಲ್ಲನೆ ಮುರಿಯುವ - ಬಲ್ಲಿದ ನೀನೇ 1 ಭದ್ರ ಭಕುತಿಯ - ಉದ್ರೇಕವಿತ್ತು 2 ತ್ವತ್ಸೇವಾ ಜನರಲಿ - ಮತ್ಸರ ಮಾಡುವ ಕುತ್ಸಿತ ಜನತÀÀತಿ - ವಿಚ್ಛೇದ ಮಾಡುವ 3 ನಿನ್ನಯ ಜನರನ - ಮನ್ನಣೆ ಮಾಡದೆ ಬನ್ನವ ಬಡಿಪರ - ಖಿನ್ನರ ಮಾಡೀ 4 ದೂತರ ನಿಚಯಕೆ - ಈ ತೆರ ಚಿಂತೆಯು ಯಾತಕೆ ಗುರು ಜಗನ್ನಾಥ ವಿಠಲ ದೂತಾ 5
--------------
ಗುರುಜಗನ್ನಾಥದಾಸರು
ಕಾಯೋ ಕರುಣಿಸಿ ಎನ್ನ ರಂಗಾ | ಬೇಗನೇ ಪಾದವದೋರಿಸಿ | ನಮನಕ ಭವಬಲಿಯನು ಬಿಡಸಿ ರಂಗಾ ಪ ಶರಣೆಂದು ಸಕಲರು ಬಂದು ಪೋಗುವಾ | ನಿನ್ನ ಮಹಾದ್ವಾರದಲಿ | ಇರುತಿಹ ನಿನ್ನಯ ಭಕುತ ಬಲೆಯಲಿ | ಇರಿಸಿ ನೀ ಇಟ್ಟು ಅಚಲದಲಿ ರಂಗಾ | ಸಂಬಳನಿತ್ತಿಹ ಧನವ ನಾನೊಲ್ಲೆ | ಬೇಡುವೆ ಒಂದÀನೋ ರಂಗಾ | ಹಂಬಲ ದಣಿವಂತೆ ನಾಮ ಭಾಂಡಾರವ | ಮಾಡೆನ್ನ ಆಧೀನವ ರಂಗಾ 1 ಕರಿದಲಿಧೃತಿ ಚಿತ್ತವನಿತ್ತು ಅನುದಿನಾ | ಹರಿಪಾದ ಸದ್ಬಕ್ತಿಯಾ ರಂಗಾ | ಮೆರೆವ ಮಂಟಪದೊಳು ನಿಲಿಸೆನ್ನ | ದುರಿತವ ತಟ್ಟದಂದದಿ ಪೊರೆಯೋ ರಂಗಾ2 ಇಹಪರದಲ್ಲಿ ಏಕೋದೇವನೆಂಬ ಮುದ್ರೆಯಾ ಭಾವದ ಬಲದಿಂದಲಿ | ಮಹಿಪತಿ ಸುತ ಪ್ರಭು ಕೊರಳಿಗೆ ಹಾಕಿನ್ನು | ಸಲಹು ನೀ ಕೃಪೆಯಿಂದಾ ರಂಗಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೋ ಕಾಯೋ ಪ ಕಾಯೋ ಕಾಯೋ ಕಮಲಯತಾಕ್ಷ ಭವ ತೋಯಧಿಯೊಳು ಬಿದ್ದು ಬಾಯ ಬಿಡುವನ ಅ ಅದ್ವೈತ ತ್ರಯದಧ್ವ ಪ್ರವರ್ತಕ ಸದ್ವೈಷ್ಣವರ ಪದದ್ವಯತೋರಿ 1 ಸಂಜೆಯ ತೋರಿ ಧನಂಜಯನುಳುಹಿದ ನಿರಂಜನ ಮೂರ್ತೆ 2 ಸತ್ಯಕಾಮ ತವ ಭೃತ್ಯೆಗೆ ಬಂದಪ ಮೃತ್ಯು ಕಳೆದು ಸಂಪತ್ತು ಪಾಲಿಸಿದೆ 3 ಕುಕ್ಷಿಯೊಳಂದು ಪರೀಕ್ಷಿದ್ರಾಜನ ರಕ್ಷಿಸಿದಂತೆ ಪ್ರತಿಕ್ಷಣದಲಿ 4 ಎಲ್ಲರೊಳಿಹ ಕೈವಲ್ಯದರಸು ನೀ ಬಲ್ಲಿದನೆಂಬುದ ಬಲ್ಲೆ ಬಹು ಬಗೆ 5 ನೀ ದಯ ಮಾಡದಿರೀ ದಿವಿಜರು ಒಲಿ ದಾದರಿಸುವರೆ ವೃಕೋದರ ವಂದ್ಯ 6 ಅಧಮ ನಾನಹುದುದಧಿ ಮಥನ ಸ ನ್ಮುದ ಮುನಿಮತ ಪೊಂದಿದವರಣುಗನು 7 ಕ್ಷುದ್ರ ಭೂಮಿಪರುಪದ್ರವ ಕಳೆದು ಸು ಭದ್ರವೀಯೋ ಕ್ಷುದ್ರುಮದಂತೆ 8 ವೀತಭಯ ಜಗನ್ನಾಥ ವಿಠಲ ಸುಖೇತರ ಕಳೆದು ಮಹಾತಿಶಯದಲಿ 9
--------------
ಜಗನ್ನಾಥದಾಸರು
ಕಾಯೋ ಕೇಶವ ದೇವ ದೂರ್ವೆಶಾ ಪಾಯವ ನರಿಯೆನು ಪೊರೆಯೊ ಸರ್ವೇಶಾ ಪ ಸುಜನರ ರಕ್ಷಿಸಿ ಭಜಕರ ಸಲಹುವ ಅಜಪಿತ ಶ್ರೀಹರಿ ಸೇವೆಯ ಗೈವೆ 1 ಸಾಸಿರ ನಾಮಗಳಿಂದ ರಂಜಿಪ ದೇವ ವಾಸುಕಿಶಯನನ ಸೇವೆಯ ಗೈವೆ 2 ವೇದವ ಪಾಲಿಸಿ ಧರಣಿಯ ಸಲಹಿದ ಮಾಧವ ಶ್ರೀಹರಿ ಸೇವೆಯ ಗೈವೆ 3
--------------
ಕರ್ಕಿ ಕೇಶವದಾಸ
ಕಾಯೋ ದಯದಿಂದೆನ್ನ ಕಾರುಣ್ಯ ನಿಧಿಯೇ | ಯದು ನಾಯಕನೇ ದೇವ ದೇವಾ ಪ ಪುಷ್ಯರಾಗದಿ ನವರತ್ನ ಪದಕಧರ | ಘನಶ್ಯಾಮ ಉರಗಶಯನಾ | ಕಶ್ಯಪ ವಸಿಷ್ಠಾದಿ ಸ್ಮರಣೆ ಮಾಳ್ವವರಿಂಗೆ | ದೃಶ್ಯನಾಗಿಹ ಮುರಾರಿ ಶೌರಿ1 ನಂದಸುಕುಮಾರ ಸಿರಿನಾರಿಯ | ಸದ್ಬಕ್ತವೃಂದ ರಕ್ಷಕ ಭೂಧರಾ | ಇಂದಿರಾ ಭಾವನೆಯೂ ಪೂರಿತಿಕೇಳು | ಜಗವಂದ್ಯ ಮುಕುಂದ ಗರುಡರೂಢಾ2 ಚಕ್ರಕರ ಕಮಲಾಕ್ಷ ಚತುರಾಸ್ಯ ಜನಕ ಬಲಿ | ಚಕ್ರವರ್ತಿಗೆ ವರದನಾ | ಶಕ್ರನುತ ಮಹಿಪತಿ ಸ್ವಾಮಿ ಸುತ ಪ್ರೀಯಾ | ತ್ರಿವಿಕ್ರಮನೆ ಕೋಮಲಾಂಗಾ ರಂಗಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೋ ನೀ ಅನಸೂಯಾ ಪುತ್ರನೇ ಜೀಯಾ ದತ್ತಾತ್ರೇಯ ದೇವನೇ ಪ ಪತ್ರೇಂದ್ರ ಗಮನಾ ಪರಮಾನಂದಾ ಶತ ಪತ್ರದಳ ನಯನಾ ಕೇಶವಾ ಮಿತ್ರ ಶತಕೋಟಿ ಪ್ರಕಾಶ ಸುರೇಶನೇ ಅತ್ರಿ ಗೋತ್ರ ಸಮುದ್ಭವಾ 1 ಸರ್ವಾಧಾರವ್ಯಯ ತ್ರಯ ಮೂರು ಸರ್ವ ಲೋಕ ವ್ಯಾಪ್ತನು ಚಾರು ತತ್ವರಿತ ಸರ್ವಾತೀತ ಮುಕುಂದನೇ 2 ಯೋಗಿ ಜನರ ಮಾನಸ ಹಂಸಾ ಸಂತ ಗುಣ ಸಂಪನ್ನನು ಅನಂತ ರೂಪ ಮಹಿಪತಿ ನಂದನ ಪ್ರಭು ಅನಂತ ಮಹಿಮ ಶ್ರೀ ಕೃಷ್ಣನೇ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೋ ಪರಮಾನಂದಾ ನಾರಾಯಣಾ | ತೋಯಜಾದಳ ನಯನ ಗರುಡ ಗಮನಾ ಪ ಕರವರಗ ದುಷ್ಟ ಜಲಚರ ಬಂದು ಪಿಡಿಯಲ್ಕೆ | ಭರದಿಂದ ನಿನ್ನ ಸ್ಮರಣೆಯಾ ಮಾಡಲು | ತ್ವರಿತದಿಂದಲಿ ದೇವ ಬಂದು ಆತನ ಮಹಾ | ದುರಿತವನು ಪರಿಹರಿಸಿ ಕಾಯಿದೆ ಹರಿಯೇ1 ಅರಗಿನಾ ಮನಿಯೊಳುಪಾಂಡವರುಸಿಲುಕಿರಲು | ಹರಿ ನೀನೇ ಗತಿಯೆಂದು ಸುಮ್ಮನಿರಲು | ಸಿರಿಲೋಲ ಅದುಕೊಂದು ಪಾಯವನು ರಚಿಸಿದಾ | ವರಕಡಿಗೆ ಪೊರಮಡಿಸಿಕಾಯಿದೆ ಹರಿಯೇ2 ಶರಣ ಪ್ರಲ್ಹಾದಂಗ ದನುಜ ಪೀಡಿಸುತಿರಲು | ಕರುಣ ಸಾಗರ ನಿಮ್ಮ ಧ್ಯಾನಿಸಲ್ಕೆ | ಕರುಳ ಬಗೆದುಕಾಯಿದೆ ಹರಿಯೇ | ನರಹರಿಯ ರೂಪದಿಂದ ಸ್ಥಂಬದೊಳಗುದ್ಭವಿಸಿ3 ದ್ರುಪದ ತನು ಸಂಭವಿಯ ಸೀರೆಯನ್ನು ಸೆಳೆಯಲ್ಕೆ | ತ್ರಿಪುರಾರಿ ಸಖ ನಿಮಗೆ ಮೊರೆಯಿಡಲು | ಕಪಟನಾಟಕ ದಯಾನಂದ ಹರಿಯೆ 4 ಈ ರೀತಿಯಲ್ಲಿ ಬಹು ಭಕ್ತರನು ಕಾಯಿದೆ | ಮುರಹರಿ ಧ್ಯಾನ ಸ್ಮರಣೆ ಯಂಬನದನು | ದಾರಿಯನು ಅರಿಯದ ಅಜ್ಞಾನಿಯ ಪರಾಧವನು ಸೈ ರಿಸುದು ಮಹಿಪತಿ ಸುತ ಪ್ರಿಯನೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೋ ಪ್ರಾಣೇಶ ಕೀಶಕುಲೇಶ ವಾಯುಸುತನೆಂದು ಮೆರೆವ ಜೀವೇಶ ಪ ಅಂಜನಾದೇವಿಯೊಳ್ ಜನಿಸಿಕೊಂಡಿರುವಿ ಅಂಜದೆ ಲಂಕೆಗೆ ಬೆಂಕಿ ಹಚ್ಚಿರುವಿ ಸಂಜೀವನವ ತಂದು ಕಪಿಗಳನುಳಿಸಿದಿ ಕಂಜಾಕ್ಷಿ ಸೀತೆಗುಂಗುರವ ತಂದಿತ್ತೆ 1 ಕುಂತಿದೇವಿಯ ಗರ್ಭದೊಳಗುದ್ಭವಿಸಿದಿ ಪಾರ್ಥರೊಳ್ನೀನಗ್ರಗಣ್ಯನೆಂದೆನಿಸಿ ಪಂಥದಿ ಮಗದಾಧಿಪತಿಯ ಸಂಹರಿಸಿ ಕಾಂತೆಯ ತಲೆಯ ಕೂದಲನೆ ಕಟ್ಟಿಸಿದಿ2 ಪಾಜಕ ಕ್ಷೇತ್ರದೊಳ್ ನೀನವತರಿಸಿ ರಾಜತಾಸನದಿ ಶ್ರೀಕೃಷ್ಣನನಿರಿಸಿ ರಾಜೇಶ ಹಯಮುಖ ಕಿಂಕರನೆನಿಸೀ ಮೂಜಗದಲಿ ಶ್ರೇಷ್ಠಗುರು ನೀನೆಂದೆನಿಸಿ 3
--------------
ವಿಶ್ವೇಂದ್ರತೀರ್ಥ
ಕಾಯೌ ಶ್ರೀ ರಮಾದೇವಿಯೆ ಸದಾ ತೋಯಜಾಂಬಕಿಯೇ ಭಯವ ಬಿಡಿಸಿ ಭರದಿಂದ 1 ಕ್ಷೀರಾಂಬೋನಿಧಿ ತನಯೇ ತಾಯೇ ಮಾರನಯ್ಯನರಸಿ ಕರುಣಾವೆರಸಿ ನಲವಿಂದ 2 ಶಿ ್ರೀ ಶೇಷಾದ್ರೀಶ ಮನೋಲ್ಲಸಿತೆ ಕಾಂತೇ ವಾಸವಾದಿ ವಿನುತೇ ಮಹಿತೇ ವರದಾತೇ ತಾಯೆ 3
--------------
ನಂಜನಗೂಡು ತಿರುಮಲಾಂಬಾ
ಕಾರಣನೇ ಇವನು ಎಲ್ಲಕ್ಕೂ ಕಾರಣನೇ ಇವನು ಪ ಕಾರಣನಿವನು ಸಾಧಾರಣನಲ್ಲನು ಮಾರಮಣನು ಕರುಣಾರಸಮಯನು ಅ.ಪ ಇಚ್ಛೆಯಿಂದಲಿ ತಾನು ಅಖಿಲ ಜಗ ತ್ಸøಷ್ಟಿಯ ಮಾಡುವನು ಸ್ವಚ್ಛನಾದರು ತನ್ನ ಮೆಚ್ಚಿಗೆಯಿಂದಲಿ ತುಚ್ಛನೆಂಬೊ ಶಬ್ದ ವಾಚ್ಯನಾಗಿರುವನು 1 ಎಲ್ಲವ ಬಲ್ಲವನು ಈಶನು ಇಲ್ಲದ ಸ್ಥಳವಿಲ್ಲ ಚಿಲ್ಲರೆ ದೈವಗಳೆಲ್ಲರು ಈತನ ಚೆಲ್ಲಾಟಗಳಿಗೆ ಉಲ್ಲಾಸಿಸುವರು 2 ಭಿನ್ನರೂಪಗಳಿಂದ ಜಗದೊಳು ತನ್ನ ಲೀಲೆಯ ತೋರ್ಪ ಸನ್ನುತ ಭಕುತಗೆ ಮನ್ನಣೆಯಿಂದ ಪ್ರ ಸನ್ನನಾಗಿ ಉನ್ನತ ಪದವೀಯಲು 3
--------------
ವಿದ್ಯಾಪ್ರಸನ್ನತೀರ್ಥರು
ಕಾರು ಯಾರಮನೆಗುಂಟು ಖೋಡಿ ಚೋರತ್ವದಪಹಾರ ಮಾಡಿ ತಿಂದದ್ದೆಲ್ಲ ಪ ಕಾಯಜನಯ್ಯನ ದಿವ್ಯ ಚರಿತಗಳನ್ನು ಬಾಯಿಂದ ಪೊಗಳುತ ಕೈಯಿಂದ ಬರೆದು ಮಾಯಾಮೋಹವ ಬಿಡದೆ ನ್ಯಾಯಮಾರ್ಗವತಪ್ಪ ನ್ಯಾಯದಿಂ ಪರರೊಡವೆ ಬಾಯ್ಬಡಿದು ತಿಂದದ್ದು 1 ನಳಿನನಾಭನ ವಿಮಲ ಸುಲಲಿತ ಮಹಿಮೆಗಳ ತಿಳಿದು ಆನಂದದಿಂ ನಲಿನಲಿದು ಹಿಗ್ಗದೆ ಇಳೆಯ ವಾಸನೆಯಿಂದ ಅಳಿವ ಸುಖದಾಸೆಗೆ ಇಳೆಜನರ ಗಳಿಕೆಯನು ಕಳವಿನಿಂ ತಿಂದದ್ದು 2 ಭೂಮಿಯೊಳಧಿಕ ಶ್ರೀರಾಮನ ದಾತೃತ್ವ ಹೇ ಮನವೆ ನೀ ತಿಳಿದು ಪಾಮರತ್ವ ಬಿಡದೆ ಕಾಮಿತದೊಳು ಬಿದ್ದು ಭೂಮಿ ಜನರೆದುರಿಗೆ ಸ್ವಾಮಿಭಕ್ತಿಯ ತೋರಿ ಕಾಮಿಸಿ ತಿಂದದ್ದು 3
--------------
ರಾಮದಾಸರು