ಒಟ್ಟು 3651 ಕಡೆಗಳಲ್ಲಿ , 115 ದಾಸರು , 2098 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೃಂದಾವನವ ನೋಡಿರೊ - ನೀವೆಲ್ಲಾನಂದವನ್ನೇ ಪೊಂದಿರೊ ಪ ರಾಮಾಚಾರ್ಯರ ಪುತ್ರರೊ - ಅವರುಮಾಮನೋಹರ ನೃಹರಿ ದಾತರೋ |ಜನ್ಮ ಅಷ್ಟಕೆ ಬ್ರಹ್ಮಚರ್ಯ - ಪೊಂದಿಬ್ರಹ್ಮ ವಿದ್ಯೆಯ ಪಡೆದರೋ |ಧೃತ - ಪ್ರೇಮದಿಂದಲಿ ಬಂದು ತಾವ್ ಪುರುಷೋತ್ಮ ತೀರ್ಥರ ಸಾರ್ದರಾ 1 ಕಾಯಜ ಪಿತನ ತಾನ್ವಲಿಸೀ - ದೇಶಂಗಳಪ್ರೀಯದಿಂದಲಿ ಸಂಚರಿಸೀ |ಮಾಯಾರಮಣನು ಜೀವನೂ - ಒಂದೆಂಬಮಾಯಾವಾದೀಗಳ ತರಿದೂ |ಧೃತ - ವಾಯುಮತ ಪ್ರೀತಿಯಲಿ ಅರುಹುತಪ್ರೀಯ ಅಬ್ಬೂರಲ್ಲಿ ನೆಲೆಸಿದ 2 ವಿಠಲ ನೃಹರಿ ಪೂಜೆಗೇ - ನೇಮಿಸಿತಮ್ಮಪಟ್ಟ ಶಿಷ್ಯರು ವ್ಯಾಸತೀರ್ಥರ |ಅಟ್ಟ ಹಾಸದಿ ಸರ್ವಜಿತೂ - ಸಂವತ್ಸರಕೃಷ್ಣೈಕಾದಶಿ ವೈಶಾಖ |ದಿಟ್ಟ ಗುರುಗೋವಿಂದ ವಿಠಲನದೃಷ್ಟಿಸೀ ತನು ಬಿಟ್ಟು ಪೊರಟನ 3
--------------
ಗುರುಗೋವಿಂದವಿಠಲರು
ವೃಂದಾವನೀ ದೇವಿ ವಂದಿಸುವೆ ಶ್ರೀ ತುಳಸಿ ವಂದಾರು ಜನತತಿಗೆ ಮಂದಾರಳೆನಿಸಿರುವಿ ಸಂದೇಹವಿಲ್ಲವಿದಕೆ 1 ಅಂದು ಧನ್ವಂತರಿಯು ತಂದಿರುವ ಪೀಯೂಷ ದಿಂದ ಪೂರಿತ ಕಲಶದಿ ಇಂದಿರಾಪತಿಯ ಆನಂದ ಬಾಷ್ಪೋದಕದ ಬಿಂದು ಬೀಳಲು ಜನಿಸಿದಿ2 ಶ್ರೀ ತುಳಸಿ ನಿನ್ನನು ನಿಕೇತನದಿ ಪೂಜಿಪರ ಪಾತಕವ ಪರಿಹರಿಸುವಿ ಶ್ರೀ ತರುಣಿಪತಿಗೆ ಬಲುಪ್ರೀತಿ ವಿಷಯಳೆನಿನ್ನ ನಾ ಸ್ತುತಿಸಲೆಂತು ಜನನಿ 3 ಸರ್ವ ತೀರ್ಥಗಳೆಲ್ಲ ತರುಮೂಲದಲ್ಲಿಹವು ಸರ್ವ ವಿಬುಧರು ಮಧ್ಯದಿ ಸರ್ವ ವೇದಗಳೆಲ್ಲ ತರುಅಗ್ರಭಾಗದಲಿ ಇರುತಿಹರು ಬಿಡದೆ ನಿರುತ 4 ತುಳಸಿ ನಿಮ್ಮಯ ಲಕ್ಷದಳಗಳಿಂದಲಿ ಲಕ್ಷ್ಮಿನಿಲಯನಂಘ್ರಿಗಳರ್ಚಿಸಿ ಕಲುಷ ವರ್ಜಿತನಾಗಿ ಬಲುಬೇಗ ಶ್ರೀಹರಿಯ ಒಲುಮೆ ಪಡೆವನು ಜಗದೊಳು 5 ತುಳಸಿ ದೇವಿಯೆ ನಿನಗೆ ಜಲವೆರೆದು ಕುಂಕುಮದ ತಿಲಕವಿಡುತಲಿ ನಿತ್ಯದಿ ಲಲನೆಯರು ಪೂಜಿಸಲು ಒಲಿದಿತ್ತು ಸೌಭಾಗ್ಯ ಸಲಹುವಿಯೆ ಕರುಣದಿಂದ 6 ಮಾಧವ ಪ್ರಿಯ ತುಳಸಿ ಸಾದರದಿ ನಿನ್ನೊಳಗೆ ಶ್ರೀದೇವಿ ನಿಂದಿರುವಳು ಮೋದಮುನಿ ಶಾಸ್ತ್ರವನು ಬೋಧಿಸುವ ಬುಧಜನರ ಪಾದಸೇವೆಯ ಕರುಣಿಸು 7 ಮಿತ್ರನುದಯದಲೆದ್ದು ಚಿತ್ತನಿರ್ಮಲರಾಗಿ ಭಕ್ತಿಯಲಿ ಶ್ರೀ ತುಳಸಿಯ ಮೃತ್ತಿಕೆಯ ಧರಿಸಿದ ಮಹಾತ್ಮರನು ಕಂಡು ಯಮ ಭೃತ್ಯರಂಜುವರು ಭಯದಿ 8 ಇಂತು ಶ್ರೀತುಳಸಿ ಸೀಮಂತಿನಿಯ ಸ್ತೋತ್ರವ ನಿ- ರಂತರದಿ ಪಠಿಸುವವರ ಚಿಂತಿತ ಪ್ರದನಾಗಿ ನಿಂತು ಕಾರ್ಪರದಿ ಸಿರಿ ಕಾಂತ ನರಹರಿ ಪೊರೆವನು 9
--------------
ಕಾರ್ಪರ ನರಹರಿದಾಸರು
ವೆಂಕಟರಮಣ ಮಾಂಪಾಹಿ ಸಂಕಟಹರಣ ಸರ್ವಲೋಕಕಾಧಾರ ಪ ಮತ್ಸ್ಯರೂಪವತಾಳಿ ವೇದಗಳ ರಕ್ಷಿಸಿದೆ ಮತ್ತೆ ಬೆಟ್ಟವ ಪೊತ್ತೆ ಕೂರ್ಮನಾಗಿ ಹೊತ್ತು ಭೂಮಿಯ ಪೊರೆದೆ ವರಾಹಾವತಾರದಲಿ ಬತ್ತಿ ಕಂಬದಿ ಬಂದೆ ನರಸಿಂಹನಾಗಿ ನೀ ಇತ್ತೆ ವರವನು ತುಳಿದು ಬಲಿಯು ನೀಡಲು ತಲೆಯ ವಟುರೂಪಿನಿಂದ ವೆಂಕಟರಮಣ ಮಾಂ ಪಾಹಿ 1 ಹೊತ್ತು ಪರಶುವ ಭುವಿಯ ಕ್ಷಾತ್ರಿಯರನೀ ಕೊಂದೆ ಮತ್ತೆ ರಾಮಾವತಾರದಲಿ ರಾವಣನ ಕೊಂದೆ ನಿತ್ತು ಕಾಪಾಡಿದೆಯೋ ಕೃಷ್ಣ ಪಾಂಡವರನ್ನು ಮತ್ತೆ ಬುದ್ದನರೂಪ ತಾಳಿ ಮೆರೆದೆ ತಾಳಿ ದರುಳ ದುರ್ಜನರನ್ನು ಮೆಟ್ಟಿ ಕುಟ್ಟಿದೆಯೋ ವೆಂಕಟರಮಣ ಮಾಂ ಪಾಹಿ 2 ಬೇಡಿದವರ ಇಷ್ಟಾರ್ಥಗಳನೀವ ಕಾಡಿದ ರಕ್ಕಸರ ಜೀವ ಕೊಳುವ ನೋಡಿ ದಯಮಾಡಿ ನೀಸುಜನರನು ಕಾವ ಆಡಿ ಅಡಗಿಸೋ ನೀನೇ ಮನದ ನೋವ ಗಾಢ ರಕ್ಷಿಸು ಕಡು ಬಾಡಿದೆ ಭಯದಲ್ಲಿ ವೆಂಕಟರಮಣ ಮಾಂ ಪಾಹಿ 3 ವರ ಅಜಾಮಿಳಗೆ ವರವಿತ್ತು ಸಲಹಿದೆಯೋ ಕರಿ ರಾಜ ಬರಲಿದಡೆ ಬಂದು ಕಾಯ್ದೆ ದುರುಳ ಕಾಳಿಂಗನನು ಮೆಟ್ಟಿಕುಣಿದಾಡಿದೆಯೋ ಧರಿಸಿ ಗೋವರ್ಧನವ ಕಾಯ್ದೆಗೋವಳರನ್ನು ವೆಂಕಟರಮಣ ಮಾಂ ಪಾಹಿ 4 ಇಳೆಯೊಳಗೆ ಮೂಡಲಗಿರಿವಾಸನಾಗಿ ನೆಲೆಯ ನರಿದು ಭಜಿಪರ ಪಾಪನಾಶ ಸೂರ್ಯ ಕೋಟಿ ಪ್ರಕಾಶ ಕಲಿಯುಗದೊಳು ನಿನ್ನ ಮಹಿಮೆ ವಿಶೇಷ ಸಲಹೋ ಪಾತಳ ಸೇವೆಯ ಗೆಣಸಿನ ಕುಣಿ ವೆಂಕಟರಮಣ ಮಾಂ ಪಾಹಿ 5
--------------
ಕವಿ ಪರಮದೇವದಾಸರು
ವೆಂಕಟರಮಣ ವೇದಾಂತಕೋಟಿವಂದ್ಯ ಪತಿ ಏಳೆನ್ನುತ ಪ. ಪಂಕಜಮುಖಿ ಪದ್ಮಾವತಿ ಸರ್ವಾ- ಲಂಕಾರದ ನಿದ್ದೆ ಸಾಕೆನ್ನುತ ಅ.ಪ. ಮಂಗಲಚರಿತ ಭುಜಂಗಶಯನ ನಿ- ನ್ನಂಗದಾಯಾಸವ ಪರಿಹರಿಸಿ ಪೊಂಗಲಶದಿ ಉಷ್ಣೋದಕ ಗಂಧ ತೈಲಾ- ಮೂರ್ತಿ 1 ದಧಿಯ ಪೃಥುಕದಲಿ ಹದಗೈದು ಮಧುರದಿ ಮಧುಸೂದನ ನಿನ್ನ ಪದದ ಮುಂದೆ ಸದ್ ಹೃದಯರು ತಂದಿಹರು ಸಮರ್ಪಿಸೆ ಮದಜನಕ ನಿನ್ನ ಓಲೈಸುವರಯ್ಯ 2 ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿ ಚೆನ್ನಾದ ಗೋಕ್ಷೀರವನ್ನು ತಂದು ಉನ್ನತ ಮಹಿಮನೆ ಉಣ್ಣೆಂದು ಲಲಿತ ಸು- ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ 3 ವಿಧವಿಧ ಷಡುರಸಭರಿತ ಮನೋಹರ ಸುಧೆಗೆಯಿಮ್ಮಡಿ ಮಧುರತ್ವದಲಿ ಮೃದುವಾದ ಉದ್ದಿನ ದೋಸೆಯ ಸವಿಯೆಂದು ಪದುಮನಾಭನೆ ನಿನ್ನ ಹಾರೈಸುವರಯ್ಯ 4 ಕದಳಿ ಉತ್ತಮ ಫಲಗಳ ತಂದು ರಕ್ಕಸವೈರಿಯೆ ನಿನ್ನ ಮುಂದೆ ಚೊಕ್ಕಟವಾಗಿಡೆ ಲೆಕ್ಕ ಲೇಖನಗಳ ವಾಸುದೇವ ನೀನೇಳಯ್ಯ5 ಸಾರಹೃದಯ ಗೌಡಸಾರಸ್ವತ ವಿಪ್ರ ಭೂರಿ ವೇದಾದಿ ಮಂತ್ರದ ಘೋಷದಿ ಶ್ರೀರಮಣನೆ ದಯೆದೋರೆಂದು ಕರ್ಪೂರ- ದಾರತಿಯನು ಪಿಡಿದಿಹರು ಶ್ರೀಹರಿಯೇ 6 ಭಾಗವತರು ಬಂದು ಬಾಗಿಲೊಳಗೆ ನಿಂದು ಭೋಗಿಶಯನ ಶರಣಾದೆನೆಂದು ಜಾಗರದಲಿ ಮದ್ದಳ ತಾಳರಭಸದಿ ರೇಗುಪ್ತಿರಾಗ ಸಂಗೀತ ಪಾಡುವರಯ್ಯ 7 ಕರುಣಾಸಾಗರ ನಿನ್ನ ಚರಣದ ಸೇವೆಯ ಕರುಣಿಸೆಂದೆನುತಾಶ್ರಿತ ಜನರು ಕರವ ಮುಗಿದು ಕಮಲಾಕ್ಷ ನಿನ್ನಯ ಪಾದ- ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ 8 ನಾನಾ ಜನರು ಬಂದು ಕಾಣಿಕೆ ಕಪ್ಪವ ಶ್ರೀನಿವಾಸನೆ ನಿನ್ನ ಪದಕೆ ಒಪ್ಪಿ ದಾನವಾಂತಕ ನಿನ್ನ ದಯವೊಂದೆ ಸಾಕೆಂದು ಧ್ಯಾನಮಾಳ್ಪರು ದಯಮಾಡೆಂದು ಹರಿಯೇ 9 ನೀನೆ ಗತಿಯೆಂದು ನಿನ್ನ ನಂಬಿಹರು ಲ- ಕ್ಷ್ಮೀನಾರಾಯಣ ಪುರುಷೋತ್ತಮನೆ ಮಾನದಿ ಭಕ್ತರ ಸಲಹಯ್ಯ ಸಂತತ ಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ 10
--------------
ತುಪಾಕಿ ವೆಂಕಟರಮಣಾಚಾರ್ಯ
ವೆಂಕಟಾ ಹರಿವಿಠಲ | ಪಂಕಕಳೆದಿವನಾ ಪ ಪಂಕಜಾಕ್ಷನೆ ದೇವ | ಕಾಪಾಡ ಬೇಕೋ ಅ.ಪ. ಅಂಧಕಾರದಲಿಪ್ಪ | ಮಂದಮತಿಯುದ್ಧರವಮಂದರೋದ್ಧಾರಿ ಹರಿ | ಮಾಡಿ ಪೊರೆಯಿವನಾ |ನಂದಮುನಿ ಮತ ತಿಳಿಸಿ | ಸಂದೇಹಗಳ ಕಳೆದುಸಂದೋಹ ಸಂಸ್ಥಿತನ | ಉದ್ಧರಿಸೊ ಬೇಕೋ 1 ಸೃಷ್ಟ್ಯಾದಿ ತವ ಮಹಿಮೆ | ನಿಷ್ಠೆಯಿಂದಲಿ ಭಜಿಪಸುಷ್ಠುಮನವನೆಯಿತ್ತು | ಕಾಪಾಡೊ ಹರಿಯೇಕೃಷ್ಣಮಾರುತಿ ಇವನ | ಕಷ್ಟ ಸಂಚಯ ಕಳೆದುಶ್ರೇಷ್ಠ ತವದಾಸ್ಯದಲಿ | ಇಟ್ಟು ಪೊರೆ ಇವನಾ 2 ಸತ್ಸಂಗ ಸದ್ವ್ಯಸನ | ಸನ್ಮಾರ್ಗದಲಿ ಇಟ್ಟುಕುತ್ಸಿತರ ಸಂಗವನು | ದೊರಗೈ ಹರಿಯೇ ಮತ್ಸ ಕೇತನ ಜನಕ | ಭಕ್ತವತ್ಸಲನಾಗಿವತ್ಸನ್ನ ಪೊರೆವವರು | ಮತ್ತಾರು ಇಹರೋ 3 ಹರಿಗುರುಗಳಾ ಸೇವಾ | ಪರಮ ಪ್ರೀತಿಲಿ ಮಾಳ್ವವರಮತಿಯನೇ ಕೊಟ್ಟು | ಪೊರೆಯ ಬೇಕಿವನಾ |ಹರಿಯ ನಾಮಾಮೃತವ | ನಿರುತದಲಿ ಸವಿದುಂಬಪರಮ ಸೌಭಾಗ್ಯವನೆ | ಕರುಣಿಸೋ ಹರಿಯೇ 4 ಸರ್ವಜ್ಞ ಸರ್ವೇಶ | ಸರ್ವ ಸ್ವಾತಂತ್ರನೇಭವವನದಿ ಉತ್ತರಿಸಿ | ಪೊರೆಯ ಬೇಕಿವನಾ |ದುರ್ವಿಭಾವ್ಯನೆ ಗುರು | ಗೋವಿಂದ ವಿಠಲನೇದರ್ವಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು
ವೆಂಕಟೇಶ ಕಲ್ಯಾಣ ಶ್ರೀವೆಂಕಟ ದೊರೆಯೆ ಪ ವಿಶ್ವಸೃಷ್ಟಿಯಗೈದಂಥ ತಾನಿನ್ನು ಅರಿಯೆನು ಎಂತೆನಲು ಅ.ಪ ಸುರವರ ನಾರೆಂದು ಅರಿಯೆಭೃಗುವು ತಾನು ಪತಿ ಹರ ವಿಧಿಗಳೆನೆಲ್ಲ ಬರುವ ಬಗೆಯ ಕಂಡು ಸುರತ ಕೇಳಿಯಸೋಗು ಧರಿಸಿ ಮಲಗಿರಲಂದು ಜರಿದುವದಿಯಲು ವಕ್ಷ ಹರಿಸಿ ದುಗುಡವ ಮುನಿಗೆ ವರಸಿ ಚರಣದ ಕಣ್ಣು ತರಿದು ಸಾಧನೆ ಅಧಿಕ ಸಿರಿಗೆ ಪ್ರೇರಿಸಿ ಕೋಪ ತೊರೆದು ಧಾಮವ ಬೇಗ ಧರೆಗೆ ಇಳಿಯುತ ಬಂದು ಗಿರಿಯ ಹುತ್ತವ ಸೇರಿ ಸುರಿಸೆ ವಿಧಿಯು ಪಾಲು ಕರುಣದಿಂದಲಿ ಕೊಂಡು ದೊರೆಯ ಸೇವಕ ಗೋವ ಹರಿಸೆ ಕೊಡಲಿಯ ನೆತ್ತೆ ಶಿರವನೊಡ್ಡುತ ರಕ್ತ ಧಾರೆ ಚಿಮ್ಮಿಸಿನಭದಿ ಬರಲು ಚೋಳನು ದೊರೆಗೆ ಕ್ರೂರ ಶಾಪವನಿತ್ತು ಕರೆಸಿಗುರುಗಳಮದ್ದು ತರಲು ಹೊರಟದೇವ ನಿರುತ ಚಿನ್ಮಯಗಾತ್ರ ಉರು ವೈದ್ಯ ಧನ್ವಂತ್ರಿ ನಿರುಪಮ ನಾಟಕದೆ 1 ಸಾಮ ವಿಶ್ವದ ಸಾರ್ವಬೌಮ ಬೇಡಿದೆ ರಚಿಸೆ ಧಾಮ ಕ್ರೋಢನ ಕಂಡು ಪ್ರೇಮದಿಂದಲಿ ಬಕುಳೆ ವಾಮ ಕಂದನು ಆಗಿ ಭಾಮೆ ಪಾಕವನುಂಡು ಕಾಮ ವರ್ಜಿತ ಪೂರ್ಣ ಕಾಮ ಕುದುರೆಯನೇರಿ ಕಾಮ ಬೇಟೆಯೋಳ್ ನಿಜ ಕಾಮಿನಿಯನು ಕಂಡು ದ್ಧಾಮ ಮೋಹವ ತೋರಿ ಭೂಮಿಜಾತೆಯ ಘಟಿಸೆ ಭಾಮೆ ಬಕುಳೆಯ ಕಳಿಸಿ ಧರ್ಮದೇವತೆಯೆನಿಸಿ ಜಾಮಾತ ಸನ್ನಾಹ ಜಾಣ್ಮಿಯಿಂದಲಿನಡೆಸಿ ಕಾಮಿತಾರ್ಥವ ಕೊಂಡು ಧಾಮ ಸೇರಲು ಬಕುಳೆ ಹೇಮಮಯ ದಾರಿದ್ರ ನೇಮದಾಟವ ತೋರಿ ಹೇಮಗರ್ಭನ ಕರಿಸೆ ಸೋಮಶೇಖರ ಕೊಡಿಸೆ ಹೇಮರಾಶಿಯ ತಂದು ಭೀಮರುಜೆಗಳ ನಟಿಸೆ ಸೋಮಸೋದರಿಕರಿಸಿ ಮಾಮನೋಹರಗೈದ ಸೀಮೆಇಲ್ಲದಂಥ 2 ಮದುವೆ ಹಬ್ಬಿಸಿ ಭಕ್ತ ಹೃದಯ ತುಂಬುವ ನಂದ ಮುದದಿ ಬೆಳೆಸೆ ಪಯಣ ವದಗೆ ಶುಕರಾತಿಥ್ಯ ಸದಯಗೊಳ್ಳುತ ತೃಪ್ತಿ ಬದಿಗರೆಲ್ಲರಿಗಿತ್ತು ಮದನಮೋಹನ ತೇಜ ಮದುವೆ ಊರನು ಸೇರಿ ಕುದಿವ ಕುತೂಹಲದಿ ಅದ್ಭುತ ಸ್ವಾಗತವ ಪದುಮಾವತಿಯ ತಂದೆ ಹೃದಯ ಪೂರ್ವಕ ನೀಡೆ ಆದರದಿ ಸ್ವೀಕರಿಸಿ ಪಾದದ್ವಂಧ್ವವ ನೀಡಿ ವೇಧಾದಿ ನಿಜವೃಂದ ಮೇದಿನೀ ಸುರವೃಂದ ಮೋದ ಮೆಲ್ಲಲು ಕೂಡಿ ವೇದ ಘೋಷವುಗೈಯೆ ವಾದ್ಯದುಂದುಭಿ ಮೊಳಗೆ ವೇದವೇದ್ಯನು ಮದುವೆ ವೇದಿಕೆಯನು ಏರಿ ಕಾದುಕೊಂಡಿಹ ಜನಕೆ ಸಾಧಿಸುತಲಭೀಷ್ಠ ಕರ ಸಾದರ ಪಿಡಿದಂಥ ಖೇದ ತರಿಯುತ ನಿಜ ಮೋದದಾನವ ಗೈವ 3 ತಿರುಪತಿ ತಿಮ್ಮಪ್ಪ ಸುರಗಣ ಜಗದಪ್ಪ ವರಸಮರಿಲ್ಲಪ್ಪ ಭರದಿ ಕಸಿವಕಪ್ಪ ಅರಿತವರಿಲ್ಲಪ್ಪ ಧರಿಸಿಹ ಸಿರಿಯಪ್ಪ ಕರುಣ ಸುರಿಸುವನಪ್ಪ ಉರುಗಗಿರಿಯಲ್ಲಿಪ್ಪ ಸುರತರು ಇವನಪ್ಪ ಗಿರಿಸಪ್ತ ದೊರೆಯಪ್ಪ ಹರಿಕೆ ಕೊಳ್ಳುವನಪ್ಪ ಅರಿಮಾರಿ ಸರಿಯಪ್ಪ ಶರಣರ ಪೊರೆಯಪ್ಪ ಕರೆಕರೆ ಬೇಡಪ್ಪ ಸ್ವರತ ಸುಖಮಯನಪ್ಪ ಅರವಿದೂರನಪ್ಪ ಮರೆವ ಶರಣರ ತಪ್ಪ ಸರ್ವಹೃದಯಗನಪ್ಪ ಪರಿಪೂರ್ಣಗುಣನಪ್ಪ ಅರಿಶಂಖುಧರನಪ್ಪ ಉರಿವ ರವಿಯಲ್ಲಿಪ್ಪ ಸರ್ವಮುಕ್ತರಿಗಪ್ಪ ಬಿರಿವ ಖಳರೆದೆಯಪ್ಪ ಮರುತ ಮಂದಿರನಪ್ಪ ಪರಿಮರ ಹೌದಪ್ಪ ಪೊರೆದೆ ಮಾಧವನಪ್ಪ ವರಲೀಲಾ ಮಯನಪ್ಪ ಪರಮ ಅದ್ಭುತನಪ್ಪ ಪರಮಾತ್ಮಹೌದಪ್ಪ ಕರಣ ಚೋದಿಪನಪ್ಪ ಕರಣಕ್ಕೆಸಿಗನಪ್ಪ ದುರಿತ ಪಾವಕನಪ್ಪ ಪರಮ ಪಾವನನಪ್ಪ ಹರನ ಅಪ್ಪನಿಗಪ್ಪ ಪರಮೋಚ್ಚಹೌದಪ್ಪ 4 ಬಾದರಾಯಣ ಪೂರ್ಣ ಭೋಧ ತೀರ್ಥರ ದೈವ ಮೋದ ಚಿನ್ಮಯಗಾತ್ರ ವೇದ ವಿಭಜಿಸಿ ನಿಂದ ಖೇದವಿದ್ಯೆಯ ಕೊಂದ ವಾದಿವಾರಿಣಿ ಸಿಂಹ ವಾದಿರಾಜರ ಹೃದಯ ಮೋದ ಹಯಮುಖ ಶುದ್ಧ ವೇದರಾಶಿಯತಂದ ವೇಧಗರುಹಿದ ಕರುಣಿ ಖೇದ ನೀಡುತಲಿದ್ದ ಆದಿದೈತ್ಯರ ಕೊಂದು ಮೇದಿನಿಯನು ಎಯ್ದೆ ಶ್ರೀಧರ ನರಸಿಂಹ ಗೋಧರಮಹಿದಾಸ ಕಾದುಕೊ ಶ್ರೀ ವಿಷ್ಣು ಭೇದ ವಿದ್ಯೆಯಮನಕೆ ಭೋಧಿಸು ವರ ಕಪಿಲ ಸಾಧು ಋಷಭದತ್ತ ಯಾದವ ಕುಲರನ್ನ ಕಾಯ್ದೆ ಗೋಪಿಯ ರನ್ನ ಸೀಳ್ದೆ ಕೌರವರನ್ನ ಪೇಳ್ದೆ ಪಾರ್ಥಗೆ ಗೀತೆ ಶುದ್ಧ ಜಯಮುನಿಹೃಸ್ಥ ಮಧ್ವ ಇಂದಿರೆನಾಥ ಮುದ್ದು ಕೃಷ್ಣವಿಠಲ ಬಿದ್ದೆ ಪಾದದಿ ಶರಣು 5
--------------
ಕೃಷ್ಣವಿಠಲದಾಸರು
ವೆಂಕಟೇಶ ನಿನ್ನ ನಂಬಿದೆ ಎನ್ನ ಸಂಕಟವನು ಪರಿಹರಿಸಯ್ಯ ನೀನು ಪ ಒಡಲೆಂಬ ಕಡಲೆಡೆಗೊಂಡಿಹ ಹಡಗು ಕಡೆಯ ಕಾಣ ಬಹು ಜಡದಿಂದ ಗುಡುಗು ಜಡಿಯುತ್ತ ಬರುತಿಹ ಮಳೆ ಮುಂದೆ ತೊಡಗು ದಡವ ಸೇರಿಸೊ ಎನ್ನ ಒಡೆಯ ನೀ ಕಡೆಗು 1 ಅಣುರೇಣು ತೃಣಕಾಷ್ಠದೊಳಗಿದ್ದು ನೀನು ಕ್ಷಣ ಕ್ಷಣ ಆರೈವ ಗುಣ ನಿನ್ನದೇನು ಪ್ರಣವ ರೂಪನೇ ನಿನ್ನ ಚರಣಕ್ಕೆ ನಾನು ಮಣಿವೆನು ಮನ್ನಿಸು ವರ ಕಾಮಧೇನು 2 ನಾರಾಯಣ ನರಹರಿ ಜಗನ್ನಾಥ ದಾರಿದ್ರ್ಯ ದುಃಖ ನಿರ್ಮುಕ್ತ ನೀ ತಾತ ಸಾರಿದವರ ಸಂಸಾರದ ದಾತ ಮಾರಿದ ಮನವಕೊಂಬರೆ ನೀನೆ ಪ್ರೀತ 3 ಉತ್ತಮವಾದ ಶ್ರೀಶೈಲ ನಿವಾಸ ಭಕ್ತರ ಸಲಹುವ ಬಿರುದುಳ್ಳ ಈಶ ಚಿತ್ತವು ತಿಳಿದೆನ್ನ ಕಾಯೊ ಸರ್ವೇಶ ನಿತ್ಯ ಮಂಗಲವೀವ ವಸ್ತು ಲಕ್ಷ್ಮೀಶ 4 ವರಾಹತಿಮ್ಮಪ್ಪನು ಒಲಿದೆನ್ನ ಕರೆದು ಆರಿದ ಬÁಯೊಳು ಅಮೃತವನೆರೆದು ದೂರವಾಗದೆ ಅಡಿಗಡಿಗೆನ್ನ ಹೊರೆದು ಏರುಗಂಡಪರಾಧ ಎಲ್ಲವ ಮರೆದು 5
--------------
ವರಹತಿಮ್ಮಪ್ಪ
ವೆಂಕಟೇಶ ನೀ ಕರುಣಿಸಿ ಮಾನಸ ಶಂಕೆಯೆಲ್ಲವ ಓಡಿಸು ವಂಕುಬೂದಿಯ ಬಿಡಿಸುತ ನಿನ್ನಯ ಕಿಂಕರಾಶ್ರಯ ಕೊಡಿಸು ಪ. ಎಷ್ಟು ಬಂದರೂ ತೃಪ್ತಿಯ ಪಡದ ಕ- ನಿಷ್ಟ ಭಾವನೆಯಿಂದಲೀ ಭ್ರಷ್ಟನಾದೆನು ಬಹು ವಿಧವಾಕೃತ ನಿಷ್ಠುರಾಗ್ನಿಯ ಹೊಂದಲಿ ಕೃಷ್ಣ ನೀ ಕರಪಿಡಿವುತ ಕರುಣಾ ದೃಷ್ಟಿಸಂಗತ ಧೀರತೆಯಿಂದಲಿ 1 ಗಾರುಗೊಂಡೆನು ಶ್ರೀಶನೆ ಸೇರಿದುದಂಗದಿ ದಿನ ದಿನ ಮೀರಿತೊ ಗ್ರಹವಾಸನೆ ಮಾರನಂದನ ಎನ್ನ. . . . . .ತಿ ಭಾರವೆ ಭವವಾರುದಿ ಶೋಷನೆ 2 ಸರ್ವದಾ ನಿನ್ನ ಪಾದಾಂಬುಜರತಿ ಇರ್ವರೊಂದನೆ ಪಾಲಿಸು ಮರ್ಮವೆಂದಿಗು ಮನಸಿಗೆ ಘಟಿಸದೆ ನಿವ್ರ್ಯಳೀಕದಿ ಲಾಲಿಸು ಸರ್ವಲೋಕ ಸುಖಾಕರ ಫಣಿಪತಿ ಪರ್ವತಾಲಯ ಪರಮ ಕೃಪಾಕರ 3
--------------
ತುಪಾಕಿ ವೆಂಕಟರಮಣಾಚಾರ್ಯ
ವೆಂಕಟೇಶ ವಿಠ್ಠಲನೆ ಉದ್ಧರಿಸೊ ಇವಳಾಪಂಕಜಾಸನ ವಂದ್ಯ ಪಂಕೇರು ಹಾಕ್ಷ ಪ ಪತಿ ವಿಯೋಗದ ದುಃಖ | ಅತಿಯಾಗಿ ತವಪಾದಗತಿಗಾಗಿ ಗಿರಿಯೇರಿ | ತುತಿಸುತಿರೆ ನಿನ್ನಾಗತಿಗೋತ್ರ ತೈಜಸನೆ ಪತಿರೂಪ ನಿನ್ನನುಪತಿಕರಿಸ ನಿನ್ನ ಮೃತ ಹಸ್ತ ನೆತ್ತಿಲಿ ಇಟ್ಟೇ 1 ಇಂದಿವಳ ಪ್ರಾರ್ಥನೆಯ ಛಂದದಲಿ ಮನ್ನಿಸುತಅಂದು ನೀನಾಗಿತ್ತ | ನಂದದಂಕಿತವಾಇಂದು ಊರ್ಜಿತ ಪಡಿಸಿ | ವಂದಿಸಿಹೆ ತವಪಾದವೃಂದಾರ ಕೇಂದ್ರ ಗುರು ನಂದ ಮುನಿ ವಂದ್ಯಾ 2 ಪಕ್ಷಿವಾಹನ ದೇವ | ದಕ್ಷಾರಿ ಪ್ರಿಯ ಸಖನೆದೀಕ್ಷಿತಳ ದಾಸಪಥ | ಲಕ್ಷಿಸುತಲಿದನಾಈಕ್ಷಿಪುದು ಕರುಣಾಕ | ಟಾಕ್ಷದಲೆಂದನುತಅಕ್ಷಾರಿ ವಂದ್ಯ ಹರಿ ಪಾರ್ಥಿಸುವೆ ನಿನ್ನಾ 3 ದೇಶ ದೇಶದ ಜನರ | ಆಶೆಗಳ ಪೂರೈಪ ಕೇಶವನೆ ಶ್ರೀ ವೆಂಕಟೇಶಾಖ್ಯ ಹರಿಯೇ |ದಾಸಿಯಳ ಹೃದಯಾ | ಕಾಶದೊಳು ತೋರೆಂದುಲೇಸು ಭಿನ್ನಪ ಸಲಿಸೊ | ಮೇಶ ಮಧ್ವೇಶಾ4 ಊರ್ವಿಯೊಳು ನಿನ್ಹೊರತು ಕಾವರನು ನಾಕಾಣೇಸರ್ವೋತ್ತಮೋತ್ತಮನೆ | ಶರ್ವ ವಂದ್ಯಾದರ್ವಿ ಜೀವಿಯ ಕಾವ | ಹವಣೆ ನಿನ್ನದಲ್ಲೇನೊ ಗುರ್ವಂತರಾತ್ಮ ಗುರು | ಗೋವಿಂದಾ ವಿಠಲಾ 5
--------------
ಗುರುಗೋವಿಂದವಿಠಲರು
ವೇಂಕಟೇಶನೆ ಎನ್ನಾ ಪಾಲಿಪುದೊ ಹರಣ ಪ ಪಂಕಜೋದ್ಭವ ಹರ ವಂದ್ಯ ಪರಾತ್ಪರ ನಿಖಿಲಾಗಮೈಕವಿಜ್ಞೇಯ ಲೋಕೋದ್ಧಾರ ಅ.ಪ ವತ್ಸರ ಬ- ಹುಧಾನ್ಯ ಸಂದ ಶುಕ್ಲ ದ್ವಿತೀಯ ಸಂಧ್ಯಾಸವನ ಬಂದು ಕೀರ್ತನ ಸೇವಾ- ನಂತರದಿ ಎನ್ನಾ ಮಂದಿರದೊಳು ಸುಪ್ತಾವಸ್ಥೆ ಯಿಂದಿರಲಾಗ ಅಂದು ಕಡೆಯ ಯಾ- ಮದಿ ತೈಜಸನೆ ನೀ ಹಂಸರಿಂದೆನ್ನ ಮನಸಂಶಯ ಹರಿಸಿದೆ1 ಅರುಣೋದಯಲೆದ್ದು ಮುದದಿ ಕರಣಶುಧ್ದನಾಗಿ ತ್ವರಿತದಿ ಸ್ವಪನದ ವಿ- ವರಕಾಗಿ ಹರುಷದಿ ಹರಿಪೂಜಾಕಾಲದಿ ಅರುಹಿದ ಮರುತ ಮೂರುತಿಯಾ ಉರುತರ ಚರಿತೆಯ ನಿರುತಪೊಗಳಲಾಯತವಿತ್ತ ತಿರುಪತಿಶೈಲಾಧಿಪ ಮಮಕುಲಸ್ವಾಮಿ2 ಹರಿಗುರುಸೇವೆಯನು ಸರ್ವಸದ್ಯೋಗ್ಯಸಾಧನವನ್ನು ಪರಮಹಂಸರು ಇತ್ತವೇಂಕಟೇಶಾಂಕಿತ ಮೂರುತಿಯ ನುತಿಪಾ ನಿಜ ಹರಿಭಕುತರ ಚರಣಕಮಲಬಂಡುಣಿಯೆನಿಸಿ ಇವನನಿರುತ ರಕ್ಷಿಸೋ ಉರಗಾದ್ರಿವಾಸವಿಠಲಾ 3
--------------
ಉರಗಾದ್ರಿವಾಸವಿಠಲದಾಸರು
ವೇಣು ಗೋಪಾಲವಿಠ್ಠಲರೇಯ ನಿನ್ನ ಪದ ರೇಣು ನಂಬಿದ ಮಾನವ ಏನು ಅರಿಯದಲಿಪ್ಪ ನೀನೊಲಿದು ಕರುಣದಲಿ ಜ್ಞಾನ ಭಕುತಿಯ ಕೊಡುವುದು ಸ್ವಾಮಿ ಪ ಪರದೈವ ನೀನೆಂದು ಮೂಢಮತಿಯಾದವನು | ಪರಿಪೂರ್ಣವಾಗಿ ನಿರುತ | ನೆರೆ ನಂಬಿದೆನು ನಾನಾ ಪ್ರಕಾರದಲಿ ಸ್ಮರಣೆ ಮಾಡುತ ಮನದಲಿ | ತರತಮ್ಯ ಭಾವದಲಿ ಮಾರ್ಗವನೆ ತೋರಿ ವಿ ಸ್ತರ ಮಾಡು ಇವನ ಕೀರ್ತಿ ಕರುಣಾಕರನೆ ನಿನ್ನ ಮೊರೆಹೊಕ್ಕ ಶರಣನ್ನ ಕರಪಿಡಿದು ಪಾಲಿಸುವುದು ಸ್ವಾಮಿ1 ಲೌಕಿಕವೆಲ್ಲಿನಗೆ ವೈದಿಕವೆಂದೆನಿಸಿ | ಸಾಕುವುದು ಸಾಕಾರನೆ ನೂಕು ದುರಳದಿಂದ ಬಂದ ವಿಪತ್ತುಗಳ ತಾಕಗೊಡದಂತೆ ವೇಗ ಶುಭ | ವಾಕು ನೇಮಿಪುದು ಸತತ ನಾಕಜನ ಬಲವಾಗಿ ರಕ್ಷಿಸಲಿ ಸುರತರುವೆ ಶ್ರೀ ಕಾಂತ ನಿನ್ನಿಂದಲಿ ಸ್ವಾಮಿ 2 ಓರ್ವನ ಪೆಸರುಗೊಂಡು ಪೇಳಲೇತಕೆ ಇನ್ನು | ಸರ್ವರನು ಈ ವಿಧದಲಿ | ಊರ್ವಿಯೊಳಗೆ ಇಟ್ಟು ಉದ್ಧರಿಸಿ ಉರುಕಾಲ ನಿವ್ರ್ಯಾಜದವನ ಮಾಡಿ ಸರ್ವರಗೋಸುಗ ತುತಿಸುತಲಿ ಯೋಗ್ಯರಿಗೆ ಸರ್ವದಾ ಕೃಪೆಮಾಡು ಎಂಬೆ ಸಿರಿ ವಿಜಯವಿಠ್ಠಲ ನಿನ್ನ ಶರ್ವ ತುತಿಸಿ ಕಾಣ ನಾನೊಬ್ಬ ಪೊಗಳುವನೆ 3
--------------
ವಿಜಯದಾಸ
ವೇಣುಧರ ವಿಠಲಾ | ನೀನೆ ಪೊರೆ ಇವಳಾ ಪ ಕಾಣೆ ನಿನ್ಹೊರತು ಕಾ | ರುಣ್ಯ ಮೂರುತಿಯೆ ಅ.ಪ. ಸ್ವಾಪದಲಿ ಗುರುರೂಪ | ರೂಪ ಸಮ್ಮುಖದಲ್ಲಿಗೋಪಕೃಷ್ಣಾಕೃತಿಯ | ಪಡೆದಿಹಳು ಇವಳುಶ್ರೀಪತಿಯೆ ನಿನ್ನೊಲಿಮೆ | ಆಪಾರವಿರುತಿರಲುಪ್ರಾಪಿಸುತ ಅಂಕಿತವ | ಒಪ್ಪಿಸಿಹೆ ನಿನಗೇ 1 ಪಥ ತೋರೋ ಹರಿಯೇ2 ಪತಿ ಸುತನೆ | ಕಾರುಣ್ಯ ತೋರಿ ಆ-ಪಾರ ದುಷ್ಕರ್ಮಗಳ | ಪಾರಗಾಣಿಪುದೋ |ಮಾರುತನ ಮತದಲ್ಲಿ | ಧೀರೆ ಎಂದೆನಿಸಿ ಸಂ-ಸಾರ ಸಾಗರವನ್ನು | ದಾಟಿಸೋ ಹರಿಯೇ 3 ಸೃಷ್ಟಿ ಸ್ಥಿತಿ ಲಯ ಕರ್ತ | ಕೃಷ್ಣಮಾರುತಿ ದೇವಅಷ್ಟಸೌಭಾಗ್ಯಗಳ | ಕೊಟ್ಟು ಕಾಪಾಡೋವಿಷ್ಟರಶ್ರವ ಹರಿಯೆ | ನಿಷ್ಠೆ ಆಚಾರದಲಿಕೊಟ್ಟು ಕೈಪಿಡಿ ಇವಳ | ಜಿಷ್ಣುಸಖ ಹರಿಯೇ 4 ಸರ್ವದಾ ತವ ಮಹಿಮೆ | ಶ್ರವಣ ಸುಖ ಸಾಧನವಹವಣೀಸಿ ತವನಾಮ | ವಜ್ರಾಂಗಿ ತೊಡಿಸೀಭವವನುತ್ತರಿಸತ್ಕಿ | ಬಿನೈಪೆ ಶ್ರೀ ಹರಿಯೆಸರ್ವ ಸುಂದರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವೈಕುಂಠ ವಿಠ್ಠಲನೆ ನೀನಿವನ ಸಾಕಬೇಕಯ್ಯ ಶ್ರೀ ಹರಿಯೆ ಪ ನಾಕಪತಿಯೆ ನಿನ್ನ ತೋಕನೆಂದೆನಿಸಿ ಕೃಪಾಕರುಣೆ ಕಾಪಾಡ ಬೇಕೊ ಹರಿಯೆ ಅ.ಪ. ಪುಂಡಲೀಕ ವರದ ಪಾಂಡುರಂಗನೆ ನಿನ್ನತೊಂಡನಾಗಿಹನ ಕೈಗೊಂಡು ಕಾಪಾಡೊ ಹರಿಯೆ |ಅಂಡಜಸುವಾಹನನೆ ಮಾರ್ತಾಂಡ ಶತತೇಜಭಾಂಡ ಕಾರಕ ಭೀಮ ಗೊಲಿದಂತೆ ಒಲಿಯಬೇಕು 1 ಇಹಪರಗಳೆರಡಕ್ಕೂ ಅಹಿಶಯ್ಯ ನಿನ ಪಾದವಹಿಸೆ ಸೇವಿಪನಯ್ಯ ಸಹಜ ಭಕ್ತಿಯಲಿವಿಹಗೇಂದ್ರ ವಾಹನನೆ ಐಹಿಕದ ಭಯಹರಿಸಿವಿಹಿತ (ಕರುಣ)ದಿಂದಿವನ ಕಾಪಾಡು ಬೇಕು ಹರಿಯೇ 2 ವಿಘ್ನಹರ ನಿನ್ನಲ್ಲಿ | ಲಗ್ನ ಗೈಸಿಹಮನವ ನಿ-ರ್ವಿಘ್ನತೆಯ ನೀಡಯ್ಯ ಸರ್ವಕಾಲದಲಿಯಜ್ಞೇಶ ಯಜ್ಞ ಭುಗ್ ಯಜ್ಞಸಾಧನ ಯಜ್ಞಯಜ್ಞಾನು ಸಂಧಾನ ಸರ್ವಕಾರ್ಯದಲೀಯೊ 3 ವೃಂದಾರ ಕೇಂದ್ರ ರಿಂ | ವಂದ್ಯ ಹಯಮುಖ ಪಾದಭೃಂಗರೆಂದೆನಿಸುವ ಭಾವಿ ಮರುತರ ಚರಣದೀಸಂಧಿಸುತ ಧೃಡಭಕ್ತಿ ವೃಂದಾವನಾಖ್ಯಾನಸಂದೋಹ ಸುಜ್ಞಾನ ನೀನಿತ್ತು ಸಲಹೊ ಹರಿಯೇ 4 ಪತಿ ನಿನ್ನ ಹಂಬಲಿಸಿ ಬೇಡುವೆನುಇಂಬಿಟ್ಟು ತವ ಪಾದದ್ಹಂಬಲವ ನೀಯೋಉಂಬುಡುವ ಕ್ರಿಯೆಗಳಲಿ ಬಿಂಬ ಕ್ರಿಯೆಗಳ ತಿಳಿಸಿಬಿಂಬ ತವರೂಪ ಹೃದಯಾಂಬರದಿ ತೋರಿ ಸಲಹೋ 5 ಪಂಚಪಂಚಸುತತ್ವ | ಪಂಚ ಭೇದದಜ್ಞಾನಸಂಚಿಂತೆಯ ನೀಯೋ ವಾಂಛಿತಾರ್ಥದನೇಪಂಚ ಅವಿದ್ಯೆಯ ಕಳೆದು ಪಂಚಸು ಪರ್ವದಲಿಪಂಚಾಸ್ಯನಲಿ ನಿನ್ನ ಪಂಚರೂಪವ ತೋರಿಸೋ 6 ದಿವಿಜ ವಂದ್ಯಮಧ್ವಾಂತರಾತ್ಮ ಗುರು ಗೋವಿಂದ ವಿಠಲ ತವದಿವ್ಯ ರೂಪವ ತೋರಿ ಕಾಪಾಡೊ ಹರಿಯೆ 7
--------------
ಗುರುಗೋವಿಂದವಿಠಲರು
ವೈಕುಂಠನಾಯಕನೂ ಈ ಮಹಾತ್ಮನು ವೈಕುಂಠನಾಯಕನು ಪ. ಪಾಕಶಾಸನತ, ನಾಕಪಾಲಕ ಸರ್ವಲೋಕನಾಯಕ ಭಕ್ತರಕ್ಷಕ ಶ್ರೀಕಳತ್ರ ಸುಪವಿತ್ರನೀತನು ಅ.ಪ. ವೆಂಕಟಗಿರಿಯಿಂದ ಅಂಕನಶೆಟ್ಟಿಪುರಕೆ ಬಿಂಕದಿಂದೈತಂದ ಕಾಂಕ್ಷಿತಾರ್ಥವನೀವನು ಭಕ್ತರಮನಶಂಕೆಯ ಕಳೆಯುವನು ಕಂಕಣಕರ ಬದ್ಧನಾಗಿಹ ಪಂಕಜಾಸನ ಜನಕ ಲಕ್ಷ್ಮೀಕಾಂತ ಸರ್ವಾಂತರ್ಯಾಮಿಯಾಗಿಹ 1 ಬಂದವರೆಲ್ಲ ತಾವು ಬಂದಂತೆ ಮನನೊಂದು ಹಿಂದಿರುಗಿ ಪೋಗುವರೆಂಬ ಮಾತಿಲ್ಲ ಬಂದು ಬಂದವರಿಗೆಲ್ಲ ಬೇಡಿದುದಿತ್ತಾನಂದ ದಿಂದವರೀಯುವ ಕಾಣಿಕೆಗಳ ಚೆಂದದಿಂ ಸುರೇಂದ್ರ ವಂದ್ಯ ಕರೀಂದ್ರಪೂಜಿತ ನಂದ ಕಂದ ಮುಚುಕುಂದ ವರದನು 2 ಅಂಗವಿಹೀನರಿಗಂಗವ ಸರಿಗೈದು ಇಂಗದ ಭೋಗಭಾಗ್ಯಂಗಳ ನೀವನು ಕಂಗೆಟ್ಟಿಹರಕಾಯ್ವನು - ಬೇಡುತ್ತಿಹ ಬಂಜೆಗೆ ಮಕ್ಕಳನು ನೀಡುವನು ತನ್ನ ನಂಬಿದವರ ಕೈಬಿಡನು ಸತ್ಯಾತ್ಮನು ಮಂಗಳಾಂಗ ಯದುಪುಂಗವ ಸದಯಾಪಾಂಗ ಶ್ರೀ ರಂಗ ತುಂಗವಿಕ್ರಮ ಶೇಷಗಿರಿವರ 3
--------------
ನಂಜನಗೂಡು ತಿರುಮಲಾಂಬಾ
ವೈದಿಕ ಧರ್ಮಧ್ವಜ ಫಡಫಡಿಸಲ ಗಗನದೊಳೆತ್ತರದಿವೈದಿಕ ತತ್ವಜ್ಞಾನ ಪ್ರಕಾಶವು ಪಸರಿಸಲೀ ಜಗದಿ 1ಜ್ಞಾನ ಭಕ್ತಿ ವೈರಾಗ್ಯ ಧೈರ್ಯ ಔದಾರ್ಯ ತಪಶ್ಚರ್ಯದಿನ ದಿನ ಬೆಳೆಯಲಿ ದಾನಧರ್ಮಗಳು ದಯಾ ಸತ್ಯ ಶೌರ್ಯ 2ದುಷ್ಟ ಶತ್ರುಗಳ ಸದ್ದು ಅಡಗಲಿ ಜಗನಿರ್ಭಯ'ರಲಿಭ್ರಷ್ಟಾಚಾರವು ನಿರ್ಮೂಲಾಗಲಿ ಸತ್ಯಕ್ಕೆ ಜಯ'ರಲಿ 3ವರ್ಣಾಶ್ರಮಗಳ ಧರ್ಮದ ಮರ್ಮವು ತಿಳಿಯಲಿ ಜಗಕೆಲ್ಲಾಕರ್ಮಾ ಕರ್ಮ 'ಕರ್ಮ ಮರ್ಮವನು ಅರಿಯಲಿ ಜನರೆಲ್ಲಾ 4ಜಯ ಜಗದೀಶ್ವರರೆಂಬ ನಿನಾದವು ತುಂಬಲಿ ಜಗದಲ್ಲಿಜಯ ಭೂಪತಿ'ಠ್ಠಲ ಸರ್ವೋತ್ತಮ ಜಯಹರಿ ಎಂದೆನಲಿ 5
--------------
ಭೂಪತಿ ವಿಠಲರು