ಒಟ್ಟು 8641 ಕಡೆಗಳಲ್ಲಿ , 130 ದಾಸರು , 5054 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರಣಕಮಲಯುಗಕೆ ನಮಿಪೆ ನಿರುತವನುದಿನ | ಶ್ರೀ ರಾಘವೇಂದ್ರ ಪ ಕರುಣಾಸಾಂದ್ರ ಯತಿಕುಲೇಂದ್ರ ಅ.ಪ ವೇನಮತವಿದಾರ ಸುಂದರ ಜ್ಞಾನದಾತ ಗುರುವರ | ಶ್ರೀನಾಥನ ಪದಪಂಕಜಧ್ಯಾನನಿರತ ಸುಗುಣಭರಿತ 1 ಮಧ್ವಶಾಸ್ತ್ರಪಠಿಸಿ ಬಹುಪ್ರಸಿದ್ಧಟೀಕೆ ರಚಿಸುತ | ಸದ್ವೈಷ್ಣವ ಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರಾ 2 ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು | ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ3 ವಾರಾಹಿ ಸುಕ್ಷೇತ್ರನಿಲಯ ಚಾರುಚರಿತ ಗುಣಮಯ | ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ 4 ಶ್ರೀಶಕೇಶವಾಂಘ್ರಿದೂತ ದಾಸಜನನುತ | ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ 5
--------------
ಶ್ರೀಶ ಕೇಶವದಾಸರು
ಚರಣಕೆರಗುವೆ ಕೃಷ್ಣಾ ಪರಿಹರಿಸು ಜನ್ಮವನುಶರಣಜನಬಂಧು ನೀನು ಕೃಷ್ಣಾ ಪಕರುಣನಿಧಿಯಡಿಗೊಮ್ಮೆ ಶಿರವೆರಗಿದವರು ಭವಶರಧಿಯೊಳು ಬೀಳರೆಂದೂ ಕೃಷ್ಣಾ ಅ.ಪಹಲವು ದೇಹಂಗಳಲಿ ಮಾಡಿದಘ ವೃಂದಗಳುಬಲವಂದಡವಕೆ ಲಯವು ಕೃಷ್ಣಾಜಲಜಸಂಭವ ತೊಡಗಿ ಶಲಭಾಂಕದೊಳಗೊಂದನುಳಿಯದೇ ಪ್ರಾಣಿಗಳಲಿ ಕೃಷ್ಣಾತೊಳಲಿ ಬಂದೆನು ನೀನು ನಿರ್ಮಿಸಿದ ಪರಿಯಲ್ಲಿತೊಲಗಿಸಿನ್ನೀ ಭವವನು ಕೃಷ್ಣಾನಳಿನಾಕ್ಷ ನಿನ್ನ ಪ್ರಾದಕ್ಷಿಣವು ಬಳಿಕಾಯ್ತುನಿಲಿಸೆನ್ನ ನಿನ್ನಡಿಯೊಳು ಕೃಷ್ಣಾ 1ಜನನ ಜನನಗಳಲ್ಲಿ ಕಿವಿಮುಚ್ಚಿ ತಲೆವಾಗಿನಿನಗೆರಗಿದವನಾದೆನು ಕೃಷ್ಣಾಗಣನೆುಲ್ಲದ ಜನ್ಮಗಳಲಿನಿತು ನಮಿಸಿದರೆಗಣನೆಗೊಳದಿಪ್ಪುದೇನು ಕೃಷ್ಣಾಅಣು ಮಾತ್ರದವನಾಗಿ ಘನತರದವಿದ್ಯೆಯಲಿಮನಮುಳುಗಿ ಬಹು ನೊಂದೆನೋ ಕೃಷ್ಣಾಯೆಣಿಸದಪರಾಧ ಕೋಟಿಗಳ ಭವ ಭೀತನನುಅನುಪಮನೆ ಕೊಡು ಗತಿಯನು ಕೃಷ್ಣಾ 2ಮರೆಯೊಕ್ಕವರ ಕಾಯ್ವ ಬಿರಿದು ನಿನ್ನದು ದೇವಮರೆಯೊಕ್ಕೆನೆಂದೆನೀಗ ಕೃಷ್ಣಾಮರಳಿ ನುಡಿವರೆ ಗುಣಗಳಡಿಮೆಟ್ಟುತಿವೆ ಬೇಗಸ್ಮರಣೆದೊರಕೊಳ್ಳದಾಗ ಕೃಷ್ಣಾಸೆರೆಯವನ ಬಂಧುಗಳು ಬಿಡಿಸುವರು ಕಂಡಾಗಸೆರೆಯವನಿಗುಂಟೆ ಯೋಗ ಕೃಷ್ಣಾತಿರುಪತಿವಿಹಾರಿ ದುರಿತಾರಿ ವೆಂಕಟರಮಣಕರವಿಡಿಯೆ ಸದ್ಗತಿ ಸರಾಗ ಕೃಷ್ಣಾ 3ಓಂ ವಿದುರಾಕ್ರೂರಾಯ ನಮಃ
--------------
ತಿಮ್ಮಪ್ಪದಾಸರು
ಚರಣವ ತೋರೈ ಚಲುವರಸನೇ ಚರಣವ ತೋರೈ ಪ ಸ್ಮರಣೆಮಾತ್ರದಲಿ ಮುಕುತಿಯ ಕೊಡುವ ಚರಣವ ತೋರೈ ಅ.ಪ ರಮ್ಮೆಯ ಮನಕೆ ಬೆಡಗು ತೋರುವ ಚರಣ ಬೊಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ ಚಿಮ್ಮಿ ರಾವಣನ ಬಲು ದೂರಗೈದ ಚರಣವ ತೋರೈ ಘಮ್ಮನೆ ಮೊಸರು ಮೆದ್ದು ಓಡುವ ಚರಣ ತೋರೈ 1 ಗೋಕುಲ ಭೂಮಿಯ ಪಾವನ ಮಾಡಿದ ಚರಣವ ತೋರೈ ಲೋಕವನೆಲ್ಲಾ ಅಡಗಿಸಿಕೊಂಡಾ ಚರಣವ ತೋರೈ ಬೇಕೆಂದು ಕುಬುಜಿಯ ಮನೆಗೆ ಪೋದ ಚರಣವ ತೋರೈ ಭವಾಬ್ಧಿ ಬತ್ತಿಸಿ ಬಿಡುವಾ ಚರಣವ ತೋರೈ 2 ಬಿಡದಲೆ ಸರ್ವಜ್ಞತೀರ್ಥರಿಗೊಲಿದಾ ಚರಣವ ತೋರೈ ಬಡವರಾಧಾರ ದಿವ್ಯಭೂಷಣವಿಟ್ಟು ಚರಣವ ತೋರೈ ಕಡು ಮುದ್ದು ಸಿರಿಕೃಷ್ಣ ವಿಜಯವಿಠ್ಠಲ ನಿನ್ನ ಚರಣವ ತೋರೈ ಪೂಜೆಯಗೊಂಬ ಚರಣವ ತೋರೈ3
--------------
ವಿಜಯದಾಸ
ಚರಣವನೀಗ ಹೊಂದಬೇಡ ಕೇಡಿಗಗುರುವಿನ ಚರಣವನೀಗ ಹೊಂದಬೇಡ ಪ ಜಾರಣ ಮಾರಣ ಬೋಧಿಸಿ ಗುರುವಜೀವನ ನೀಗಲೆ ತಿನ್ನುವ ಗುರುವಕಾರಣಿಕವನೆ ನುಡಿಯುವ ಗುರುವಕಾಮಿತವನೆ ಹೇಳುವ ಗುರುವ ಕೇಡಿಗ ಗುರುವ 1 ಮಹಿಮೆ ಗಿಹಿಮೆ ತೋರುವ ಗುರುವಮರಳಿ ಜನ್ಮಕೆ ತರುವ ಗುರುವದಹಿಸಿ ಮನೆಯ ಹೋಹ ಗುರುವದಂಡಣೆಯ ಗುರುವ ಕೇಡಿಗ ಗುರುವ 2 ಹರಿದು ತಿನ್ನುವ ಮೋಸದ ಗುರುವಬರಕತವಿಲ್ಲದ ಗುರುವಕರಕೊಳ್ಳುತಲಿರುವ ಕರ್ಮಿತಾಗುರುವ ಕೇಡಿಗ ಗುರುವ 3 ಶಾಂತಿ ಶಮೆ ದಮೆಗಳು ದೊರಕದ ಗುರುವಸೈರಣೆ ಎಂದಿಗು ನಿಲುಕದ ಗುರುವಕರುಣೆಯ ತಾತೋರದ ಗುರುವ ದಯವಿಲ್ಲದಗುರುವ ಕೇಡಿಗ ಗುರುವ4 ಆಸೆಯನು ಬಿಡದಿಹ ಗುರುವಅಂಗದ ಹಸಿವನು ತಿಳಿಯದ ಗುರುವಬಾಸ ಚಿದಾನಂದನ ನರಿಯದ ಗುರುವಬ್ರಹ್ಮನಾಗದ ಕೇಡಿಗ ಗುರುವ 5
--------------
ಚಿದಾನಂದ ಅವಧೂತರು
ಚರಣವೆಂಬ ದುರ್ಗಮ ದುರ್ಗ ಸೇರಿದೆ ನಿಜಭಕ್ತ ಜನರಿಗೆ ಆಭಯವ ಕೊಡುವಂಥ ಧ್ವಜವುಳ್ಳ ಪುರವಿದು ಪರರಿಗಸಾಧ್ಯ 1 ತನ್ನ ನಂಬಿದ ಇಂದ್ರ ಗಣಪತಿ ಇಹರೆಂದು ಚನ್ನ ವಜ್ರಾಂಕುಶ ಧರಿಸಿದೆ ನಿಧಿ ಪೂರ್ಣ 2 ನಿತ್ಯ ನಿರ್ಮಲವಿದು ಅಜ ಮೊದಲಾದವರು ಇಲ್ಲೆ ಸೇರುವರಯ್ಯ 3 ಕೆಳಗ ರವಿಯ ಕಾಂತಿ ಮ್ಯಾಲರ್ಧಾ ಶಶಿ ಛವಿ ಸ್ಥಳವಿದೆ ಭಾಗ್ಯಾಭಿಮಾನಿ ದೇವತೆಗೆ 4 ಸವಿಯಾದ ನದಿ ಇಲ್ಲಿ ಜನಿಸಿದೆ ಫಲ ಪದ್ಮ ಯವ ಮೊದಲಾದವಿವೆ ವಾಸುದೇವವಿಠಲನ್ನ ಚರಣವೆ 5
--------------
ವ್ಯಾಸತತ್ವಜ್ಞದಾಸರು
ಚರ್ಯನಾಮುಗಿವೆನು ಕೈಯ್ಯಾ ಪ ಮಂತ್ರಸದನ ಪದ ಚಿಂತಕ ಶ್ರೀ ರಘು ಕಾಂತಕರಜ ರಘು ದಾಂತ ಯತೀಂದ್ರರ ಅ.ಪ ಅಂತರಂಗದಿ ಸಂತತ ಶ್ರೀಹರಿಯ ಚಿಂತಿಸುತಲಿ ಭೂಮಿಯ ಕಾಂತ ದಂಷ್ಟ್ರದಿ ಸಂಜನಿಸಿದ ನದಿಯ ಸಂಗಮ ಶುಭನಿಲಯ ವಿಶ್ರಾಂತ ಸುಮಹಿಮರ 1 ಪತಿ ಲಕ್ಷ್ಮಣರ ಪಾದಾಂಬುಜ ಮಧುಪರ ಮೋದಾಶ್ರು ಸುರಿಸುತ ಪೂಜಿಸಿದವರ ಪುಲಕೀತ ವಿಗ್ರಹರ ವಾದಿವಾರಣ ಮೃಗಾಧಿಪರೆನಿಸುತ ಮೋದತೀರ್ಥ ಸುಮ ತೋದಧಿ ಚಂದಿರ 2 ಇಳಿಯೊಳು ಚರಿಸುತ ಬುಧ ಜನರನ್ನು ಚಲಿಸುತ ಛಾತ್ರರನು ತಿಳಿಸೀ ಸಚ್ಛಾಸ್ತ್ರವ ಮರ್ಮಗಳನ್ನು ಉದ್ಧರಿಸ್ಯವರನ್ನು ಯಳಮೇಲಾರ್ಯರ ಒಲುಮೆ ಪಡೆದು ಭವ ಕಲುಷ ವಿದೂರರ 3 ದಾಸರ ಶುಭಚರಿಯ ಸ್ತುತಿಸಿ ಶೇವಿಸಿ ಪಡೆದರು ಗುರುಕೃಪೆಯ ನೋಳ್ಪರಿಗಾಶ್ಚರ್ಯ ನತ ಜನರಘ ಪರ್ವತ ಪವಿ ಸನ್ನಿಭ ಕ್ಷಿತಿ ಸುರತತಿ ಸೇವಿತ ಪದ ಪದ್ಮರ 4 ಜಾಣ ಮಾನವರನ ಸಾನುರಾಗದಿ ಧ್ಯಾನಿಸಲಿವರನ್ನ ಕಾಮಿತ ಗರಿವರನ ಶ್ರೀನಿಧಿ ಕಾರ್ಪರ ಸ್ಥಾನಗ ನರಪಂಚನನನೊಲಿಸಿದ ಮೌನಿವರೇಣ್ಯರ 5
--------------
ಕಾರ್ಪರ ನರಹರಿದಾಸರು
ಚಾಮುಂಡೇಶ್ವರಿ ಪಾಲಿಸೆ ನಮ್ಮಚಾಮರಾಜೇಂದ್ರ ನೃಪಾಲನ ನಿರುತವು ಪಇಂದ್ರಾದಿ ದೇವರ್ಕಳೆಲ್ಲ ನಿನ್ನಂಘ್ರಿಯಕುಂದ ಮಂದರಾದಿ ಕುಸುಮರತ್ನಗಳನ್ನುತಂದು ಪೂಜಿಸಲಾಗ ಪರಿತುಷ್ಟಳಾಗಿ ನೀನಂದು ಕುಂದದ ವರಗಳನಿತ್ತು ಸಲ'ದೆ 1ಇಳೆಯೊಳು ಕೃಷ್ಣೇಂದ್ರ ನಿನ್ನ ಪೂಜೆಯ ಭಕ್ತಿಯಲಿ ಗೈದು ವರಪುತ್ರನನ್ನಾತ ಪಡೆದನುಒಲಿದು ನೀನಿತ್ತ ಪುತ್ರನು ಸುಖದಿಂದೀ ಭೂವಲಯವನಾಳಿಕೊಂಡಿರುವಂತೆ ವರ'ತ್ತು 2ಶರಣಾಗತಜನ ರಕ್ಷಣೆಗೈಯುತವರ ಮಹಾಬಲಗಿರಿಯೋಳು ನಿಂದು ಮೆರೆಯುವೆತರಳ ನಾರಾಯಣದಾಸನ ಬಿನ್ನಪವಕರುಣದಿಂ ಸಲಹು ವೆಂಕಟರಮಣ ಸೋದರಿ 3
--------------
ನಾರಾಯಣದಾಸರು
ಚಾರು ಹಸ್ತಾಯ 1ಹೃದಯಶೋಭಿತ ಮಹಾ ಕೌಸ್ತುಭಾಭರಣಾಯವಿಧಿಜನಕ ನಾಭಿಪಂಕಜ ಭಾಸುರಾಯಸದಮಲಾಯತ ಕಾಂಚಿದಾಮಯುತ ವಸನಾಯಬುಧಜನಮನೋವೇದ್ಯ ಪಾದಪದ್ಮಾಯ 2ಲಕ್ಷ್ಮೀಕಳತ್ರಾಯ ಸೂಕ್ಷ್ಮಸ್ವರೂಪಾಯಕುಕ್ಷಿಗತಭುವನ ಪರಿಪಾಲಕಾಯಪಕ್ಷೀಂದ್ರಕಂಧರಾರೂಢಾಯ ದುಷ್ಟಜನಶಿಕ್ಷಾಸಮರ್ಥಾಯ ಸಾಕ್ಷಿ ಚೈತನ್ಯಾಯ 3ವಿಶ್ವಸ್ವರೂಪಾಯ ವಿಶ್ವತರು ಮೂಲಾಯವಿಶ್ವಗುಣ ಸಂಹಾರಕಾರಣಾಯವಿಶ್ವನಾಟಕಸೂತ್ರಧಾರಾಯ ನಿತ್ಯಾಯವಿಶ್ವಕೃತ ಸುಕೃತದುಷ್ಕøತ ಲೇಪರಹಿತಾಯ 4ಧರಣಿಕಮಲಾಲಯಾಶ್ರಿತ ದಿವ್ಯ ಪಾಶ್ರ್ವಾಯಸುರಮುನಿ ಸ್ತುತಿ ಘೋಷಪೂರಿತಾಯಪರಮಪಾವನಪುಣ್ಯ ಶೇಷಾದ್ರಿನಿಲಯಾಯಸ್ಮರಜನಕ ಸುರಶಿಖಾಮಣಿ ವೆಂಕಟೇಶಾಯ 5ಓಂ ಅನಘಾಯ ನಮಃಕಂ||ಗಣಪತಿ ನಿನ್ನಾಗ್ನೇಯದಲಿನ ತಾ ನೈರುತ್ಯದೆಶೆಯೊಳಂಬಿಕೆಮರುತನೊಳನುಪಮ ಶಂಕರನೀಶಾನ್ಯನೋಳರ್ಚಿತರಾರೈಯ್ಯ ತಿರುಪತಿಯೊಡೆಯಾನೀನೇ ಗಣಪತಿ ಸೂರ್ಯನುನೀನೇ ಶಿವ ನಿನ್ನ ಶಕ್ತಿ ದೇವಿಯು ನಾನೂನೀನಾಗಿ ನಿನ್ನ ಭಜಿಸಿದೆನೀ ನಿರ್ಣಯ ನಿನ್ನ ವಚನ ವೆಂಕಟರಮಣಾ
--------------
ತಿಮ್ಮಪ್ಪದಾಸರು
ಚಿಂತಾಮಣಿಗಮಿತ ಚಿಂತಾಮಣಿ ಚಿಂತಲವಾಡಿ ಶ್ರೀ ನೃಸಿಂಹಸ್ವಾಮಿ ಪ ಕಂತುಪಿತ ಕೊಟ್ಟರುವ ಸಾಮಥ್ರ್ಯದಿಂದಲೇ ಐಹಿಕ ವಸ್ತುವೀವುದು ಅನಂತ ಶ್ರೀಪತಿ ಚಿಂತಲವಾಡಿ ಕರುಣಿ ಸ್ವ - ತಂತ್ರನು ಇಹಪರದಿ ಐಶ್ವರ್ಯವ 1 ಕಾಕುಮನ ವಾಕ್ಕಾಯ ಶುದ್ಧ ಮಾಡುವ ದೇವಿ ಶ್ರೀ ಕಾವೇರಿ ತೀರದಲಿ ಕುಳಿತು ಸರ್ವ ಭಕುತರಿಗೆ ವರವೀವ ಶ್ರೀಕಾಂತ ನರಸಿಂಹ ಸುಖಜ್ಞಾನಮಯ ದೋಷದೂರ ಗುಣನಿಧಿಯು 2 ಮಮಕಾರ ಅಹಂಕಾರ ಡಂಭತನವನು ಬಿಟ್ಟು ಮಮಸ್ವಾಮಿ ಸರ್ವರಿಗೂ ಪರಮೈಕಸ್ವಾಮಿಯು ಸುಮನಸಾರ್ಚಿತ ಕುಸುಮಸಂಭವನ ತಾತನು ರಮಾಪತಿ ಪ್ರಸನ್ನ ಶ್ರೀನಿವಾಸ ನಮೋ ಎನ್ನಿ 3
--------------
ಪ್ರಸನ್ನ ಶ್ರೀನಿವಾಸದಾಸರು
ಚಿಂತಿಪೆನೊಂದೊಂದು ನಾನಿಂತು ಬೇಡುವೆನು ಪ ನರಜನ್ಮಕೆ ಬರುವುದು ತಾ ದುರ್ಲಭವು ವರಕುಲ ದುರ್ಮಿಳವು ದೊರೆವುದೆ ಭಾಗ್ಯವು ಧರೆಯೊಳು ಬಂದೀ ಗುರುಕುಲದೊಳು ಪುಟ್ಟಿ ಗುರುವರಪೂಜ್ಯ ಪರಾತ್ಮನ ಪೂಜಿಪೆ 1 ನಿಜರೂಪ ತೋರಿದಿ ಪ್ರಲ್ಹಾದನಿಗೆ ಗಜವರನೆನಹೀಗೆ ವಿಜಯನ ರಾಣಿಗೆ ದ್ರುಪದಾತ್ಮಜೆಗೆ ಭಜಕರ ನಿಚಯಕ್ಕೆ ಕುಜಪ್ರದ ಮೂರ್ತಿಗೆ ಅಜರಾಮರಿಗೆ ನಿಜಪದ ತೋರೆಂದು ಭಜಿಸಿ ಬೇಡುವೆನು 2 ಗಂಗೋದಕದೊಳು ಮೀಯಲು ಪಾವನವು ಮಂಗಲ ತುಲನೇಯು ಸಿಂಗಾರದೊಳಧಿಕಾಚ್ಯುತ ಭೂಷಣೆಯು ನಿನ್ನಾದೇ ವರವು ಬಂಧುರದೇಹವ ತಾಳಿದೆನಗೆ ನೀ ಸಂಗಸುಖವನೀಯೋ ನರಸಿಂಹವಿಠಲ3
--------------
ನರಸಿಂಹವಿಠಲರು
ಚಿಂತಿಸೋ ಭಾರತವ ನೀ ಚಿಂತಿಸೊ ಪ. ಚಿಂತಿಸೊ ಭಾರತ ಮಹಿಮಾ | ಸಿರಿಕಾಂತನೆ ಉತ್ತಮೋತ್ತಮಾ | ಆಹಪಂಕ್ತಿಪಂಕ್ತಿಯೊಳಂತೆ | ಚಿಂತಿತ ಫಲದನಸಂಗ್ತಿ ಪೇಳುವ ಶ್ರುತಿ | ಅರ್ಥ ಭೋಧಿಪುದೆಂದು ಅ.ಪ. ಕಾಳಗ ಸರ್ವ | ಧೀಶನ ಮಹಿಮೆಯ 1 ಅಧಿಭೂತ ಅಧ್ಯಾತ್ಮ ಉಂಟು | ಮತ್ತೆಅಧಿದೈವವೆಂಬುದು ಉಂಟು | ಕೇಳುವಿದಿತವಾಗುವುದಲ್ಲ ಗಂಟು | ಗುರುಮುದದಿಂದ ಬಿಡಿಸಲೀ | ಗಂಟು | ಆಹಅದುಭುತಾರ್ಥಗಳೆಲ್ಲ | ವಿದಿತವಾಗುತ ಹರಿಹೃದಯಾಂತರಂಗನ | ನಿಧಿಧ್ಯಾಸನಕ್ಕವಕಾಶ 2 ಮೂರ್ಬಗೆ ಭಾಷೆಗಳಲ್ಲಿ | ಉಕ್ತಸಾರ ಪ್ರಮೆಯಂಗಳಲ್ಲಿ | ಹರಿ ಉ-ದಾರ ಗುಣಂಗಳು ಅಲ್ಲಿ | ಉಕ್ತಮೀರದೆ ಸ್ಪಷ್ಟತ್ವದಲ್ಲಿ | ಆಹನೇರವಾಗಿಯೆ ಪೇಳ್ದ | ಕಾರಣ ಕರೆವರುಮೂರರೊಳ ಗೊಂದು | ಸಾರಸಮಾಧ್ಯೆಂದು 3 ದರ್ಶನಾಂತರ ಸಿದ್ಧವಾದ | ವೈಷ್ಣ್ವದರ್ಶನ ಪ್ರತ್ಯುಕ್ತವಾದ | ಶೈವದರ್ಶನಾದಿ ಸಿದ್ಧವಾದ | ವಸ್ತುದರ್ಶಿತ ಶಿವನರ್ಚಿಸೀದ | ಆಹ ವಿ-ಮರ್ಶನ ಯೋಗ್ಯ ಸ | ದೃರ್ಶನ ದಿಂದಲಿದರ್ಶನ ಭಾಷೆ ದಿ | ಗ್ದರ್ಶನ ವಿದು ತಿಳಿ 4 ಶೂಲಾಟ್ಟ ಜನಪದವೆಂಬ | ಶಿವಶೂಲವು ಚತುಷ್ಪಥವೆಂಬ | ಕೇಶಶೂಲಿಗಳ್ಪ್ರಮದೇರು ಎಂಬ | ಯುಗಕಲಿಯೊಳಗಿಹರು ಎಂಬೆಂಬ | ಆಹಮೇಲಾದ ಗೂಢಾರ್ಥ | ಜಾಲಗಳೆಲ್ಲವುಓಲೈಸು ಗುಹ್ಯದ | ಭಾಷೆ ಎಂದೆನುತಲಿ 5 ಪರ ಪಾಂಡವಾದಿಗಳ್ಪೆಸರೆಂದು 6 ಸ್ವರವರ್ಣ ವಾಕ್ಯ ಭಾರತ | ಗ್ರಂಥಸರ್ವವು ಮುಖ್ಯ ಪ್ರವೃತ್ತ | ಹರಿಸರ್ವೋತ್ತಮನೆಂಬ ತತ್ವ | ಪೇಳೆಸಿರಿ ವೇದವ್ಯಾಸ ವಿರಚಿತ | ಆಹಪರಮ ಭಕ್ತರು ಪೃಥೆ | ವರ ಉದರೋದ್ಭವಧರ್ಮಾದ್ಯರ ಚರಿತೆ | ಅರುಹುವುದೆನುತಲಿ 7 ಗುಣಗಳು ಭಕ್ತ್ಯಾದಿ ದಶವು | ಇನ್ನುಕರ್ಣದಿಂ ಕೇಳ್ವುದೆಲ್ಲವು | ಹಾಗೆಗುಣಗಳು ಶೀಲ ವಿನಿಯಾವು | ಮತ್ತೆಗುಣಸುವುದು ಮೂರು ವೇದವು | ಆಹಮನು ಪದ ವಾಚ್ಯಗ | ಳೆನಿಸುವುದೀ ಪಂಚಗುಣಧರ್ಮ ವಾಚ್ಯರು | ಪಾಂಡವರೆನಿಪರು 8 ಅಭಿಮಾನಿ ಧರ್ಮಕ್ಕೆ ಎಂದು | ಮನುಅಭಿಧನು ಧರ್ಮಜನೆಂದು | ಇನ್ನುಅಭಿಮಾನಿ ಭಕ್ತ್ಯಾದಿಗೆಂದು | ಭೀಮನಭಿಧನಾಗಿಹನವ ಎಂದು | ಆಹಅಭಿಧನರ್ಜುನ ಶ್ರುತ | ಕಭಿಮಾನ ಎನುತಲಿಶುಭ ಶೀಲ ವಿನಯಕ್ಕೆ | ಅಭಿಮಾನಿಯಮಳರು 9 ಪರಿ ಪತಿ ಪರಿ ಜ್ಞಾನುಳ್ಳ | ಆ ಪೃಥೆ ಸುತರೆಲ್ಲನೀ ಪರಿಭಾವಿಸು | ಆಸ್ತೀಕರೆನುತಲಿ 10 ದ್ರುಪದಜೆ ಧರ್ಮಾದಿ ಐದು | ಜನಸುಪುಣ್ಯ ಶ್ಲೋಕರ ಕಥೆ ಇದು | ಇನ್ನುಉಪರಿಚರಾಭಿಧನೆಂದು | ವಿಷ್ಣುಸುಪ್ರತಿಪಾಧ್ಯನು ಎಂದು | ಆಹಇಪ್ಪರಿ ಮಹಿಮೆಯು | ಪೇತವು ಭಾರತಸುಪ್ರತಿಷ್ಠಿತವಿದು | ಅಬ್ಜಜಾಂಡದಲೆಂದು11 ಭಕ್ತಿವೈರಾಗ್ಯವು ಜ್ಞಾನಾ | ಮತ್ತೆಧೃತಿಯು ಸುಮೇಧಾ ಸುಪ್ರಜ್ಞಾ | ಇನ್ನುಸ್ಥಿತಿ ಬಲಯೋಗವು ಪ್ರಾಣಾ | ಭೀಮಹತ್ತು ಗುಣಾತ್ಮಕ ಮಾನಾ | ಆಹಉತ್ತಮ ಗುಣಿಪರ | ನಾತ್ಮನಾ ಅದರಿಂದತತ್ತನು ಎನಿಸೀಹ | ಪೃಥ್ವಿಪ ಭೀಮನು 12 ಮೂರ್ತಿ ಮೂರ್ತಿ | ಆಹಕರೆಸಿಹ ಶಕುನಿಯು | ಮೂರುತಿ ನಾಸ್ತಿಕ್ಯಸರ್ವದೋಷಾತ್ಮಕ | ರೆನಿಪರಂಧಜರೆಲ್ಲಾ 13 ಹರವನಾತರನು ಎಂದು | ದ್ರೌಣಿಕರೆಸುವನಹಂಕಾರನೆಂದು | ಇನ್ನುಕರಣಗಳ್ಪ್ರಾಣಾದಿ ಎಂದು | ಮತ್ತೆವರ ಸೈನ್ಯ ಪಾಪಗಳೆಂದು | ಆಹಅರಿವುದರ ಪುಣ್ಯ | ಪರವೆಂದು ಪಾಂಡವರಇರುತಿಹ ವಿಷ್ಣುವು | ಅವರ ನಿಯೋಜಕ 14 ಸರ್ವವು ಅಧ್ಯಾತ್ಮನಿಷ್ಟ | ಗ್ರಂಥದುರ್ವಿಜ್ಞೇಯ ಸರ್ವರ್ಗೆ ಎನುತ | ವ್ಯಾಸಸರ್ವಜ್ಞ ತಾನೆಲ್ಲ ಜ್ಞಾತ | ನಿಹಪೂರ್ವ ಮಾರುತ ಹರಿದೂತ | ಆಹಅರಿವ ಗುರು ಗೋವಿಂದ | ವಿಠಲಾನುಗ್ರಹದಿಂದಮರುತಾನುಗ್ರಹದಿಂದ | ಅರಿವರು ಇತರರು 15
--------------
ಗುರುಗೋವಿಂದವಿಠಲರು
ಚಿಂತೆ ಬಿಡಲಿಲ್ಲಾ ಎನ್ನಂತ ತಿಳಿಯಲಿಲ್ಲಾ ಪಾದ ಕಾಣದೇ ವ್ಯರ್ಥ ಸತ್ತೆನಲ್ಲಾ ಪ ನೀರಮೇಲಣಗುಳ್ಳೆ ಸಂಸಾರವೆಂಬುವ ಬಳ್ಳಿ ತೋರಿ ಯಡಗೋದಿಲ್ಲ ಆಧಾರ ಗತಿಗೆ ಅಲ್ಲಿ ನೀರಜದೆನೆ ನೀರಿನ ಸಂಗ ಪರಿ ಇರುತಿಹೆ 1 ಹೆಣ್ಣು ಹೊನ್ನು ಮಣ್ಣು ಜೀವ ಭವ ಪೆಣ್ಣು ಫಣಿಗಣ್ಣಗೆ ಬಿಡದಿನ್ನು ಬೆಣ್ಣೆ ಜಲವ ಉಣ್ಣದ ಪರಿ ಕುನ್ನಿ ವಿಷಯಗಣ್ಣಿಸದಿಹೇ 2 ಶುಭಗುಣಗಣ ಹೃದಯ ಎನಗಭಯವೀಯೋ ಸದಯಾ ಪ್ರಭು ನರಸಿಂಹ ವಿಠಲಯ್ಯಾ ನಿನ- ಗಭಿನಮಿಸುವೆನಯ್ಯಾ ಸುಭಗ ನಿನ್ನ ಪಿಡಿದೆನಯ್ಯಾ ಶುಭಕರ ಸಿರಿಮೊಗ ತೋರಯ್ಯಾ 3
--------------
ನರಸಿಂಹವಿಠಲರು
ಚಿಂತೆ ಮಾಡುವುದ್ಯಾಕೆ ಮನವೆ ನೀನು ಕರ್ಮ ಎಂದಿಗಾದರೂ ಬಿಡದು ಪ ಮಗÀನಾರು ನೀನಾರು ಪೇಳೊ ಸಿದ್ಧ ನಿಗಮಾರ್ಥಗಳಿಂದ ಸಜ್ಜನರ ಕೇಳೊ ತಗಿದು ಕಳಿ ಶೋಕದ ಗೋಳು ನಿತ್ಯ ನಗಧರನ ಭಕ್ತಿಯಲಿ ಸುಖದಲ್ಲಿ ಬಾಳೋ 1 ಸಾಹನಶಕ್ತಿಯನ್ನು ಮಾಡೊ ಬರಿದೆ ಸ್ನೇಹ ಮಾಡಿದರಿಂದ ಜ್ಞಾನಕ್ಕೆ ಕೇಡು ತಾಹಾದು ಸ್ಥಿರವೆಂದು ನೋಡೊ ನೀನೂ ಮಾಹಪದವಿಗೆ ಬಂದೆ ಸುದೃಢವೆ ಬೇಡು2 ವಿರಕ್ತಿ ತೊಡು ತೊಡು ಬಿಡದೆ ಎಂದು ಸಾರಿದೆ ಪೇಳಿ ಧರ್ಮದಲಿನ್ನು ನುಡಿದೆ ವಾರವಾರಕೆ ಹೀಗೆ ಕೆಡದೇ ಶ್ರಿಂ ಗಾರ ಶ್ರೀ ವಿಜಯವಿಠ್ಠಲಲೆನ್ನು ದು:ಖಬಡದೆ 3
--------------
ವಿಜಯದಾಸ
ಚಿಂತೆಯಾತಕೆ ನಿನಗೆ ಎಲೆ ಪ್ರಿಯಳೆ | ಸಂತತ ತಿಳುಪುವೆನು ಭಕುತಿಯಿಂದಲಿ ಕೇಳು ಪ ಈ ಭೋಗ ನಮಗೆ ಯಾಕೆಂದು ನೀ ಕೇಳುವಿಯಾ | ಲಾಭವಲ್ಲದ ಇದು ನೋಡುವದಕೆ ಶ್ರೀ ಭೂರಮಣ ತಾನೆ ತಂದಿತ್ತ ವಿಚಿತ್ರ ವೈಭೋಗವಲ್ಲೆನೆಂದರೆ ಬಿಡದು ರಮಣೀ 1 ಹಿರಿಯರು ಈರ್ವಗೆ ಮಾಡಿದ ನಿಷ್ಠೆ ವಿ ಪರಿ ಸೌಖ್ಯವ ಹಿರಿದಾಗಿ ಕೊಟ್ಟು ನಮ್ಮನು ಪಾಲಿಸುವುದು ಬಲು ಮೊರೆಯಿಟ್ಟರೆ ಕೇಳು ಹರಿಯ ಮಹಿಮೆಗೆ ನಮೋ 2 ಕ್ಷೀರಸಾಗರದೊಳಗೆ ಓಲ್ಯಾಡುವವನ ವಿ ಚಾರಮಾಡದೆ ತಂದು ಹೃದಯಮಧ್ಯ ಸೇರಿಸುವಂದದಿ ಎನಗೆ ಇಲ್ಲಿಹ್ಯುದು ಸಂ ಸಾರದೊಳಗಿದ್ದ ಸುಖವಿನಿತುಂಟು ರಮಣೀ 3 ಸಂತಾನವಿಲ್ಲೆಂದು ಈರ್ವರೂ ಚಿಂತಿಪದ್ಯಾಕೆ ಪಿಂತೆ ಕಾಂತಾರದಲಿ ಬಾಲಮೃಗನ ಅಂತಕನ ಪುರಿಗೆ ಅಟ್ಟಿದ ದೋಷದಿಂದ ನಮ- ಗಿಂತು ತೋರಿತು ಗುಟ್ಟು ಪೇಳಬಾರದು ರಮಣೀ 4 ಈ ಜನ್ಮ ಬಂದದಕೆ ಇನ್ನಾದರೆಚ್ಚೆತ್ತು ಮಾಜಿಕೊಂಡಿದ್ದು ಜನರಂತೆ ನಡದು ಸಿರಿ ವಿಜಯವಿಠ್ಠಲನ ಸ ರೋಜ ಚರಣವನು ಪೂಜಿಸುವೆನು ರಮಣೀ 5
--------------
ವಿಜಯದಾಸ
ಚಿಂತೆಯಾತಕೆ ಮನವೆ ನಿನಗಿದು ಸತತ ಸಲ್ಲದು ಕಾಣೊ ಪುರಂದರ ದಾಸರನುದಿನ ಇಂತು ಬಗೆಯಲಿ ಪಾಲಿಸೊ ಪ ಅಗ್ರ ಬುದ್ಧಿಯ ತಾಳು ನಿನಗೆ ಸಾ ಮಗ್ರಿ ಆಲೋಚನಿ ಯಾತಕೆ ಸ ಮಗ್ರ ಸೋಪಸ್ಕರವನು ಅನುಗ್ರಹವನು ಮಾಡುತಾ ಉಗ್ರ ಮನುಜರ ಕೂಡಿಸದೆ ಪಾ ಅಂದು ಪೊಗಳಲು ಶೀಘ್ರದಲಿ ನಿಂದಿಹರೊ 1 ಹರಿಗುರುಗಳ ಸಂಕಲ್ಪ ತಪ್ಪದು ಗಿರಿಗಹ್ವರದೊಳಗಿದ್ದರು ಅದು ಬರಿದೆಯಾಗದು ಕೇಳು ಸ್ಮರಿಸಿ ಬಳಲಿ ನಲಿದಾಡಿ ಪರಿದ ಕಾಲಕೆ ಬಿಡದೆ ಅಹಿಕದ ಚರಿತೆ ಅವರಿಗೆ ಗಣಣೇನೊ2 ತೆತ್ತಗಿನ ಸ್ವಭಾವ ಆವದೊ ಎತ್ತಲಟ್ಟಿದರತ್ತ ತೊಲಗದೆ ಹೊತ್ತುಹೊತ್ತಿಗೆ ಪೋಗಿ ಬಾಗಿ ತೊತ್ತಿನಂದದಿ ಪ್ರಯೋಜನ ಹೊತ್ತು ಮೀರದೆ ಮಾಳ್ಪುದು ಧರ್ಮ ಮೊತ್ತವಲ್ಲದೆ ಇನ್ನೊಂದಿಲ್ಲವೊ ಇತ್ತ ಭಾಗ್ಯವಿತ್ತ ನಿರ್ಮಳ ಚಿತ್ತದಲಿ ಅರ್ಪಿಸುತಿರು3 ನೀನು ಮಾಡಿದ ಪುಣ್ಯಗಳಿಗೆ ತಾ ನಡದು ಬರುವುದೇ ಮರುಳೆ ನಾನಾ ಪರಿಯಲಿ ತಿಳಿದು ನೋಡು ಧ್ಯಾನದಿಂದಲಿ ದಿನಪ್ರತಿ ಜ್ಞಾನನಿಧಿ ನಿಜಗುರು ಶಿರೋಮಣಿ ಅನಂತಾನಂತ ಜನುಮದಲೀಗ ಗಾನಮಾಡಿದ ನಿಷ್ಟ ಪುಣ್ಯವು ತಾನೊಲಿದು ಫಲವಿತ್ತದೋ4 ಕಲ್ಲು ಕರಗಿಸಿ ಬೆಣ್ಣಿ ತೆಗುವಂಥ ಬಲ್ಲಿದರು ನಿನ ಗೊಲಿದಿರಲು ಎಲ ಎಲ್ಲಿ ಇಲ್ಲವೆಂಬೊ ಸೊಲ್ಲುಗಳಲ್ಲದೆ ಇದು ಸಲ್ಲದೊ ಸಕಲ ಮನೋಭೀಷ್ಟಾ ತುಲ್ಯ ವಲ್ಲಭ ಮಲ್ಲದಲ್ಲಣ ನಿಲ್ಲದಲೆ ವೊಲಿದಿಹನೊ 5 ನೂನ್ಯಪೂರ್ಣವು ಅವರನ ಕೂಡಿ ತನ್ನ್ಯೋಪಾಯವು ಯಾಕೆ ನಿನಗೆ ಕಣ್ಣೆವೆ ಇಡುವನಿತರೊಳು ಕಾರುಣ್ಯವರುಷಗರೆದು ಬಿಡುವ ದೈನ್ಯವೃತ್ತಿಯ ಬಿಡಿಸಿ ನಿಷ್ಕಾಮ ಪುಣ್ಯವನಧಿಯೊಳಿಡುವರೊ 6 ಊರ್ವಿಗೀರ್ವಾಣರಿಗೆ ಉಣಿಪುದು ಗರ್ವವನು ತಾಳದಲೆ ಚೆನ್ನಾಗಿ ಸರ್ವಬಗೆಯಲಿ ನಾನು ಎಂಬೊ ದುರ್ವಚನಗಳ ನುಡಿಯದೆ ಪೂರ್ವತನೆ ಬಯಸುತಾರಾಧಿಸು ಶರ್ವಸನ್ನುತ ವಿಜಯವಿಠ್ಠಲ ಪೂರ್ವನೆಂತ ಪ್ರಬಲನೆ7
--------------
ವಿಜಯದಾಸ