ಒಟ್ಟು 2739 ಕಡೆಗಳಲ್ಲಿ , 120 ದಾಸರು , 1838 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೀತಾ ಕಲ್ಯಾಣ ಪಾಕ ಶೇಷಾದ್ರಿ ಬ್ರಹ್ಮಕೆ ಶರಣು ಲೋಕನಾಯಕ ಹೆಳವನಕಟ್ಟೆ ವೆಂಕಟ ನೀ ಕರುಣಿಸಿ ಸಲಹುವುದೆನಗೆ ಜಯ ಜಯ ಪ. ಮದುವೆಯ ನಾಲ್ಕು ದಿವಸದಲ್ಲಿ ಮದುವಣಿಗನು ರಾಮ ಜಾನಕಿಗೆ ಪದನ ಹೇಳುವೆ ಸುಜನರು ಕೇಳಿ ಜಯ ಜಯ 1 ಚಿತ್ತಜಪಿತ ಶ್ರೀರಾಮರಿಗೆ ಅರ್ತಿಯಿಂದರಿಷಿಣೆಣ್ಣೆಯ ಮಾಡ್ವ ಮಿತ್ರೆ ಕೌಸಲ್ಯದೇವಿ ಕೇರಿ ಕೇರಿಯ ಗುಂಟ ಮುತ್ತೈದೇರನು ಕರೆಸಿದಳು ಜಯ ಜಯ 2 ಪೀತಾಂಬರದುಡುಗೆಯನುಟ್ಟು ಜ್ಯೋತಿಯಂದದಿ ಥಳಥಳಿಸುತಲಿ ಜಾತಿಮಾಣಿಕದಾಭರಣವಿಟ್ಟು ರಾಮರ ಮಾತೆಯರೆಲ್ಲ ಶೃಂಗಾರವಾಗಿ ಜಯ ಜಯ 3 ಚೀಣ ಚೀಣಾಂಬರಗಳನುಟ್ಟು ವೇಣಿ ಕಸ್ತೂರಿಯ ಪಣೆಗಿಟ್ಟು ಜಾಣೆಯರೆಲ್ಲ ಶೃಂಗಾರವಾಗಿ ಮಲ್ಲಿಗೆ ಬಾಣನ ಪಟ್ಟದಾನೆಗಳಂತೆ ಜಯ ಜಯ 4 ಪೊಂಬಣ್ಣದ ಹಳದಿಯ ಕಲೆಸಿ ತುಂಬಿದ ಹರಿವಾಣದೊಳಗೆ ಅಂಬುಜನಾಭಗೆ ಅರಿಷಿಣೆಣ್ಣೆಯ ಮಾಡ್ವ ಸಂಭ್ರಮಕೆ ನಡೆತಂದರಾಗ ಜಯ ಜಯ 5 ಗರುಡನ್ವಲ್ಲಭ ಸೌಂದರದೇವಿ ವರುಣನ್ವಲ್ಲಭೆ ಕಾಳಕದೇವಿ ಹರನ್ವಲ್ಲಭೆ ಪಾಪ[ನಾ] ಶಿಗಂಗೆ ಸಹಿತಲಿ ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ 6 ಬ್ರಹ್ಮವಲ್ಲಭೆ ಶಾರದಾದೇವಿ ವಾ- ಯುರಮಣಿ ಅಂಜನಾದೇವಿ ಹರುಷದಿ ಕೌಸಲ್ಯೆ ಕೈಕೆಸೌಮಿತ್ರೆಯರು ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ7 ಅಲ್ಲಲ್ಲಿ ನಡೆವ ನಾಟಕಶಾಲೆ ಬಿಲ್ಲಾಳು ಬೆತ್ತ ಕಾಟನವರು ಸೊಲ್ಲುಸೊಲ್ಲಿಗೆ ಹಿಡಿಹೊನ್ನನು ತ್ಯಾಗವ ಚೆಲ್ಲುತ ದಶರಥ ನಡೆದನಾಗ ಜಯ ಜಯ 8 ಹೊಡೆವ ತಂಬಟೆ ಭೇರಿ ನಿಸ್ಸಾಳೆ ಬಿಡದೆ ಚೀರುವ ಹೆಗ್ಗಾಳೆಗಳು ಸಿಡಿಲು ಗರ್ಜಿಸುವಂತೆ ಪಂಚಮವಾದ್ಯದಿ ನಡೆದರು ಜನಕರಾಯನ ಮನೆಗೆ ಜಯ ಜಯ 9 ಕುಸುಮಬಾಣನ ಮಾರ್ಬಲದಂತೆ ಹಸುರು ಪಚ್ಚೆಯ ಪಲ್ಲಕ್ಕಿಗಳು ಮುಸುಕಿದ ಪರಿಮಳದೊಳಪ[ಸಾ]ತಕೆ ದಶರಥ ಬಂದನೆಂದರೆ ಜನರು ಜಯ ಜಯ 10 ಭರದಿಂದಲೆದ್ದು ಜನಕರಾಯ ತರಿಸಿ ನಿವಾಳಿಗಳನು ಹಾಕಿ ಹರುಷದಿ ಕೈಲಾಗವ ಕೊಟ್ಟಯೋಧ್ಯದ ಅರಸ[ನ] ಮನ್ನಿಸಿ ಒಡಗೊಂಡನಾಗ ಜಯ ಜಯ11 ಬೇಗದಿ ಗದ್ದುಗೆಯನು ಹಾಸಿ ಬೀಗನ ಉಪಚರಿಸಿದ ಜನಕ ಭಾಗೀರಥಿ ಪಾರ್ವತಿ ಗಂಗೆ ಸಹಿತಲಿ ನಾಗಭೂಷಣನು ಕುಳಿತನಾಗ ಜಯ ಜಯ 12 ಸುತ್ತಣ ರಾಯರಾಯರಿಗೆಲ್ಲ ರತ್ನಗಂಬಳಿಗಳ ಹರಹಿದರು ಅರ್ತಿಯಿಂದಲಿ ಸುರರೆಲ್ಲರು ಕುಳಿತರು ವಿಸ್ತರಿಸಿದ ಮಂಟಪದೊಳಗೆ ಜಯ ಜಯ 13 ಮಣಿಮಂಟಪದೊಳು ಹಸೆಹಾಸಿ ಕನಕ ಮಣಿಯ ತಂದಿಳುಹಿದರು ದಿನಕರಕುಲರಾಮ ಹಸೆಗೇಳೆನುತಲಿ ಗುಣಾವಳಿಗ[ಳ] ಕೊಂಡಾಡಿದರು ಜಯ ಜಯ 14 ಪೊಕ್ಕಳೊಳಜನ ಪೆತ್ತವನೇಳು ಅಕ್ರೂರಜನ ಪೆತ್ತವನೇಳು ಮುಕ್ಕಣ್ಣನ ರಿಪುಬಲವ ಸಂಹರಿಸಿದ ಭಕ್ತವತ್ಸಲ ಹಸೆಗೇಳೆಂದರು ಜಯ ಜಯ 15 ದಶರಥರಾಜನಂದನನೇಳು ಅಸುರಸಂಹಾರ ಕಾರಣನೇಳು ವಸುಧೆಗೊಡೆಯ ರಾಮ ಹಸೆಗೇಳೆನುತಲಿ ಋಷಿಗಳೆಲ್ಲರು ಶ್ರುತಿಗರೆದರಾಗ ಜಯ ಜಯ 16 ಋಷಿವಾಲ್ಮೀಕಿ[ಯ]ರೆಲ್ಲರು ಕೂಡಿ ಕುಶಲದ ಬಾಸಿಂಗವ ಪಿಡಿದು ಅಸುರಾರಿಯ ಮಸ್ತಕಕಳವಡಿಸೋರು ವಸುದೇವನಾಗೆಂದು ಹರಸುತಲಿ ಜಯ ಜಯ 17 ತಂಡತಂಡದ ರತ್ನ ಅಡಸಿದಾಗ ಮಣಿ ಬಿಗಿದಿದಾಗ ತೊಂಡಿಲ ಮುತ್ತೈದೇರಳವಡಿಸೋರು ಕೋ- ದಂಡ ಪಾಣಿಸತಿಜಾನಕಿಗೆ ಜಯ ಜಯ 18 ಬೆರಳಿಗೆ ಮುದ್ರೆ ಉಂಗುರವಿಟ್ಟು ಕೊರಳಿಗೆ ಏಕಾವಳಿಯನೆ ಹಾಕೋರು ತರಳಾಕ್ಷಿಯರಾ ಜಾನಕಿಗೆ ಜಯ ಜಯ 19 ಬೊಂಬೆಯ ತೊಂಡಿಲ ಮುಡಿದಿರ್ದು ಕುಂಭಿಣಿಸುತೆ ಕುಳ್ಳಿರಲಾಗಿ ಅಂಬುಜಾಂಬಕ ರಘುರಾಮನ ಹರುಷದಿ ರಂಭೆಯಿದ್ದೆಡೆಗೆ ಬಂದನೆ ನಗುತ [ಜಯ ಜಯ]20 ಬಂದನೆ ಭಾಗ್ಯಲಕ್ಷ್ಮೀರಮಣ ಬಂದನೆ ಭಕ್ತವತ್ಸಲ ಸ್ವಾಮಿ ಬಂದನೆ ಜಾನಕಿಯಡೆ ರಾಮನು ತಾ ಬಂದನೆ ಮಣಿಮಂಟಪದೆಸೆಗೆ [ಜಯ ಜಯ] 21 ಧೂರ್ಜಟಿ ಜಪಿಸುವ ನಾಮವಿಗ್ರಹ ಬಂದ ವಜ್ರಮಾಣಿಕದ್ಹಸೆಯಿದ್ದೆಡೆಗೆ ಜಯ ಜಯ 22 ಕೌಸಲ್ಯಸುತ ಕುಮಾರ ಬಂದ ಹಂಸವಾಹನಪಿತ ರಾಮ ಬಂದ ಕಂಸಾರಿ ದುಃಖವಿ [ನಾಶ] ರವಿಕುಲ ವಂಶೋದ್ಧಾರಕ ಬಂದನಾಗ [ಜಯ ಜಯ] 23 ಭಕ್ತವತ್ಸಲ ರಾಘವ ಬಂದ ಮುಕ್ತಿದಾಯಕ ಶ್ರೀರಾಮ ಬಂದ ಅರ್ಕನು ಶತಕೋಟಿತೇಜನು ಜಗಕತಿ- ಶಕ್ತ ತಾ ಬಂದನೆಂದವೆ ಕಹಳೆ ಜಯ ಜಯ 24 ಸಿಂಧುಬಂಧನ ರಾಘವ ಬಂದ ಪು- ರಂದರವರದ ಶ್ರೀರಾಮ ಬಂದ ಇಂದುವದನೆಪತಿ ರಾಮ ಬಂದನು ರಾಮ- ಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 25 ಯಜ್ಞಶಿಕ್ಷಾಮಿತ್ರ ರಾಮ ಬಂದ ಸುಗ್ರೀವರಕ್ಷಕಾರಣ ಬಂದ ಲಕ್ಷ್ಮ- ಣಾಗ್ರಜ ಬಂದನೆಂದವೆ ಕಹಳೆ ಜಯ ಜಯ 26 ಯಂತ್ರವಾಹಕ ರಾಘವ ಬಂದ ಮಂತ್ರಮೂರುತಿ ರಾಮ ಬಂದ ಕಾಂತೆ ಶ್ರೀ ಜಾನಕಿರಮಣ ಬಂದನು ರಾಮ ತಂತ್ರಿ ತಾ ಬಂದನೆಂದವೆ ಕಹಳೆ ಜಯ ಜಯ 27 ದೂಷಕಹರಣ ಶ್ರೀರಾಮ ಬಂದ ವಿ- ಭೀಷಣವರದ ರಾಘವ ಬಂದ ಭಾಷೆ ಪಾಲಿಪ ರಾಮಚಂದ್ರ ಬಂದನು ಜಗ- ದೀಶ ತಾ ಬಂದನೆಂದವೆ ಕಹಳೆ ಜಯ ಜಯ 28 ತಾಟಕಪ್ರಾಣಾಪಹಾರ ಬಂದ ಜಟÁಯುಮುಕ್ತಿಕಾರಣ ಬಂದ [ತಾಟಂಕ] ಧರ ನಾರಾಯಣ ರವಿಕುಲ ಕೋಟಿ ತಾ ಬಂದನೆಂದವೆ ಕಹಳೆ ಜಯ ಜಯ 29 ವೀರ ವಿಕ್ರಮ ರಾಘವ ಬಂದ ಮಾರೀಚಮರ್ದನ ರಾಮ ಬಂದ ನಾರಿ ಶ್ರೀ ಜಾನಕಿರಮಣ ಬಂದನು ಹರಿ ರಾಮ ತಾ ಬಂದನೆಂದವೆ ಕಹಳೆ ಜಯ ಜಯ 30 ದೇವಕುಮಾರ ರಾಘವ ಬಂದ ದೇವರ ದೇವನು ರಾಮ ಬಂದ ಭಾವೆ ಶ್ರೀ ಜಾನಕಿರಮಣ ಬಂದನು ರಾಮಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 31 ನಿರುಪಮಚರಿತ ರಾಘವ ಬಂದ ದುರಿತದಲ್ಲಣ ರಾಮದೇವ ಬಂದ ಭರತಶತ್ರುಘ್ನರ ಸಹೋದರಯೋಧ್ಯದ ಸುರಪತಿ ಬಂದನೆಂದವೆ ಕಹಳೆ ಜಯ ಜಯ 32 ಹೇಮಖಚಿತ ರತ್ನ ಪೀಠದಲಿ ಭೂಮಿಜೆ ಸಹಿತ ಕುಳಿತ ರಾಮ ವಾಮ ಭಾಗದಿ ಒಪ್ಪಿರ್ದಳು ಜಾನಕಿ ಆ ಮಹಾಸಭೆಯನು ಬೆಳಗುತಲಿ ಜಯ ಜಯ 33 ಕುಂದಣ ರತ್ನದಡ್ಡಿಕೆಯೊಳಗೆ ಹೊಂದಿಸಿ ನವರತ್ನ ಇರುವಂತೆ ಇಂದುವದನೆ ಜಾನಕಿ ಹರುಷದಿ ರಾಮ ಚಂದ್ರನ ಮಧ್ಯದೊಳೊಪ್ಪಿದಳು ಜಯ ಜಯ 34 ಹೇಮದ್ಹರಿವಾಣದೊಳಗ್ನಿಯನು ಕಾಮಿನಿಯರು ತಂದಿಳುಹಿದರು ರಾಮ ಮನ್ನಿಸಿ ಉಡುಗೊರೆಯಿತ್ತು ಅವರಿಗೆ ಹೇಮಾರ್ಚನೆಗಳ ತೊಡಗಿದನು ಜಯ ಜಯ 35 ಲಾಜತೊಂಡಿ[ತಂಡು?]ಲ ಆಹುತಿಗೊಟ್ಟು ಪೂಜಿಸಿದನೆ ವಿಘ್ನೇಶ್ವರನ ರಾಜವದನೆಯ ಒಡಗೊಂಡು ರಾಘವ ಪೂಜಿಸಿದನೆ ಋಷಿಮುನಿವರರ ಜಯ ಜಯ 36 ಇಂದ್ರಾದಿ ಮುನಿಗಳು ಕೈಹೊಡೆದು ಚಂದ್ರ ಸೂರ್ಯರು ಉಘೇಉಘೇಯೆನಲು ಮಂದಾರ ಮಲ್ಲಿಗೆ ಮಳೆಗಳ ಕರೆದರು ಅಂದದಿ ಸುರಜನರೆಲ್ಲರಾಗ ಜಯ ಜಯ 37 ಅರಳುವ ಕೆಂದಾವರೆ ಕುಸುಮ ಪರಿಮಳ ಸುರಮ್ಯ ಕಣ್ಗೆಸೆಯೆ ಎರಗುವ ಮರಿದುಂಬಿಗಳಂತೆ ರಾಘವ ಕರಗಳ ಪಿಡಿದೆÀತ್ತಿದ ಸತಿಯ [ಜಯ ಜಯ] 38 ಇಳೆಯ ಜಗಂಗಳನುದರದಲಿ ಅಳವಡಿಸಿದ ಮಹಾತ್ಮಕನು ಇಳೆಯ ಮಗಳನು ಎತ್ತಲಾರದೆ ರಾಮ ಬಳಲಿದನೆಂದು ನಕ್ಕರು ಜನರು ಜಯ ಜಯ 39 ಪರಾಕು ಸ್ವಾಮಿ ಪರಾಕು ದೇವ ಪಾದ ಎಚ್ಚರಿಕೆ ಸೀತಾಪತಿ ರಾಮನೆ<
--------------
ಹೆಳವನಕಟ್ಟೆ ಗಿರಿಯಮ್ಮ
ಸೀತಾಪತಿವಿಠಲ ದಾಸಳ ನಿರ್ಯಾಣ ಪದ ಮಾಧವನಾ ಪುರ ಸೇರಲು ಬೇಗ ಪ. ಪುಟ್ಟಿದಾರಭ್ಯದಿ ನಿಷ್ಟೆನೇಮದೊಳಿದ್ದು ಕಷ್ಟಪರಂಪರೆ ಸಹಿಸುತ ಜಗದಿ ಹರಿಯ ಕರುಣದಿ ಗುರುಕೃಪೆ ಪಡೆದಿ 1 ಹಿರಿಯೂರೆನ್ನುವ ಪುರ ವರ ವೇದಾವತಿ ತೀರ ಪರಮ ಸಾತ್ವಿಕರಲ್ಲಿ ಜನುಮ ತಳೆದಿ ತುಳಸಿಯ ವರದಿ ಮುದ್ದಿನಿಂ ಬೆಳೆದಿ 2 ಶಿಷ್ಟ ಸಂಪ್ರದಾಯ ಕಟ್ಟಿನೊಳಗೆ ನಿನ ಗಷ್ಟಮ ವರುಷದಿ ಮದುವೆಯ ಮಾಡಿ ಹರುಷವಗೂಡಿ ಹರಿಯ ಕೊಂಡಾಡಿ3 ಸತಿ ರುಕ್ಮಿಣೀಬಾಯಿ ಹೆಸರಿನಿಂ ಬಾಳ್ವೆಯ ಬಹು ಅಲ್ಪಕಾಲ ಕೊಟ್ಟನೆ ಸಿರಿಲೋಲ ಮುಸುಕಿತು ಮಾಯಜಾಲ 4 ಸಂಸಾರ ಕೈಕೊಂಡು ವಂಶಕೊಬ್ಬನ ಪಡೆದು ಕಂಸಾರಿ ಕರುಣದಿ ಇರುತಿರೆ ನೀನು ವಿಧಿ ತಂದೊಡ್ಡಿದನು 5 ಎರಡು ವರ್ಷದ ಮಗುವ ಕರದಲ್ಲಿ ಕೈಕೊಂಡು ಪರಿಪರಿ ಕಷ್ಟದಿ ಶಿಶುವ ಬೆಳೆಸಿದೆ ವಿದ್ಯೆ ಕಲಿಸಿದೆ ಪುತ್ರಗ್ಹರಸಿದೆ 6 ಒಬ್ಬ ಆ ಮಗನರ್ಥಿ ಸಂಸಾರವನೆ ಕಂಡು ಉಬ್ಬಿ ಹರುಷಾದಲ್ಲಿ ಇರುತಿರೆ ನೀನು ಮೊಮ್ಮಕ್ಕಳನು ಪಡೆದೆ ನಾಲ್ವರನು 7 ಘಟಿಸುತ ಸ್ವಪ್ನದಿ ಸೇವೆಗೈಯ್ಯೆಂದು ಅಭಯವನಂದು ಕೊಡಲು ದಯಸಿಂಧು 8 ಮರುದಿನ ಮನೆಯಲ್ಲೆ ಭರದಿ ಸೇವೆಯ ಕೊಂಡು ಹರಿವಾಯುಗಳನಿಟ್ಟು ಸುತ್ತುವರಿಯುತ್ತ ಎಡವಿ ಬೀಳುತ್ತ ಪ್ರದಕ್ಷಿಣೆ ಬರುತಾ 9 ಒಲಿದು ಆ ಭಕ್ತಿಗೆ ವರನೇತ್ರವಿತ್ತನು ನಳಿನನಾಭನ ಭಕ್ತ ಘಟಿಕಾಚಲನಿಲಯ ಭಾರತಿಪ್ರೀಯ ದಿವಿಜರ ಒಡೆಯ 10 ಭಕ್ತಿ ವಿರಕ್ತಿ ಜ್ಞಾನವು ಚಿತ್ತದಿ ಮೂಡಿ ಸೋತ್ತಮರಾದ ಶ್ರೀ ವಿಬುಧರ ದಯದಿ ಮೋಕ್ಷಸಾಧನದಿ ದಿನಗಳ ಕಳೆದಿ 11 ಶ್ರವಣ ಕೀರ್ತನ ಸ್ಮರಣೆ ಮನನಾದಿಗಳನೆಲ್ಲ ತವಕದಿ ಕೈಕೊಂಡು ಮೋದದಿ ಮೆರೆದಿ ಕಷ್ಟವ ಮೆರೆದಿ ಹರಿಗುರು ದಯದಿ 12 ಪ್ರಥಮ ಯಾಮದಲೆದ್ದು ಜಿತಮನದಿಂದ ಶ್ರೀ ಪತಿಯ ಸ್ತೋತ್ರಗಳನ್ನು ವದನದಿ ಸತತ ಪರಿಯಂತ 13 ಉಚ್ಛಸ್ವರದಿ ನೀನು ಪಾಡಿದ್ಹಾಡುಗಳಿಂದು ಅಚ್ಚಳಿಯದೆ ನಮ್ಮ ಸ್ಮರಣೆಯೊಳ್ನಿಂತು ಹರುಷವನಾಂತು ಮರೆಯುವುದೆಂತು 14 ವೃದ್ಧಾಪ್ಯ ತಲೆದೋರೆ ಇದ್ದೊಬ್ಬ ಪುತ್ರನು ಪದ್ಮನಾಭನ ಪುರ ಸೇರಿ ನಿನ್ನಗಲಿ ದುಃಖದಿ ಬಳಲಿ ತೊಳಲಿದೆ ಬಳಲಿ 15 ಪೌತ್ರರಿಬ್ಬರು ನಿನ್ನ ಹೆತ್ತಮ್ಮನಂದದಿ ಚಿತ್ತದಿ ತಿಳಿದಿನ್ನು ಸಲಹುತ್ತಿರಲು ಹರಿದಯ ಬರಲು ದುಃಖ ಮರೆಯಲು 16 ಕಲ್ಯಾಣನಗರದಿ ಕಿರಿಯ ಮೊಮ್ಮಗನಿರೆ ಆಹ್ಲಾದದಿಂದ ನೀನವನಲ್ಲಿ ಇರಲು ಸದ್ಗುರು ಬರಲು ಜ್ಞಾನವೆರೆಯಲು 17 ಹರಿದಾಸಕೂಟದ ವರ ಅಂಕಿತವ ಕೊಂಡು ಗುರುಕರುಣವ ಪೊಂದಿ ನೀ ನಮಗೆಲ್ಲ ಸನ್ಮಾರ್ಗಕ್ಕೆಲ್ಲ ಮೊದಲಾದೆಯಲ್ಲ 18 ಶ್ರೀ ತಂದೆ ಮುದ್ದುಮೋಹನದಾಸರ ದಯದಿ ಸೀತಾಪತಿವಿಠ್ಠಲನ್ನ ಒಲಿಸಿದೆ ಧ್ಯಾನದೋಳ್ತಂದೆ ಆನಂದಪಡೆದೆ 19 ಕಂಚಿ ಕಾಳಹಸ್ತಿ ಶ್ರೀ ರಂಗಯಾತ್ರೆಯ ಸಂಚಿಂತನೇಯಿಂದ ಗೈದೆಯೆ ನೀನು ಗಳಿಸಿದೆ ಇನ್ನು ಭಕುತಿಯ ಪೊನ್ನು 20 ಉಡುಪಿ ಮಂತ್ರಾಲಯ ಸೇತು ರಾಮೇಶ್ವರ ಕಡು ಭಕ್ತಿಯಲಿ ತಿರುಪತಿ ಕ್ಷೇತ್ರ ಚರಿಸಿ ಕಷ್ಟವ ಸಹಿಸಿ ಶ್ರೀ ಹರಿಗೆ ಅರ್ಪಿಸಿ 21 ಕಡುಕೃಪೆಯಿಂದಂದು ಕಣ್ಣನ್ನೆ ಕೊಟ್ಟಂತ ಮೃಡಪಿತ ಘಟಿಕಾಚಲೇಶನ್ನ ಕೂಡಿ ಕಣ್ತುಂಬ ನೋಡಿ ತನುವನೀಡಾಡಿ22 ಅಂತರಂಗದ ಬಿಂಬ ಸರ್ವಾಂತರ್ಯಾಮಿ ಎಂ ತೆಂಬಂಥ ಚಿಂತನೆ ಸಂತತಗೈದೆ ಅಭಿಮಾನ ತೊರೆದೆ ದ್ವಂದ್ವ ಸಹಿಸಿದೆ 23 ವ್ರತನೇಮ ಜಪತಪ ಸತತದಿಗೈಯ್ಯುತ್ತ ಕ್ಷಿತಿವಾರ್ತೆಗೆಳಸಾದೆ ಮನವನ್ನೆ ಸೆಳೆದು ಹರಿಪಾದಕ್ಕೆರದು ಹಿತವನ್ನೆ ಮರೆದು 24 ಭಾಗವತಾದಿ ಸಚ್ಛಾಶ್ತ್ರ ಶ್ರವಣಗೈದು ಜಾಗ್ರತಳಾದಿ ಭೂಸುರರ ಸೇವೆಯಲಿ ಸೂಕ್ಷ್ಮಧರ್ಮದಲಿ ಪುಣ್ಯಗಳಿಸುತಲಿ 25 ಸತತಬಿಂಬಕ್ರಿಯ ವ್ರತವಂದೆ ಕೈಕೊಂಡು ಜತನದಿ ಮರೆಯದೆ ಪ್ರತಿಕಾರ್ಯದಲ್ಲಿ ಅರ್ಪಿಸಿ ಹರಿಯಲ್ಲಿ ಇದ್ದೆ ಮೋದದಲಿ 26 ಮುಖ್ಯಪ್ರಾಣನ ದಯ ಮುಖ್ಯಮಾಡುತ ಇನ್ನು ಅಕ್ಕರೆ ಭಕ್ತಿಯ ತೋರಿದೆ ನೀನು ಬೆನ್ನು ಬಿಡದವನು ನಿನ್ನ ಸಲಹಿದನು 27 ಭಾರತಿಪತಿ ಮುಖ್ಯಪ್ರಾಣಾಂತರ್ಗತನೆಂಬ ವಾರುತಿ ಇಲ್ಲದ ವಚನವೆ ಇಲ್ಲಾ ನಿನ್ನ ಈ ಸೊಲ್ಲ ಮರೆಯಲೊಶವಲ್ಲ 28 ಶ್ರೀ ರಾಮಚಂದ್ರನ ಆರಾಧನೆಯಗೈದು ಸಾರತತ್ವವ ತಿಳಿದು ಸಾಧಿಸಿ ಪಥವ ಸಹಸ್ರಾರು ಜಪವ ಗೈದೆ ತಪವ 29 ನೀ ಹಾಡಿದ ಸ್ತೋತ್ರ ನಿನ್ನ ಸನ್ಮಾರ್ಗವ ನನ್ನೆಯಿಂದಲಿ ಎರೆದೆ ಹೆಣ್ಣು ಮಕ್ಕಳಿಗೆ ಸ್ಮರಿಸುವರೀಗೆ ಸತ್ಕೀರ್ತಿಯದಾಗೆ 30 ಹರಿ ಗುರು ವರತತ್ವ ದಿವಿಜರಭಿಮಾನಿಗಳ ನಿರುತದಿ ಚಿಂತಿಸಿ ಸಾಧನಗೈದೆ ಕಾಲವ ಕಳೆದೆ ಹರಿಪಾದಕ್ಕೆರೆದೆÀ 31 ಬಿಂಬಾನು ಸಂಧಾನ ಚತುರಳಾಗಿ ನೀನು ಸಂಭ್ರಮದಿಂದ ಶ್ರೀ ಮಧ್ವಶಾಸ್ತ್ರದಲಿ ಮನಸ ನೀಡುತಲಿ ಸುಖ ಸುರಿಯಲಿ 32 ಒದ್ದು ತಾಪತ್ರಯ ಸದ್ಗುರು ಕೃಪೆ ಪೊಂದಿ ಗೆದ್ದೆ ನೀ ಸುಲಭದಿ ಭವದ ಬಂಧನವ ಪಡೆದೆ ಹರಿ ದಯವ ಕೊಟ್ಟಿತೆ ಮುದವ 33 ಪೇಳಲೋಶವೆ ಹೇ ದಯಾಳು ನಿನ್ನಯ ಗುಣ ಬಾಳಿದೆ ಧರೆಯೊಳು ತೊಂಬತ್ತೈದೊರುಷ ವೃದ್ಧಾಪ್ಯದೋಷ ನಿನಗಿಲ್ಲ ಲೇಶ 34 ಇಂದ್ರಿಯಂಗಳು ಎಲ್ಲ ಒಂದು ಕುಗ್ಗದೆ ಒಬ್ಬ ರಿಂದಲು ಸೇವೆಯ ಕೊಳದೆ ಲವಲವಿಕೆ ಯಿಂದಿರುವ ಬಯಕೆ ಸಲಿಸೀತೆ ಮನಕೆ 35 ಕಿರಿಯ ಮೊಮ್ಮೊಗ ರಮಾಕಾಂತನಲ್ಲಿರುತಿರೆ ಕರೆಹೇಳಿ ಕಳುಹಿದ ಹರಿ ತನ್ನ ಪುರಕೆ ಕ್ಲಿಪ್ತಕಾಲಕ್ಕೆ ಆಗೆ ಮನವರಿಕೆ 36 ತೊರೆದೈದು ದಿನ ಅನ್ನ ಹರಿಧ್ಯಾನಂಗತಳಾಗಿ ವರ ಗಂಗೆ ವದನದಿ ಪ್ರಾಶನಗೈದು ಅಭಿಮಾನ ತೊರೆದು ಭ್ರಾಂತಿಯ ಮೆರೆದು 37 ವರಹಜೆ ತುಂಗ ತೀರದಿ ಪ್ರಾಣನಾಥನ ಚರಣಮೂಲದಿ ಶಿವಮೊಗ್ಗ ಕ್ಷೇತ್ರದಲಿ ಹರಿಸ್ಮರಣೆಯಲಿ ಪ್ರಾಣ ಸಲಿಸುತಲಿ 38 ಸ್ವಭಾನುವತ್ಸರ ಭಾದ್ರಪದ ಬಹುಳ ಇದ್ದ ದಶಮಿ ದಿನ ಗುರುವಾರದಲ್ಲಿ ಮಧ್ಯರಾತ್ರಿಯಲಿ ತನು ತೊರೆದಿಲ್ಲಿ 39 ಕೇಶವದೂತರು ಮೀಸಲಿಂದಲಿ ನಿನ್ನ ಘಾಸಿಗೊಳಿಸದೆ ಕರೆದೊಯ್ದರೇನಮ್ಮ ಪೇಳೆ ಎನ್ನಮ್ಮ ಎಲ್ಲಿ ಪೋದ್ಯಮ್ಮ 40 ಹೆತ್ತಮ್ಮಗಿಂತಲೂ ಹೆಚ್ಚಾಗಿ ನಮ್ಮನ್ನು ಅರ್ಥಿಯಿಂ ಬೆಳೆಸಿದೆ ಅಭಿಮಾನದಿಂದ ಅನುರಾಗದಿಂದ ಬಹುಮಾನದಿಂದ 41 ಮೊಮಕ್ಕಳೆಂದರೆ ಬಹು ಪ್ರೀತಿ ನಿನಗಲ್ಲೆ ಒಮ್ಮೆ ನಾಲ್ವರು ಬಂದು ಇರುವೆವು ನಾವು ಆಲ್ಪರಿಯುವೆವು ಅಗಲಿ ಸೈರಿಸೆವು 42 ಅರ್ಥಿಲಿ ರಮಾಕಾಂತ ವಿಠಲಾಂಕಿತ ಕೃಷ್ಣ ಮೂರ್ತಿಯು ಪುತ್ರಗಿಂತಧಿಕದಿ ನಿನ್ನ ಅಂತ್ಯಕ್ರಿಯವನ್ನ ಮಾಡಿದ ಧನ್ಯ 43 ಶ್ರದ್ಧೆಯಿಂದಗ್ರಜನಿಂದ ಕೂಡುತ ನಿನ್ನ ಶುದ್ಧಭಾವದಿಗೈದ ಅಂತ್ಯಸೇವೆಯನು ಸ್ವೀಕರಿಸಿ ನೀನು ಹರಸಿ ಹಿತವನ್ನು 44 ತಿಳಿದು ತಿಳಿಯದೆ ನಾನು ಗೈದಪರಾಧವ ನಲವಿಂದ ಕ್ಷಮಿಸಿ ನಮ್ಮನು ಮನ್ನಿಸಿದೆ ಸಹನವ ತಳದೆ ಬಹು ಪ್ರೀತಿಗೈದೆ 45 ಎಲ್ಲ ಪರಿಯಲಿ ನಮ್ಮ ಕ್ಷಮಿಸಿ ಕಾಪಾಡಮ್ಮ ಬಲ್ಲಿದಳು ನೀನು ಆಶೀರ್ವದಿಸುವುದು ಸುಖವ ತೋರುವುದು ಕೃಪೆಯ ಮಾಡುವುದು 46 ಅಂಜನೆಕಂದ ನಿನ್ನವನೆಂಬ ಅಭಿಮಾನ ರಂಜಿಸೆ ಸಹಜದಿ ನಿನ್ನೊಳು ಮಾತೆ ಜಗದಿ ವಿಖ್ಯಾತೆ ಹರಿಗತಿಪ್ರೀತೆ 47 ಪತಿಗುರು ಪವನ ಹೃದ್ಗತಮೂರ್ತಿ ಚಿಂತನ ರತಳೆ ನಿನ್ನಯ ಚರಿತೆ ಪೇಳ್ದೆ ತಿಳಿದನಿತು ತಪ್ಪನು ಮರೆತು ಲಾಲಿಸು ಮಾತು 48 ಗೋಪಾಲಕೃಷ್ಣವಿಠಲನ ಸದ್ಭಕ್ತಳೆ ಶ್ರೀ ಪಾದಕ್ಕೆರಗಿ ನಾ ಜಯವ ಪಾಡುವೆನು ಧನ್ಯಳೇ ನೀನು ಮಾನ್ಯಳೆ ನೀನು 49
--------------
ಅಂಬಾಬಾಯಿ
ಸುಖದಕ್ಕಿತೇ | ಸುಖದಕ್ಕಿತು ಗುರುದಯ ಲೆಕ್ಕಾ ಪ ಕಂಡವರ ಮಾತಿಗೆ ಮನವಿಟ್ಟು ಜಗದೊಳು | ಹಿಂಡದೈವಕ ಬಾಯಿದೆರುತ್ತಿದ್ದೆನೆ | ಮಂಡಿಯ ಮ್ಯಾಲೆನ್ನಾ ಕರವಿಟ್ಟು ಹೊಳೆವಾ ಪಿಂಡಾಂಡದಿ ಗಂಡನ ತೋರಿದನಕ್ಕ 1 ಇಲ್ಲೆಂಬ ಸಂಶಯ ಹೋಯಿತು ಒಳಹೊರ | ಗೆಲ್ಲೆಲ್ಲಿ ನೋಡಲು ತಾನಾದನೇ | ಫುಲ್ಲನಾಭನ ಕೂಡಿ ತನುಭಾವ ಮರದು | ಕೈವಲ್ಯ ಮಂದಿರ ಸಾರಿದೆನಕ್ಕಾ 2 ಏನ ಹೇಳಲಿ ಆಡು ತಾಡುತಾ ಯಡಹಿನಿ | ಧಾನವ ಕಂಡಂತಾಯಿತೇ | ಮಾನುಭಾವರಸಾದ ತಂದೆ ಮಹಿಪತಿ | ತಾನೊಲಿದೆನ್ನನುದ್ಧರಿಸಿದನಕ್ಕಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಖವನು ಸರ್ವದ ಬಯಸಲದೇನೆಂದು ನೀ ತಿಳಿದಿಹೆಯಣ್ಣಾ ಪ ಸುಖ ಬೇಕಾದರದರ ಗೂಢದ ನೆಲೆಯ ನೀ ಕಂಡ್ಹಿಡಿಯಣ್ಣಾ ಅ.ಪ. ಸಕ್ಕರೆ ತುಪ್ಪ ಹಾಲ್ಮೊಸರಿನೂಟವು ಸುಖವಹುದೇನಣ್ಣ ಬೊಕ್ಕಸ ಬರಿದಾಗದಲೆ ಸದಾ ರೊಕ್ಕ ತುಂಬಿಹುದೇನಣ್ಣ ಅಕ್ಕಪಕ್ಕದ ರೂಪವತಿಯರ ಕಣ್ಣೋಟದೊಳೇನಿದೆಯಣ್ಣ ಚಿಕ್ಕತನದ ಚಲ್ಲಾಟಗಳೋ ನಿರತನಾಗಿಹುದೇನಣ್ಣ 1 ಚರ ಸ್ಥಿರ ಸ್ವತ್ತುಗಳ ನೀ ಗಳಿಸಿ ಧನಿಕನೆನಿಸುವುದೇನಣ್ಣ ದೊರೆತನ ಬಯಸಿ ನೀ ದರ್ಪವ ತೋರುತ ಬಾಳುವುದೇನಣ್ಣ ಪರಿಪರಿ ಬಣ್ಣದ ಪಾವುಡ ಧರಿಸಿ ನೀ ಮೆರೆಯುವುದೇನಣ್ಣ ಕರಿ ತುರಗ ರಥ ಪಲ್ಲಕ್ಕಿಯಲಿ ಕುಳಿತು ಚರಿಸುವುದೇನಣ್ಣ 2 ಪರಿ ಸುಖಗಳೆಲ್ಲವು ತಪ್ಪಲು ನೀನಳುವಿಯೇತಕ್ಕಣ್ಣ ತಾಪತ್ರಯಂಗಳಂಕುರಿಸಲಿಕವೆಲ್ಲವು ಬೀಜಗಳೆ ಅಣ್ಣ ಪಾಪ ರಾಸಿ ಬೆಳೆಯಲಿವೆ ಮೂಲ ಕಾರಣವೆಂದರಿಯಣ್ಣ ಆಪತ್ತುಗಳು ಬಿಡದೆ ಬಂದಡರಿ ಬಹುತಾಪಗೊಳಿಪವಣ್ಣ3 ಈ ಸುಖಗಳೆಲ್ಲವು ಬಹುಕಾಲವಿರವು ಶಾಶ್ವತವಲ್ಲಣ್ಣ ಆಸೆಯ ತೋರಿಸಿ ನಿನ್ನನು ಬಹುಮೋಸಗೊಳಿಪವು ಕೇಳಣ್ಣ ಹೇಸಿಕೆಗಿಂತವು ಕಡೆಯಾಗಿಹವೆಂದು ದೃಢದಿ ನಂಬಿರಣ್ಣ ಸಾಸಿರ ನಾಮದ ರಮೇಶನ ಸ್ಮರಿಸಲು ಬೇಸರ ಬೇಡಣ್ಣ 4 ಕಟ್ಟಿಕೊಂಡ್ಹೋದ ಬುತ್ತಿಯು ತಾನೆಷ್ಟು ದಿನವಿದ್ದೀತಣ್ಣ ಎಷ್ಟು ಹೇಳಿದರೇನಿ ಫಲವು ನಿನ್ನಲಿ ನೀನೆ ತಿಳಿಯಣ್ಣ ಗುಟ್ಟಿನಲಿ ಮನಮುಟ್ಟಿ ಯೋಚಿಸಲದುವೆ ಬಯಲಾಗುವುದಣ್ಣ ದಿಟ್ಟ ರಂಗೇಶವಿಠಲನ ನಾಮವೊಂದೇ ನಿಜ ಸುಖವಣ್ಣ 5
--------------
ರಂಗೇಶವಿಠಲದಾಸರು
ಸುಗುಣಿಯರಿಬ್ಬರು ಬಂದು ಹಗರಣವ ಮಾಡಿದರವ್ವ ಹಗರಣವ ಮಾಡಿದರವ್ವನಗÀಧರನ ಮುಂದೆ ನಾಚಿಕೆ ಇಲ್ಲವ್ವ ಪ. ಸಿಟ್ಟಿಲೆ ತನ್ನೆದೆಯ ಗಟ್ಟಸಿದಳವ್ವತಾ ಗಟ್ಟಿಸಿದಳವ್ವಕಷ್ಟದಿ ಭೀಷ್ಮಿಯುನಿಟ್ಟುಸಿರು ಹಾಕಿದಳವ್ವ1 ಇತ್ತ ದೂತೆಯು ತಾಥಟ್ಟನೆ ಬಂದಳವ್ವತಾ ಥಟ್ಟನೆ ಬಂದಳವ್ವಇಷ್ಟ ಏನೆಂದು ನೆಟ್ಟನೆ ಕೇಳಿದಳವ್ವ2 ಎಷ್ಟು ಹೇಳಲಿ ಈಕೆಎದೆಗಿಚ್ಚಿನವಳವ್ವಭಾವೆ ಎದೆಗಿಚ್ಚಿನವಳವ್ವÀ ಕೃಷ್ಣಗೆ ಕರೆದು ಕೊಟ್ಟಳು ವೀಳ್ಯವವ್ವ 3 ಕೆಟ್ಟ ರುಕ್ಮಿಣಿಯು ಕಲಹಗಾರುತಿಯವ್ವಬಲು ಕಲಹಗಾರುತಿಯವ್ವಅಗ್ಗಿಷ್ಟಿಗೆ ಆದಳು ಅತಿ ಸಿಟ್ಟಿನ ಹುಲಿಯವ್ವ4 ಚಿಕ್ಕ ಚೇಳೆಂದು ಬಲು ಅಕ್ಕರೆ ತೋರಿದೆನವ್ವ ಬಲು ಅಕ್ಕರೆ ತೋರಿದೆನವ್ವಭಾವೆಯ ಉಕ್ಕುಹೇಳಲು ಎನಗೆ ಶಕ್ಯ ಇಲ್ಲವ್ವ5 ಉರಗ ಹಿರಿಯದೆಂದು ಎರಗೊದೇನವ್ವಅದಕೆ ಎರಗೋದೆನವ್ವ ಉರವಣಿಗೆ ರುಕ್ಮಿಣಿಯಮುರಿಯಲಿಲ್ಲವ್ವ 6 ಕೆಂಜಿಗ ಕಚ್ಚಲು ಅಂಜೋರೇನವ್ವಅದಕಂಜುವರೇನವ್ವಭಾವೆಯ ಮಂಜುಳವಾಣಿ ಮೂಲೆಗೆ ಬೀಳಲೆವ್ವ 7 ಹದ್ದುಕುಕ್ಕಿದರೆ ಗದ್ದರಿಸೋರೇನವ್ವಅಂಜಿ ಗದ್ದರಿಸುವರೇನವ್ವರುಕ್ಮಿಣಿಯ ಮುದ್ದು ಮಾತುಗಳಸದ್ದಡಗಲಿಲ್ಲವ್ವ 8 ಒಳ್ಳೆಯವಳಲ್ಲ ಭಾವೆಮುಳ್ಳಿನಂಥವಳವ್ವಬಲುಮುಳ್ಳಿನಂಥವಳವ್ವಇವಳ ತಳ್ಳಿ ಮಾತುಗಳ ತಾಳಲಾರೆನವ್ವ9 ಸುಳ್ಳಿ ರುಕ್ಮಿಣಿ ಶೂಲದಂಥವಳವ್ವಬಲು ಶೂಲದಂಥವಳವ್ವಕಳ್ಳ ಮಾತುಗಳೆಷ್ಟುಕಲಿತಾಡುವಳವ್ವ10 ಮಸೆದ ಕತ್ತಿಯಂತೆ ಎಸೆವಳು ಭಾವೆಯವ್ವಬಲು ಎಸೆವಳು ಭಾವೆಯವ್ವಇವಳ ಹೆಸರು ಅಡಗÀಲಿಎನ್ನ ಉಸಿರು ಮುಟ್ಟಿಲಿಯವ್ವ11 ಬಾಲೆ ರುಕ್ಮಿಯು ಶೂಲದಂಥವಳವ್ವಬಲು ಶೂಲದಂಥವಳವ್ವಕಾಲು ಕೆದರಿಎನ ಮ್ಯಾಲೆ ಬಂದಿಹಳವ್ವ 12 ವೈರಿ ಸವತಿಯುಎನ್ನ ಸರಿಯಳೇನವ್ವ 13 ಶ್ರೇಷ್ಠಳಾದರೆ ನೀಉಚಿತವ ಇಟ್ಟುಕೊಳ್ಳವ್ವನೀ ತೊಟ್ಟುಕೊಳ್ಳವ್ವಇಷ್ಟೊಂದು ಸೊಕ್ಕುಕಟ್ಟಿಡಿಸುವೆನವ್ವ 14 ಸೊಕ್ಕು ಸೊಕ್ಕೆನಲಿಕ್ಕೆ ತಕ್ಕವಳೇನೆ ಭಾವೆಇವಳು ತಕ್ಕವಳೇನೆ ಭಾವೆಇವಳ ಚಕ್ಕಂದಕ್ಕೆ ಹರಿಯುಅಕ್ಕರ ಬಡುವನವ್ವ15 ಅಕ್ಕಸದ ಮಾತು ಕೇಳಲಾರೆನವ್ವನಾ ಕೇಳಲಾರೆನವ್ವಇವಳ ಉಕ್ಕಸಕೆ ಕೃಷ್ಣಧಕ್ಕನೆ ನಾಚಿದನವ್ವ16 ಮುಂಜೆರಗು ಹಿಡಿದು ಗುಂಜಿಸಿ ಎಳೆವೆನವ್ವನಾ ಎಳೆವೆನೆವ್ವಪಂಜರದ ಗಿಳಿಯಂತೆಅಂಜಲಿ ಇವಳವ್ವ17 ಕೈ ಹಿಡಿದು ಕೆಳಗೆ ಎಳೆವೆನವ್ವನಾ ಕೆಳಗೆ ಎಳೆವೆನವ್ವಭಯವೇನವ್ವ ರುಕ್ಮಿಣಿಯ ಭಯವೇನವ್ವಅಯ್ಯೊ ಅಂಜಲ್ಯಾತಕೆ ಸೈ ಸೈಯವ್ವ18 ಎಷ್ಟು ಫಾತುಕಳೆ ನಷ್ಟಳು ಭಾವೆಯವ್ವಬಲು ನಷ್ಟಳು ಭಾವೆಯವ್ವಕೃಷ್ಣನ ತೊಡೆಬಿಟ್ಟು ಇಳಿಸುವೆನವ್ವ19 ಭಾಳೆ ಘಾತುಕಳು ರುಕ್ಮಿಣಿಯವ್ವನೀ ಕೇಳೆ ರುಕ್ಮಿಣಿಯವ್ವಗೈಯ್ಯಾಳಿಯ ತೊಡೆಬಿಟ್ಟು ಇಳಿಸುವೆನವ್ವ20 ಚಂದ್ರನಿಲ್ಲದ ಚಿಕೆÀ್ಕ ಚಂದವೇನವ್ವಅದು ಚಂದವೇನವ್ವನಿಜಳೆ ಎನ್ನಮ್ಯಾಲೆಬಂದಿಹಳ್ಯಾತಕವ್ವ21 ದಾರ ಮಲ್ಲಿಗೆ ನಡುವೆ ತೋರಿದಂತವ್ವಅದು ತೋರಿದಂತವ್ವಇವಳ ಹಿರಿತನವೆಲ್ಲವಅರಿಯೆನವ್ವ22 ಸಿರಿರಮಿ ಅರಸಗೆ ಸರಿಯಿಬ್ಬರು ನೀವÀವ್ವನೀವು ಸರಿಯಿಬ್ಬರವ್ವಬರಿಯೆ ಕರಕರೆಯಹಿರಿಯರಲ್ಲವ್ವ 23
--------------
ಗಲಗಲಿಅವ್ವನವರು
ಸುಜನ ಬುಧಗೇಯ ಮೇದಿನೀ ಸುರವಂದ್ಯ ಶ್ರೀಪಾದರಾಯ ಪ ಸಕಲಶಾಸ್ತ್ರ ಕಲಾಪ ಸನ್ಯಾಸ ಕುಲದೀಪಸಕಲ ಸತ್ಯಸ್ಥಾಪ ಸುಜ್ಞಾನದೀಪಪ್ರಕಟ ಪಾವನರೂಪ ಅರಿಕುಜನ ಮತಲೋಪನಿಕಟ ವರ್ಜಿತ ಪಾಪ ಕೀರ್ತಿ ಪ್ರತಾಪ 1 ಭೃಂಗ ಶುಭ ಚರಿತಾಂಗ ಷಟ್ಫಾಸ್ತ್ರಸÀಂಗ 2 ಸಿರಿಕೃಷ್ಣ ದಿವ್ಯ ಪಾದಾಬ್ಜ ಚಿಂತಾಲೋಲವರ ಹೇಮವರ್ಣಮುನಿಪತಿಯ ಸುಕುಮಾರಗುರುತಿಲಕ ಶ್ರೀಪಾದರಾಯ ಅಮಿತೋದ್ಧಾರಶರಣ ಜನ ಸುರಧೇನು ಭಕ್ತಮಂದಾರ 3
--------------
ವ್ಯಾಸರಾಯರು
ಸುಮ್ಮನಹುದು ನೋಡಿ ಸ್ವಾತ್ಮ ಸುಖದನುಭವ ಹಮ್ಮಳಿದು ತನ್ನೊಳು ತಾ ತಿಳಿಯದನಕ ಧ್ರುವ ಏನು ಕೇಳಿದರೇನು ಏನು ಹೇಳಿದರೇನು ಖೂನದೋರದು ತಾನು ಸ್ವಾನುಭವದ ನಾನೆಂಬುದೆನಲಿಕ್ಕೆ ಏನು ಮಾಡಿದರೇನು ಜ್ಞಾನ ಗಮ್ಯವಸ್ತು ತಾನೊಲಿಯದನಕ 1 ಕನಸು ಮನಸಿನ ಕಲಿಯು ಕಲಿತು ಕೆಟ್ಟಿರಲಿಕ್ಕೆ ಅನುಮಾನಗಳಿಯದಪಭ್ರಂಶಗಳಿಗೆ ಅನುದಿನದಲಾಶ್ರಯಿಸಿ ಘನಗುರು ಶ್ರೀಪಾದವನು ನೆನೆನೆನೆದು ಸುಖವು ನೆಲೆಗೊಳ್ಳದನಕ 2 ಮಹಾ ಮಹಿಮೆಯುಳ್ಳ ಗುರುದಯ ಪಡಕೊಂಡು ಮನೋಜಯಸುದಲ್ಲದೆ ಘನಮಯ ಹೊಳೆಯದು ಮಹಿಪತಿಯ ಸ್ವಾಮಿ ಸದ್ಗುರು ಭಾನುಕೋಟಿ ತೇಜ ಬಾಹ್ಯಾಂತ್ರ ಪರಿಪೂರ್ಣ ತಾನಾಗದನಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ಧ್ರುವ ಎಲ್ಲದೋರ್ವದು ಮರೆದು ಎಲ್ಲರೊಳಗೆಹದರಿದು ಎಲ್ಲರೊಳಗೆಲ್ಲ ತಾನಾಗಬೇಕು ಎಲ್ಲರೊಳು ತಾನಾಗಿ ಎಲ್ಲ ತನ್ನೊಳಗಾಗಿ ಬೆಲ್ಲ ಸವಿದ ಮೂಕನಂತಾಗಬೇಕು 1 ಬಲ್ಲವತವನು ನೀಡಿ ಬಲ್ಲನೆತಾನಾಗಿ ಬಲ್ಲರಿಯೆನೆಂಬುದನು ಈಡ್ಯಾಡಬೇಕು ಬಲ್ಲರಿಯದೊಳಗಿದ್ದನೆಲ್ಲ ತಿಳಿಕೊಳ್ಳಬೇಕು ಸೊಲ್ಲಿಲ್ಹೇಳುವ ಸೊಬಗ ಬೀರದಿರಬೇಕು 2 ಸೋಹ್ಯ ಸೂತ್ರವ ತಿಳಿದು ಬಾಹ್ಯ ರಂಜನಿ ಮರೆದು ದೇಹ ವಿದೇಹದಲ್ಲಿ ಬಾಳಬೇಕು ಮಹಿಗೆ ಮಹಿಪತಿಯಾಗಿ ಸ್ವಹಿತ ಸದ್ಗುರುನಾದಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನೆ ತೊಲಗು ಕಂಡೆಲೆ ಮಾಯಿ ನೀನು ನಮ್ಮಯ್ಯ ಬಂದರೆ ಉಳಿಲಾರಿ ಇನ್ನು ಪ ಉರಗ ತಾ ಬೆನ್ನ್ಹತ್ತಿ ಗರುವದಿಂ ಬಂದು ಮಹ ಗರುಡನಂ ಕಂಡಕ್ಷಣದ್ಹರಣ ತೊರೆವಂತೆ ಹರಿದಾಸರೆನ್ನದೆ ಪರಿಪರಿ ಕಾಡಿ ನೀ ಶರಣಜನಪ್ರಿಯನ ಕಂಡುರಿದ್ಹೋಗಬೇಡ 1 ಲಕ್ಷಿಸೆ ಮಂಡೂಕ ಮಕ್ಷಕನ ಬೆನ್ನ್ಹತ್ತಿ ತಕ್ಷಕಗೆ ಸಿಕ್ಕು ತಾ ಭಕ್ಷವಾದಂತೆ ಲಕ್ಷ್ಮೀಪತಿದಾಸರ ಲಕ್ಷಿಸದೆ ಕಾಡಿ ಭಕ್ತ ಪಕ್ಷಕನ ಕರಕೆ ಸಿಕ್ಕು ಶಿಕ್ಷೆಪಡಬೇಡ 2 ಕ್ಷೇಮದಿಂ ದೂರಿರೋ ಹೇ ಮಾಯಿ ನೀನು ನಾಮವೇ ಉಳಿಸನೀ ಭೂಮಿಯ ಮೇಲೆ 3
--------------
ರಾಮದಾಸರು
ಸುಮ್ಮನೆ ಹೊಗಳಿದರ್ಯಾತಕೀತನ ಪರ ಬ್ರಹ್ಮ ಪರಮಾತ್ಮೆಲ್ಲ್ಹಾನ ಪ ರಮ್ಮೆ ಮಾಡಿ ಬಲುಜಮ್ಮಾಸಿ ಮನುಗಳು ದಿಮ್ಮಾಕಿನಿಂದ ವೇದಸ್ಮøತಿಯನ್ನು ಅ.ಪ ಎಲ್ಲಿ ಕರೆಯಲಿಲ್ಲ್ಯಾನಂತೆ ಸುಳ್ಳೆ ಸಲ್ಲದ ಮಾತ್ಹೇಳಿಹ್ಯರಿಂತೆ ಸೊಲ್ಲು ಸೊಲ್ಲಿಗೆ ನಾನೆಲ್ಲೆಲ್ಲಿಕೂಗಲು ಕಲ್ಲಿಗು ಕಡೆಯಾಗಿರುವ ಪುಲ್ಲನಾಭ 1 ಹೊತ್ತುಕೊಂಡು ಇರುತಿಹ್ಯನಂತೆ ಅರ್ತುಕೊಂಡು ನಾ ನಿರ್ಕಾಗಿ ಭಜಿಸಲು ಸಾರ್ಥಕಮಾಡವಲ್ಲ ಕರ್ತನೆಂಬಂಥವ 2 ಮೊರೆಯಿಟ್ಟು ಭಕ್ತರಪ್ರಿಯಬಂಧು ಮಹ ಕರುಣಾಳು ಶ್ರೀರಾಮನೆ ಎಂದು ಪರಿ ಸ್ಥಿರವಾಕ್ಯವೇ ನರಿತು ಪೊಗಳಿದರು ಪರಮ ಪಾವನರು 3
--------------
ರಾಮದಾಸರು
ಸುಮ್ಮನೇಕೆ ಪರದಾಡುವೆಯೊ ಪರ ಬೊಮ್ಮನ ಚರಣಕೆ ಶರಣು ಹೊಡಿ ನಮ್ಮನು ಸೃಜಿಸುವ ಪೊರೆಯುವ ಕೊನೆಯಲಿ ನಮ್ಮನೇ ನುಂಗುವ ಗುಮ್ಮನಿವ ನಮ್ಮ ಶರೀರದೊಳಿರುವ ಯಂತ್ರಗಳು ನಮ್ಮಧೀನವೆ ಯೋಚಿಸೆಲೊ ವಾತ ನಮ್ಮಾಕಾಂಕ್ಷೆಯೆ ಯೋಚಿಸೆಲೊ 1 ಮೂರಂತಸ್ಥಿನ ನೂರು ಸದನಗಳು ನೂರು ರೂಪಗಳು ನಿನಗಳವೆ ಚಾರು ಮನೋಹರ ಸತಿಯಳಿರಲು ಮನ ಕೋರಿಕೆಯವಳಲಿ ಶಾಶ್ವತವೆ ನೂರು ಎಕರೆ ಹೊಲ ಗದ್ದೆ ತೋಟಗಳು ಮೂರು ಲಕ್ಷಗಳು ಬೆಲೆಯಿರಲು ಮೂರು ಚಟಾಕಿನ ಅನ್ನ ಹೊರತು ಅದ ಮೀರಿ ನುಂಗುವುದು ನಿನಗಳವೇ 2 ಶೂರನು ನಾ ಬಲುಧೀರನು ನಾ ಅಧಿ ಕಾರಿಯು ನಾ ಈ ಜಗದೊಳಗೆ ಕೋರಿದ ಜನರನು ಸದೆಬಡಿಯುವೆ ಎನ ಗಾರು ಸಮರು ಈ ಧರೆಯೊಳಗೆ ಕೋರುವ ಸುಖಗಳನನುಭವಿಸುವ ಮಮ ಕಾರದ ಗತಿಯನು ಯೋಚಿಸೆಲೊ ಹೇರಳ ಗಜತುರಗಾದಿ ವಾಹನಗ ಳೇರಿದ ನೀ ಹೆಗಲೇರಿ ಹೋಗುವಿಯೊ 3 ಸಾಸಿರ ಸಾಸಿರ ಬಡ್ಡಿ ಬಾಚಿಗಳ ಬೇಸರವಿಲ್ಲದೆ ಗಳಿಸಿದೆಯೊ ಕಾಸಿನ ಲೋಭಕೆ ಮೂಸಲು ಬಾರದ ಕಾಸಕ್ಕಿ ಅನ್ನವ ನುಂಗಿದೆಯೊ ಲೇಶವು ಗಮನಕೆ ತರಲಿಲ್ಲ ಈ ಸವಿನುಡಿ ಬಲು ಹಳೆಯದೆಂದು ಆಕ್ರೋಶವ ಮಾಡದೆ ಯೋಚಿಸೆಲೊ 4 ಮಾಯವು ತಾ ಈ ಜಗತ್ತಿನ ಜೀವನ ರುಚಿ ತೋರುವುದು ಕಾಯವು ಶಾಶ್ವತವೆಂಬ ಭ್ರಾಂತಿಯಲಿ ಹೇಯ ವಿಷಯಗಳನುಣಿಸುವುದು ಪ್ರಾಯಶರೆಲ್ಲರು ಬಲ್ಲರಿದನು ಬರಿ ಬಾಯಲಿ ನುಡಿಯುವರೊ ಸತತ ಕಾಯವಚನಮನದಿಂದ ಪ್ರಸನ್ನನ ಮಾಯವನರಿತಾಚರಿಪರು ವಿರಳ 5
--------------
ವಿದ್ಯಾಪ್ರಸನ್ನತೀರ್ಥರು
ಸುಮ್ಮನ್ಯಾತಕೆ ಕಾಲಕಳೆಯುವಿಯೋ ಹೇ ಸುಮ್ಮನ್ಯಾತಕೆ ಕಾಲಕಳಯುವಿ ಪ ಬ್ರಹ್ಮನಯ್ಯನ ವಿಮಲ ಚರಣ ಒಮ್ಮನದಿಂ ಪೊಗಳುತನುದಿನ ನಿರ್ಮಲಪದವಿ ಸಂಪಾದಿಸದೆ ನೀ ಅ.ಪ ಮತ್ತು ನಿನ್ನಗೆ ಹತ್ತಿ ಬರುವುದೆ ನಿತ್ಯ ವೆನಿಪತ್ಯಧಿಕ ಸಮಯವು ಸತ್ಯ ಸರ್ವೋತ್ತಮನ ಪಾದವ ನಿತ್ಯ ಪಾಡುತ ಸಾರ್ಥಕ್ಹೊಂದದೆ 1 ಮೃತ್ಯುಬಾಧೆಯ ಗೆಲಿಸಿ ನಿನ್ನ ಪ ವಿತ್ರನೆನಿಪ ಮಹ ಮೃತ್ಯುಲೋಕದಿ ಉತ್ಪತ್ತಿಯಾಗಿ ರಿಕ್ತಹಸ್ತದ್ಹೋಗ್ವತಿ ಚಿತ್ತಜಪಿತನ್ನರ್ತು ಭಜಿಸದೆ 2 ಭಕ್ತಜನರು ಕೈಯೆತ್ತಿ ಪೇಳಿದ ಸತ್ಯದೋಕ್ತಗಳ್ನಿತ್ಯವೆಂದು ಭಕ್ತವತ್ಸಲ ಸಿರಿಯರಾಮನ ಚಿತ್ತದರಿತು ಮುಕ್ತಿ ಪಡೆಯದೆ 3
--------------
ರಾಮದಾಸರು
ಸುಲಭ ನೀನೆನಗಲ್ಲ ತಿಳಿವೆ ಶ್ರೀನಲ್ಲ ಪ ಸುಲಭನೆಂದಾಡುವರು ಹರಿದಾಸರೆಲ್ಲ ಅ.ಪ. ದರುಶನವು ಸಿಗಲೆಂದು ಪಂಢರಿಗೆ ನಾ ಬಂದೆಪರಮಪಾವನ ನಿನ್ನ ಮೂರುತಿಯ ಮುಂದೆತ್ವರದಿನಿಲೆ ಬರಲು ಬಹುಭಕ್ತಿಯಿಂದೆತೆರೆಯಲಿಲ್ಲವೊ ದ್ವಾರ ಏನೆಂದೆ ತಂದೆ 1 ಶಿಲೆಯ ಪ್ರತಿಮೆಯನೀಗ ತೋರದವ ನೀ ಮುಂದೆಬಲು ನಿಜದ ರೂಪವನು ತೋರುವುದು ಹೇಗೆಂದೆಜಲಜಾಕ್ಷ ಭರವಸೆಯ ನೀಡಲೆಂತು ಮನ ಗುಂದೆಸಲಹು ವಿಠ್ಠಲರಾಯ ಕೈ ಮುಗಿಯುವೆನು ತಂದೆ 2 ಸುಲಭದೊಳು ಸುಲಭನೈ ಪಂಢರಿಯ ವಿಠಲಾಬಲು ಪಾಪಿಗಳನು ಉದ್ಧರಿಪ ಸಕಲಬಲುಹಿ ನೀ ನುಡಿಯು ನನಗೆಲಾಸುಲಭ ಗದುಗಿನ ವೀರನಾರಾಯಣನು ಅಚಲ 3
--------------
ವೀರನಾರಾಯಣ
ಸುಲಭದಿಂದ ಪಾಂಡವರ ಗೆಲಿದುಕೊಂಡುನಗುತಬಾಹೊ ಬಲವ ಹೇಳೆಂದ ಕೃಷ್ಣ ಪ. ಭರದಿ ಕೃಷ್ಣನಂಫ್ರಿಗಳಿಗೆ ಎರಗಿಬೃಹಸ್ಪತಿಯು ನಗುತ ಬರುವೋದು ಚಂದ್ರನ ಬಲವ ಹರಿಯೇ ತೆgಳೆಂದ 1 ಮತ್ತೆ ಪಾಂಡವರ ಗರುವ ಒತ್ತೇವೋ ಮೂಲೆಗೆ ಈ ಹೊತ್ತೆ ಸೂರ್ಯನ ಬಲವ ಚಿತ್ತೈಸÉಂದನು ಬೃಹಸ್ಪತಿ ಚಿತ್ತೈಸೆಂದನು 2 ಗುರುಬಲ ಎಂಬೋದು ಎಲ್ಲ ಹರದೆಯರಿಗೆ ತೋರುತಿರೆÉ ಗರವು ಮುರಿದು ಸುಭದ್ರೆಯಬರುವಿರಮ್ಮಯ್ಯ ನಗುತ ಬರುವಿರಮ್ಮಯ್ಯ 3 ಶೀಘ್ರದಿ ಸತ್ಯಭಾಮೆ ರುಕ್ಮಿಣಿದೇವಿಯರು ತೆರಳಿ ದುರ್ಗೆರವಿ ದ್ರೌಪತಿಯ ಮಾನ ತಗ್ಗೋದೆಂದನು ಮಾರಿ ಕುಗ್ಗೋದೆಂದನು4 ಹದಿನಾರು ಸಾವಿರ ವೀರ ರಾಮೇಶನ ಮಡದಿಯರು ಮಾರಿ ಮೇಲಾಗಿ ಬಾಹೋದು ನಿಜವೆಂದ ಆಮಾತು ನೀರೆ ನಿಜವೆಂದ 5
--------------
ಗಲಗಲಿಅವ್ವನವರು
ಸುಲಿದ ಬಾಳೆ ಹಣ್ಣು ಸುಟ್ಟು ತಿನ್ನಬೇಡಿರೊ ಹಳೆಯ ಜನರ ಅನುಭವಗಳ ಹಳಿಯಬೇಡಿರೊ ಬಿಳಿಯ ವಸ್ತುವೆಲ್ಲ ಕ್ಷೀರವಲ್ಲ ಕಾಣಿರೊ ಥಳಥಳಿಸುವುದೆಲ್ಲ ರಜತವಲ್ಲ ಕಾಣಿರೊ ಸಿರಿಯು ಬಂದ ಕಾಲದಲ್ಲಿ ಮೆರೆಯಬೇಡವೋ ಶಿರವು ಗಟ್ಟಿಯೆಂದು ಕಂಬ ಗುದ್ದಬೇಡವೊ ಮನಕೆ ತುಷ್ಟಿಕೊಡದ ಕಾರ್ಯಗಣನೆ ಬೇಡವೊ ಅನುವಿನಲ್ಲಿ ಪಿಡಿದ ಕಾರ್ಯ ಕೊನೆಯಗಾಣಿಸೊ ಹಾವು ಕೊಂದು ಹದ್ದುಗಳಿಗೆ ಹಾಕಬೇಡವೊ ಗೋವು ಕೊಂದು ಪಾದರಕ್ಷೆ ದಾನಬೇಡವೊ 10 ಅರಿಯದ ಜನರಲ್ಲಿ ಅಂತರಂಗಬೇಡವೊ ಪರರ ಗೋಪ್ಯ ತಿಳಿದರೆ ಬಹಿರಂಗಬೇಡವೊ ಜಂಭ ಕೊಚ್ಚಬೇಡವೊ ರಗಳೆ ರಂಪದಿಂದ ಪರರ ಒಲಿಸಬೇಡವೊ ಗೆದ್ದರಾ ಎತ್ತು ಬಾಲವನ್ನು ಹಿಡಿಯಬೇಡವೊ ಒದ್ದರೆ ಅದು ಹಲ್ಲುಗಳನು ಕಿರಿಯಬೇಡವೊ ಮೂರ್ಖ ಜನಗಳಲ್ಲಿ ವಾದ ಮಾಡಬೇಡವೊ ಮಕ್ಕಳೆದುರಿನಲ್ಲಿ ಗ್ರಾಮ್ಯವಚನ ಬೇಡವೊ ಬಳಿಕ ಮಾತನಾಡುವನು ಗೆಳೆಯನಲ್ಲಯ್ಯ ಕುಳಿತು ತಿನ್ನುವವನು ಸಾಹುಕಾರನಲ್ಲಯ್ಯ 20 ಗಂಟು ಜಗಳ ಕದನಗಳಲಿ ತಂಟೆಬೇಡಯ್ಯ ನಂಟರಿಷ್ಟರಲ್ಲಿ ಭಂಟನಾಗಬೇಡಯ್ಯ ನಾಕು ಜನರ ಮಾತ ಮೀರಿ ನಡೆಯಬೇಡÀಯ್ಯ ಪೋಕರಿ ಜನಗಳಲಿ ಮೂಕ ಬದಿರನಂತಿರೊ ಕಾಲದಲ್ಲಿ ಕೆಲಸಮಾಡಿ ಮುಗಿಸೆಲೊ ನಾಳೆ ನಾಳೆಯೆಂಬ ಕೆಲಸ ಹಾಳು ಕಾಣಿರೊ ಬಿಂಕದಿಂದ ಹರಿಗುರುಗಳ ಮರೆಯಬೇಡಯ್ಯ ಸಂಕಟ ಬಂದಾಗ ವೆಂಕಟೇಶ ಬರುವನೆ ಸಾಲ ಸೋಲ ಮಾಡಿ ದಾನ ಧರ್ಮ ಬೇಡಯ್ಯ ಕೇಳದಿರಲು ನೀತಿ ಹೇಳ ಹೋಗಬೇಡಯ್ಯ 31 ಪರರು ನೋಯುವಂಥ ಮಾತನಾಡಬೇಡಯ್ಯ ಉರಿವ ಒಲೆಗೆ ಉಪ್ಪುಕಾಳನೆರಚಬೇಡಯ್ಯ ನೆರೆಯು ಬಾಳುತಿರಲು ನೋಡಿ ಕರಗಬೇಡಯ್ಯ ಬರಿದೆ ಅಯ್ಯೊ ಪಾಪವೆನಲು ಮರುಕವಲ್ಲವೊ ದುರುಳ ಜನಗಳಲ್ಲಿ ಸರಳನಾಗಬೇಡಯ್ಯ ಹರಿಯ ಭಜನೆಯಲ್ಲಿ ಮನದಿ ನಾಚಬೇಡವೊ ತಿರುಕನಂತೆ ಜ್ಞಾನದ ಭಿಕ್ಷೆಯನು ಬೇಡೆಲೊ ತುರುಕನಂತೆ ಕಾಮದ ತಲೆ ಬಡಿದು ಜೀವಿಸೊ ಸಜ್ಜನಗಳು ಸಮ್ಮತಿಸುವ ಮಾರ್ಗದಲಿ ನಡಿ ದುರ್ಜನಗಳು ಪೇಳಿ ತೋರಿದೆಲ್ಲವನು ಬಿಡಿ40 ಫಲದ ಚಿಂತೆಯಿಲ್ಲದಂತೆ ಧರ್ಮಗಳಿಸಿರೊ ಫಲವು ಹರಿಯಧೀನ ಕೆಲಸ ಮಾತ್ರ ನಿನ್ನದೊ ಧ್ಯಾನ ಮಾಡದಿರಲೊ ಮನದಿ ದುಷ್ಟ ವಿಷಯದ ಧ್ಯಾನದಿಂದ ವಿಷಯದಲ್ಲಿ ಸಂಗ ಬರುವುದೊ ಸಂಗದಿಂದ ದುಷ್ಟಭೋಗ ಕಾಮ ಬರುವುದೊ ಭಂಗವಾದ ಕಾಮದಿಂದ ಕೋಪ ಬರುವುದೊ ಕೋಪದಿಂದ ಮನದಲಿ ವ್ಯಾಮೋಹ ಬರುವುದೊ ಈ ಪರಿಮೋಹದಲಿ ಸ್ಮರಣೆ ನಾಶಪಡುವುದು ಸ್ಮøತಿಯು ತಪ್ಪಿದವನ ಬುದ್ಧಿಮೃತಿಯು ಪೊಂದಲು ಕ್ಷಿತಿಯೊಳವಗೆ ಸರ್ವನಾಶವೆಂದು ನುಡಿಯಿದೆ 50 ಜ್ಞಾನಕೆ ಸಮ ಸಂಪತ್ತಿಲ್ಲ ಜನಕೆ ಲೋಕದಿ ಮೌನಕೆ ಸಮ ಗುಹ್ಯಕೆ ಪಾಲಕರಿಲ್ಲವೊ ಜ್ಞಾನ ಸರ್ವಕರ್ಮಗಳನು ದಹಿಸಿಬಿಡುವುದೊ ಜ್ಞಾನದಿಂದ ಪರಮಶಾಂತಿ ಪಡೆಯುಬಹುದೆಲೊ ಚಿರತನ ವರ್ಣಾಶ್ರಮಗಳ ಧರ್ಮ ಬಿಡದಿರೊ ಮಿತಿಯ ಮೀರಿ ಭೋಜನವನು ಮಾಡಬೇಡವೊ ಕಾಲ ಕಳೆಯಬೇಡವೊ ಲೋಕವ ಭಯಪಡಿಸಬೇಡ ನಡೆನುಡಿಗಳಲಿ ಲೋಕಕೆ ಭಯಪಡಲಿಬೇಡ ಧರ್ಮ ಪಥದಲಿ 60 ಶತುಮಿತ್ರರಲ್ಲಿ ಒಂದೆ ಭಾವ ಪಡೆಯೆಲೊ ಸ್ತೋತ್ರ ನಿಂದೆಗಳಿಗೆ ಹಿಗ್ಗಿ ಕುಂದಬೇಡವೊ ಭಕ್ತಜನರ ನಡೆನುಡಿಗಳ ನಿಂದಿಸದಿರೆಲೊ ಯುಕ್ತರವರು ಹಿರಿಯ ದಯಕೆ ಪಾತ್ರರಿವರೊ ಜಗವು ಸತ್ಯ ಬಗೆ ಬಗೆಯಲಿ ಸೊಗಸ ನೋಡೆಲೊ ಜಗಕೆ ಕರ್ತನೋರ್ವಗೆ ಕೈ ಮುಗಿದು ಬೇಡೆಲೊ ದೇಶಕಾಲ ಪಾತ್ರವರಿತು ದಾನ ಮಾಡೆಲೊ ಆಸೆ ಮೋಸಗಳಿಗೆ ಮನವ ಲೇಸು ಕೊಡದಿರೊ ಪರರ ಮನವು ಕೆದರದಂತೆ ನಿಜಹಿತ ನುಡಿಯು ಗುರುತರ ವಾಚನಿಕ ತಪವ ಮರೆಯಬೇಡವೊ 70 ಸರ್ವಕರ್ಮ ಫಲಗಳನ್ನು ಬಿಡುವನೆ ಯತಿಯು ಗರ್ವಮತ್ಸರಾದಿಗಳನು ಬಿಡುವುದೆ ಮತಿಯು ಶರಣು ಹೊಡೆಯೊ ಕರುಣಮಯನ ಚರಣಯುಗಳದಿ ಕರಗತವಾಗುವುದು ನಿನಗೆ ಇಹಪರ ಸುಖವು ಮಮತೆ ಬಿಟ್ಟು ಜಗದಿ ತಗಲಿ ತಗಲದೆ ಇರೆಲೊ ಕಮಲಪತ್ರಗಳಲಿ ಜಲದ ಕಣಗಳ ತೆರದಿ ಶುದ್ಧ ಧರ್ಮಲೇಶವು ತಲೆ ಕಾಯಬಲ್ಲದೊ ಪದ್ಮನಾಭ ಜನರ ಚಿತ್ತಶುದ್ಧಿ ನೋಡುವ ನಾನೆ ಬ್ರಹ್ಮನೆಂಬ ವಾದ ಬಾಳಬಲ್ಲದೆ ತಾನೆ ಬೀಳಲಿರುವ ಮರಕೆ ಕೊಡಲಿ ಏತಕೆ 80 ಜ್ಞಾನತೀರ್ಥಗಳಲಿ ಮುಳುಗಿ ಸ್ನಾನ ಮಾಡೆಲೊ ಜ್ಞಾನಕೆ ಜ್ಯೋತಿಗಳ ಬೆಳಕು ಕಾಣುತಿರುವುದೊ ದಾರುಣ ಸಂಸಾರ ಜಲದಿ ಪಾರುಗಾಣಲು ಧೀರನಾಗಿ ಈಜುವವಗೆ ತಾರಣ ಸುಲಭ ತಲೆಯ ಮೇಲೆ ಕೈಯನಿಟ್ಟು ಕೂಡ ಬೇಡವೊ ಬೆಳಸಿದಂತೆ ತರುಲತೆಗಳು ಫಲಕೊಡುವುದೊ ಮುಂದೆ ಇಟ್ಟ ಹೆಜ್ಜೆಗಳನು ಹಿಂದೆಗೆಯದಿರೊ ಮಂದಿಗಳಿಗೆ ಫಲದಲಿ ಸಂದೇಹ ಬೇಡವೊ ಹುಳಿಯ ರಕ್ತವಿರುವತನಕ ತಲೆಯು ಬಾಗದು ಕಾಲ ಸಾಲದೊ 90 ಪರರ ನುಡಿಗಳನ್ನು ಕದ್ದು ಕೇಳಬೇಡವೊ ಅರಿತು ನಿನ್ನ ಹರಿಯು ಗುದ್ದಿ ಬುದ್ಧಿ ಕಲಿಸುವ ಚಾಡಿಯಾಡ ಬೇಡ ಚಾಡಿ ಕೇಳಬೇಡವೊ ಸೇಡನು ತೀರಿಸುವ ಹೇಡಿಯಾಗಬೇಡವೊ ನಿನ್ನ ಮಾನದಂತೆ ಪರರ ಮಾನವೆಂದರಿಯೆಲೊ ಅನ್ನ ಹಾಕುವವರ ಹರಿಸಿ ಘನ್ನವೆನಿಸೆಲೊ ಕುಲವ ಶೋಧಿಸುತಲಿ ಕನ್ಯೆದಾನ ಮಾಡೆಲೊ ತಲೆಯ ಕ್ರಾಪು ಯೋಗ್ಯತೆಗೆ ಪ್ರಮಾಣವಲ್ಲವೊ ಕರವ ಪಿಡಿಯೆಲೊ ಥಳಕು ಬೆಳಕು ನೋಡಿ ಬಲೆಗೆ ಬೀಳ ಬೇಡವೊ 100 ಗಾಳಿಯು ಬಂದಾಗ ಬೇಗ ತೂರಿ ಕೊಳ್ಳಲೊ ಕಾಲದ ಸ್ಥಿತಿಯರಿತು ತಗ್ಗಿ ಬಗ್ಗಿ ನಡೆಯೆಲೊ ಮೇಲಿನ ದರ್ಜೆಯಲಿ ನಡೆದು ಕೇಳಬೇಡವೊ ನಾಲಗೆ ಚೆನ್ನಿರುವ ನರಗೆ ಜಗಳವಿಲ್ಲವೊ ಇರುಳು ಕಂಡ ಬಾವಿಗೆ ನೀ ಉರುಳಬೇಡವೊ ಶಕ್ತಿ ಇರುವ ಕಾಲದಲ್ಲಿ ಉತ್ತಮನೆನಿಸೊ ಶಕ್ತಿಯಲ್ಲಿದಾಗ ಇದ್ದು ಸತ್ತ ಪ್ರಾಯವೊ ಸ್ವೊತ್ತಮ ಜನರಲ್ಲಿ ನಿಯತ ಭಕ್ತಿ ಮಾಡೆಲೊ ಭಕ್ತಿಯಿಲ್ಲದವಗೆ ಮುಕ್ತಿಯಿಲ್ಲ ಕಾಣಿರೊ 110 ಪಾಪಿಯಾಗಬೇಡ ಇತರ ಜನರ ವಂಚಿಸಿ ಕೋಪ ಮಾಡಬೇಡ ಕೊಟ್ಟ ಋಣವ ಕೇಳಲು ಕೂಪ ಕೂರ್ಮದಂತೆ ಜಗವ ನೋಡಬೇಡವೊ ರೂಪುರಂಗುಗಳಿಗೆ ಮನವ ಸೋಲಬೇಡವೊ ಹಡೆದ ಮಕ್ಕಳುಗಳ ಕಾಲದಲ್ಲಿ ತಿದ್ದೆಲೊ ಗಿಡದಲಿ ಬಗ್ಗಿಸದ ಮರವು ಬಗ್ಗಲಾರದೊ ಕೊಡಲಿಯನ್ನು ಸೇರಿ ಮರದ ಕಾವಿನಂದದಿ ನಡತೆ ಕಲಿಸದಿದ್ದರವರು ಬುಡಕೆ ತರುವರೊ ಗಳಿಸಿದವನ ಧನವು ಬಳಸಿದವನಿಗೆಂದರಿಯೆಲೊ ಬಳಸಲು ನೀತಿಯಲಿ ಧನವ ಗಳಿಸಿ ಸುಖಿಸೆಲೊ 120 ತಿಳಿದು ಮರ್ಮ ಕಲಿ ಪುರುಷನ ನೆಲಕೆ ತುಳಿಯಿರಿ ಗುಹ್ಯ ತತ್ವ ಪೇಳಬೇಡವೊ ನಾಯಿಗಳಿಗೆ ಹವ್ಯದಾನ ಮಾಡಬೇಡವೊ ಕಾಯುವ ಗುರುಚರಣವೆ ಬಲುಶ್ರೇಯವೆನ್ನದೆ ಕರ್ಮ ಸುಡುವುದೆ ಉಣಲು ಬದುಕಬೇಡ ಜಗದಿ ಬದುಕಲು ಉಣೆಲೊ ಜನನ ಮರಣ ನಿಯತ ಕಾಲಗಳಲಿ ಬರುವವೊ ಕೊನೆ ಮೊದಲುಗಳಿಲ್ಲವು ಈ ಜಗಪ್ರವಾಹಕೆ ತನಗೆ ತಾನೆ ಬೀಳದು ಜಗದಾಖ್ಯ ವೃಕ್ಷವು 130 ತಾಳಿದವನು ಬಾಳುವನೆಂದರಿತು ನಡೆಯೆಲೊ ಗಾಳಿಗುದ್ದಿ ಕರಗಳನ್ನು ನೋಯಿಸದಿರೆಲೊ ಬಾಲನೆಂದು ಅರಿತು ಸತತ ಜ್ಞಾನವ ಗಳಿಸೆಲೊ ನಾಳೆಯ ದಿನ ನಂಬದಂತೆ ಧರ್ಮಗಳಿಸೆಲೊ ಹರಿಯುಕೊಟ್ಟ ಕಾಲದಲ್ಲಿ ಪರರ ರಕ್ಷಿಸೊ ಹರಿಯು ಕೊಡದ ಕಾಲದಲ್ಲಿ ಹರುಷ ಬಿಡದಿರೊ ದೂಷಕರನು ಎಂದಿಗು ನೀ ದ್ವೇಷಿಸದಿರೆಲೊ ಹೇಸಿಗೆಯನು ನಾಲಿಗೆಯಲಿ ತೆಗೆದುಬಿಡುವರೊ ಹಳ್ಳಕೆ ಬಿದ್ದವನಮೇಲೆ ಕಲ್ಲೆಸೆಯದಿರೊ ಟೊಳ್ಳು ಹರಟೆಗಾರನೆದರು ನಿಲ್ಲ ಬೇಡವೊ 140 ಒಳ್ಳೆಯ ಫಲಕೊಡುವ ಕಾರ್ಯಗಳು ಚಿಂತಿಸೊ ಜಳ್ಳು ಹುಲ್ಲಿಗಾಗಿ ಬೆವರು ಸುರಿಸಬೇಡವೊ ಬಿಂದು ಬಿಂದು ಸೇರಿ ಸಿಂಧುವಾಯಿತೊ ಹಿಂದಿನ ಮೊಳೆಯಿಂದ ದೊಡ್ಡ ವೃಕ್ಷವಾಯಿತೊ ಒಂದನು ಇನ್ನೊಂದು ಸೇರಿ ಕೋಟಿಯಾಯಿತೊ ಮಂದಿಗಳಿದನರಿತು ಪುಣ್ಯರಾಶಿ ಗಳಿಸಿರೊ ನೆರಳು ನೀರು ಕೊಟ್ಟ ಜನರ ಮರೆಯ ಬೇಡವೊ ಸರಿಯುತಿರುವ ಮಾರಿ ಮಸಣಿ ಕರೆಯಬೇಡವೊ ಅರಿಯದ ಅಜ್ಞಾನಿಯೊಡನೆ ಸರಸಬೇಡವೊ ತರುಗು ತಿನ್ನುವವನ ಕೇಳಬೇಡ ಹಪ್ಪಳ 150 ದೇಹಿಯೆಂದು ಬಂದವನಿಗೆ ನಾಸ್ತಿಯೆನದಿರೊ ಸಾಹಸವನು ಮಾಡದಿರೊ ಪ್ರಬಲ ಜನರಲಿ ಮೋಹಕೆ ತುತ್ತಾಗದಿರೆಲೊ ಪರಸತಿಯರಲಿ ದೇಹಕೆ ಬಲ ಶುದ್ಧಿ ಕೊಡುವ ನಿಯಮ ಬಿಡದಿರೊ ಭಾಗ್ಯಹೀನ ಬಡವನೆಂದು ಜರಿಯಬೇಡವೊ ಯೋಗ್ಯತೆಯನು ತಿಳಿಯಲು ಬಲು ಸುಲಭವಲ್ಲವೊ ಶ್ಲಾಘ್ಯವಾದ ಮೂಲಿಕೆಗಳನರಿಯೆ ಸುಲಭವೆ ಯೋಗ್ಯತೆಯನುಸರಿಸಿ ಬರುವ ಭಾಗ್ಯ ಬೇರಿದೆ ಖ್ಯಾತಿಗಾಗಿ ಆತ್ಮಸ್ತುತಿಯ ಮಾಡಬೇಡವೊ ಕೋತಿಯಂತೆ ಕುಣಿಯಬೇಡ ಸರಿಸಮರೊಳಗೆ 160 ಮೂತಿ ತಿರುಗಬೇಡ ಪರರ ಹಿತನುಡಿಗಳಿಗೆ ಸೋತ ಹಾಸ್ಯ ಮಾಡಬೇಡ ರಸಿಕ ಜನರಲಿ ಹಿರಿಯರು ಸಂದೇಹಪಡುವ ಮಾರ್ಗ ತ್ಯಜಿಸೆಲೊ ಬರಿಯ ಮಾತನಾಡಿ ಬೆನ್ನು ತಟ್ಟ ಬೇಡವೊ ಪರರ ಹಳ್ಳಕ್ಕಿಳಿಸಿ ಆಳ ನೋಡಬೇಡವೊ ಕರಕೆ ಸಿಕ್ಕಿದಾಗ ಹಲ್ಲು ಕಿರಿಯಬೇಡವೊ ಅರಳು ಹುಡುಕಬೇಡವೊ ಎದೆಯು ಒಡೆಯುವಂತೆ ಸುದ್ದಿ ಪೇಳಬೇಡವೊ ಬೀದಿಯಲಿರುವ ಜನಗಳ ಬೇಸರಿಸಬೇಡವೊ ಬೆದೆಯಲಿರುವ ದುರುಳನನ್ನು ಕೆಣಕಬೇಡವೊ 170 ಊರು ಕುರಿಯ ಕಾದು ಗೌಡನೆನಿಸಬೇಡವೊ ದೂರು ತರುವ ಜನರ ಕ್ಷಣದಿ ನಂಬಬೇಡವೊ ನಾರಿಯ ಸಾಹಸವ ನಂಬಿ ದುಡುಕಬೇಡವೊ ಎರಡು ಕರವು ಸೇರದೆ ಚಪ್ಪಾಳೆಯಾಗದು ಕುರುಡನು ತೋರಿಸುವುದೆಲ್ಲ ಮಾರ್ಗವಾಗದು ಕರಡಿಯು ಮೈಯಪರಚಲದು ಸೌಖ್ಯವಾಗದು ಗುರುಗಳ ಬಿಟ್ಟೋದಲು ಉಪದೇಶವಾಗದು ಹರಿಯಭಕುತಿ ಹರಿಯದಿರಲು ಗಾನವಾಗದು ಬರಿಯ ಸ್ವರಗಳುರುಳಿಸೆ ಕೀರ್ತನೆಯದಾಗದು 180 ಕರದಿ ತಟ್ಟೆ ಹೊಳೆಯುಂತಿರೆ ಪುರಾಣವಾಗದು ಕಿರಿಯ ಜನರ ಗುಣಗಾನವು ಭಜನೆಯಾಗದು ಅಕ್ಕಿಗಾಗಿ ಅಲೆವರೆಲ್ಲ ದಾಸರಾಗರು ಬೆಕ್ಕಿನಂತೆ ಕಣ್ಣು ಮುಚ್ಚಿ ಯತಿಗಳಾಗರು ಚಿಕ್ಕ ಜಿರಳೆ ಮೀಸೆಯಿರಲು ರಾಯರಾಗದು ಚಿಕ್ಕ ಕೊಳೆಯ ಚೌಕ ಧರಿಸೆ ಮಡಿಯದಾಗದು ಕದ್ದು ಅವಿತುಕೊಂಬರೆಲ್ಲ ಗರತಿಯಾಗರು ಮದ್ದು ಮಾಟ ಮಾಡುವವರು ಸುದತಿಯಾಗರು ಶುದ್ಧ ಧೈರ್ಯ ನಡತೆಯಿಂದ ನಿಂದ್ಯರಾಗರು ಬುದ್ಧಿ ಬದುಕು ಹೇಳುವವರು ದ್ವೇಷಿಯಾಗರು 190 ರೀತಿ ನೀತಿಗಳನು ಪರಗೆ ಹೇಳಲು ಸುಲಭ ಮಾತನಾಡಿದಂತೆ ಮಾಡಿ ತೋರುವರಿಹರೇ ತಾತನ ಕಾಲದಲ್ಲಿ ನುಡಿದ ಮಾತಿದಲ್ಲವು ಹೋತನ ಗಳಸ್ತನವಿದಲ್ಲ ಕೂತು ಕೇಳರಿ ಗಾದೆಗಳನು ವೇದವೆಂದು ಪೇಳಲುಚಿತವು ಮಾದರಿ ಅಣುಶಕ್ತಿಯಿಂದೆ ಗಾದೆ ಗಾದೆಗು ಪರಮ ಭಾಗವತರ ಚರಿತೆಯೋದಿ ನೋಡಿರಿ ಅರಿಯಬಹುದು ನುಡಿದ ನೀತಿಸಾರವೆಲ್ಲವ ನಾಡುನುಡಿಗಳೆಂದು ಮರೆಯಬೇಡವೆಂದಿಗು ಪಾಡಿದರೆ ಪ್ರಸನ್ನ ಹರಿಯು ನೀಡುವ ಫಲವ 200
--------------
ವಿದ್ಯಾಪ್ರಸನ್ನತೀರ್ಥರು