ಒಟ್ಟು 3056 ಕಡೆಗಳಲ್ಲಿ , 117 ದಾಸರು , 2175 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷ್ಮೀ ವೆಂಕಟೇಶ ವಿಠಲ | ರಕ್ಷಿಸೋ ಇವಳಾ ಪ ವಿಶ್ವ ವ್ಯಾಪಕನೇ ಅ.ಪ. ಪುಟ್ಟಿ ಸತ್ಕುಲದಲ್ಲಿ | ತೊಟ್ಟು ಸತ್ಸಿದ್ಧಾಂತ ಇಷ್ಟ ಪಡುತಿಹಳಯ್ಯ | ಕಷ್ಟದಾಸತ್ವಾಇಷ್ಟ ಮೂರುತಿ ನೀನು | ತೈಜಸೀ ರೂಪದಲಿಸ್ಪಷ್ಟ ತೋರಿದ ಹರಿಯೆ | ಇತ್ತೆ ಉಪದೇಶಾ 1 ಮರುತ ಮತದಲಿ ದೀಕ್ಷೆ | ಹಿರಿಯರನು ಸರಣೆಯಲಿನಿರುತ ಆಸಕ್ತಿಯನು | ಕರುಣಿಸುತ ಭವದಾಶರಧಿಯನೆ ದಾಟಿಸುವ | ಮಾರ್ಗವನೆ ತೋರೊ ಹರಿಕರುಣಾಂಬುನಿಧಿಯೆಂದು | ಮೊರೆ ನಿನಗೆ ಇಡುವೇ 2 ಕಷ್ಟ ನಿಷ್ಠೂರಗಳ | ಸುಷ್ಠುಸಮತೆಲಿ ಉಂಬಶ್ರೇಷ್ಠ ಮತಿಯನೆ ಇತ್ತು | ರಕ್ಷಿಸೋ ಇವಳಾ |ಅಷ್ಟ ಸೌಭಾಗ್ಯಗಳ | ಕೊಟ್ಟು ಕಾಯಲಿ ಬೇಕೊಕೃಷ್ಣ ಮೂರುತಿ ಹರಿಯೆ | ಭಕ್ತ ವತ್ಸಲ್ಲಾ 3 ಪರಮಾರ್ಥ ಸಾಧನಕೆ | ಗುರು ಕರುಣಬೇಕೆಂಬವರಮತಿಯ ಕರುಣಿಸುತ | ಪೊರೆಯ ಬೇಕಿವಳಾಗರುಡ ಗಮನನೆ ದೇವ | ಸರ್ವಾಂತರಾತ್ಮಕನೆಕರುಣದಿಂ ಕೈ ಪಿಡಿದು | ಉದ್ಧರಿಸೋ ಇವಳಾ 4 ಪಾವಮಾನಿಯ ಪ್ರೀಯ | ಭಾವದಲಿ ಮೈದೋರಿಜೀವಿಯನು ಉದ್ಧರಿಸೋ | ದೇವ ದೇವೇಶಾಗೋವತ್ಸದನಿ ಕೇಳಿ | ಆಪು ಪೊರೆವಂತೆ ತೋರಿಗೋವಿದಾಂಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಕ್ಷ್ಮೀದೇವಿ ಅಂಬೋರುಹೇಕ್ಷಣೆ ಅಂಬಾಲತೇ ಜಗ ದಂಬಾ ಪೊರೆಯೆ ಸತತ ಗಂಭೀರ ಗಜಗಮನೆ ಪ ನಂಬಿದೆ ನಿನ್ನ ಪದಾಂಬುಜಯುಗಳವ ಕಂಬು ಕಂಧರಿ ಕನಕಾಂಬರ ಧಾರಿಣಿ ಬೆಂಬಲವೀಯೆ ವಿಳಂಬವ ಮಾಡದೆ ಅ.ಪ `ಯಂಕಾಮಯೇ'ತ್ಯಾದಿ ಶೃತಿಗಳೆಲ್ಲಾ ಪಂಕಜಭವಮುಖ ಸುಮನಸರು ಕಿಂಕರರೆನ್ನುತ ಪೊಗಳುತಿರೆ ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿ ಶ ಶಾಂಕ ಸೋದರಿ ಆತಂಕವ ಬಿಡಿಸೆ 1 ನೀರಜಾತಗಣ ಕೃತ ನಿಲಯೇ ಮಾರಜನಕ ಹರಿ ಪ್ರಿಯ ಜಾಯೆ ಕೋರುವೆ ನಿನ್ನಯ ಪರಮದಯೆ ಸಾರಸಾಕ್ಷಿ ಸರಿಯಾರು ನಿನಗೆ ಕರು ಣಾರಸಮಯೆ ಸುವಿಶಾರದೆ ಜನನಿ 2 ಕನ್ಯೆ ನಿಖಿಲ ಸುರನರರೊಳಗೆ ಮಾನ್ಯೆ ನಿನ್ನ ಪೋಲುವರನ್ಯರುಂಟೆ ನಿನ್ನ ದಾಸನಾದ ಎನ್ನ ಮನೋರಥ ವನ್ನು ತಿಳಿಸೆ ಪ್ರಸನ್ನ ಶ್ರೀ ಹರಿಯಲಿ 3
--------------
ವಿದ್ಯಾಪ್ರಸನ್ನತೀರ್ಥರು
ಲಕ್ಷ್ಮೀದೇವಿ ನಮಿಸುವೆ ನಮ್ಮಮ್ಮ ಅಮಿತ ಮಹಿಮಳೇ ಆದಿ ಲಕುಮಿಯೇ ಅನುದಿನ ಸಲಹಮ್ಮ 1 ಅಜತ ನಾಮಕನೆ ಆದಿ ದೈವವೆಂದು ತ್ರಿಜಗಮ ತಿಳಿವಂತೆ ನಿಜ ಪುರುಷನಿಗೆ ವನಮಾಲೆಯ ಹಾಕಿ ಭಜಿಸಿದೆ ಬಲವಂತೆ 2 ಕಮಲಜ ಮೊದಲಾದ ಸುಮನಸರಿಂದಲಿ ಕ್ರಮದಿ ಪೂಜೆಗೊಂಬೆ ಸಮನಿಲ್ಲದ ಸೌಭಾಗ್ಯವ ಕೊಡು ನೀ ಮಹ ಜಗದಂಬೆ 3 ಕಮಲವಾರಿಧೆ ಕಮಲಲೋಚನೆ ಕರವೀರ ಪುರಧೀರೆ ವರ ಕದರುಂಡಲಗಿ ಹನುಮಯ್ಯನೊಡೆಯನಉರದೊಳು ಸ್ಥಿರವಾಸೆ 4
--------------
ಕದರುಂಡಲಗಿ ಹನುಮಯ್ಯ
ಲಕ್ಷ್ಮೀದೇವಿ ಸ್ತೋತ್ರ ಎಂದು ಬರುವಳೋ ಗೋ-ವಿಂದನೊಲ್ಲಭೆ ಲಕ್ಷ್ಮೀ ರಂಗನ ಸನ್ನಿಧಿಗೆ ಪ ಮಂಗಳಾಂಗಿ ಸರ್ವಾಂಗ ಬಳಲಿ ಮುಖಕಂದಿ ಕಳೆಗುಂದಿದಂತೆ | ಬಲು ವ್ಯಥೆಯಂತೆ ಅ.ಪ ಶೇಷನ ಶಿಖಿ ಮ್ಯಾಲೆವಾಸುದೇವರು ಲಕ್ಷ್ಮೀ ಸಮೇತರಾಗಿರುತಿರಲುಆ ಸಮಯದಿ ಭೃಗುಮುನಿ ಬಂದು ಕೋ-ಪಿಸೆ ಸೋಕಿಸಿದನು ಪಾದವಾ | ವಕ್ಷ ಸ್ಥಳವಾ 1 ಥಟ್ಟನೆ ಇಳಿದಾಳುಸಿಟ್ಟಿನಿಂದಲಿ ಬಹು ಧಿಕ್ಕಾರ ಮಾಡಿದಳುಲಕ್ಷ್ಮೀರಮಣನೆಂಬೊ ಬಿರುದು ನಿಮಗೆ ಈಹೊತ್ತಿಗೆ ಅಲ್ಲೆಂದಾಳು | ತೆರಳಿದಳು 2 ನಿಲ್ಲದೆ ಪೊರಟಾಳುಫುಲ್ಲಾಕ್ಷಿ ಮನದೊಳು ತಲ್ಲಣಿಸುತಿರಲುವಲ್ಲಭನರಿಯದ ಸ್ಥಳವಿಲ್ಲದಿರೆ ತಾಯಿ ಕೊಲ್ಲಾಪುರಕೆ ಬಂದಾಳು | ನೆಲೆಗೊಂಡಾಳು 3 ಜಾತೆ ಬಾಮಾರನ ಮಾತೆ ಬಾ ವಾರಿಜದಳನೇತ್ರೆ ಬಾಮೂರ್ಲೋಕದೊಳಗೆ ನೀ ಪ್ರಖ್ಯಾತೆ ಬಾರೆಂದು ಶ್ರೀಮ-ನ್ನಾರಾಯಣನೆ ಕರೆಯಲು | ನಸುನಗೆಯೊಳು 4 ಜಯ ಲಕ್ಷ್ಮೀರಮಣಗೆಜಯ ಶ್ರೀನಿವಾಸಗೆ ಜಯ ಮೋಕ್ಷದಾಯಕಗೆಜಯತು ಕೊಲ್ಹಾಪುರದೊಳ್ ನೆಲಸಿದವಳಿಗೆಶ್ರೀದೇವಿಯಳಿಗೆ5 ವೆಂಕಟ ವಿಠಲವೈಕುಂಠಪತಿ ಲಕ್ಷ್ಮೀ ಶಾಂತ ಏಕಾಂತದೊಳುಶಂಖಚಕ್ರಧರ ಸರ್ವಮಂಗಳಕಾರಸಂಚಿತಾಗಮದೂರನು ಮಲಗಿರುವನು6
--------------
ವೆಂಕಟೇಶವಿಟ್ಠಲ
ಲಕ್ಷ್ಮೀದೇವಿಯ ಪ್ರಾರ್ಥನೆ ಶ್ರೀನಿವಾಸನ ಕರುಣಾನು ಸಂಸರಣಿ ಜ್ಞಾನ ಭಕ್ತಿಗಳನ್ನು ಪಾಲಿಸಂಭರಣಿ ಪ. ಅಜಭವಾದಿಗಳಿಗೆ ನಿಜಪದದಾಯಿನಿ ವೃಜಿನ ಸಮೂಹ ನಿವಾರಿಣಿ ಕುಜನ ಕುಠಾರಿಣಿ ಕುಂಜರ ಗಮನೆ ಪಾಲು ದಧಿವಾಸನ ಕೂಡಿ ಸದನದಿ ನೆಲೆಗೊಳ್ಳೆ 1 ಆರಿಗೆ ನಿನ್ನ ಕರುಣಾರಸ ದೊರೆವದೊ ನೀರಜಾಲಯೆ ನಿನ್ನ ಸೇರಿಕೊಂಡಿಹ ಎನ್ನ ವೈರಿ ಜನರು ಬೇಗ ಗಾರಾಗದುಳಿವರೆ 2 ನೀನೊಲಿಯಲೂ ಸರ್ವ ಮಾನವರೊಳಗತಿ ಮಾನ ಮಹತ್ವಾದಿ ಸದ್ಗುಣವೂ ತಾನಾಗಿ ಬರುವವಿಂನೇನೆಂದು ನಿನ್ನ ಮಹಿ- ಮಾನು ವರ್ಣನೆ ಮಾಳ್ಪೆ ದೀನ ದಯಾಕಲೆ 3 ಮಂದಿರದೊಳಗೆ ನೀ ನಿಂದು ನಗುತ ನಲಿ ವಂದ ನೋಡುತ ಮಿತ್ರ ಬಂಧುಗಳು ಮಂದರಧರ ತಾನೆ ನಿಂದು ರಕ್ಷಿಸನೆಂದಾ ನಂದ ಪೂರಿತ ಮನದಿಂದ ಸೇರಿರುವರು 4 ಸರಸಿಜನಾಭ ಶ್ರೀಹರಿಯು ನಿನ್ನನ್ನೆ ಮುಂ ದಿರಿಸಿ ಚತುರ್ವಿಧ ಪುರುಷಾರ್ಥವಾ ಕರುಣಿಪೆನೆಂದು ಕಂಠಸರದ ಮಧ್ಯೂರದಲಿ ಧರಿಸಿ ಶೋಭಿಪ ಶೇಷಗಿರಿವರ ಶಿಖರದಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಲಕ್ಷ್ಮೀಪ್ರಿಯರ ಚರಣ ಭಜನೆ ನಿರುತದಿಂದ ಮಾಡುವ ಪ ಲಕ್ಷ್ಮೀಪತಿಯ ಕರುಣ ಪಡೆದು ಹರುಷದಿ ನಾವ್ ಬದುಕುವ ಅ.ಪ ಸದ್ಪೈಷ್ಣವ ಕುಮುದಕಾಭಿ ವೃದ್ಧಿ ತರುವ ಗೋಸುಗ ಮಧ್ವ ಮತಾಬ್ಧಿಯಲ್ಲಿ ಉದ್ಭವಿಸಿದ ಚಂದ್ರರ 1 ವ್ಯಾಸಮುನಿಗೆ ಒಲಿದ ಕೃಷ್ಣನ ಸೋಸಿನಿಂದ ಪೂಜಿಸಿ ವ್ಯಾಸಸೂತ್ರ ಭಾಷ್ಯ ಉಪ ನ್ಯಾಸ ಮಾಡಿ ಮರೆವರ 2 ದೀನ ಜನರ ವೃಂದಕೆ ಸುರ ಧೇನು ಎನಿಪ ಮುನಿವರ ಶ್ರೀ ನರಹರಿಗೆ ತಾವು ಅನುಗರಾಗಿ ಇರುವರ 3
--------------
ಪ್ರದ್ಯುಮ್ನತೀರ್ಥರು
ಲಕ್ಷ್ಮೀಶ ಗೋವಿಂದ ವಿಠಲ ಪೊರೆ ಇವಳಾ ಪ ಪಕ್ಷ್ಮಗಳು ಅಕ್ಷಿಗಳ ಅಗಲದಿಪ್ಪಂತೇ ಅ.ಪ. ಕುಕ್ಷಿಯಲಿ ಜಗಧರಿಪ ಪಕ್ಷಿವಾಹನ ದೇವಅಕ್ಷರೇಡ್ಯನೆ ಕರುಣದೀಕ್ಷಿಸುತ ಇವಳ |ರಕ್ಷಿಪುದು ಸುಜ್ಞಾನ ಭಕ್ತಿದಾಯಕನಾಗಿಕಕ್ಷೆತರತಮ ಜ್ಞಾನ ಭೇದಪಂಚಕನರುಹಿ 1 ಪತಿಯೆ ಪರದೈವವೆಂಬುನ್ನತದ ಮತಿಯಿತ್ತುಪಥತೋರೊ ಸದ್ಗತಿಗೆ ಸರ್ವವ್ಯಾಪಕನೇ |ಹಿತದಿಂದ ಬಯಸುವಳು ತವಪಾದ ದಾಸ್ಯವನುಕೃತಿ ಪತಿಯೆ ನೀನಿತ್ತು ಸಲಹ ಬೇಕಿವಳಾ 2 ವಾಗ್ದೇವಿ ಪತಿ ಪ್ರೀಯಕೃಪೆಗೈದು | ತವಪಾದ ಹೃದುಹದಿ ನೋಳ್ಪ |ಸುಪಥವೆನೆ ಹರಿಗುರೂ ಸದ್ಭಕ್ತಿ ಕರುಣಿಪುದುವಿಪಗಮನ ಹಯವದನ ಶ್ರೀ ಲಕ್ಷ್ಮೀ ಸದನಾ 3 ಅಂಕಿತಿಲ್ಲದ ದೇಹ ಸಾಧನಕೆ ಸಲ್ಲದೆನೆಅಂಕಿತವ ವಿತ್ತಿಹೆನು ಗುರುಕರುಣದೀ | ನಿಂತು ನೀನಿವಳಲ್ಲಿ ತೋರು ತವ ಮಹಿಮೆಗಳಸಂತತದಿ ನಿನ್ನಂಘ್ರಿ ಸ್ಮರಣೆ ಕರುಣಿಸುತ 4 ಸರ್ವ ಶ್ರುತಿ ಸಮ್ಮತದ ಪವನಮತ ದೀಕ್ಷೆಯನುಸರ್ವ ಕಾರ್ಯದಿ ನಿನ್ನ ಸೇವೆ ಮತಿಯ |ಸರ್ವದಾ ಕರುಣಿಸುತ ಪೊರೆ ಎಂದು ಭಿನ್ನೈಪೆಪವನಾಂತರಾತ್ಮ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಘುವಾವುದೆಂಬುದನು ನಿಜವಾಗಿ ನುಡಿಯುವೆನು ಸುಗುಣವಂತರು ಕೇಳಿ ವಿನಯದಲಿ ಬೇಡುವೆನು ಪ ಲಘುತೃಣವು ತಾನಲ್ಲದಿಟವೆ ಸರಿ ಈ ಮಾತು ಲಘುತೃಣವ ತಾವುಂಡು ಪಾಲ್ಕೊಡವೆ ಗೋವುಗಳು ಅ.ಪ. ನಾರಿಯನು ಸಾಕುವೆಡೆ ಕೈಲಾಗದ ಲಘುವು ಭಾರಿಸಿರಿಯನು ಪತಿಗೆ ತಾರದಾ ಸೊಸೆ ಲಘುವು ನಾರಿಯರ ಕೈಗೊಂಬೆಯಾಗಿರುವ ನರ ಲಘುವು ಸಿರಿವಂತ ನೆಂಟರಲಿ ಬಡವ ಸೇರಲು ಲಘುವು 1 ವಿತ್ತವಿಲ್ಲದ ಪಿತನು ಪುತ್ರನಿಲ್ಲಿರೆ ಲಘುವು ಪುತ್ರವತಿಯರ ನಡುವೆ ಸವತಿ ಬಂಜೆಯು ಲಘುವು ಅತ್ತಿಗೆಗೆ ಬಹು ಲಘುವು ರಿತ್ತ ಮೈದುನ ಮಂದಿ ಭತ್ರ್ಯತಾನತಿ ಲಘುವು ಶ್ರೀಮಂತ ಕನ್ನಿಕೆಗೆ 2 ಮೋದತೀರ್ಥರ ಮತಕೆ ಮಿಕ್ಕುದೆಲ್ಲವು ಲಘುವು ವೇದನುತ “ಶ್ರೀಕೃಷ್ಣವಿಠಲ”ನ ನೆನೆಯದವ ಶುದ್ಧಲಘು ತಮನೈಯ ವೃದ್ಧ ಸಮ್ಮತ ಹೌದು 3
--------------
ಕೃಷ್ಣವಿಠಲದಾಸರು
ಲಾತವ್ಯ - ಲಾತವ್ಯ ಪ ಖ್ಯಾತಾಗ್ರೇಸರ | ಭೂತರಾಜನುತ ಅ.ಪ. ಸ್ವಪ್ನದ್ರಷ್ಟ್ರುವು | ವಿಪ್ರನ ಮುಖದಿಂಸ್ವಾಪ್ನಾಖ್ಯಾನವ | ಸುಪ್ರಕಟಿಸಿದೆ 1 ವ್ಯಾಸರ ಸಮ್ಮುಖ | ವಾಸಿಸುತಿಹ ಸುವಿಶೇಷ ಮಹಿಮ ಗುರು | ದೈಶಿಕರೊಡೆಯನೆ2 ಆಖಂಡಲ ಮುಖ | ಮಂಡಿತ ಚರಣನೆಪಾಖಂಡರ ಮತ | ಖಂಡಿಸಿ ಮೆರೆದಾ 3 ಭಯವಿದೂರ ತವ | ದಯವನು ಪ್ರಾರ್ಥಿಪೆಹಯವದನನ ಪದ ಪ್ರಿಯ ಭಜಕಾಗ್ರಣಿ4 ಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ಕಾಣಿಸು | ಭಾವಿ ಮರುತ ಗುರು 5
--------------
ಗುರುಗೋವಿಂದವಿಠಲರು
ಲಾಲಿ ಶ್ರೀ ಹಯವದನ ಲಾಲಿ ರಂಗವಿಠಲÁಲಿ ಗೋಪೀನಾಥ ಲಕ್ಷ್ಮೀಸಮೇತ ಪ. ಮುತ್ತು ಮಾಣಿಕ ಬಿಗಿದ ತೊಟ್ಟಿಲೊಳಗೊಲ ಮನೆಯೊಳಗೆ ಇರನೀತ ಬಹುರಚ್ಚೆವಂತಮನೆವಾರ್ತೆ ಯಾರು ಮಾಡುವರು ಶ್ರೀಕಾಂತಗುಣಿಗುಣಗಳೊಳಗಿಪ್ಪ ಬಹು ಗುಣವಂತಗುಣಬದ್ಧನಾಗದಿಹÀ ಶ್ರೀ ಲಕ್ಷ್ಮೀಕಾಂತ2 ಕ್ಷೀರಾಂಬುನಿಧಿಯೊಳಗೆ ಸೆಜ್ಜೆಯೊಳಗಿರುವಶ್ರೀರಮಣ ಭಕ್ತರಿಚ್ಚೆಗೆ ನಲಿದು ಬರುವಕಾರುಣ್ಯ ಹಯವದನ ಕಾಯ್ವ ತುರುಕರುವನೀರೆ ಗೋಪಿಯರೊಳು ಮೆರೆವ ಕಡುಚೆಲುವ 3
--------------
ವಾದಿರಾಜ
ಲಾಲಿಮನುಕುಲತಿಲಕ ಮದನಾರಿವಿನುತ ಲಾಲಿಜನಕಜಾಮಾತ ಜಾನಕೀ ಸಮೇತ ಪ. ಕೌಸಲ್ಯಾಪ್ರಿಯಬಾಲ ಕನಕಮಯ ಚೇಲ ಕೌಶಿಕಕ್ರತುಪಾಲ ಕರುಣಾಲವಾಲ ಪೋಷಿತಾಮರಜಾಲ ಬಾಲೇಂದು ನಿಭಫಾಲ ದಶಕಂಠಮುಖಕಾಲ ಜಾನಕೀಲೋಲ 1 ನಾಕೇಶನುತಚರಣ ನಕ್ತಂಚರಶಮನ ಶ್ರೀಕಾಮಿನೀಸದನ ರಾಜೀವನಯನ ಲೋಕನಾಯಕ ಸರ್ವ ಲೋಕಪಾಲಕ ದಿವ್ಯ ಸಾಕೇತಪುರನಿಲಯ ಸನಕಾದಿಗೇಯ 2 ಈಶಸನ್ನುತ ನಾಮ ನೀಲಮೇಘಶ್ಯಾಮ ಶೇಷಾದ್ರಿಶಿಖರಧಾಮ ಶ್ರೀರಾಮನಾಮ ಕ್ಷೇಶಪಾಶವಿರಾಮ ವಿಶ್ವಜನಸುಪ್ರೇಮ ಕೋಸಲಾಧಿಪರಾಮ ಪರಿಪೂರ್ಣಕಾಮ 3
--------------
ನಂಜನಗೂಡು ತಿರುಮಲಾಂಬಾ
ಲಾಲಿಸಿ ರಘುವರನ ಚರಿತೆಯ ಸಾರ ಪೇಳುವೆ ಸುಖನಾಥನ ಪ ಶ್ರೀ ಲಲಾಮನು ಸುರರ ಮೊರೆಯನು ಭಾರ ಹರಿಸಲು ಲೀಲೆಯಲು ದಶರಥ ನೃಪಾಲನ ಬಾಲನೆನಿಸುತ ಅವತರಿಸಿದನು ಅ.ಪ. ಕುಶಿಸುತನ ಯಜ್ಞವ ರಕ್ಷಿಸಿ ಪಥದಿ ಋಷಿ ಪತ್ನಿಯ ಶಿಲಾರೂಪವ ಬಿಡಿಸಿದ ದೇವ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯ ಕರವನು ಕುಶಲದಲಿ ಪರಿಗ್ರಹಿಸಿ ಲೀಲೆಯ ನಸಮ ಭಾರ್ಗವನೊಡನೆ ತೋರಿದ 1 ತಂದೆ ವಾಕ್ಯವ ಪಾಲಿಸೆ ತಾ ಧರಣಿಗೆ ಬಂದ ಕಾರ್ಯವ ಸಲ್ಲಿಸೆ ಋಷಿಗಳಾಸೆ ತಂದು ತಾ ಮನಕಂಡು ವನಕೆ ಸತಿ ಸೋದರರ ಸಹಿತದಿ ಮುಂದೆ ಗಂಗೆಯ ದಾಟಿ ಭರದ್ವಾಜ ನಿಂದ ಸತ್ಕಾರವನು ಕೊಂಡನು2 ಚಿತ್ರಕೂಟದಲಿರಲು ವಿನಯದಿ ಬಂದು ಭಕ್ತ ಭರತನು ಬೇಡಲು ಪಾದುಕೆಯಿತು ಮತ್ತೆ ದಂಡಕವನ ಪ್ರವೇಶಿಸಿ ದೈತ್ಯರನು ಸಂಹರಿಸಿ ಶರಭಂಗ ಗಿತ್ತು ಮುಕ್ತಿಯ ಕುಂಭಸಂಭವ ನಿತ್ತ ದಿವ್ಯಾಸ್ತ್ರಗಳ ಪಡೆದನು 3 ವರಪಂಚವಟಿಯೊಳಗೆ ಶೂರ್ಪನಖಿಯು ದುರುಳ ಬುದ್ಧಿಯೊಳು ಬರೆ ಕಿವಿಮೂಗ ಕೊಯ್ಸಿ ಹರಿಣರೂಪದಿ ಬಂದ ದೈತ್ಯನ ಹರಣಗೈದಾಶ್ರಮಕೆ ತಿರುಗಲು | ಧರಣಿಸುತೆಯನು ಕಾಣದೆಲೆ ತಾ ನರರ ಪರಿಯಲಿ ಹಂಬಲಿಸಿದನು 4 ವನಜಾಕ್ಷಿ ವೈದೇಹಿಯ ಪುಡುಕುತ ಪಂಪಾ ಸನಿಹಕ್ಕೈತಂದು ವಾಲಿಯ ಸಂಹರಿಸ್ಯವನ ಅನುಜ ಸುಗ್ರೀವನಿಗೆ ಹರುಷದಿ ವಿನುತ ವಾನರ ರಾಜ್ಯದೊಡೆತನ ವನು ಕರುಣಿಸಿದ ಬಳಿಕ ಜಾನಕಿ ಯನು ಪುಡುಕೆ ಕಳುಹಿದನು ಕಪಿಗಳ 5 ಸ್ವಾಮಿಯ ಸ್ತುತಿಗೈಯುತ ಶ್ರೀ ಹನುಮಂತ ಆ ಮಹೋದದಿಯ ದಾಟುತ ಲಂಕೆಯ ಪೊಕ್ಕು ಭೂಮಿಜಾತೆಯ ಕಂಡು ರಾಮನ ಕ್ಷೇಮ ವಾರ್ತೆಯ ತಿಳುಹಿ ಬಹುಜನ ತಾಮಸರ ಸದೆಬಡಿದು ರಾವಣ ನಾ ಮಹಾ ನಗರಿಯನು ದಹಿಸಿದ 6 ಮರಳಿ ರಾಮನ ಬಳಿಗೆ ಬೇಗದಿ ಬಂದು ಮರುತ ಸುತನು ರಾಮಗೆ ಸೀತೆಯ ಕ್ಷೇಮ ವರುಹಿ ಚೂಡಾಮಣಿಯ ನೀಡಲು ಕರದಿ ಕೈಕೊಂಡದನು ನೋಡುತ ನರರ ಪರಿಯಲಿ ಹರುಷಬಾಷ್ಪವ ಸುರಿಸಿದನು ಶ್ರೀ ಕರಿಗಿರೀಶನು 7
--------------
ವರಾವಾಣಿರಾಮರಾಯದಾಸರು
ಲಾಲಿಸೆನ್ನ ವೃತ್ತಾಂತ ಲಕ್ಷುಮಿಯ ಕಾಂತ ಬಾಲನೊಳಿಂಥಾ ಪಾಂಥ ಬ್ಯಾಡ ಭೃಂಗಾಳ ಕಾಂತ ಪ. ಮಾನವ ನೀನೆ ಕೊಡರೆ ತಡವರು ಸೃಷ್ಟಿಯ ಒಳಗಾರು ಶ್ರೀ ರಮಣ ವಿಠಲ ನಿನಗಿನ್ನು ವಿವರಿಸಿ ಪೇಳ್ವದೇನು ಭ್ರಷ್ಟಗೊಳಿಸದಿರು ಭಯಹರ ಬೇರಿನ್ನಾರು 1 ಏಸು ತಪ್ಪಿದ್ದರೂ ದಾಸ ಬಿಡನೆಂಬ ಲೇಸಿನ ಬಿರುದೆಂತು ಮಾನುವದು ಈ ಸಮಯದೀ ಕರುಣಾ ಸಮುದ್ರನೆ ಎನ್ನ ಘಾಸಿ ಮಾಡದೆ ಗರುಡಾಸನ ಕೃಪೆದೋರು2 ನಡಿಯುವದಳವಲ್ಲ ತಡೆಯುವರೊಶವಲ್ಲ ನಡಿವ ಕಾರ್ಯಗಳೆಲ್ಲ ನುಗ್ಗಿತಲ್ಲ ಬಿಡದೆ ಮಾಡುವ ದಾನ ಧರ್ಮಗಳಿಗೆ ಇಂಥ ತೊಡಕು ಬಂದರೆ ಮುಂದೆ ತಾಳುವದೆಂತೋ ತಂದೆ 3 ಮಾನವರೊಳಗೊಬ್ಬ ಮರುಳುಗೊಂಡಾದರು ತಾನಿಟ್ಟ ತರುವನು ತೆಗಿಯನೆಂಬ ಮಾನಿತ ನುಡಿಯಿದ್ದು ಮೊದಲಿನಿಂದ ನೀನು ಕಾದು ದೀನನ ಬಿಡದಿಂದು ದಯದೋರು ಕೃಪಾಸಿಂಧು 4 ತೋರುವದಿಲ್ಲುಪಾಯ ಭೋರೆನುತಿದೆ ಮಾಯ ಕಾಯ ಕರ ಕರಿಯಾ ಹಾರಿಸು ಹಲಧರನನು ವೆಂಕಟರಾಯ ದೂರು ನಿನ್ನ ಪದಕೆ ಬಾರದಂದದಿ ಜೀಯ 5
--------------
ತುಪಾಕಿ ವೆಂಕಟರಮಣಾಚಾರ್ಯ
ಲೀಲೆಯಿಂ ಬಾ ಲೋಲಲೋಚನೆ ಕೋಲನಾಡುವ ಪ. ಶೀಲದಿಂದೆಮ್ಮಾಳ್ವ ಭೂಪಗೆ ಜಯವ ಪಾಡುವ ಅ.ಪ. ಮಂದಗಮನದಿಂದ ಬಾ ಅರವಿಂದ ಲೋಚನೆ ಮಂದಿಗಳಿಗಾನಂದ ಸಮಯಮಿಂದು ಪೊಸತೆನೆ 1 ಬಣ್ಣ ಬಣ್ಣ ಬೆಳೆಗಳಿಂ ಪೊಂಬಣ್ಣ ದುಡುಪಿನಿಂ ಕಣ್ಮನಂಗಳ ತಣ್ಪುಗೊಳಿಪಳ್ ಜನ್ಮಭೂಮಿತಾಂ 2 ನವನವೊತ್ಸವದಿರವ ಸೂಚಿಪ ಶರತ್ಸಮಾಗಮಂ [ತವ] ಮೆರೆವುದರರೆ ಶೇಷಶೈಲವರದನೊಲವಿನಿಂ3
--------------
ನಂಜನಗೂಡು ತಿರುಮಲಾಂಬಾ
ಲೇಸು ಲೇಸಾಯಿತು ಭಾಸ್ಕರ ಗುರು ಕೃಪೆ ಲೇಸು ಲೇಸಾಯಿತು ಮಾ ಧ್ರುವ ಹಸ್ತವಿಡಲು ಎನ್ನ ಮಸ್ತಕದ ಮೇಲೆ ಸ್ವಸ್ತಹೊಂದಿತು ಮನ ನಿಶ್ಚಯಲಿ ವಿಸ್ತಾರದೋರುವ ವಸ್ತು ಇದೆಯೆಂದು ವಿಸ್ತರಿಸೆನಗಿನ್ನು ದೋರಿತು ಮಾ 1 ಸೋಂಕಲು ಶ್ರೀಗುರುಪಾದ ಎನಗಿನ್ನು ಬೇಕಾದ ಸವಿ ಸುಖಗೊಟ್ಟಿತು ಮಾ ಸಕಲೋತ್ತಮನಾದ ಏಕಾಕ್ಷರ ಬ್ರಹ್ಮ ಏಕೋಮಯವಾಗಿದೋರಿತು ಮಾ 2 ನೀಡಲು ನಿಜ ಸುಙÁ್ಞನದ ಭಿಕ್ಷೆಯು ಭವ ದುಷ್ಕಾಳವು ಮಾ ಕೂಡಿತು ಸಮರಸವಾಗಿ ಮಹಿಪತಿ ಜೀವ ಒಡಿಯನ ಚರಣದಂಗುಷ್ಠದಲಿ ಮಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು