ಒಟ್ಟು 11400 ಕಡೆಗಳಲ್ಲಿ , 137 ದಾಸರು , 6177 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಳಲನೂದುವ ನಮ್ಮ ಚಲುವ ಕೃಷ್ಣಯ್ಯ ನಳಿನಾಕ್ಷಿಯರ ಮಧ್ಯೆ ಪೊಳೆವ ರಂಗಯ್ಯ ಪ. ಕರದ್ವಯದಲಿ ಶಂಖ ಚಕ್ರಪಿಡಿದಿಹ ಕಿರುನಗೆ ನಗುತ ಸುಲಿಪಲ್ಲಿನ ಚಲುವ ಸ್ವರಗಳ ಪಿಡಿಯುತ ವೇಣು ನುಡಿಸುವ ಸರಸಿಜನಾಭ ಹೃನ್ಮಂದಿರದಿ ಮೆರೆವ 1 ಜಗವ ಮೋಹಿಸುವಂಥ ನಗೆಯ ಮೊಗ ಚೆಲುವ ಹೆಗಲು ಎಡದಲ್ಲಿ ಗಲ್ಲ ತಗುಲಿಸಿ ಇರುವ ಸತಿ ಹೆಗಲಲಿ ಇಡುವ ನಗಧರ ನರ್ತನವಾಡಿ ಮುದವೀವ 2 ಕಾಲಕಡಗ ಗೆಜ್ಜೆ ಪಾಡಗರುಳಿಯು ಮೇಲೆ ಪೀತಾಂಬರ ಜರಿಯ ವೈಭವವು ಸಾಲ ಮುತ್ತಿನಹಾರ ಪದಕದ್ವಜ್ರಗಳು ಓಲಾಡುವ ನೀಲಾಂಬರ ಹೊದ್ದಿಹ ಒಲಪು 3 ಕಂಠ ಕೌಸ್ತುಭಮಣಿ ಅಧರದ ಕೆಂಪು ಕರ್ಣ ಕದಪು ಕನ್ನಡಿಯು ಬಂಟರಾದವರನ್ನು ಪೊರೆಯುವ ದೃಷ್ಟಿ ವೈ - ನಾಸಿಕ ಫಣೆಯ ತಿಲುಕವು 4 ಶ್ರೀಪತಿ ಮುಂಗುರುಳು ಶಿರದಲ್ಲಿ ಮಕುಟ ಪಾಪವ ದಹಿಸುವ ಪಾವನ ವೇಣು ಆಪಾದ ಮೌಳಿಯ ರೂಪದ ಚಲುವ ಗೋಪಾಲಕೃಷ್ಣವಿಠ್ಠಲ ಎನ್ನ ಕಾವ 5
--------------
ಅಂಬಾಬಾಯಿ
ಕೊಳಲನೂದೆಲೋ ಕೃಷ್ಣ ಕೊಳಲನೂದೆಲೊ ಪ ಕೊಳಲನೂದು ಮನದ ದುಗುಡಕಳೆದು ಮತ್ತೆ ಮನಕೆ ಪ್ರಶಾಂತೆತಳೆಯುವಂತೆ ನಿತ್ಯಮಂ_ಜುಳ ಸ್ವರಗಳನ್ನು ತೆಗೆದು ಅ.ಪ. ತುಂಬಿ ನಳಿನಬೆರಳುಗಳು ತೂತು ಮುಚ್ಚಿತೆರೆದು ಸವಿಯ ನಾದದಲ್ಲಿ ನಿಸಾರ ನಿ ದ ಪ ಮ ಪ ನಿ ಎಂದು 1 ಇಲ್ಲಿ ಪೀಠದಿ ಎದ್ದು ನಿಲ್ಲು ಥಾ7ಟದಿಮಲ್ಲಿಗೆ ವನಮಾಲೆ ಕೊರಳೊಳಲ್ಲಾಡುತಿರಲು ರೂಪದಲ್ಲಿ ಮನವಿನೈಕ್ಯವಾಗಿತಲ್ಲೀನರಾಗುವಂತೆ ಕೃಷ್ಣಾ 2 ಎದ್ದುನಿಂತು ಮಾಟದಿ ನಿಂತು ಮುದ್ದು ನೋಟದಿಬಿದ್ದವರನು ನೋಡಿ ನಮಗೆಶುದ್ಧ ಬುದ್ಧಿ ಕೊಟ್ಟು ನಮ್ಮದುದ್ಧರಿಪುದು ಗದುಗಿನ ಪ್ರಸಿದ್ಧ ವೀರನಾರಾಯಣ 3
--------------
ವೀರನಾರಾಯಣ
ಕೊಳಲೂದೋ ಕೃಷ್ಣ ಕೊಳಲೂದೊ ಪ ಕೊಳಲೂದಲು ಮನ ತಳೆವುದು ಮನವಿದೊಬಳಲಿಪ ಚಿಂತೆಯ ಕಳೆವುದು ನಾದೊ ಅ.ಪ. ಸವಿಸವಿ ಸ್ವರಗಳು ಕಿವಿಗಳ ಹೊಗಲದು _ಭವಿಸುದೆನ್ನೊಳು ಭಕುತಿಯನಾದೊ 1 ತನು ಕೊಳವೆಯಲಿ ನಿನದುಸಿರನು ಕೊಡೆಇನಿದು ನುಡಿದು ಪಾವನ ತನುವಹುದೊ 2 ಸ್ವರಮಧುರತೆಯು ಶಿರದೊಳು ಚರಿಸುತೆನಿರುತ ನಿನ್ನಯ ಸ್ಮರಣೆಯ ನೀವುದೊ 3 ಮಧುರ ನಿನ್ನಯ ಗಾನವ ಕೇಳ್ವುದುಗದುಗು ವೀರನಾರಾಯಣನ ಮಹಾ ಪ್ರಸಾದೊ 4
--------------
ವೀರನಾರಾಯಣ
ಕೊಳ್ಳೇಗಾಲದ ಲಕ್ಷ್ಮೀನಾರಾಯಣ ಯನ್ನ ಸೊಲ್ಲ ಲಾಲಿಸಿ ಬೇಗ ಸಲಹು ದೇವಾ ಖುಲ್ಲ ಮಾನವನೆಂದು ತಲ್ಲಣಗೊಳಿಸೋರು ಭವನಾವಾ ಪ ಓಡಿಬಂದೆನೊ ನಿನ್ನ ನೋಡಬೇಕೆನುತಲಿ ಗಾಡಿಕಾರದೇವ ತ್ವರೆಯಿಂದ ದೂಡಬ್ಯಾಡೊ ನನ್ನ ಪಾದ ಮುಕುಂದಾ 1 ಅಭಯವ ನೀಡಯ್ಯಾ ಇಭರಾಜವರದನೆ ಉಭಯ ಸುಖಪ್ರದ ನೀನೆಂದು ಅಭಿನಮಿಸುವೆನಯ್ಯ ಶಬರಿಯಂಜಲನುಂಡು ಬುಜೆಗಧವಕೊಂಡಿ ವಿಬುಧವಂದಿತನೆ2 ಮೆರೆಯುವಿ ನೀ ಬಲು ಉರಗರಾಜಶಾಯಿ ವರವಿಪ್ರನಿಕರದಿಂ ಪೂಜೆಗೊಂಡು ಥರಥರದಲಿ ನೀ ಪೊರಹಿದೆ ಭಕ್ತರ ಮರೆಯಬ್ಯಾಡ ನನ್ನ ಶಿರಿವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು
ಕೋಟಿನಾಮಗಳಲ್ಲಿ ಹಿರಿಯದಂತೆ ಕಾಟದಾ ಶರನಿಧಿಯ ದಾಟಿಸುವುದಂತೆ ಪ ಕೋಟಿನಾಮಂಗಳಿಗೂ ಕೋಟೆಯಾಗಿಹುದಂತೆ ಸಾಟಿಯಿಲ್ಲದ ಮಂತ್ರ ಪಾಟವಿದಂತೆ ಅ.ಪ ಭುವನ ಸುಂದರನಂತೆ ಭವವ ಕಳೆಯುವನಂತೆ ಶಿವನಿಗೆ ಹಿತವಂತೆ ಭುವನೇಶನಂತೆ ಅವನಿಸುತೆಗಾಗಿ ದಾನವರ ಹರಿಸಿದನಂತೆ ಮಾಧವ ರಾಮನಂತೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೋಪ ಮಾಡುವರೆ - ಕೃಪಾಳು ನೀನು ಕೋಪ ಮಾಡುವರೆ ಪ ಕೋಪ ಮಾಡುವರೇನೋ ಸಂಸøತಿ ಕೂಪದೊಳು ಬಿದ್ದ್ಹೊರಳುತಿಹನ ನೀ ಪರಾಮರಿಸಿನ್ನು ಕೀರ್ತಿ ಕ- ಲಾಪವನು ಕಾಪಾಡಿಕೊಳ್ಳದೆ ಅ.ಪ. ನಾಥನು ನೀನು ಎಂದೆಂದಿಗೂ ದೂತನು ನಾನು ಸಿದ್ಧಾಂತವು | ನೀತವಿದಿನ್ನು ಕೋತಿ ಕುಣಿವುದು ಕೊರವ ಕುಣಿಸಿದ ರೀತಿಯಲಿ ಜಗತೀತಳದಿ - ವಿ ಖ್ಯಾತಿಯಲ್ಲವೆ ಮಾತು ಪುಸಿಯೇ ನೀ ತಿಳಿದು ಕರುಣಿಸದೆ ಬರಿದೆ 1 ಅರಿತವ ನೀನು - ಷಡ್ವರ್ಗದಿ ಬೆರತವ ನಾನು - ಚರಣಂಗಳಿಗೆರಗುವೆನಿನ್ನು ಅರಿತು ನೆನೆಯೆ ಪ್ರಪನ್ನರೊಮ್ಮೆಗೆ ಎರವು ಮಾಡದೆ ಪೊರೆವೆನೆಂಬುವ ಬಿರುದನುಳಿದು ಕರುಣವಿಲ್ಲದೆ ಮರೆಯ ಹೊಕ್ಕವರೊಡನೆ ಕೆರಳಿ 2 ಏನಾದರೇನು - ನೀನಲ್ಲದೆ ಪ್ರಾಣ ಸತಿಸುತ ದ್ರವ್ಯ ಮಾನಪ- ಮಾನ ಅಭಿಮಾನಗಳು ನಿನ್ನವು ದೀನ ಜನ ಮಂದಾರ ಗುಣಗಳ ಪೂರ್ಣ ಲಕ್ಷ್ಮೀಕಾಂತ ಪ್ರಭುವೆ 3
--------------
ಲಕ್ಷ್ಮೀನಾರಯಣರಾಯರು
ಕೋಪದೊಳು ಜಮದಗ್ನಿ ತಾಪದೊಳು ಮಾರ್ತಾಂಡ ಭೂಪರೊಳು ರಘುನಾಥನೆನ್ನ ನಾಥ ದ್ವೇಷದೊಳು ಭಾರ್ಗವನು ರೋಷದೊಳು ದೂರ್ವಾಸ ಮೋಸದೊಳ್ ಶ್ರೀಕೃಷ್ಣ ಮುದ್ದು ಕೃಷ್ಣ ಭೋಗದೊಳು ದೇವೇಶ ರಾಗದೊಳು ಗಿರಿಜೇಶ ತ್ಯಾಗದೊಳು ಶಿಬಿರಾಯ ಮದನಕಾಯ ಜ್ಞಾನದೊಳು ಜನಕನು ಧ್ಯಾನದಲಿ ದತ್ತರ್ಷಿ ಸೂನೃತದಿ ಹರಿಶ್ಚಂದ್ರ ಮಾನನಿಧಿಯು ಧನಿಕನೆಂದೆನಲಷ್ಟಸಿದ್ಧಿದಾತಂದೆ ಘನವಂತನೆನೆ ಪ್ರಣವಸ್ವರೂಪಗೆ ಧಣಿಯೆನಲು ಮೂಜಗಕ್ಕೊಡೆಯನಿವÀನೆ ಎಣೆಯುಂಟೆ ಶೇಷಾದ್ರಿವಾಸನಿವಗೆ
--------------
ನಂಜನಗೂಡು ತಿರುಮಲಾಂಬಾ
ಕೋಪವ್ಯಾತಕೊ ಕರುಣಾನಿಧೆ ಭೂಪನೆಂದು ನಿನ್ನ ನಂಬಿದೆ ಶ್ರೀಪತೇ ಶರಣಾಗತ ಮೇಲಾಪದ್ಗಣ ತರಬಾರದು ಬರಿದೆ ಪ. ಆವ ಕಾಲಕು ನಿನ್ನ ಸೇವೆ ಮಾಡುವುದೆನ್ನ ಪಾವನವಂತಿರಲು ನೋವನು ಪೊಂದಿಪುದ್ಯಾವ ಘನತೆ ಭದ್ರನಾವನೆ ನಿನಗೆ 1 ಹಸ್ತಪಾದಾದಿಗಳನಿತ್ತುದೆ ಸೇವನಗೆಂದುತ್ತಮ ಭಾವವಿಡ- ಪರಿ ಚಿತ್ತಜ ಜನಕ 2 ನಿತ್ಯ ನೇಮಂಗಳನು ತಕ್ಕಕಾಲದಿ ನಡೆಸುತ ಶಕ್ತಿಯನಿತ್ತು ಸಲಹು ಪುರುಷೋತ್ತಮ ನಿರುಪದಿ 3 ಮುನ್ನಿನ ಭವಗಳನೆಲ್ಲ ಕಳೆದ ಮ- ಹೋನ್ನತಿಯನು ತವ ಕರುಣದಿ ಸೇರಿದೆ4 ತಪ್ಪುಗಳೆಷ್ಟಿದ್ದರೂ ಒಪ್ಪಿಕೊ ಮುನಿಸದಿರು ಅಪ್ಪ ನೀನೆಂಬುವಶ್ರುತಿ ಕೃತ ಬಿರುದನು ತಪ್ಪಿಸಿಕೊಳದಿರು ಸರ್ಪ ಗಿರೀಶನೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕೋಮಲಾಂಗಿಯೆ ಸಾಮಗಾಯನ ಪ್ರಿಯೆ ಪ ಹೇಮಗರ್ಭ ಕಾಮಾರಿ ಶಕ್ರಸುರ ಬಟ್ಟುಕುಂಕುಮ ನೊಸಲೋಳೆ ಮುತ್ತಿನ ಹೊಸ ಕಟ್ಟಾಣಿ ತ್ರಿವಳಿ ಕೊರಳೋಳೆ ಇಟ್ಟ ಪೊನ್ನೋಲೆ ಕಿವಿಯೋಳೆ ಪವಳದ ಕೈಯ ಕಟ್ಟ ಕಂಕಣ ಕೈಬಳೆ ತೊಟ್ಟ ಕುಪ್ಪಸ ಬಿಗಿದುಟ್ಟ ಪೀತಾಂಬರ ಘಟ್ಟಿ ವಡ್ಯಾಣ ಕಾಲಂದಿಗೆ ರುಳಿಗೆಜ್ಜೆ ಬೆಟ್ಟಿಲಿ ಪೊಳೆವುದು ವೆಂಟಿಕೆ ಕಿರುಪಿಲ್ಲಿ ಇಟ್ಟು ಶೋಭಿಸುವ ಅಷ್ಟಸಂಪನ್ನೆ 1 ಸಕಲ ಶುಭಗುಣಭರಿತಳೆ ಏಕೋದೇವಿಯೆ ವಾಕುಲಾಲಿಸಿ ನೀ ಕೇಳೆ ನೋತನೀಯನ್ನ ಮಹಲೀಲೆ ಕೊಂಡಾಡುವಂಥ ಏಕಮನವ ಕೊಡು ಶೀಲೆ ಪತಿ ಪಾದಾಬ್ಜವ ಏಕಾಂತದಿ ಪೂಜಿಪರ ಸಂಗವ ಕೊಡು ಲೋಕದ ಜನರಿಗೆ ನಾ ಕರವೊಡ್ಡದಂತೆ ನೀ ಕರುಣಿಸಿ ಕಾಯೆ ರಾಕೇಂದುವದನೆ 2 ಇಂದಿರೆ ಯೆನ್ನ ಕುಂದು ದೋಷಗಳಳಿಯೆ ಅಂದ ಸೌಭಾಗ್ಯದ ಸಿರಿಯೆ ತಾಯೆ ನಾ ನಿನ್ನ ಕಂದನು ಮುಂದಕ್ಕೆ ಕರೆಯೆ ಸಿರಿ ವಿಜಯವಿಠ್ಠಲರೇಯ ಎಂದೆಂದಿಗೊ ಮನದಿಂದಗಲದೆ ಆ ನಂದದಿಂದಲಿ ಬಂದು ಮುಂದೆ ಕುಣಿಯುವಂತೆ ವಂದಿಸಿ ಪೇಳಮ್ಮ ಸಿಂಧುಸುತೆಯಳೆ3
--------------
ವಿಜಯದಾಸ
ಕೋರಬೇಡ ದುರ್ವಿಷಯಸುಖಗಳನು ಕೋತಿಮನವೆ ನೀನು ||ಪ|| ಯಾರಿದ್ದರೇನು ನಿನ್ನ ಯೋಗ್ಯತೆಯ ಮೀರಿನಡಯಲಸಾಧ್ಯ ಶತಕಲ್ಪಕು ಅ.ಪ ಕಷ್ಟ ಒದಗಲಿ ನಿಷ್ಠುರ ನುಡಿಯಲಿ ಕೆಟ್ಟವನಿವನೆನಲಿ ಇಷ್ಟ ಬಂಧುಗಳು ಶತ್ರುಗಳಾಗಲಿ ಇಲ್ಲದೆ ನಿಂದಿಸಲಿ ಹೊಟ್ಟೆತುಂಬ ಆಹಾರವಿಲ್ಲದಿರಲಿ ಹುಚ್ಚನೆಂದು ಬೈಯಲಿ ಸಂಕಲ್ಪವು 1 ಬನ್ನ ಅನ್ಯರಂತೆ ತಾನಿರಬೇಕೆಂದಾಯಾಸ ಹೊಂದಬೇಡ ತತ್ವನಂಬಬೇಡ | ಮೂಢಾ 2 ಪರಿಪರಿ ಸಂಕಟ ಬಂದರೂ ನೊಂದು ಪರರ ದೂಷಿಸಬೇಡ ಸ್ಥಿರವೀ ಶರೀರವೆಂದು ನಂಬಿ ಛೀ ಎನಿಸಿಕೊಳ್ಳಬೇಡ ತಿಳಿಯಲೊ ಮೂಢಾ 3
--------------
ಗುರುರಾಮವಿಠಲ
ಕೋರಿ ಬಂದೆನೊ ನಾನು ಪತಿ ನಿನ್ನ ಪ ಘೋರ ಸಂಸಾರದಿಂದ ಪಾರು ಮಾಡುವಿಯೆಂದು ಅ.ಪ. ಸರ್ವ ಪ್ರಾಣಿಗಳಲ್ಲಿ ಸರ್ವವಸ್ತುಗಳಲ್ಲಿ ಸರ್ವೇಶ ಹರಿಯ ಕೂಡಿ ಸರ್ವದಾ ಇರುವೆಯೆಂದು 1 ಅಂಜಾನೆ ಗರ್ಭದಿ ಸಂಜಾನಿತ ನೀನಾಗಿ ಕಂಜನಾಭನ ಮನ- ರಂಜಾನೆ ಮಾಡಿದೆಯೆಂದು 2 ದಾನವಾಂತಕನಿಂದ ಸ- ನ್ಮಾನಿತನಾದಂಥ ದೀನರಕ್ಷಕ ಭೀಮ- ಸೇನ ವಿಕ್ರಮನೆಂದು 3 ಹೀನಬುದ್ಧಿಯ ಬಿಡಿಸಿ ದೀನ ಸುಜನರಿಗೆ ಜ್ಞಾನ ಮಾರ್ಗವ ತೋರಿ- ದಾನಂದತೀರ್ಥನೆಂದು 4 ಶ್ರೀ ರಂಗೇಶವಿಠಲಗೆ ಸಮ ರ್ಯಾರಿಲ್ಲವೆಂತೆಂದು ಈರೇಳು ಜಗದೊಳು ಸಾರುತಿರುವೆಯೆಂದು 5
--------------
ರಂಗೇಶವಿಠಲದಾಸರು
ಕೋಲ ಕೋಲನ್ನ ಕೋಲ ಕೋಲ ಕೋಲನ್ನ ಕೋಲಕೋಲ ಹೊಯ್ದುಪಾಡಿ ನಮ್ಮ ಜಾಣರಂಗಗೆ ಪ. ಲೋಕನಾಯಕ ವ್ಯಾಸ ಮುನಿಗಳಿಗೆ ಏಕೋ ಭಾವದಿಂದ ನಮಿಸಿಹಾಕಿರೆಮ್ಮ ಕೋಲ ಹೊಯ್ದುವಾಕ್ಯಗೆಲಿಸೆಂದು1 ಮಿತ್ರೆ ರುಕ್ಮಿಣಿದೇವಿ ಕರೆದುಮಿತ್ರಾದಿಗಳಿಗೆ ಹೇಳಿದಳುಮುತ್ತಿನ ಕೋಲ ತೊಳಿಯಿರವ್ವಉತ್ತಮ ಜಲದೊಳು 2 ರಾಸ ಕ್ರೀಡೆಯಲ್ಲಿ ವನಿತೆಯರುವಾಸುದೇವ ಪಿಡಿದ ಕೋಲ ಸೋಸಿಲೆ ಪೂಜಿಸಿರಮ್ಮಲೇಸು ಕೊಡಲೆಂದು 3 ಮಂದಗಮನೆಯರೆಲ್ಲ ಕೋಲಿಗೆ ಗಂಧ ಅಕ್ಷತೆ ಏರಿಸಿರೆ ಮುಂದಾಗಿ ಬಲಗೊಳ್ಳಿರೆಲ್ಲವೃಂದಾರಕರನ್ನ4 ನಲ್ಲೆಯರು ಮುತ್ತಿನ ಕೋಲಿಗೆ ಮಲ್ಲಿಗೆ ಸಂಪಿಗೆ ಏರಿಸಿರೆಎಲ್ಲಾ ಫಲಗಳಿಟ್ಟು ಕೈಯ್ಯನಲ್ಲೆಯರು ಮುಗಿದಿರೆ 5 ಜಾಣೆಯರು ನೀವೆಲ್ಲ ಮೊದಲೆವಾಣಿಯ ಬಲಗೊಳ್ಳಿರೆ ಕಲ್ಯಾಣವಾಗಲೆಂದು ಕೈಯ್ಯಮಾಣಗೆ ಮುಗಿದಿರೆ 6 ಮೃಡನ ಮಗನ ಮೊದಲೆ ನೆನೆದುಪಿಡಿಯಿರಮ್ಮ ಕೋಲ ನಿಮ್ಮನುಡಿಯಗೆಲಿಸಲೆಂದು ದ್ರವ್ಯವಕೊಡಿರೆ ದಾನವ 7 ಇಂದು ಗೆಲಿಸೆಂದು 8
--------------
ಗಲಗಲಿಅವ್ವನವರು
ಕೋಲ ಕೋಲೆನ್ನ ಕೋಲ ಕೋಲ ಕೋಲೆನ್ನ ಕೋಲಕೋಲೆಂದು ಪಾಡುವರೆಷ್ಟು ಕೇಳ ವಯ್ಯಾರಿ ಪ. ಚಿತ್ರ ವಿಚಿತ್ರದ ಮುತ್ತು ಮಾಣಿಕ ಎಸವೋಛತ್ರÀ ಹಿಡಿದವರೆಷ್ಟ ಕೇಳ ವೈಯಾರಿ 1 ಶ್ವೇತ ಛತ್ರವುಕೋಟಿ ಪ್ರೀತಿಲಿ ಹಿಡಿದವರೆಷ್ಟ ಕೇಳವಯ್ಯಾರಿ2 ಸೂರ್ಯ ಪಾನವುಕೋಟಿಸಾರೆ ಹಿಡಿದವರೆಷ್ಟ ಕೇಳ ವಯ್ಯಾರಿ3 ಎಡಬಲ ಚಾಮರ ಹಿಡಿಕೆ ನವರತ್ನ ಹೊಳೆವ ಹಿಡಿದು ಬೀಸುವರವರೆಷ್ಟ ಕೇಳ ವಯ್ಯಾರಿ 4 ರತ್ನ ಮಾಣಿಕ ಬಿಗಿದ ಬೀಸಣಿಕೆಯ ಹಿಡಿದುಚೆನ್ನಾಗಿ ಬೀಸುವವರೆಷ್ಟ ಕೇಳ ವಯ್ಯಾರಿ 5 ಚಲುವ ರಂಗನ ಮುಂದೆ ನಲಿಯುತ ನವಿಲಗÀರಿಯಸುಳಿಸುವವರೆಷ್ಟ ಕೇಳ ವಯ್ಯಾರಿ 6 ಅಚ್ಚ ಜರತಾರಿ ವಸ್ತ್ರ ಜತ್ತಾಗಿ ನಿರಿ ಹೊಯ್ದುಬಿಚ್ಚಿಹಾರಿಸುವರೆಷ್ಟ ಕೇಳ ವೈಯ್ಯಾರಿ 7 ಫುಲ್ಲನಾಭನ ಮುಂದೆ ಮಲ್ಲ ಮುಷ್ಠಿಕರುತಮ್ಮೆಲ್ಲವಿದ್ಯೆಯನು ತೋರಿಸುವರೆಷ್ಟ ಕೇಳ ವೈಯಾರಿ 8 ಬಂದಿಗಳು ರಾಮೇಶನ ಒಂದೊಂದು ಗುಣ ರಚಿಸಿಚಂದಾಗಿ ಹೊಗಳುವರೆಷ್ಟ ಕೇಳ ವೈಯ್ಯಾರಿ9
--------------
ಗಲಗಲಿಅವ್ವನವರು
ಕೋಲ ಕೋಲೆನ್ನ ಕೋಲ ಕೋಲೆನ್ನ ಕೋಲ ಕೋಲ ಶ್ರೀ ಹರಿಯ ನೆನದೇವ ಕೋಲ ಪ. ನಾರಿಯರಿಬ್ಬರಿಗೆ ಹರಿಯು ಕರೆದು ಮಾತಾಡದ್ಹಾಂಗೆ ನೀರೊಳಗೆ ಹೋಗಿ ಅಡಗಿದ ಕೋಲನೀರೊಳಗೆ ಹೋಗಿ ಅಡಗಿದ ರುಕ್ಮಿಣಿಪೋರತನವೆಂದು ಬಿಡಬೇಕು ಕೋಲ 1 ಕೃಷ್ಣ ನಮ್ಮರಮನೆ ಬಿಟ್ಹೋಗ ಬಾರದೆಂದು ಬೆಟ್ಟವ ಮ್ಯಾಲೆ ಹೊರೆಸಿದ ಕೋಲ ಬೆಟ್ಟವ ಮ್ಯಾಲೆ ಹೊರೆಸಿದ ಸತ್ಯಭಾಮೆಗಟ್ಟಿ ಎದೆಯವಳು ಹೌದು ಹೌದು ಕೋಲ 2 ನೀರಜನಯ್ಯಗೆರಡುಕ್ವಾರಿ ಚಿನ್ಹವ ಮಾಡಿ ಮಾರಿಯ ಗುರುತು ಮರೆಸಿದಿ ಕೋಲ ಮಾರಿಯ ಗುರುತು ಮರೆಸಿದಿ ನೀಲಾದೇವಿಧೈರ್ಯ ವಿನ್ನೆಷ್ಟು ಧಮಕೆಷ್ಟು ಕೋಲ 3 ಹರದೆಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಉರಿಮಾರಿಮಾಡಿ ನಿಲ್ಲಿಸಿದಿ ಕೋಲಉರಿಮಾರಿ ಮಾಡಿನಿಲ್ಲಿಸಿದಿಭದ್ರಾದೇವಿಸರಿಯವರು ನೋಡಿ ನಗುತಾರೆ ಕೋಲ 4 ಕರ ಕರಿಯೆಂದು ಬಿಡಬೇಕು ಕೋಲ 5 ಮಡದಿಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಕೊಡಲಿಯ ಕೊಟ್ಟು ಬಡವನೆ ಕೋಲ ಕೊಡಲಿಯ ಕೊಟ್ಟು ಬಡವನೆ ಮಾಡಿದ ಕಿಡಿಗೇಡಿತನವ ಬಿಡು ಕಾಳಿ ಕೋಲ 6 ನಲ್ಲೆಯರಿಬ್ಬರು ಹರಿಯ ಎಲ್ಲೆಲ್ಲೂ ಬಿಡದ್ಹಾಂಗೆ ಬಿಲ್ಲನೆ ಕೊಟ್ಟು ನಿಲ್ಲಿಸಿದಿಬಿಲ್ಲನೆ ಕೊಟ್ಟು ನಿಲ್ಲಿಸಿದಿ ಲಕ್ಷಣಾಕಲ್ಲೆದೆಯವಳು ಹೌದ ಹೌದ ಕೋಲ 7 ಒಳ್ಳೆಗುಣಪೂರ್ಣಗೆ ಕಳ್ಳನಂತೆ ಹೆಸರಿಟ್ಟಿಸುಳ್ಳು ನೋಡಿದರೆ ವಿಪರೀತ ಕೋಲ ಸುಳ್ಳು ನೋಡಿದರೆ ವಿಪರೀತ ಜಾಂಬವಂತಿಕೊಳ್ಳಿಯ ಗುಮ್ಮಗುರುವೇನ ಕೋಲ 8 ಮುದ್ದು ಹದಿನಾರು ಸಾವಿರ ಬುದ್ದಿವಂತರ ಕೂಡಿಹದ್ದೆರ್ದಬೌದ್ಧ ಎನುತಲೆ ಕೋಲ ಹದ್ದೆರ್ದಬೌದ್ಧ ಎನುತಲೆ ಬೆನ್ನ ಹತ್ತಲು ಇದ್ದಜನರೆಲ್ಲ ನಗುತಾರೆ ಕೋಲ 9 ನೂರು ಮಂದಿ ಹರಿಯ ದಾರಿಯ ಕಟ್ಟಲು ಹಾರಿದ ಕೃಷ್ಣ ಕುದರಿಯ ಕೋಲ ಹಾರಿದ ಕೃಷ್ಣ ಕುದುರೆ ಏರಿಕೊಂಡುಮಾರಿ ತೋರದಲೆ ಬರಲಿಲ್ಲ ಕೋಲ10 ಚಲ್ವ ರಾಮೇಶ ಎಲ್ಲ ಲಲನೆಯರಿಗೆ ಅಂಜಿಕೊಂಡುಬಲಿಯ ಮನೆ ಮುಂದೆ ಕುಳಿತಾನೆ ಕೋಲ ಬಲಿಯ ಮನೆ ಮುಂದೆ ಕುಳಿತಾನೆ ರುಕ್ಮಿಣಿಕಲಹವ ಬಿಟ್ಟು ಕರೆತಾರೆ ಕೋಲ 11
--------------
ಗಲಗಲಿಅವ್ವನವರು
ಕೋಲ ನವರಂಗದ ಕೋಲ ನಳನಳಿಸುವಕೋಲಶ್ರೀಲೋಲನೆಂದು ಹೊಗಳುವ ಕೋಲ ಪ. ಛsÀತ್ರ ಚಾಮರ ವಿಚಿತ್ರದ ಬಾಣ ಬಿರಸುನೃತ್ಯವಾದ್ಯಗಳು ಹೊಗÀಳುವನೃತ್ಯವಾದ್ಯಗಳು ಹೊಗÀಳುವ ಬಂಧಿಗಳಿಂದ ಅರ್ಥಿಲೆ ನಿಮ್ಮ ಕರೆಸುವ ಕೋಲ 1 ಶಂಕಿನಿ ಪದ್ಮಿನಿಯರು ಕುಂಕುಮ ಅರಿಷಿಣವಪಿಡಿದು ಪಂಕÀಜನಾಭನೆದುರಿಗೆ ಕೋಲಪಂಕಜನಾಭನೆದುರಿಗೆ ಕರೆಯಲುಅಲಂಕಾರವಾಗಿ ಬರುತಾರೆ ಕೋಲ2 ಗಂಧ ಕೇಶರದ ಚಂದದೋಕುಳಿ ತುಂಬಿಮಂದಗಮನೆಯರು ಹಿಡಕೊಂಡುಮಂದಗಮನೆಯರು ಹಿಡಕೊಂಡು ಐವರಿಗೆಬಂದು ನಿವಾಳಿ ತೆಗಿಸುವೆವು ಕೋಲ 3 ಚಿತ್ತಜನಯ್ಯಗ ಮಿತ್ರೆಯರು ಕರೆಯಲುಮುತ್ತಿನಾರತಿಯ ಹಿಡಕೊಂಡುಮುತ್ತಿನಾರತಿಯ ಹಿಡಕೊಂಡು ಐವರಿಗೆ ಎತ್ತಬೇಕೆಂಬೊ ಭರದಿಂದ ಕೋಲ4 ಅರಳು ಅರಳು ಫಲಗಳು ಐವರಿಗೆ ಭರದಿಂದ ಸೂರ್ಯಾಡಿ ಬರತೇವ ಕೋಲ 5 ರಥ ಕುದುರೆಗಳೆಷ್ಟು ರಥಿಕರು ಸೊಬಗೆಷ್ಟು ರತಿಯಿಟ್ಟು ನೋಡೊ ಜನರೆಷ್ಟು ಕೋಲರತಿಯಿಟ್ಟು ನೋಡೊ ಸೊಬಗೆಷ್ಟು ಸಖಿಯೆನಮ್ಮ ಅತಿಶಯವಾದ ಸೊಬಗೆಷ್ಟು ಕೋಲ6 ವೀರ ರಾಮೇಶನು ಭೇರಿ ದುಂಧುಭಿ ಹೊಯ್ಸಿಭೋರೆಂಬೊ ಕಾಳಿ ಹಿಡಿಸುತ ಭೋರೆಂಬೊ ಕಾಳಿ ಹಿಡಿಸುತ ಐವರವಾರಿಜನಾಭ ಕರೆಸುವ ಕೋಲ7
--------------
ಗಲಗಲಿಅವ್ವನವರು