ಒಟ್ಟು 8293 ಕಡೆಗಳಲ್ಲಿ , 131 ದಾಸರು , 4393 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೂಗಿರೆ ಗುರುಗಳ ತೂಗಿರೆ ಯತಿಗಳ ತೂಗಿರೆ ದಾಸಗ್ರೇಸರರ ನಾಗಶಯನನು ರಾಗವ ಪಡೆದಂಥ ಯೋಗಿವರೇಣ್ಯರ ತೂಗಿರೆ ಪ ಈ ಮಹಿಯೊಳು ಪುಟ್ಟಿ ಶ್ರೀಮುದತೀರ್ಥ ಸು- ನಾಮದಿ ಕರೆಸುವರ ತೂಗಿರೆ ಆ ಮುದತೀರ್ಥ ಪದ್ಮನಾಭ ನಾಮದಿಂದಿರುವರ ತೂಗಿರೆ1 ರಾಮನ ತಂದಿತ್ತ ನರಹರಿ ಮುನಿಪರ ಮಾಧವ ತೀರ್ಥರ ತೂಗಿರೆ ಆಮ- ಹಾವಿದ್ಯಾರಣ್ಯರನ ಗೆಲಿದಂಥ ಶ್ರೀ ಮದಕ್ಷೋಭ್ಯರ ತೂಗಿರೆ 2 ಕಾಕಿಣಿತೀರಸ್ಥ ಟೀಕಾಚಾರ್ಯರೆಂಬೊ ನಾಕಪಾಂಶಜರನ ತೂಗಿರೆ ಶ್ರೀಕೃಷ್ಣ ತಟದಿ ಜಿತಾಮಿತ್ರರೆಂಬೊ ಪಿ- ನಾಕಿ ಅಂಶಜರನ ತೂಗಿರೆ 3 ರಾಜರಂದದಿ ಸುಖಭೋಜನ ಕೃದ್ಯತಿ ರಾಜ ಶ್ರೀಪಾದರ ತೂಗಿರೆ ವ್ಯಾಜದಿ ವಿಜಯ ಸಾಮ್ರಾಜ್ಯರೆನಿಸಿ ವ್ಯಾಸರಾಜರು ಮಲಗ್ಯಾರ ತೂಗಿರೆ 4 ವಾದಿಗಳನು ಯುಕ್ತಿವಾದದಿ ಗೆಲಿದಂಥ ವಾದಿರಾಜರನ್ನ ತೂಗಿರೆ ಮೇದಿನಿಯೊಳು ಕೃಷ್ಣದ್ವೈಪಾಯನರೆಂಬೊ ವೇದವ್ಯಾಸಾತ್ಮಜರ ತೂಗಿರೆ 5 ಪರಿಮಳ ರಚಿಸಿದ ವರಹಜ ತೀರಸ್ಥ ಇರುಳು ಕಾಲದಲಿ ತರಣಿಯ ತೋರಿದ ಗುರುಸತ್ಯ ಬೋಧರ ತೂಗಿರೆ 6 ಪರಮತ ಖಂಡನ ನಿರುತದಿ ಮಾಡಿದ ಗುರುವರದೇಂದ್ರರ ತೂಗಿರೆ ಗುರು ಭುವನೇಂದ್ರರ ಕರಜವ್ಯಾಸತತ್ವ ವರಿತ ಯತೀಶರ ತೂಗಿರೆ 7 ವರಭಾಗವತಸಾರ ಸರಸದಿ ರಚಿಸಿದ ಗುರುವಿಷ್ಣು ತೀರ್ಥರ ತೂಗಿರೆ ಪರಮ ಕ್ಷೇತ್ರಕೂಡಲಿಯೊಳಗಿರುವಂಥ ಗುರುರಘುವೀರರ ತೂಗಿರೆ 8 ಹರಿಯ ಮಹಿಮೆಯನ್ನು ಸರಸದಿ ಪೇಳಿದ ಪುರಂದರ ದಾಸರ ತೂಗಿರೆ ಹರಿಸರ್ವೋತ್ತಮನೆಂದು ಸುರಮುನಿ ಗರುಹಿದ ಗುರು ವಿಜಯದಾಸರ ತೂಗಿರೆ 9 ಬನ್ನವ ಬಿಡಿಸಿ ಶಿಷ್ಯನ್ನ ಪಾಲಿಸಿದ ಭಾಗಣ್ಣ ದಾಸರನ್ನು ತೂಗಿರೆ ಘನ್ನ ಹರಿಯಗುಣ ವರ್ಣಿಸಿದಂಥ ಜ ಗನ್ನಾಥ ದಾಸರ ತೂಗಿರೆ 10 ಮಾನವಿರಾಯರ ಪ್ರಾಣಪದಕರಾದ ಪ್ರಾಣೇಶದಾಸರ ತೂಗಿರೆ ವೇಣುಗೋಪಾಲನ್ನ ಗಾನದಿ ತುತಿಸಿದ ಆನಂದದಾಸರ ತೂಗಿರೆ 11 ವಾಸ ಆದಿಶಿಲಾಧೀಶನ್ನ ಭಜಿಸಿದ ಶೇಷ್ಠ ದಾಸರನ್ನ ತೂಗೀರೆ ಶ್ರೇಷ್ಠ ಕಾರ್ಪರ ನರಕೇಸರಿಗತಿಪ್ರೀಯ ದಾಸೋತ್ತಮರನ್ನ ತೂಗೀರೆ 12
--------------
ಕಾರ್ಪರ ನರಹರಿದಾಸರು
ತೆಪ್ಪದುತ್ಸವ ನಿನಗೆ ಏನು ಹಿತವೋ ಅಪ್ಪ ಹನುಮಯ್ಯ ನಿನ್ನಾಟಕೇನೆಂತೆಂಬೆ ಪ. ರಾಮ ಉಂಗುರ ಸತಿಗೆ ಕಂಡಿತ್ತು ಬಾರೆನಲು ನೇಮದಿಂದಲಿ ನೂರು ಯೋಜನುದಧಿ ಪ್ರೇಮದಿಂದಲಿ ಹಾರಿ ಕುರುಹು ತಂದಾ ಮಹಿಮ ಈ ಮಡುವಿನ ಜಲದಿ ಈ ಆಟವಾಡುವುದು 1 ಕುರುಕುಲಾರ್ಣವವೆಂಬ ಘನ ಶತ್ರು ಸೈನ್ಯವನು ಒರಸಿ ಕ್ಷಣದಲಿ ಭುಜಬಲದ ಶೌರ್ಯದಲಿ ಧುರವೆಂಬ ಶರಧಿಯನು ಲೀಲೆಯಲಿ ದಾಟಿದಗೆ ವರ ಸರೋವರದ ಈ ಜಲದಾಟವಾಡುವುದು 2 ಅನ್ಯ ದುರ್ಮತ ಮಹಾರ್ಣವನು ಶೋಷಿಸುತ ಬಹು ಉನ್ನತದ ವೇದ ಶಾಸ್ತ್ರಾರ್ಣವದಲಿ ಚೆನ್ನಾಗಿ ಈಜಿ ಶ್ರೀ ಹರಿಚರಣ ದಡ ಸೇರ್ದ ಘನ್ನ ಮಹಿಮನಿಗೆ ಈ ಚಿನ್ನ ಮಡುವೀಜುವುದು 3 ಮುಕ್ತಿಯೊಗ್ಯರ ಕರ್ಮಶರಧಿಯನು ದಾಟಿಸುತ ಮುಕ್ತರಾಶ್ರನ ಪುರ ಸೇರಿಸುವನೆ ಅತ್ಯಂತ ಅಲ್ಪ ಈ ಜಲದಾಟವಾಡಿದರೆ ಭಕ್ತರಾದಂತ ದಾಸರು ನಗರೆ ಹನುಮ 4 ವರ ಕದರುಂಡಲಿಯಲ್ಲಿ ನೆಲಸಿರುವ ಭಕ್ತರಿಗೆ ಮರುಳುಗೊಳಿಸುತ ಮಹಾ ಮಹಿಮನೆನಿಸಿ ಪರಿಪರಿಯ ಉತ್ಸವಪಡುವೆ ಶ್ರೀ ಕಾಂತೇಶ ಸಿರಿರಮಣ ಗೋಪಾಲಕೃಷ್ಣವಿಠ್ಠಲನ ದಾಸ 5
--------------
ಅಂಬಾಬಾಯಿ
ತೆರಳಿದ ನಮ್ಮರಂಗ ಅರಳುಮಲ್ಲಿಗೆ ಹೂವತರುಳೆ ಸೂರ್ಯಾಡಿ ಬಾರೆ ಪ. ರಾಜ ರಾಜರು ಸಹಿತ ಭೋಜನ ಮಾಡಿ ಕೃಷ್ಣರಾಜ ಗೋಪಾಲನೀಗ ತೆರಳಿದ 1 ಕಂಬು ಕಂದರನೀಗ ತೆರಳಿದ 2 ಇಂದಿರೇಶ ತಾನು ಚಂದ್ರ ಸಾಲಿಗ ಳಿಳಿದು ತಂದಿ ಭಕ್ತರ ಮನೆಗೆ ತೆರಳಿದ3 ಪ್ರೇಮದಿ ಕೃಷ್ಣರಾಯ ಸೋಮ ಸಾಲಿಗ ಳಿಳಿದು ಸ್ವಾಮಿ ಭಕ್ತರ ಮನೆಗೆ ತೆರಳಿದ 4 ಕುಂತಿ ದೇವಿಯರ ಪುಣ್ಯ ಎಂತು ವರ್ಣಿಸಬೇಕು ಶ್ರೀಕಾಂತನು ಅವರ ಅರಮನೆಗೆ ತೆರಳಿದ5 ಮತ್ತೆಪಾಂಡವರ ಪುಣ್ಯ ವಿಸ್ತರಿಸಲೊಶವಲ್ಲಚಿತ್ತಜನೈಯನೀಗ ತೆರಳಿದ6 ಪಕ್ಷಿವಾಹನ ಸ್ವಾಮಿ ಲಕ್ಷರೂಪವೆ ಧರಿಸಿ ಲಕ್ಷ್ಮಿರಮಣ ನೀಗ ತೆರಳಿದ 7 ಹಾಟಗಾಂಬರ ಧಾರಿ ಕೋಟಿ ರೂಪದಿ ಜಗನ್ನಾಟಕ ಕೃಷ್ಣನೀಗ ತೆರಳಿದ 8 ಚನ್ನರಾಮೇಶ ತಾನು ಅನಂತ ರೂಪವಧರಿಸಿತನ್ನ ಭಕ್ತರ ಮನೆಗೆ ತೆರಳಿದ 9
--------------
ಗಲಗಲಿಅವ್ವನವರು
ತೆರೆ ಬಾಗಿಲವ ಸುಗುಣೆ ಸುಂದರಿ ಮುಗಿವೆ ಕರವನುನಗಧರನ ಚರಣಕಮಲಯುಗಳ ನೋಳ್ಪೆನು ಪ ಪೇಳಿದವರು ಯಾರು ನಿನಗೆ ಕೀಲಿ ಹಾಕಲುಶೀಲಲಾಮನೊಬ್ಬನಾಜ್ಞೆ ಕೇಳಿ ನಡೆವಳು 1 ಹರಿಯು ಎಷ್ಟು ಸಾರೆ ನಿನಗೆ ತೆರೆಯ ಕೀಲಿಯೆಕರೆದು ಪೇಳಿದಾನೆ ಮಾತು ಸಿರಿಯೇ ಮರೆತೆಯಾ 2 ಬಾರೋ ಎಂದು ನೀನೆ ಎಷ್ಟು ಸಾರಿ ಕರೆದೆಯಾನಾರಿಮಣಿಯೆ ಬಂದರ್ಹೀಗೆ ತೋರ್ಪೆ ರೀತಿಯಾ 3 ಇಂದು ಹರಿಯ ದ್ವಾರದಲ್ಲಿ ಬಂದು ನಿಂತಿಹೆಮಂದಗಮನೆ ಕೀಲಿನೀನು ಬಂಧ ಮಾಳ್ಪರೆ 4 ಇಷ್ಟು ನೋಡಿ ಇಂದಿರೇಶನ ಭೆಟ್ಟಿ ಭರದಲಿಕೃಷ್ಣೆ ಬಂದು ತೆರೆಯೆ ಕೀಲಿ ದೃಷ್ಟಿಯಾಗಲು 5
--------------
ಇಂದಿರೇಶರು
ತೇಜಿಯೇರಿ ಮೆರೆದು ಬಂದ ರಾಜಬೀದಿಯೊಳಗಿಂದ ಕಸ್ತೂರಿ ರಂಗ ಪ. ಸುತ್ತಮುತ್ತ ಸಾವಿರಾರು ಸಾಲುದೀವಟಿಗೆ ಹತ್ತುದಿಕ್ಕಿಲಿ ಬೆಳಗುತಿಹ ಹಗಲುಬತ್ತಿಗಳು ಇತ್ತೆರಪು ಭೂಸುರರು ಸಾಲುಗಟ್ಟಿ ನಿಂತಿರಲು ಮತ್ತೆ ಸಭಾದಿಂದ ತೇಜಿ ಮೆಲ್ಲನೆ ನಡೆಸುತ್ತ ಜಾಣ1 ತಾಳ ಶಂಖ ಭೇರಿ ತಮ್ಮಟೆ ತಂಬೂರಿ ಮೊದಲಾದ ಮೇಲು ಪಂಚಕಂಗಳೆಲ್ಲ[ಮಿಗೆ] ಪೊಗಳಲು ಗಾಳಿ ಗೋಪುರದ ಮುಂದೆ ರಾಯಬಿಡದಂತೆ ಸುತ್ತ ಧೂಳುಗಳೆಬ್ಬಿಸಿ [ವೈಹಾಳಿ] ನಿಕ್ಕುತ ಜಾಣ 2 ಮುತ್ತಿನ ತುರಾಯಿ ಅಂಗಿ ಮುಂಡಾಸು ತತ್ಥಳಿಪ ವಜ್ರಕೆಂಪಿನ ತಾಳಿ ಚೌಕಳಿ ಮುತ್ತಿನ ಕುಂಡಲವಿಟ್ಟು ಮೋಹಿಸುತ ಬೀದಿಯೊಳು ಕತ್ತಿಯ ಉಡಿಯಲ್ಲಿ ಕಟ್ಟಿ ಕೈಯಲಿ [ತೇಜಿಯ] ಪಿಡಿದು 3 ರಂಭೆ ಮೊದಲಾದ ದೇವರಮಣಿಯರು ಕುಂಭದ ಆರತಿಯೆತ್ತಿ ಕೂಡಿ ಪಾಡಲು ಶಂಭು ಮುಖ್ಯ ನಿರ್ಜರರೆಲ್ಲ ಸ್ವಾಮಿ ಪರಾಕೆಂದೆನುತ ಅಂಬುಜಭವಾದಿಗಳ ಆಳಿದ ಶ್ರೀರಂಗಧಾಮ 4 ವೇದಘೋಷದಿಂದ ವಿಪ್ರರು ಸ್ತುತಿಸಲು ಮೋದದಿಂದ ಗಾಯಕರು ಹಾಡಿ ಪಾಡಲು ಹಾದಿ ಬೀದಿಯಲಿ ನಿಂತು ಸಜ್ಜನರಿಗೆಲ್ಲ ದೇವ ಆದರದಿಂದಿಷ್ಟಾರ್ಥವಿತ್ತು ಮೋದದಿಂದ ಮನ್ನಿಸುವ 5 ಹಚ್ಚನೆ ಹೆಸರುಬೇಳೆ ಹಾಲುಕೆನೆಗಳು ಮುಚ್ಚಿತಂದ ಕೆನೆಮೊಸರು ಮೀಸಲು ಬೆಣ್ಣೆಯು ಅಚ್ಚ ತುಪ್ಪದಿ ಪಕ್ವವಾದ ಅತಿರಸ ಹುಗ್ಗಿಗಳು ಮೆಚ್ಚಿವುಂಡು ಪಾನಕ ನೀರುಮಜ್ಜಿಗೆಗಳನೆ ಕುಡಿದು 6 ಸಣ್ಣಮುತ್ತು [ತೆತ್ತಿಸಿದ] ಸಕಲಾತಿ ಗೊಂಡ್ಯ ಹೊನ್ನ [ತೆತ್ತಿಸಿದ ಹೊಸ] ಹೊಳೆವ ಸೊಬಗಿನ ಉನ್ನಂತ ಗುಣರಾಯ ಉತ್ತಮರಾಜಾಶ್ವವೇರಿ ಎನ್ನ ಹಯವದನ ರಂಗ ಎಲ್ಲರಿಗಿಷ್ಟಾರ್ಥಕೊಡುವ 7
--------------
ವಾದಿರಾಜ
ತೊಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ ಪ ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ ತೂಗಿರೆ ಗುರುರಾಘವೇಂದ್ರರ ಅ.ಪ ಕುಂದಣಮಯವಾದ ಛಂದ ತೊಟ್ಟಿಲೊಳು ನಂದದಿ ಮಲಿಗ್ಯಾರ ತೂಗಿರೆ ನಂದನಂದನ ಗೋವಿಂದ ಮುಕುಂದನÀ ನಂದದಿ ಭಜಿಪರ ತೂಗಿರೆ 1 ಯೋಗನಿದ್ರೆಯನ್ನು ಬೇಗನೆಮಾಡುವ ಯೋಗೀಶ ವಂದ್ಯರ ತೂಗಿರೆ ಭೋಗಿಶಯನನಪಾದ ಯೋಗದಿ ಭಜಿಪರ ಭಾಗವತರನ ತೂಗಿರೆ 2 ನೇಮದಿ ತಮ್ಮನು ಕಾಮಿಪಜನರಿಗೆ ಕಾಮಿತ ಕೊಡುವರ ತೂಗಿರೆ ಪ್ರೇಮದಿ ನಿಜಜನರ ಆಮಯವನಕುಲ - ಧೂಮಕೇತೆನಿಪರ ತೂಗಿರೆ 3 ಅದ್ವೈತಮತದ ವಿಧ್ವಂಸನ ನಿಜ ಗುರು ಶುದ್ಧ ಸಂಕಲ್ಪದಿ ಬದ್ಧ ನಿಜಭಕ್ತರ ಉದ್ಧಾರಮಾಳ್ಪರ ತೂಗಿರೆ 4 ಭವ ತ್ಯಜನೆ ಮಾಡಿಸಿ ಅವರ ನಿಜಗತಿ ಇಪ್ಪರ ತೂಗಿರೆ ನಿಜಗುರು ಜಗನ್ನಾಥವಿಠಲನ್ನ ಪದಕಂಜ ಭಜನೆಯ ಮಾಳ್ಪರ ತೂಗಿರೆ 5
--------------
ಗುರುಜಗನ್ನಾಥದಾಸರು
ತೊಡಕ ಹರವ ಮಾಡಿಕೊಳ್ಳಿರೊ ಹುಟ್ಟಿ ಬಾಹ್ವ ಮನುಜರೆಲ್ಲ ಧ್ರುವ ನಾನು ನನ್ನದೆಂದು ಜ್ಞಾನಹೀನನಾಗಿ ಬಾಳುತಿಹ್ಯ ಗಾಣ-ದೆತ್ತಿನಂತೆ ಮುಂದೆಗಾಣದಿಹ್ಯ ಭ್ರಮೆಯದ 1 ಜೀವ ಶಿವ ದಾವದೆಂದು ಠಾವಿಕಿಲ್ಲ ದಿಹ್ಯದಾಗಿ ನಾವು ನೀವು ಎಂದು ಹ್ಯಾವ ಹೊಮ್ಮಿ ಹೊಡೆದಾಡುವ 2 ಸಂಚಿತ ಪ್ರಾರಬ್ಧ ಕ್ರಿಯಮಾಣದೊಳು ಸಿಲ್ಕಿ ಪ್ರ ಪಂಚ ಪರಮಾರ್ಥ ದಾವದೆಂದು ಮುಂಚೆ ತಿಳಿಯದ 3 ತನವು ತಾನೆಂದು ಘನವು ಮರೆದು ದಣಿದು ತಿರುಗುತಿಹ್ಯ ಮನದ ಮಾಯದೊಳು ಸಿಲ್ಕಿ ತನಗೆ ತಾಂ ತಿಳಿಯದೆ 4 ತೊಡಕು ಹರವ ಮಾಡಿಗೊಳ್ಳಿ ಪಡದು ಙÁ್ಞನಭಕ್ತಿಯಿಂದ ಮೂಢ ಮಹಿಪತಿಯನ್ನೊಡೆಯ ಬಿಡದೆ ನೆಲೆಗೊಳ್ಳುವ್ಹಾಂಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತೊಂಡನು ಕಂಡುದ ಬಿನ್ನೈಸುವೆನುಪಾಂಡವ ಪ್ರಿಯ ಎನ್ನ ತಪ್ಪು ಕಾಯಯ್ಯ ಪ ಹರಿ ನಿನ್ನ ನಾಮ ಕಾಮಧೇನುವಿಗೆದುರಿತದೊಟ್ಟಿಲು ಮೇವು ಭವಾಂಬುಧಿಯುಅರಸಿ ಕುಡಿವ ನೀರೆರೆವಡೆನ್ನಲ್ಲಿಭರಿತವಾಗಿರೆ ಒಲಿದು ಎನ್ನೊಳ್ಯಾಕಿರಿಸೆ 1 ಮುನಿಗಳ ಮನದ ಮೊನೆಯಾದ ಕೊನೆಯಲ್ಲಿಘನಭಕ್ತಿ ಪಾಶದಿ ಸಿಲುಕಲ್ಯಾಕೆಎನ್ನ ಚಿತ್ತ ಚಂಚಲದುಯ್ಯಾಲೆಯಲಿನಿನ್ನ ಮನಬಂದಂತೆ ಓಲ್ಯಾಡಲಾಗದೆ 2 ಕರ್ಣರಂಧ್ರದಿ ಮನವನು ಪೊಕ್ಕು ಪಾಪವನಿನ್ನವರಲಿ ತಳವರಸಲ್ಯಾಕೆಎನ್ನೊಳ ಹೊರಗೆ ಪಾಪರಾಸಿಗಳಿವೆನಿನ್ನ ಮನಬಂದಂತೆ ಸೊರೆಗೊಳ್ಳೆಲೊ ಕೃಷ್ಣ3
--------------
ವ್ಯಾಸರಾಯರು
ತೊಡರು ಪ ತೊಡರು ನಿಮಗಳವಡದು ನಾನರಿವೆ 1 ಮೇಣದಹಿಕೋಟಿ ದಳ್ಳುರಿಯ ಗರುಡನ ಕೂಡಪ್ರಾಣದಿಂ ಕಾದಿ ಜಯಿಸುವುದೆ ಹೇಳಾಕ್ಷೋಣಿಯೊಳು ಕ್ಷೀಣದೈವ ಬ್ರಹ್ಮಾಂಡ ಕೋಟಿಗಳುದಾನವಾರಿಯ ದಾಸಗಳವಡವು ನಾನರಿವೆ 2 ಹುಲಿಯ ಮೀಸೆಯ ಪಾಶವಿಡಿದು ಗೋವತ್ಸಗಳುನಲಿದು ಉಯ್ಯಾಲೆಯನಾಡುವವೆ ಹೇಳಾಕಲಿ ಬಾಡದಾದಿಕೇಶವರಾಯ ಚಕ್ರದಲಿತಲೆಗಳನು ಚೆಂಡಾಡಿಸುವ ಕಾಣೊ ಬೇಡ 3
--------------
ಕನಕದಾಸ
ತೊರವಿ ನರಸಿಂಹ ಕರವ ಪಿಡಿಯೊ ತೊರವಿ ನರಹರೆಆಹಾ ತೊರವಿ ನರಹರೆ ಪ ಸ್ತಂಭಜಾತ ನಂಬಿ ನಿನ್ನ ಅಂಬುಜಾತನೆಬಿಂಬದಂತೆ ಪಾಲಿಸೆನ್ನ ಸಾಂಬವಿನುತನೆ 1 ಛಟಿಛಟೆಂದು ಒಡೆದು ಕಂಬ ಪುಟಿದು ಸಭೆಯೊಳುಕಟಿಯ ತಟದೊಳಿಟ್ಟು ರಿಪುವ ಒಡಲ ಬಗೆದೆಯೊ 2 ಇಂದಿರೇಶ ಎನ್ನ ಹೃದಯ ಮಂದಿರದೊಳು ಬಂದು ತೋರೆ ಮುಖವ ನಿನ್ನ ವಂದಿಸುವೆನು 3
--------------
ಇಂದಿರೇಶರು
ತೊಲಗು ನೀ ತೊಲಗಿನ್ನು ಅಭಿಮಾನವೆಅಲೆಬಡಿಸದಿರೆನ್ನನೂ ಹಲವು ಜನರಕಾಲಕೆಳಗೆ ನಿಲ್ಲಿಸಿಯನ್ನ ಹೊಲೆಗೆಲಸವ ಮಾಡಲೆಳಸಿ ನೆಗ್ಗಿದೆಯಲ್ಲ ಪಸತಿಸುತ ಪೋಷಣೆಯು ಮುಖ್ಯವು ಮಾತಾಪಿತೃಗಳಾರಾಧನೆಯು ಬಳಗ ಬಂಧು ತತಿಗಳ ಮನ್ನಣೆಯು ಕುಲ ಜಾತಿ ದೇವತೆಯ ಪೂಜಿಪ ಹಬ್ಬವು ಬಿಡಕೂಡದುವ್ರತ ಉಪವಾಸವಾರತಿಯಕ್ಷತೆಯು ಮುಂಜಿಯುಸುತೆಗೆ ಮದುವೆಯೆಂದು ಮತಿಗೆಡಿಸಿದೆಯಲ್ಲ 1 ಅರೆಘಳಿಗೆಯು ನಿಲ್ಲಲು ವೇಳೆಯ ಕೊಡದೆರಗಿಸಿ 'ಷಯದೊಳು ನಾನಾ ಬಗೆಹರುಬಿಗೆ ಹರುಸಲು ಮನವನೀಕೊರಗಿಸಿ ಕುಣಿಸುತಲು ಒಂದೇ ಕ್ಷಣಹರಿನಾಮ ಸ್ಮರಣೆಗೆ ತೆರಹುದೋರಿಸದಾಯುಹರಿದು ಪೋಗುವ ಹಾಗೆ ಕರಗಿಸಿದುದೆ ಸಾಕು 2ಶ್ರವಣಕೆ ಮನ'ತ್ತೆಯಾ ನಾಮ ಸ್ಮøತಿ ಸ'ಯ ಸೇ'ಸಬಿಟ್ಟೆಯ ಸಜ್ಜನರೊಳೊಂದುವ ದಾರಿಯ [ತೋರಿ]ದೆಯ ಎಂದಾದರು ಶಿವಸೇವೆಗಳ ತಂದೆಯ 'ೀಗಾಗುವ ಹವಣನರಿಯದೆ ಸಂಗವ ಮಾಡಿ ನಿನ್ನೊಳಗ'ವೇಕವನು ಪಡೆದವನಾದೆನಯ್ಯಯ್ಯೊ 3ಕಂಡವರೊಡವೆಯನು ತಂದು ಕರೆದು'ಂಡು ಬಳಗವನ್ನು ಮನ್ನಿಸಿಯವರ್ಕೊಂಡಾಡೆ ಹರುಷವನು ತೋರಿಸಿ ಬಹಭಂಡಾಟನಡತೆಯನು ಕರೆಸಿಯನ್ನಗುಂಡಿಗೆ ನೂಕಿಸೆ ಕಂಡೆ ನಿನ್ನಾಟವಮೊಂಡಮುಂಡೇದೆನ್ನೀ ಕೂಗಕೇಳಿ ಬೇಗ 4ಶ್ರೌತ ಸ್ಮಾರ್ತದ ಬಟ್ಟೆಯ ಹೊಂದುವರೆ ನೀನೋತು ಮಾರ್ಗವ ತೊಟ್ಟೆಯ ಅನ್ಯಾಯದ ರೀತಿಯ ನೀ ಬಿಟ್ಟೆಯ ನರಕಬಪ್ಪ ಭೀತಿಯ ನೀತೊಟ್ಟೆಯ ಯೇನೆನ್ನದೆಲೆಕಾತರಿಸುತ ಕಾಮಕಾತು ಕ್ರೋಧವ ಮಾಡಿಮಾತಿಗಾದರು ಒಮ್ಮೆ ಸೋತವನಾದೆಯ 5ಕಲಹವ ಜನರೊಳಗೆ ಗಂಟಿಕ್ಕಿತುತೊಲಗಿಸಿ ಬಯಲೊಳಗೆ ನಿಲ್ಲಿಸಿಯೆನ್ನಹಲವು ಬಗೆಯ ಮಾತಿಗೆ ಗುರಿಯ ಮಾಡಿಬಳಲಿ ಬಾಡುವ ರೀತಿಗೆ ಕಂಗೆಡಿಸಿದೆಕಾಲದೊಳು ಧನದೊಳು ಬಲದೊಳು ಛಲದೊಳುನೆಲೆಗೊಂಡು ನೀಯೆನ್ನ ಥಳಿಸಿದುದೇ ಸಾಕು 6ಅರಿಯದಾದೆನು ನಿನ್ನನು ಅದರಿನಿಂದಹುರಿದೆ ನೀನೆನ್ನುವನು ಚಿಕ್ಕನಾಗಪುರದೊಳಗಜ್ಞರನು ರಕ್ಷಿಸಲಾಗಿಗುರುವಾಸುದೇವಾರ್ಯನು ನೆಲಸಿಹನುಮರೆಯೊಕ್ಕೆರಗಿ ನಿನ್ನ ಪರಿಯ ಪೇಳಲು ಜ್ಞಾನದುರಿಯೊಳು ದ'ಪನೆಚ್ಚರ ನಿಲಬೇಡಿನ್ನು 7
--------------
ವೆಂಕಟದಾಸರು
ತೊಳೆಯಲಿ ಬೇಕಿದನು ಮನುಜಪ ಭವಕೂಪದಿ ಬಿದ್ದು ತೊಳಲಿ ಬಳಲಿ ಬಳಲಿ ಮಲಿನವಾಗಿಹ ಮನ ಹರಿಧ್ಯಾನ ಜಲದಲಿ ಅ.ಪ ಕಾಮಕ್ರೋಧದಿಂದ ಜನಿಸಿದ ಲೋಭಮೋಹ ಲೋಭದಿಂದ ಮದಮತ್ಸರ ಷಡ್ವಿಧ ತಾಪಗಳಿಂದ ಹದಗೆಟ್ಟಿರೆ ಮನ ಮುದದಿ ಹರಿಧ್ಯಾನದಿ 1 ದುರ್ಜನ ಸಂಗದೊಳು ಸೇರುತ ಮನ ವರ್ಜಿಸಿ ಹರಿ ಚರಿತ ಅರ್ಜುನ ಸಖ ಸರ್ವೇಶನ ನಾಮವು ಲಜ್ಜೆಯಿಲ್ಲದೆ ಸ್ಮರಿಸುತ ನಲಿಯಲು ಮನ 2 ಜನನ ಮರಣ ಕ್ಲೇಶದಿ ದು:ಖದಿ ಮನ ಮರಳಿ ಮರಳಿ ಪಾಪದಿ ಎಣಿಕೆ ಇಲ್ಲದ ದೋಷದೊಳಗೆ ಮುಸುಕಿದ ಮನ ನಿತ್ಯ 3 ಇಂದಿರೇಶನ ಧ್ಯಾನವ ಮಾಡಲು ಮನ ವೃಂದವ ಕೂಡಿ ಮಂದೋರದ್ಧರ ಗೋ_ ವಿಂದನೆನ್ನಲು ಮನ 4 ನಿಚ್ಚ ಭಕುತಿಯಿಂದ ಶ್ರೀ ಹರಿಪಾದ ಅರ್ಜಿಸಿಮುದದಿಂದ ರುಕ್ಮಿಣಿಯರಸನ ಸತ್ಯಸಂಕಲ್ಪನ ಮೆಚ್ಚಿಸಿ ಮುಕುತಿಯ ನೈದಲು ಈಮನ 5 ಮಧ್ವಮತದಿ ಜನಿಸಿ ನಿರಂತರ ಮಧ್ವರಾಯರ ಭಜಿಸಿ ಸದ್ವೈಷ್ಣವರ ಸಂಗದೊಳಾಡುತ ಲಜ್ಜೆತೊರೆದು ಕಾಲಗೆಜ್ಜೆ ಕಟ್ಟಲುಮನ6 ಕಂಬು ಚಕ್ರಧಾರಿ ಶ್ರೀ ಶೌರಿ ನಂಬುವರಾಧಾರಿ ಶಂಬರಾರಿಪಿತ ನಂಬಿದೆ ನಿನ ಪಾದ ಶಂಭುವಂದಿತ ಪಾಲಿಸಿಂದು ಸ್ಮರಿಸಲು ಮನ 7 ತೊಳೆದು ತೊಳೆದು ವಿಷಯ ವಾಸನೆಯನ್ನು ಹಲವು ವಿಧದಿ ತೊಳೆದು ಕಲುಷದೂರನ ನಾಮ ಸ್ಮರಣೆಯ ಮಾಡಲು ಮರುತ ಮತದ ಸಂಗ ದೊರೆವುದು ತವಕದಿ8 ಕಳವಳಿಸದೆ ಮನವು ನಿಶ್ಚಲದಲಿ ಥಳ ಥಳ ಥಳ ಹೊಳೆಯೆ ಕಮಲನಾಭ ವಿಠ್ಠಲವಲಿದು ಪಾಲಿಸುವನುಹಲವು ಬಗೆಯಲಿ ಹಂಬಲಿಸದೆ ಮನ 9
--------------
ನಿಡಗುರುಕಿ ಜೀವೂಬಾಯಿ
ತೋರಮ್ಮಯ್ಯ ಯತಿಕುಲ ಸರ್ವಭೌಮನ್ನ ಪಮೂರವತಾರದ ಪುಣ್ಯರಾಶಿಯನು ತೂರಿಸುಜನರ ಪೊರೆವ ಉದಾರನ ಅ.ಪಅಸುರ ಬಾಲನಂತೆ ಹರಿಯಲಿ ಅಸಮ ಭಕ್ತಿಯಂತೆಅಸುರಾರಿಯ ನರಸಿಂಹರೂಪವನು ಅಸುರತಾತನಿಗೆ ತೋರ್ದನಂತೆ 1ಪರಮಹಂಸನಂತೆ ಪುರಂದರದಾಸರ ಗುರು ಅಂತೆಅರಸನ ರಕ್ಷಿಸಿ ಅರಸನಾಗಿ ಕ್ಷಣ ಉದ್ಗ್ರಂಥಗಳನು ರಚಿಸಿದನಂತೆ 2ಕಡುಬಡತನವಂತೆ ಸುದಾಮನ ಮರಸಿ ಬಿಟ್ಟಿತಂತೆಸಡಗರದಿಂದ ಸನ್ಯಾಸಿಯಾಗಿ ದರ್ಮಸಾಮ್ರಾಜ್ಯವನಾಳಿದನಂತೆ3ಕಾಮಧೇನುವಂತೆ ಕಲಿಯುಗ ಕಲ್ಪವೃಕ್ಷವಂತೆನೇಮದಿಂದ ಸೇವೆಯನು ಮಾಡಿದರೆ ಕಾ'ುತಾರ್ಥಗಳನೀಯ್ವನಂತೆ 4ಸಾಲವಪುರದಂತೆ ಭಕ್ತರಿಗೊಲಿದು ಬಂದನಂತೆಮೂಲಸ್ಥಾನ ಮಂತ್ರಾಲಯವಂತೆ ಭೂಪತಿ'ಠಲನ ತೋರುವನಂತೆ 5
--------------
ಭೂಪತಿ ವಿಠಲರು
ತೋರಿದ ನಿಜರೂಪ ಶ್ರೀಕೃಷ್ಣ ಆಹಾಗಾರ ಮಧ್ಯದಿ ವೃಜ ಚೋರ ಬಾಲಕನು ಪ ಪೆಟ್ಟಿಗೆಯೊಳು ಕರವಿಟ್ಟು ಬೆಣ್ಣೆಯ ತೆಗೆದಷ್ಟು ಇಷ್ಟನು ಮೆದ್ದು ಬೊಟ್ಟು ಚೀಪುವನು 1 ಜರದ ಕುಂಚಿಗಿ ಗೊಂಡ್ಯಾ ಶಿರದಿ ತೂಗುತಲೆನ್ನತಿರುಗಿ ತಿರುಗಿ ನೋಡಿ ಮುಚ್ಚದೆ ಪೋದನು 2 ಇಂದು ತಿನ್ನುತಲಿಹ ಶ್ರೀಕೃಷ್ಣಒಂದು ಎರಡು ವಯ ಇಂದಿರೇಶನ ಕಂಡು ನಂದ ಭೋಗಿಪೆನು 3
--------------
ಇಂದಿರೇಶರು
ತೋರಿಸಯ್ಯ ಬೆಳಕು ದೇವ ತೋರಿಸಯ್ಯ ಬೆಳಕು ದಾರಿ ತಪ್ಪಿ ದೂರ ಬಂದಿಹೆನು ಪ ತಿಮಿರ ಮಧ್ಯದಿ ನಿಂತಿಹೆನೊಅ.ಪ ಚತುರನೆಂದು ತಿಳಿದು ಬಲುದಿನ ಸ್ತುತಿಸಲಿಲ್ಲ ನಿನ್ನ ಪತಿತನೆಂಬ ಭಯ ತೊರೆದು ಧೈರ್ಯದಲಿ ಕ್ಷಿತಿ ಭೋಗಗಳಿಗೆ ಮತಿಗೊಟ್ಟೆನು ನಾ 1 ಬೇಡುವುದಿಲ್ಲವೊ ನಾ ಎನ್ನ ಕೂಡಿ ಪೋಗಲೆಂದು ಹೂಡು ಎನ್ನಯ ಹೆಜ್ಜೆಯ ಸನ್ಮಾರ್ಗದಿ ಕಾಡು ಮೇಡುಗಳ ದಾಟಿ ಬರುವೆನೊ 2 ಕೂತಿರುವೆನು ನಾನು ತನುಮನ ಸೋತಿರುವುದು ಬಹಳ ಈ ತರಹದಿ ಬದುಕಿರುವುದು ನಿನ್ನಯ ಪ್ರೀತಿಯಿಂದಲೆ ಜ್ಯೋತಿರ್ಮಯನೆ 3 ಎತ್ತಲು ಕಾಣದಿದೆ ಚಿತ್ತವ ಬೆಳಗಿಸೊ ಮತ್ತೆ ನೋಡುವೆನು ಉತ್ತಮ ದೃಶ್ಯವ ಭಕುತರ ಪ್ರಸನ್ನನೆ 4
--------------
ವಿದ್ಯಾಪ್ರಸನ್ನತೀರ್ಥರು