ಒಟ್ಟು 628 ಕಡೆಗಳಲ್ಲಿ , 79 ದಾಸರು , 454 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರಿಸೋ ಶ್ರೀಹರಿ ನಿನ್ನ ತೋರಿಸೋ ಪ ತೋರಿಸೋ ಹರಿ ವಿಶ್ವಮಯ ನಿನ್ನರೂಪವ ತಾರಿಸೋ ಭವಸಾಗರದಿಂದಲೆನ್ನನು ಅ.ಪ ಜಲ ಭೂ ಖೇಚರ ಪ್ರಾಣಿವರ್ಗಗಳೊಳು ನೆಲಸಿ ಅವ್ಯಕ್ತನಾಗಿಹ ನಿನ್ನ ರೂಪವ 1 ತೃಣ ಲತೆ ತರು ವನಸ್ಪತಿ ವರ್ಗಗಳೊಳು ಅಣಗಿ ಅವ್ಯಕ್ತನಾಗಿಹ ನಿನ್ನ ಮೂರ್ತಿಯ2 ಪಂಚಭೂತ ತನ್ಮಾತ್ರಂಗಳೊಳಡಗಿ ಪ್ರ ಪಂಚಕವ್ಯಕ್ತನಾಗಿಹ ನಿನ್ನ ಮೂರ್ತಿಯ 3 ಭೂತಜಾಲದ ಹೃತ್ಪೀಠದಿ ಮಂಡಿಸಿ ರಥಿಕನಾಗಿ ದೇಹರಥವ ಚಾಲಿಪ ನಿನ್ನ 4 ತಾರಾಗಣದಿ ಚಂದ್ರ ಸೂರ್ಯಾದಿಗ್ರಹ ಪರಿ ವಾರದೊಳಡಗಿ ಜ್ಯೋತಿರ್ಮಯನಹ ನಿನ್ನ 5 ತಳಿರೆಲೆ ಹೂ ಹೀಚು ಕಾಯಿ ಧಾನ್ಯಂಗಳ ಬೆಳೆಸಿ ಶೋಭಿಪ ದಿವ್ಯ ವಿವಿಧರೂಪಂಗಳ 6 ಅಂಗ ಪ್ರತ್ಯಂಗ ಕರಣಗಳೊಳಡಗಿಹ ಮಂಗಳಮಯ ಚತುರ್ಮೂರ್ತಿಗಳಿರವನು 7 ಅಜಭವ ಸುರಮುಖ್ಯ ದೇವಗಣದೊಳಿಪ್ಪ ಸುಜನರಂತರ್ಯಾಮಿ ಚರಪ್ರತಿಮೆಗಳನ್ನು 8 ಅಂಬುಜಾಂಬಕಿ ಜಗದಂಬೆ ಸಿತಾಪತಿ ಬಿಂಬಮೂರುತಿ ರಘುರಾಮವಿಠಲ ನಿನ್ನ9
--------------
ರಘುರಾಮವಿಠಲದಾಸರು
ತ್ರಯೋದಶಿಯ ದಿವಸ ಲೀಲೆ ಪೇಳುವದೇನೆ ಬಾಲೆ ಪರಮಾತ್ಮನ ಲೀಲೆ ಮೂಡ ಗಿರೀಶನು ಪಾಡಿಲ್ಲದ ಪ್ರಭೆ ಗೂಡಿದ ಮಂಟಪಕ್ಕೇರಿದ ವಿಸ್ತರ 1 ಕುಂದಣ ಪೂರಿತವಾ- ಹೇಮದ ಬಂದಿತವ- ಪ್ರಜ್ವಲದಿಂದಿರುವ ಶ್ರೇಷ್ಠವಾಗಿಹ ನಾಗರಹೆಡೆವದನದಿ ಇಷ್ಟದಿ ನೇತಾಡುವ ಸರಮಾಲೆಯ 2 ಶುಕಪಿಕ ಮುಂತಾಗಿಹ ಧ್ರುವಮಂಡಲ ಪರಿಯಲಿ ನೋಡುವರತಿ ಚಂದ ಸುತ್ತಲು ಶೋಭಿಪ ಮುತ್ತಿನ ಬಿಂತಿಯ ಪೊತ್ತು ವಿನೂತನವೆತ್ತಿದ ವಿಸ್ತರ 3 ಮಿನುಗುವದೋರಂತೆ ಕಾಣುವದೆಲೆ ಕಾಂತೆ ಕಾಣೆನು ಇದರಂತೆ ಚಾತುಷ್ಕಂಬದೊಳೂತು ನಡುವೆಯಿಹ ಕೌತುಕವಾಗಿಹನಾಥರದಾತನ 4 ಬರುವನು ಗೋವಿಂದ ಪೊರೆಯುವದಿದು ಚಂದ ಭಕ್ತರ ಕೈಯಿಂದ ಪೊಂಬಣ್ಣದ ದಿವ್ಯಾರತಿ ಕೊಳ್ಳುತ ಇಂಬಾಗಿಹ ಕರುಣಾಂಬುಧಿ ಭರಿತ 5 ವೇದವ ಲಾಲಿಪನು ಪ್ರೇಮನಾಗುತ ಸಂಗೀತಗಳನು ಕೇಳುತ ಸುತ್ತುವನು ತಾ ಮಮಕಾರದಿ ಬರುವನು ಮೇಣು ಕೋಮಲಕಾಯವ ಸಂತತ ಮಂಡಿಸಿ ಸಾಮಗಾನ ಲೋಲೋಪ್ತಿಯೊಳಿರುವನು 6 ಭಕ್ತರ ಸಮುದಾಯಕೆ ತದನಂತರ ಗೈದೇ- ಕಾಂತ ಸೇವೆಯ ತಾ ಕೈಕೊಂಡ ಸಂತಸದಲಿ ಶ್ರೀಕಾಂತನು ಭಕುತರ ಚಿಂತಿತವೆಲ್ಲ ನಿರಂತರ ಕೊಡುವನು 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತ್ರಯೋದಶಿಯ ದಿವಸ ಲೀಲೆ ಪೇಳುವದೇನೆ ಬಾಲೆ ಪರಮಾತ್ಮನ ಲೀಲೆ ಮೂಡ ಗಿರೀಶನು ಪಾಡಿಲ್ಲದ ಪ್ರಭೆ ಗೂಡಿದ ಮಂಟಪಕ್ಕೇರಿದ ವಿಸ್ತರ1 ಕುಂದಣ ಪೂರಿತವಾ- ಹೇಮದ ಬಂದಿತವ- ಪ್ರಜ್ವಲದಿಂದಿರುವ ಶ್ರೇಷ್ಠವಾಗಿಹ ನಾಗರಹೆಡೆವದನದಿ ಇಷ್ಟದಿ ನೇತಾಡುವ ಸರಮಾಲೆಯ2 ಶುಕಪಿಕ ಮುಂತಾಗಿಹ ಧ್ರುವಮಂಡಲ ಪರಿಯಲಿ ನೋಡುವರತಿ ಚಂದ ಸುತ್ತಲು ಶೋಭಿಪ ಮುತ್ತಿನ ಬಿಂತಿಯ ಪೊತ್ತು ವಿನೂತನವೆತ್ತಿದ ವಿಸ್ತರ3 ಮಿನುಗುವದೋರಂತೆ ಕಾಣುವದೆಲೆ ಕಾಂತೆ ಕಾಣೆನು ಇದರಂತೆ ಚಾತುಷ್ಕಂಬದೊಳೂತು ನಡುವೆಯಿಹ ಕೌತುಕವಾಗಿಹನಾಥರದಾತನ4 ಬರುವನು ಗೋವಿಂದ ಪೊರೆಯುವದಿದು ಚಂದ ಭಕ್ತರ ಕೈಯಿಂದ ಪೊಂಬಣ್ಣದ ದಿವ್ಯಾರತಿ ಕೊಳ್ಳುತ ಇಂಬಾಗಿಹ ಕರುಣಾಂಬುಧಿ ಭರಿತ5 ವೇದವ ಲಾಲಿಪನು ಪ್ರೇಮನಾಗುತ ಸಂಗೀತಗಳನು ಕೇಳುತ ಸುತ್ತುವನು ತಾ ಮಮಕಾರದಿ ಬರುವನು ಮೇಣು ಕೋಮಲಕಾಯವ ಸಂತತ ಮಂಡಿಸಿ ಸಾಮಗಾನ ಲೋಲೋಪ್ತಿಯೊಳಿರುವನು6 ಭಕ್ತರ ಸಮುದಾಯಕೆ ತದನಂತರ ಗೈದೇ- ಕಾಂತ ಸೇವೆಯ ತಾ ಕೈಕೊಂಡ ಸಂತಸದಲಿ ಶ್ರೀಕಾಂತನು ಭಕುತರ ಚಿಂತಿತವೆಲ್ಲ ನಿರಂತರ ಕೊಡುವನು7
--------------
ತುಪಾಕಿ ವೆಂಕಟರಮಣಾಚಾರ್ಯ
ತ್ವರಿತದಿ ಬಾರೆ ಸಖಿ ಸುನೇತ್ರೆ | ಹರುಷದಿ ಪೀಠಕೆ ಮಂಗಳಗೀತೆ ಪ ಮಿನುಗುವ ನಯನಾ ಕನಕಾಭರಣಾ | ಮಣಿಮುತ್ತಿನ ವನಮಾಲೆಯು ಧರಿಸುತ 1 ರತ್ನದಹಾರ ದಿವ್ಯಾಂಬರದಿ | ಮಿತ್ರಿ ನೀಶೋಭಿಸುತ ಪೀಠಕೆ ಮುದದಿ 2 ಕೋಮಲೆ ಬಾಲೆ ಸುಶೀಲೆ ಶಾಮಸುಂದರನ ನಾಮವ ಪಾಡುತ 3
--------------
ಶಾಮಸುಂದರ ವಿಠಲ
ದಂತಿಗಮನೆಯರು ಹರುಷದಲಿ ನೀಲಕುಂತಳೆಯ ರತಿರೂಪ ವಂತೆಯರು ಸೊಬಗು ಶ್ರೀ ಕುಂಕುಮವ ಸಂತವಾಡಿದರೂ ಪ ಕಳಹಂಸ ಗಿಳಿವಿಂಡುಗಳ ತಂಡ ಮಧುರದಿಂ ಕೆಲವ ಕೋಗಿಲೆಯ ವಿಹಗಾಳಿಗಳ್ ಪೊಳೆವ ಚೆಂದಳಿರ ವನದೊಳು ಮಂಟಪವ ರಚಿಸಿ ಲಲನೆಯರು ಚೆಲುವಿನಲಿ ಕೊಳವ ಸಿಂಗರಿಸಿ ಜಲಜ ನೈದಿಲೆಯ ಪೂವಲಿಯದೊಲ್ಘೇಂಕರಿಪ ಬಳಸಿನಲಿ ಕೊಳಗುತಿಪ್ಪಳಿಗಳಿಂ ಶೋಭಿಸುವ ಸಲಿಲದೊಳು ಮಲಯಜ ಸುಲಲಿತ ಕುಂಕುಮವೆರಸಿ ಸಲೆ ಪ್ರಹುಡೆ ಕೆಳನಲಿದು ಸಂತಸದೀ 1 ಮಂದಗಮನೆಯರು ಪೂರ್ಣೇಂದುವದನೆಯರು ಶುಭ್ರ ಕುಂದರದನೆಯರು ಅರವಿಂದ ನೇತ್ರೆಯರು ಗೋ ವಿಂದನೈತರಲು ಪೊನ್ನಂದಣದಲಿದಿರುಗೊಳ್ಳೆ ಕುಂದಣದ ರತ್ನಗಳಲಿ | ಬಂದಿಸಲು ದಂಡೆಗಳ ಚೆಂದದಿಂ ಪಿಡಿದು ಮಕರಂದಮಂ ಪೂರಯಿಸಿ ಕಂದರ್ಪಜನಕನನು ಸಂದಣಿಸಿ ತಮತಮಗೆ ಮುಂದುವರಿದು ಲೋವಿಡಿದು ಆನಂದದಿ ಸೂಸಿದರೂ 2 ಪದುಮಗಂಧಿಯರು ಸನ್ಮøದು ಕೀರವಾಣಿಯರು ಚದುರೆಯರ್ತೊಂಡೆವಣ್ಣಧರೆಯರು ಪೇರ್ಮೈಯ ಮದದ ಮದ್ದಾನೆಯರು ಸುದತಿಯರು ಸೌಂದರ್ಯ ಪದಪು ಗಾತಿಯರು ಬಂದೊದಗಿ ಮೂದಲಿಸಿ ಮಧುಸೂದನನ ಬಿಡದಿದಕೋ ಪಿಡಿಪಿ ಮೋಹ ನದ ಬಲೆಯನು ಬೀಸೆನುತ ಯುವತಿಯರುಗಳು ಮುದದಿಂದ ಬೆಂಗೊತ್ತಿ ಪ್ರಣಯ ಕದನದಿಂ ಸೋಲಿಸುತ ಎದೆಗೆಡಿಸಿ ನವಪರಿಮಳದಿ ಮುಸುಕಿದರೂ 3 ಅಡಿಗಡಿಗೆ ಬಟ್ಟ ಪೊಂಗೊಡ ಮೊಲೆಗಳಲುಗುತ್ತ ಕಾ ರಡಿಗಳಂ ಪೋಲ್ವ ಪೇರ್ಮುಡಿ ಸಡಿಲೆ ಹಾರಗಳ ಜಡೆಯಲೊಯ್ಯನೆ ಸಣ್ಣ ನಡು ಬಳುಕೆ ಲಾವಣ್ಯ ವೆಡೆಬಿಡದೆ ಕೋಮಲೆಯರೊಡನೆ ತವದಕಲೀ ಸಡಗರದಿ ಕುಸುಮಗಳ ಎಡೆಬಿಡದೆ ಬೀರೆ ಸೊಂ ಪಡರ್ದಂಗಲತೆಗಳಿಗೆ ತೊಡದ ಮನ್ಮಥಶರವ ಪತಿ ವಿಡಿದು ಮಡದಿಯರು ಅಲರ್ದೊಡೆಯದೊಡಿಸಿದರೂ 4 ತೊರೆದು ಮುಂಬರಿಯೆ ಯೌವನದ ಪೀತಾಂ ಬರದ ನೆರಿಗಳೋಸರಿಸೆ ಮುಂಜೆರಗನೆಳೆವುತ ವಾಮ ಕರದಂಗುಳಿಗಳಿಂದ ಕುರುಳ ನೇವರಿಸುತಾ ತುರದ ತರುಣಿಯರು ಶ್ರೀಹರಿಯ ತರುಬಿದರೂ ಸರಸಿ ಜಾಂಬಕನ ಪೇರುರವ ಕುಚಗಳ ಕೊನೆಯ ಲಿರಿದು ನಿಲ್ಲಿಸಿ ನಿಲ್ಲು ಹೋಗಬೇಡೆನುತ ಯುವತಿಯರು ಧರೆಯೊಳತ್ಯಧಿಕ ಸುರಪುರದ ಲಕ್ಷ್ಮೀಪತಿಯ ಸರಸನೆ ವವಿಡಿದು ಮೇಲ್ವರಿಯೆ ವೊಲಿಸಿದರೂ 5
--------------
ಕವಿ ಲಕ್ಷ್ಮೀಶ
ದರ್ಪಣದಲಿ ಮುಖ ನೋಡಿಕೊಂಡನೆ ಪ ಮಲ್ಲಿಗೆ ಮುಗುಳಿನ ತೆರದಲಿ ಶೋಭಿಪ ಪಲ್ಲುಗಳಲೆ ಸಿರಿಯುಗಲ್ಲವು ಭೂಪತಿಯಂದದಿ ಬೃಸ್ವರಾಬಿಲ್ಲಿನ ಸೌಭಗವು1 ಶರದುದಿತಾಮಲ ತರುಣಿಕರಾರ್ಚಿತ ಸರಸಿಜದಳನಯನಾಕರುಣಪೂರ್ಣ ಕಟಾಕ್ಷ ರಕ್ಷಣ ವರಪಲ್ಲವರರಸನು 2 ರತ್ನಕುಂಡಲದ್ವಯ ಸಂಶೋಭಿತ ಸ್ತೋತ್ರಯುಗಳ ನೇಮಮಸ್ತಕದಲಿ ಮಾಣಿಕ ಮುಕುಟ ಶ್ರೀ ಉತ್ತಮ ಮುಖಧಾಮ 3 ನಿತ್ಯಾನಂದ ಚಿದಾತ್ಮಕ ಶಕ್ತನು ಭಕ್ತಕಾಮಿತದಾತಎತ್ತುವೆ ಕರಯುಗ ತವ ಕಮಲಕೆ ಚಿತ್ರ ಚರಿತ್ರ ಗಾತ್ರಾ 4 ನಾಸಕ ಚಂಪಕ ಕೋಶವು ಬಿಂಬಾಧರ ಯುಗಳದೋಷರಹಿತ ಸುರಾಹ ಸರೋಜ ಇಂದಿರೇಶ ವದನ 5
--------------
ಇಂದಿರೇಶರು
ದಶರಥರಾಮಹರೆ ಸೀತಾಪತೆ ದಶರಥರಾಮ ಸುಧಾಕರವದನ ¥ರಶುರಾಮ ಬಾಹುಪರಾಕ್ರಮ ಜಿತಶ್ರೀ ಪ ಸುರಮುನಿ ಸೇವಿತ ಶುಭಕರ ಚರಿತ ಕೌಸ್ತುಭ ಶೋಭಿತ ವರ ವಿಶ್ವಾಮಿತ್ರಾಧ್ವರ ಪರಿಪಾಲನ ಖರ ದೂಷಣ ರಾಕ್ಷಸ ಬಲ ಖಂಡನ 1 ವಾಲಿ ಮರ್ದನ ಭಕ್ತವತ್ಸಲ ಮಾಧವ ವಿನುತ ಪಾದ ಪದ್ಮ ನೀಲ ನೀರದ ಸನ್ನಿಭಗಾತ್ರ ಪರಮ ದಯಾಳು ನಾರಾಯಣ ಲೀಲಾ ಮಾನುಷ ವೇಷ 2 ಸಿಂಧು ಬಂಧನ ಪಂಕ್ತಿ ಕಂಧರಾಂತಕ ಗೋವಿಂದ ಮುಕುಂದಾರ ವಿಂದೋದರ ಇಂದಿರಾಧಿಪ ಶ್ರೀ ಹೆನ್ನೆಪುರ ನಿಲಯಾ ನಂದ ವಿಗ್ರಹ ಜಗದ್ವಂದ್ಯ ಮಂದಹಾಸ 3
--------------
ಹೆನ್ನೆರಂಗದಾಸರು
ದಾಮ ಶೋಭಿತ ವಿಠಲ | ಸಾಮ ಸನ್ನುತನೇ ಪ ಪ್ರೇಮದಿಂದಿವಳ ಮನ | ಕಾಮ ಪೊರೈಸೋ ಅ.ಪ. ಯೇಸೊ ಜನ್ಮದ ಪುಣ್ಯ | ರಾಶಿ ಫಲ ಒದಗುತಲಿದಾಸತ್ವ ದೀಕ್ಷೆಯನು | ಆಶಿಸುತ್ತಿಹಳೋ |ದಾಸವರ್ಯರು ವಿಜಯ | ದಾಸರುತ್ಸವದಿ ಸಂ-ತೋಷದಲಿ ಬಿನ್ನಹವ | ಲೇಸು ಗೈದಿಹಳೋ 1 ಸಾರ ಚಾರು ಮೂರುತಿಯೇ 2 ಆನಂದ ಮುನಿ ಮತದಿ | ಸ್ವಾನುಭವ ದೀಕೆಯನುಜ್ಞಾನ ಭಕ್ತ್ಯಾದಿ ಸಂ | ಧಾನ ತಿಳಿಸುತಲೀ |ಮಾನನಿಧಿ ಕೈ ಪಿಡಿದು | ದೀನಳನು ಪೊರೆಯೆಂದುಪ್ರಾಣ ಪ್ರಾಣನೆ ಬೇಡ್ವೆ | ದೀನ ವತ್ಸಲನೇ 3 ಸಾಧನದಿ ಸತ್ವತೆಯ | ಹಾದಿಯಲ್ಲಿಹಳೀಕೆಸಾಧುಗಳ ಕಂಡು ಹೃದ | ಯಾದ್ರ್ರ ಭಾವದಲೀ |ಮೋದ ಬಡಿಸುತ ಸೇವೆ | ಶ್ರೀಧರನಿಗರ್ಪಿಪಳುಹೇ ದಯಾಂಬುಧೆ ಸಲಹೊ | ಸಾಧು ಜನ ವಂದ್ಯಾ 4 ಸರ್ವಕಾಲವು ದೇಶ | ಸರ್ವಗುಣದ್ರವ್ಯದಲಿದುರ್ವಿಭಾವ್ಯನ ವ್ಯಾಪ್ತಿ | ಸ್ಛುರಣೆಯನು ಕೊಡುತಾ |ಸರ್ವಾಂತರಾತ್ಮಗುರು | ಗೋವಿಂದ ವಿಠ್ಠಲನೆದರ್ವಿ ಜೀವಿಯ ಹೃದಯ | ಗಹ್ವರದಿ ತೋರೋ 5
--------------
ಗುರುಗೋವಿಂದವಿಠಲರು
ದಾಸರ ಮೊರೆ ಲಾಲಿಸೋ ವೆಂಕಟಾಚಲ ವಾಸ ಬಿನ್ನಪ ಲಾಲಿಸೊ ಪ ಲೇಸು ಭಕುತಿಯು ಮಾಡದಲೆ ಬಲು ಘಾಸಿಯಾಗುತ ಮನದಿ ನೊಂದು ದಾಸನಾಗದೆ ಕ್ಲೇಶಪಟ್ಟೆನೊ ಈಸುದಿನಗಳ ಕಳೆದೆನೊ ವೃಥಾ1 ತಳಿರು ಪೋಲುವ ನಿನ್ನಯ ಪಾದ- ಕ್ಕೆರಗದೆನ್ನಯ ಸಿರವು ದಣಿಯನೋಡದೆ ನಿನ್ನನು ಮಹಾಪಾಪ ಗಳನೆ ಮಾಡುತ ನೊಂದೆನು 2 ಅನಿಮಿಷೇಶನೆ ನಿನ್ನ ಮಹಿಮೆಯ ಕ್ಷಣಬಿಡದೆ ಧ್ಯಾನವನೆ ಮಾಡುವ ಅನಲಸಖತನಯನಿಗೆ ನಮಿಸುವೆ ಕ್ಷಣ ಬಿಡದೆ ಎನ್ನ ಪೊರೆವ ಕರುಣಿ3 ಕಟಿಯ ಕಾಂಜಿಯ ದಾಮವು ನವರತ್ನದ ಸ್ಫ್ಪಟಿಕ ಮುತ್ತಿನ ಹಾರವು ಲಕುಮಿ ಧರಿಸಿದ ವಕ್ಷ ಕೌಸ್ತುಭಹಾರ ಸ್ಫುಟದಿ ಶೋಭಿಪ ಉರವು 4 ವಟುವಿನಂದದಿ ಪ್ರಕಟನಾಗುತ ಕುಟಿಲ ದಿತಿಜರಿಗಖಿಳ ವಿಧ ಸಂ- ಕಟಗಳನೆ ಸಂಘಟನೆ ಮಾಡುವ ನಟನ ತೆರ ವಟಪತ್ರಶಾಯಿ 5 ನೊಸಲ ಕಸ್ತೂರಿ ತಿಲಕ ರಂಜಿಸುವ ಚಂ- ಪಕವ ಪೋಲುವ ನಾಸಿಕ ಎಸೆದು ಶೋಭಿಪ ಮೌಕ್ತಿಕ ಪೋಲುವ ದಂತ ನಸುನಗುತಿಹ ಹಸನ್ಮುಖ6 ಶಶಿಯ ಧರಿಸಿದ ಅಸಮ ಭಕುತನು ನಿಶಿಹಗಲು ತನ್ನ ಸತಿಗೆ ಬೆಸಸಿದ ಅತಿಶಯದ ಮಹಿಮೆಯನೆ ಕೇಳುವ ಮತಿಯ ಕೊಡು ಮನ್ಮಥನ ಪಿತನೆ 7 ಚಿತ್ತದೊಳಗೆ ನಿನ್ನಯ ಪಾದಾಂಬುಜ ಭಕ್ತಿಯಿಂದಲಿ ಕಾಂಬುವ ಭಕ್ತಜನರ ವೃಂದವ ಕರುಣದಿ ಕಾಯ್ವ ವಿಷ್ಣು ಮೂರುತಿ ಕೇಶವ 8 ಎತ್ತನೋಡಿದರಿಲ್ಲ ನಿನ್ನ ಸಮ ಉತ್ತಮರ ಕಾಣುವುದೆ ಮಿಥ್ಯವೊ ಸತ್ಯವಿದು ಪುರುಷೋತ್ತಮನೆ ಎನ್ನ ಚಿತ್ತದಲಿ ನಲಿನಲಿದು ಶ್ರೀಶ 9 ಕಮಲಸಂಭವ ಪಿತನೆ ಪ್ರಾರ್ಥಿಸುವೆ ಶ್ರೀ- ರಮೆಧರೆಯರಿಂ ಸೇವ್ಯನೆ ಕ್ಷಣಬಿಡದಲೆ ನಿನ್ನನೆ ಚಿಂತನೆ ಮಾಳ್ಪ ಸುಜನರಿಗೊಲಿಯುವನೆ 10 ಶ್ರವಣ ಮನನಕೆ ಒಲಿವ ದೇವನೆ ದಿನದಿನದಿ ನಿನ್ನ ಮಹಿಮೆ ತೋರು ಶ್ರೀ- ಕಮಲನಾಭ ವಿಠ್ಠಲನೆ ಕರುಣದಿ ಶ್ರಮವ ಹರಿಸುಸುಧಾಮ ಸಖನೆ11
--------------
ನಿಡಗುರುಕಿ ಜೀವೂಬಾಯಿ
ದೇವಾ ಬಾರಯ್ಯಾ ವೈಭವದಿ ರಥವನೇರಿ ಸೇವಿಸುವೆನು ಮಧ್ಭಾವದಿ ನೆಲಸೆಂದು ಪಾವನ ಮಣಿಪುರ ಠಾವಿನೊಳಿಹ ಭೂದೇವ ವರ್ಯ ಸಂಶೇವಿತ ಕೇಶವ ಪ ದೇವಗಂಗೆಯಪೆತ್ತ ಪಾವನಗಾತ್ರಧ್ರುವ ಭೂವರೋÀಪಾಸಿತನಾಗಿ ಈ ವಸುಧಿಗೆ ಬಂದು ಪಾವಮಾನ ಶಾಸ್ತ್ರದಿ ಕೋವಿದಯತಿ ವರ ಶ್ರೀ ವಿದ್ಯಾನಿಧಿ ತೀರ್ಥ ಸೇವಿತ ಸಂಸ್ಥಾಪಿತ ಸೇವಕ ಜನ ಸಂಭಾವಿತ ಕಾಮಿತ ವೀವ ಕಾವ ಸದಶಾವತಾರ ನಮೋ ಶ್ರಿವಿರಂಚಿಮುಖ ದೇವನ ಮಿತ ಕಂಚೀವರದನೆ ಪೊರೆ ಶ್ರೀ ವರಕೇಶವ 1 ಕಡು ಶೋಭಿಸುವ ಬಿಳಿಗೊಡೆ ಚಾಮರಾದಿಗಳ ಪಿಡಿದು ಶೇವಿಪ ಜನರೆಡಬಲದಿ ಬರೆ ಸುರರು ಪಂಥsÀವಿಡಿದು ವೇದಪಠಣ ಬಿಡದೆ ಮಾಡುತ ಬರೆ ನುಡಿವ ವಾದ್ಯಗಳಿಂದ ಸಡಗರದಲಿ ದ್ವಿಜಮಡದಿಯರಾರುತಿ ಪಿಡಿದು ಬೆಳಗುತಿರೆ ಕಡು ವೈಭವದಲಿ ಅಡಿಗೆರಗುವೆ ಪಾಲ್ಗಡಲ ಶಯನ ಮೂ- ರಡಿ ರೂಪನೆ ಜಗದೊಡೆಯ ಕೇಶವ 2 ನಂದ ತೀರ್ಥರ ಮತ ಸಿಂಧುವಿಗೆ ಪೂರ್ಣ ಚಂದ್ರರೆನಿಪಯತೀಂದ್ರ ಸತ್ಯ ಪ್ರಮೋದ ರಿಂದ ಪೂಜಿತ ಪದ ದ್ವಂದ್ವ ಮಧ್ಯದೊಳಿಹ ಮಂದಾಕಿನಿಗೆ ಪಿತನೆಂದು ತೋರಿಸಿದಂಥ ಇಂದಿರೆಯರಸನೆ ಮಂದರಧರ ಗೋ ವಿಂದ ಪಾಹಿ ಮುಕುಂದನೆ ಬಾಬಾ- ರೆಂದು ಕರೆವ ದ್ವಿಜ ವೃಂದಮಧ್ಯದಲಿ ಶ್ಯಂದನ ವೇರಿದ ಸುಂದರ ಕೇಶವ 3 ಅಂಬುಜನಾಭನೆ ನಿತಂಬದಿ ಪೊಳೆವ ಪೀ- ತಾಂಬರ ಧೃತ ಶಾತಕುಂಭ ಮಕುಟವದ- ನಾಂಬೋಜವನು ತೋರೋಕುಂಭೀನಸ ಪರಿಯಂಕ ಶಂಭ್ವಾದಿನಮಿತ ನೀಲಾಂಬುಧ ನಿಭಗಾತ್ರ ಕಂಬುಚಕ್ರಸುತ- ದಾಂಬುಜಧರ ಬಲು ಸಂಭ್ರಮದಲಿ ಮುನಿಕುಂಭಜ ಪೂಜಿತ ಕದಂಬ ದುರಿತ ಕಾದಂಬನಿ ಪವನ ಕೃ ಪಾಂಬುಧೆ ಕೇಶವ 4 ಗರುಡ ಮಾರುತರಿಂದ ಪರಶೇವಿತನೆ ಬಾರೊ ಶರಣು ಜನರ ಸುರತರುವೆ ಚನ್ನಕೇಶವ ಧರೆಯೊಳಧಿಕ ಮಣಿಪುರ ಪಂಡಿತಾಗ್ರಣಿ ಸನ್ನುತ ಸರಸಿಜಾಸನ ಪಿತ ಸಿರಿದೇವಿಯು ಈರೆರಡು ರೂಪದಲಿ ಕರದೊಳಗಾರುತಿ ವರಚಾಮರಗಳ ಧರಿಸಿ ಸಿರಿ ' ಕಾರ್ಪರ ನರಹರಿ ' ರೂಪನೆ ಮಾಂ ಪೊರೆವುದು ಕೇಶವ 5
--------------
ಕಾರ್ಪರ ನರಹರಿದಾಸರು
ದೇವಾದಿ ದೇವ ನಮೋ ಶ್ರೀ ಸತ್ಯದೇವ ಪ ದೇವಾದಿ ದೇವ ಹರಿ ಗೋವಿಂದ ಮುಕುಂದ ಭಾವಜನಕ ಸದ್ಭಾವುಕ ಜನಪ್ರಿಯ ಅ.ಪ. ಶ್ರೀಶಾ ಶಶಿಕೋಟಿ ಸಂಕಾಶ ಸುಶೋಭಿತ ದರಹಾಸ ಸುಜನ ಪರಿಪೋಷ ಸನ್ನುತ ಸರ್ವೇಶ ಈಶಾ ಈ ಸಮಸ್ತ ಜಗದೀಶನೆಂದು ನಿನ್ನ ನಾ ಸ್ತುತಿಸುವೆ ಮನದಾಸೆಯ ಸಲ್ಲಿಸೊ ವಾಸವಾದಿ ಸುರಮಹಿಮ ಪ ರೇಶ ಪೂರ್ಣಗುಣ ದಾಸಜನಾವನ ಕ್ಲೇಶವ ಕಳೆದಿನ್ನು ನೀ ಸರ್ವದ ಎನ್ನ ಪೋಷಿಸು ಕರಿಗಿರಿ ವಾಸ ಶ್ರೀ ನರಹರಿ 1
--------------
ವರಾವಾಣಿರಾಮರಾಯದಾಸರು
ದೇವಾದಿ ದೇವಗೆಭಕ್ತ ಸಂಜೀವಗೆಶ್ರೀ ವಿಘ್ನೇಶ್ವರಗೆ ಜಯವೆಂದುಜಯವೆಂದು ಪಾರ್ವತೀಪುತ್ರಗೆಪಾವನಗಾತ್ರಗೆಫಣಿಯಜ್ಞ ಸೂತ್ರಗೆಹೂವಿನಾರತಿಯ ಬೆಳಗಿರೆ 1 ಸಿಂಧುರಗಮನೆಯರುಕುಂದಾಭರದನೆಯರುಇಂದುಶೇಖರಗೆ ಜಯವೆಂದುಜಯವೆಂದು ಇಂದ್ರಾದಿವಂದ್ಯಗೆನಿರ್ಜಿತಚಂದ್ರಗೆ ಸದ್ಗುಣಸಾಂದ್ರಗೆಕುಂದಣದಾರತಿಯ ಬೆಳಗಿರೆ 2 ವಾರಣದವನೆಗೆಧೀರಹೇರಂಬಗೆರಾವಣಾಸುರನ ಜಯಿಸಿದಜಯಿಸಿದಶರಣ ಮಂದಾರಗೆಶರಧಿ ಗಂಭೀರಗೆಕೌಸ್ತುಭಹಾರಗೆಮೇರುವೆಯಾರತಿಯ ಬೆಳಗಿರೆ 3 ಸುರರು ಹೂಮಳೆಗರೆಯೆತರುಣಿಯರ್ಪಾಡಲುಸುರದುಂದುಭಿ ಮೊಳಗೆ ಜಯವೆಂದುಜಯವೆಂದುಸಿಂಧುರವರ್ನಗೆಶೂರ್ಪಸುಕರ್ನಗೆಸರ್ವತ್ರಪೂರ್ಣಗೆಕುರುಜಿನಾರತಿಯ ಬೆಳಗಿರೆ 4 ಪಂಕಜಾಂಬಿಕೆಯರುಭೋಂಕನೆ ಪಾಡಲುಶಂಕರನ ಪುತ್ರ ಜಯವೆಂದುಪಾವನವೇಷಗೆವರದ ಗಣೇಶಗೆಕುಂಕುಮದಾರತಿಯ ಬೆಳಗಿರೆ 5 ರಮ್ಯವಾದಲತಿಗೆಯರಸವ ಪಾದಕೆ ತೊಡೆದುಕಮ್ಮೆಣ್ಣೆಯನು ಕಂಠಕನುಲೇಪಿಸಿಸುಮ್ಮಾನದಿಂದ ಪಟವಾಸ ಚೂರ್ಣವತಳಿದುನಿಮ್ಮ ಪೂಜಿಸುವೆನು ಗೌರಿದೇವಿ 6 ವರಧೂಪದೀಪ ಪರಿಪರಿಯ ನೈವೇದ್ಯ ಭಾ-ಸುರ ಸುತಾಂಬೂಲ ಸೀಗುರಿದರ್ಪಣನಿರುಪಮ ಛತ್ರ ಚಮರಾದಿ ಸೇವೆಯನು ಸ್ವೀ-ಕರಿಸಿ ಪಾಲಿಸೆ ಎನ್ನ ಗೌರಿ ದೇವಿ ಜಯ 7 ಇಂತು ಪರಿಪರಿಯ ರಾಜೋಪಚಾರಗಳಿಂದಸಂತತವು ನಿಮ್ಮ ಪಾದವ ಪೂಜಿಸಿನಿಂತು ಕರವನೆ ಮುಗಿದು ಧ್ಯಾನಿಸುತ ನಲಿನಲಿದುಸಂತಸದಿ ನಿಮ್ಮ ಸ್ತುತಿಸುವೆನು ಗೌರಿ ಜಯ 8 ಮತ್ತೇಭಗಮನೆಗೆ ಮಾಹೇಂದ್ರಸನ್ನುತೆಗೆಅತ್ಯಂತ ಪರಮ ಪಾವನ ಚರಿತೆಗೆನಿತ್ಯ ಸೇವೆಯನು ಮಾಡುವರ ರಕ್ಷಿಸುವಂಥಪ್ರತ್ಯಕ್ಷಮೂರ್ತಿ ಶ್ರೀಗೌರಿ ನಿಮಗೆ ಜಯ9 ಕಲಕೀರವಾಣಿಗೆ ಕಾಳಾಹಿವೇಣಿಗೆಕಲಧೌತಕಮಲ ಶೋಭಿತಪಾಣಿಗೆನಳಿನದಳನೇತ್ರೆಗೆ ನಾರಾಯಣೆಗೆ ನಮ್ಮ-ನೊಲಿದು ರಕ್ಷಿಸುವಂಥಾ ಶ್ರೀಗೌರಿಗೆ ಜಯ 10 ಕುಂಭಸಂಭವನುತೆಗೆ ಜಂಭಾರಿಪೂಜಿತೆಗೆರಂಭಾಸುನರ್ತನಪ್ರಿಯೆಗೆ ಶಿವೆಗೆರಂಭೋರುಯುಗಳೆಗೆ ಬಿಂಬಾಧರೆಗೆ ನಮ್ಮಬೆಂಬಿಡದೆ ರಕ್ಷಿಸುವ ಗಿರಿಜಾತೆಗೆ ಜಯ 11 ಮುತ್ತೈದೆತನಗಳನು ನಿತ್ಯಸಂಪದಗಳನುಉತ್ತಮಾಂಬರ ಛತ್ರಚಾರಮವನುಅತ್ಯಂತ ಪ್ರೀತಿಯಿಂದಿತ್ತು ರಕ್ಷಿಸಿ ಭಕ್ತವತ್ಸಲೆ ಶ್ರೀ ಗೌರಿದೇವಿ ತಾಯೆ12 ಎಂದೆಂದು ಈ ಮನೆಗೆ ಕುಂದದೈಶ್ವರ್ಯವನುಚಂದವಾಗಿಹ ಪುತ್ರ ಪೌತ್ರರನ್ನುಸಾಂದ್ರಕೃಪೆಯಿಂದಿತ್ತು ಸಲಹೆ ಕೆಳದಿಯ ಪುರದಿನಿಂದ ಶ್ರೀ ಪಾರ್ವತಾದೇವಿ ತಾಯೆ ಜಯ 13
--------------
ಕೆಳದಿ ವೆಂಕಣ್ಣ ಕವಿ
ದ್ವಾದಶನಾಮ ನಿರ್ವಚನ ಶ್ರೀಕೃಷ್ಣ ನಿನ್ನ ಚರಣಾರವಿಂದಕ್ಕೆರಗಿ ಭಕುತಿಯಿಂ ನಿನ್ನ ಪನ್ನೆರಡು ರೂಪಗಳ ನಾಮ ನಿರ್ವಚನದಿಂ ಕೂಡಿ ನುತಿಸುವೆ ನಾನು ಸರ್ವಸಿದ್ಧಿಯನ್ನಿತ್ತು ಕಾಪಾಡು ಹರಿಯೆ 18 ಸೃಷ್ಟಿಲಯಕಾರಿಗಳು ಬೊಮ್ಮರುದ್ರರು ಇವರೆ ಕೇಶವೆಂಬಕ್ಷರದಿ ಮೆರೆಯುತ್ತಲಿಹರು ವರ್ತನವು ಯಾರಿಂದಲಹುದವನೆ ಪರದೇವ ಕೇಶವಾತ್ಮಕನವನು ಶ್ರೀಕೃಷ್ಣ ದೇವ 19 ನಾರವೆಂದರೆ ದೋಷ ಲೇಶವಿಲ್ಲದ ಗುಣವು ನಾರವೆಂದರೆ ನೀರು ಜೀವನಾಧಾರ ನಾರವಯನವು ಯಾರಿಗವನೆ ನಾರಾಯಣನು ರಜತಪೀಠದ ಪುರದ ಪರದೈವವವನು 20 ಮಾಧವನು ಮಾಲಕುಮಿಗೊಡೆಯನವ ಪರಮಾತ್ಮ ಮಾಯೆಯನು ಎದೆಯಲ್ಲಿ ತಾಳ್ದ ಸಿರಿವರನು ಮಾಯೆಯಿಂದಲಿ ಮಾನವಗೆ ಮುಸುಕನು ಹಾಕಿ ತನ್ನ ರೂಪವನಾರು ನೋಡದಂತಿಹನು 21 ಹಿರಿ ಬೆಟ್ಟವನು ತಾನು ಕಿರಿ ಬೆಟ್ಟಿನಲಿ ಹೊತ್ತು ಗೋವುಗಳ ರಕ್ಷಿಸಿದ ಗೋಪಾಲ ನೀನು ವೇದರಕ್ಷಕನಾಗಿ ಗೋವಿಂದನೆನಿಸಿರುವೆ ಶ್ರೀಕೃಷ್ಣ ನಿನ್ನ ಮಹಿಮೆಯನೇನ ಪೇಳ್ವೆ 22 ಚೇಷ್ಟಕನು ಬಲರೂಪನಾಗಿರುವ ಕಾರಣದಿ ವಿಶ್ವದಲ್ಲೆಲ್ಲು ವ್ಯಾಪಿಸಿರುವುದರಿಂ ವಿಷ್ಣುನಾಮದ ನೀನು ವೈಷ್ಣವರ ಕುಲದೊಡೆಯ ಮಧ್ವಹೃನ್ಮಂದಿರದ ನೆಲೆಯಲ್ಲಿ ಇರುವೆ 23 ಮಧುವೆಂಬ ದೈತ್ಯನನು ಸೃಜಿಸಿಯವನನು ಕೊಂದು ಮಧುಸೂದನನು ಎಂಬ ಬಿರುದು ನೀ ಪೊತ್ತೆ ದುರ್ಜನರ ಸಂಹಾರ ಸಜ್ಜನರ ಉದ್ಧಾರ ಎಂಬೆರಡು ಕಾರ್ಯಗಳಿಗಾಗಿಯವತಾರ 24 ತ್ರೈವಿಕ್ರಮಾವತಾರವ ತಾಳ್ದು ದೇವ ಕಾಲ ತೊಳೆದು ಮೂರು ಲೋಕದ ಭಕುತರಿಗೆ ದರ್ಶನವ ಕೊಟ್ಟು ಭಕ್ತರಕ್ಷಕನಾಗಿ ಮೆರೆದೆ ಸಿರಿವರನೆ25 ವಾಮನನು ನೀನಾಗಿ ವಾಮಪಂಥದಿ ಹೋಗಿ ಬಲಿ ಚಕ್ರವರ್ತಿಯಲಿ ಮೂಹೆಜ್ಜೆ ಬೇಡೆ ಭಕುತಿಯಿಂದವ ಕೊಡಲು ಮುಕುತಿಯನು ಕೊಡಲೆಂದು ಬಲಿಯ ಮನೆಯೂಳಿಗವ ಗೈದೆ ಪರಮಾತ್ಮ26 ಸಿರಿಯನೆದೆಯಲಿ ಪೊತ್ತು ಶ್ರೀಧರನು ನೀನಾಗಿ ಸರ್ವ ಭೂಷಣಗಳಿಂ ಶೋಭಿಸುತಲಿರುವೆ ಅನ್ನದಾತನು ನೀನು ಅನ್ನಭೋಕ್ತøವು ನೀನು ಭುಕ್ತಿ ಮುಕ್ತಿ ಪ್ರದನು ನೀನಿರುವೆ ದೇವ 27 ಇಂದ್ರಿಯಗಳು ಹೃಷೀಕಾಭಿಧಾನದಲಿಹವು ನೀನವುಗಳಿಗೆ ಎಲ್ಲ ಒಡೆಯನಾಗಿರುವೆ ಹೃಷೀಕೇಶ ನಾಮವದು ನಿನಗೊಪ್ಪುವದು ಹರಿಯೆ ನನ್ನ ಮನ ನಿನ್ನಡಿಯೊಳಿರುವಂತೆ ಮಾಡು28 ಸಾಗರವನುದರದಲ್ಲಿರಿಸಿ ನೀನದರಿಂದ ನಾಭಿಯಲಿ ಪದುಮವನು ಸೃಷ್ಟಿಸಿದೆ ದೇವಾ ಪದುಮನಾಭನು ನೀನು ಬೊಮ್ಮಪಿತನಾಗಿರುವೆ ಮಾಯಾ ರೂಪವನೇನಪೇಳ್ವೆ29 ಮೊಸರ ಕುಡಿಕೆಯನೊಡೆದು ತಾಯಿಯಿಂ ಬಂಧಿತನು ದಾಮೋದರನು ಎನಿಸಿ ಉಜಡೆಯನ್ನೊಯ್ದು ಮರಗಳೆಡೆಯಲಿ ಪೊಕ್ಕು ಬೀಳಿಸುತಲವುಗಳನು ಭಕುತರಾ ಶಾಪಮೋಚನೆಯ ನೀ ಮಾಡ್ದೆ30 ಕೇಶವನೆ ಮೊದಲಾದ ಪನ್ನೆರಡು ನಾಮಗಳ ಅರ್ಥವರಿತನವರತ ಪೇಳಲವಗೊಲಿದು ಸಂಸಾರ ಬಂಧನವ ತೊಲಗಿಸಿಯೆ ಪರಮಾತ್ಮ ತನ್ನ ಬಳಿಗೊಯ್ಯುವನು ನಿಜ ಪೇಳ್ವೆ ನಾನು31 ಶ್ವೇತ ರಕ್ತವು ಪೀತ ಕೃಷ್ಣ ವರ್ಣಗಳೆಂಬ ನಾಲ್ಕು ಬಣ್ಣದ ದೇವನೊಬ್ಬನೇ ಇಹನು ಕಲಿಯುಗದ ಕಾಲದಲಿ ಕೃಷ್ಣನೊಬ್ಬನ ನೆನೆದು ನಾಮಜಪ ಮಾಡಿದರೆ ಮುಕ್ತಿಯನು ಕೊಡುವ 32
--------------
ನಿಡಂಬೂರು ರಾಮದಾಸ
ಧ್ಯಾನ ಮಾಳ್ಪುದು ಮನಸಾ | ಹೃದಯಾರವಿಂದದಿಸಾನು ಕೂಲಿಪ ಅರಸ | ವಿಸ್ತರಿಸಿ ಗುಣಗಳಮೌನಿಯಾಗುತ ಸಹಸ | ಚಿಂತಿಸೆಲೊ ಅನಿಶಾ ಪ ಸಾನು ರಾಗದಿ ರೂಪಗುಣಗಳ | ಮಾನಮೇಯ ಜ್ಞಾನ ಸಹಿತದಿಏನು ಫಲದನು ರಾಗವಿಲ್ಲದೆ | ಶ್ರೀನಿವಾಸನ ಭಕುತಿಯಿಂದಲಿ ಅ.ಪ. ನತ ನಾ | ಸಾಗ್ರದಲಿ ದೃಷ್ಟಿಯನೆ ಇಡುತ 1 ಮಾನವ ಪ್ರಾಣ ನಿಯಮನ ವಾರ್ತಿ | ತಿಳಿಯುತ ಮನದಲಿಪ್ರಾಣ ರೇಚಕ ನೀತಿ | ಪೂರಕವು ಕುಂಭಕಜಾಣ ತನದಲಿ ಪೂರ್ತಿ | ಗೈದೋಂಕಾರ ಕೀರ್ತಿ ||ಪ್ರಾಣ ನಿರುತದಿ ಮಾಳ್ಪ ಅನು ಸಂಧಾನ ತಿಳಿದಾ ಚರಿಸೆ ವಿಹಿತದಿಪ್ರಾಣ ಸಂಯವ ಭಕ್ತಿ ಪೂರ್ವ ವಿ | ಧಾನ ಮಾಡಲು ವೇಗ ವಲಿದನು|2| ಹತ್ತು ಸಲ ಪ್ರತಿಸವನ | ಪ್ರಾಣನ್ನ ಸಂಯವ ಕರ್ತೃ ಹೀಗೆ ತ್ರಿಸದನ ಮಾಸಕ್ಕೆ ಮುಂಚೆಯೆಭರ್ತೃವಾಗಿಹ ಪ್ರಾಣ | ವಶನ ಹನು ಅವಗೆಂದುಉಕ್ತವಿದು ಸನ್ಮಾನ | ತಿಳಿದಾ ಚರಿಸು ಧ್ಯಾನ ||ಪೊತ್ತು ಕದಳಿಯ ಮೊಗ್ಗಿನಾಕೃತಿ | ಮತ್ತೆ ನಡು ಸತ್ಕರ್ಣಿಕವು ಇಹಹೃತ್ಸ ಅಷ್ಟದಳಾಖ್ಯ ಕಮಲವ | ಎತ್ತುವುದು - ಉದಯಾರ್ಕ ಮಂತ್ರದಿ |3| ಚಿಂತೆ ಕರ್ಣಕೆಯಲ್ಲಿ | ಮಾರ್ತಾಂಡ ಮಂಡಲಅಂತೆ ಅದರುಪರೀಲಿ | ತಾರೇಶ ಮಂಡಲಚಿಂತೆ ತದ್ದುಪರೀಲಿ | ಮಂಡಲ ವಿಭಾವಸುಅಂತೆ ತನ್ನಡುವೀಲಿ | ಹರಿಪದಾಜ್ಜಾಳಿ ||ಯಂತೆ ಚಿತ್ತ ಸ್ಥೈರ್ಯದಿಂದಲಿ | ಚಿಂತಿಸುತ ಗುಣರೂಪ ಕ್ರಿಯೆಗಳಕ್ರಾಂತನಾಗುವ ಹರಿಯ ಚರಣದಿ | ಶಾಂತ ಸತ್ಸಮಾಧಿಯನು ಪಡೆ 4 ಕಂಬು ಕುಂಡಲ ಮಕರ | ಶೋಭಿ ಕರ್ಣಾಪಾರ ||ಮಾರಪಿತ ಶಿರಿವತ್ಸ ಲಾಂಛನ | ಶ್ರೀ ರಮಾಪತೆ ಶ್ಯಾಮಸುಂದರಕಾರಣಿಕ ಕನಕಾಂಬರಾಧರ | ಹಾರ ಸುಮನ ವಿಶಾಲ ವಕ್ಷನ 5 ಕಂಬು ಕಟಿ ಸೂತ್ರಾಂಗದೈರ್ಯುತ | ವಸ್ತು ಸರ್ವಾಧಾರ ಹೃದ್ಯನ 6 ಧ್ಯಾನ ಬಹು ದುರ್ಭಾವ್ಯ | ಶ್ರೀಹರಿ ವಿಭೂತಿಯುಮನಕೆ ದುರ್ವಿಜ್ಞೇಯ | ಪೆಸರಿಹುದು ಕಾರಣಅನಘನಂಗವು ದೇಹ | ಒಂದೊಂದು ಸ್ಥಿರ ಪಡೆಪುನಹ ಸರ್ವಾವಯದ ಸ್ಥಿರ ತೆರದಿ ಧೇಯ ||ಎಣಿಸು ಪ್ರತ್ಯಾಹರಣ ಕಾರ್ಯವ | ವಿನಹವಿದು ಮನಸ್ಥೈರ್ಯವಾಗದುಅನಿಲದಯ ಸಂಪಾದಿಸುತ್ತಲಿ | ಗುಣಿಸು ನೈರಂತರ್ಯವೀತೆರ 7 ಶಿಷ್ಟನಾಗುತಲಿನ್ನು | ಅನ್ಯತ್ರ ಮನವನುಸುಷ್ಠು ಸೆಳೆಯುತಲಿನ್ನು | ಹರಿಪಾದ ವನಜದಿಘಟ್ಟ ಇಡುತಲಿ ಮುನ್ನ | ಸುಸ್ಥಿರದ ಚಿತ್ತದಿ ||ಪ್ರೇಷ್ಟ ತಮ ಅವನೆನ್ನು | ಸರ್ವಕಧಿಕೆನುನಷ್ಟವಾಗುತ ಭ್ರಾಮಕ ತ್ರಯ | ಶ್ರೇಷ್ಠ ಧ್ಯಾನಾಸಕ್ತನಾಗಲು ದೃಷ್ಟಿಸುತಲಿ ತತ್ವಪತಿಗಳ | ಇಷ್ಟ ಮೂರ್ತಿಯ ಕಾಂಬೆ ಕೊನೆಗೆ8 ಯೋಗವಿಹುದು ಸಮಾಧಿ | ಅಭ್ಯಾಸ ಸಾಧ್ಯ ನಿಯೋಗಿಸಿದನ ನಿರುತದಿ | ಸುಸ್ಥಿರದಿ ಚಿತ್ತವಯೋಗಿಸ್ಹರಿ ಚರಣದಿ | ಏನೊಂದು ಬೇಡದೆವೇಗ ಹರಿ ರೂಪದಿ | ನೋಡವನ ದಯದಿ ||ಆಗಮೈಕ ಸುವೇದ್ಯ ಭಕ್ತಿಯ | ಯೋಗ ಕೊಲಿಯುತ ಸಾಧಕಂಗೆಯೋಗಿ ಗುರು ಗೋವಿಂದ ವಿಠ್ಠಲ | ವೇಗತನ ದರ್ಶನವ ಪಾಲಿಪ 9
--------------
ಗುರುಗೋವಿಂದವಿಠಲರು
ಧ್ಯಾನವನು ಮಾಡು ಬಿಂಬ ಮೂರುತಿಯಪ ಆನಂದದಲಿ ಕುಳಿತು ಅಂತರಂಗದಲಿ ಅ.ಪ ಸದಾಚಾರನಾಗಿ ದ್ವಾದಶಗುರುಗಳಿಗೆರಗಿ ಮುದದಿಂದ ಮೂಲಮಂತ್ರವನು ಜಪಿಸಿ ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು ಪದಮಾಸನವ ಹಾಕಿ ಪರಮ ವಿಶ್ವಾಸದಲಿ1 ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು ಮಂಗಳ ಶೋಭಿತ ಅಖಂಡ ಧ್ಯಾನದಂತ ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ 2 ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ ಮಗುಳೆ ಪರಮ ಗುರುವಿನ ಮೂರ್ತಿಗೆ ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು3 ತಿರುಗಿ ಮೆಟ್ಟಿಕೆ ಮೂರು ವೇಗದಿಂದಲಿ ನಿನ್ನ ಲ್ಲಿರುವ ಮೂರ್ತಿಯಲ್ಲಿ ಚಿಂತನೆಯ ಮಾಡೊ ಭರದಿಂದ ಎಲ್ಲವನು ತಂದು ಹೃದಯದಲ್ಲಿ ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕಲೆಸು 4 ಆತನೆ ಬಿಂಬ ಮೂರುತಿಯೆಂದು ತಿಳಿದುಕೊ ಆ ತರುವಾಯ ನಾಡಿಗಳ ಗ್ರಹಿಸಿ ಆ ತೈಜಸನ ತಂದು ವಿಶ್ವಮೂರ್ತಿಯಲ್ಲಿ ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ 5 ಜ್ಞಾನ ಪ್ರಕಾಶದಲಿ ಇದ್ದು ನಿನ್ನ ಹೃದಯ ಕಮಲ ಮಧ್ಯ ಮೂರ್ತಿ ನಿಲ್ಲಿಸಿ ಬಾಹ್ಯದಲಿ ಏನೇನು ಪೂಜೆಯನು ಉಳ್ಳದನು ಮಾಡೊ6 ಗುಣ ನಾಲ್ಕರಿಂದಲಿ ಉಪಾಸನವನೆ ಮಾಡು ಕ್ಷಣ ಕ್ಷಣಕೆ ಹರಿಪಾದವನು ನೋಡುತ ಅಣುರೇಣು ಚೇತನಾಚೇತನಕೆ ನೇಮಕ ಫಣಿಶಯನನಲ್ಲದೆ ಮತ್ತೊಬ್ಬರಿಲ್ಲವೆಂದು 7 ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ ಸಮ ವಿಷಮ ತಿಳಿದೊಂದೆ ಭಕುತಿಯಲ್ಲಿ ಸ-ಮಾಧಿಗೊಳಗಾಗಿ ದಿವ್ಯ ದೃಷ್ಟಿಲಿ ಸರ್ವ ಕ್ರಮ ಅನುಕ್ರಮದಿಂದ ಭರಿತಭಾವುಕನಾಗೊ 8 ಪರಿ ಧೇನಿಸಲು ದೇವ ಕರುಣನ ಮಾಡೆ ಪಾಪ ಸಂಚಿತವು ಪ್ರಾರಬ್ಧ ನಾಶ ಅಪರೋಕ್ಷಿತನಾಗಿ ತನ್ನ ಯೋಗ್ಯತದಷ್ಟು ಗೋಪಾಲ ವಿಜಯವಿಠ್ಠಲನೊಲಿವನಾಗ9
--------------
ವಿಜಯದಾಸ