ಒಟ್ಟು 1166 ಕಡೆಗಳಲ್ಲಿ , 101 ದಾಸರು , 935 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ದೊರೆವುದೋ ಇಂತು ನರದೇಹ ಮುಂದೆ ಬಾಹ ದಿನ್ನೆಂದಿಗೆ ಇಚಿದು ಕರುಣಿಸಿ ಸಲಹುಯನ್ನ ಮು| ಕುಂದ ನಿನ್ನಂಘ್ರಿಗಳ ತೋರಿಸಿ 1 ಮೊದಲೇ ದುರ್ಲಭ ಮನುಷ್ಯಾಂಗವು ಅದರೊಳುತ್ತಮ ವರ್ಣದಿ ಉದಿಸಿ ಭಗವಂತಾಂಘ್ರಿ ದರುಶನ ವದಗಿ ಗತಿಗೈದಿಸುವ ಜನುಮವು 2 ಗುರುಹಿರಿಯರೆಂದೆರಿಸಿ ಅವರನು ಸ್ಮರಿಸಿ ಭಕ್ತಿಗೆ ಸೇರಿಸಿ ಮರೆಸಿ ಅನ್ಯವ ಬೆರೆಸಿ ನಿಜದೊಳು ತರಿಸಿ ತಾರಿಸುತಿಹ ಜನುಮವು 3 ಹರಿಯ ಲಾಂಛನ ಪೌಂಡ್ರವು ಕೊರಳು ತುಳಸಿಯ ಮಾಲೆಯಾ ಧರಿಸಿದಂಡಿಗೆ ವಿಡಿದು ಮಾಧವ ಚರಿತ ಪಾಡುತ ನಲಿವ ಜನುಮವು 4 ತನ್ನವರ ಪರಿಚಾರಕೆನಿಸುವ ಘನ್ನ ಬಿರದಿಗೆ ಪಾಲಿಸೀ ಸನ್ನುತನೆ ಗುರುಮಹಿಪತಿ ಪ್ರಭು ನಿನ್ನ ವಲುಮಿಂದಾದರಾಗಲಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂಥ ಕರುಣನಿಧಿಯೊ ನಮ್ಮನಂತ ರೂಪನು ಎಂಥ ಕರುಣನಿಧಿಯೊ ನಮ್ಮನಂತ ರೂಪನು ಕಂತುಪಿತನು ಸಂತತ ಭಕ್ತರ ಹೃದಯದಿ ನಿಂತು ಕಾರ್ಯ ಮಾಡುತಿಹನು ಪ ಏಕದಶಿಯ ನಿಶಿಯೊಳಾನು ತೋಕರುದರಕೆ ಬೇಕಾದೀತು ನೀಡಿ ಹೊರಗೇಕ ಕಾಲಕೆ ಕಡದಿದೇಕ ಸರ್ಪಪಾವಕೆ ಶೋಕಹರಣ ಹರಿಯ ನೆನೆ ಶ್ರೀಕರನೆನಕೈಯ ಪಿಡಿದಾ 1 ಕಡಲಶಯನನನುದಿನದೊಳು ಬಿಡದೆ ಭಜಿಸುತಾ ಕಡಲ ಮಗಳ ಕರುಣವಿಲ್ಲದೆ ಬಡವನೆನಿಸುತಾ ಇಡಲು ಹೆಜ್ಜೆ ಮಡದಿಯೆನ್ನನೊಡಸಿ ನುತಿಸುತಾ ಸಡಗರ ದಿಗ್ವಿಜಯರಾಮ ನುಡಿಯವಿಡಿದ ಧ್ಯಾನತೀರ್ಥ ಮನದಿ ನಲಿವ ಹರಿಯು 2 ಕಾಲ ಕಳೆಯುತಾ ಇರಲು ಕಾಯಕೆ ವ್ಯಾಧಿ ತೊಡರಿ ಬಾಧೆಗೊಳಿಸುತಾ ಹರಿ ಪೂಜೆಗೆ ಹರಿವ ಮನವ ಕಟ್ಟುಮಾಡುತ ಹರಿಯ ಧ್ಯಾನದರಿವು ಹಾರಿ ಉರುಳುತಿರಲು ಧರೆಯ ಮೇಲೆ ಕರುಣದಿ ನರಸಿಂಹವಿಠಲ ದಣುವನಳಿದು ತನುವ ಪೊರೆದಾ 3
--------------
ನರಸಿಂಹವಿಠಲರು
ಎಂಥ ಸುಂದರವಾದ ವೃಂದಾವನಾನಿಂತು ನೋಡಲು ಮನಕೆ ಸಂತೋಷವಾಗುವದು ಪಶ್ರೀ ರಾಘವೇಂದ್ರ ಗುರುಸಾರ್ವಭೌಮರ ದಿವ್ಯಧೀರ ಗಂಭೀರ ಸುಮನೋಹರ ಸುಮೂರ್ತಿರಾರಾಜಿಸುತಿಹುದು ಮುಗಳುನಗೆ ಮುಖದಿಂದಾಶರಣಾಗತರಿಗೆಲ್ಲ ಅಭಯ ಹಸ್ತವ ನೀಡಿ 1ಪ್ರೇರಕರು ತಾವಾಗಿ ಪ್ರೇರ್ಯರೊಬ್ಬನ ಮಾಡಿಕಾರಾಗಿರನ ಕನಸು ಮನಸಿನಲಿ ಪೋಗಿಇರಬೇಕು 'ೀಗೆಂಬ ವೃಂದಾವನದಿ ಚಿತ್ರತೋರಿಸುತ ಅಂತರಂಗದಿ ನಿಂದು ಮಾಡಿಸಿದ 2ಅಡಿಗಡಿಗೆ ಮ'ಮೆಯನು ತೋರಿಸುತ ಗಲಗಲಿಗೆನಡೆತಂದು ಶ್ರೀ ಮಠವ ಹ'್ಮುಕೊಂಡಿಹರುಸಡಗರದಿ ಭಕುತರಿಂ ಸೇವೆಕೊಳ್ಳುತಲಿಹರುಬಡವರಿಗೆ ಭಾಗ್ಯ ನಿಧಿಯು ಬಂದಂತೆ ಆಯ್ತು 3ಅಲ್ಲಿ ಮಂತ್ರಾಲಯವು ಇಲ್ಲಿ ಗಾಲವಕ್ಷೇತ್ರಅಲ್ಲಿ ತುಂಗಾ ಇಲ್ಲಿ ಕೃಷ್ಣವೇಣಿಅಲ್ಲಿ ಪ್ರಹ್ಲಾದರಾಜ ಯೋಗ ಮಾಡಿದನು ಇಲ್ಲಿತಪವ ಗೈದಿಹರು ಗಾಲವ ಮರ್ಹಗಳು 4ಅಲ್ಲಿ ರಾಯರಬಂಡಿ ಇಲ್ಲಿ ಋಗಳ ಬಂಡಿಅಲ್ಲಿ ಮಂಚಾಲೆಮ್ಮಾ ಇಲ್ಲಿ ಜಗದಂಬಾಅಲ್ಲಿ ಹೊಳೆದಾಟಿದರೆ ಪಂಚಮುಖಿಪ್ರಾಣೇಶಇಲ್ಲಿ ಹೊಳೆ ದಾಟಿದರೆ ಸಂಜೀವ ಪ್ರಾಣೇಶ 5ಕಲಿಯುಗದ ಸುರಧೇನು ಕಲ್ಪತರು ಗುರುರಾಯಗಲಗಲಿಯ ಭಾಗ್ಯ'ದು ಬಂದು ನಿಲಿಸಿಹನುಕಲುಷವರ್ಜಿತರಾಗಿ ದರುಶನವ ಮಾಡಿದರೆಕರೆದು ಈಪ್ಸಿತವ ಕೊಡುವ ಪರಮ ಕರುಣಾಳು 6ಪಾಪಿ ಕೋಪಿಷ್ಠರಿಗೆ ಸೇವೆ ದಕ್ಕುವದಿಲ್ಲಮಾಂ ಪಾ' ಪಾ' ಎಂಬುವ ಭಕುತರಾತಾಪತ್ರಯವ ಕಳೆದು ಸುಪ'ತ್ರರನು ಮಾಡಿಭೂಪತಿ'ಠ್ಠಲನ ಅಪರೋಕ್ಷ ಮಾಡಿಸುವ 7
--------------
ಭೂಪತಿ ವಿಠಲರು
ಎಂಥಾ ದಯವಂತ ನೀತನೊ | ಭಾರತಿ ಕಾಂತಅಂತರ್ಬಹಿ ವ್ಯಾಪ್ತನೋ ಪ ಸಂತತ ಶ್ವಾಸೋಚ್ಛ್ವಾಸ | ಮಂತ್ರ ತಾ ಜಪಿಸುತ ಶಾಂತೀಶ ಪಾದದಲ್ಲಿ | ಕ್ರಾಂತನಾಗಿಹ ನೀತ ಅ.ಪ. ಸೂರ್ಯ ಕೋಟಿ ಸಂಕಾಶದಿ ಪರಿಕಿಪ 1 ಪ್ರಾಣಾ - ಅಪಾನ - ಸಮಾನ | ಮತ್ತೆರಡು | ವ್ಯಾನಾ ಉದಾನರಲ್ಲಿರುತಾ ||ಪ್ರಾಣಿಗಳೊಳಗಿದ್ದು | ಜಾಣ ತನದಿ ತಾನುನಾನಾ ಕರ್ಮವ ಮುಖ್ಯ | ಪ್ರಾಣಾ ತಾನೇವೆ ಮಾಳ್ಪ ||ಪ್ರಾಣನ ಮಹಿಮಾನಂತವೆ | ವಾಣಿ ಮುಖಾದ್ಯರು ಎಣಿಸಲಸು ಅಳವೇ ನಾನಾ ರೂಪದಿ ಶ್ರೀನಿವಾಸ ಪದಧ್ಯಾನಾರಾಧಕ ನೆನಿಸುತ ಮೆರೆವಾ 2 ಸುರರಾ ಮೊರೆಯ ಕೇಳುತ | ಪರಿಸರ | ಹರಿಯ ಮತವ ಸಾರಿದ ||ಗುರು ಗೋವಿಂದ ವಿಠಲ | ಸರ್ವಾಧಿಕನು ಎಂದುಸರ್ವ ಶಾಸ್ತ್ರವ ನಿರ್ಣ | ಯವ ಮಾಡಿದ ನೀತ ||ಸರ್ವನಾಮಾಭಿಧ | ಸರ್ವ ನಿಯಾಮಕ | ಸರ್ವ ವ್ಯಾಪ್ತಹರಿ | ಕರುಣವಿಲ್ಲದಲೆಹರಿ ಚರಣಾಂಬುಜ | ದೊರಕದೆಂದನುತಲಿಸರ್ವಾಗಮಗಳ | ಸಾರವ ನ್ವೊರೆದ 3
--------------
ಗುರುಗೋವಿಂದವಿಠಲರು
ಎಂಥಾತ ಎಂಥಾತನೋ ನಮ್ಮಯ ರಂಗ ಎಂಥಾತ ಎಂಥಾತನೋ ಪ ಎಂಥಾತ ಎಂಥಾತ ಚಿಂತಾಯಕ ಭಕ್ತ ರಂತರಾತ್ಮಕ ಲಕ್ಷ್ಮೀಕಾಂತ ತ್ರಿಲೋಕ ಕರ್ತ ಅ.ಪ ದಿವನಿಶಿಯಾಗಿಹ್ಯನೋ ತಾನೆ ತ್ರಿ ಭುವನವ ಬೆಳಗುವನೋ ಸವಿಯದ ಮಹಿಮರಲವಬಿಡದ್ವೇದ ಒಂದೇ ಸಮನೆ ಪೊಗಳುತಿರೆ ಇವನು ಕಾಣದಲಿಹ್ಯ 1 ತಿಥಿ ವಾರ ಪಕ್ಷ ತಾನೇ ತಾನೆ ಮಾಸ ನಿತ್ಯ ತಾನೇ ಶ್ರುತಿತತಿ ಯತಿಗಳು ಸತತ ಪೊಗಳುತಿರೆ ಮತಿಗೆ ನಿಲುಕದಂಥ ಅತಿ ಚರಿತ್ರನಿವ 2 ನಗುವಳುವರಲಿ ಈತನೇ ನಿಂತುಕೊಂಡು ಸಿಗಿವ ಬಗಿವರಲೀತನೇ ನಿಗಮಾತೀತನ ಮಹಿಮದ್ಹಗರಣ ತಿಳಿಯದು ಸುಗುಣ ಸಂತರೊಶ ಜಗದಯ್ಯ ಶ್ರೀರಾಮ 3
--------------
ರಾಮದಾಸರು
ಎಂದಪ್ಪಿಕೊಂಬೆ ರಂಗಯ್ಯನ ಎಂದಪ್ಪಿಕೊಂಬೆ ಪ ಎಂದಪ್ಪಿಕೊಂಬೆನೋ ಎಂದು ಮುದ್ದಾಡುವೆನಂದ ಕಂದನ ಗೋವಿಂದನೆಂಬುವ ಕೂಸ ಅ.ಪ. ಕರದಲಿ ತನ್ನಯ ಬೆರಳು ಬಾಯೊಳಗಿಟ್ಟುಜುರು ಜುರು ಚೀಪುವ ವರಮುದ್ದು ಬಾಲನ1 ಗುರುಳು ಮಧ್ಯದಿ ರತ್ನ ಅರಳೆಲೆ ಹೊಳೆಯುತಜರದ ಕುಂಚಿಗೆ ಹೊದ್ದು ಚರಿಸುವ ಕೂಸಿನ್ನ 2 ಪುಟ್ಟ ಪುಟ್ಹೆಜ್ಜೆಯನಿಟ್ಟು ಗೋಕುಲದೊಳುತುಷ್ಟಿ ನೀಡಲು ಬಾಲಕೃಷ್ಣನೆಂಬುವ ಕೂಸ 3 ಬಾಲೆರ ಮನೆಪೊಕ್ಕು ಪಾಲುಮೊಸರು ತಿಂದಲೀಲೆ ಮಾಡುತ ಅಂಬೆಗಾಲನಿಕ್ಕುವ ಕೂಸ 4 ಕಾಲಕಡಗ ರುಳಿಯ ಪೂಲು ಪೈಜಣನಿಟ್ಟುಮ್ಯಾಲೆ ಉಡುದಾರ ಪೊಳೆವಂಥ ಕೃಷ್ಣನ5 ತಂದೆ ತಾಯರ ಮುಂದೆ ನಿಂದು ಮಾತಾಡಿದನಂದ ಬಾಲಕನಾದ ಇಂದಿರೇಶನೆ ಬೇಗ 6
--------------
ಇಂದಿರೇಶರು
ಎಂದಿಗಾದರು ಒಮ್ಮೆ ಕೊಡು ಕಂಡ್ಯ ಹರಿಯೆ ಪ ಬೃಂದಾವನಪತಿ ದಯದಿಂದಲೆನಗೆ ಅ ಫಲಭಾರಗಳಿಂದ ತಲೆವಾಗಿ ಶುಕಪಿಕಕಲಕಲದೊಳು ನಿನ್ನ ತುತಿಸಿ ತುಂಬೆಗಳಗಳರವದಿಂ ಪಾಡಿ ಅಪ್ಸರರಂತೆ ಪೂ-ಮಳೆಯಗರೆವ ತರುಲತೆಯ ಜನ್ಮವನು1 ಕೊಳಲ ಶೃತಿಯ ಕೇಳಿ ಸುಖದ ಸಂಭ್ರಮದಲಿಹೊಲಬು ತಪ್ಪಿ ತಾವು ಅರೆಗಣ್ಣು ಮುಚ್ಚಿನಳಿನಾಸನದಿ ಮೌನಗೊಂಡು ಪರಮ ಹಂಸಕುಲದಂತೆ ಧ್ಯಾನಿಪ ಹಂಸ ಜನ್ಮವನು 2 ಚಕೋರ ಜನ್ಮವನು3 ಭಾವಜನೈಯನ ಕಡುಚಲ್ವಿಕೆಯನ್ನುಭಾವಿಸಿ ನಿಡುಗಂಗಳಿಂದ ದಣಿದುಂಡುಗೋವಳೇರಂತೆ ಮನೆ ಮಕ್ಕಳ ಹಿಂಗಿ ನಿನ್ನ ಆವಾಗ ಈಕ್ಷಿಸುವ ಗೋವ್ಗಳ ಜನ್ಮವನ್ನು 4 ತೋಳದಂಡಿಗೆಮಾಡಿ ಹೀಲಿಯ ಚಾಮರವಮೇಲೆ ಎತ್ತಿದ ತಾವರೆ ಗೊಂಡೆಯಿಂದಓಲೈಸಿ ನಿನ್ನನು ಒಲಿಸಿ ಮುಕುತರಂತೆನಾಲೋಕ್ಯ ಸುಖವುಂಬ ಗೋಪರ ಜನ್ಮವನು5 ಕೊಳಲ ಧ್ವನಿಯ ಕೇಳಿ ಎದುರುಗೊಳ್ಳುತ ನಿನ್ನನಳಿನನಾಭಾ ಅವಧಾರೆಂದು ಪೊಗಳೇತಳಿಗೆ ಆರತಿಯೆತ್ತಿ ಲಕ್ಷ್ಮಿಯಂತೆ ನಿನ್ನಚೆಲುವ ಸವಿವಂಥ ಗೋಪೇರ ಜನ್ಮವನು 6 ಇಂದಿರೆಯರಸ ಬ್ರಹ್ಮೇಂದ್ರಾದಿ ವಂದಿತಎಂದು ಮೊಸರ ಕಡೆಯುತ್ತಲಿ ನಿನ್ನಅಂದಿನ ಶ್ರುತಿಯೋ ಉಪ್ಪವಡಿಪ ವ್ರಜ-ದಿಂದುಮುಖಿಯರ ಜನ್ಮವ ಸಿರಿಕೃಷ್ಣ7
--------------
ವ್ಯಾಸರಾಯರು
ಎಂದು ನೀ ನೀಡುವಿಯೊ ಮನಶಾಂತಿ ಗೋವಿಂದನೆ ಎನಗೆ ಒಂದೂ ತೋರದೆ ಕವಿದಿಹುದೊ ಭ್ರಾಂತಿ ಪ ಒಂದು ಘಳಿಗೆ ನಿನ್ನ ಪೊಗಳುವೆನೆಂದರೆ ಬಂದೊದಗುವುದೊ ಕುಂದು ಸಹಸ್ರವು ಅ.ಪ ಅನುದಿನ ಗಣನೆಗೆ ಬಾರದ ನುಡಿಗೆ ಕೊನೆಮೊದಲುಗಳಿಲ್ಲದೆ ದಿನಗಳು ಕಳೆದುವು ದುರ್ವಿಷಯದಲಿ ಎಣೆಯಿಲ್ಲದೆ ಎನ್ನ ಮನದಲಿ ಬೇಸರ ಜನಿಸಿ ಕೊರೆಯುತಿದೆ ಅನವರತದಿ ನಿನ್ನ ಮನನದಿ ನಲಿಯಲು 1 ಮರುಳು ಮೋಸಗಳಲಿ ಚತುರತೆಯುಳ್ಳ ದುರುಳರು ಸಂತತ ಮುಖ ವರಳುವ ತೆರದಲಿ ಸಡಗರದಿಂದ ಒರಲುವ ವಚನಗಳ ತಿರುಳುಗಳೆಲ್ಲವನರಿತು ಮನ ತೆರಳದೆ ಸಹಿಸುತ ನರಳುತಿರುವೆನೊ2 ಬಗೆ ಬಗೆ ಮಾಡುತಲಿರುವ ದುರಾಶೆಯಗಲಿದೆ ಮನವನ್ನು ಹಗರಣ ಮಾಡಿದೆನೋ ಜೀವನವ ನಗೆಗೀಡಾದೆನು ನಾ ಹಗೆ ಪಡ್ವರ್ಗವನೊಗೆದು ತವಚರಣ ಯುಗಳದಲಿ ಮನವು ಪ್ರಸನ್ನವಾಗುವಂತೆ 3
--------------
ವಿದ್ಯಾಪ್ರಸನ್ನತೀರ್ಥರು
ಎಂದೆಂದಿಗೂ ಎರಡು ಒಂದಾಗವು | ಒಂದೆ ಕುಲದಲಿ ಜನಿಸಿದ ಪಕ್ಷಿಗಳು ಪ ಒಂದೇ ರೂಪಪಕ್ಷಿ ಒಂದರಲಿ ತಿರಗೋವು | ಒಂದೀಗ ಪಂಚವರ್ಣದ ಕೋವಿದಾ || ಒಂದೆಲ್ಲ ಸಮನೆಂದು ಪೇಳುತ ಬದುಕುವುದು | ಒಂದಕ್ಕೆ ಗುರುತು ಮತ್ತೊಂದಕ್ಕೆ ಯಿಲ್ಲ 1 ಒಂದೇ ಕೊಂಬಿನಲಿ ಎರಡು ಸೇರಿಕೊಂಡು | ಒಂದು ಸಾರವನುಂಬದೊಂದರಿಯದು || ಒಂದು ಬುದ್ಧಿಯಲ್ಲಿಪ್ಪದೊಂದು ಇರಲೊಲ್ಲದು | ಒಂದು ನಾನೆಂಬೋದು ಮತ್ತೊಂದು ಪೇಳದು 2 ಒಂದೀಗ ತನ್ನ ಫಲ ಪರರಿಗೆ ಕೊಡುವದು | ಒಂದು ತನ್ನ ಫಲ ತಾ ತಿಂಬೋದು || ಒಂದು ಏರು ಇಳಿವ ಮೆಟ್ಟಗಳು ಬಲ್ಲದು | ಒಂದೀಗ ಕಾಣದೆ ಕಮರಿ ಬೀಳುವದು 3 ಒಂದು ಸುಡಗಾಡು ಸಿದ್ಧ ಎಂದು ಕೂಗುವದು | ಒಂದು ಕೂಗುವದು ಪ್ರಸಿದ್ಧನೆಂದು || ಒಂದು ಬೆಳೆದಿಂಗಳೊಳು ಹರುಷದಲಿ ಆಡುವದು | ಒಂದು ಕತ್ತಲೆಯೊಳು ಆಡುವುದು ನಿತ್ಯಾ 4 ಒಂದಕೆ ಒಂದು ಸಂವಾದವನು ಮಾಡುವವು | ಹಾರುವುದು | ಪುರಂದರ ವಿಜಯವಿಠ್ಠಲನ್ನ | ಒಂದು ಪೊಂದಿತು | ಒಂದು ಪೊಂದದಲೆ ಹೋಯಿತು 5
--------------
ವಿಜಯದಾಸ
ಎಂದೆಂದು ಎನಗೆ ನೀನೆ ಅಖಿಳದೊಳು ಎಂದೆಂದು ಎನಗೆ ನೀನೆ ಅಂದಿಗಿಂದಿಗೆ ಎನ್ನ ತಂದೆ ತಾಯಿಯು ನೀನೆ ಬಂಧು ಬಳಗವು ನೀಯೆನಗೆ ಹರಿಯೆ ಧ್ರುವ ಸುಖಸೌಖ್ಯದಲಿ ಸದಾನಂದ ಘನ ಬೀರುತಿಹ್ಯ ಭಗುತ ಜನರಿಗಹುದು ನೀ ಪ್ರೀಯ ಸಕಲದೇವಾದಿಗಳ ಕೈಯಲೊಂದಿಸಿಕೊಂಬ ಮಕುಟ ಮಣಿಯಹುದೊ ನೀ ಎನ್ನಯ್ಯ ಲೋಕಾಧಿಲೋಕಪಾಲನೆಂದು ಶ್ರುತಿಸ್ಮøತಿ ಅಖಿಳ ಭುವನದಲೆನ್ನ ಸಾಕಿ ಸಲಹುವ ಸ್ವಾಮಿ 1 ಏಕೋದೇವನೆ ನೀನದ್ವಿತೀಯ ಶ್ರೇಯಧೇನುವಾಗಿ ಸಾರಸಗರವುತಿಹ್ಯ ಸುಖ ದಾಯಕಹುದಯ್ಯ ನೀ ಸಾಕ್ಷಾತ ದಯಕರುಣದಿಂದಭಯಕರ ನಿತ್ಯಸಂಗಪೂರ್ಣ ತೋಯಜಾಕ್ಷ ನೀ ಪೂರ್ಣಪರಮ ಭಕ್ತರ ಪ್ರಾಣ ನಾಯಕನೆ ನೀನೆ ಪ್ರಖ್ಯಾತ ಕ್ಷಯರಹಿತನೆಂದು ಜಯವೆನಿಸಿಕೊಳುತಿಹ್ಯ ದಯಭರಿತನಹುದುಯ್ಯ ಸದೋದಿತ 2 ನೀನೆ ಗತಿಯೆಂದು ಧರೆಯೊಳು ಕೊಂಡಾಡುವ ನೆನಹುತಿಹ್ಯ ನÀಹುದುಯ್ಯ ಬಾಲಕನು ನಾ ನಿನ್ನ ಫನದೊಲವಿನಿಂದ ಪಾವನಗೈಸುತಲಿಹ್ಯ ದೀನ ದಯಾಳು ನೀನೆ ಎನ್ನ ಅನುದಿನದಲಾಧಾರಿ ಮುನಿಜನರ ಸಹಕಾರಿ ನೀನಹುದಯ್ಯ ಜಗಜ್ಜೀವನ ಮನೋಹರನ ಮಾಡುತಿಹ್ಯ ದಾಸ ಮಹಿಪತಿಸ್ವಾಮಿಭಾನುಕೋಟಿಯು ನೀನು ಪ್ರಸನ್ನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಂದೆನ್ನ ಪೊರೆವೆÀ ಶ್ರೀರಂಗಧಾಮ ಎಂದೆನ್ನ ಪೊರೆವೆ ಪ. ಎಂದೆನ್ನ ಪೊರೆವೆ ಎಂದೆನ್ನ ಕರೆವೆ ಮಂದಹಾಸ ಮುಖನೆ ಎಂದೆನ್ನನೀಕ್ಷಿಸುವೆ ಅ.ಪ. ಶ್ರೀಶ ವೈಕುಂಠದಿ ಸಾಸಿರ ಫಣೆಯುಳ್ಳ ಶೇಷಶಯನ ಎನ್ನ ಘಾಸಿಗೊಳಿಸಿದೆ 1 ಅರವಿಂದನಯನನೆ ಅರವಿಂದ ದಳ ಪೋಲ್ವ ವರಹಸ್ತವನೆ ಎನ್ನ ಶಿರದ ಮೇಲಿಡುತಲಿ 2 ಬಳಲಬೇಡೆಂತೆಂದು ನಳಿತೋಳಿನಿಂದೆತ್ತಿ ನಳಿನನಾಭನೆ ಎನ್ನ ಬಳಲಿಕೆ ಬಿಡಿಸುತ್ತ 3 ಮುಕ್ತರ ಸಂಗಡ ಮುಕ್ತೇಶ ಎನ್ನಲ್ಪ ಶಕ್ತಿ ಸೇವೆಯ ಕೊಳುತ ಮುಕ್ತಾರ್ಥದಾಯಕ4 ವ್ಯಾಪಕ ಶ್ರೀಗುರು ಸ್ಥಾಪಕ ಮನದಲ್ಲಿ ಪರಿ ದಯೆಗೈದು 5
--------------
ಅಂಬಾಬಾಯಿ
ಎದ್ದಳೀಗಿದಕೋ ಶ್ರೀರಮಣಿ || ಎದ್ದಳೀಗಿದಕೋ ಪ ಮುದ್ದು ಶ್ರೀ ಹರಿಯಾ ತೋಳ ತೆಕ್ಕೆಯಾನುಸಳಿ ಶುದ್ಧ ರಾತ್ರಿಲಿ ಹರಿ ರತಿಯೊಳು ಮಲಗಿ ಅ.ಪ. ಸರಸಿಜ ಸಖನ ಮುಂಬೆಳಗವ ಹರಿಯಲು | ಭರದಲಿ ಹಕ್ಕಿಯು ಕಲಕಲವೆನಲು 1 ನಾರದ ತುಂಬುರ ಮಾಡುವ ಪ್ರಾತ:| ಸ್ಮರಣೆಯ ಗಾಯನ ಧ್ವನಿಯನು ಕೇಳಿ 2 ಕರತಳದಲಿಯವಿಗಳನು - ವರೆಸುತಲಿ | ತೆರೆವುತ ಮುಚ್ಚುತ ಅರೆಗಣ್ಣ ನೋಟದಿ 3 ಬಾಯೊಳಗಿನ ತಂಬುಲವ ನುಗುಳುತ | ಅಧರ ವಕೆಂಪವ ನಡಗಿಸುತ 4 ಕಿರಿಬೆಮರವ ಕೊನೆ ಯುಗುರದಿ ಹಾರಿಸಿ | ಕುರುಳು ಗೂದಲು ಬೈತಲು ನೀಟಾಮಾಡುವ5 ಸಡಲಿದ ಅಲರ ಮುಡಿಯಾತಿದ್ದಿ ಬಿಗಿವುತಾ | ಒಡನೆ ಕೊರಳಾ ಭರಣವ ತಿರುಹುತಲಿ 6 ಎಡಬಲ ಕೊಲದ ವಡ್ಯಾಣ ಸರಿಸಿ ಉಟ್ಟಾ | ಉಡಿಗಿಯಾ ನಿರಯಾ ಮುಂದಕ sಸಾಂವರಿಸುತ7 ಪ್ರಕಟದಿದೋರ್ವ ಕುಚದ ನಖಕ್ಷತಗಳ | ಯುಕುತಿಲಿ ಅಡಗಿಸಿ ಪುಟವನು ಬಿಗಿವುತ 8 ತನ್ನನಂಬಿದ ಬಾಲರ ಹೊರಿಯಲುದಯ | ಕಮಠ ನ್ಯಾಯದಲಿ9 ಈರೇಳು ಜಗದ ಜೀವನ ಪಡೆದ ಜನನಿ | ಗುರುಮಹಿ ಪತಿಸುತ ಪ್ರಭುವಿನ ಅರಸಿ10
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎದ್ದುನಿಂತ ಬಂದು ನಿಂತ ಮುಂದೆ ನಿಂದಂಥಮಾರಾಂತರ್ಗೆ ಕೃತಾಂತ ನಿಶ್ಚಿಂತ ಹನುಮಂತಬಲವಂತ ಯೆದೆಗೊಂತ ತನಪಂಥ ಸಲಲೆನುತಸÀಂತರಿಗೆ ಸಂತತ ಶಾಂತ ನಿಂತ ಮಾರಾಂತ ಕೃತಾಂತ ಪ. ದುರುಳ ರಾವಣನ ವನದ ತರುವಿನ ಕೊನೆಯೇರಿದಕರಚರಣಗಳ ಘಾಯದಿ ಮರಂಗಳ ಮುರಿದಅರಿಗಜ ಗಂಡಭೇರುಂಡನೆಂಬ ತನ್ನ ಬಲುಬಿರುದಮೆರೆದು ಮಾರುತಿ ಪ್ರತಿಭಟರ ಶಿರಂಗಳ ತರಿದ 1 ಸೀತೆಗೆ ಉಂಗುರವನ್ನಿತ್ತು ಮತ್ತೆ ಕೈಗಳ ಮುಗಿದಪ್ರೀತಿಯಿಂ ಪೊನ್ನಕಚ್ಚುಟಕ್ಕಿಟ್ಟ ಗಂಟನು ಬಿಗಿದಖ್ಯಾತ ಮಂಡೋದರಿಕುವರನ ಬಸುರನು ಬಗಿದವಾತಸುತನು ವೈರಿಪುರವ ಸುಡಲು ತೊಡಗಿದ 2 ನಲಿದು ಲಂಘಿಸಿ ನಳನಳಿಸುವ ಬಾಲವನೆತ್ತಿಖಳರೆದೆ ಶೂಲ ಹುಬ್ಬುಗಳ ಗಂಟಿಕ್ಕಿ ನೋಡುವ ಅರ್ಥಿಆಳುತಲಿಹ ಅಬಲೆಯರ ಭಯಂಕರಮೂರ್ತಿಸುಳಿದನು ಕೇರಿಕೇರಿಯಲಸುರರ ನುಗ್ಗೊತ್ತಿ 3 ಲಂಕಾನಗರಿಯ ಪುಚ್ಚದ ಕಿಚ್ಚಿಂದ ಸುಟ್ಟಹುಂಕರಿಸುತ ಅಹಿತರ ಬೇಗ ತೆಗೆದೊಗದಿಟ್ಟಕಂಕಣ ಮಕುಟ ಹಾರಂಗಳಿಂದೊಪ್ಪುವ ಬಲುದಿಟ್ಟಶಂಕೆಯಿಲ್ಲದನಿಲಜ ಶತ್ರುಗಳಿಗಿಂತರ್ಥಿಯ ಕೊಟ್ಟ 4 ಹೋಗೆಲೊ ಕಪಿಯೆನೆ ಹೊಕ್ಕು ರಕ್ಕಸರನು ಬಿಗಿದಕಾಗೆಯ ಬಳಗಕೆ ಕಲ್ಲನಿಟ್ಟಂದದಿ ಮಾಡಿದಆಗಲೆ ಕಂಡ ದಶಮುಖನೆಂಬ ಕಳ್ಳನ ನೋಡಿದಬೇಗ ಜಾನಕಿಯನ್ನು ಬಿಡು ಬಿಡುಯೆನಲು ತೊಡಗಿದ 5 ಮೂರರದೊಂದು ಪಾಲು ಖಳರ ಜನಂಗಳ ಕೊಂದಮೀರಿದ ಸೇನೆ ನಮ್ಮ ರಘುಪತಿಗಿರಲೆಂದು ನಿಂದನೂರುಯೋಜನದ ವಾರಾಶಿಯ ತೀರಕೆ ಬಂದಹಾರಿದನು ಗಗನಕೆ ಹನುಮನು ಭರವಸದಿಂದ ನಿಂದ 6 ಕುಂಭಿನೀ ಸುತೆಯ ಕುರುಹಿನ ಸನ್ಮಣಿಯ ತಕ್ಕೊಂಡಅಂಬುಧಿಯನು ಬೇಗ ದಾಟಿ ಶ್ರೀರಾಮರ ಕಂಡತ್ರ್ಯಂಬಕ ಮೊದಲಾದ ಸುರರ ತಂಡದಲಿ ಪ್ರಚಂಡಕಂಬುಕಂಧರ ಹಯವದನನ ಭಕ್ತಿರಸಾಯನ ಉಂಡ 7
--------------
ವಾದಿರಾಜ
ಎಂಬೆನು ವಿವೇಕ ಮನುಜಗೆ ಇರೆ ಎಂಬೆನು ಬ್ರಹ್ಮನು ಎಂಬೆಎಂಬೆನು ವಿವೇಕ ಮನುಜಗೆ ಇಲ್ಲದಿರೆ ಕತ್ತೆಯಮರಿಯದು ಎಂಬೆ ಪ ವೇದದ ನಿಜ ಅರ್ಥವ ತಿಳಿದಡೆ ಉತ್ತಮೋತ್ತಮನು ಎಂಬೆಕ್ರೋಧದಿ ತರ್ಕದಿ ಕಾದಾಡುವವನು ಕೋಳಿಯ ಹುಂಜನು ಎಂಬೆನಾನಾರೆನುತಲಿ ನಿಜವನು ತಿಳಿವನ ನಾರಾಯಣನು ಎಂಬೆನಾದದ ತಿಳಿವನು ನಿಂದಿಸುವಾತನ ಸರಸವಾಡೋ ಪಶು ಎಂಬೆ 1 ಮತಿಯ ವಿಚಾರದಿ ಜಗ ಬ್ರಹ್ಮವೆಂಬನ ವಿಚಾರವಾದಿಯು ಎಂಬೆಯತಿಗಳು ಬರೆ ಕುಳಿತೇಳದ ಮನುಜನಎಮ್ಮೆಯ ಮಗನವನೆಂಬೆಸುತ್ತಮುತ್ತಂಗನೆ ಮೋಹವ ತೊರೆದನ ಯೋಗಪುರುಷ ತಾನೆಂಬೆಗತಿಮತಿ ತೊರೆದಿಹ ನರನನು ಈಗಲೆ ಎಂಜಲು ತಿಂಬುವ ನಾಯೆಂಬೆ 2 ಪರಮಾರ್ಥದಿ ಶಮದಮದಿಂದಿಹನನು ಪಂಡಿತನೀಗಲು ಎಂಬೆಹಿರಿಯರ ಕಾಣಲು ಹಲ್ಲನೆ ಕಿರಿವನ ಹಿರಿಯಮುಸುವನು ತಾನೆಂಬೆಗುರಿಯನು ತಪ್ಪದೆ ದೃಷ್ಟಿಸಿ ನಡೆವನ ಗುಣಕೆ ಅತೀತನು ಎಂಬೆಬರಿಯ ಪ್ರತಿಷ್ಟೆಯ ಸಾಧಿಸುತಿರುವನ ಬರಡು ಗೊಡ್ಡು ಎಂದೆಂಬೆ 3 ನಾದದ ಧ್ವನಿಯನು ಕೇಳುತಲಿಹನನು ಜಗಜೀವನನು ಎಂಬೆನಾದದ ಸುಖವನು ಅರಿಯದ ನರನನು ಜೀನುಗಾರನು ಎಂದೆಂಬೆದಿನಕರ ಕೋಟಿಯ ತೇಜದಿ ಹೊಳೆವನ ದಿವ್ಯ ಮೂರುತಿ ಎಂದೆಂಬೆವನವನ ಅಲೆಯುವ ಬರಡು ಮುನಿಯನುವನಕೆಯ ತುಂಡದು ತಾನೆಂಬೆ4 ಆತ್ಮದ ಕಳೆಯನು ಅರಿತವನಿದ್ದರೆ ದೃಢದಲಿ ಬ್ರಹ್ಮನು ಎಂಬೆಸತ್ವಶಾಲಿ ಆ ಮಹಿಮರ ಜರೆವರ ಗುಡ್ಡದ ಗೂಗೆಯಮರಿ ಎಂಬೆಚಿನುಮಯ ಚಿನ್ಮಾತ್ರನೆ ತಾನಾದವನನು ಚಿದಾನಂದ ಗುರುವೆಂಬೆಕರೆಕರೆ ಎನಿಸುವ ಸಾಧು ವೇಷವನು ದೂರಕೆ ನೀ ನಿಲ್ಲೆಂಬೆ5
--------------
ಚಿದಾನಂದ ಅವಧೂತರು
ಎಮ್ಮಳವೇ ಪೊಗಳಲಮ್ಮಮ್ಮಾ ಬೊಮ್ಮನರಿಯ ನಿಮ್ಮ ಮಹಿಮಾ ಪ ಭೂತಳದೊಳರವು ಸಕಲ ಉಂಟೆಂದು ಖ್ಯಾತಿಯಿಂದ ನಾನಾತೆರದಿ ಸ್ತುತಿಸೆ ಮಾತಿಗೆ ವಿಗತ ಕಗತ ವಾಗೆ ಶೃತಿಗಳು ನೇತಿ ನೇತಿ ತಿರುಗಿದ ಬಳಿಕಾ 1 ಕುಸುಮನಾಭೇನನ ಸಾಮೀಪೆಂಬಾ ತವಕದಿ ಅಸಮ ತೆರದಿ ಪೊಗಳಲು ಚರಿತಾ ದ್ವಿಸಹಸ್ರ ಜಿವ್ಹಕ ಮೀರಿ ಪೊಗಳುತ ಅತಿ ಕುಶಿದು ತಲೆವಾಗಿ ತಾ ನಾಚಿದ ಬಳಿಕ2 ತರಣಿ ಕೋಟಿತೇಜ ಸ್ವರೂಪ ಜ್ಯೋತಿಯ ಅನ ವರತ ಹೃದಯ ಮಂದಿರದೊಳಿರಿಸಿ ಮೆರವುತ ನಿನಗತಿ ಬ್ರಯರಾದಾ ಭಕುತರಾ ಸ್ಮರಣೆ ಯೋಗ್ಯವಲ್ಲದೆ ಮಹಿಪತಿಸುತ ಪ್ರಿಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು