ಎಲ್ಲರಂತಲ್ಲ ಹರಿ ಜಗದೊಳಗೆಲ್ಲ ತಿಳಿಯಬೇಡಿರೊ ಪ.
ಪುಲ್ಲಲೋಚನ ತನ್ನಲ್ಲೇ ಮನವ ನಿಲ್ಲಿಸಿದಂಥ ತಾ
ಅಲ್ಲೆ ಆಟವಾತೋರಿದ ಅ.ಪ.
ಮಣ್ಣುತಿಂದನೆಂದ್ಹೊಡೆದರೆ ಗೋಪಿ
ಕಣ್ಣು ಮುಚ್ಚುತ ಅಳುವ
ಬೆಣ್ಣೆ ಬಾಯ್ತೆರೆಯೆನೆ ಸಣ್ಣ ಮೂರ್ ಲೋಕವೆ
ಗೋಪಿ ತಾ ಅಗ್ರಗಣ್ಯ1
ಕಟ್ಟಲು ಹರಿ ಪೋಗಿ
ಥಟ್ಟೆರಡು ಮರದೊಳಿಟ್ಟು ವರಳನೆಳೆದು
ಇಷ್ಟ ಮೂರುತಿ ಕೃಷ್ಣ ಸಿಟ್ಟು ಮಾಡಿದನೇ2
ಶ್ರೀ ಶ್ರೀನಿವಾಸನನು ತನ್ನರಿ ವಾಸುದೇವನೆಂದು
ಘಾಸಿಮಾಡಲು ಕಂಸಾನೇಕ ಖಳರ ಅಟ್ಟಿ
ಶ್ರೀಶ ಸಂಹರಿಸಿ ಯಶೋದೆಯ
ತೋಷಪಡಿಸಿದನು 3