ಒಟ್ಟು 378 ಕಡೆಗಳಲ್ಲಿ , 63 ದಾಸರು , 352 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭಮಂಗಳಂ ಪ ವೇದಾಂತ ವೇದ್ಯನಿಗೆ ಆದಿನಾರಾಯಣಗೆ ಸಾದು ಸಜ್ಜನರ ಸಂರಕ್ಷಣಗೆ ಯಾದವಾಧಿಪ ಕೃಷ್ಣ ದನುಜರೆದೆ ದಲ್ಲಣಗೆ ಮಾಧವ ಮುಕುಂದ ಮುರಮರ್ಧನನಿಗೆ ನಿತ್ಯ ಶುಭಮಂಗಳಂ 1 ಶ್ರೀ ವತ್ಸಲಾಂಛನಗೆ ಶ್ರೀ ಕೇಶವಾಚ್ಯುತಗೆ ಭವ ಭಂಜನನಿಗೆ ಗೋವರ್ಧನವ ನೆತ್ತಿ ಗೋವುಗಳ ಕಾಯ್ದವಗೆ ಮಾವ ಕಂಸನ ಕೊಂದ ಗೋವಿಂದಗೆ 2 ನೀಲ ಮೇಘಾಂಗನಿಗೆ ನಿಜಶರಣ ಸಂಗನಿಗೆ ಕಾಲ ಭಯ ಶಿಕ್ಷನಿಗೆ ಕಮಲಾಕ್ಷಗೆ ಬಾಲಾರ್ಕ ಚಂದ್ರ ರವಿಕೋಟಿ ತೇಜನಿಗೆ ಮೂಲೋಕ ದೊಡೆಯನಿಗೆ ಮುರವೈರಿಗೆ 3 ಕಾಮಪಿತ ಕೃಷ್ಣನಿಗೆ ಕಡುಚೆಲ್ವಮಾಧವಗೆ ಸಾಮಗಾನ ವಿಲೋಲ ಸರ್ವೇಶಗೆ ವಾಮ ದೇವನ ಮಿತ್ರ ವಸುದೇವ ಪುತ್ರನಿಗೆ ಶ್ರೀ ಮಹಾಗೋವಿಂದ ಗೋಪಾಲಗೆ 4 ದುರಿತ ಸಂಹಾರಗೆ ಪರಮ ಪಾವನನಿಗೆ ಪಾಪವಿನಾಶಗೆ ಘೋರ ದುರಿತಾರಣ್ಯ ದಹನ ದೈತ್ಯಾಂತಕಗೆ ಪಾರ ಮಹಿಮಾನಂದ ಸುರವಂದ್ಯಗೆ 5 ನಾಗೇಂದ್ರ ಶಯನನಿಗೆ ನಿಗಮಾಗಮ ಸ್ತುತಗೆ ನಾಗಭೂಷಣ ನಮಿತಗೆ ಭಾಗೀರಥೀಪಿತಗೆ ಭಾಗವತ ಹಿತಕರಗೆ ಭಾಮೆಯರರಸ ಶ್ರೀ ಗೋಪಾಲಕೃಷ್ಣಗೆ 6 ವರಮತ್ಸ್ಯರೂಪನಿಗೆ ಕೂರ್ಮಾವತಾರನಿಗೆ ವರಹದಾಕೃತಿಯವಗೆ ನರಸಿಂಹಗೆ ವರದ ವಾಮನನಿಗೆ ವರ ಪರಶುರಾಮನಿಗೆ ಬುದ್ಧ ಶ್ರೀ ಕಲ್ಕಿಗೆ 7 ಇಂದಿರಾರಮಣಗೆ ಚಂದ್ರಶೇಖರ ಪ್ರಿಯಗೆ ನಂದಗೋಕುಲದರಸ ಗೋಪಾಲ ಕೃಷ್ಣಗೆ ಮಂದಮಾರುತ ತನಯ ಕೋಣೆ ನಿಜವಾಸಗೆ ಆ ನಂದ ಮೂರುತಿ ಶ್ರೀ ಲಕ್ಷ್ಮೀನಾರಾಯಣಗೆ 8
--------------
ಕವಿ ಪರಮದೇವದಾಸರು
ನಿತ್ಯ ಸುಪ್ರೀತ ಸರ್ವೋತ್ತಮ ಹರಿಯೆ ಚಿತ್ತಜನಯ್ಯ ಚಿನ್ಮಯ ಎನ್ನ ದೊರೆಯೆ ಪ. ಅರಿಯೆ ನಾನಾ ವಾಹನಾದಿ ವಿಧಿಯನು ಮರಿಯೆನು ಮನದಲ್ಲಿ ಮಂದಭಾವವನು ವರದೇಶ ನಿನ್ನಯ ಚರಣಾರವಿಂದವ ನೆರೆನಂಬಿದವನೆಂಬ ಪರಿಯಿಂದ ದಯವಾಗು 1 ಇಂದಿರಾವರವಿಧಿವಂದ್ಯ ಸರ್ವೇಶಾ- ನಿತ್ಯ ಸುಂದರ ವೇಷಾ ಮಂದ ಬುದ್ಧಿಯೊಳೆಂತು ಒಲಿಸುವೆ ಶ್ರೀಶಾ ತಂದೆ ನೀ ಕರುಣದಿ ಸಲಿಸಭಿಲಾಷಾ 2 ಅಣುರೇಣು ತೃಣಕಾಷ್ಠ ಪರಿಪೂರ್ಣ ನಿನ್ನ ನೆನೆದು ವಂದಿಸುವೆ ಚಂದನ ಮೂರ್ತಿಯನ್ನ ಸನಕಾದಿ ವಂದ್ಯ ಶೇಷಾಚಲನಾಯಕ ಅನಿಮಿಷ ಪತಿಯೆನ್ನ ಮನೆಯಲ್ಲಿ ನೆಲೆಯಾಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿತ್ಯದುದಯಾಸ್ತಮಾನದಲಿ ಸ ರ್ವೋತ್ತಮ ಹರಿನಾಮ ಬರೆದೋದಿ ಭಕ್ತಿಯಿಂದಾಲಿಪರ ಭವತಾಪ ಜರೆ ಮೃತ್ಯುನೀಗಿ ನಿತ್ಯಮುಕ್ತಿ ಕೈಸೇರುತಿಹ್ಯವು ಪ ನರಿಹರಿ ಹಯವದನ ಜನಾರ್ದನ ವಾಸುದೇವ ವಾರಿಜಾಕ್ಷ ಮುರಧ್ವಂಸಿ ಮುಪ್ಪುರಾಂತಕ ಮುಕ್ಕುಂದ ಹರಿ ಸರ್ವೇಶ ಉರಗಪರ್ಯಂಕ ನಿರಂಜನ ನಿರ್ಜರೇಶ ಶರಣಜನಮಂದಾರ ಸಿರಿಯರಸ ಪರಮಪ್ರಕಾಶ ಪರತರೇಶ ಪರಮಪುರುಷ ಪರಾತ್ಪರನೆಂದು 1 ಮಾಧವ ದೇವದೇವೇಶ ದನುಜರಸಂಹರ ಶ್ಯಾಮಸುಂದರ ಘನಮೇಘಶ್ಯಾಮ ಸಚ್ಚಿದಾನಂದ ಚಿನುಮಯಾತ್ಮ ತಚ್ಚೈತನ್ಯರೂಪ ವೇಣುಧರ ಗೋಪಾಲ ಗೋವ ರ್ಧನೋದ್ಧಾರ ಗಾನಾಂದಧೋಕ್ಷಜಪಿತ ಧ್ಯಾನಗಮ್ಯ ತ್ರಿಭುವನೇಶ ತ್ರಿವಿಕ್ರಮನೆಂದು 2 ನಿತ್ಯಗುಣಾರ್ಣವ ನಿಜಗುಣ ನಿಷ್ಕಲಂಕ ನಿತ್ಯಾತ್ಮ ನಿರುಪಮ ಪರಂಜ್ಯೋತಿ ನಿತ್ಯನಿರ್ಮಲ ಸತ್ಯಭಾಮಾಕಾಂತ ಚಿದ್ರೂಪ ಚಿತ್ಕಳಂಕ ಕಮಲಾಕ್ಷ ಲಕುಮೀಶ ಶೌರಿ ಸೂತ್ರಧಾರಿ ಭಕ್ತವತ್ಸಲ ಭಯನಿವಾರ ನರಸಿಂಹ ಮುಕ್ತಿದಾಯಕ ಮಧುಸೂದನ ರಮಾರಮಣ ಮೃತ್ಯುಂಜಯ ವಿಶ್ವೇಶ ವಿಶ್ವವ್ಯಾಪಕನೆಂದು 3 ಕಾಲಾರಿ ಚಕ್ರಿ ಚತುರ್ಭುಜ ಭವನಾಶ ನೀಲಾಂಗ ರಂಗ ರಾಘವ ಭುವನೇಶ ನೀಲಲೋಚನ ನಗಧರ ಜಗಮೋಹ ಮೇಲುನಿಲಯ ನಿಗಮಾತೀತ ಪದ್ಮನಾಭ ಕಾಲೀಮರ್ದನ ಕೌಸ್ತುಭಾಂಬರ ವಿಷ್ಣು ಪಾಲಸಾಗರಕನ್ನಿಕಾಪ್ರಿಯನಾಥ ಲೀಲಜಾಲ ಜಾಹ್ನವೀಜನಕ ಕೇಶವ ಶೂಲಪಾಣಿಸಖ ಶಾಂತಾಕಾರನೆಂದು4 ಪರಮಾನಂದ ಗೋವಿಂದ ಗಜರಕ್ಷ ಶರಧಿಮಥನ ಕೂರ್ಮಮತ್ಸ್ಯ ಕರುಣಾಂಗ ವಾಮನ ಧ್ರುವಪಾಲ ದುರಿತಾರಿ ಕೃಷ್ಣ ವೆಂಕಟ ವಿಠಲ ಶರಣಾಗತವರದ ನುತಪಾಲ ವರದಾತ ವೇದಾಂಗ ಸುಖಧಾಮ ವರ ಶ್ರೀರಾಮ ಪರಮ ಪುಣ್ಯನಾಮ ಧರೆಮೂರರೊಳತ್ಯಧಿಕಮೆಂದು 5
--------------
ರಾಮದಾಸರು
ನಿನ್ನ ಚಿತ್ತಕೆ ಬಂದುದನು ಮಾಡು ಸರ್ವೇಶ ಎನ್ನ ಸ್ವಾತಂತ್ರ್ಯ ಲವಮಾತ್ರ ಉಂಟೇ ಸ್ವಾಮಿ ಪ ಅನಂತಾನಂತ ಜನ್ಮ ಕಾದರು ಒಮ್ಮೆ ಚೆನ್ನ ಗೋಪಾಲ ಕೃಷ್ಣದೇವ ಅ.ಪ. ಛೀ ಎನಿಸು ಜನರಿಂದ ನಿಂದ್ಯವನು ಮಾಡಿಸು ಬಾಯದೆರೆಸೊ ಹೊಟ್ಟೆಗಾಗಿ ಗಾಯನವ ಮಾಡಿಸು ಗುಪ್ತದಲ್ಲೇ ಇರಿಸು ದಾಯಾದಿಗಳಿಗೊಪ್ಪಿಸು ರಾಯಪದವಿಯ ಕೊಡಿಸು ರಾಜ್ಯವೆಲ್ಲವ ಮೆರೆಸು ಕಾಯಕ್ಲೇಶವನು ಪಡಿಸು ಮಾಯಾಧವನೆ ನಿನ್ನ ಮಹಿಮೆ ತಿಳಿದವರಾರು ನ್ಯಾಯ ಅನ್ಯಾಯವಾಗಿ ಶ್ರೀಶ 1 ಧನವನ್ನೆ ಕೊಡಿಸು ದಾನವನೆ ಮಾಡಿಸು ಗುಣವುಳ್ಳ ಮನುಜನೆನಿಸು ಮನಸು ಚಂಚಲನೆನಿಸು ಮಾತುಗಳ ಪುಸಿಯೆನಿಸು ಕ್ಷಣದೊಳಗೆ ಶುದ್ಧನೆನಿಸು ಋಣದ ಭಯವನೆ ಹೊರಿಸು ರಿಕ್ತ ನಾನೆಂದೆನಿಸು ತೃಣದಂತೆ ಮಾಡಿ ನಿಲಿಸು ನಿತ್ಯ ಮನದಿಚ್ಛೆಗಾರನೆ ದಿನ ಪ್ರತಿದಿವಸವಾಗೆ, ದೇವ 2 ಯಾತ್ರೆಯನೆ ಮಾಡಿಸು ಯೋಚನೆಯಲೇ ಇರಿಸು ಪಾತ್ರ ಜನರೊಳು ಪೊಂದಿಸು ಗೋತ್ರ ಉತ್ತಮನೆನಿಸು ಗೋವುಗಳ ಕಾಯಿಸು ಧಾತ್ರಿಯೊಳು ನೀಚನೆನಿಸು ಮೈತ್ರರೊಳು ಕೂಡಿಸು ಮೈಗೆಟ್ಟವನೆನಿಸು ಸ್ತೋತ್ರಕ್ಕೆ ಯೋಗ್ಯನೆನಿಸು ನೇತ್ರ ಮೂರುಳ್ಳವನು ಸ್ತುತಿಸಿದ ಮಹಾಮಹಿಮ ರಾತ್ರಿ ಹಗಲು ಎನ್ನದೆ ದೇವ 3 ಉಪವಾಸದಲ್ಲಿರಿಸು ಉಚಿತ ಭೋಜನ ಉಣಿಸು ಜಪತಪವನೆ ಮಾಡಿಸು ಅಪಹಾಸ್ಯ ಮಾಡಿಸು ಅದ್ಭುತವನೈದಿಸು ಗುಪಿತರೊಳಗಧಿಕನೆನಿಸು ಉಪಕಾರಿ ನರನೆನಿಸು ಉದ್ದಂಡನಿವನೆನಿಸು ವಿಪುಳ ಮತಿಯಲಿ ನಿಲಿಸು ಅಪರಿಮಿತ ಗುಣನಿಧಿಯೆ ಆನಂದ ಮೂರುತಿಯ ಸಫಲಮತಿಯೀವ ದೇವ 4 ವೇದವನು ಓದಿಸು ವೇದಾರ್ಥಗಳ ನುಡಿಸು ಓದಿದರು ದಡ್ಡನೆನಿಸು ಹಾದಿಯನು ತಪ್ಪಿಸು ಹಿತದವರನಗಲಿಸು ಸಾಧು ಮಾರ್ಗವನೆ ಕೊಡಿಸು ಬಾಧೆಗಳನಟ್ಟಿಸು ಭಕುತಿವೆಗ್ಗಳನೆನಿಸು ಉದರಕೋಸುಗ ತಿರುಗಿಸು ಪಾದದಲಿ ಗಂಗೆಯನು ಪೆತ್ತ ಪರಮಾನಂದ ಮೋದ ವಿನೋದವಾಗೆ ದೇವ 5 ಕುಣಿಕುಣಿದಾಡಿಸು ಕಾಶಿಯಲಿ ಪೊಂದಿಸು ಮಣಿ ಭೂಷಣವ ತೊಡಿಸು ಘನ ಕವನ ಪೇಳಿಸು ಕೌತುಕವನೈದಿಸು ವನ ಭುವನದೊಳು ನಿಲಿಸು ಪ್ರಣವ ಮಂತ್ರವ ಜಪಿಸು ಪ್ರಕಟಭಯವನೆ ಬಿಡಿಸು ಬಿನುಗು ವೈರಾಗ್ಯನೆನಿಸು ಜನನಿ ತನುಜರ ಕೂಡೆ ಅನುಸರಿಸಿ ನಡೆವಂತೆ ಎನಗೆ ನೀನೆ ಸದ್ಗತಿ ಸ್ವಾಮಿ 6 ಯಾವುದಾದರು ನೀನು ಇತ್ತುದಕೆ ಎನಗಿಷ್ಟು ನೋವು ಒಂದಾದರಿಲ್ಲ ಜೀವೇಶರೊಂದೆಂಬ ದುರ್ಮತವ ಕೊಡದಿರು ಭಾವದಲಿ ನಾ ಬೇಡುವೆ ಆವಾವ ನರಕದಲಿ ಬಹುಕಾಲವಿಟ್ಟರು ಇಪ್ಪೆ ನಾನೊಲ್ಲೆ ಮಿಥ್ಯಮತವ ಕಾವ ಕರುಣೆ ನಮ್ಮ ವಿಜಯವಿಠ್ಠಲರೇಯ ಪಾವನ್ನ ಮಾಳ್ಪ ಶಕ್ತ ವ್ಯಕ್ತ 7
--------------
ವಿಜಯದಾಸ
ನಿನ್ನ ಪದ ಧ್ಯಾನಿಪರು ಪಗಲಿರುಳು ನಿನ್ನ ಭಕ್ತರು ಹರಿ ನಿನ್ನ ರೂಪ ನೆನೆನೆನೆದು ಸ್ಮರಿಸಿ ಮನದಲಿ ನಿಲಿಸಿ ಸ್ತುತಿಸಿ ಪಾದ ಧೂಳು ಶಿರದಲ್ಲಿ ಧರಿಸುವರು ಭಕ್ತರು ನಿನ್ನ ರೂಹವ ಮನಸಿನ ಜಗಲಿಯಲಿ ನಿಲಿಸುವರು ಭಕ್ತರು ನಿನ್ನ ನಂಬಿ ಸಕÀಲಕಾರ್ಯ ನಿರ್ವಹಿಸುವರು ಭಕ್ತರು ಹರಿ ನಿನ್ಹೊರತು ಅನ್ಯರನು ನೆನೆಯರೊ ಪನ್ನಗಾದ್ರಿನಿವಾಸ ಶ್ರೀ ಶ್ರೀನಿವಾಸ ನಿನ್ನ ಭಕ್ತರ ಸಂಗಕೊಡೊ ಎನಗೆ ಸರ್ವೇಶ
--------------
ಸರಸ್ವತಿ ಬಾಯಿ
ನಿನ್ನ ಪ್ರೇಮದ ಭೋಗ ಇನ್ನಿಲ್ಲದ ಮನುಜ ಘನ್ನ ಭೂ ಭಾರನವ ಭವನಮಿತ್ರ ಪ ಬನ್ನಬಟ್ಟೆನೊ ಬಹಳ ಬಲುಹೀನ ವೃತ್ತಿಯಲಿ ಮಾನ್ಯರಲಿ ತಲೆಯೆತ್ತಿ ಇರುವಂತೆ ಎಂದಿಡುವಿ ಅ.ಪ. ಏನು ಕೊಟ್ಟರು ಕೊಡು ದಾನವಂತಕ ಎನ್ನ ಜ್ಞಾನದಲಿ ನೀನಿತ್ಯ ನೆಲಸಿ ನಲಿಯೊ ಧೇನುವತ್ಸದ ತೆರದಿ ನೀನೆನಗೆ ಹಿತತೋರು ನಾನೊಲ್ಲೆ ಸುರಲೋಕ ನಿನ್ನೊಲಿಮೆ ಇಲ್ಲದಿರೆ 1 ಮರುವೆಂಬ ಮಾರಿಯನು ಪರಿಹರಿಸು ಪರಿಪೂರ್ಣ ಸುರಿ ನಿನ್ನ ಕರುಣರಸ ಪ್ರಾಣನಾಥ ಸರ್ವೇಶ ನೀನೆಂದು ಪರತಂತ್ರ ನಾ ಸತತ ಶರಣನ್ನ ದಣಿಸುವದು ಘನವೇನೊ ಹರಿಯೆ 2 ಕೋಟಿಕಾಲ ನರಕವಾಸಿಯಾದರು ಎನಗೆ ನೀಟುಗತಿ ದೊರೆವುದೇ ನೀನೊಲಿಯದಿರಲು ಸಾಟಿಯಿಲ್ಲದ ದೈವ ಜಯೇಶವಿಠಲ ನಾಟಿ ಹಿರಿಯರ ಕರುಣ ನೀನಾಗಿ ಕೃಪೆಮಾಡು 3
--------------
ಜಯೇಶವಿಠಲ
ನಿನ್ನ ಮರೆದೆನೊ ರಂಗ ನಿನ್ನ ಮರೆದೆ ಅನ್ಯರನ್ನಕೆ ಸಿಲುಕಿ ಅನುಗಾಲ ಮರುಳಾಗಿ ಪ ಊಟಕ್ಕೆ ಬರುವಲ್ಲಿ ತನುವುಬ್ಬಿ ಎನ್ನ ಮನ ನಾಟುವುದು ಅವರ ಕಡೆ ಅನುರಾಗದಿ ನೀಟಾದ ಭೋಜನವ ಬಯಸುವೆನು ಯಮರಾಯ ಭಂಗ ಕೇಳಿ ಎಚ್ಚರಿಯದಲೆ1 ಮತ್ತೆ ಕರೆಯಲು ಬರಲು ಉತ್ಸವ ಪಿಡಿಯಲೊಶವೆ ಹೊತ್ತು ಹೊತ್ತಿಗೆ ಅವರ ಕೊಂಡಾಡುತ ಹೆತ್ತವರಿಗಿಂತಲೂ ಅಧಿಕ ನಮಸ್ಕರಿಸುವೆನು ಚಿತ್ತಜನಪಿತ ನಿನ್ನ ಸ್ತೋತ್ರ ಪಠಿಸದಲೆ2 ಎಡೆಯ ಮುಂದೆ ಕುಳಿತು ಎಲ್ಲ ಕಾಲಗಳಿಂದ ಬಿಡದೆ ಮಾಡಿದ ಪುಣ್ಯಪಾಪಗಳೆದು ಎಡಬಲದವರ ಪಙÉ್ತ ನೋಡಿಕೊಳ್ಳುತ ದುಃಖ ಪಡುವೆನೋ ಎನಗಿಷ್ಟು ಕಡಿಮೆ ಹಾಕಿದರೆಂದು3 ಅನ್ನವಿತ್ತವನ ಪಾಪಗಳು ನಿರಂತರದಿ ಅನ್ನದಾಶ್ರಯ ಮಾಡಿಕೊಂಡಿಪ್ಪವು ಚೆನ್ನಾಗಿ ತಿಳಿಯದಲೆ ಚಾತುರ್ಯದಿಂದಲಿ ಧನ್ಯನಾದೆನು ನಾನು ಪರರ ಪಾಪವ ಭುಜಿಸಿ 4 ಒಬ್ಬರೆಡೆ ನೋಡಿಕೊಳಲಧಿಕವಾಗಿದ್ದರೆ ಉಬ್ಬುವೆನು ಊರು ಕೇರಿ ಹಿಡಿಸದಂತೆ ಸುಬ್ಬನ ಸೂರೆಯಂತೆ ಪರರ ಅನ್ನವನುಂಡು ಮೊಬ್ಬಿನಲಿ ದಿನಗಳೆದೆ ದೀನ ಮನಸಿನಲಿ 5 ಒಡಲಿಗೆ ಬಿದ್ದರಸ ಮೂರು ಭಾಗಗಳಾಗಿ ಕಡೆಗೆ ಪೋಗುವುದೊಂದು ನಿಲುವುದೊಂದು ತಡೆಯದಲೆ ಸಂತಾನ ಪಡೆವುದೊಂದೀತೆರ ಕಡೆಗಾಣಲಿಲ್ಲ ಪರರಲಿ ಉಂಡ ಋಣಕೆ6 ಆವಾವ ಬಗೆರುಚಿ ಜಿಹ್ವಗೆ ತೋರುತಿದೆ ಆವಾವ ಬಗೆ ನರಕ ಬೇರೆಯುಂಟು ಮಣಿ ಸರ್ವೇಶ ವಿಜಯವಿಠ್ಠಲ ಸ್ವಾಮಿ ಈ ಜೀವ ಹಿತವಾಗುವಂತೆ ಮಾರ್ಗವ ತೋರು 7
--------------
ವಿಜಯದಾಸ
ನಿನ್ನದೇ ಸಕಲ ಸೌಭಾಗ್ಯ ಸಾಧನವು ಹರಿಯೆ ಪ ನಿನ್ನದೆಂಬಭಿಮಾನ ಲವಲೇಶ ಸಲ್ಲದಯ್ಯಾ ಅ.ಪ. ನಿನ್ನ ಪ್ರೇರಣೆ ಹೊರತು ತೃಣವೊಂದು ಚಲಿಸದು ನಿನ್ನಿಚ್ಛೆಗನುಸಾರ ಸಕಲ ಜಗವು ನಿನ್ನ ಚಿತ್ತಕೆ ಬಾರದಿಹುದೇನು ನಡೆಯುವುದೋ ನಿನ್ನ ನಂಬಿದವರನು ನೀನಾಗೆ ಸಲಹುವೆಯೊ 1 ಸರ್ವತಂತ್ರ ಸ್ವತಂತ್ರ ಸರ್ವಾಂತರಾತ್ಮಕನೆ ಸರ್ವಜಗದಾಧಾರ ಸರ್ವೇಶನೆ ಅಘ ದೂರ ಸರ್ವಕಾಲದಲೆನ್ನ ಗರ್ವರಹಿತನ ಮಾಡೊ 2 ಸತ್ಯಚಿತ್ತನೆ ನಿನ್ನ ಚಿತ್ತವೆನ್ನಯ ಭಾಗ್ಯ ಕರ್ತೃತ್ವದಭಿಮಾನ ಕಳೆದು ಕಾಯೊ ಮತ್ತೇನು ಬೇಡುವೆನು ಪರತಂತ್ರ ನಾನಯ್ಯ ಮುಕ್ತಿದಾಯಕ ಶ್ರೀಶ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ನಿನ್ನವಳೆನಿಸೊ ಎನ್ನ ಘನ್ನ ಗೋಪಾಲ ನಿನ್ನವಳೆನಿಸೊ ಎನ್ನ ಪ. ಅನ್ಯರೊಬ್ಬರ ಕಾಣೆ ಮನ್ನಿಸುವರ ಜಗದಿ ನಿನ್ನ ಹೊರತು ಇಲ್ಲ ಪನ್ನಗಾದ್ರಿವಾಸ ಅ.ಪ. ಜನನ ಮರಣ ಕಷ್ಟ ಘನಭವ ಜಲಧಿಯೊಳ್ ಮುಣಗಿ ಮುಣಗಿ ದಡವನು ಕಾಣದಿರುವೆನೊ 1 ದುಷ್ಟ ವಿಷಯಗಳ ಅಟ್ಟಿ ದೂರದಿ ನಿನ್ನ ಶ್ರೇಷ್ಠ ನಾಮಾಮೃತ ಕೊಟ್ಟು ಪುಷ್ಟಿಯನಿತ್ತು 2 ಭಕ್ತಿ ಜ್ಞಾನವು ನಿನ್ನ ಭಕ್ತ ಸಂಗವು ವಿ- ರಕ್ತಿ ಪಥವ ತೋರಿ ಮುಕ್ತಿಯ ಪಾಲಿಸಿ 3 ನಿತ್ಯ 4 ಸಾರ ಉದ್ಘೋಷಿಸುವಂತೆ ಬುದ್ಧಿಪ್ರೇರಕನಾಗಿ ಶುದ್ಧ ಜ್ಞಾನವನಿತ್ತು 5 ನಿನ್ನ ಪದುಮ ಪಾದವನು ನಂಬಿದ ಎನ್ನ ನಿನ್ನ ದಾಸಳೆನಿಸಿ ಘನ್ನ ಮಾರ್ಗವ ತೋರಿ6 ಅಂತರಂಗದ ಧ್ಯಾನ ನಿಂತು ನೀ ನಡಿಸುತ ಅಂತರಂಗದಿ ನಿನ್ನ ಶಾಂತರೂಪವ ತೋರಿ 7 ತಂದೆ ಮುದ್ದುಮೋಹನ ಗುರುಹೃದಯ ಮಂದಿರ ನಿವಾಸ ಎಂದೆಂದಿಗಗಲದೆ 8 ಗೋಪಾಲಕೃಷ್ಣವಿಠ್ಠಲದೇವ ಸರ್ವೇಶಆಪನ್ನಿವಾರಕ ಆಪದ್ಭಾಂದವನಾಗಿ9
--------------
ಅಂಬಾಬಾಯಿ
ನೀ ಕೊಟ್ಟಿದುಣುವಲ್ಲಿ ಭಕ್ತಿ ಹರುಷ ಪ ಶ್ರೀಕಾಂತ ನೀಡೆನಗೆ ಸಾಕು ಬೇಕೆನ್ನಿಸದೆ ಅ.ಪ. ನಾ ಬಲ್ಲೆನೆ ಎನ್ನ ಹಿತಾಹಿತಗಳ ಬಗೆಯ ನೀ ಬಲ್ಲ ಸರ್ವಜ್ಞ ನಮ್ಮ ಕ್ಷೇಮ ನೀ ಬಂಧು ಅನಿಮಿತ್ತ ಅನಂತ ಕಾಲಕ್ಕೂ ಆ ಬ್ರಹ್ಮಸ್ತಂಭಾಂತ ಸಂಸಾರಿ ಸರ್ವೇಶ 1 ಕಂಸಮರ್ದನ ಎನ್ನ ಸಂಶಯಗಳಿಯಯ್ಯ ಹಂಸ ಸದ್ಗುಣ ಪೂರ್ಣ ಪುರುಷ ಶ್ರೀಶ ಪರಿ ಹರಿಸಿ ನಿನ್ನ ಜ್ಞಾನವ ನೀಡೊ ಸ್ವಾಂಶಿಗಳ ಗುಣರೂಪ ಕ್ರಿಯದಿಂದ ದೇವ 2 ನಿತ್ಯ ಮಿತ್ರನೆ ನಮಗೆ ಅನುಗಾಲ ಸಲಹುವಿ ತಾಯಿಯಂತೆ ಬಿನಗು ದೈವಗಳಳಿವ ಜಯೇಶವಿಠಲ ನಿತ್ಯ ಮೂರ್ತಿ 3 ನೀನಿತ್ತ ಭೋಗಗಳು ನಿನಗೊಪ್ಪಿಸುವೆನೆನಲು ಏನು ಕಾರಣ ಬರದು ಆನಿವರದನೆ ಕೇಳೋ ಪ್ರಾಣಪತಿ ಜಯೇಶವಿಠಲನೆ ಕರುಣಾಬ್ಧಿ 4
--------------
ಜಯೇಶವಿಠಲ
ನೀನೋಲಿದುದ್ದಕ್ಕೀ ಇಹ ಸೌಖ್ಯವೇಯಿನ್ನು ನಾನೊಲ್ಲೆ ನಾನೊಲ್ಲೆ ಸರ್ವೇಶಾ ಪ ನಿನ್ನನುರಾಗದಿ ಗತಿಯೆಂದು ನಂಬಿದ ಮಾನವನೊಡನೆ ನೀನಾಡುವದೆಲ್ಲಾ ಅ.ಪ ಷಡುರಸ ನಾನಾ ಸುಭೋಜನವ ಬಿಡಿಸಯ್ಯ ದಾನವ ಭಂಜನ ಒಡಲಿಗೋಸುಗ ನಿನ್ನನು ಸೇವಿಸುವೆ ತೋರಿಸದಿರೆ | ದಿವ್ಯಾಂಬರಗಳ ಉಡಿಸಿ ಸ್ವರ್ಣಾಭರಣಗಳ ತೊಡಿಸಿ | ಬರಿ ಮಾತಿನಲಿ ಮೊರೆ ಯಿಡುವೆನೊ ವಾಕ್ಕಾಯದಿಂದಲೀ 1 ಜನರು ಜನಪರಿಂದ ಮನ್ನಣೆ ಸ್ವಲ್ಪ | ಎನಗೆ ಹತ್ತದು ಕಾಣೊ ನಿನ್ನಾಣೆ || ಮನುಜನ ಸೈಸಿದವನ ಬಾಯೆನೆ ಬರೆವಾ | ವಿಭವ ದೊರೆಯದೆ | ಜನುಮದಲಿ ಬಂದದಕೆ ಮಹಾ ಸಾಧನವಿಧಾರಿ ತೋರಿಸಿ | ನಿನ್ನ ದಾಸನೆನಿಸದೆ | ನಿಸ್ಸಾರವೆಣಿಸಿ ತೋರ್ಪ ದೇವ ಸೈಸೈ 2 ಥಂಡ ಥsÀಂಡದಲೆನ್ನ ಮರುಗಿಸಿ | ಮಂಡಲದೊಳು ಪ್ರಚಂಡನೆನಿಸದಿರು | ಉಂಡ ಪರಾನ್ನಕೆ ದಂಡನೆ ಬಹಳಲ್ಲಿ | ತೊಂಡ ನಾನಯ್ಯ ಕರುಣಸಾಗರ | ಖಂಡ ಮತಿಯನು ಕೊಡದೆ ಮುಕ್ತರ | ಅಂಡ ಜಾಂಸಗ ವಿಜಯವಿಠ್ಠಲಾ 3
--------------
ವಿಜಯದಾಸ
ನೀರಜದಳನಯನಾ ಅನ್ಯನಲ್ಲ ನಾ ನಿನ್ನ ದಾಸನುಯಂದು ಚಿನ್ಮಯ ಮೂರುತಿ ಶ್ರೀನಿವಾಸಹರೆ ಪ ಪಂಕಜೋದ್ಭವನಾ ಪಡೆದಂಥಾ ವೆಂಕಟಗಿರಿನಿಲಯ ವೇಣುನಾದಪ್ರೀಯಾ ಬಿಂಕಾದಿ ಶರಣರ ಪೊರೆದಂಥಾ ಚಕ್ರಧರ ಶೌರಿ ಮಹಾನುಭಾವ ಬಿಂಕದಾನವರಳಿದ ಬಲವಂತಾ ಶಂಕೆಯಿಲ್ಲದೆ ನಿಮ್ಮ ಸ್ಮರಿಸುವ ದಾಸರ ಕಿಂಕರ ಕಿಂಕರ ಕಿಂಕರನೆಂದು ಇನ್ನು 1 ವಾಸುಕಿಶಯನ ಶ್ರೀ ವಸುದೇವನಂದನ ಭೂಸರವಂದ್ಯ ಪುರಾಣ ಪುರುಷ ಈಶ ಜಗತ್ರಯ -----ರಾಜವರದಾ ಭೂಸುತೋನಾಯಕ ಭೂರಮಣಾ ಸಾಸಿರನಾಮದ ಸರ್ವೇಶನೆ ಕೃಷ್ಣಾ ಭೂಸೂರ ಕೀರ್ತಿ ಪ್ರಕಾಶನಾದ ಕೇಶವ ಗೋವಿಂದ ಕರುಣಿಸಿ ಕಾಯೋ ಎನ್ನ ಪಾದ ವೈಕುಂಠಾಧೀಶ 2 ಅಂಡಜಗಮನ ಭೂಮಂಡಲ ನಾಯಕ ಪುಂಡರೀಕಾ ವರದ ಪರಮಾತ್ಮನೆ ಚಂಡ ಪ್ರಚಂಡ ವೇದಾಂತ ರಹಸ್ಯನಾದ ಉದ್ದಂಡ ದೇವಾ ಕೊಂಡಾಡುವರ ನಿಮ್ಮ ಕರುಣಿಸಿ ಕೈಹಿಡಿದು ಕಾಯ್ವ ಭಾರವುಳ್ಳ ಘನನು ನೀನೂ ಪತಿ ` ಹೆನ್ನ ವಿಠ್ಠಲ' ನಿನ್ನಂದು ಸೇರಿದ ಅವರ ಹರುಷದಿ ಸಲಹೋ ಇನ್ನೂ 3
--------------
ಹೆನ್ನೆರಂಗದಾಸರು
ನೀರೇ ತೋರೇ ಪಯೋನಿಧಿ ವಾಸನಾ| ನೀರ ಜಾಸನಾನಂತ ಸರ್ವೇಶನಾ ಪ ಹಸ್ತ ವರದನ ಹರಿಮಧುಸೂದನ| ಹಸ್ತಿ ವಾಹಜನ ಸೂತಾದನಾ 1 ಕರಿಯೇರಿದಾತನ ಶರಕುರುವಾತನ| ಕರಿಹರ ಸಖ ಸನಾತನಾ 2 ಅನಂತ ಮಹಿಮ ಕೇಶವ ಮುಕುಂದನ| ಅನಂತ ಶಯನ ಗೋವಿಂದನಾ 3 ಮಕರ ಧ್ವಜ ಪಿತನ ಪರಮಾನಂದನ| ಮಕರ ಧ್ವಜ ಪಿತ ವಂದ್ಯನಾ4 ತಂದೆ ಮಹಿಪತಿ ನಂದನ ಜೀವನ| ಹೊಂದಿದವರ ಕಾವಾ ದೇವನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆಚ್ಚಬ್ಯಾಡ ನೀರುಗುಳ್ಳೆಗೆ ಸರಿಯಾದ ಕುತ್ಸಿತ ದೇಹವೆಂದಿಗು ಸ್ಥಿರವಲ್ಲ ನ- ಮ್ಮಚ್ಚುತನಾನಂತನ ನೆನವುತ ಅನುಗಾಲ ಸ್ವಚ್ಛನಾಗಲು ಹರಿ ಮೆಚ್ಚುವನು ಪ. ಸ್ವಾತಂತ್ರ್ಯ ಲೇಶವಾದರು ನಿನಗಿಲ್ಲದೆ ಪಾತಕ ಫಲಕಿನ್ನು ಗುರಿಯಾದಿಯಲ್ಲದೆ ಯಾತರ ಸುಖವೆಂದೀ ಸಂಸಾರ ಕೂಪದಿ ಪ್ರೀತಿ ಬಡುವಿ ಪಂಚಬಂಧದಲಿ ವಾತ ಪಿತ್ತ ಶ್ಲೇಷ್ಮ ಪೂಯ ಸೃಕ್ಪೂರಿತ ಘಾತವಾಗುವುದೊಂದು ನಿಮಿಷಾರ್ಧದಲಿ ಜಗ- ನ್ನಾಥ ನಂಬಿದರೆಂದಿಗು ಪದಪಂಕ- ಜಾತಪತ್ರದ ನೆರಳಿರಿಸುವನು 1 ದೇಹವೆ ಸ್ಥಿರವಿಲ್ಲವಾದ ಮೇಲಿದರ ಸ- ನ್ನಾಹವಾಗಿರುವದನೇನೆಂದು ಗ್ರಹಿಸುವಿ ಗೇಹಧನಾಪತ್ಯ ಸ್ನೇಹವೆಲ್ಲವು ವ್ಯರ್ಥ ಮೋಹವಲ್ಲದೆ ನಿಶ್ಚಯವಲ್ಲವು ಐಹಿಕಾಮುಷ್ಮಿಕವೆಂಬ ಸಕಲ ಸುಖ ದೋಹನ ಧೇನು ಸರ್ವೇಶ್ವರ ಹರಿಯ ಸ- ಮಾಹಿತ ಮನದಿಂದ ಭಜಿಸೆ ನಿನ್ನನು ಪಕ್ಷಿ ವಾಹ ಕೈ ಬಿಡದೆ ಕಾಪಾಡುವನು 2 ಒಂದು ದಿವಸ ನೀರೊಳದ್ದದಿದ್ದರೆ ದು- ರ್ಗಂಧ ಭೂಯಿಷ್ಠವು ಸಹಿಸಲಸಾಧ್ಯವು ಹಿಂದಿನ ಕರ್ಮಾನುಬಂಧವು ತಿಳಿಯದು ಮುಂದಿನ ಹೊಂದಿಕೆ ಒಂದಾದರು ಇಂದಿರಾವರ ವೆಂಕಟೇಶನ ಪಾದಾರ- ವಿಂದ ಧ್ಯಾನಗಳೆಂಬದೊಂದೆ ಪರಮಸುಖ ವೆಂದು ತಿಳಿದು ಭಕ್ತಿಯಿಂದ ಭಜಿಸು ನಮ್ಮ ತಂದೆ ಬಿಡದೆ ಕಾವನೆಂದೆಂದಿಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ನೆರೆನಂಬಿದವರನ್ನ ಪರಿವೆಮಾಡದೆ ಇನ್ನು ಪೊರೆಯದಿರುವರೆ ಪರಮಪುರುಷನೆ ನರಹರೆ ನಿಮ್ಮ ಚರಣ ಕಮಲವ ಹಾಗೆ ಸ್ಮರಿಸುತಿರುವಂಥ ಪರಮಪುಣ್ಯ ಭಕ್ತಜನ ರನು ಪಾಲಿಸದೆ ಇನ್ನು ಇರುವದುಚಿತವೆ ಪ ಅಮಿತ ಪರಾಕ್ರಮ ಕುಂಡಲಶಯನ ಅಕ್ರೂರ ವಂದ್ಯಾ ಪುಂಡರೀಕಾಕ್ಷನೆ ಪುಣ್ಯ ಪ್ರಭಾವನೆ ಕುಂಡಲಾಧಿಪ ದೇವ ಮಹಾನುಭಾವ ದಂಡಿದಾನವ ಖಂಡಗರ್ವ ಅಖಂಡಮುನಿಮನ ಮಂಡಲ ನಿಲಯ ಕೋದಂಡಧರನೆ ಅಂಡಜ ಗಿರಿವಾಸ ಹರಿಗೋವಿಂದನೆ 1 ಭೂಮಿಜರಮಣ ಸಂಪೂರ್ಣಾನಂದನೆ ಸಾಮಗಾನಲೋಲ ಸರ್ವೇಶನೆ ಕಾಮತಾರ್ಥಗಳೀವ ಕರುಣಾಸಾಗರ ದೇವಾ ಸ್ವಾಮಿ ಜಗನ್ನಾಥ ಸರ್ವೋತ್ತಮನೆ ಕಾಮ ಜನಕ ಸುದಾಮ ರಕ್ಷಕ ಪ್ರೇಮ ಸೀತಾರಾಮ ಜಗತ್ಪತಿ ಶೌರಿ ಶ್ರೀಹರಿ ಕೋಮಲಾಂಗ ಕೃಷ್ಣ ಮೂರುತಿ 2 ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನಾಗಿ ಸಕಲಭಾರಕರ್ತ ಶ್ರೇಷ್ಠನೆ ನಿಕರದಿ ಸಲಹುವ ನಿಜನಿತ್ಯಾನಂದಾನೆ ಪ್ರಕೃತಾದಿ ಪಾಲಿಸುವ ಪರಮಾತ್ಮನೆ ಸಕಲ ವೈಭವ ಚಿದ್ವಿಲಾಸನೇ ನಿಖರಾರೈ ನಿನ್ನಲಿ ನಮೋ ಭಕುತವತ್ಸಲ ಮುಕುತಿದಾಯಕ ರುಕ್ಮಣಿಯವರ 'ಹೆನ್ನವಿಠ್ಠಲಾ’ 3
--------------
ಹೆನ್ನೆರಂಗದಾಸರು