ಒಟ್ಟು 191 ಕಡೆಗಳಲ್ಲಿ , 58 ದಾಸರು , 178 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿದ್ಯಾವಿದ್ಯಕಮೀರಿದಾಗುಣತ್ರಯಾ ದಾವನು ಹೊಂದಾದಿಯಾ ನಿಚಯಾಸರ್ವಕ್ಕುದಾವಾಶ್ರಯಾ ಶುದ್ಧಾತ್ಮಾ ಸುಖದಾಲಯಾ ಸತುಚಿದಾನಂದೈಕರಸನಿಶ್ಚಯಾ ಸಿದ್ಧಾಂತ ಪ್ರತಿಪಾದ್ಯದಾವನುದಯಾ ಶ್ರೀ ದೇವ ದತ್ತಾತ್ರಯಾ 1 ಜಗದೋಳಾವನಸದುಗುಣಾ ನಿರಗುಣಾ ಸ್ವಾರೂಪದಾ ಲಕ್ಷಣಾ ಬಗೆ ಬಗೆಯಲಿ ಮಾಡಲು ವಿವರಣಾ ನೇತಿನೇತಿ ಶೃತಿ ವಚನಾ ಮುನಿಜನಾ ನಿಶ್ಚೈಸದಿಹ ರಾವನಾ ಪ್ರಗಟೀಸಿಹನು ನೋಡಿದೇ ನಿಜಘನಾ ಶ್ರೀದತ್ತ ನಿರಂಜನಾ 2 ನಿಶ್ಚಯಿಸದಿಹದಾವನಲಿ ತಾಂಪೌರಾಣಿತಿಹಾಸ ಭೇದಿಸುತಲೀ ನೆಲೆ ಗಾಣದೇ ನಿಲ್ಲಲೀ ಅಪದಿಂದ ಮೀಮಾಂಸತರ್ಕವರಲೀ ಬೆಂಡಾದವು ನೋಡಲೀ ಅಪರ ಘನ ಬಂದಿದೇಧರಿಯಲೀ ಬೆಂಡಾದವು ನೋಡಲೀ 3 ಪಾತಾಳಾದಿಯ ಲೋಕವೇಳುಸರಳು ದಾವನ ಪದ ಕಟಗಳು ಖ್ಯಾತಿಂದೇಭುವನೇಳು ಊಧ್ರ್ವಕಿರಲು ನಾಭಿಂದ ಸಿರವಾಗಲು ಸೀತಾಂಶು ರವಿದಾವನಂಬಕಗಳು ಅಶಾವೆ ಶ್ರೀತಂಗಳು ದತ್ತೆನಿಸಲು4 ಅಮರಂಗಣಾ ದಾವನುದರ ವಿಶ್ವಕಾಗಿ ಭುವನಾ ಶ್ರೀಮದ್ರಮಾರಮಣಾ ನಖದಾಧೀನಾ ಶ್ರೀದತ್ತ ಮನ ಮೋಹನಾ 5 ಸರ್ವೆಶ ಸರ್ವೋತ್ತಮಾ ಸರ್ವಾಧಾರನುದಾವ ದೇವಗರಿಮಾ ಪೂಜ್ಯನು ಸಕಲಾಗಮಾ ಸರ್ವಾತೀತನು ದಾವನಂಘ್ರಿ ಕಮಲಾ ಸೇವಿಸುವಳು ಶ್ರೀರಮಾ ಶ್ರೀದತ್ತ ಗುರುವೇನಮಃ 6 ಅನಸೂಯಾ ಕರರತ್ನನಾಗಿಜನಿಸೀ ಇಷ್ಟಾರ್ಥವನು ಪೂರಿಸೀ ಯೋಗಾಂಗವನು ಪ್ರಕಟಿಸಿ ಸ್ಮರಿಸೀದವರಲ್ಲಿ ಬಹುಕರುಣಿಸೀ ಶ್ರೀ ದತ್ತಪದ ಧ್ಯಾಯಿಸೀ 7 ಮೆರೆವಾ ಮುಪ್ಪುರದಿಂದೇರುವಾ ಸಾರೀ ಸಾವಿರದಳ ಪದ್ಮದಿರುವಾ ಸ್ವಾನಂದ ಭೋಗಿಸುವಾ ಮುದ್ರಾಂಕುರವ ಬೀರುವಾ ಶ್ರೀದತ್ತ ಗುರು ಎನಿಸುವಾ8 ಕಾತ್ರ್ಯವೀರ್ಯವರವಾಯದುರಾಯನುದ್ಧರಿ ಸಿದಾ ಗುರುಮಹೀಪತಿ ನುಡಿಸಿದಾ ಸ್ವಾನಂದ ಸುಖ ಬೀರಿದಾ ಸದಾ ಪಡೆವನು ಗತಿಸಂಪದಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವೆಂಕಟರಮಣ ವೇದಾಂತಕೋಟಿವಂದ್ಯ ಪತಿ ಏಳೆನ್ನುತ ಪ. ಪಂಕಜಮುಖಿ ಪದ್ಮಾವತಿ ಸರ್ವಾ- ಲಂಕಾರದ ನಿದ್ದೆ ಸಾಕೆನ್ನುತ ಅ.ಪ. ಮಂಗಲಚರಿತ ಭುಜಂಗಶಯನ ನಿ- ನ್ನಂಗದಾಯಾಸವ ಪರಿಹರಿಸಿ ಪೊಂಗಲಶದಿ ಉಷ್ಣೋದಕ ಗಂಧ ತೈಲಾ- ಮೂರ್ತಿ 1 ದಧಿಯ ಪೃಥುಕದಲಿ ಹದಗೈದು ಮಧುರದಿ ಮಧುಸೂದನ ನಿನ್ನ ಪದದ ಮುಂದೆ ಸದ್ ಹೃದಯರು ತಂದಿಹರು ಸಮರ್ಪಿಸೆ ಮದಜನಕ ನಿನ್ನ ಓಲೈಸುವರಯ್ಯ 2 ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿ ಚೆನ್ನಾದ ಗೋಕ್ಷೀರವನ್ನು ತಂದು ಉನ್ನತ ಮಹಿಮನೆ ಉಣ್ಣೆಂದು ಲಲಿತ ಸು- ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ 3 ವಿಧವಿಧ ಷಡುರಸಭರಿತ ಮನೋಹರ ಸುಧೆಗೆಯಿಮ್ಮಡಿ ಮಧುರತ್ವದಲಿ ಮೃದುವಾದ ಉದ್ದಿನ ದೋಸೆಯ ಸವಿಯೆಂದು ಪದುಮನಾಭನೆ ನಿನ್ನ ಹಾರೈಸುವರಯ್ಯ 4 ಕದಳಿ ಉತ್ತಮ ಫಲಗಳ ತಂದು ರಕ್ಕಸವೈರಿಯೆ ನಿನ್ನ ಮುಂದೆ ಚೊಕ್ಕಟವಾಗಿಡೆ ಲೆಕ್ಕ ಲೇಖನಗಳ ವಾಸುದೇವ ನೀನೇಳಯ್ಯ5 ಸಾರಹೃದಯ ಗೌಡಸಾರಸ್ವತ ವಿಪ್ರ ಭೂರಿ ವೇದಾದಿ ಮಂತ್ರದ ಘೋಷದಿ ಶ್ರೀರಮಣನೆ ದಯೆದೋರೆಂದು ಕರ್ಪೂರ- ದಾರತಿಯನು ಪಿಡಿದಿಹರು ಶ್ರೀಹರಿಯೇ 6 ಭಾಗವತರು ಬಂದು ಬಾಗಿಲೊಳಗೆ ನಿಂದು ಭೋಗಿಶಯನ ಶರಣಾದೆನೆಂದು ಜಾಗರದಲಿ ಮದ್ದಳ ತಾಳರಭಸದಿ ರೇಗುಪ್ತಿರಾಗ ಸಂಗೀತ ಪಾಡುವರಯ್ಯ 7 ಕರುಣಾಸಾಗರ ನಿನ್ನ ಚರಣದ ಸೇವೆಯ ಕರುಣಿಸೆಂದೆನುತಾಶ್ರಿತ ಜನರು ಕರವ ಮುಗಿದು ಕಮಲಾಕ್ಷ ನಿನ್ನಯ ಪಾದ- ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ 8 ನಾನಾ ಜನರು ಬಂದು ಕಾಣಿಕೆ ಕಪ್ಪವ ಶ್ರೀನಿವಾಸನೆ ನಿನ್ನ ಪದಕೆ ಒಪ್ಪಿ ದಾನವಾಂತಕ ನಿನ್ನ ದಯವೊಂದೆ ಸಾಕೆಂದು ಧ್ಯಾನಮಾಳ್ಪರು ದಯಮಾಡೆಂದು ಹರಿಯೇ 9 ನೀನೆ ಗತಿಯೆಂದು ನಿನ್ನ ನಂಬಿಹರು ಲ- ಕ್ಷ್ಮೀನಾರಾಯಣ ಪುರುಷೋತ್ತಮನೆ ಮಾನದಿ ಭಕ್ತರ ಸಲಹಯ್ಯ ಸಂತತ ಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ 10
--------------
ತುಪಾಕಿ ವೆಂಕಟರಮಣಾಚಾರ್ಯ
ವೇದವಿದಿತ ಶೌರೀ ಮುರಾರೀ ಮಧು ಕೈಟಭವೈರೀ ಪ ಭೋಗಿ ಶಯನ ಮಾಯ ಶ್ರೀಗುರು ಚಿನ್ಮಯ ನಾಗಭೂಷಣಹೃದಯಾ ಸದಯಾ ಅ.ಪ ನಡುಗಡಲಿನೊಳೆನ್ನ ಬಿಡಬೇಡ ಸಲಹೆನ್ನ ಅಡಿಗೆರಗುವೆ ನಿನ್ನ ಶ್ರೀಶ ಮೋಹನ್ನಾ ಕಡುಬಾಲ ಧ್ರುವ ತನ್ನದೃಢದಿ ನೆನೆಯೆ ನಿನ್ನ ಪಡೆದನು ಪದವಿಯ ತಾ ವಿನೀತ 1 ಅಜಮಿಳವರದನೆ ಗಜರಾಜಗೊಲಿದನೆ ಸುಜನ ಸಮ್ಮಾನಿತನೆ ಮಾಂಗಿರಿಯರಸನೆ ಅಜಸುರ ವಿನುತನೆ ರಾಮದಾಸಾರ್ಚಿತನೆ ಭಜಕ ವಾರಿಧಿಸೋಮ ವಿರಾಮಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವ್ಯರ್ತವಾಯಿತು ಜನುಮಾ | ಹರಿಭಕ್ತಿ | ಅರ್ಥಿಯ ನೆಲೆಗೊಳ್ಳದೇ ಪ ನೊಣ ಮಧು ಬಿಂದುದಲೀ ಕುಳಿತಂತೆ | ವಣ ವಿಷಯದ ಸುಖಕ | ಹೆಣಗುತ ನಿಶಿದಿನದೀ | ತಾಪತ್ರಯ | ಕುಣಿಯೊಳು ಹೊರಳುತಲೀ 1 ಅವನಿಲಿ ಸಂಸಾರದೀ ಸಂಟರ್ಘಾಳಿ | ರವದಿಯಾ ತೆರೆ ಶಿಲುಕೀ | ವಿಧಿ ಬರ | ಹ್ಯಾವ ತಿಳಿಯದೆ ಮರುಗೀ 2 ಭೋಗಿನಾ ತ್ಯಾಗಿಯಾಗಿ ಆಯುಷ್ಯ | ನೀಗಿ ಯಚ್ಚರವಿಲ್ಲದೇ | ಶ್ರೀ ಗುರುಮಹಿಪತಿ ಸುತಪ್ರಭು | ಭಾಗವತರ ಕೂಡದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವ್ಯರ್ಥ ಕೆಟ್ಟರು ಯಿಂದು ನರಮನುಜರು ಸಾರ್ಥಕ ಮಾಡಿಕೊಳ್ಳರು ಶರೀರವುಳ್ಳವರು ಪ ಮರುಳಾಟ ಪರ ಬುದ್ಧಿಯೊಳು ಮುಳುಗಿ ವಿಷಯವ ಭೋಗಿಸಿ ಮದ್ದು ತಿಂದಂತೆ ಇದ್ದಾದರು ಉದಯದಲಿ ಎದ್ದು ಕುಳಿತು ಒಮ್ಮೆ ಹರಿಯಂದು ನುಡಿಯದೆ 1 ಹರಿವ ಜಲವ ಮಿಂದು ಹರಿಗೆ ಅರ್ಪಿಸುತೇವೆಂದು ಬರಿದೆ ಬಾರದೆ ಬಿಂದು ಜಲ ತಂದು ಅರಘಳಿಗೆ ಅಚ್ಯುತಗೆ ಭಕುತಿಯಲಿ ಅಭಿಷೇಕ ಯರದು ಯಮಬಾಧೆ ಕಳೆಯಲರಿಯದ ಮಂಕು 2 ಅಡವಿಯಿಂದಲಿ ಒಂದು ತುಳಸಿದಳವನೆ ತಂದು ತಡಿಯದಲೆ ತಾವರೆದಳನಯನನ ಕರವ ಮುಗಿದು ಮುಕುತಿ ಪಡಿಯಲೊಲ್ಲದ ಪರಮ ಪಾಪಿಷ್ಟ ಜನರಯ್ಯಾ3 ಪತ್ರ ಫಲ ಪುಷ್ಪ ತೋಯ ಮುಂದಿರಿಸಿ ನೀಲ ಗಾತ್ರಗೆ ನೈವೇದ್ಯವೆಂದು ಬಗೆದು ಸ್ತೋತ್ರವನೆ ಮಾಡಿ ಪ್ರದಕ್ಷಿಣೆ ನಮಸ್ಕಾರ ನಿತ್ಯ ಒಂದೊಂದು ಮಾಡದೆ ಕರ್ಮಿಗಳು4 ಇಂದಿನ ಹಮ್ಮು ನಾಳಿಗೆಯಿಲ್ಲ ಈ ದೇಹ ಇಂದು ಬಂದದೆ ನಾಳೆ ಬರಲರಿಯದೂ ಸಿಂಧುಶಯನ ನಮ್ಮ ವಿಜಯವಿಠ್ಠಲನ ಮನ ಬಂದಾಗ ನೆನೆದು ಭವವನದಿ ಉತ್ತರಿಸದೆ 5
--------------
ವಿಜಯದಾಸ
ವ್ಯರ್ಥವಲ್ಲವÉ ಜನ್ಮ ವ್ಯರ್ಥವಲ್ಲವÉ ಪ ತೀರ್ಥಪಾದರ ಭಜಿಸಿ ಕೃತಾರ್ಥನಾಗದವನ ಜನ್ಮಅ.ಪ. ಅರುಣ ಉದಯದಲ್ಲಿ ಎದ್ದು ಸರಿತದಲಿ ಸ್ನಾನವ ಮಾಡಿಅರಳುಮಲ್ಲಿಗೆ ಮಾಲೆ ಹರಿಯ ಚರಣಕರ್ಪಿಸದವನ ಜನ್ಮ1 ಒಂದು ಶಂಖ ಉದಕ ತಂದು ಚಂದದಿಂದ ಹರಿಗೆ ಎರೆದುಗಂಧ ಪುಷ್ಪದಿಂದ ಹರಿಯ ವಂದನೆ ಮಾಡದವನ ಜನ್ಮ 2 ಕರವ ಮುಗಿದು ಸ್ತುತಿಸದವನ ಜನ್ಮ 3 ಭೋಗಿಶಯನನ ದಿನದಿ ಸಕಲ ಭೋಗಗಳನು ತಾನು ತೊರೆದುಭಾಗವತರ ಮ್ಯಾಳದಿಂದ ಜಾಗರಣೆ ಮಾಡದವನ ಜನ್ಮ 4 ಜಂಗಮರೊಳಗಧಿಕವೆನಿಪ ಭಂಗುರ ಮನುಷ್ಯದೇಹ ಪಡೆದುರಂಗವಿಠಲನೆನಿಪ ಪಶ್ಚಿಮರಂಗಗರ್ಪಿಸದವನ ಜನ್ಮ 5
--------------
ಶ್ರೀಪಾದರಾಜರು
ವ್ಯರ್ಥವಾಯಿತೆನ್ನಿ ಜನ್ಮ ಸ್ವಾರ್ಥವಿಲ್ಲದೆ ಪರ ಕೃತ್ತಿ ವಾಸನ ಪೂಜೆಯನ್ನು ಮಾಡದೆ ಪ ಹಿಂದೆ ಜನನಿ ಗರ್ಭವಾಸದಿಂದ ಹೊರಟು ಬಂದ ಮೇಲೆ ಕೊಂದು ದಿವಸನಾನು ನಿಷ್ಠೆಯಿಂದ ಲಿರ್ದು ಆಗಮೋಕ್ತ ದಿಂದ ಶಿವಗೆ ಜಲದಿ ರುದ್ರದಿಂದ ಜಳಕ ಗೈದು ಶ್ರೀ ಗಂಧ ಪುಷ್ಪ ಪತ್ರೆಯಿಂದ ಪೂಜೆಯನ್ನು ಮಾಡದೆ 1 ಪುಣ್ಯನದಿಯು ಪುಣ್ಯಕ್ಷೇತ್ರ ಪುಣ್ಯ ಭೂಮಿಯಲ್ಲಿ ವಾಸ ಪುಣ್ಯಕಥೆಯು ಪುಣ್ಯತೀರ್ಥ ಸ್ನಾನವಿಲ್ಲದೆ ಪುಣ್ಯ ಮೂರ್ತಿಯಲ್ಲಿ ಧ್ಯಾನ ಪುಣ್ಯಪುರುಷರೊಡನೆ ಸಂಗ ಪುಣ್ಯ ಕಾಲದಲ್ಲಿ ಶಿವನ ಪೂಜೆಯನ್ನು ಮಾಡದೆ 2 ಮಂಡೆ ಜುಟ್ಟ ಸೂತ್ರವನ್ನು ಖಂಡಿಸಿರ್ದುಯತಿಎನುತ್ತ ದಂಡವನ್ನು ಧರಿಸಿ ಪೀತ ಕೌಶೇಯ ವಸನವನ್ನು ಪೊದ್ದು ಮೊಂಡತನದಿ ಸಕಲ ವಿಷಯ ಭೋಗವನು ಭೋಗಿಸುತ್ತ ಮಂಡೆ ಬೋಳನಾದರೇನು ಮನವ ಬÉೂೀಳಮಾಡದೆ 3 ಕಾಮಾರಿಯನ್ನು ಆಗಮೋಕ್ತದಿಂದ ಪೂಜೆಯನ್ನು ಮಾಡಿ ಘೋರಪಾತಕಂಗಳನು ಸುಟ್ಟುಸೂರೆಮಾಡದೆ 4 ಬೆಟ್ಟದೊಳಗನಂತ ವ್ಯಕ್ಷ ಹುಟ್ಟಿಮಡಿದ ವೊಲು ಜನ್ಮ ನಷ್ಟ ವಾಯ್ತು ವಿಧಿಯು ಬರೆದಿಟ್ಟ ದುರ್ಲಿಖಿತವೆಲ್ಲ ತುಟ್ಟಿಸಿತ್ತು ತಿಳಿದು ಶಿವನ ಮುಟ್ಟಿ ಪೂಜಿಸಾದರಿನ್ನು ಕೆಟ್ಟು ಹೋಗ ಬೇಡ ಲಕ್ಷ್ಮೀಪತಿಯ ಸ್ಮರಣೆಮಾಡದೆ 5
--------------
ಕವಿ ಪರಮದೇವದಾಸರು
ಶ್ರೀ ಗಿರಿಜಾತನಯಾ ಮಹೋದಯಾಶ್ರೀ ಗಿರಿಜಾತನಯಾ ಪಭಾಗವತಪ್ರಿಯ ಭೋಗಿಜನಾಶ್ರಯಬಾಗಿನ'ುಸುವೆನಯ್ಯಾ ಅ.ಪಸುರವರ ಪೂಜಿತ ವರಸಿದ್ದಿಸಂಯುತಶರಣಪಾಲಕನಿರತ 'ಖ್ಯಾತಾ 1ಪಾಶಾಂಕುಶಧರ ದಾಸಸಂಕಟಹರಈಶಕುವರ ಸುಂದರ ಸುಧೀರ 2ಮೋದಕಸ'ತ ಬಾಧಕರ'ತವೇದವಚನ'ನುತ ಪುನೀತ 3ರಕ್ತಮಾಲ್ಯಾಂಬರಾ ಸಕ್ತದೇವಗುರುಭಕ್ತಿದಾನ ಚತುರದ್ವೈಮಾತುರ 4ಏಕವದನ ಗಣಾಧೀಕ 'ಭೂಷಣಭೀಕರ ರಿಪುಹರಣ ಚಿದ್ವನ 5
--------------
ಹೊಸಕೆರೆ ಚಿದಂಬರಯ್ಯನವರು
ಶ್ರೀ ಗುರುವರ್ಯರಿಗೆ ಜಯಮಂಗಳ ನಿತ್ಯ ಭೋಗಿಶಯನಪ್ರಿಯಗೆ ಶುಭಮಂಗಳ ಪ. ಆನಂದರತ್ನರು ಜ್ಞಾನಪ್ರಕಾಶ ಎಂದು ನಾನಾ ವಿಧದಿ ಬಿರುದು ಪೊತ್ತವಗೆ ಶ್ರೀನಿವಾಸನನು ಧ್ಯಾನವ ಮಾಳ್ಪಂಥ ಜ್ಞಾನಪೂರ್ಣರಾದ ಗುರುಗಳಿಗೆ 1 ಪರಮಪ್ರಿಯರು ಪರಿಮಳರೆಂದೆನಿಸುತ ಪರಿ ನಾಮವ ಧರಿಸಿಹಗೆ ನರಸಿಂಹನನು ಹೃತ್ಸರಸಿಜದಲಿ ಕಂಡು ಹರುಷವ ಪಡುವಂಥ ಗುರುಗಳಿಗೆ 2 ತಂದೆ ಮುದ್ದುಮೋಹನವಿಠ್ಠಲನೆಂಬಂಕಿತ ಚಂದದಿಂದ ಗುರುಗಳಿಂ ಪಡೆದವಗೆ ಬಂದ ಭಕ್ತರಿಗೆಲ್ಲ ಅಂಕಿತಕೊಟ್ಟು ಭವ ಬಂಧನವ ಬಿಡಿಸುವ ಗುರುಗಳಿಗೆ 3 ಚಂದ್ರನ ತೆರದಿ ಪರಮಾರ್ಥ ಚಂದ್ರೋದಯವ ನಿರ್ಮಿಸುವರಿಗೆ ಚಂದದಿಂದ ಪರತತ್ವ ಪೇಳುವ ಸುಂದರ ಮೂರುತಿ ಗುರುಗಳಿಗೆ 4 ಅಪಾರ ಕರುಣಾಜಲಧಿ ಎಂದೆನಿಪರಿಗೆ ಶ್ರೀಪತಿ ಪಾದವ ತೋರ್ವಂಗೆ ಗೋಪಾಲಕೃಷ್ಣವಿಠ್ಠಲನ ಧ್ಯಾನವನಿತ್ತುಕಾಪಾಡುವಂಥ ಶ್ರೀ ಗುರುಗಳಿಗೆ 5
--------------
ಅಂಬಾಬಾಯಿ
ಶ್ರೀ ಪ್ರಾಣೇಶದಾಸಾರ್ಯರ ಸ್ತುತಿ ತೆರಳಿದರು ಪರಮ ತೋಷದಲಿ ಹರಿಪರಕೆ |ಹರಿಪ್ರೀಯರಾದ ಪ್ರಾಣೇಶದಾಸರು ತ್ವರದಿ ಪ ನಿರುತದಲಿ ಹರಿಪೂಜೆ |ಮರಿಯದಲಿ ಮಾಡಿ ಬಲು |ಸ್ಥಿರ ಬುದ್ಧಿ ಪೂರ್ವಕದಲಿ |ಗುರುಗಳಲಿ ಸರ್ವಜ್ಞರಾಯರಿಂದಧಿಕ ಮ ||ತ್ತಿರಲುಂಟೆ ಎಂದು ತಿಳುಹಿ |ದುರುಳ ಜನರನುಸರಿಸದಲೆ ಕವಿಗಳೊಡನಾಡಿ |ಚರಿಸಿ ದೇಶಗಳಲ್ಲಿ ಮೆರೆದು ಖ್ಯಾತಿಯ ಪಡದು 1 ಭಾಗವತ ಶ್ರೇಷ್ಟ ಜಗನ್ನಾಥ ದಾಸಾಖ್ಯರಡಿ |ಜಾಗುಮಾಡದಲರ್ಚಿಸಿ |ಭೋಗಿವರ ಶಯನ ಪ್ರಾಣೇಶವಿಠಲಾಂಕಿತವ ||ಆ ಗುರುಗಳಿಂದ ಕೊಂಡು |ರಾಗದ್ವೇಷಗಳೆಂಬ ಅರಿಗಳನು ಸಂಹರಿಸಿ |ರಾಗದಲಿ ಹರಿಕಥನ ಕವನ ರೂಪದಿ ಪೇಳಿ2 ಪ್ರಾಣಮತವನನುಸರಿಸಿ ಆಚರಣಿಯನು ಮಾಡಿ |ಪ್ರಾಣಿಗಳಿಗೆ ತಿಳಿಸದೆ |ಕ್ಷೋಣಿಯೊಳಗಿನ್ನು ಇರಸಾಕೆಂದು ಆ |ಚಿತ್ರಭಾನು ಆಶ್ವಯುಜ ಶುದ್ಧ ಸಪ್ತಮಿಯಲಿ ||ಜ್ಞಾನಪೂರ್ವಕ ಲಯ ಚಿಂತನೆಯ ಮಾಡಿ ಗುರು |ಪ್ರಾಣೇಶ ವಿಠಲನಿದ್ದಾ ಪುರಕೆ ಜವದಿಂದ3
--------------
ಗುರುಪ್ರಾಣೇಶವಿಠಲರು
ಶ್ರೀಗದಾಧರ ಪಾಹಿಮಾಂ ಹರೆ ಭೋಗಿಶಯನ ಶೌರೇ ಪ ಯಾಗ ಯೋಗ ಗಮ್ಯ ನೃಹರೆ ತ್ಯಾಗಶೀಲ ಭೋ ಮುರಾರೆ ಅ.ಪ ಮೃತಮಾನವ ಸುಗತಿ ದಾತಾ ಪತಿತಾನತ ದಿವ್ಯ ನೀತ ಹರಣ ಖ್ಯಾತಾ ತಾಪ ಸನ್ನುತ ಚರಿತಾ 1 ಶೃತಿ ಪುರಾಣ ಭರಿತ ವಿದಿತ ರಥಾಂಗ ಮಣಿರಂಜಿತ ವಿನುತ ನಮಿತ ಖ್ಯಾತಮಾಂಗಿರಿ ವರೂಥ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀನಿವಾಸ ಸಲಹೋ ನಮ್ಮ ಶ್ರೀನಿಧಾನ ಚರಣನೆ ಪ ಧ್ಯಾನ ನಿರತ ಮೌನಿ ಜನರ ಮಾನಸಾಬ್ಜಹಂಸನೆ ಅ.ಪ ನಕ್ರಮುಖದಿ ಸಿಕ್ಕಿದಿಭನನಕ್ಕಿರಿಂದ ಪೊರೆದನೆ ಚಕ್ರಧರ ತ್ರಿವಿಕ್ರಮಾದಿ ಚಕ್ರಭೋಗಿ ಶಯನನೆ 1 ಬಿಟ್ಟು ನಿನ್ನ ಭ್ರಷ್ಟನಾಗಿ ಕೆಟ್ಟ ಜನ್ಮ ಜನ್ಮದೆ ಹುಟ್ಟಿ ಹುಟ್ಟಿ ಕಷ್ಟಪಟ್ಟಿ ಕೃಷ್ಣ ನಿನ್ನ ನಂಬಿದೆ 2 ಶರಣಜನರ ಪೊರೆವನೆಂಬ ಬಿರುದು ಧರಿಪನಲ್ಲೆಲಾ ಹರಿಣ ಹರಣಧರದೊಳಿರುವ ಕರುಣಿ ವರದ ವಿಠಲ 3
--------------
ವೆಂಕಟವರದಾರ್ಯರು
ಶ್ರೀನಿವಾಸಸುಗುಣೈಕನಿಧೆ ಶ್ರೀ ಮಾನಸಹಂಸ ದಯಾಜಲಧೇ ಪ ಕಾಯ ಮಾಪಮಧುರಾಲಾಪ ತೋಯಜಾಕ್ಷ ಪೃಥುಳಾಯತಪಕ್ಷ ನಿ ಧಾಯ ಹೃದಿಧ್ಯಾಯಾಮಿ ಹರೆ 1 ವಿಗ್ರಹಮಖಿಳಶುಭಗ್ರಹಣಂ ಮದ ನುಗ್ರಹಾರ್ಥಮದಿತಿಷ್ಠವಿಭೋ ಉಗ್ರಮುಖ ವಿಬುಧಾಗ್ರ್ಯಪೂಜಿತ ಸ ಮಗ್ರ ಸಮರ್ಯಾಂ ಸ್ವೀಕುರುಭೋ 2 ದಾದ್ಯ ಕಲ್ಪಿತಂ ಭವದರ್ಥಂ ಸದ್ಯಂಬುನಿಮೇಜ್ಯ ಸುಖೋಷ್ಣಮಿದಂ3 ಕಸ್ತೂರಿತಿಲಕಂ ಸುಮುಖೋ ಕೌಸ್ತುಭರತ್ನಮಜಸ್ತುತಮಂಡನ ಮಸ್ತುತನೌಗುಣ ಭೂಷಣತೇ 4 ಮಂದಾರಕಾ ಮಾಲ್ಯಾಕಲಿತಂ ಗದ ಬಂಧುರ ಸುಗಂಧಿ ತುಳಸಿಕಾ ಬೃಂದಮಲಂಕುರು ಸನ್ನಿಹಿತಂ 5 ಗಂಧರ್ವಾಮರ ವಂದಿತ ಮಲಯಾ ಗಂಧಲೇಪನಮಾಕಲಯಾ ಗಂಧವಾಹನುತ ಗಂದವತೀ ಗುಣ ಬಂಧುರ ದೂಪಂ ಜಿಘ್ರಹರೇ 6 ತಾಪಸ ಮಾನಸ ದೀಪಹರೇ ರೂಪಾಲೋಕಯ ಶ್ರೀನೃಹರೇ 7 ಮಂತ್ರಪೂತಮುಖ ಯಾತ್ರಾಧಾರ ಸು ಮಂತ್ರಪುಷ್ಪಂ ಸ್ವೀಕುರುಹೇ 8 ಛತ್ರಮಿದಂ ಭುವನತ್ರಯನಾಥಸ ವಿ ಚಿತ್ರದಂತ ಚಾಮರಯುಗಳಂ ಯಾತ್ರ ಭೋಗಾ ಮದಿರಾಜಕಳಂ 9 ಮಧುಮಧುರಿಮ ಪಾಯಸಮತಿಹೃದ್ಯಂ ಮಧುನಾಸ್ವೀಕುರು ನೈವೇದ್ಯಂ 10 ಬಿಂಬಾಧರಮಿಂದುಬಿಂಬವದನ ಶಿಶಿ ರಾಂಬುಪಿಬಾಮಲಘನಸಾರಂ ತಂಬಹುಮನ್ವಸ ಕರ್ಪೂರಂ 11 ಕಾರ ನಿಭೃತ ಪರಿವಾರ ವಿಭೋ ನೀರಾಜನಮತಿತಾರಾಯಿತ ಕ ರ್ಪೂರಾರ್ತಿಕಮಂಗೀಕುರು ಭೋ 12 ಪಕ್ಷ ಪ್ರದಕ್ಷಿಣಮನುವಾರಂ ಪಕ್ಷಿಗಮನನಿಜವಕ್ಷೋಧೃತಶುಭ ಲಕ್ಷಕರೋಮನಮಸ್ಕಾರಂ13 ಸಾಗರತನಯಾಯಾಗವಿಹಿತ ಭೂ ಭಾಗಧೇಯನೀಳಾಸಹಿತಂ ಭೋಗಿಶಯನಮನುರಾಗ ಪರಿಷ್ಕøತ ಮಾಗಮಗೋಚರ ಕುರುಲಸಿತಂ14 ಆರಾಧನಮಪಜಾಯತಮುಪ ಚಾರಮಿಷೇಣ ಮಯಾಚರಿತಂ ಕಾರುಣ್ಯೇನ ಕ್ಷಮಸ್ಸೇದಂ 15 ಹರಿಣಾರ್ಯದ್ರಿ ನಿಕೇತನ ತೇ ಚರಣಾರಾಧನ ಕರಣಾಂಚಿತಮಿತಿ ವರದವಿಠಲಗೀತಂ ನುತೇ 16
--------------
ವೆಂಕಟವರದಾರ್ಯರು
ಸಾಗಿ ಬಾರಯ್ಯ ನೀ | ಬಾಗಿ ನಮಿಸುವೇಯೋಗಿಗಳರಸನೇ ಶ್ರೀನಿವಾಸ ಪ ಭೋಗಿಶಯನನೆ ನಿನ್ನ ಭಾಗವತರು ಬಂದುಜಾಗು ಮಾಡದೆ ನಿನ್ನ ಬಾಗಿಲೊಳು ನಿಂತಿಹರೋ ಅ.ಪ. ಇಂದಿರೇ ರಮಣಗೋವಿಂದ ನೀನೇ ಗತಿಯೆಂದು ಭಜಿಸುತಿರಲುಆನÀಂದದಿಂದತÀಂದೆಯ ಬಾಧೆಗೆ ತಂದು ತೋರಲು ಸ್ತಂಭ ತಂದೆ ತಾಡನೆಯ ಮಾಡಲುಬಂದೆಯಾ ಪರಿಪರಿ ವಿಧ ಭಯದಿಂದವೋಡಲು ಬಂದು ಅಸುರನ್ನಆರ್ಭಟಿಸಿ ಕೆಡಹುತಛಂದದಲಿ ಬಗೆಯುತಸುರನ್ನ ಕೊರಳೊಳು ಮಾಲೆ ಅಂದು ಧರಿಸಿದ ಅಧಿಕ ಸಂಪನ್ನಪ್ರಳಯಾಗ್ನಿಯಂತಿರೆ ನಿನ್ನ ಸ್ತುತಿಸಲು ಅರಿಗೊಸೆದಿನ್ನು ಅನುತಿರಲುನಿನ್ನಯಮುಂದೆ ಭಜಿಸುತ ಕಂಡು ಬರಲಾನಂದದಿಂದಲಿ ಚಂದದಿ ಸಲಹಿದಾನಂದದಲಿ ಮಂದರೋದ್ಧರ ಎನ್ನ ಸಲಹೋ 1 ಮೃಗ ಬೇಡಲು ಬಾಣ ಎಸೆಯಲು ಅದು ಲಕ್ಷ್ಮಣಾಯೆಂದು ಕೂಗಲುಮತ್ತಾತ ಪೋಗಲು ಇತ್ತ ರಾವಣನು ಕರೆದೊಯ್ಯೆ ಸತಿಯಳ ವಾತಸುತ ತಾನೆನಿಸೇ ನೀ ಮುನ್ನಾ ಅವ ಪೋಗೆ ಉಂಗುರ ಖ್ಯಾತಿಯಿಂದಲಿನೀಡಲದಕಿನ್ನು ತನುಮನದ-ಲತಿ ಭೋಗದಿ ಶಿಖೆಯ ಶಿರೋಮಣಿಯನ್ನೆ ಕೊಡಲನುಗ್ರಹದಲಿಛಾತಿಯಿಂದಲಿ ಅವಗೆ ವಿಧಾತ ಪದವಿಯ ಪಾಲಿಸಿದೆ ಜಗನ್ನಾಥಇಂದ್ರಾದ್ಯಮರ ವಂದಿತ ವೀತಭಯ ಜಗನ್ನಾಥ ಸಲಹೋ2 ಮಂಗಳಾಂಗನೆ ನಿನ್ನ ಸುಖವ ಕೊಟ್ಟು ಅಂಗನೆಯರಬಾಧೆಬಿಡಿಸೊ ಇಂದುಅಂಗನೇಯರು ಬಂದು ಭಂಗಪಡಿಸಲದಕೆ ಪೋಗುತಾ ಮಾರನ್ನಬಾಧೆಯ ಕಳೆಯುತಾಪರಿಪರಿಯ ಸುಖಗಳ ಸಂಗಡಿಲ್ಲದೇ ನೀಡಿಯೊ ಮಲ್ಲಮರ್ದನನೇ ಎನುತಿರೆಬೇಗದಿಂದಲಿ ಓಡಿಪೋದೆಲ್ಲೊ ಭಕ್ತರನು ಸಲಹುವೆನೆಂಬೋಬಿರುದು ನಿನಗೆ ಉಂಟಲ್ಲಾಅನುತಿರಲು ನಿನ್ನಯ ಎನ್ನ ಮನ ಉತ್ತಂಗಸುತಸತ್ಸಂಗ-ವೀವುದು ವಿಹಿತ ದೇವನೇತುರಂಗನಾಥನೇ ರಂಗವಿಠಲನೆ ದೇವ ದೇವರ ದೇವ ಸಲಹೋ3
--------------
ಶ್ರೀಪಾದರಾಜರು
ಸಾಧು ಆದವ ಸಾಧುರ ಬಲ್ಲನೋ | ಸಾಧು ವೇಷದಿ ಮೆರೆವವ ಸಲ್ಲನೋ ಪ ಧರಿಯೊಳು ಲೋಕದಿ ಸರೀ | ಹೊರವಳಿ ನಡತಿಯ ತೋರಿ | ಅವ | ತೋರಿ ತೋರದಲಿಹನೋ 1 ಯೋಗಿ | ಭೋಗಿಗೆ ಭೋಕ್ತನೂ ಆಗಿ | ಆವ | ಆಗಿ ಆಗದಲಿಹನೋ 2 ಗುರುವರ ಮಹಿಪತಿಸ್ವಾಮಿ ಅರಿತಾ ನಂದದ ಪ್ರೇಮಿ | ಅವ | ಪ್ರೇಮಿ ಪ್ರೇಮಿಗೆ ವಲಿವನೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು