ಒಟ್ಟು 482 ಕಡೆಗಳಲ್ಲಿ , 83 ದಾಸರು , 429 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀಹರಿಯಾ ಬಲಗೊಂಬೆ ಕೋಲೆ ಪ ಮೊದಲು ನಮ್ಮ ಗುರು ರಘುಪತಿಯ ಪಾದಕ್ಕೆ ಮುದದಿಂದ ಎರಗಿ ಬಿನ್ನೈಪೆ ಕೋಲೆ ಮುದದಿಂದ ಎರಗಿ ಬಿನ್ನೈಪೆ ಮನದಲ್ಲಿ ಪದಮನಾಭನ್ನ ತೋರೆಂದು ಕೋಲೆ1 ಜನುಮ ಜನುಮದಲ್ಲಿ ಅನಿಮಿತ್ಯ ಬಂಧು ನೀಯನಗೀಯೋ ನಮ್ಮ ಸೇವೆಯ ಕೋಲೆ ಎನಾಗಿಯೋ ನಿಮ್ಮ ಸೇವೆಯ ತವ ಪಾದವನು ಧ್ಯಾನ ಮರಿಯಾದೆ ಕೋಲೆ2 ಮೂಢನಾದ ಎನ್ನನೋಡಿ ಕರುಣವನು ಮಾಡಿ ಹರಿಚರಣ ತೋರಿದ ಕೋಲೆ ಮಾಡಿ ಹರಿಚರಣ ತೋರಿದ ನಿಮ್ಮ ದಯ ಕೀಡುಂಟೆ ಜಗದಿ ಗುರುವರ್ಯ ಕೋಲೆ3 ಪತಿಪಾದ ಮಹಿಮೆ ತೋರಿಸಿ ಕೋಲೆ ಪತಿಪಾದ ಮಹಿಮಾ ತೋರಿಸಿ ಸ ದ್ಗತಿ ಪಥsÀವನ್ನು ವಿಡಿಸಿದ ಕರುಣಿಯೆ ಕೋಲೆ 4 ಅನಾಥ ರಕ್ಷಕ ಆಪತ್ತು ಬಾಂಧವ ಶ್ರೀನಿವಾಸನ್ನ ನಿಜದಾಸ ಕೋಲೆ ಶ್ರೀನಿವಾಸನ್ನ ನಿಜದಾಸ ಮಮಕುಲ ಸ್ವಾಮಿಗೆ ನಮಿಪೆ ಮನದಲ್ಲಿ ಕೋಲೆ 5 ಲಕುಮೀಶ ಹರಿ ದೇವಕಿ ತನಯಗೆ ಸಕಲಾ ಕರ್ಮಗಳಾ ಅರ್ಪಿಸೆ ಕೋಲೆ ಸಕಲಾ ಕರ್ಮಗಳಾ ಅರ್ಪಿಪೆ ನಮ್ಮಗುರು ಸುಖನಿಧಿಗಳಿಗೆ ನಮಿಸುವೆ ಕೋಲೆ 6 ಆನಮಿಸುವೆ ಮಹಾನುಭಾವ ಗುರು ನೇಮಕಲ್ಲಾರ್ಯರ ಚರಣಕ್ಕೆ ಕೋಲೆ ನೇಮಕಲ್ಲಾರ್ಯರ ಚರಣಕ್ಕೆ ಕೋಸಗಿ ಸ್ವಾಮಿರಾಚಾರ್ಯರ ಪಾದಕ್ಕೆ ಕೋಲೆ 7 ಪುರಂದರಾದಿ ದಾಸವರ್ಯರ ಸುಂದರ ಚರಣಕ್ಕೆ ಎರುಗುವೆ ಭರದಿಂದ ಕೋಲೆ ಭರದಿಂದ ಮುದಮುನಿ ಇವರನ್ನು ತೋರಿ ಪೊರೆಯಂದು ಕೋಲೆ 8 ಅಂದದಿಂದ ಆನಂದತೀರ್ಥ ರಾಘ ವೇಂದ್ರಾದಿ ಸಕಲ ವಿಭುದಾದಿ ಕೋಲೆ ರಾಘವೇಂದ್ರಾದಿ ಸಕಲ ವಿಭುದ ಆ ಕರ್ಮಂ ದೀಗಳಿಗೆ ನಮಿಸುವೆ ಕೋಲೆ 9 ವಾದಿರಾಜರ ದಿವ್ಯ ಪಾದಕ್ಕೆ ನಮಿಸುವೆ ಸಾಧಿಸಿ ಕೊಡಲಿ ಸತತಾದಿ ಕೋಲೆ ಸಾಧಿಸಿ ಕೊಡಲಿ ಸತತಾದಿ ಹರಿದಾಸ ರಾದವರ ಸೇವೆಯನಗೆಂದು ಕೋಲೆ 10 ಗಣಪಾದಿಗಳು ಸುರಮುನಿ ಪಾದಗಳಿಗಾ ನಮಿಸುವೆ ಮನಸಿಜ ಸುರಪಾಗ ಕೋಲೆ ನಮಿಸುವೆ ಮನಸಿಜ ಸುರಪಾಗ ಭೂತ ಗಣಪತಿ ಶೇಷರಪಾದ ಕಮಲಕ್ಕೆ ಕೋಲೆ 11 ಭಾರತೀವಾಣಿ ಗುರು ಮಾರುತಿ ಪಾದಕೆ ಪರಿ ಮಣಿಯುವೆ ಕೋಲೆ ಪರಿ ಮಣಿಯುತ ಹರಿಪಾದ ತೋರುತ ಮನದಲ್ಲಿ ನಿಲಿಸೆಂದು ಕೋಲೆ 12 ಲಕ್ಷ್ಮೀದೇವಿಯೆ ಲಕ್ಷಣವಂತಿಯೆ ಪಕ್ಷಿವಾಹನನ ಅರ್ಧಾಂಗಿ ಕೋಲೆ ಪಕ್ಷಿವಾಹನನ ಅರ್ಧಾಂಗಿ ಭವದಿಂದ ರಕ್ಷಿಸಲೆನ್ನ ತವಕಾದಿ ಕೋಲೆ 13 ಶಿರಿಗೋವಿಂದವಿಠಲ ವಿಶ್ವವ್ಯಾಪಕ ಮರುತಾಂತರ್ಗತನೆ ಮುರರಿಪು ನಮ್ಮ ಗುರುವರ್ಯರ ಪ್ರೀಯ ಸಲಹಯ್ಯ ಕೋಲೆ14
--------------
ಅಸ್ಕಿಹಾಳ ಗೋವಿಂದ
ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ | ಕೋಲು ಸದ್ಗುರುವಿನಾ ಬಲಗೊಂಬೆ ಕೋಲೆ ಪ ಶರಣು ಶರಣು ಗುರುವೇ ಶರಣರ ಸುರತರುವೆ | ಶರಣರ ಹೃದಯದೊಳಗಿರುವೇ ಕೋಲೆ | ಅನುದಿನ | ಕರುಣದ ಮಳೆಯಾಗರೆವುತ ಕೋಲೆ 1 ಕರಣ ತೃಯದಿನಂಬಿ ಸ್ಮರಣೆಯ ಮಾಡಲು | ಧರಣಿಯಲಿಷ್ಟಾರ್ಥ ಕೊಡುತಿಹ ಕೋಲೆ | ಧರಣಿಯಲಿಷ್ಟಾರ್ಥ ಕೊಡುತಿಹ ಜನದಂತ ಕರಣದೊಳಗೆ ಬಯಕೆ ನಿಲದಂತೆ ಕೋಲೆ 2 ಚರಣ ಸರಸಿಜಕ ಶರಣ ಹೋಗಲು ಜನ್ಮ | ಮರಣದ ಭಯಕಂಜಿ ಜನರು ಕೋಲೆ | ಮರಣದ ಭಯಕಂಜಿ ಜನರು ಬರೆ ಕಂಡು | ಕರುಣಾ ಕಟಾಕ್ಷದಿ ನೋಡುವ ಕೋಲೆ 3 ಕರದಿಂದ ಪಿಡಿದವನ ತರಣೋಪಾಯದ ಬೋಧಾ | ಭರದಿಂದ ಬೀರುವೆ ಮನಸಿಗೆ ಕೋಲೆ | ಭರದಿಂದ ಬೀರುವೆ ಮನಸಿಗೆ ಭವದೊಳು | ಮರಳ್ಯವ ಸಿಕ್ಕದಂತೆ ಮಾಡುವೆ ಕೋಲೆ 4 ಜ್ಞಾನವೆಂಬಂಜನೆ ಸೂನಯನಕ ಊಡಿ | ಹೀನ ಅಜ್ಞಾನವ ಹರಿಸೂವ ಕೋಲೆ ಹೀನ ಅಜ್ಞಾನವ ಹರಿಸುವೆ ಬೇಗದಿ | ಸ್ವಾನುಭವದ ಸುಖ ಬೀರುವೆ ಕೋಲೆ 5 ನಾನಾ ಹಂಬಲವನ ಏನೆನುಳಿಯದ್ಹಾಂಗ | ತಾನಿದ್ದ ಬದಿಯಲಿ ಇಹಪರ ಕೋಲೆ | ತಾನಿದ್ದ ಬದಿಯಲಿ ಇಹಪರ ಸುಖಗಳ | ನೀನಿದಿರಿಡುತಿಹೆ ಸದಮಲ ಕೋಲೆ 6 ಎಂಟು ಸಿದ್ಧಿಗಳು ಉಂಟಾಗಿ ಬಂದರೆ | ವೆಂಟಣಿಸಿ ಅದರ ಕಡೆಗೇ ಕೋಲೆ | ವೆಂಟಣಿಸಿ ಅದರ ಕಡೆಗೇ ನೋಡ ನಿನ್ನ | ಬಂಟನೆಯ ಮಹಿಮೆಯ ಜಗದೊಳು ಕೋಲೆ 7 ನಿನ್ನ ಮಹಿಮೆಯನ್ನು ಇನ್ನು ನಾ ಪೊಗಳಲು | ಎನ್ನಳವಲ್ಲಾ ಜಗಕಲ್ಲಾ ಕೋಲೆ | ಎನ್ನಳವಲ್ಲಾ ಜಗಕಲ್ಲಾ ಸದ್ಗುರು | ನಿನ್ನ ಮಹಿಮೆ ಬಲ್ಲೆ ನೀನವೆ ಕೋಲೆ 8 ಮಹಿಗೆ ನೀ ಪತಿಯಾಗಿ ವಿಹರಿಸುತಿಹೆ ದೇವಾ | ಸಹಕಾರನಾಗಿ ಭಕ್ತರ್ಗೆ ಕೋಲೆ | ಸಹಕಾರನಾಗಿ ಭಕ್ತರ್ಗೆ ಅನವರತ | ಅಹಿತರವಂಡಣೆ ಮಾಡುತ ಕೋಲೆ 9 ಮುನ್ನಿನಪರಾಧವ ಇನ್ನೇನು ನೋಡದೇ | ಎನ್ನನುದ್ಧರಿಸು ದಯದಿಂದ ಕೋಲೆ | ಎನ್ನನುದ್ಧರಿಸು ದಯದಿಂದ ಮತಿಕೊಟ್ಟು | ನಿನ್ನ ಕೀರ್ತಿಯ ಕೊಂಡಾಡುವಂತೆ ಕೋಲೆ 10 ಎಂದೆಂದು ನಿಮ್ಮ ಪದ ಹೊಂದಿದ್ದವನು ನಾನು | ಕುಂದ ನೋಡದೇ ಸಲಹಯ್ಯಾ ಕೋಲೆ ಕುಂದ ನೋಡದೇ ಸಲಹಯ್ಯಾ ಮಹಿಪತಿ | ಕಂದನು ಮುಗ್ಧನೆಂದು ಬಿಡಬ್ಯಾಡಿ ಕೋಲೆ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೋಳಿ ಕೂಗಿತು ತಂಪು ಗಾಳಿ ಬೀಸಿತು ಏಳಯ್ಯಾ ಬೆಳಗಾಯಿತು ಪ ಧೀರ ಸೋಮಕನಿರಿದು ಮೇರು ಬೆನ್ನಲಿ ಪೊತ್ತು ಘೋರ ಹಿರಣ್ಯಾಕ್ಷ ಕಶ್ಯಪರ ಶೀಳಿ ಮಾರಿ ಬಲಿಯನ್ನೊತ್ತಿ ಕಂಸ ದಾನವರನಳಿದು ಶೇರಿ ತ್ರಿಪುರರ ದಹಿಸಿ ಕ್ರೂರ ದುಷ್ಟರ ತರಿದು ಭಾರಿ ಆಯಾಸದಲಿ ನಿದ್ರೆ ಹತ್ತಿರೆ ಸ್ವಾಮಿ1 ವೇದವನು ತಂದೆ ಸುರವೃಂದಕಮೃತವನಿತ್ತೆ ಮೇದಿನಿಯ ನೆಲಸಿ ಪ್ರಲ್ಹಾದನಾ ಪೊರೆದೆ ಮೋದಿಗಂಗೆಯ ಜನಿಸಿ ಭೂದಾನ ಮಾಡಿದೆ ಮೋದದಿಂದಜಪದವಿಯ ಆಂಜನೇಯಗಿತ್ತೆ ಪೋದ ಮಕ್ಕಳ ತಂದು ಗುರುಪತ್ನಿಗೇ ನೀಡಿ ವೇದನುತ ನಿರ್ವಸನ ಸುಹಯಾರೂಢನೇ2 ಶರಣಜನ ಬಂದು ಸುಸ್ವರದಿಂದ ಪಾಡುತಿರೆ ಪರಿ ಕಣ್ಣಮುಚ್ಚುವುದೇ ಸರಿಯೆ ಬೆನ್ಮರೆಮಾಡಿ ಮಣ್ಣನಾಡಾಡುವುದೇ ಉರಿಮೋರೆಯಿಂದ ತರಳಾಟ ಆಡುವುದೇ ಪರಶು ಶರ ಚಕ್ರಗಳ ಪಿಡಿದು ಉಡಿಗೆಯ ಮರೆತೆ ಭರದಿ ತುರಗವನೇರು ನರಸಿಂಹ ವಿಠ್ಠಲಾ 3
--------------
ನರಸಿಂಹವಿಠಲರು
ಖಳರನು ತರಿವಾ ಬಗಳಾಂಬೆಗೆಕಮಲದಾರತಿ ಬೆಳಗಿರೆ ಪ ಅರಿ ಎಂಬ ಶಬ್ಧವು ಕಿವಿಗೆ ಬೀಳಲುಸರಿದವು ಸರಿದವು ಖಡ್ಗದಿಂ ಕೆಂಗಿಡಿಭರದಿಂದರಿಯನೆ ತುಡುಕಿಯೆ ಮುಂದಲೆತರಿದಳಾಗಲೆ ತಲೆಯ ಬಗಳಾಂಬೆಮುರಿದಳಾಗಲೆ ತಲೆಯ ಬಗಳಾಂಬೆ1 ಕಡಿಯುತ ಅವುಡನು ಅರಿಯನು ದೃಷ್ಟಿಸಿಝಡಿಯುತ ಮುದ್ಗರ ಹಿಡಿದು ನಾಲಗೆಮೃಡಹರಿ ಬ್ರಹ್ಮರು ಅಹುದಹುದೆನೆಹೊಡೆದಳಾಗಲೆ ಅರಿಯ ಬಗಳಾಂಬಪುಡಿಯ ಮಾಡಿದಳರಿಯ ಬಗಳಾಂಬ 2 ಕಾಲಲಂದುಗೆ ಗೆಜ್ಜೆ ಕಂಠಾಭರಣವುಮೇಲೆ ಸರಿಗೆವೋಲೆ ಮೂಗುತಿ ಹೊಳೆಯಲುಲೋಲ ಚಿದಾನಂದ ರೂಪಿಣಿ ಬಗಳೆಯುಪಾಲಿಸಿದಳು ಭಕ್ತರ ಬಗಳಾಂಬಲಾಲಿಸಿದಳು ಭಕ್ತರ ಬಗಳಾಂಬ 3
--------------
ಚಿದಾನಂದ ಅವಧೂತರು
ಗಜೇಂದ್ರ ಮೋಕ್ಷ ವರಶಂಖಗದೆ ಪದ್ಮಕರದಿ ಚಕ್ರವ ಪಿಡಿದ ಗರುಡಗಮನ ನಮ್ಮ ಕರಿವರದಹರಿಯನ್ನ ನಿರುತ ನೆನೆನೆನೆದು ಬದಿಕಿರಯ್ಯಾ ಪ ಹರಿಧ್ಯಾನ ಹರಿಸೇವೆ ಹರಿಭಕ್ತಿ ಹರಿಚರಿತೆ ದುರಿತದುರ್ಗಕೆಕುಲಿಶ ವರಮುಕ್ತಿಸೋಪಾನ ಕಾಣಿರಯ್ಯಾ ಅ.ಪ. ಕ್ಷೀರಸಾಗರ ಮಧ್ಯೆ ಗಿರಿತ್ರಿಕೂಟ ದೊಳಗೆ ಇರುವುದೂ ಋತುಮಂತ ವರುಣನ ವರವನವು ಅಲ್ಲಿ ಪರಿಪರಿಯ ಲತೆಬಳ್ಳಿ ಸರಸಸ್ಥಾನಗಳಲ್ಲಿ ಮೆರೆವೋರು ಸುರಸಂಘ ನಾರಿಯರ ಸಹಿತಾ 1 ಪದ್ಮಗಾಶ್ರಯವಾದ ಪದ್ಮಕೊಳಾದೊಳಗೆ ಮದಿಸಿದಾ ಗಜವೊಂದು ಐದಿತು ಪರಿವಾರ ಸಹಿತ ವಿಧಿಯ ಬಲ್ಲವರಾರು ಮುದದಿರ್ದ ಆ ಗಜಕೆ ವಿಧಿ ವಕ್ರಗತಿಯಿಂದ ಪಾದವನೆ ಪಿಡಿಯಿತು ನಕ್ರವೊಂದು 2 ಒಂದು ಸಾವಿರ ವರುಷ ಕುಂದದೆಲೆ ಕರಿಮಕರಿ ನಿಂದು ಹೊರಾಡೆ ಸುರವೃಂದ ಬೆರಗಾಯಿತು ಬಂಧು ಬಳಗವು ಮತ್ತೆ ಅಂದ ಹೆಂಡಿರು ಎಲ್ಲ ಕುಂದು ಅಳಿಸದೆ ಇರಲು ಛಂದದಲಿ ಯೋಚಿಸಿತು ಗಜವೂ 3 ಏನಿದ್ದರೇನಯ್ಯ ಶ್ರೀನಿವಾಸನಕೃಪೆಯು ಇನ್ನಿಲದಾಮೇಲೆ ಕುನ್ನಿಗೆ ಸರಿಎಂದು ಹೀನ ಎನ್ನಯ ಜನ್ಮ ದೀನ ಭಾವದಿ ಹರಿಯ ಮಾನವನು ಬದಿಗಿಟ್ಟು ಧ್ಯಾನಿಸಿ ಸ್ತುತಿಸಿದಾ 4 ಸತ್ಯಶಾಶ್ವತಭೋಕ್ತ ಸೃಷ್ಟ್ಯಾದಿಕರ್ಮವಿಗೆ ನಿತ್ಯ ತೃಪ್ತನು ಆದ ಶಾಡ್ಗುಣ್ಯಪರಿಪೂರ್ಣನೆ ವಂದಿಸುವೆನೋ ಓತಪ್ರೋತದಿ ಜಗದಿ ವ್ಯಾಪ್ತ ಆಪ್ತನು ಆದ ಆರ್ತದಲಿ ಕರೆವೆನೋ 5 ಎಲ್ಲಕಡೆಯಲಿ ಇರ್ಪ ಎಲ್ಲರೂಪವ ತಾಳ್ವ ಎಲ್ಲ ಪ್ರೇರಣೆಮಾಳ್ವ ಎಲ್ಲರಿಂ ಭಿನ್ನನಿಗೆ ವಂದಿಸುವೆನೋ ಎಲ್ಲರಿಂ ಉತ್ತಮಗೆ ಎಲ್ಲರಾ ಬಿಂಬನಿಗೆ ಎಲ್ಲರ ವಾಚ್ಯನಿಗೆ ನಲ್ಲನೆಂತೆಂದು ನಾಕರೆವೆನೋ 6 ಎಲ್ಲರನು ಗೆದ್ದವಗೆ ಎಲ್ಲರಾನಲ್ಲನಿಗೆ ಎಲ್ಲ ದೋಷವಿಹೀನ ಒಳ್ಳೆ ಗುಣ ಪೂರ್ಣನ ಕರೆವೆನೋ 7 ನಿನ್ನ ತಿಳಿದವರಿಲ್ಲ ನಿನ್ನ ಮೀರಿದುದಿಲ್ಲ ಜನನ ಮರಣಗಳಿಲ್ಲ ನಿನಗಿಲ್ಲ ಸಮ ಅಧಿಕ ವಂದಿಸುವೆನೋ ನಿನ್ನನಾಮಕೆ ಗುಣಕೆ ನಿನ್ನ ಅವಯವಕೆ ನಿನ್ನ ಕ್ರಿಯ ರೂಪಗಳಿಗೆ ಇನ್ನಿಲ್ಲವೊ ಭೇದಸಾರಿ ನಾಕರೆವೆನೋ 8 ವೇದಗಮ್ಯನುನೀನೆ ವೇದದಾಯಕ ನೀನೆ ವೇದಾತೀತನು ನೀನೆ ಸಾಧು ಪ್ರಾಪ್ಯನುನೀನೆ ವಂದಿಸುವೆನೋ ಖೇದವರ್ಜಿತನೀನೆ ಅಂದ ಸಾರವು ನೀನೆ ಬಂಧನೀಡುವ ನೀನೆ ಅದ್ಭುತ ಅಚಿಂತ್ಯಶಕ್ತಿವಂತನ ಕರೆವೆನೋ 9 ಜ್ಞಾನಿಗೋಚರನೀನೆ ಗುಣಾತೀತನು ನೀನೆ ಗುಣಪ್ರವರ್ತಕನೀನೆ ಅನಾಥ ಸರ್ವಸಮ ವಂದಿಸುವೆನೋ ಜ್ಞಾನದಾಯಕನೀನೆ ಆನಂದಮಯನೀನೆ ನೀನೇ ಸರ್ವಾಧಾರ ನೀನೆ ಏಕನು ಎಂದು ಕೂಗಿ ನಾಕರೆವೆನೋ 10 ಸಾಕಾರ ನಿರಾಕಾರ ಆಕಾರ ಅಹೇಯ ಓಂಕಾರ ವಾಚ್ಯನೆ ಸಾಕಲ್ಯಸಿಗದವನೆ ಸ್ವೀಕಾರ ಮಾಡೋ ವಿಕಾರ ವರ್ಜಿತನೆ ಲೋಕೈಕವೀರಾನೆ ನೀ ಕೆವಲನು ಮುಕ್ತೇಶ ಸಲಹೋ 11 ಏನು ಕೊಡಲೊ ದೇವ ದೀನನು ನಾನಯ್ಯ ನಿನ್ನದೇ ಈ ಭಾಗ್ಯ ಮನ್ನಿಸುತ ದಯಮಾಡಿ ಸಲಹೋ ಘನ್ನಕರುಣಾಳುವೆ ಅನ್ಯರನು ನಾ ನೊಲ್ಲೆ ನಿನ್ನವನು ನಿನ್ನವನೋ ನಿನ್ನ ಚರಣಕೆ ಶರಣು ಶರಣೂ 12 ಕರಿ ತಾನು ಮೊರೆಯಿಡುತ ಕೂಗಲು ಸುರವೃಂದ ಯೋಚಿಸುತ ಹರಿಯಲ್ಲದನ್ಯತ್ರ ಅರಿಯೆವೀಗುಣವೆಂದು ಅರಿತು ಸುಮ್ಮನಿರಲೂ ಹರುಷದಿಂದಲಿ ಹರಿಯು ಗುರುಡನೇರುತ ಬರಲು ತರಿದು ನಕ್ರನ ಭರದಿ ಕರಿಯಪೊರೆಯೆ ಆದ 13 ಏನೆಂದು ವರ್ಣಿಸಲಿ ಶ್ರೀನಿವಾಸನ ಕರುಣ ದೀನ ಭಕ್ತರ ಮೇಲೆ ಸಾನುರಾಗದಿ ಕರಿಯ ಹಿಡಿದೆತ್ತಿದಾ ಇನ್ಯಾಕೆ ಭಯವಯ್ಯ ಘನ್ನ ಇಂದ್ರದ್ಯುಮ್ನನೆ ಏಳು ಮುನ್ನಿನಾ ದೋಷವಿದು ಇನ್ನು ನೀ ಧನ್ಯನಹುದೋ 14 ದೇವಲನ ಶಾಪದಲಿ ಆ ವರ ನಕ್ರನಾಗಿದ್ದ ಶ್ರೀವರನ ಭಕ್ತ ಹೂಹೂ ಗಂಧರ್ವನೆರಗಿ ಬಿದ್ದನು ಹರಿಗೇ ದೇವೇಶ ಹುಸಿನಗುತ ಈವೆ ವರವನು ಕೇಳಿ ಯಾವಾತ ಈ ಕಥೆಯ ಭಾವಶುದ್ಧದಿ ಭಜಿಸೆ ಉದಯದಲಿ ನಾ ಒಲಿವೆ ತವಕದಲಿ ಎಂದನೂ 15 ಹರಿಗೆ ಸಮರಾರಿಲ್ಲ ಹರಿಭಕ್ತ ಗೆಣೆಯಿಲ್ಲ ಸುರರು ಮೊರೆಯಿಟ್ಟರಾಗ ಹರಿವಾಯುಗುರುಗಳು ಕರುಣದಿಂದಲಿ ಇದನು ಮನ್ನಿಪುದು ಬುಧರೂ 16 ಮುದ್ದುಜಯತೀರ್ಥರ ಹೃದಯದಲಿನಲಿಯುವ ಮಧ್ವಾಂತಃಕರಣದಿ ಮುದ್ದಾಗಿ ಕುಣಿಯುವಂಥ ಮಾಧವ ಶ್ರೀಕೃಷ್ಣವಿಠಲರಾಯನು ಬೇಗ ಮೋದ ಸುರಿಸುವ ಈ ಪದವ ಪಠಿಸಲೂ 17
--------------
ಕೃಷ್ಣವಿಠಲದಾಸರು
ಗರುಡನೇರಿ ಬಂದ ಸಿರಿರಮಣನು ತಾನು ಪ ಗರುಡನೇರಿ ಬಂದ ಸಿರಿರಮಣನು ತನ್ನ ಶರಣ ಕರುಣದಿ ಪೊರೆಯಲೋಸುಗ ಭರದಿ ಅ.ಪ. ಕರಿರಾಜನು ಅಂದು ಕ್ರೂರ ನಕ್ರಗೆ ಸಿಲ್ಕಿ ತೆರವಿಲ್ಲದೆ ಕೂಗುತ ಚೀರುತಿರಲು ಸುರರು ಮೊದಲಾಗಿ ಸತಿಸುತ ಬಾಂಧವರು ಅರಿತು ಅರಿಯದಂತೆ ತ್ರಾನದಿಂದ್ದಾಗ 1 ಉತ್ತಾನಪಾದನು ಚಿತ್ತದಿ ಮರುಗದೆ ಮತ್ತೆ ಬÁಲನ ಕರೆದು ಮನ್ನಿಸದೆ ಅತ್ತ ಸಾರೆಂದು ಸುರುಚಿ ನೂಕಿದ ಮೇಲೆ ಚಿತ್ತಜನಯ್ಯನ ಸ್ಮರಿಸಿದ ಮಾತ್ರದಿ 2 ನೀಚ ರುಕ್ಮನು ತನ್ನನುಜಾತೆಯನಂದು ಮಾಚಿಸಿ ಶಿಶುಪಾಲಗೀವೆನೆಂದು ಯೋಚಿಸಿ ಮನದೊಳು ಹರಿಯ ದೂರುತಲಿರೆ ತಾ ಚಿಂತೆ ತಾಳಿದ ರುಕ್ಮಿಣಿಯ ಕೈಪಿಡಿಯಲು 3 ಅಕ್ಷಯ ಪಾತ್ರೆಯ ತೊಳೆದು ಪಾಂಚಾಲೆ ಪಕ್ಷಿದೇರನ ಧ್ಯಾನದೊಳು ಕುಳಿತಿರಲು ಭಿಕ್ಷೆ ಬೇಡುತ ಬಂದು ದೂರ್ವಾಸ ಮುನಿಪನು ಶಿಕ್ಷಿಸೆನೆಂದಾಗ ಸತಿಗೆ ಮುಂದೋರದಂದು 4 ಗರುವ ಪಾರ್ಥನು ಅಂದು ಗಂಗಾ ಶಾಪದಲಿ ಅಸುವ ತೊರೆದು ರಣದೊಳು ಬಿದ್ದಿರಲು ಅರಿತು ಮನದೊಳು ಅನಿಲಜನೊಡಗೂಡಿ ಸಿರಿ ರಂಗೇಶವಿಠಲನು 5
--------------
ರಂಗೇಶವಿಠಲದಾಸರು
ಗುರುಚರಣ ಪೂಜೆಯನು 'ರಚಿಸುವೆನೀಗಪರಮಾತ್ಮನೆಂದೆಂಬ ಸ್ಥಿರಮನದಿ ಬೇಗ ಪವರಮಂತ್ರರೂಪದಲಿ ಗುರು ತಾನು ದಯದಿಂದಭರದಿಂದ ಹೃದಯಮಂದಿರಕೆ ಬರಲಾಗಿಗುರುತರದಹಂಕಾರಶಯನದಿಂ ಮುರಿದೆದ್ದುಬರುವೆನಿದಿರಾಗಿ ಕರೆತರುವೆನೊಡಗೂಡಿ 1ಬ್ರಹ್ಮಕಮಲದಲೊಡೆದು ಜ್ಞಾನನಾಳದಿ ಕೂಡಿರಮ್ಯದಳವೆಂಟುಳ್ಳ ಕಮಲ ಮಧ್ಯದಲಿನಮ್ಮ ಗುರುಮೂರ್ತಿಯನು ಸಂಭ್ರಮದಿ ಕುಳ್ಳಿರಿಸಿವೊಮ್ಮನದಲಘ್ರ್ಯಾದಿಗಳನು ಭಕುತಿಯಲಿತ್ತು 2ಕರಗಳೆರಡುಳ್ಳ ಹರಿ ನಯನವೆರಡರ ಹರನುವರಮುಖ'ದೊಂದರಲಿ ವಾಗೀಶನೆನಿಸಿಪರಿಹರಿಸಿ ಗುಣಗಳನು ಪರಬ್ರಹ್ಮವಾಗಿರುವಗುರುವರನ ಮೂರ್ತಿಯನು ನೆರೆ ನೋಡಿ ಮನದೊಳಗೆ 3ಅ'ವೇಕವಂ ಪರಿದ ಗುರುಪದಕೆ ಪಾದ್ಯವನುಸು'ವೇಕವೆಂಬಘ್ರ್ಯವನು ಸ'ತ ಕೊಟ್ಟುಅ'ವೇಕದಿಂ ಬಂದ ಜೀವಭಾವವ ಬಿಡಿಸಿಕ'ವರನು ನೀನೆಂಬ ಶುದ್ಧಾಚಮನದಿಂದ 4ಪರಮಪಾವನರೂಪ ಸ್ನಾನದುಪಚಾರದಲಿಎರಡಿಲ್ಲವೆಂದೆಂಬ ಶುಭ್ರ ವಸ್ತ್ರದಲಿಬರೆದು ತಾ ಜೀವರೊಳು ಸೂತ್ರಾತ್ಮನಾದಡೆಯು ಬೆರೆಯದಿಹನೆಂತೆಂಬ ಸೂತ್ರೋಪಚಾರದಲಿ 5ಶರಣಾಗತರ ಕಾಯ್ವ ಗುಣಗಣಗಳಾಭರಣಪರಿಪರಿಯ ಕಾಮಗಳ ಹೊದ್ದದನುಲೇಪನೆರೆ ನಿವಾರಿತವಾದ ವಾಸನಾಕ್ಷಯ ಪುಷ್ಪಸರಗಳೀ ಪರಿಭಾವನೆಗಳೆಂಬ ಭಕ್ತಿಯಲಿ 6ಜಡ ದುಃಖ ಪುಸಿಗಳಿಗೆ ಬೇರೆಂಬ ಧೂಪದಲಿಎಡೆಬಿಡದ ಜ್ಯೋತಿಃಸ್ವರೂಪ ದೀಪದಲಿಬಿಡದ ಸುಖದನುಭವದ ದಿವ್ಯ ನೈವೇದ್ಯದಲಿಜಡಕೆ ಮಂಗಳ'ತ್ತ ಬಗೆಯ ತಾಂಬೂಲದಲಿ 7ನಿತ್ಯ ಪ್ರಕಾಶದಲಿ ಪೊಳೆವ ಮಂಗಳ ದೀಪಸತ್ಯದಾಧಾರದಲಿ ಸುಳಿವ ಕರಣಗಳಮತ್ತೆ ಸತ್ಯದೊಳಿರಿಸುತಿಹ ಮಂತ್ರಪುಷ್ಪದಲಿಸುತ್ತುವರಿದಿಹ ವಸ್ತುವೆಂದು ಬಲವಂದು 8ಘನ ಮ'ಮನಂಘ್ರಿಯಲಿ ತನು ಮನಾದಿಗಳನ್ನುನಿನಗೆ ಸಂದುದೆನುತ್ತಲಿತ್ತು ನ'ುಸುತ್ತಾಕನಕಮಯವಾದ ಶ್ರೀ ತಿರುಪತಿಯ ವೆಂಕಟನತನುರೂಪ ನೀಲಕಂಠಾರ್ಯರನು ಬಿಡದೆ 9ಓಂ ಸನಾತನಾಯ ನಮಃ
--------------
ತಿಮ್ಮಪ್ಪದಾಸರು
ಗುರುರಾಜ ನಿನ್ನ ಹೊರತು ಪೊರೆವ ಧೊರೆಗಳ ಕಾಣೆ | ಶರಣಜನರಿಷ್ಟವನೆ ಸುರತರುವಿನಂತೀವೆ ಪ ತರಳಪ್ರಹ್ಲಾದನಾಗಿರಲು ವರಭಕುತಿಯಿಂ | ನರಹರಿಯ ಮೆಚ್ಚಿಸಿದೆ ಪರಮಕರುಣಾಸಿಂಧೊ 1 ವ್ಯಾಸಮುನಿಯು ನೀನೆ ವಾಸುದೇವನ ಭಜಿಸಿ | ಲೇಸಾದ ಚಂದ್ರಿಕೆಯ ಭೂಸುರರಿಗರುಹಿದೆ 2 ಶ್ರೀರಾಮಚಂದ್ರಪದಸರಸೀರುಹಾಭೃಂಗ | ಶ್ರೀ ರಾಘವೇಂದ್ರಯತಿ ಸುರುಚಿರಕೃಪಾಪಾಂಗ 3 ನರಹರಿ ಸಿರಿರಾಮ ಮುರವೈರಿ ಮುನಿವ್ಯಾಸ | ಇರುತಿಹರು ನಿನ್ನೊಳು ಧರೆಯ ಪಾಲಿಸೆ ಮುದದಿ 4 ಕರೆದಲ್ಲಿ ಬರುವೆನೆಂದೊರೆದ ವಚನವ ಸಲಿಸೆ | ಭರದಿ ನಾರಾಯಣಪುರಕೈದಿದಿಯೊ ಮುದದಿ 5 ಭೀಮಸೇತ್ವ್ಯಾಖ್ಯ ಮಠ ಸೋಮರಘುತಿಲಕರಿಂ | ದೇ ಮಹಾಸೇವೆಯ ಕೈಗೊಂಡೆಯೋ ಮುದದಿ 6 ದೋಷದೂರನೆ ಪ್ರಭುವೆ ಆಶೆಯಿಂ ಸೇವಿಪರ | ಕ್ಲೇಶವೆಲ್ಲವನಳಿದು ಶ್ರೀಶಕೇಶವನೊಲಿಸೊ 7
--------------
ಶ್ರೀಶ ಕೇಶವದಾಸರು
ಗುರುರಾಯರ ತೂಗೋ ಬಾಗೋ ಪರಿಪರಿಯ ರತ್ನಗಳ ಪೆಚ್ಚೇಮುತ್ತುಗಳ ಹಚ್ಚೆ ತೊಟ್ಟಿಲು ಕಟ್ಟೇವ | ಮೆಟ್ಟಲು ಮಾಡೇದ ಮಟ್ಟಲು ಮಾಡೇದ ತರತರದ ಹೂಗಳು ಸುತ್ತ | ತರ ತರದ ಹೂಗಳು ಸುತ್ತ ಸುವಾಸನೆ ಮತ್ತ | ತುಂಬ ಇಡಗಿತ್ತ ಪರಿಮಳಾರ್ಯರ ಬಳಿ ಸಾಗೇದ 1 ವರಮಧ್ವಶಾಸ್ತ್ರ ವಿಸ್ತರಿಸಿ | ವರಮಧ್ವಶಾಸ್ತ್ರ ವಿಸ್ತರಿಸಿ ಜರಿದ ಮಾಯ್ಗಳಾಗ ಮೆರೆದ ಭೂಮಿಯೊಳಗ ಮೆರದ ಭೂಮಿಯೊಳಗ | ತರತಮ ಸ್ಥಾಪಿಸುತ್ತ | ತರತಮ ಸ್ಥಾಪಿಸುತ್ತ ಮರುತ ನಿದ್ಧಾಂತ ತ್ವರಿತ ಗುಣವಂತ ಭರದಿ ಗುರು ಚರಣಕೆ ಬಾಗೋ2 ನಮಿಸುತಲಿ ಸಾಗೋನೀ ಬೇಗ | ನಮಿಸುತಲಿ ಸಾಗೋನೀ ಬೇಗ | ವರವ ಬೇಡೀಗ ವರವ ಬೇಡೀಗ ನಾಮಾಮೃತವ ಸವಿಯುತ್ತ | ನಾಮಾಮೃತವ ಸವಿಯುತ್ತ ಕುಣಿಯೋ ಮತ್ತೆ | ಮಣಿಯ ಬಾಗುತ್ತ ಬಾಗುತ್ತ | ಮೆಣಿಯೆ ಬಾಗುತ್ತ ಶಾಮಸುಂದರನ ಪ್ರಿಯಗೀಗ 3
--------------
ಶಾಮಸುಂದರ ವಿಠಲ
ಗೋಕುಲ ಬಿಟ್ಹ್ಯಾಂಗಿಲ್ಲಿಗೆ ಬಂದೆ ಶಿರಿಕೃಷ್ಣ ರಂಗಾ ವ್ಯಾಕುಲದಲಿ ನೀ ಸಾಗರ ತ್ಯಜಿಸಿ ಜೋಕೆಯಿಂದಲಿ ನಿಜಧಾಮಕೆ ಬಂದೆ ಪ ಬನ್ನವ ಪಡುತಿಹ ಭಕುತನ ನೋಡಿ ಚಿಂತೆಯ ಮಾಡಿ ಎನ್ನಂತರಂಗದ ಬಾಧೆಗಳು ಕಾಡೆ ಬಳಲುವುದಾ ನೋಡೆ ಮನ್ನಿಸಿ ಶರಣನ ಬಾಧಿಸುವ ಪೀಡೆ ಪರಿಹಾರ ಮಾಡೆ ಪನ್ನಗ ಶಯನ ಶ್ರೀಹರಿಯೇ ಓಡೋಡಿ ಬಂದೆ 1 ಪೊಕ್ಕಿಹೆನು ಸಂಸಾರಾರ್ಣವದೊಳಗೆ ಬಹು ದುಃಖದ ಅಲೆಗೆ ಲೆಕ್ಕವಿಲ್ಲದಾ ಜಂತುಗಳದರೊಳಗೆ ಇಂಬಿಲ್ಲಾ ಅಲ್ಲಿಡಿಂಬಕೆ ಸಿಕ್ಕಿ ಬಳಲುವಂಥ ಭಕುತನ ನೋಡಿ ಬಿಡುಗಡೆ ಮಾಡೆ ಅಕ್ಕರದಿಂದಲಿ ಭರದಿ ಕಾಪಾಡಲು ಬಂದೆ 2 ಶರಣರ ಪೊರೆಯುವುದೇ ನಿನ ಗುಟ್ಟು ಬಣ್ಣಿಸಲಿನ್ನೆಷ್ಟು ಕರುಣಿಸಿ ಬರುವಿ ಶಿರಿಯನು ಬಿಟ್ಟು ಭಕುತರೆ ನಿನಕಟ್ಟು ನಿರುಪಮ ನಿನ್ನಯ ದಯಕೇನೆನ್ನಲಿ ಶರಣರ ಪೊರೆಯುವಿ ನರಸಿಂºವಿoಲಾ ಬಂದೆ 3
--------------
ನರಸಿಂಹವಿಠಲರು
ಗೋಕುಲನಂದಾ ಗೋಪಿಯ ಕಂದಾ ಶ್ರೀಪತಿ ನಿಂದಾಡುವ ಚಂದ ನಮ್ಮ ಪ. ರಿಂದಾವನದಿ ನಿಂದು ಮುಕುಂದಾ ನಂದದಿ ಕೊಳಲೂದುವ ಚಂದಾ, ಕೃಷ್ಣಾ ರಂಗಾನಂದದಿ ಎಮ್ಮಯ ಕರೆವುದು, ಬಲು ಚೆಂದಾ 1 ಅರುಣನ ಕಿರಣ ಸೋಲಿಪ ಚರಣದಿ ಕಿರುಗೆಜ್ಜೆಯ ಧರಿಸುತ ಭರದಿ ರಂಗಾ ವರ ನಾಟ್ಯವ ತೋರುವುದಾನಂದಾ, ಬಲುಚೆಂದಾ 2 ಕಸ್ತೂರಿ ತಿಲಕ ಶಿಸ್ತಿಲಿ ಪೊಳೆಯುತಾ ಭಕ್ತವತ್ಸಲ ಶ್ರೀ ಶ್ರೀನಿವಾಸನ್ನ ನೋಡೆ ರಂಗನ ಭಕ್ತರಿಗೆಲ್ಲ ಆನಂದ, ಬಲು ಚೆಂದಾ 3
--------------
ಸರಸ್ವತಿ ಬಾಯಿ
ಗೋಪಗೋಪನೆಂಬಾ ಕೋಗಿಲೆ ನಮ್ಮಶ್ರೀಪತಿಯ ಕಂಡರೆ ಬರಹೇಳೆ ಕೋಗಿಲೆ ಪ . ಕೆಂಗಾವಳೆಯಾಲೆದಲಿ (?) ಪಾಂಡುರಂಗಮಂಗಳ ಮೂರುತಿಪ್ಪಶೃಂಗಾರವಾದ ಸುರತರುವಿನ ನೆರಳೊಳುರಂಗನಾಥನ ಕಂಡರೆ ಬರಹೇಳೆ ಕೋಗಿಲೆ 1 ಮಧುಮಾಸದಲಿ ಮಾಧವನಿರಲುಚದುರೆ ಗೋಪಿಯರಸ ಮೇಳದಲ್ಲಿಮುದದಿ ವನಂತರನಾಡುವ ಭರದಿಂದಪದುಮನಾಭನ ಕಂಡರೆ ನೀ ಬರಹೇಳೆ 2 ಅಟ್ಟಿ ಅರಸುವ ಶ್ರ್ರುತಿಗಳಿಂದ ಸುಖಬಿಟ್ಟೆವೆಂದರವ ಪರಬ್ರಹ್ಮಸೃಷ್ಟಿಯೊಳು ಉಡುಪಿನ ಹಯವದನ ಸ್ವಾಮಿಯದೃಷ್ಟಿಲಿ ಕಂಡರೆ ಬರಹೇಳೆ ಕೋಗಿಲೆ3
--------------
ವಾದಿರಾಜ
ಘನತರ ದೂರದೊಳು ಸಮಮತದೊಳು ವನಜನಾಭನತಿ ಮನಸಿಜಾನ್ವಿತನಾದ ವನಿತೆ ನೀ ದಾರೆಂದಾ ನಿನ್ನೊಳು ಮನಸೋತೆ ಕೇಳೆಂದಾ ಪ ಮತ್ಸ್ಯಗಂಗಳಲಿ ಸ್ವಚ್ಛ ಜಲವು ಯಾಕೆ ಮತ್ಸ್ಯಾವತಾರದ ಉತ್ಸವ ತೋರುವಿ ವನಿತೆ ನೀ ಬಾರೆಂದಾ 1 ಕೂರ್ಮ ಕಠೋರದ ಹೆರಳು ಭಂಗಾರವು ಕೂರ್ಮಾವತಾರದ ಮರ್ಮವ ತೋರುವಿ2 ಸರಸ ಮೌಕ್ತಿಕದ ಮುರವು ನಾಸದೊಳು ವರಹವತಾರದ ಕುರುಹು ತೋರುವಿ 3 ಹರಿಯ ಹಿಡಿಯ ತಂತಿ ಭರದಿ ಬಳುಕುತೆ ನರಸಿಂಹರೂಪದೆ ಸ್ಮರಣೆ ತೋರುವಿ 4 ವಾಮನ ಬಾಲೆ ನೀ ಸಾಮಜೆ ಗಮನೆ ವಾಮನ ರೂಪದ ಸೀಮಾ ತೋರುವಿ 5 ತಾಮಸಗಿಡಗಳ ಕಾಮಿಸಿ ತವಿಸುವಿ ರಾಮನ ಕಾಲದ ನೇಮವ ತೋರುವಿ 6 ಸ್ಮರಶರದಂದದಿ ಕರದಿ ಕೇತಕಿ ಪುಷ್ಪ ಪರಶುರಾಮನ ಅರುಹ ತೋರುವಿ 7 ಎದೆಯೊಳಚಲಸ್ತನ ಮುದದಿ ಧರಿಸಿರುವೆ ಮಾಧವ ತಾರದ ಸದವು ತೋರುವಿ 8 ಅಂಗಜ ಬಾಣದಿಂದಂಗದ ಪರವಿಲ್ಲ ಮಂಗಲ ಬೌದ್ಧನ ರಂಗವ ತೋರುವಿ 9 ಮನಸಿಜಾಶ್ವವೇರಿ ವನಿತೆ ಕಂಗೊಳಿಸುವಿ ಪರಿ ವನಪು ತೋರುವಿ 10 ಕುರುಹು ಅರಿದೆ ನಿನ್ನ ಬೆರದು ಸುಖಿಪರನ್ನೆ ನರಸಿಂಹವಿಠಲನರಸಿ ಬಂದಿರುವೇ 11
--------------
ನರಸಿಂಹವಿಠಲರು
ಚರಣವ ನರ್ಚಿಸುವೆ ಹರಿ ನಿನ್ನ ಮರೆಯದೆ ಕೀರ್ತಿಸುವೆ ನೀನೆ ಎನ್ನರಸ ರಕ್ಷಿಸು ಎಂದು ಪ ರಕ್ಷಿಸು ಎಂದು 1 ಸುಗುಣಂಬರೀಶ ಭೂಪಗೆ ಕೊಡಲಾಕ್ಷಣ ಗಮನ ಚನ್ನಿಗನೆ ರಕ್ಷಿಸು ಎಂದು 2 ಮುಳಿದು ಗಜವ ನೆಗಳೆಳೆಯಲು ಭಯದಲಿ ನಳಿನಾಕ್ಷ ನಿನಗೆ ದೂರಲು ಬೇಗದಲಿ ಸಾರಿ ಸುಲಲಿತ ಮಹಿಮನೆಗಳ ಸೀಳಿ ಕರಿಯನು ಸಲಹಿದೆ ದೇವ ಗೋವಳನೆ ರಕ್ಷಿಸು ಎಂದು 3 ಬೇಗದಲಿ ಕಂಬದಿಬಂದು ಸದೆದು ದಾನವನ ದಾಯದಲಿ ಕಾಯ್ದು ಪದುಮಾಕ್ಷ ನರಹರಿ ಮುದದಿ ರಕ್ಷಿಸು ಎಂದು 4 ದುರುಳ ದುಶ್ಯಾಸನ ಭೂವರ ಪಾಂಡು ತನುಜರ ಅರಸಿಯ ಸೀರೆಯ ಭರದಿ ಸೆಳೆಯಲಾಗ ಮೊರೆಯಿಡಲಕ್ಷಯ ವರವನಿತ್ತು ಸಲಹಿದ ಹರಿ ಸುತ ಕೋಣೆಯ ಲಕ್ಷ್ಮೀಶ ರಕ್ಷಿಸು ಎಂದು 5
--------------
ಕವಿ ಪರಮದೇವದಾಸರು
ಚರಿಯ ಪೇಳುವೆನು ಚರಿಯ ಪೇಳುವೆವು ಪ. ಕೃಷ್ಣ ಬಂದೆಮ್ಮಾಲಯದೊಳು ಲೂಟಿಗೈದಿಪನೆ ಅ.ಪ. ಗುಲ್ಲು ಮಾಡದೆ ಘುಲ್ಲ ಲೋಚನ ಮೆಲ್ಲಡಿ ಇಡುತ ಬಂದೂ ಗಲ್ಲಕೆ ಮುತ್ತು ಕೊಟ್ಟು ಎಮ್ಮಾ ಗಲ್ಲ ಪಿಡಿಯುವನೆ ಶ್ರೀಕೃಷ್ಣ ಗುಲ್ಲು ಮಾಡುವನೆ ಯಶೋದೆ 1 ನೆಲುವಿಲಿದ್ದ ಬೆಣ್ಣೆ ಕದ್ದ ಚೆಲುವ ಕೃಷ್ಣನೆ ದೇವಾ ಛಲದಿ ಪಿಡಿಯಾಪೋದರೆಮ್ಮಾ ಅಣಕ ಮಾಡುತ್ತಾ ಮುರಾರಿ ಪರಾರಿಯಾದನೇ ಯಶೋದೆ 2 ಹಿರಿಯಕಾಲದ ಸಾಲಿಗ್ರಾಮ ಕರಿಯ ಕಲ್ಲೆಂದು ಶ್ರೀ ಕೃಷ್ಣ ಭರದಿ ಬಾಯೊಳ ನುಂಗಿ ಜಗಕೆ ತಾನ್ಹಿರಿಯನೆಂಬುವನೆ ಯಶೋದೆ ಹಿರಿಯನೆಂಬುವನೆ 3 ಗೊಲ್ಲಸತಿಯೇರೊಡನೆ ಪೋಗಿ ಮೆಲ್ಲ ಮೆಲ್ಲನೆ ಶ್ರೀಕೃಷ್ಣ ಚೆಲ್ಲಿಮೊಸರ ಗಡಿಗೆಯೊಡೆದು ಸಲ್ಲಾಪತೋರೆಂಬುವನೆ ಯಶೋದೆ ಸರಸತೋರೆಂಬುವನೆ 4 ಸಿರಿರಮಣನ ಕರೆದು ನೀನು ಬರೆಯ ಬೇಕಮ್ಮಾ ಬುದ್ಧಿ ಥರವೆಯಮ್ಮಾ ಕೂಡಿ ತರಳಾ ಸರಸವಾಡುವುದು ಶ್ರೀ ಶ್ರೀನಿವಾಸ 5
--------------
ಸರಸ್ವತಿ ಬಾಯಿ