ಒಟ್ಟು 144 ಕಡೆಗಳಲ್ಲಿ , 48 ದಾಸರು , 125 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ಯರ್ಥವಲ್ಲವೆ - ಜನುಮ ವ್ಯರ್ಥವಲ್ಲವೆ ಪ.ತೀರ್ಥಪದನ ಭಜಿಸಿ ತಾ ಕೃ - |ತಾರ್ಥನಾಗದವನ ಜನುಮ ಅಪಒಂದು ಶಂಖವುದಕದಿಂದ |ಚೆಂದದಲಭಿಷೇಕ ಮಾಡಿ ||ಗಂಧ - ಪುಷ್ಪ ಹರಿಗೆ ಅರ್ಪಿಸಿ |ವಂದನೆ ಮಾಡದವನ ಜನುಮ 1ಮುಗುಳುದೆನೆಯ ಎಳೆ ತುಳಸಿ ದ - |ಳಗಳ ತಂದು ಪ್ರೇಮದಿಂದ ||ಜಗನ್ಮೋಹನ ಪೂಜೆಯ ಮಾಡಿ |ಚರಣಕೆರಗದವನ ಜನುಮ 2ಕಮಲ ಮಲ್ಲಿಗೆ ಸಂಪಿಗೆ ಜಾಜಿ |ವಿಮಲ ಕೇದಗೆ ಪ್ರೇಮದಿಂದ ||ಕಮಲನಾಭನ ಅರ್ಚನೆ ಮಾಡಿ |ಕರವ ಮುಗಿಯದವನ ಜನುಮ 3ಪಂಚಭಕ್ಷ್ಯ ಪಾಯಸಘೃತ |ಪಂಚಾಮೃತ ಹರಿಗರ್ಪಿಸದೆ ||ಮುಂಚೆ ಉಂಡು ಹೊರಗೆ ತಾ ಪ್ರ - |ಪಂಚಮಾಡುವವನ ಜನುಮ 4ಸಜ್ಜನಸಂಗ ಮಾಡದವನ |ದುರ್ಜನ ಸಂಗವ ಬಿಡದವನಅರ್ಜುನಸಖಪುರಂದರ |ವಿಠಲನನ್ನು ಭಜಿಸಿದವನ 5
--------------
ಪುರಂದರದಾಸರು
ಸತ್ಕರ್ಮವೆಂಬುದು ಸಾಧನವಲ್ಲದಲೆಸತ್ಕರ್ಮವೀಗ ಶುದ್ಧಬ್ರಹ್ಮವಲ್ಲವುಸತ್ಕರ್ಮ ಭಕ್ತಿಭಾವ ಸುಗುಣವಾದ ಮಾರ್ಗವುಸತ್ಕರ್ಮತ್ಯಾಗ ನಿಶ್ಯಬ್ದ ವಸ್ತುಪಗಾರುಡಿಯನರಿವೆನೆಂದು ಮಹೋರಗನ ಮೇಳವೇಆರು ನಂಬಲು ಬಹುದು ವಿಕಾರ ಮನವನುನಾರಿ ಪುತ್ರರೊಳಗೆ ಕೂಡಿ ನಾನು ಮುಕ್ತನು ಎನಲುಸೇರುವುದು ಎಂತು ಪೂರ್ಣ ಬ್ರಹ್ಮ1ಬ್ರಹ್ಮನರಿದು ಸಂಸಾರವಮಾಡುಈಗ ಎಂಬನುಬ್ರಹ್ಮಘಾತನು ಅವನು ಮಿಥ್ಯವಲ್ಲವುನಿಮ್ಮ ಮನಕೆ ತಿಳಿದು ನೋಡಿ ನಿಶ್ಚಿತದ ಮಾತ ಪೇಳ್ವೆಸುಮ್ಮನೆ ಬಿಡಲಿಬೇಕುಸತಿಸುತರನು2ವಾಸನಾಕ್ಷಯವು ವಸ್ತು ಎಂಬ ಮಾತು ದಿಟವದಿರಲುವಾಸನಾಕ್ಷಯವು ಎಂತು ಸಂಸಾರದಿಗೋಪನಾರಬೇಡವೆನಲು ನಾರುವುದು ಬಿಡುವುದೇಕಾಸ ವೀಸಿಯಲ್ಲದಲೆ ನಿಶ್ಚಯಿಲ್ಲವು3ಸಾಕ್ಷಿ ತಿಳಿದ ಬಳಿಕ ಸಂಸಾರವನೀಗ ತ್ಯಜಿಸಿದೆಅಕ್ಕಿನೀರುವಗ್ಗಿದಂತೆ ಆಗಬಾರದುರಕ್ಷಕನು ಇಲ್ಲದಲೆ ಸಂಸಾರವ ಬ್ರಹ್ಮವೆನಲುಭಕ್ಷಣಹುದುಬ್ರಹ್ಮಜ್ಞಾನಬಿಡುವುದಿಲ್ಲವು4ಸಂಸಾರದಿಮುಕ್ತನಾನು ಎನಲುತಿಲಾಂಶ ಮಾತ್ರ ಅನ್ನವಾಸನ ಅಂಟದಿಹುದೇಸಂಸಾರವ ತ್ಯಜಿಸಿದರೆ ಸಾಧ್ಯವಹುದು ವಸ್ತುಹಂಸಪರಮ ಚಿದಾನಂದ ತಾನೆಯಾಹನು5
--------------
ಚಿದಾನಂದ ಅವಧೂತರು
ಸರ್ವ ಪರಬ್ರಹ್ಮ ಸರ್ವ ಪರಬ್ರಹ್ಮಸರ್ವ ಪರಬ್ರಹ್ಮ ತಾನೆ ಪರಬ್ರಹ್ಮಪಹುದುಗಲ್ಲ ಕಣುಕಲ್ಲ ಬೇಳೇ ಭಕ್ಷ್ಯವು ಅಲ್ಲಅದರೊಳಗಣ ಸಿಹಿ ಅದುವೆ ಪರಬ್ರಹ್ಮ1ತೊಳೆಯಲ್ಲ ಬೀಜಲ್ಲ ತೊಗಟಲ್ಲ ಹಣ್ಣಲ್ಲತಿಳಿಯೆ ರುಚಿಯು ಬೇರೆ ಅದುವೆ ಪರಬ್ರಹ್ಮ2ಹಾಲು ನವ ನೀತವಲ್ಲ ಮೊಸರು ಮಜ್ಜಿಗೆಯಲ್ಲಹಾಲೊಳಗಣಘೃತಅದುವೆ ಪರಬ್ರಹ್ಮ3ದೇಹವಲ್ಲ ತತ್ವವಲ್ಲ ಮನ ಬುದ್ಧೀಂದ್ರಿಯವಲ್ಲದೇಹದೊಳಗಣ ದೇಹಿ ಅದುವೆ ಪರಬ್ರಹ್ಮ4ಸರ್ವಮಾಯೆ ಮಾತುಮಿಥ್ಯಸರ್ವಬ್ರಹ್ಮವೇ ಸತ್ಯಸರ್ವ ಚಿದಾನಂದ ಸರ್ವ ಪರಬ್ರಹ್ಮ5
--------------
ಚಿದಾನಂದ ಅವಧೂತರು
ಸುಲಭವಲ್ಲವೊ ಮಹಾನಂದ ತ -ನ್ನೊಳಗೆ ತಿಳಿಯಬೇಕುಗುರುದಯದಿಂದಪ.ಬೆಕ್ಕನು ಇಲಿ ನುಂಗುವನಕ - ಕಡು -ರಕ್ಕಸಿಯನು ಕಂಡು ಗಿಣಿ ನುಂಗುವನಕ ||ಮಕ್ಕಳ ಭಕ್ಷಿಸುವನಕ - ಮದ -ಸೊಕ್ಕಿದ ಗಜವನು ನರಿ ನುಂಗುವನಕ 1ಇಬ್ಬರೊಡನೆ ಕೊಡುವನಕ - ಮೂರು -ಹಬ್ಬಿದ ಬೆಟ್ಟವ ನೊಣ ನುಂಗುವನಕ ||ಒಬ್ಬರೊಡನೆ ಸೇರುವನಕ - ಕೆಟ್ಟ -ಗುಬ್ಬಿಯ ರಾಜಹಂಸವು ನುಂಗುವನಕ 2ಒಳ ಹೊರಗೊಂದಾಗುವನಕ - ತಾನು -ತಿಳಿದೆನೆಂಬಭಾವ ಬಯಲಾಗುವನಕ ||ಬೆಳಕಿನೊಳಗೆ ಕಾಣುವನಕ ನಮ್ಮ -ಚೆಲುವ ಪುರಂದರವಿಠಲನ ದಯವಾಗುವನಕ 3
--------------
ಪುರಂದರದಾಸರು
ಸ್ವಾಮಿ ನೀ ಮಾಡಿದುಪಕಾರಾ ಕಿಂತು ಪಾಮರನಪ್ರತಿಉಪಕಾರಾ | ಭೀಮಾಶಂಕರ ಗುರುವಾಗುವ ಪ್ರಕಾರಾ |ಈ ಮನಕೆ ಎಂದಿಗೆ ತೋರದಾಕಾರಾ ||ಸ್ವಾಮಿ||ಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಲಕ್ಷ ಎಂಬತ್ತು ಮೂರೊಂದನು |ಯೋನಿಕುಕ್ಷಿಯೊಳಗೆಹೊಕ್ಕು ಬಂದೆನೊ | ಭಕ್ಷ್ಯಾಭಕ್ಷ್ಯವ ಮೆದ್ದೆನು |ಅನುಪೇಕ್ಷಿಯೊಳಗೆ ಮುಳುಗಿದ್ದೆನೋ | ಭಿಕ್ಷುಕರೊಡೆಯನಿರೀಕ್ಷಿಸಿ ಕೃಪಾ ಕಟಾಕ್ಷದಿ ಸದ್ಗುರು ರಕ್ಷಿಸಿದಂಥಾ1ನೀರೊಳು ಜೀವಿಸುತಿದೆ ಮೀನಾ |ನೀರು ಕಾರಣವರಿಯದು | ಆ ಮೀನಾ |ಪಾರವಿಲ್ಲದಂಥದೀ ಮೀನಾ |ಪರವಸ್ತುಖೂನನರಿಯದು ಮನ ಮೀನಾ |ನಾರೇರ ನೋಟಕ್ಕೆ ಸೇರಿ ತಾ ಹೋದೀತು |ಸಾರವಸ್ತುವ ತಂದು ತೋರಿಸಿದಂಥ2ತನುವು ತನ್ನೊಳಗೆ ತಾ ತೋರದು |ತನು ಮನದ ವೃತ್ತಿಗೆ ತಾ ಬಾರದು |ಜನನ ಮೃತ್ಯಂಗಳು ದೋರದು |ಎನಗೆ ಸಾಧು ಸಜ್ಜನ ಸಂಗ ದೊರಕದು |ಘನಗುರುಶಂಕರ ಚಿನುಮಯರೂಪ- |ದನುಭವಕೆ ತಂದು ಎನಗೆ ನೀ ಕೊಟ್ಟಂಥ3
--------------
ಜಕ್ಕಪ್ಪಯ್ಯನವರು