ಮಳೆಯ ಪಾಲಸಯ್ಯ ಮಂಗಳ-
ನಿಳಯ ಪಾಲಿಸಮ್ಮ ಪ
ಬಿನೆಯೊಳು ಮಳೆಯನು ತಳೆಯದೆ ತೃಣಗಳು
ಬೆಳೆಯದ ಗೋವುಗಳಳವುವಯ್ಯ ಅ.ಪ
ಗೋವಿಪುರ ಕುಲವ ಕಾಯುವ
ದೇವನು ನೀನಲ್ಲವೇ
ಮೇವುಗಳಿಲ್ಲದೆ ಗೋವುಗಳೆಲ್ಲವು
ಸಾವುವು ನಿನ್ನೊಳಿದಾವನು ಕಾವನು 1
ಕರೆಯೊಳು ನೀರಿಲ್ಲ ಬಾವಿಗ-
ಳೊರತೆಯ ಸೋರಿಲ್ಲ
ತುರುಗಳು ಜೀವನದಿರವನು ಕಾಣದೆ
ಹರಣವ ಬಿಡವುವು ಕರುಣದಿ ಬೇಗನೆ 2
ಬಲರಿಪುಖತಿಯಲಿ ಬಾಧಿಪೆ
ಜಲಮಯ ರೀತಿಯಲಿ
ಚಲಿಸದೆ ಕೊಡೆವಿಡಿದಳುಹಿದೆ ಕರದೊಳು
ಚಲವನು ಗೋವ್ಗಳ ಬಳಗವನೀಗಳು 3
ಜಲನಿಧಿ ಕೃತ ಶಯನ ಶಾರದ
ಜಲರುಹದಳನಯನ
ಜಲಜರ ಮೂರುತಿ
ಜಲಜಕರಗಳು ಜಲದಾಗರದಿಂ 4
ದಾರಿಯ ಜನರೆಲ್ಲ ಬಹು ಬಾ-
ಯಾರಿ ಬರುವರಲ್ಲ
ದೂರಗಿಂ ತಂದಿಹ ನೀರನು ಲೋಭದಿ
ನಾರಿಯರೆಲ್ಲ ವಿಚಾರಿಸುತಿರ್ಪರು 5
ಬೆಳೆದಿಹ ಸತ್ಯಗಳು ಬಿಸಿಲಿನ
ಜಳದಲಿ ಬಾಡಿಹುವು
ನಡಿನ ನಯನ ನಿನ್ನೊಲುಮೆಯ ತೋರಿಸಿ
ಘಳಲನೆ ಪೈರುಗಳಳಿಯುತ ತೆರದೊಳು 6
ಕರುಣಾನಿಧಿಯೆಂದು ನಿನ್ನನು
ಶರಖಹೊಕ್ಕೆನಿಂದು
ಶರಣಭರಣ ಪುಲಿಗಿರಿಯೊಳು ನೆಲೆಸಿಹ
ವರದ ವಿಠಲ ದೊರೆ ವರದ ದಯಾನಿಧೆ 7