ಒಟ್ಟು 235 ಕಡೆಗಳಲ್ಲಿ , 44 ದಾಸರು , 215 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಧ್ವಾಂತರ್ಯಾಮಿ ಶ್ರೀ ಗುರು ಬಿಂಬ ಕಾಯೊ ಪ. ಹೃದ್ವನಜದಲಿ ನೆಲಸಿ ಆಜ್ಞಾನ ಹರಿಸಿ ಅ. ಸಾಟಿ ರಹಿತನೆ ನಿನ್ನ ಮುಖ ದರ್ಶನಾ ಹಾಟಕೋದರ ಮುಖರು ಅರಿಯದಂತವನನ್ನು ಕೋಟಲೆಯಭವ ಜನರು ಅರಿವದೆಂತಯ್ಯಾ 1 ತ್ರಿವಿಧ ಜೀವರ ತೆಗೆದು ಜನ್ಮದಲಿ ತೊಡಕಿಸೀ ಕರ್ಮ ಬಲೆ ಬೀಸಿ ಪವನನೈಯ್ಯನೆ ನಿನ್ನ ಮಾಯ ಮೋಡವ ಕವಿಸಿ ಭವಣಪಡಿಸಲು ಇನ್ನು ಬಿಡುಗಡೆಯದೆಂತೋ 2 ನೀನಾಗೆ ವಲಿದು ನಿನ್ನ ಭಕ್ತರನು ಕಾಯುತಿಯೊ ಮಾನಾಭಿಮಾನದೊಡೆಯನೆ ಆರ್ತಪಾಲ ಗಾನಲೋಲನೆ ನಿನ್ನ ಧ್ಯಾನ ಮೌನವನಿತ್ತು ಮಾನಸದಿ ನಿನ್ನ ತೋರೊ ದೀನ ರಕ್ಷಕನೇ3 ಅಂಗುಟದಿ ಗಂಗೆಯನು ಪೆತ್ತ ಪಾವನಪಾದ ಶೃಂಗಾರ ವಸನ ವಡ್ಯಾಣ್ಯನಡುವೂ ಅಂಗನೆಯು ವಕ್ಷದಲಿ ಹಾರಪದಕಗಳುಲಿಯೆ ಉಂಗುರದ ಬೆರಳು ಕಂಕಣ ಕಡಗ ಪಾಣೀ 4 ಕರ್ಣಕುಂಡಲ ಕಾಂತಿ ಮುಗುಳುನಗೆ ಕುಡಿನೋಟ ರನ್ನ ತಿಲಕದ ಫಣಿಯ ಮುಂಗುರುಳ ಸೊಬಗೊ ಸ್ವರ್ಣಕಾಂತಿಯ ತೇಜ ಕಡಗೋಲ ಕೈ ಸೊಬಗು ಚನ್ನಗೊಪಾಲಕೃಷ್ಣವಿಠಲ ಉಡುಪೀಶಾ 5
--------------
ಅಂಬಾಬಾಯಿ
ಮನವೆ ನಿನಗೇಕಿನ್ನು ಲಜ್ಜೆದೋರದು ಬಳಿಕಕನಲಿ ನಿಂದಿಸುವೆ ಜನರನಿತರಾ ಪಘನಘೋರಮಲಜನಿತ ತನುವಿನೊಳುನೀನಿರುತಲನವರತ ತೊಳಲಬಹುದೇ ಬರಿದೆ ಅ.ಪಓದಿ ಗ್ರಂಥಗಳನು ಪಠಿಸಿಯದರರ್ಥವನುಬೋಧಿಸುವೆ ಪರರಿಗೆಲ್ಲಾ ಸೊಲ್ಲಾಸಾದರದಿ ತನ್ನಿಷ್ಠೆಯಲಿ ನಡೆಯುತನುಭವವನೀದಿನಕು ತಂದುದಿಲ್ಲವಲ್ಲಾಬೋಧೆವಡದಿಹ ಯೋಗಿಗಳ ಜರೆವ ಬಗೆಯಲ್ಲಿನೀ ದೊಡ್ಡ ಜಾಣನಲ್ಲಾ ಬಲ್ಲಸಾಧಿಸಿದ ವಿದ್ಯವನು ವಾದದಲಿ ನೀಗಾಡಿಬೀದಿಯಲಿ ನಿಂತೆಯಲ್ಲಾ ನಲ್ಲಾ 1ಧನಧಾನ್ಯ ದಾಸ ಕತಿಯೊಳಗೊಂದಿಕೊಂದಿರುವಜನರಲವಿವೇಕ ವಿಡಿದೂ ಜರಿದೂತನು ಪಾಶ ಬದ್ದದಲಿ ನರಕ ಭಾಜನರಾಗಿದಿನವ ಕಳೆಯುತ್ತಲಿಹರೂ ುವರೂಎನುತಲನುತಾಪದಲಿ ನೀ ಮತ್ತೆಯನವರತಧನಿಕರಿದ್ದೆಡೆಗೆ ಬಂದೂ ನಿಂದೂಧನವ ಕೊಡಿ ಸತ್ಪಾತ್ರನಾನೆಂದು ವೊಂದುವರೆಹಣವ ಕೈಯೊಡ್ಡಿ ಕೊಂಡೂ ಉಂಡೂ2ತೋರುವ ಜಗತ್ತಿದುವೆ ಪರಮಾತ್ಮನಿಂದಲೆತೋರುವದು ಭ್ರಮೆಗೆ ಹಲವೂ ಕೆಲವೂತೋರದಡಗದ ನಿತ್ಯ ವಸ್ತುವೆ ತಾನೆÀಂದುಧೀರತನದಿಂದಲಿರವೂ ಅರಿವೂಈ ರೀತಿಯಲಿ ತಿಳಿದು ಮುಕ್ತನಾಗದೆ ಬರಿಯಕ್ರೂರ ಬುದ್ದಿಯಲಿ ುರವೂ ಮರವೂದಾರಿಗಾಣದೆ ನಿನ್ನ ಅನುಭವವ ನೀ ಮತ್ತೆಹೊರುವುದೆ ನಿನಗೆ ಮತವೂ ದೃಢವೂ 3ಇಂದ್ರಿಯಂಗಳ ಸುಖವನೆ ಮೆಚ್ಚಿ ನೀನವರಹಿಂದುಗೊಂಡೆರಗಿ ಬಿಡದೆ ಪಡೆದೆಸಂದ ಭೋಗದ ಸವಿಯನೆನನೆನದು ಮತ್ತದನುಮುಂದು ಬೇಕೆಂದು ಹೊರೆದೆ ಬೆರೆದೆಕಂದಿ ಕಾಮಕ್ರೋಧದಗ್ನಿಯಲಿ ನೀ ಬೆಂದುಹೊಂದಿ ನೀಂ ಜನ್ಮಪಿಡಿದೆ ಮರೆದೆಹಿಂದುಗಳೆವಾತ್ಮನನು ಹಿತವೆಂದು ಮಿಥ್ಯವನುನೊಂ[ದು] ನೋಡದೆ ಬರಿದೆ 4ಚದುರ ವಿದ್ಯವ ಕಲಿತೆನೆಂಬುದೊಂದೇ ಘನತೆಸುದತಿ ಸಂಪತ್ತಿನಲ್ಲೆ ರಮತೆಒದಗಿ ಬಹಳೋದ್ಯೋಗಗಳ ಮಾಡಿ ಬಹುದಿವಸಬದುಕಿದವ ನೆಂಬುದರಲೆ ುರತೆಇದ ನಾನು ಸಂಪಾದಿಸಿದೆನೆನ್ನ ಶೌರ್ಯತೆಗೆಇದಿರಿಲ್ಲವೆಂದು ಇದಕೆ ಬೆರತೆಮುದದಿ ಗುರು ವಾಸುದೇವಾರ್ಯವೆಂಕಟರಮಣನೊಡಮೂಡದಿತರ ನಡತೆ ಜಡಕೆ 5
--------------
ತಿಮ್ಮಪ್ಪದಾಸರು
ಮನವೇ ನೀ ಬರಿದೆಜನ್ಮ ವ್ಯರ್ಥಗಳೆವರೆ ಬಂಗಾರದಥಾ ಪ ಮನವೇ ನೀ ಬರಿದೇ ಜನ್ಮ ವ್ಯರ್ಥಗಳೆವರೆ ಬಂಗಾರದಂಥಾ | ಮರೆವ ದಿನಗಳ ಜರಿವರೇ ನರದೇಹವಿದು ಅ.ಪ ದೊರೆಯದಿನ್ನು ಮತ್ತ ತರುವರ ಏನಾದರೇನೀ | ಹರಿಯ ಸ್ಮರಣೆಯ ಬಿಡುವರೇ | ಅರಿವ ಪಂಥ ವಿಡಿದು ಜನ್ಮ ಮರಣ ಬಲಿಯಾ ತಪ್ಪಿಸದೇ | ತಿಗಳಿ ಹುಳುವಿನಂತೆ ಸಿಕ್ಕ ತನ್ನ ತಾ ಮರೆವರೇ 1 ಕೇಳೆಲೋ ನೀ ಪೊಡವಿಯೊಳಗಿದ್ದ ಸಾಯಸಾ | ಉದಯದಲೆದ್ದು ಬಿಡುವದೆ ಮಲಮೂತ್ರ ಕೆಲಸಾ | ಮಧ್ಯಾನ್ಹದಲಿ ವಡಲ ತುಂಬುವ ಕೆಲಸಾ | ನಿಶಿಕಾಲದಲ್ಲಿ ವಡನೆ ಮಲಗುವ ಕೆಲಸಾ | ಪಡೆದ ತಾಯಿಯವ್ವನೆಂಬ ದೃಢವನವಾ ಕಡಿಯಲು | ಕೊಡಲಿಯಂತೆ ಹುಟ್ಟಿ ಬಂದೆ ಮಡದಿ ಮಕ್ಕಳುದ್ದೇಶಾ 2 ಮನವೇ ನೀ ಹಿಂದಿನವ ಗುಣ ಜರಿದು ಸದ್ಭಾವ ಭಕು | ತಿಂದ ನಡುವಳಿ ಬಿರಿದು | ಸದ್ಗುರುವೀನ | ದ್ವಂದ್ವ ಪಾದಗಳ ವಿಡಿದು | ಅವರ ದಯ | ದಿಂದ ಗತಿ ಮುಕ್ತಿ ಪಡೆದು | ಇಂದು ಧನ್ಯನಾಗೆಲೋ ಮುಕುಂದ ನಾಮ ನೆನೆದು ನೀ | ತಂದೆ ಮಹಿಪತಿ ನಿಜನಂದನುಸುರಿದನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನವೇನೆಂಬುದನರಿಯೋ ಮನುಜ ಮನ ವೇನೆಂಬುದನು ಧ್ರುವ ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜ1 ಉತ್ಪತ್ತಿ ಸ್ಥಿತಿ ಲಯ ಕರ್ತನೆಂದೆನಿಸಿ ಪ್ರತ್ಯೇಕರವನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ 2 ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕುವೇದವ ಬಲ್ಲವನೆಂದೆನಿಸಿ ವಿಕಳಿಸುತಿಹ್ಯದು ದಾವುದೊ ಮನುಜ 3 ಉತ್ತಮೊತ್ತಮರ ಕಂಡಾಕ್ಷಣ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿ ಗಾಲಸ್ಯವ ತೋರಿ ಒತ್ತಿ ಆಳುವದು ದಾವುದೊ ಮನುಜ 4 ಪಾಪವ ಮಾಡಬಾರದು ಎಂದೆನಿಸಿ ವ್ಯಾಪಿಸಿಗೊಡದೆ ಕಾಣದನಕ ಉಪಾಯದಲಿ ಅಪಸ್ವಾರ್ಥವು ಇದಿರಡೆ ಅಪಹರಿಸುವದು ದಾವುದೊ ಮನುಜ 5 ಪ್ರಾಚೀನವೆ ತಾಂ ನಿಜವೆಂದರುಹಿಸಿ ಆಚರಣೆಯ ಬ್ಯಾರೆ ತೋರುತಲಿ ನೀಚ ಊಚ ಹೊಡೆದಾಡಿಸುತ ನಾಚಿಸುತಿಹುದು ದಾವೊದೊ ಮನುಜ 6 ಸಗುಣ ನಿರ್ಗುಣ ಬ್ಯಾರೆರಡನೆ ತೋರಿ ಬಗೆ ಬಗೆ ಸಾಧನ ತೋರಿಸುತ ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ ತೋರುವುದು ದಾವುದೊ ಮನುಜ 7 ಧ್ಯಾನಕೆ ಕೂಡಿಸಿ ಮೋನವ ಹಿಡಿಸಿ ಅನುದಿನ ಜಪವನು ಮಾಡಿಸುತ ಘನವಾಗಿಹÀ ಅನುಭವ ಸುಖದಾಟದ ಖೂನ ದೋರಿಸುದು ದಾವುದೊ ಮನುಜ 8 ಮರವಿಗೆ ತಾನೆ ಅರಿವೇ ಕೊಟ್ಟು ತಿರಿವು ಮರವಿನಂಕುರದ ಕುರ್ಹುವಿನ ಇರಹು ತೋರಿಸುದು ದಾವುದೊ ಮನುಜ 9 ಮನವಿನ ಮೂಲವು ತಿಳಿವದು ಭಾನುಕೋಟಿ ಪ್ರಕಾಶನ ಕರುಣದಲಿ ನಾನು ನಾನೆಂಬವರಿಗೆ ಇದರ ಖೂನ ಲೇಶ ತಿಳಿಯದೊ ಮನುಜ 10 ಹರಿಯೆ ಗುರುವೆಂದರುಹಿಸಿ ಆತ್ಮಲಿ ಶರಣಹೋಗುವ ಭಾವನೆದೋರಿ ತರಳಮಹಿಪತಿ ಗುರುದಯ ಪಡಕೊಂಡಿಂದು ಯೋಗ್ಯನಾಗುವದಿದೊಂದೆ ಮನುಜ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನಸಿನ ಮಾಯವೆ ಗೂಢದೋರದು ನಿಜ ಗೂಢ ಧ್ರುವ ಮರವಿನೊಳಾಡಲು ಆಯಿತು ಮನವು ಅರಿವಿನೊಳಾಡಲು ತೋರಿತುನ್ಮನವು ಅರಹು ಮರುಹ ಎರಡನೆ ಮೀರಿದರೆ ಆಯಿತು ತನ್ನೊಳು ತಾನೆ ಚಿದ್ಘನವು 1 ಅರುಹಿತು ಸ್ಥೂಲಕೆ ಜಾಗ್ರತಿಯಾಗಿ ಬ್ಯಾರೆದೋರಿತು ಸ್ವಪ್ನ ಸೂಕ್ಷ್ಮಕೆ ಹೋಗಿ ಕಾರಣದಲಿ ಸಷುಪ್ತಿಯು ಆಗಿ ತೋರಿತು ತಾನೆ ಮೂರು ಪರಿಯಾಗಿ 2 ದೊರಕುದು ಬ್ರಹ್ಮಾಧಿಕರಿಗೆ ಖೂನ ಮರುಳ ಮಾಡ್ಹೆಚ್ಚಿತು ವಿಷಯದ ಧ್ಯಾನ ತರಳ ಮಹಿಪತಿಗಾಯಿತುನ್ಮನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮರವೆ ಮುಸುಕಿತುಋಣದ ಬಾಧೆ ಹತ್ತಿತು ರೋಗವಡಸಿತುಜನರ ಪ್ರೀತಿ ತೊಲಗಿತು ಜಾಣ್ಮೆ ತಾನು ಸಡಿಲಿತು... ದಿಯ ವಾಸ'ಲ್ಲವಾಯ್ತು ... ಮರೆ ದೂರವಾಯ್ತು 1ನಿನ್ನ ಸನ್ನಿಧಿಯ 'ುೀರಿ ಪುಣ್ಯವ ಬೇರೆ ಬಯಸಿದೆನೆನಿನ್ನ ಮೂರ್ತಿಯನುಳಿದು ಅನ್ಯರ ನೆನೆದೆರಗಿದೆನೆನಿನ್ನ ಸೇವೆಗಧಿಕವೆಂದನ್ಯದೇವರ ಸೇ'ಸಿಕೊಂಡೆನೆ 2ಸನ್ನಿಕರ್ಷವನಾದರತೆಯನ್ನು ಕೊಡುವದೆದೆಂದೆನೆ ಅರಿವೆನ್ನೊಳುದಿಸಿತೆ ದೂರನಾದೆನೇತಕೆಇನ್ನುದಾಸೀನಗೈದರೆ ಎನ್ನಿಂದಾಹುದೇನು ಬೇರೆಮನ್ನಿಸಿ ನೀನೊಂದಿರೆ ಸೈರಿಸಲಾರೆಂ 3ಪತಿತಪಾವನನು ನೀನು ಪರಮಕರುಣಾನಿಧಿ ನೀನು ಪತಿಕರಿಸಿ ಬಿಡುವದೇ ಪಾಪಿಯೆ ನಾನು ಸತತ ನಿನ್ನ ನೆನೆಯುವೆನು ಸೇವೆಗೆ ಕಾತರಿಸಿಹೆನು ಅತಿಶಯವ ತೋರಿಸು ಆ ನನ್ನನಿಧಿಯೆ ನೋಡಿನ್ನು 4ಕರೆದು ಮೂಢರಜ್ಞತೆಯ ಪರಿದು 'ಜ್ಞಾನ ಸುಧೆಯಎರೆದು ಕಾಯೆ ಚಿಕ್ಕನಾಗಪುರದೊಳು ನೀನೆಗುರುವರ್ಯ ವಾಸುದೇವಾರ್ಯ ಚರಣಕೆರಗಿದೆನಯ್ಯಾನಿರತ ಮಂಗಳಾರತಿಯಸಿರಿಯ ತೋರಿಸೊ ದಮ್ಮಯ್ಯಾ 5
--------------
ವೆಂಕಟದಾಸರು
ಮರವೆ ಮರವೆ ಮಾಡಿತೋಅಂತರಂಗದಲಿ ಭೋರೆಂದು ತುಂಬಿಅಂತು ಅಂತೆನಲು ಕೂಡದು ಪ್ರಣವನಾದ ಪ ಹೊಟ್ಟೆಗುಣ್ಣುವುದನೆ ಮರೆಸಿತು ಈ ಪ್ರಣವನಾದಮುಟ್ಟು ಚಟ್ಟನೆ ಮರೆಸಿತುಕೆಟ್ಟಕೇಡನೇನ ಹೇಳಲಿಉಟ್ಟ ಬಟ್ಟೆಯ ಅರಿವೇ ಇಲ್ಲ 1 ಆಸೆಯೆಂಬುದ ಮರೆಸಿತು ಈ ಪ್ರಣವನಾದದ್ವೇಷವೆಂಬುದು ತೊರೆಸಿತುನಾಶವಾಯಿತು ಜಪತಪವೆಲ್ಲಮೋಸವೆನಗಿಂತು ಮಾಡಿತು2 ಧ್ಯಾನವೆಂಬುದು ಮರೆಸಿತು ಈ ಪ್ರಣವನಾದಓಂಕಾರವೆಂಬುದು ಕಲಿಸಿತುಜ್ಞಾನಮೂರುತಿ ಚಿದಾನಂದತಾನೆ ತಾನೆ ತಾನೆ ಎಂಬ 3
--------------
ಚಿದಾನಂದ ಅವಧೂತರು
ಮರೀಬೇಡ ಮಾಧವನ ಅರಿವಿಟ್ಟು ಭಜಿಸೋ ಸ್ಥಿರವಲ್ಲ ಧರೆಭೋಗ ಮೆಚ್ಚಿ ಕೇಡಬೇಡ ಪ ಕೂಡು ನಿಸ್ಸಂಗದೊಳು ಆಡು ಸುಸಂಗದೊಳು ಮಾಡು ನಿಜವರ್ತನಗಳು ಬೇಡು ಬಡತನದೊಳು ದೂಡು ದುವ್ರ್ಯಸನಗಳು ತೋಡು ದುರ್ಗುಣಗಳು ನೋಡು ನಿಜಭಕ್ತರೊಳು ನೀಡು ಮನ ಹರಿಯೊಳು 1 ಹೀರು ಮಹಗರುವವ ತೂರು ಮದ ಮತ್ಸರವ ತೂರು ದುಷ್ಕøತ್ಯವ ಕಾರು ಬಲುವಿಕಾರವ ಮೀರು ಧರೆಭೋಗವ ತೋರು ನಿಜಧ್ಯಾನವ ಏರು ಸನ್ಮಾರ್ಗವ ಸೇರು ಹರಿಪದವ 2 ಕುಂದುಗಳನೊರೆಯದಿರು ನಿಂದೆಗಳನಾಡದಿರು ಬಂಧನಕ್ಕೆ ಬೀಳದಿರು ಮಂದತ್ವದೂರು ತಂದೆ ಶ್ರೀರಾಮನಡಿಗೊಂದಿ ವೈಕುಂಠಪದ ಚಂದದಿಂ ಪಡಕೊಂಡಾನಂದದಲಿ ಸೇರು 3
--------------
ರಾಮದಾಸರು
ಮರೆವಿನೊಳಗೆ ಮನೆಮಾಡಿದ್ದಿ ಮನ ಅರಿವಿನ ಆಲಯ ಬಿಟ್ಟಿದ್ದಿ ಪ ಹರಿದುಹೋಗುವಂಥ ಸಿರಿಗೆ ಒಲಿದು ನೀ ಪರಮ ಹರಿಯ ಪಾದಕ್ಹೊರತಿದ್ದಿ ಅ.ಪ ಮಂದಿಮಕ್ಕಳೆಂದು ನೆಚ್ಚಿದ್ದಿ ನಿನ್ನ ಹಿಂದೆ ಬರುವರೇನು ಅಂತಿದ್ದಿ ಕುಂದುವ ಜಗ ಮಾಯದಂದಗೆಟ್ಟು ಒಬ್ಬ ನೊಂದಿನ ಹೋಗ್ವುದು ಮರೆತಿದ್ದಿ 1 ಸಿರಿಸಂಪತ್ತಿಗೆ ಹಿಗ್ಗಿದಿ ಇದು ಸ್ಥಿರವಲ್ಲೆಂಬುದು ಅರಿಯದ್ಹೋದಿ ಎರೆದೆಣ್ಣಿರುವನಕುರಿವ ದೀವಿಗೆಯೋಲ್ ವರ ಪುಣ್ಯಿರುವನಕಿರುತದೆ ಸಿರಿಯದು 2 ಹೇಳಿದಮಾತನು ಕೇಳದ್ಹೋಗಿ ಮನ ಮೂಳನಾಗಬೇಡೆಲೆ ಗೂಗಿ ಹಾಳುಯೋಚನೆ ಬಿಟ್ಟು ಮೇಲುಪದವಿ ಪಡಿ ಶೀಲ ಶ್ರೀರಾಮಗೆ ತಲೆಬಾಗಿ 3
--------------
ರಾಮದಾಸರು
ಮಾಡುವುದೆಲ್ಲ ವಿವಾದಕೆ ಕಾರಣ | ಸಾಧಿಸುವದೆ ಬ್ರಹ್ಮಾ ಪ ಸಾಧು ಜನರ ಸುಸಮಾಧಿಯ ಬೋಧವು ಬಾಜಾರವೇನೋ ತಮ್ಮಾ ಅ.ಪ ಮನದೊಳು ತನದೊಳು ನಯನಗಳಿರುತಿರೆ | ಮನ ಬಯಸಿದದೊಂದು | ಘನ ಜ್ಯೋತಿಯ ತಾ ತಾರದೆ ತೋರದು | ಸನ್ಮುಖದಲಿ ನಿಂದೂ 1 ಅರಿವುದು ಕರಣದಿ ಬೆರೆವುತ ನಿನ್ನ | ಅರಿಯದಲಿರುತಿಹುದೂ | ಪರಮ ಪುರುಷರಾಚರಿಸುವ ಪರಿಯಲಿ | ಗುರುಪದ ಸಾರುವದೋ2 ತಪ್ಪದೆ ನೆಲಕೆ ಭಗುರಿಯನೆ ಎಸೆವರೆ | ಜಪ್ಪಿಸುವರೆ ಹೇಳಾ | ದಪ್ಪನೆ ಗುರು ಭವತಾರಕ ತ್ರಯ ಜಗದಪ್ಪನ ನೀ ಕೇಳಾ 3
--------------
ಭಾವತರಕರು
ಮಾಧವ ಗುರುವರ ಬೋಧಿಸು ಸುಖಸಾರ ಪಾದವ ಸ್ತುತಿಪೆನು ದಯವಾಗೊ ಸುಖಕರ ಪ ನಶಿಸಿಪೋಗುವ ಈ ವಿಷಮಸಂಸಾರದ ವಿಷಯದಾಸ್ಹರಿಸೆನಗೆ ಅಸಮಸುಖದ ಮಾರ್ಗ 1 ಅನುದಿನ ತ್ರಿಮಲಮೋಹಂಗಳ ಕ್ರಮದಿ ಖಂಡ್ರಿಸಿ ಮಹ ವಿಮಲಪದವಿ ಮಾರ್ಗ 2 ಮರವೆ ಮಾಯವ ತರಿದು ಅರಿವಿನಾಲಯದಿರಿಸಿ ಪರಮ ಶ್ರೀರಾಮನ ಚರಣಕಮಲಭಕ್ತಿ 3
--------------
ರಾಮದಾಸರು
ಮಾನವ ನೀನು ತಿಳಿ ಮಮಕುಲವ ಪೇಳುವೆನು ತಿಳಿದು ಭವದ ನೆಲೆ ಪ ಒಳಹೊರಗೊಂದಾಗಿ ನಳಿನಿನಾಭನ ಪ್ರೇಮ ಗಳಿಸುವ ಕುಲ ನಂದು ಅ.ಪ ಸೊಲ್ಲು ತಿಳಿಯುವಂಥ ಖುಲ್ಲ ಜನರ ಬಳಿ ನಿಲ್ಲದಂಥ ಬಲ್ಲಿದ ಕುಲ ನಂದು 1 ಹರಿಯ ಜರೆಯುವಂಥ ಪರಮ ದುರುಳರನೊದೆವಂಥ ಹರಿಹರಿಯೆಂದೆಂಬ ವರಸುಧೆಯಮೃತಭರಿತ ಪರಲೋಕದ ಅರಿವಿನ ಕುಲನಂದು 2 ತಾಮಸವನು ತ್ಯಜಿಸಿ ದಾಸರ ಪ್ರೇಮವನು ಬಯಸಿ ಭೂಮಿಯೊಳು ಶ್ರೀರಾಮರಹೀಮೆಂದು ನೇಮಿಸಿಕೊಂಡ ನಿಸ್ಸೀಮಕುಲವು ನಂದು 3
--------------
ರಾಮದಾಸರು
ಮಾಯಾ ಕಾರ್ಯವಾಕೆಯೆ ಮಿಥ್ಯವೂಈ ರೀತಿುಂದಲಾತ್ಮನಿಛ್ಛೆಯಲಿದುಸೇರಿದಂತಿಹುದಾಗಿ ಭ್ರಾಂತಿಯು ಜಾರುವನ್ನೆಗ ಪೊಳೆಯಲು1ಮುನ್ನ ನೀ ಬಂದೆನೆಂಬಲ್ಲಿ ಪರವiನುಭಿನ್ನವಿಲ್ಲದೆ ಪೂರ್ಣವಾಗಿರಲಿನ್ನು ನಿನಗೆಡೆಯಾವದೂಅನ್ಯ ವಿಲ್ಲದನನ್ಯನೀಶನೆ ನಾನುನಿನ್ನ ಕಾರ್ಯದ ನೇತ್ರಮಾತ್ರಕ್ಕುನ್ನತ ಕೃತಿಯಾಗಿರೇ 2ಮರುಭೂಮಿಯೊಳು ಮುಸುಕೆ ಮಿತ್ರನ ಕಾಂತಿಕೆರೆಯ ನೀರಿನ ಹಾಗೆ ಕಾಣುತಲಿರಲು ನೋಡಿದರುದಕವೆಬರಿಯ ಚೌಳೆಂತಾ ಪರಿಯು ನಿನ್ನಯ ತೋರ್ಕೆನಿರತ ಉಂಟೆಂಬಂತೆ ನಿನ್ನಯ ಮರುಳಿನಿಂ ಮುಂದಿರುತಿರೆ 3ಹೊಳೆಯಲಿಲ್ಲವು ಹುಸಿಯಾಗಿ ನೀ ಮುನ್ನಬಳಿಕ ನಿನ್ನೊಳು ಬದ್ದನೆಂಬೀ ಬಗೆಯು ತನಗೆಂತಪ್ಪುದೂತಿಳಿದು ನೋಡಲು ತಾನೊಬ್ಬನಾತ್ಮನುಕಳೆದು ಕೂಡುವ ಮಾತು ಮಾತ್ರವೆಯಳವಿಗೊಂಡಿರವಿಷ್ಟಕೆ 4ಅರಿವಿನಾ ಘಟ್ಟಿಯಾಗಿಹೆ ನಾ ನಿತ್ಯವರಿವು ಮರವೆಗಳೆಂದು ತೋರ್ದರು ಕರಣಧರ್ಮಗಳಲ್ಲದೆಬೆರದು ಬೇರಾಹ ಬಗೆಯಂದಿಗಿಲ್ಲವುತಿರುಪತಿಯ ಶ್ರೀ ವೆಂಕಟೇಶನೆ ತರುಬಿಕೊಂಡಿರೆ ವಿಶ್ವವಾ 5ಕಂ||ನುಡಿಯಲು ಜೀವನು ಕೋಪದಿಕಿಡಿಗೆದರುವ ಕಂಗಳಿಂದಭಿಮಾನನ ಬಲದಿಂತಡೆಯದೆ ತನು ಜೀವನನಾರ್ಭಟಿಸುತ ವಾದಿಸಿದುದ ಪುಸಿತನ ಬಂತೆಂಬುದರಿಂ
--------------
ತಿಮ್ಮಪ್ಪದಾಸರು
ಮಾಯಾ ಪ ನರದೇಹ ಎಂಬುದು ಎಂಥಾ ಮರವುನೀನೇ ಬ್ರಹ್ಮಾಂತ ತೋರಿದಿ ಅರಿವು 1 ತತ್ತ್ವಮಸಿ ಮಹಾವಾಕ್ಯ ಕೇಳಿ ಹಾರಿ ಹೋಯಿತು ದ್ವೈತದ ಧೂಳಿ 2 ಮುತ್ತು ಮಾಣಿಕ ಪೆಸರಾಯಿತು ಲೋಪತುಂಬಿ ಉಳಿಯಿತು ಚಿದಾನಂದ ಸ್ವರೂಪ 3
--------------
ಚಿದಾನಂದ ಅವಧೂತರು
ಮಾರುತಿ ನಿನ್ನಾ ನಿರುತದಿ ಭಜಿಪೆ ತ್ವರಿತದಿ ಹÀರಿ ಸರ್ವೋತ್ತಮನೆಂಬುವ ಸರಸ ವಿಜ್ಞಾನವ ಸರಿ ಇಲ್ಲದೆ ಇತ್ತು ಪರಿಪಾಲಿಸು ಎಂದು ಶಿರಸದಿ ನಮಿಪೆ ಆರಿಸಿ ನೋಡಲು ಆರಾರು ಇಲ್ಲವೊ ಕಾರುಣ್ಯಸಾಗರ ಕರುಣಿಸೆ ನೀ ಎನ್ನಾ ಹರಿ ತಾ ಕರುಣಿಪನೆಂದು ಅರಿತು ನಿನ್ನಯ ದಿವ್ಯ ಚರಣ ಸೇರಿದೆನಯ್ಯಾ ಸರಿಬಂದದ್ದು ಮಾಡೋ ಹರಿ ಕುಲಾವರಿಯಾನೆ ಪರಿಪರಿ ಜನರನ್ನು ಪಾಲಿಸಿ ಎನ್ನನು ದೂರದಿ ಇಟ್ಟರೆ ದೊರೆತನವೇನಯ್ಯಾ ಸಾರುವೆ ಸಾರುವೆ ಸರಸಿಜನಾಭನ ಸುತನೆ ಆರುಮೂರೆರಡೊಂದು ಸಾವಿರಾ ಮೂರೆರಡು ಶತಶ್ವಾಸ ಜಪಗಳನು ಮೂರುಜೀವರಲ್ಲಿ ನೀರಜಜಾಕಲ್ಪ ಪರಿಯಂತರ ಮಾಡಿ ಅವರವರ ಗತಿಯಾ ಮರಿಯದೆ ನೀಡುವಿ ಗಿರಿಶಾನುತಪಾದ ಗುರುಜಗನ್ನಾಥ ವಿಠಲನ್ನ ಅರಿವಂತೆ ಮಾಡೋ ಧೀರಾ ಕರುಣಿಯೇ
--------------
ಗುರುಜಗನ್ನಾಥದಾಸರು