ಒಟ್ಟು 4734 ಕಡೆಗಳಲ್ಲಿ , 128 ದಾಸರು , 3340 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನಪಾದ ದೊರಕುವುದು ಎಂತೆನಗೆ ರಂಗ ಗನ್ನಗತಕ ನಾನು ಪುಣ್ಯದ್ಹಾದ್ಯರಿಯೆ ಪ ಕಳ್ಳನಾಗಿ ಜೀವಿಸಿದೆ ಸುಳ್ಳನಾಡಿ ನಾ ದಣಿದೆ ತಳ್ಳಿಕೋರತನದನ್ಯರ್ಹಾಳು ಮಾಡಿದೆನೊ ಖುಲ್ಲತನದಿಂ ಪರರ ನಲ್ಲೆಯರೋಳ್ಮನಸಿಟ್ಟು ಕ್ಷುಲ್ಲಕನಾದೆ ನಾನೆಲ್ಲಿ ನೋಡಲವ 1 ಅನ್ನಕೊಟ್ಟವರಿಗೆ ಅನ್ಯಾಯಯೋಚಿಸಿದೆ ಬನ್ನ ಬಡಿಸಿದೆನಯ್ಯ ನನ್ನನಂಬಿದವರ ಎನ್ನ ಪಡೆದವರನ್ನು ಮನ್ನಿಸಿನೋಡಿಲ್ಲ ನಿನ್ನ ಧ್ಯಾನದ ಖೂನವನ್ನರಿಯೆ ದೇವ 2 ಗುರುಹಿರಿಯರನು ಜರಿದೆ ಪರಿಪರಿಯಲಿ ನಾನು ಪರರಿಗೊಂದಿಕ್ಕಿ ನಾನುಂಡಿರುವೆನೊಂದು ಧರೆಯೊಳೆಣೆಯಿಲ್ಲದ ದುರಿತವನು ಗಳಿಸಿರುವೆ ಕರುಣಾಳು ಶ್ರೀರಾಮ ನೀನೆ ಪೊರಿಬೇಕೊ 3
--------------
ರಾಮದಾಸರು
ನಿನ್ನಯ ನಾಮಾಪನ್ನರಿಗೆಲ್ಲಾ ಪ್ರೇಮ ಪ ಪನ್ನಗ ಶಯನ ಪಾವನ ಚರಿತಅ.ಪ ಮಾಧವ ಭವ ಪಾಶ ವಿಮೋಚನ 1 ಕರಿಧೃವ ಬಲಿರುಕ್ಮಾಂಗದ ಪ್ರಹ್ಲಾದ ದ್ರೌಪದಿ ವರಚಂದ್ರಹಾಸಾದಿ ಭಕ್ತರÀನೆಲ್ಲ ಪಾಲಿಸಿತು 2 ಪರಮಾತ್ಮ ಹರಿಕೃಷ್ಣ ಧರಣಿಧರ ಮುಕುಂದ ವರೇಣ್ಯ ಶ್ರೀಗುರುರಾಮವಿಠಲ 3
--------------
ಗುರುರಾಮವಿಠಲ
ನಿನ್ನವನಲ್ಲವೇನೋ ಶ್ರೀಹರಿಯೆ ನೀನೆನ್ನೊಳಗಿಲ್ಲವೇನೊ ಪ ನಿನ್ನವನಲ್ಲವೆ ನೀ ನೆನ್ನೊಳಗಿಲ್ಲವೆನಿನ್ನ ಭಕುತುನೆಂದು ಮನ್ನಿಸಲೊಲ್ಲೇನೊ ಅ.ಪ. ಹೃದಯದೊಳೆಂಟುದಳ ಪದುಮವುಮುದದಿ ನೀನಿರುವ ಸ್ಥಳಹದನವನರಿತು ನಾ ಸದಾವಕಾಲದಿಸದಮಲ ಭಕುತಿಯನ್ನೊದವಿಸಿ ಸೇವಿಸೆ 1 ಎಂಭತ್ತುನಾಲ್ಕು ಲಕ್ಷ ಜೀವನರಾಶೀ-ಗಿಂಬಿತ್ತು ಕಾಯ್ವದ ಗೊಂಬೆಯ ಮಾಡುವಬಿಂಬ ಮೂರುತಿ ನಿನ್ನ ನಂಬಿದ ನನ್ನನ್ನುತುಂಬ ಮರೆತೆಯೇನೋ 2 ಗದುಗಿನನೊಳ್ಮೆರೆವ ವೀರನಾರಾಯಣಪದವ ನಂಬಿರುವೆ ಪೂರಾವಿಧವಿಧ ಪರಿಕಿಸು ಬದುಕಿಸು ಮುಳುಗಿಸುಬೆದರಿಸು ಕರುಣಿಸು ಕದಲಲೊಲ್ಲೆನು ದೇವಾ 3
--------------
ವೀರನಾರಾಯಣ
ನಿನ್ನೊಳಗೆ ನೀ ತಿಳಿದುನೋಡು ನಿರ್ಮಲನಾಗಿ ಪ ನಿನ್ನೊಳಗೆ ನೀ ತಿಳಿದುನೋಡು ಚೆನ್ನಾಗಿ ಗುರುಭಕ್ತಿಯ ಮಾಡು ಭಿನ್ನಪದಾರ್ಥಗಳನ್ನು ಬಯಸದೆ ಅನನ್ಯಭಾವದಿ ನಿಜವನ್ನು ನಿತ್ಯಾತ್ಮನ ನರದೇಹದಿಂದಧಿಕವಿಲ್ಲಾ ಸ್ಥಿರವಾಗಿ ನಿಂದಿರುವುದಲ್ಲಾ ಬರಿದೆ ಕೆಡಿಸುವುದು ಸಲ್ಲಾ ಗುರುತಿಗೆ ಬೆರೆಸಲು ಬಲ್ಲಾ ಗುರುನಾಥನಿಂದುಪದೇಶವಾ ಕೈಕೊಂಡು ಇ ತರ ಪರಿಕರಂಗಳ ಆಶಾಪಾಶವಾ ವರ್ಜಿಸಿ ನಿನ್ನ ದುರಿತ ದುಃಖ ವಿನಾಶವಾಮಾಡಲು ಭವ ಶರಧಿಯ ದಾಟುವಾ ಆಯಾಸವಾ ನಿಲ್ಲುವದಿನ್ನು ಕುರಿತುಮನದಲಿ ತಿಳಿದುನೋಡು ಕಾಂಡುವ ಆರು ಅರಿಗಳ ವಿಚ್ಛೇಧನ ಮಾಡು ಅವಿದ್ಯೆಯನ್ನು ಶರಗು ಹಿಡಿದು ಹೊರಗೆ ದೂಡು ಹಮ್ಮಿನಹಲ್ಲು ಮುರಿದು ನಿನ್ನೊಳಗೆ ಕೂಡು ಹರಿಚರಣದೊಳಾಡು ಗುರುಮಂತ್ರವನುಚ್ಚರಿಸಿ ಕರ್ಪೂರವನು ಜಗದೊಳಿರುವುದೆಲ್ಲ ನಶ್ವರಸಂತೆ ನೋಡೆ ಬರುವದೆಲ್ಲ ಬಯಲಿನ ಭ್ರಾಂತಿ ಅರಿತಮಹಾತ್ಮರ ಚರಣನರಸಿಜಕೆ ಎರಗಿ ತತ್ವಾನಂದ ಭರಿತನೆಂದೆನಿಸುವ ನಿನ್ನೊಳಗೆ1 ವಾದಿಸಿ ಶುದ್ಧತತ್ವದ ಹಾದಿಯ ಬಲ್ಲವರಾದ ಸಾದು ಸತ್ಪುರುಷರಪಾದ ಕೊಡಿ ಶ್ರೀ ಗುರುಪ್ರಸಾದ ಸಾಧಿಸಿ ಸವಿಯನು ಬೇಡಿಕೊ ಬ್ರಹ್ಮಾನಂದದ ಬೋಧೆಯಿಂದ ನೀ ಲೋಲಾಡಿಕೊ ನಿತ್ಯನಿರ್ಮಲವಾದ ವಸ್ತು ನೀ ದೃಢಮಾಡಿಕೊ ಅಂತರಾತ್ಮನ ಶೋಧಿಸಿ ಸಜ್ಜಾಗಿ ನೋಡಿಕೊ ಅಷ್ಟರಮೇಲೆ ಹಾ ಧನ್ಯಧನ್ಯನೆನಿಸಿ ಮೆರೆವ ವರ್ಣಾಶ್ರಮದ ಭೇದವಳಿದು ಮಾಯೆಯ ಜರಿವೆ ನಿತ್ಯಾನಂದವಿನೋದಕೆ ಮಹಾತ್ಮರನು ಕರಿವೆ ನೋಡಲು ದ್ವೈತವಾದ ಮಿಥ್ಯವೆಂಬುದನರಿವೆ ಮಧ್ಯಾಂತ ಶ್ರೀ ಗುರುದೇವಾ ಬಹುಆದರವಿಡಿದು ಶಿಷ್ಯರಕಾವಾ ಸಂಪಾದಿಸಿಕೊಡುವಾ ಮುಕ್ತಿಯಠಾವಾ ನಿತ್ಯಾರಾಧಕರಿಗೆ ಸದ್ಗತಿಗಳನೀವಾ ತ್ರಿಮೂರ್ತಿಗಳಾದರೆಂತೆಂಬುದ ನಿನ್ನೊಳಗೆ 2 ನಿತ್ಯನಿರ್ಮಲದೊಳಗಾಡಿ ಪ್ರತ್ಯುಗಾತುಮನ ನೋಡಿ ಇತ್ತಣದ ಹಂಬಲವ ಬಿಡಬೇಕು ತನುಮನಧನ ಜೊತ್ತಾಗಿ ಶ್ರೀ ಗುರುವಿಗೆ ಕೊಡಬೇಕು ಕರುಣದವಜ್ರ ಕೆತ್ತಿದ ಕವಚವನು ತೊಡಬೇಕು ಬಿಡಬೇಕು ಇಂತಾಗಿ ಬಿಡದೆ ಮತ್ತಿ ತಾತ್ವರ್ಥವ ತಿಳಿದು ಕಾಣುಕಾಣದರೊಳು ಪ್ರತ್ಯಕ್ಷ ಹೊಳದಾಡುವ ಚಿದ್ಭಾನು ಪ್ರಕಾಶವನ್ನು ಅತ್ಯಧಿಕತೆಯಿಂದಲೀವನು ಜ್ಞಾನಿಗಳೊಳು ವಿಸ್ತಾರ ವಸ್ತು ವಿಚಾರವನು ಮಾಡಿ ನೋಡಿದರೆ ಕತ್ತಲೆ ಬೆಳಕೆರಡಿಲ್ಲದು ಸ್ವಯದಲಿ ಎತ್ತನೋಡಿದರು ಪ್ರಜ್ವಲಿಸುವುದು ತಾಂ ಉತ್ತಮಾನಂದದಿ ಸಲಿಸುವುದು ಗುರು ಭಕ್ತರ ನಿಜದಲಿ ನಿಲಿಸುವದು ಸುತ್ತು ಮುತ್ತು ಸುಳಿದು ತಾನೆ ಬಯಸುವದು ನೆತ್ತಿಯೊಳಗೆ ಹೊಳೆಯುತ್ತಿಹ ಜ್ಯೋತಿಯು ಎತ್ತಿತೋರಿತು ವಿಮಲಾನಂದ ಬ್ರಹ್ಮನ ನಿನ್ನೊಳಗೆ 3
--------------
ಭಟಕಳ ಅಪ್ಪಯ್ಯ
ನಿನ್ನೊಳು ನೀ ತಿಳಿಯೋ ಮನುಜ ಪ ಪರಮಾತ್ಮನೆ ನೀನಿರುವಿಯೊ ಮನುಜಾ ಅರಿತು ನೋಡು ನಿನ್ನಯ ನಿಜವಾ ಮರೆತಿರುವಿಯೊ ನೀ ನಿನ್ನಿರುವಿಕೆಯಾ ತೋರುವ ದೇಹವು ನಾನಲ್ಲೆಂದು 1 ನನಸಿನ ದೇಹವು ಕನಸಿನೊಳುಂಟೆ ನೆನಸಿ ನೋಡು ನಿನ್ನಿರುವಿಕೆ ಸಮವು ನನಸಿನ ದೇಹವು ನಾನಲ್ಲೆಂದು 2 ಗಾಢನಿದ್ರೆಯಲಿ ಅಡಗಿತು ಬುಧ್ಧಿಯು ಗಡನೆ ನೋಡು ನಿನ್ನಿರುವಿಕೆಯಾ ಜಡದೇಹವು ಮನಬುದ್ಧ್ಯಾದಿಗಳಿಂ ಬಿಡಿಯಾದಿರುವಿಕೆಯುಳಿವುದು ನೀನೇ 3 ಮೂರು ಜಾಗೆಯಲಿ ನಿರುತದೊಳಿರುತಿಹ ಇರವರಿವಾನಂದವೆ ನೀನೈ ಮರೆತು ಇದನು ನೀ ಬರಿದೇ ಮಿಡುಕುವಿ ದೊರಕುವದೇ ಸುಖ ಹೊರಗೆ ಹುಡುಕಲು 4 ತೋರಿಕೆ ಅನಿಸಿಕೆಗಳು ಕ್ಷಣಭಂಗುರ ಮರಣರಹಿತ ಪರವಸ್ತುವು ನೀನೆ ಅರಿವೇ ಪರಬ್ರಹ್ಮವು ತಾನೆಂದು ವರಶ್ರುತಿ ಸಾರಿತು ಬ್ರಹ್ಮನೆ ನೀನೈ 5 ಗರುವಿನ ಕರುಣದಿ ತಿಳಿಯೇ ವಿಷಯವ ಮರುಳಾಗದಿರೈ ಮಾಯಾಕಾರ್ಯಕೆ ಗುರುಶಂಕರನಾ ಪದವಿಯ ಪಡೆಯುವಿ6
--------------
ಶಂಕರಭಟ್ಟ ಅಗ್ನಿಹೋತ್ರಿ
ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ ಇನ್ನೊಂದಿಹವೆಂಬನ್ಯ ಪಥವಳಿದು ಉನ್ಮನಿಯೊಳು ಘನಸುಖ ಅನುಭವಿಸುತ ಧ್ರುವ ಕಂಗಳ ಕೊನೆಯ ಮೆಟ್ಟಿ ಮುಂಗಡಿಯಲಿಹ ಮಂಗಳಾತ್ಮಕನ ನೋಡಿ ಲಂಘಿಸಿ ಮೂಲಸ್ಥಾನವ ತುಂಗ ವಿಕ್ರಮನ ಸಂಗ ಸುಖವನರಿದು ಅನುದಿನ ಇಂಗಿತವಾಗಿ ನೀ ಗಂಗೆಯೊಳು ಜಲ ಬೆರೆದಾ ಸುಸಂಗದಿ 1 ನಾನು ನಾನೆಂಬದಳಿದು ನಿನ್ನೊಳು ನೀನೆ ಏನೆಂದು ತಿಳಿದು ನೋಡು ಆನಂದೋ ಬ್ರಹ್ಮದಾಟವು ತಾನೆ ತಾನಾಗಿ ತನುವಿನೊಳು ತೋರುವದು ಘನಗುರುವಚನಾನುಭವದಲಿ ಸೇವಿಸಿ ಸ್ವಾನುಭವದ ಸುಖದಲಿ ಲೋಲ್ಯಾಡುತ 2 ಮರೆದು ಮಾಯದ ಮಾಟವ ಅರಿತು ನೋಡು ಬೆರೆದು ದಾಂಟಿ ತ್ರಿಕೂಟವ ತೋರುವ ದಿವ್ಯಭಾವವ ತಾರಕಗುರು ಸಾರುವ ಕರುಣ ನೋಟವ ಅರವಿನೊಳಿರು ಮಹಿಪತಿ ಗುರುಪಾದದಿ ಪರಮಾನಂದದಿ ಸುಖ ಸೂರ್ಯಾಡುತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿರಂಜನ ಈಶ ಬಾರೊ ಕಾವ ಕರುಣ ಭವಭಂಜನ ಗುರು ಆತ್ಮ ಹಂಸ ಬಾರೊ ಧ್ರುವ ಅಗಣಿತ ಗುಣ ಅಗಾಧ ಅಪಾರಾಗಮ್ಯ ಬಾರೊ ನಿತ್ಯ ನಿರ್ಗುಣಾನಂದನುಪಮ್ಯ ಬಾರೊ ಯೋಗಿ ಜನರ ಹೃದಯ ಮುನಿಮನೋರಮ್ಯ ಬಾರೊ ಜಗದೊಳು ಭಕ್ತಜನರಿಗೆ ಪೂರಿತಕಾಮ್ಯ ಬಾರೊ 1 ಝಗಿಝಗಿಸುವ ಜಗಜ್ಯೋತಿ ಜಗನ್ಮೋಹನ ಬಾರೊ ಮಘ ಮಘ ಮಿಂಚುವ ಮಗುಟಮಣಿ ಗುಣರನ್ನ ಬಾರೊ ಬಗೆಬಗೆಯಿಂದ ಸದ್ಗೈಸುವ ಪತಿತಪಾವನ್ನ ಬಾರೊ 2 ಋಷಿ ಮುನಿವಂದಿತ ಸಾಧು ಜನ ಹೃದಯ ಬಾರೊ ಗುಹ್ಯ ಬಾರೊ ದಾಸ ಮಹಿಪತಿಯ ರಕ್ಷಿಸುವ ಪ್ರಾಣ ಪ್ರಿಯ ಬಾರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿರಂಜನ ಸ್ವಾನುಭವವ ಪಡೆದು ನೋಡು ಪ ಬಿಡು ದೇಹದಿ ಆತ್ಮಭಾನ ಪಡೆ ಗುರುವಿನ ದಿವ್ಯ ಜ್ಞಾನ ನುಡಿ ಮನಸಿಗೆ ನಿಲುಕದಿರುವ ಕಡೆ ಇಲ್ಲದ ಸ್ಥಿತಿಯ ನೋಡು ಒಡಲುಪ್ರಾಣಮನಾದಿಗಳು ಜಡವಾದವು ಎಂದು ತಿಳಿದು ದೃಢನಿಶ್ಚಯದಿಂದ ಕಳೆಯೆ ಕಡೆಗುಳಿಯುವ ಮೂಲರೂಪ 1 ಪರಮಾತ್ಮನ ನೋಡುವುದಕೆ ಹೊರಗೆಲ್ಲಿಯು ಹೋಗಬೇಡ ಭರಿತನವನು ವಿಶ್ವದಲ್ಲಿ ಇರನೆ ನಿನ್ನ ಹೃದಯದಲ್ಲಿ ಮರೆಯದೆ ಈ ನುಡಿಯ ಬೇಗ ಅರಿತುಕೊಳ್ಳು ನಿನ್ನ ರೂಪ ಪರಮಪದವ ಪೊಂದುವಿ ನೀ ಗುರುಶಂಕರನುಕ್ತಿಯಂತೆ 2
--------------
ಶಂಕರಭಟ್ಟ ಅಗ್ನಿಹೋತ್ರಿ
ನಿರವದ್ಯ ಪ ಸದ್ಗುಣಪೂರ್ಣ ನೀನೇನೊ ಮೂಢ ಅ.ಪ ಬ್ರಹ್ಮಜಿಜ್ಞಾಸದ ಕ್ರಮವ | ನಿರ- ಸಮ್ಯಕ್ ಶೋಧಿಸದೇ ಅಹಂ ಬ್ರಹ್ಮಾಸ್ಮಿ ಎಂಬುವ ಆಮ್ನಾಯ ವಾಕ್ಯಕೆ ಅರ್ಥವ ತಿಳಿಯದೆ 1 ಕಾಕುಮಾಡುತಲರ್ಥ ಪೇಳ್ವುದಧರ್ಮ ಏಕವಾವುದು ಇನ್ನು ಏಕವಾವುದು ಎಂದು ನೀಕಳವಳಿಸುತ ನಿಜತತ್ವವರಿಯದೆ 2 ಆತ್ಮನಾತ್ಮಗಳೆಂದರೇನೊ | ಪರ- ಮಾತ್ಮ ಜೀವಾತ್ಮರೊ ಜೀವದೇಹಗಳೊ ಸ್ವಾತ್ಮಾನುಸಂಧಾನದಿಂದಲಿ ನೋಡ- ಧ್ಯಾತ್ಮ ವಿದ್ಯಾಭ್ಯಾಸ ಮಾಡದೆ ಬಾಯೊಳು 3 ರವಿ ಗಣಪತಿ ಶಿವ ಶಕ್ತಿ | ಭೈ- ರವ ವಿಷ್ಣು ಎಂಬುವ ಷಣ್ಮತಯುಕ್ತಿ ಎವೆ ಮಾತ್ರ ಸ್ವಾತಂತ್ರ್ಯವಿಲ್ಲ ಕೇಳ್ ಸರ್ವಶ- ಬ್ದವುಯಾವನಲ್ಲಿ ಸಮನ್ವಯವರಿಯದೆ 4 ಜೀವ ಜೀವರಿಗೆಲ್ಲ ಭೇದ | ವಿದುಸ್ವ ಭಾವವಾಗಿರುವುದು ಯಾತಕೀವಾದ ಜೀವರೂಪದಿ ಸರ್ವಜೀವರೊಳಗಿದ್ದು ದೇವಸಕಲ ಕರ್ಮಗಳ ಮಾಡಿಸುವನು 5 ಕರ್ಮವೆಂಬುದು ಅವನಿಗೆ ಲೋಪವಿಲ್ಲ ನಿರ್ಮಲ ಸಚ್ಚಿದಾನಂದ ಬ್ರಹ್ಮ ಎಂದು ನೀನೆ ಪೇಳುವೆಯಲ್ಲ ನಿನಗೆ ನಿಜವಿಲ್ಲ 6 ಸೂರ್ಯ | ಚಂದ್ರ ಕಿನ್ನರ ಸಿದ್ಧ ಸಾಧ್ಯ ನರತಿರ್ಯಕ್ ಪಶುಪಕ್ಷಿ ಕೀಟಾದಿ ನಾಮಗಳು ಪರಮಾತ್ಮನಲಿ ಸಮನ್ವಯವರಿಯದೆ 7 ಮಾಯಾ ಪ್ರಪಂಚವಿದೆನ್ನುತ | ನಿ- ಮಾಯೆಯಧಿಷ್ಠಾನದೊಳನಂತ ಜೀವನಿ- ಕಾಯವು ಗುಣಗಳಿರುವ ಮರ್ಮವರಿಯದೆ 8 ಸಾರ ಭೇದವಬದ್ಧ ಅಭೇದ ನಿಶ್ಚಯವೆಂದು ವಾದಿಸುವುದಕೇನಾಧಾರ ನಿನಗುಂಟೊ 9 ಜೀವಬ್ರಹ್ಮೈಕ್ಯವೆ ಮುಕ್ತಿ | ವೇ- ದಾವಳಿಗಳ ಪರಮಾರ್ಥದ ಉಕ್ತಿ ಜೀವನಿಂದೇನಾಗುವುದೆಂಬುದರಿಯದೆ 10 ದ್ವಾಸುಪರ್ಣವೆಂಬುವುದಕೆ | ವಿಷ- ಯಾಸಕ್ತ ಜೀವ ಆತ್ಮನು ಸಾಕ್ಷಿಯದಕೆ ನೀಸರ್ವೋತ್ತಮನಾದರೆ ಇನ್ನು ಮಹದಾದಿ ಈ ಸೃಷ್ಟಿ ಸ್ಥಿತಿಲಯವೇತಕೆ ತಿಳಿ ಜೋಕೆ 11 ಅಂಧ ಪರಂಪರವಾದ | ಬಿಟ್ಟು ಚಂದಾಗಿ ಪರಿಶೋಧಿಸು ಭÉೀದಾಭÉೀದ ತಂದೆತಾಯಿಗು ಮಗನಿಗೂ ಎಷ್ಟು ಭÉೀದ ಆ- ಪರಿ ತಿಳಿದರೆ ನಿರ್ವಾದ 12 ಪೂರ್ವೋತ್ತರ ವಿರೋಧವಿಲ್ಲ | ದಂತೆ ಸರ್ವಶೃತಿಗಳರ್ಥ ತಿಳಿದು ನುಡಿಸೊಲ್ಲ ಗರ್ವವೇತಕೆ ನಿನಗಿದರೊಳೇನಿಲ್ಲ ನೀ ಸರ್ವಜ್ಞನೊ ಕಿಂಚಜ್ಞನೊ ನೋಡು ದೃಢಮಾಡು 13 ಯೋಗ ಒದಗಿದಾಗ ಒಂದೆ ಎಂಬುವರೆ ಈಗೇನು ಆಗೇನು ಇಲ್ಲೇನು ಉಂಟೆ ನಾ- ವಾಗಲು ಜೀವರಿಗೆ ಹರಿಕರ್ತನಾಗಿರೆ 14 ಕಾಲಕರ್ಮ ಸ್ವಭಾವ ಜೀವ | ಹರಿಯ ಆಲಸ್ಯ ಬಿಟ್ಟು ಅವನಿಗೆ ದಾಸನಾಗದೆ 15 ಆಲೋಚಿಸಿದರರ್ಥ ನಿಜವಾಗಿ ತಿಳಿಯದೆ 16 ಜ್ಞಾನವೆ ನಾನು ಕರ್ಮವೆ ಮಿಥ್ಯವೆಂದು ನೀನಾಡುವುದಕೇನು ನೆಲೆ ಮೂಲ ಯಾವುದು ಸ್ವಾನುಭವವೋ ಶಾಸ್ತ್ರವೊ ಮನಕೆ ತೋರಿದ್ದೊ 17 ಹೋಮ ಜಪವು ಸ್ನಾನ ದಾನ | ನಿತ್ಯ ಭೃತ್ಯ ನ್ಯಾಯವರಿಯದವನು ಶುದ್ಧ ತತ್ವಾರ್ಥಿ ಎನಿಸುವನೆ 18 ಕರ್ತನು ನೀನೆಂದು ಭೃತ್ಯನು ನಾನೆಂದು ತೀರ್ಥಪಾದನ ದಿನದಿನದಿ ಸಂಸ್ತುತಿಸದೆ 19 ಪಾದ ವನಜಕೊಪ್ಪಿಸಿ ಸಂಸಾರದ ಕರಕರೆಯ ಮನದಿ ಲೆಕ್ಕಿಸದೆ ಚಿಂತನಗೈದು ಸರ್ವತ್ರ ಘನಮಹಿಮನ ದಿವ್ಯಗುಣರಾಶಿ ಪೊಗಳದೆ 20 ಹೊರಗಣ್ಣ ಮುಚ್ಚಿ ಮೋದದಲಿ | ಒಳ- ಗಿರುವಾಧಾರಾದಿ ಚಕ್ರಗಳ ಸ್ಥಾನದಲಿ ಸರಸಿಜಭವ ಶಂಕರಾದಿ ಸುರರ ನೋಡಿ ತರತಮವಾಗಿ ಮುಂದಿನ ಪರಿಯ ತಿಳಿಯದೆ 21 ಮಂಗಳ ಮೂರ್ತಿಯ ನೋಡಿ ಕೊಂಡಾಡಿ ಅ- ನಂಗಗೆ ಸಿಲುಕದೆ ಅರ್ಥಿಯ ಪೊಂದದೆ 22 ಎಪ್ಪತ್ತೆರಡು ಸಹಸ್ರನಾಡಿ | ಗಳೊ- ಳೊಪ್ಪುವ ಭಗವದ್ರೂಪಗಳನು ನೋಡಿ ಅಪ್ಪ ನೀನೆಂದು ಭಕ್ತಿಯಲಿ ಕೊಂಡಾಡಿ ಪುನ- ರಾವರ್ತಿರಹಿತ ಶಾಶ್ವತ ಸುಖಿಯಾಗನೆ 23 ವಿಪರೀತ ಮತಿಪುಟ್ಟದಂತೆ | ಧ್ಯಾನ- ಗುಪಿತವಾಗಿರುತ ಜನರಿಗೆ ಹುಚ್ಚನಂತೆ ಅಪವರ್ಗಾಪೇಕ್ಷಯಿಂ ನಿಷ್ಕಾಮಿಯಾಗದೆ24 ಆಪಾದಮಸ್ತಕ ದೇಹ | ದಿಸು ರಾಪದಜನಕ ಶ್ರೀಗುರುರಾಮವಿಠಲ ವ್ಯಾಪಾರವೆಲ್ಲ ಮಾಡಿಸುವನೆಂದರಿತರೆ ಸಾಫಲ್ಯನಾಗಿ ಜೀವನು ಧನ್ಯನಾಗುವ 25
--------------
ಗುರುರಾಮವಿಠಲ
ನಿರುತದಿಂದಿಳೆಯೊಳು ಅರಸಿ ನೋಡಲು ಕಾಣೆ ಗುರು ಸತ್ಯಜ್ಞಾನರಿಗೆ ಪ ಸರಿ ಇಲ್ಲಿವರ ಚರಣಕಮಲವ ನಿತ್ಯ ದುರಿತ ಹರಿಪರ ಅ.ಪ ಸತ್ಯ ಜ್ಞಾನ ಗುರೋ ನೀ ಗತಿ ಎಂದವರ ನಿತ್ಯದಿ ಬಿಡದೆ ಕಾಯ್ವ ಅತ್ಯಾದರದಿ ಮಧ್ವಮತ ಸ್ಥಾಪಕರಾಗಿ ಮಿಥ್ಯಾ ಜ್ಞಾನಗಳಳಿದ | ಮೆರೆದ 1 ಸತ್ಯಧೀರರಿಂದ ಯತ್ಯಾಶ್ರಮ ಪಡೆದು ರತ್ಯಾದಿ ವಿಷಯವ ಬಿಟ್ಟು ಯತ್ಯಾಶ್ರಮೋಕ್ತ ಕೋಪತ್ಯಾಗಾದಿಗಳನು ವ್ಯತ್ಯಾಸಿಲ್ಲದೆ ನಡೆಸಿ | ಶೋಭಿಸಿ2 ಗುರು ಆರಾಧನಿ ದಿನ ತೀರ್ಥವ ಕೊಡುತಿರೆ ವರ ಸುವಾಸಿನಿ ಒಬ್ಬಳೂ ಕರವ ನೀಡಲು ಬಂದು ಅರಿತು ವಿಧವತ್ವ ನೆರಪೇಳ್ದರಪರೋಕ್ಷದಿ | ಭೂತಳದಿ 3 ಭರದಿಂದ ಸುರಿಯುತ್ತಿರೆ ಮೊರೆಯಿಡೆ ಎಡಬಲದವರು ಅದನು ಕೇಳೆ ದೂರಸ್ಥಳಿಹಳೆಂದ್ಹೇಳಿರು | ಪಂಕ್ತಿಯಲಿ 4 ಈ ರೀತಿಯಿಂದಲಿ ತೋರಿಸಿ ಮಹಿಮೆಯ ಇರಿಸೆ ಮಂತ್ರಿಸಿ ಫಲವ ಭರದಿ ಸುರಿವ ಮಳೆ ತ್ವರಿತದಿ ನಿಲ್ಲಲು ಅರಿತು ವಿಚಾರಿಸಲು | ನಿಜವಿರಲು5 ಪತಿ ಪೂಜೆ ಸಾವಧಾನದಿ ಮಾಡಲು ಇವರ ಮನೋಧಾರಡ್ಯ ಜವದಿ ಜಯಾಮುನಿ ಅವನಿಗರುಹಬೇಕೆಂದು | ತಾ ಬಂದು 6 ಬರುತಿರೆ ಉರಗಾಕಾರದಿಂದಲಿ ಬಂದು ಅರಿಯದ ಜನರು ಕೂಗೆ ಮಾರಮಣನ ಧ್ಯಾನ ಜರಿಯದೆ ಅವರಿಗೆ ತೋರಿದರಭಯವನು | ವಿಚಿತ್ರವನು 7 ಭೂವೈಕುಂಠದಿ ವಿಶ್ವರೂಪದರ್ಶನಕ್ಹೋಗೆ ಮಾರ್ಗವ ಕೊಡದಿರಲು ಭಾವದಿ ಧ್ಯಾನಿಸೆ ಶ್ರೀ ವಲ್ಲಭನಾಮ ಧರಿಸದೀರಾಧರಿಸೇ | ಧರಿಸಿ 8 ಈ ವಿಧ ಮಹಿಮೆಯ ತೋರಿಸಿ ಜಗದೊಳು ಗೋದಾತೀರದಿ ಶೋಭಿಪ ಅವನಿಪ ಮಹೇಂದ್ರ ಭುವನ ಶ್ರೀ ನರ ಹರಿ ನಿನ್ನ ಮಾಘಸಿತದಿ | ಸ್ಮರಿಸಿದ9
--------------
ಪ್ರದ್ಯುಮ್ನತೀರ್ಥರು
ನಿರುಪಮ ಚರಿತಾ ಮಾಂಗಿರಿನಾಥಾ ಈಪ್ಸಿತ ವರದಾತಾ ಪ ಸರಸಿಜ ಸಂಭವ ನುತ ಗಂಗಾಪಿತ ಪಂಕಜಾಕ್ಷ ಮೋಕ್ಷದಾತ ನಾರದ ಮುನಿ ವಿನುತಾ ಅ.ಪ ಭೀಕರ ರಾಕ್ಷಸ ವಂಶ ಭಯಂಕರ ಕಿಂಕರ ಶಂಕರಗಾನಸು ಧಾಕರ ಲೋಕಪಾಲ ಪರಮ ಚತುರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿರ್ಜರ ಸಾರ್ವ ಭೌಮಾ ದನುಜಕುಲಭೀಮಾ ಭೀಮಾ ರಘು ಸದ್ವಂಶದೊಳು ದ್ದಾಮಾ ಕಾದುಕೋ ನಿನ್ನ ಭಕ್ತ ಸ್ತೋಮ ಮಂಗಳನಾಮ ಹನುಮ ತ್ಪ್ರೇಮಾತಮ ಸೀತಾ ಮನೋಭಿರಾಮ ಪ ಸರಸಿಜೋದ್ಭವನ ಮಂದಿರದೊಳರ್ಚನೆಗೊಂಡು ನಿರುತಾ ಪಾವನತರ ಚರಿತಾ ಸರ್ವದೇವರ ದೇವ ಇಷ್ಟಾಕರ ರಸನ್ವಯ ನೃ ಪರಕರವಾರಿರುಹ ಪೂಜಿತನಾಗಿ ದಶರಥಾ ನರಸಿ ಜಠರದಿ ಜನಿಸಿ ಮೆರೆದಿಹ ರಾಮಾ 1 ಗಾಧಿನಂದನನ ಸುಮೇಧಾ ರಕ್ಷಿಸಿದಾ ಗಾಧನಂದ ಬಲಬೋಧಾ ಮೇದಿನಿ ಜಾತಳನೊಲಿಸಲು ನೀಲ ಪ ಯೋಧರ ಶಾಮಲ ಸುಮನಸ ವಿ ರೋಧಿ ಲೋಕಮಯ ಸದೆದ ರಘುರಾಮಾ 2 ಚತುರವಿಂಶತಿ ದಶಶತ ಸಹಸ್ರ ಜಿತಾದ್ಯಮಿತಾ ಆದ್ಯಮಿತ ರೂಪ ಜಗನ್ನಮಿತಾ ಅತುಳ ಭುಜಬಲ ರಾವಣನ ಸಂ ತತಿ ಸವರಿ ಲಂಕಾಧಿಪತ್ಯ ನತ ವಿಭೀಷಣಗಿತ್ತಾ ವರದೇಂದ್ರ ಯತಿ ವರದ ಜಗನ್ನಾಥ ವಿಠ್ಠಲ ರಾಮಾ 3
--------------
ಜಗನ್ನಾಥದಾಸರು
ನಿರ್ಮಲ ವಿಧುಹಾಸಂ ಪ ಮಾನಂದ ವಿಲಾಸಂಅ.ಪ. ಶ್ರೀ ವೇದಪುಷ್ಕರಣೀ ತಟ ಶ್ರೀ ಕರೋದ್ಯಾನ ವಿಹಾರಂ ಪಾವನ ವೃದ್ಧಿ ವಿಮಾನಾಂತರ ಪದ್ಮಾಸನ ಕೃತ ನಿಜಪರಿಚಾರಂ 1 ಸಂಪದಮಾತ್ರಿತ ಸುರಭೂಜಂ ನಿಜ ಸಂಸ್ತುತಿ ಭಾಜಂ 2 ಸಾರಸಭವ ಸಂಕ್ರಂದನಮುಖ ತ್ರಿದಶಾಧಿಪಜನ ಪರಿವಾರಂ ವರದ ವಿಠಲ ಮುಕ್ತಿ ಸುಗುಣಮುದಾರಂ3
--------------
ಸರಗೂರು ವೆಂಕಟವರದಾರ್ಯರು
ನಿರ್ಮಲವಿಧಹಾಸಂ ಪ ಮಾನಂದ ವಿಲಾಸಂ ಅ.ಪ ಶ್ರೀವೇದಪುಷ್ಕರಿಣೇ ತಟ ಶ್ರೀ ಕರೋದ್ಯಾನ ವಿಹಾರಂ ಪಾವನವೃದ್ಧಿ ವಿಮಾನಾಂತರ ಪದ್ಮಾಸನಕೃತ ನಿಜಪಾರಿಚಾರಂ 1 ಸಕಲಲೋಕಸಂರಕ್ಷಣಶೀಲನಸಂಪದಮಾತ್ರಿತಸುರಭೂಜಂ ನಿಜ ಸಂಸ್ತುತಿ ಭಾಜಂ 2 ಮುಕ್ತಿಸುಗುಣ ಮುದಾರಂ 3
--------------
ವೆಂಕಟವರದಾರ್ಯರು
ನಿಲಯ ಐಕೂರು ಗ್ರಾಮಾಲಯ | ಸ್ತಂಭೋಧ್ವವ ದೇವ ನಾಮಧೇಯ ಧ್ವಯಭಾರ್ಯ ಸುಮನಸಪ್ರಿಯ ಸದ್ಭಕ್ತಾರ್ತಿವಿದೂರ ವಿಮಲ ಹೃದಯ ಅತ್ಯಂತ ಕರುಣಾಮಯ | ಅಸ್ಮದ್ ಸದ್ಗುರುವರ್ಯ ನಿತ್ಯ ಸನ್ಮಂಗಳ 1 ಸಾರೋದ್ಧಾರ ಸಂಗೀತ ಭಾರತಿಯುತ ವೇದಾರ್ಥ ಸಂಪೂರಿತ | ಸಹ್ಲಾವಂಶಜ ದಾಸವರ್ಯ ವಿರಚಿತ ಶ್ರೀಶೌರಿ ಸುಕಥಾಮೃತ ಸಾರಜ್ಞಂ ಸುಶೀಲೇಂದ್ರತಿರ್ಥರ ಮಮತ ಸಂಪೂರ್ಣ ಸಂಪಾದಿತ ಅಸ್ಮದಗ ಸದ್ಗುರುವರ್ಯ ನಿತ್ಯ ಸನ್ಮಂಗಳ 2 ಅಷ್ಟಪದಲೋಷ್ಟ ಭಾವಸಮತ | ಕರತಧೀರ ಸನ್ಮಾನಿತ ಅಷ್ಟ್ಯೆಕಾಮಲ ಭಕ್ತಿ ಜ್ಞಾನ ಭರಿತ ವೈರಾಗ್ಯ ಸಂಶೋಭಿತ | ಸೃಷ್ಟ್ಯಂತರ್ಗತ ಮೂರ್ತಿ ಸತತ | ಸಂದರ್ಶನಾನಂದಿತ ನಿತ್ಯ ಸನ್ಮಂಗಳ 3 ಶೃಂಗಾರಾಂಗ ಸುನಾಮದ್ವಾದಶಧೃತ ಮುದ್ರಾಕ್ಷತಾಲಾಂಕೃತ ಕಮಲ ಜಪಿತ ಪದ್ಮಾಕ್ಷಮಾಲಾಂದ್ರಿತೆ ಇಂಗಿತಜ್ಞ ಸುಸಾಧು ಸಂಗ ಸಹಿತ ಮುಕ್ತ್ಯಂಗನಾಲಿಂಗಿತ ನಿತ್ಯ ಸನ್ಮಂಗಳ4 ತಾಪತ್ರಯದೂರ ಪಾಪರಹಿತ | ಕೋಪಾದಿಗುಣವರ್ಜಿತ | ಶಾಪಾನುಗ್ರಹಶಕ್ತ ಸುಜನಪ್ರೀತ ಸಂಸಾರ‌ಘನ ಮಾರುತ ಗೂಡಾರ್ಥ ಸಂಬೋಧಿತ ಅಸ್ಮದ್ ಸದ್ಗುರುವರ್ಯ ಈಯೋ ನೀ ನಿತ್ಯಸನ್ಮಂಗಳ 5 ಆಧ್ಯಾತ್ಮ ಸುವಿಚಾರ ಸತತ ಶೃತ್ಯರ್ಥಬಹು ಗರ್ಭಿತ | ಸತ್ಯವಲ್ಲಭ ಸತ್ಯದೇವ ಚರಿತ ವಕ್ತಾರ ಬುಧ ಸಮ್ಮತ | ನಾಡ್ಯಾಂತರ್ಗತ ಸರ್ವತೀರ್ಥ ಸ್ನಾತ | ತನ್ಮೂರ್ತಿ ಪ್ರತ್ಯಕ್ಷತ ನಿತ್ಯ ಸನ್ಮಂಗಳ 6 ಧರ್ಮಾಚಾರ ವಿಚಾರಶೀಲ ನಿರತ | ಷಟ್ಕರ್ಮ ಸಂಭೂಷಿತ | ನಿರ್ಮತ್ಸರ ಮೋಹ ದೇಹ ಮಮತ ಸುಶರ್ಮಕುಲರಾಜಿತ | ಧಮೋದರವಾತಜಾತ ಪೋತ ಜಾತಾರಿಖತಿವರ್ಜಿತ | ಅಸ್ಮಾದ್ ಸದ್ಗುರುವರ್ಯ ಈಯೋ ನಮಗೆ ಸತತ ನೀ ಸನ್ಮಂಗಳ 7
--------------
ಶಾಮಸುಂದರ ವಿಠಲ