ಒಟ್ಟು 2362 ಕಡೆಗಳಲ್ಲಿ , 116 ದಾಸರು , 1873 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶರಣುರಾಯಾ | ಸರಸಿ-ಜಾಲಯ ಪ್ರೀಯಾ | ಶರಣು ಪಾವನಕಾಯಾ | ಸಲಹುನಮ್ಮಾ ಪ ಸ್ತುತಿಯ ಮಾಡಲರಿಯೇ | ಯತಿ ಛಲಗುಣ ವರಿಯೇ | ಪಾವನ ದೇವ ದಯಾನಿಧಿಯೇ 1 ಶಿರಿವಧು ರಮಣನಾ ಚರಿತವ ಪೇಳುವೆ | ಕರುಣದಿ ಶ್ರೀಹರಿ ನುಡಿಸಿದಂತೆ | ಕೇಳಿ | ಧರಿಯೊಳು ಭಾಗವತರು ಯಲ್ಲಾ 2 ಬನ್ನಿ ಸಾತ್ವಿಕ ಗುಣ ಸಂಪನ್ನ ಮುತ್ತೈದೇರು | ಅನ್ಯ ಭಾವನೆಗಳಿಗೆ ತೊಡಕದೇ | ಯನುತಲಿ | ಉನ್ನತ ಸಂಭ್ರಮದಿ ನೆರೆದರು 3 ದಿವ್ಯಾಂಬರವನುಟ್ಟು ದಿವ್ಯಾಭರಣನಿಟ್ಟು | ದಿವ್ಯಾಕೃತಿಯಲಿ ವಪ್ಪುತಿಹಾ | ಮುನಿ | ಮದನ ಲಾವಣ್ಯನು 4 ಅನಾದಿ ಮಹಿಮ ಮೋಹನನಾದ ಕೃಷ್ಣನು | ಜ್ಞಾನಾಂಗನೇ ರುಕ್ಮಣಿ ವಧುವಿನಾ | ಈರ್ವರಾ | ಅನುಭವ ದೂಟಣಿಯನ್ನು ಮಾಡಲಾರಿ 5 ಸಡಗರದಿಂದಾ ಹೃದಯಾ ಪೊಡವಿಯೊಳೊಪ್ಪುದಾ | ದೃಢ ವಜ್ರದಿಂದಲಿ ರಚಿಸಿದಾ | ಜಗದಲಿ | ಒಡನೆ ರತಿ ರತ್ನಾಸನ ಹಾಕಿ 6 ಮ್ಯಾಲ ಭಾವಕಿಯರು ಮೂಲೋಕವಂದ್ಯರಾ | ಲೋಲವಧು ವರರನು ಕುಳ್ಳಿರಿಸಿ | ಹರುಷದಿ | ಮೇಲೆನಿಸಿ ಊಟಣಿಯ ಮಾಡಿಸಲು 7 ಶುದ್ಧ ಮತಿವಂತಿಯರು ಅಧ್ಯಕ್ಷರತರಾಗಿ | ಸಿರಿ | ಮುದ್ದು ಶ್ರೀ ಕೃಷ್ಣನು ವಲಿವಂತೇ 8 ನಾನಾ ಗಂಟಗಳುಳ್ಳಾ ಕಠಿಣವಾದಾ ಅಭಿ | ಮಾನ ಅರಿಷಿಣವನು ಸಣ್ಣ ಮಾಡೀ | ಈಗಾ | ಏನುಳಿಯದ್ಹಾಂಗ ವಿವೇಕದಿಂದ 9 ಹಮ್ಮಿನರಿಷಿಣವನು ಸಮ್ಯಜ್ಞಾನದ ಕದಿ | ಕಮ್ಯ ದೋರುವಂತೆ ಕಲಿಸುತಾ | ಶ್ರೀವರ | ಬ್ರಹ್ಮನ ಪಾಪಕ ಅರ್ಪಿಸಿದರು 10 ತ್ವರಿತ ಲಕ್ಷ್ಮೀ ಕಾಲಾ ಪರವಾ ವಪ್ಪಿಲೆ ಹಚ್ಚಿ | ಭರದಿಂದಾಕ್ಷಣ ಕ್ಷಣಕ ರುಕ್ಮಣಿ ಯಾಮುಖದಿಂದ | ಹರಿಯಾ ನಾಮಗಳನು ನುಡಿಸುತಾ 11 ಭಾವನಿಂದ ರಂಜಿಸುವ ಕುಂಕುಮ ಮ್ಯಾಲೆ | ಆ ವಿಮಲ ಮುಕ್ತಿಯ ಶೇಶೇ ನಿಟ್ಟು ಧ್ಯಾನಾ | ಲೇವಿಗಂಧವಾ ಲೇಪಿಸಿದರು 12 ಪರಿಮಳ ಸುವಾಸನೆಯ ಬೇರದ ಸುಮನ ಸರವಾ | ಕೊರಳಿಗೆ ಹಾಕಿದೆ ಪರಿಯಿಂದಾ ಕೃಷ್ಣನಾ | ಕರದಿ ನೇಮಿಸಿದರು ರುಕ್ಮಣಿಗೆ 13 ಆರ್ತ ಜಿಜ್ಞಾಸನು ಧನಾರ್ಥಿಯು ಬೈಲಿ ಘಳಿಗೆ | ಅರ್ತು ಮುಖದಲಿ ಕೊಟ್ಟು ಬಿಸುಡಿದರು ಬುಧರು | ನಿರ್ತದಿಂದಲಿ ನೋಡಿ ಇಬ್ಬರಿಂದ 14 ಮಗುಳೆ ಸಂಕಲ್ಪಾದಾ ಬಗೆದಾ ಕುಪ್ಪಸಿನ | ಬಿಗಿ ಬಿಗಿದು ಕಟ್ಟಿದಾ ಗಂಟವನು ಒಂದೇ | ಜಗದೀಶನಾ ಕೈಯಿಂದ ಬಿಡಿಸಿದರು 15 ಹರಿಯಾ ತೊಡೆಯ ಮ್ಯಾಲ ನಿಂದಿರಿಸಿ ರುಕ್ಮಿಣಿಯನು | ಕರದಿ ಶಾಂತಿ ಅಂಬಿ ಬಿಂಬಿಸಿದರು | ನೋಡಿ | ಧರಿಯೊಳಾನಂದವ ತೋರುವಂತೆ 16 ತನುವಿನಾರತಿಯೊಳು ಘನದೆಚ್ಚರ ದೀಪದಿ | ಮನದಿಂದಾ ಜಯಾ ಜಯಾವೆಂದೂ ಬೆಳಗೀ | ಮರಹು | ಅನುವಾಗಿ ತಾವು ನಿವಾಳಿಸಿದರು 17 ಮರೆವಾ ಪ್ರಕೃತಿ ಪುರುಷರ ಶರಗಂಗಳಾ ಯರಡಾ | ಭರದಿಂದ ಕಟ್ಟಿ ಸುವೃತ್ತಿಂದಾ | ಬಳಿಕಾ | ತ್ವರಿತ ನಿಜ ಮಂದಿರವ ಸಾರಿದರು 18 ಇಂತಿ ಪರಿಯಾಗಿಹ ಅಂತರನು ಭವದಾ | ಕಂತುಪಿತ ಲಕ್ಷ್ಮಿಯ ಚರಿತವನು | ನೋಡಿ | ಸಂತತ ಸುಖವನು ಪಡೆದರೆಲ್ಲಾ 19 ಇನಿತು ಸುಖ ಕರವಾದಾ ಅನುಭವ ದೂಟಣಿಯನು | ಅನುವಾಗಿ ನುಡಿಸಿದಾ ಯನ್ನ ಮುಖದೀ | ಈಗಾ | ಘನ ಗುರು ಮಹಿತಪಿ ಸುತ ಸ್ವಾಮಿ 20 ತಂದೆ ತಾಯಿ ಮಿತ್ರ ಬಂಧು ಬಳಗನಾದಿ | ಎಂದೆಂದೂ ಶರಣರ ಸಲಹುವಾ | ದೇವನೇ | ಇಂದೆನ್ನ ನುದ್ಧರಿಸು ದತ್ತಾತ್ರೇಯಾ 21
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶಾರದೆ ವಾಣೀ ಸರಸಿ ಜಾಸನ ರಾಣಿ ಶರಣು ವಿದ್ಯಾಂಬುಧಿಯೆ ಸರ್ವಗುಣಗಣನಿಧಿಯೇ ಶರಣು ಧೀನೋದ್ಫರಣಿ ಶುಭ್ರಾಂಬರಾವರಣಿ ಭವ ತಾರಣೀ ಶರಣಿ ಶೃತಿ ವಿಖ್ಯಾತೆ ಸಲೆ ಜಗತ್ರಯ ಮಾತೆ ಶರಣು ಶ್ರೀ ಧವಳಾಂಗೆ ಸುರವರಾರ್ಜಿತ ತುಂಗೆ ಶರಣು ಮಹಿಪತಿ ಕಂದ ನಾಸ್ಯದಿ ನೆಲಿಸಿಛಂದ ಸಲಹಮ್ಮ ಕರುಣದಿಂದ 1
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶೇಷಾಚಲ ನಿವಾಸಗೆ | ಶರಣು ವರಹ ತಿಮ್ಮಪ್ಪಗೆ | ಶರಣು ತಿರುವೆಂಗಳೇಶಗೆ ಪ ಮಾಧವ | ನರಹರಿ ಮಧುಸೂದನಾ | ಅಚ್ಯುತ | ಗಿರಿಜನುತ ನಾರಾಯಣಾ 1 ಕ್ಷೀರ ವಾರಿಧಿಶಯನ ವಾಮನ | ಗೋಪಿ ಜನ | ನವನೀತ | ಚೋರ ರಿಪು ಸಂಹಾರ ಹರಿ ದಾಮೋದರ 2 ಗರಳ ತಲ್ಪನೆ | ಕರುಣಾಳುಗಳ ಒಡೆಯನೆ | ಸಿರಿ ವಿಜಯವಿಠ್ಠಲನ | ಚರಣ ಕಮಲಕೆ ನಮೋ ನಮೋ 3
--------------
ವಿಜಯದಾಸ
ಶರಣು ಶ್ರೀ ನಂದನೇಶ್ವರ | ಪಾಲಿಸು ಜಗದೀಶ್ವರ | ಶರಣು ಶ್ರೀ ನಂದನೇಶ್ವರ ಪ ಶರಣು ಶ್ರೀ ಗುರುವರ ಗಂಗಾಧರ | ಕರ ಕಪಾಲಧರ ಹರ ಮೃತ್ಯುಂಜಯ ಅ.ಪ. ತಂದೆ ನಿನ್ನಯ ಪಾದವ | ಮರೆತಿಹುದರಿಂದ | ನಿಂದ ಹಲವಂಗದಲಿ ಭವಭವದಿ || ನೊಂದು ಬಂದೆ ನಾನಿಂದೀ ಭವದೊಳು | ಹೊಂದಿ ತವಾಂಘ್ರಿಯನಂದದಿ ಭಜಿಸುವೆ 1 ಭೇದ ಬುದ್ಧಿಯ ಮಾನವರು | ವೇದ ಶಾಸ್ತ್ರದ| ಹಾದಿಯರಿಯದ ಮತ್ಸರರು || ಸಾಧುಗಳೊಡನೆ ವಿರೋಧವನೆಣಿಸುವ | ಬಾಧಕರಾದರು ಹೇ ದಯಾನಿಧಿಯೇ 2 ತೊಡಕುಗಳನ್ನೆ ಬಿಡಿಸಿ | ಬಾಧೆಗಳ ವಾರಿಸಿ | ಕಡು ದುಷ್ಟಾತ್ಮರ ಶಿಕ್ಷಿಸಿ | ಎಡೆಬಿಡದೆನ್ನ ಮನೋರಥ ಸಲಿಸುತ | ದೃಢತರ ಭಕುತಿಯ ಕೊಡು ಕೃಪೆಯಿಂದಲಿ 3 ಪಾದ | ಮುಕುತಿ ಸಂಪದ ಪಾಲಿಸೊ || ಶಕುತಿಯೊಳಗೆ ನೀ ಯುಕುತಿಯಿಂದ ನಿಜ | ಸುಖದ ಪದವಿಯೊಳು ಪ್ರಕಟದಿ ಪೊರೆಯೈ4 ಯೋಗಿಗಳರಸ ನೀನೆಂಬ | ಬಿರುದುಗಳ ತೋರಿಸು- | ತೀಗೆನ್ನಪರಾಧವ ಕ್ಷಮಿಸೆಂಬ || ರಾಗದ ನುಡಿಯೊಳೆನ್ನಾಗಮನವೊಪ್ಪಿಸು- | ತೀಗ ಸದಾನಂದ ಯೋಗಾಂತರ್ಗತ 5
--------------
ಸದಾನಂದರು
ಶರಣು ಶ್ರೀ ವೈಕುಂಠನಾಮಕ ಶರಣು ಶ್ರೀ ಪುರುಷೋತ್ತಮ ಶರಣೂ ಶ್ರೀಧರ ಗರುಡವಾಹನ ಶರಣು ವೇಂಕಟನಾಯಕ ಪ ಮಾಧವ ಪದುಮಯನಾಭ ಜನಾದರ್Àನ ಧರಣಿಧರ ಕರಿವರದ ವಾಮನ ವೈರಿಹರ ಬಲಿಭಂಜನ 1 ಅಚ್ಯುತ ಶೈಲಧರ ನಾರಾಯಣ 2 ನಿಖಿಳ ಸುರಗಣ ಸೇವಿತ ವಿರಿಂಚಿ ಸನ್ನುತ ವಿಜಯವಿಠ್ಠಲ ನಮೋ ನಮೋ3
--------------
ವಿಜಯದಾಸ
ಶರಣು ಹೊಕ್ಕೆನು ನಿನ್ನ ಚರಣ ಕಮಲಕ್ಕೆ ನಾ ಗುರುಸತ್ಯಬೋಧರಾಯಾ ಕರುಣಿಗಳರಸನೆ ತರಳನ ಮೊರೆ ಕೇಳಿ ಪೊರೆವುದು ಎನ್ನ ಜೀಯಾ ಪ ಬೇಡಿಕೊಳ್ಳಲು ಬಾಯಿಬಾರದೋ ನಾ ಹಿಂದೆ ಮಾಡಿದಪರಾಧವ ನಿನಗೀಡೆ ದಯಮಾಡೆ 1 ಪುಟ್ಟದ ಪುಟಕ್ಕಿಕ್ಕಿದ ಚಿನ್ನದಂತಿಹ ಶ್ರೇಷ್ಠ ವೈಷ್ಣವ ಕುಲದಿ ಇಡುವುದೆನ್ನೊಳು ದಯಾಳು 2 ಮರುತ ಮತವ ನಂಬಿ ನಡೆವರ ಪದಧೂಳಿ ಧರಿಸುವ ಭಾಗ್ಯವನೇ ಗುರುವರ್ಯ ಕರುಣಿಸು ಹನುಮನಯ್ಯನ ಪಾದಸರಸಿಜಭೃಂಗ ನೀನು ಸುರಧೇನು 3
--------------
ಹನುಮೇಶವಿಠಲ
ಶರಣು ಹೊಕ್ಕೆನು ಶಿವನ ತೋರಯ್ಯಾ ಸದ್ಗುರುರಾಯಾ ಪ ಅಂಗದ ಮೇಲೆಯು ಲಿಂಗದಂತಿಹುದೆಂದು ಮಂಗಲಾತ್ಮನ ತಿಳಿಯುವದೀನ್ಯಾಯಾ ಸದ್ಗುರುರಾಯಾ 1 ದುನಿಯಾಕೇ ಬೀಚಮೊತುಮ್ ಬಡೇ ಸಾಬ ಮನಮೊರೆ ಸಾಬ ತುಮ್‍ಆಯಾ ಸದ್ಗುರುರಾಯಾ 2 ಜಮ ನಮೋ ಸ್ಥಲಮೋ ಎಕದಿಸತಹೈ ರಮತಠಡೇ ಮೋರಾ ಪೀಯಾ ಸದ್ಗುರುರಾಯಾ 3 ಪರಮಾತ್ಮಾ ಪಿವಳಾ ಕೀಂ ಧವಳಾ ಮೀ ನೇಣೇ ಗುರುನಾಥಾ ಪಡೇನ ತುಝ್ಯಾ ಪಾಯಾಂ ಸದ್ಗುರುರಾಯಾ 4 ವರ ಸಚ್ಚಿದಾನಂದ ಬ್ರಹ್ಮದಿಂದೆಸೆವ ಗುರುವಿಮಲಾನಂದಾ ಪ್ರಿಯಾ ಸದ್ಗುರುರಾಯಾ 5
--------------
ಭಟಕಳ ಅಪ್ಪಯ್ಯ
ಶರಧಿ ಸುಖಾತ್ಮಜೆ ಪ ಶರಣು ತವ ಚರಣಾರವಿಂದಕೆ ಶರಣು ಸುರನುತ ಜಂಘಕೇಶರಣು ಕರಿಕರಭೋರು ಯುಗಳಕೆ ಶರಣು ಸುಟೊಂಕಕೆ1 ಕರ ಕಣ್ಣು ಮೂಗು ಭ್ರೂಲತೆ ಕರಣಾಭರಣಕೆ 2 ಶರಣು ಸಾಲಕ ಬಿಂಬ ಫಾಲಕೆ ಶರಣು ಕುಸುಮಿತ ವೇಣಿಗೆಶರಣು ಮಾಧವನಂಕ ಬಿಂಬದಿ ಮೆರೆವ ಸುಖ ಮುತ್ತೈದಿಗೆ 3 ಕಾಲ ಸ್ವಭರ್ತೃಸುಮಜಿತೆ ಭಕ್ತಪೋಷಣೆಕೃತ್ಯ ಕರುಣಾ ಸಾರಸಾಂಡ ಸುಪಾಸ್ತ ಸಂಸಿತಳೆ ನೀ4 ಸೊಲ್ಲು ಪೇಳುವೆ ಸ್ನೇಹದಿಂದಲಿಪುಲ್ಲನಾಭನ ಪರಿಚಿಸೀ ಈಗವನಲ್ಲಿ ನೀ ಪೇಳೆ 5 ದೇವಶರ್ಮನು ನಿನ್ನ ಚರಣಾಧ್ಯಾನದಲಿ ಸನ್ನುತಿಸಿ ಕರುಣತೋಯಜಾಕ್ಷನ ಕಂಡು ಸುಖಿಸಿದುಪಾಯವ ಬಲ್ಲವನು 6 ಸುಂದರಾಂಗಿಯೆ ಸಾರಸಾಕ್ಷಿಯೆ ಮಂದಹಾಸಿನಿ ಮಾರಮೋಹಿನಿಇಂದಿರೇಶನ ಮಾನಿನಿಯೆ ತವಕದಿಂದ ನಿಂತಿಹೆನು 7
--------------
ಇಂದಿರೇಶರು
ಶಶಿಮುಖಿ ಜಾನಕಿ ರಮಣ ವಸುಧೆಯೊಳಗೆ ನಿಮ್ಮ ಭಜನೆಯ ಮಾಡುವರ ಶಿಶುವುಯೆಂದು ತಿಳಿದು ಶೀಘ್ರದಿ ರಕ್ಷಿಸೊ ಪ ಪಶುಪತಿ ರಕ್ಷಕ ಪಾವನ ಮೂರ್ತಿ ಪಶುಪಾಲಕನಾದ ಪರಮಾತ್ಮ ಕುಸುಮಜನನು ಅತಿಕರುಣದಿ ನೀನು ಕುಶಲದಿ ಪಡೆದ ಗುಣವಂತಾ ಹಸ ಮೀರಿನಡೆವಂತ ಅನೇಕ ದುಷ್ಟ ಅಸುರರ ಛೇದಿಸಿದ ಬಲವಂತಾ ದಶದಿಕ್ಕಿನೊಳಗೆ ದಾರನು ಕಾಣೆನೊ ದಶವಂತನು ನಿನಗಾರು ಸರಿಹಾರೊ 1 ಪಿತೃವಾಕ್ಯ ಪರಿಪಾಲನೆ ಮಾಡಿದ ಪುತ್ರನು ಅನಿಸಿದ ಪುಣ್ಯನಿಧಿ ಪತಿ ಧರ್ಮವ ಸರ್ವದಾ ನಡೆಸುವ ಸತ್ಯಮೂರ್ತಿ ಸೌಭಾಗ್ಯನಿಧಿ ಶತದ್ರೋಹಿಯಾಗಿ ಸೀತೆಯ ಒಯ್ದನ ಶತಮುಖನಯ್ಯನ ಸಂಹರಿಸಿದಿ ಸತತ ವಿಭೀಷಣ ಭಕ್ತಿಯಿಟ್ಟ ಸಲುವಾಗಿ ಲಂಕೆಯ ಧಾರೆಯನೆರದೀ 2 ಯಾದವ ಕುಲಪತಿ ಯಶೋದೆನಂದನ ವ್ಯಾಧನ ರಕ್ಷಿಸಿದಿ ವಿಶ್ವೇಶ ಬಾಧಕ್ಕೆ ಒಳಗಾಗಿ ಕರಿಕೂಗಲು ಮಕರಿ ಬಾಧೆಯ ತಪ್ಪಿಸಿದ ಪರಮೇಶಾ ಸಾಧು ಸಜ್ಜನ ಸರ್ವರ ಸಲಹುವ ಸಾಧು ಗುಣಾನಂದ ಸರ್ವೇಶಾ ಮಾಧವ `ಸಿರಿಹೆನ್ನೆ ವಿಠಲ' ನಿನ್ನಯ ಮೋದವ ತೋರೋ ಜಗದೀಶಾ 3
--------------
ಹೆನ್ನೆರಂಗದಾಸರು
ಶಾರದೇ ಮಜ್ಜನನಿಯೆ - ಶಾರದೇ ಪ ಶಾರದೆ ಶರಣೆಂಬೆ ನಿನ್ನ | ಚರಣನೀರಜ ದ್ವಂದ್ವಕೆ ಯನ್ನ | ಆಹಕಾರುಣ್ಯದಲಿ ಹೃದಯ | ವಾರಿಜದೊಳು ಮೆರೆವಮಾರಮಣನ ದಿವ್ಯ | ಮೂರುತಿ ತೋರಿಸು ಅ.ಪ. ವಾಣಿ ನಿಲ್ಲ್ವುದು ಎನ್ನ ವದನಾ | ದಲ್ಲಿನೀ ನುಡಿಸೇ ಹರಿ ಗಾನಾ | ಕರವೀಣೆ ನುಡಿಪಂತೆ ಯೆನ್ನಾ | ದೇಹವೀಣೆ ನುಡಿಸೇ ನೀ ಮುನ್ನಾ | ಅಹವೇಣಿ ಮಾಧವನಾದ | ಶ್ರೀನಿವಾಸನ ಕಾಂಬಜ್ಞಾನಾನು ಸಂಧಾನ | ಮಾಣದೆ ಎನಗೀಯೇ 1 ಅಜ್ಞರೊಳಾಗ್ರಾಣಿ ನಾನು | ಇಂಗಿತಜ್ಞಳೆ ನಾ ಪೇಳ್ವುದೇನೂ | ಆಭಿಜ್ಞರೊಳಿರಿಸುವುದಿನ್ನೂ | ಸರ್‍ವಜ್ಞರ ಮತ ತಿಳಿಸಿನ್ನೂ | ಆಹವಿಜ್ಞಾನ ಸುಸಖ ಬ್ರಹ್ಮ | ಯಜ್ಞಾನೆ ಜಗಕೆಂಬಸುಜ್ಞಾನ ಸುಖವಿತ್ತು | ಪ್ರಾಜ್ಞನ ಕಾಣಿಸೇ 2 ವ್ರತನೇಮ ಉಪವಾಸ ಒಂದೂ | ಮಾಡಿಕೃತಕೃತ್ಯನಲ್ಲಮ್ಮ ಬಂಧೂ | ಕೃತಿಪತಿಯೆ ಎನಗೆ ಗತಿ ಎಂದೂ | ದ್ವಂದ್ವಕೃತಿಗಳ ನರ್ಪಿಪ ಸಂದೂ | ಆಹಹಿತದಿ ತಿಳಿಸಿ ಗುರು | ಗೋವಿಂದ ವಿಠಲನಸುತನಾಗಿ ಮೆರೆವಂಥ | ಚತುರಾಸ್ಯ ಪ್ರಿಯರಾಣಿ 3
--------------
ಗುರುಗೋವಿಂದವಿಠಲರು
ಶಾರದೇಂದುಮುಖಿ ನೀರಜನಯನಳೆ ಬಾರೆಲೆ ಬಾಗಿಲ ತೆಗಿಯಲೆ ಭಾಮೆ ಪ ಯಾರಯ್ಯ ಬಾಗಿಲ ಹೊರಗೆ ನಿಂತಿರುವನು ಜಾರ ಪುರುಷನಂತೆ ತೋರುವೆ ನೀನು ಅ.ಪ ಜಾರನಾದರೆ ನಿಂಗೆ ಜಾರನಲ್ಲವೆ ಮೀನಾ ಕಾರ ಧರಿಸಿರುವ ಹರಿಯಲೆ ಭಾಮೆ ಮೀನನಾದರೇ ಬಲು ಮೌನದಲಿರದಂತೆ ಮಾನವರಂತೆ ಮಾತು ಯಾವುದೋ ನಿನಗೆ 1 ಮಂದರಗಿರಿಯ ಬೆನ್ನಿಂದ ಧರಿಸಿರುವ ಅಂದ ಕೂರ್ಮನಲ್ಲವೇನೆ ಭಾಮೆ ಕೂರ್ಮ ನೀನಾದರೆ ಕೂಪದೊಳಿರುವುದೆ ಧರ್ಮವೆಂಬುವುದನು ಮರೆತೆಯಾ ನೀನು 2 ನೀಲವೇಣಿಯೆ ಕೇಳೆ ಕೋಲರೂಪದಿ ಬಂದು ಕ್ಷಿತಿ ತಂದೆನೆ ಭಾಮೆ ಪೋತರೂಪನೇ ನಿಜ ಧಾತ್ರಿಯ ಭೇದಿಸಿ ಗಾತ್ರ ರಕ್ಷಣೆ ಮಾಡು ಹೋಗೆಲೊ 3 ಸ್ತಂಭ ಭೇದಿಸಿ ರಿಪು ಡಿಂಭನ ಕಾಯಲು ಜಂಭದಿ ಖಳನನು ಕೊಂದೆನೇ ಭಾಮೆ ಸ್ಥಂಭ ಭೇದಿಸಿದ ನಾ ನಂಬುವುದಿಲ್ಲವೊ ಡಂಭದಿ ಬಾಗಿಲು ಭೇದಿಸಿ ಬಾರೊ 4 ವಾಮನನೆಂದು ವಟುರೂಪದಿ ಬಂದು ಸಾರ್ವ ಭೌಮನಲ್ಲಿ ಭೂಮಿ ಬೇಡಿದೆ, ಭಾಮೆ ವಟುರೂಪನಾದರೆ ಕುಟಿಲಾಕ್ಷಿಯರಲಿಂಥ ಚಾಟುವಚನಗಳು ಯಾಕೆಲೊ 5 ದುರುಳನೃಪರ ಪರಿಹರಿಸಿದ ಭೃಗುಮುನಿ ವರಕುಲಜಾತ ಶ್ರೀ ರಾಮನೇ ಭಾಮೆ ಮುನಿವರಸುತನಾಗಿ ಸ್ವನಿಯಮಗಳ ಬಿಟ್ಟು ವನಿತೆಯರಲ್ಲಿಂಥಾ ಸರಸವೆ ನಿನಗೆ 6 ದಶರಥ ನೃಪತಿಯ ಮನೆಯೊಳವತರಿಸಿ ದಶಶಿರರನು ಕೊಂದ ರಾಮನೆ ಭಾಮೆ ಪರ ಕಾಮಿನಿಯರೊಳಿಂಥಾ ಪ್ರೇಮ ಮಾಡುವುದುಂಟೆ ಯೋಚಿಸೊ ನೀನು 7 ನೀರಜಾಕ್ಷಿ ಕೇಳೆ ಜಾರಚೋರತೆಯಲ್ಲಿ ಸಿರಿ ಕೃಷ್ಣನೇ ಭಾಮೆ ಚೋರನಾದ ಮೇಲೆ ಸೇರಿಸುವುದು ಹೇಗೆ ಭಾರಿ ಆಭರಣಗಳಿರುವುವೊ 8 ಮುಗ್ಧೆ ಕೇಳೆ ಇದಬದ್ಧವಲ್ಲದೆ ಅತಿ ಶುದ್ಧನಾದ ಬುದ್ಧರೂಪನೆ ಬುದ್ಧರೂಪನೆ ನಿನ್ನ ನಡತೆಯ ಕೇಳಲು ಶುದ್ಧಿಯು ಲೋಕಪ್ರಸಿದ್ಧವು9 ಸರಸಿಜಮುಖಿ ವರತುರಗವನೇರಿದ ನೃಪರ ಗೆಲ್ವ ಕಲ್ಕಿಯೇ ಭಾಮೆ ದುರುಳ ಜನರು ಇಲ್ಲಿ ಸೇರುವುದಿಲ್ಲವೊ ತರಳೆಯರಲಿ ದುಷ್ಟ ಕಾರ್ಯವೇ ಪೋಗೊ10 ಪರಿ ಸರಸವನಾಡುವ ನಾಮಗಿರಿ ನರಹರಿ ರೂಪ ರಮಾ ರಮೇಶರು ವಿಹರಿಪ ಬಗೆಯನು ಸ್ಮರಿಸುವ ಸುಜನರ ಪರಮಪುರುಷ ಹರಿ ಪೊರೆವುದು ನಿಜ 11
--------------
ವಿದ್ಯಾರತ್ನಾಕರತೀರ್ಥರು
ಶಿಖಾಮಣಿ ಬಾರೋ ಬಾರೊ ಪಾವನ ಗೈಸುವ ಪರಮ ದಯಾಕರುಣ ಬಾರೊ ಬಾರೊ ಧ್ರುವ ಮಾಧವ ಶ್ರೀಹರಿ ಮುಕುಂದ ಬಾರೊ ಸುಂದರ ವದನನೆ ನಂದ ಯಶೋದೆಯ ಕಂದ ಬಾರೊ ಕಂದರ್ಪ ಕೋಟಿ ಲಾವಣ್ಯದಲೊಪ್ಪುವಾನಂದ ಬಾರೊ ವಂದಿತ ತ್ರೈಲೋಕ್ಯ ಇಂದಿರಾಪತಿ ದೀನಬಂಧು ಬಾರೊ 1 ಗರುಡವಾಹನ ಗೋವಿಂದ ಗೋಪಾಲ ಶ್ರೀಕೃಷ್ಣ ಬಾರೊ ಸರಸಿಜೋದ್ಭವನುತ ಸಿರಿಯ ಲೋಲನೆ ಪರಿಪೂರ್ಣ ಬಾರೊ ಶರಣರಕ್ಷಕ ಸದಾ ಸಾಮಜವರದ ಸದ್ಗುಣ ಬಾರೊ ವರ ಶಿರೋಮಣಿ ಮುನಿಜನರ ಸ್ವಹಿತ ಸುಭೂಷಣ ಬಾರೊ 2 ಅನಾಥರನುಕೂಲಾಗುವ ಘನದಾಗರ ಬಾರೊ ಅನುಭವಿಗಳ ಅನುಭವದ ಸುಖಸಾಗರ ಬಾರೊ ಭಾನುಕೋಟಿತೇಜ ಭಕ್ತಜನ ಸಹಕಾರ ಬಾರೊ ದೀನಮಹಿಪತಿ ಸ್ವಾಮಿ ನೀನೆ ಎನ್ನ ಮನೋಹರ ಬಾರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶಿಲೆಯ ನಾರಿಯ ಮಾಡ್ದ ಹನುಮ ನಿಲಯಾ ಪ ನೆಲೆಯಿಲ್ಲದಾ ಮಹಿಮ ಶ್ರೀರಾಮ ಗೋಚರಿಸೊ ಅ.ಪ ಶ್ರುತಿಗಗೋಚರ ನೀನು ಸರ್ವೇಶ ಸ್ವಾತಂತ್ರ ನೀನು ಕೃತಿಮಗ್ನ ಪಶು ನಾನು ಗೋಪಾಲದೇವ ಮೃತಿ ಭೀತಿ ವಶನಾಗಿ ನೆಲೆತಪ್ಪಿ ಪೋಗುತಿಹೆ ಅತಿಭಯದಿ ನಡುಗುವೆ ಹೇ ಶ್ರುತಿನಾಥ ಪೊರೆ ಎನ್ನ 1 ಪರಮ ಮಂಗಳ ಅನಿಲದೇವ ಮಂದಿರ ಶ್ರೀಶ ಪರತತ್ವ ಪರಮಾತ್ಮ ಪಿಡಿಯೊ ಕರವ ಮರುವೆಂಬ ಮಾರಿಯನು ನಿರ್ಮೂಲ ಮಾಡಯ್ಯ ದೊರಿ ನಿನ್ನ ಸ್ಮøತಿ ಸತತ ಅಚ್ಛಿನ್ನವಾಗಿರಲಿ 2 ಭಾನು ಕೋಟಿ ತೇಜ ಶ್ರೀ ಕ್ರೀಡೆಮಾಳ್ಪ ಜ್ಞಾನ ಪಾಲಿಸು ಎನಗೆ ಜಯೇಶವಿಠಲ ಆನಿ ಅಜಮಿಳ ಅನಿಮಿತ್ತ ಬಾಂಧವನೆ 3
--------------
ಜಯೇಶವಿಠಲ
ಶಿವ ಶಿವ ಶಿವ ಎನ್ನಿರೊ - ಮೂಜಗದವರೆಲ್ಲಶಿವ ಶಿವ ಶಿವ ಎನ್ನಿರೊ ಪ ಆಗಮ ಸಿದ್ಧಾಂತ ಮೂಲದ ಜಪವಿದು ಶಿವಶಿವಶಿವ ಎನ್ನಿರೋ - ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಶಿವಶಿವ ಎನ್ನಿರೊ 1 ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವಶಿವಶಿವ ಎನ್ನಿರೋ - ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ಎನ್ನಿರೊ 2 ಅಪರಾಧಕೋಟಿ ತ್ಯಜಿಸಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಉಪಮಿತರೋರ್ಮಿತರರಿಯದ ಜಪವಿದು ಶಿವಶಿವಶಿವ ಎನ್ನಿರೊ3 ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ ಎನ್ನಿರೋ - ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 4 ಭುವನಕೆ ಬಲ್ಲಿದರಾಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುಭವನ ಪದವಿಯನು ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 5 ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಪರಮಾತ್ಮನ ನೀವು ತಿಳಿಯಬೇಕಾದರೆ ಶಿವಶಿವಶಿವ ಎನ್ನಿರೊ6 ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವಶಿವಶಿವ ಎನ್ನಿರೊ7
--------------
ಕನಕದಾಸ
ಶಿವನ ನಾಮಾಮೃತವ ಸವಿದು ಧನ್ಯರಾಗಿರೊ ಜಗದೊಳು ಪ ಶಿವ ಶಿವ ಎಂಬೊ ಎರಡಕ್ಷರವು ಭವರೋಗಕೆ ಇದು ಮೂತೌಷಧವು ಜವನಾಳ್ಗಳ ಭಯ ಲವಲೇಶವಿಲ್ಲವು ಇದು ಸತ್ಯವು 1 ಪಾತಕ ಪಹರಿನಿತು ಪೋತ ಮಾರ್ಕಂಡೇಯಗಾಯುವ ನೀಡಿತು ಭೂತೇಶನ ಪದವಾರಿಜ ಧ್ಯಾನದಿ ಧನ್ಯರಾಗಿರೋ 2 ಹರನ ದಿವ್ಯಪದವಾರಿಜ ಧ್ಯಾನ ಪರ ಚರ ಮುಕುತಿ ಪಥಕೆ ಸೋಪಾನ 3
--------------
ಶಾಮಸುಂದರ ವಿಠಲ