ಒಟ್ಟು 2021 ಕಡೆಗಳಲ್ಲಿ , 110 ದಾಸರು , 1501 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿವಾಯುಗಳು ಮೂರಕ್ಕರದ ದೇವ ಮೂರು ವಸ್ತುವ ಬೆರಸಿ ಮೂರು ಮೂರಾಗಿಸೆಯೆ ಪಾಲಿಸುವ ನಮ್ಮ ಎರಡು ವಸ್ತುವು ಸೇರಿ ದೇಹಕ್ಕೆ ಚಲನೆಯದು ಹರಿವಾಯುಗಳ ಒಲುಮೆ ದೇಹ ರಕ್ಷಕವು4 ಅವ್ಯಾಕೃತಾಕಾಶ ರೂಪದಲಿ ತಾನಿಹನು ವಿಶ್ವಂಭರಾತ್ಮಕನು ದೇವ ನಿಜದಿಂದ ಸೃಷ್ಟಿಗವನೇ ಮೂಲ ವಾಸುದೇವಾತ್ಮಕನು ಮಧ್ವಹೃದಯನಿವಾಸಿ ಸರ್ವಮೂಲನವ 5 ಪೃಥಿವಿಯಪ್ ತೇಜಸ್ಸು ಮೂರು ಭೂತಾಣುಗಳು ತುಂಬಿಯಾಗಸದಲ್ಲಿ ವ್ಯಾಕೃತವದಹುದು ತುಂಬಿ ವಾಯುವಿನಣುಗಳ್ ಒಂದೆಡೆಯೆ ತಾನಹುದು ವ್ಯಾಕೃತಾಕಾಶ 6 ಆಗಸದಿ ವಾಯುವಿನ ಪರಮಾಣು ಒತ್ತಡವೆ ದೃಶ್ಯವಾಯುವು ತಾನೆ ಹರಿವುದಾಗಸದಿ ದೃಶ್ಯವಾಯುವಿನ ಪರಮಾಣುವೊತ್ತಡದಿ ನಿಜ ತೇಜವುದಯಿಸುವುದದರಲ್ಲಿ ಮೂರಿಹವು 7 ತೇಜದಿಂದಲೆ ನೀರು ಜಗಕೆಯಾಧಾರವದು ನೀರಿನಿಂದಲೆ ಭೂಮಿ ಉದಯಿಸುವದದರಿಂ ಪಂಚಭೂತಂಗಳಿವು ಭೂಮಿಯಲಿ ತೋರುವವು ಪಂಚಭೂತಾತ್ಮದ ಪ್ರಕೃತಿಯಿದು ಸತ್ಯ 8 ಇವುಗಳಿಗೆ ಒಡತಿಯಾ ಪ್ರಕೃತಿದೇವಿಯು ಸತ್ಯ ಪ್ರಕೃತಿಯೆದೆಯಲ್ಲಿರುವ ದೇವರೂ ಸತ್ಯ ಪ್ರಕೃತಿ ಪುರುಷರ ಲೀಲೆ ಮಧ್ವಮತದಾ ತಿರುಳು ಮಧ್ವ ಸದ್ಗ್ರಂಥಗಳು ಸರ್ವಮೂಲಗಳು 9 ಭೂತಕೃತ್ತೂ ಅವನೆ ಭೂತಪಾಲಕನವನೆ ಭೂತಭಾವದಲಿದ್ದು ಪ್ರೇರಕನು ಅವನೆ ಆತ್ಮಾಂತರಾತ್ಮವೆಂದೆರಡು ರೂಪಗಳವಗೆ ಹೃದಯದಾಕಾಶದಲಿ ವಾಸವಾಗಿಹನು 10 ಪಂಚಭೂತಗಳು ಪಂಚೇಂದ್ರಿಯಗಳು ಪಂಚ ಕರ್ಮೇಂದ್ರಿಯಗಳ ರಚಿಸಿ ಹರಿಯು ಪಂಚಾತ್ಮಕನು ದೇವ ಪಂಚವಾಯುಗಳಿಂದ ಪಂಚತನ್ಮಾತ್ರಗಳ ಜ್ಞಾನವೊದಗಿಪನು11 ಸುಖ ರತಿ ಪ್ರೇರಕನು ತಾನಾಗಿ ಸಿರಿವರನು ಶಾರೀರ ಪುರದಲ್ಲಿ ನೆಲೆಯಾಗಿ ಇಹನು ಬೆಳಗುತ್ತ ದೇಹವನು ಬೆಳಗಿಸುವ ದೇವತೆಗ ಳವನ ಬಳಿಯಿದ್ದು ಸೇವೆಯ ಗೈಯುತಿಹರು 12 ವಿಶ್ವ ದರ್ಶನಕಾಗಿ ವಿಶ್ವಜನರೊಳು ಕಣ್ಣಿನಲ್ಲಿ ನೆಲೆನಿಂತು ವಿಶ್ವಸಾಕ್ಷಿಯು ಸೂರ್ಯನಲ್ಲಿಯೂ ತಾನಿದ್ದು ವಿಶ್ವವನು ಬೆಳಗಿಸುತ ಜ್ಞಾನವೊದಗಿಪನು 13 ಸೂರ್ಯನೊಂದೆಡೆಯಿದ್ದು ತಾನ್ ಬೆಳಗಿ ಲೋಕವನು ತನ್ನ ಕಿರಣಂಗಳಿಂ ಬೆಳಗಿಸುವ ತೆರದಿ ಕಣ್ಣು ಮೊದಲಾದಿಂದ್ರಿಯಗಳಲಿ ತಾನಿದ್ದು ಅವುಗಳನು ಬೆಳಗಿಸುತ ರಕ್ಷಿಪನು ನಮ್ಮ14 ತೈಜಸದ ದೇವನವ ತೇಜದಾರೂಪದಲಿ ಕಂಠಗತನಾಗಿದ್ದು ದೇಹದಲಿ ಬೆಳಗಿ ಹುಲಿ ಕರಡಿ ಮೊದಲಾದ ಜಂತುಗಳ ಸೃಷ್ಟಿಸುತ ಸ್ವಪ್ನಲೋಕವನು ಮಾನಸಕೆ ತೋರಿಸುವ 15 ಪ್ರಾಜ್ಞರೂಪದ ದೇವನಪ್ಪಿ ಜೀವಾತ್ಮನನು ಮಾಯೆಯಾ ಮುಸುಕಿನಿಂದಜ್ಞಾನಬರಿಸಿ ಜೀವನಿಗೆ ತೋರದುದರಿಂದ ಪ್ರಾಜ್ಞನದಾಗಿ ಜಗಕೆ ತನ್ನಯ ಮಾಯೆಯನು ತೋರಿಸುವನು 16 ನಾಲ್ಕನೆಯ ರೂಪವದು ತುರ್ಯ ನಾಮದಲಿಹುದು ಮುಕ್ತರಿಗೆ ಮಾತ್ರವೇ ತೋರುವುದು ಪೇಳ್ವೆ ಜಾಗರಾದಿಯವಸ್ಥೆಗಳ ನಾಲ್ಕು ಪೇಳಿದನು ಮಾಯಾವಿ ಪರಮಾತ್ಮನದು ಲೀಲೆಗಳಿವು 17
--------------
ನಿಡಂಬೂರು ರಾಮದಾಸ
ಹರಿವಾಸರದುಪವಾಸದ ಫಲವು ಕಂಡವರಿಗೆ ದೊರಕುವುದೆ ಪ. ಹಿರಿದು ಜನ್ಮಗಳಲಿ ಹರಿಯನಾರಾಧಿಪ ಪರಮ ಭಾಗವತರ ಭಕ್ತರಿಗಲ್ಲದೆ ಅ.ಪ. ಸ್ನಾನಸಂಧ್ಯಾನವು ಮೊದಲಾದ ಕರ್ಮ ನ್ಯೂನದ ಪಾಪಂಗಳು ದೀನತ್ವದಿಂದ ತುಚ್ಛರಕೈಯ ಹಿಡಿದ ದು ರ್ದಾನದ ಪಾಪಂಗಳು ಭಾನುಬಿಂಬವ ಕಂಡ ಹಿಮದಂತೆ ಚಿದಾನಂದವಾದ ವ್ರತಕೆ ಸರಿ ಬಾರದು 1 ಪರಸತಿಯರ ನೋಡಿ ಮನವಿಟ್ಟ ಪಾಪವು ಪರದೂಷಣೆಯ ಪಾಪವು ಪರಮಾತ್ಮನ ಹೊಗಳುವ ನಾಲಗೆಯಲ್ಲಿ ನರರ ಹೊಗಳುವ ಪಾಪವು ಪರ ವಸ್ತುಗಳನಪ- ಹರಿಸುವ ಪಾಪಂಗಳು ಕರಿ ಓಡುವಂತೆ ದುರಿತ ಕೋಟಿಗಳನು ಪರಿಹರಿಸುವ ಶ್ರೀ 2 ಆಡುವ ಅನೃತವಾಕ್ಯಗಳಿಂದ ಸಂಭವವಾಗುವ ಪಾಪಂಗಳು ನೋಡಿಕೊಳ್ಳದೆ ದುರಾನ್ನವನುಂಬ ದುರ್ದಾನದ ಪಾಪಂಗಳು ಮಾಡಬಾರದ ದಿನದಲಿ ಸ್ತ್ರೀಗೋಷ್ಠಿಯ ಮಾಡಿದ ಪಾಪಂಗಳು ಓಡುವುದಘಸಂಘ ಉತ್ತಮವಾಗಿಹ3 ಮತ್ತೆ ಈ ಬಹಳ ಪಾಪಗಳಿಗೆಲ್ಲ ತಾ ಪಕ್ಷ ಪ್ರಾಯಶ್ಚಿತ್ತವು ಉತ್ತಮವಾದ ವ್ರತಗಳಿಗೆಲ್ಲ ತಾ ಉತ್ತಮವೆನಿಸುವುದು ಚಿತ್ತಶುದ್ಧಿಯನಿತ್ತು ಜ್ಞಾನವೈರಾಗ್ಯದಿ ಭಕ್ತಿ ಮಾರ್ಗವನೀವುದು ಮುಕ್ತಿಗೆ ಸೋಪಾನವಾಗಿ ಭವಾಭ್ಧಿಯ ದಾಟಿಸಿ ಹರಿಯ ಸನ್ನಿಧಿಗೆ ದಾರಿಯನೀವ 4 ತೋರುವ ದಶಮಿ ದ್ವಾದಶಿಗಳು ಸಂಪುಟಾಕಾರದಿ ಹರಿದಿನವು ಮೂರುದಿನದ ವ್ರತ ನಾಲ್ಕು ಹೊತ್ತಿನ ಆಹಾರಗಳು ವರ್ಜಿತವು ಊರುದಾರಿಗಳ ನಡೆಯದೆ ತಾಂಬೂಲ ಚರ್ವಣಂಗಳೊರ್ಜಿತವು ಜಾಗರ ಮಾಡಿ ವ್ರತವಾಚರಿಸುವ 5 ಅತಿಶಯವಾದ ಶ್ರೀಹರಿದಿನದಿ ಪಿತೃತರ್ಪಣಗಳು ವಜ್ರ್ಯವು ಪ್ರತಿವರುಷದಲಿ ಆಚರಿಸುವ ತಾಯಿತಂದೆ ತಿಥಿಗಳೆಲ್ಲ ವಜ್ರ್ಯವು ಸತತವು ಮಾಡುವ ಯಜ್ಞಪುರುಷಗೆ ಆಹುತಿಗಳೆಲ್ಲ ವಜ್ರ್ಯವು ಇತರ ಭೋಗ ಕೃತ್ಯಗಳನೆಲ್ಲ ವರ್ಜಿತಮಾಡಿ ಈ ವ್ರತವನಾಚರಿಸುವ 6 ಹಲವು ವ್ರತಗಳಾಚರಿಸಿ ದಾನಂಗಳ ಹಲವು ಮಾಡಿದರೇನು ಹಲವು ಪುಣ್ಯತೀರ್ಥನದಿಯಲ್ಲಿ ಸ್ನಾನವÀ ಮುದದಿ ಮಾಡಿದರೇನು ಹಲವು ಪುರಾಣಂಗಳ ಹಲವು ಶಾಸ್ತ್ರಂಗಳ ಹಲವು ಕೇಳಿದರೇನು ಶ್ರೀಹಯವದನನ್ನ ದಿನಕೆ ಸರಿಬಾರದು 7
--------------
ವಾದಿರಾಜ
ಹರಿಸೇವೆ ಕೈಂಕರ್ಯ ಪರಮ ನಿಷಾತೆ |ಪರಿಹರಿಸು ಭವತಾಪ ಜಾಂಬುವತಿ ಮಾತೇ |5 ಭೃತ್ಯ ಜಾಂಬುವಂತನ ತನುಜೆಶ್ರೀ ಮಹಿಳೆಯಂದದಲಿ ಕೃಷ್ಣ ಪ್ರಿಯಳಾದೇ 1 ಮಿಕ್ಕ ಮಹಿಳೆಯರಿಂದ ಲಕ್ಕುಮಿಯ ಆವೇಶಪೊಕ್ಕು ನಿನ್ನಲಿ ಅಧಿಕ ಸರ್ವಕಾಲದಲೀ |ಅಕ್ಕರದಿ ಇದಕೆ ಮಿಗೆ ಲಕ್ಕುಮಿಯು ಇರಲಾಗಚೊಕ್ಕ ಮಾತೆಯು ನೀನು ಶೇಷ ಸಮಳೆನಿಪೇ 2 ಆವೇಶ ನಿನ್ನಲ್ಲಿ ಇಲ್ಲದಿಹ ಸಮಯದಲಿದೇವಿಯರು ಮಿಕ್ಕೈದು ಮಂದಿ ಸಮ ನೀನು |ದೇವಿ ಶಿರಿ ಆವೇಶ ಅಲ್ಪವಿಹ ಸಮಯದಲಿದೇವ ಕಾಮಾದಿಗಳಿಗಧಿಕ ವಿಂಶತಿ ಗುಣದೀ 3 ನಿರ್ಮಲೈ ಕಾಂತಿತ್ವ ವಿಮಲ ಭಕ್ತ್ಯಾದಿಗುಣಅಮಮ ನಿನ್ನಲಿ ಇಹುದು ನೈಜರೂಪಾ |ವಿಮಲ ಸಚ್ಚಾರಿತ್ರೆ ಈ ಮಹಿಯ ಸಂಚಾರನಿರ್ಮಮದಿ ಗೈದಿರ್ಪೆ ಬಧಿರಾಂಧರಂತೇ 4 ದೇಹ ಮಮತೆಯಲಿಂದ ಮನಸೋತು ಕಷ್ಟಕ್ಕೆವಾಹನಾದಿಗಳೇರಿ ತೀರ್ಥಯಾತ್ರೆಗಳಾ |ಬಹುವಾಗಿ ಗೈದಾಗ್ಯು ಪುಣ್ಯ ಹೀನವು ಎಂದುಮಹಿಳೆ ನೀ ವರ್ಣಿಸಿಹೆ ಭಕುತರುಪಕಾರೀ 5 ಪಾದ ದರ್ಶನವೆಂದುಸಾರ್ವಕಾಲದಿ ನೀನು ಚಿಂತಿಸುತಲಿರಲೂ 6 ಕಂಡು ಶ್ರೀಹರಿಯನ್ನು ಅಪರೋಕ್ಷದಲಿ ನೀನುಬಂಡುಣಿಯು ಹರಿಪಾದ ಕಮಲಕ್ಕೆ ಆಗೀ |ಹಿಂಡು ದೈವರ ಗಂಡ ಪಾಂಡುರಂಗನೆ ಎಂದುಮಂಡಿಸಿದೆ ಪರತತ್ವ ತೊಂಡರುಪಕಾರೀ 7 ಕರದಲ್ಲಿ ಧನ್ವಂತ್ರಿ ಪಿಡಿದಮೃತ ಕಲಶದಲಿಹರಿನಯನ ಆನಂದ ಜಲಬಿಂದು ಉದರೇ |ತುರರೂಪಿಯಾದ ಶ್ರೀ ತುಳಸಿಯಲಿ ನೀನರಲುಹರಿ ನಿನ್ನ ಅಗಲದಿಹ ಸರ್ವ ಪೂಜೆಯಲೀ 8 ಶಾಂಭವಿಯುನುತೆ ದೇವಿ ಜಾಂಬುವತಿ ಶ್ರೀ ಹರಿಯಕಾಂಭಂಥ ಸುಜ್ಞಾನ ಭಕುತಿ ವೈರಾಗ್ಯ |ಹಂಬಲದಿ ನಿನ್ನಂಘ್ರಿ ನಮಿಪೆ ತೋರ್ವುದು ಹೃದಯಅಂಬರದಲಿಹ ಗುರು ಗೋವಿಂದ ವಿಠ್ಠಲನ 9
--------------
ಗುರುಗೋವಿಂದವಿಠಲರು
ಹಸಗೀಡಾಗದಿರು ಮನವೆ ವಿಷಯವಾಸನೆ ಕೂಡ ಧ್ರುವ ಸತ್ಯವೆಂದೆನಬ್ಯಾಡ ದೃಶ್ಯ ಮಿಥ್ಯಾಮಾಯದ ಮೋಡ ನಿತ್ಯವಾಗಿಹದ ಸತ್ಯ ಸುಪಥ ಕೂಡೊ 1 ಹೊನ್ನು ಹೆಣ್ಣಿನ ಕೂಡ ನೀ ದಣ್ಣನೆ ದಣಿಬ್ಯಾಡ ಸುಣ್ಣ ಸಾರಿಸಿ ಮ್ಯಾಲೆ ಬಣ್ಣದೋರುವದಕ್ಕೆ ಕಣ್ಣಗೆಟ್ಟಿರಬ್ಯಾಡ ಮಣ್ಣೆÀಂದರಿಯದೆ ಕಣ್ಣಗೆಟ್ಟಿರಬ್ಯಾಡ 2 ಗುಹ್ಯಗೂಢವ ತಿಳಿಯೊ ನಾ ದೇಹವೆಂಬುದನಳಿಯೊ ತಿಳಿದು ನೋಡೊ ಶ್ರೀ ಹರಿಯ ಮಹಿಮೆ ಸೋಹ್ಯ ತಿಳಿದು ನೋಡೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಸೆಗೆ ಬಾರೊ ಹರುಷಬೀರೊ ಬಿಸಜನಾಭನೇ ಪ ಶಶಿಯ ಸೋದರಿ ಸಹಿತವಾಗಿ ಶಾಮಲಾಂಗನೇ ಅ.ಪ ರತ್ನಖಚಿತ ಪೀಠವಿರಿಸಿ ರಮಣಿ ಮಣಿಯರೂ ಕುತ್ನಿ ಪಟ್ಟಾವಳಿಯ ಹಾಸಿ ಕೋರಿ ಪ್ರಾರ್ಥಿಪರೂ 1 ಭೇರಿ ಮೃದಂಗ ನಾಗಸ್ವರ ನಗಾರಿ ಕಹಳೆಗಳ್ ಧಾರುಣಿ ಸುರವೇದ ಘೋಷ ವಿಸ್ತಾರವಾಗಿರಲ್ 2 ಹಳದಿ ಕುಂಕುಮಾಕ್ಷತೆ ಗಂಧ ಕಳಶ ಕನ್ನಡಿ ಹೊಳೆಯೆ ತಟ್ಟಿಯೋಳ್ ಸುತ್ತ ಜ್ಯೋತಿ ಬೆಳಗುವುದು 3 ಮುದದಿ ನಸು ನಗುತ ಬಲದ ಪದವು ಮುಂದಾಗಿ 4 ಶರಣ ಜನರಭೀಷ್ಟಗಳನು ಸಲಿಸುವಾತನೇ ಗುರುರಾಮವಿಠಲ ಸರ್ವೇಶ ಪುರುಷೋತ್ತಮನೆ 5
--------------
ಗುರುರಾಮವಿಠಲ
ಹಳೆಯವಾಸನೆ ನಿನ್ನ 'ೀರುವದಣ್ಣಬಳಸಿದೆ ಬಹುವಾಗಿ ಬಿಡುವದೆಂತಣ್ಣ ಪಭವರೋಗಿಯಾಗಿದ್ದು ಬಾಯ ಸ'ಗಾಗಿಅ'ವೇಕ ಪಥ್ಯಗಳ ಸ'ದು ಮೂರ್ಛೆದೋಷವುಮೂರ್ಛೆಯ ಕ'ದು ಮನ ತೇಲಿ ಬಂತಾಗಿಸು'ವೇಕ ಮುಚ್ಚೋುತೆ ತೋರದಾಗಿ 1ರಾಮನ ನಾಮ ರಸಾಯನವನ್ನುನೇಮದಿಂ ಸೇ'ಸು ಬಿಡದಿರುುನ್ನುಕಾಮಾಲೆ ಬರದಂತೆ ಕರಣಗಳನ್ನು ಸದಾ ಮನಗುತೆುಂದರಿತರೆ ಸುಖಿುನ್ನು2ಕರುಣದಿಂ ಚಿಕ್ಕನಾಗಪುರದೊಳಗಿರುವಗುರುಪರವಾಸುದೇವಾರ್ಯನ ಪದವ ಪಿಡಿದರೆ ಸುಜ್ಞಾನಾಮೃತವ ನಿನಗೆರೆವಮರೆವೆ ಹಳೆಯ ವಾಸನೆಯ ನಿನ್ನಿರವ3
--------------
ವೆಂಕಟದಾಸರು
ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ ನಿತ್ಯ ಹಾಡಿ ಪ ಮನುಜನ್ನ ಭೋಕ್ತರಿಕಾಯೈದಿ ಧನದಾತ ಸವಸನ ಭೂಷಣ ವಿದ್ಯಾ ಕನಕ ವಿನಯದಿಂದಲಿ ಇಲ್ಲಿ ತನಕ ಬಂದು ಘನವಾಗಿ ಬೇಡುವರು ಮುಕ್ತಿ ಅಹಿಕಾ 1 ಪಾದ ಕರ್ಮ ಭೂ ಮಿವಾಸ ಮಾಳ್ಪೆನೆಂದಲ್ಲಿಂದ ಇಳಿದು ಪಾವಮಾನಿ ಮತ ಪೊಕ್ಕು ಸುಳಿದು 2 ಒಂದೊಂದು ಪರಿಯಲ್ಲಿ ಸಾಗಿ ಸಾರಿ ನಿಂದಿರದೆ ಇಪ್ಪದು ಕಾವ ಲೇಸಾಗಿ ಅಂದದಿಂದಲಿ ಮೌಳಿ ತೂಗಿ ವೇಗ ಕುಂದನಿಷ್ಟವಾಯಿತು ತಾನೆ ಪೋಗಿ3 ಬೇಕಾದರ್ಥವ ಕೊಡುವದು ವಾಕುವರ ಸಿದ್ಧಿ ಲೋಕ ತುಂಬಿದೆ ಇದೆ ಸುಧಿಕೀರ್ತಿ ತಾ ಕೊಂಡಾಡಿದರಾಗೆ ಬಲು ಚಿತ್ತ ಶುದ್ಧಿ 4 ಸತ್ಯಾಗಿ ಸತ್ಯಬೋಧಯತಿ ಕೈಯ ಗುರು ಸತ್ಯಪ್ರೀಯ ಸ್ತೌತ್ಯರಾಮನ್ನ ಹಾವಿಗೆಯ ನಂಬೆ ಭೃತ್ಯವತ್ಸಲ ವಿಜಯವಿಠ್ಠಲ ಸಹಾಯ5
--------------
ವಿಜಯದಾಸ
ಹಿಡಿದ ಕೈಬಿಡಬೇಡವೋ ರಾಮಾ ಪ ಹಿಡಿದ ಕೈ ಬಿಡಬೇಡ ಕಡಲವಾಸವು ಬೇಡ ತಡಿಗೆ ತಳೆಯದಿರಬೇಡ ಕಡೆಗಣ್ಣಿಡ ಬೇಡ ಅ.ಪ ನುಡಿ ಕೇಳದೆನಬೇಡ ಅಡಿದೋರದಿರ ಬೇಡ ಕುಡುಕ ಹೋಗೆನಬೇಡ ನುಡಿಸದಿರ ಬೇಡ ಕೊಡು ಕೊಡೆನ್ನಿಸಬೇಡ | ಪಡೆಯುವಾಸೆಯು ಬೇಡ ದೃಢವಾಗಿ ನಿನ್ನಡಿಯ ಹಿಡಿಸದಿರ ಬೇಡ 1 ಬಿಗುಮಾನ ಬೇಡಯ್ಯ ನಗುಮೊಗವ ತೋರಯ್ಯ ಬಗೆಯರಿತು ನಡೆಸಯ್ಯ ಸುಗತಿದೋರಯ್ಯ ಬಿಗಿಹಿಡಿದ ಕೈಯ ಜಗುಳಿಸಲು ಬೇಡಯ್ಯ ನಿಗಮ ವಂದಿತಜೀಯ ಮಾಂಗಿರಿಯ ರಂಗಯ್ಯ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹಿರಿಯ ಒಡೆಯಕಂಡೆನಮ್ಮಾ ಧರಿಯ ಮ್ಯಾಲೊಂದುನಾ ಸಿರಿಯಾ ವರ್ಯನಾದನೀತ ಸಿರಿಯ ಕಾಣೆನಾ ಪ ಶರಣ ಹೃದಯ ಮಾಡದಲ್ಲಿ ಅರಹು ಘಂಟಮಾಲೆ ನವ ಪರಿಯ ಶುಕ್ಯಶಾವಿಗಿಯ ಹರುಷ ಸಕ್ಕರೆ ಪರಮ ಜ್ಞಾನವೆಂಬ ತ್ವರಿತ ದೀವಿಗೆಯ ಕೊಂಡು ಮೆರೆವ ಕೀರ್ತ ಪ್ರೇಮ ಜಘ್ಲ್ಯಡೊಳ್ಳು ಹೊಯಿಸುವಾ 1 ಕಡ್ಡಿ ವಿಡಿದು ಗುಡ್ಡ ಮಾಡಿ ಗುಡ್ಡವನ್ನೇ ಕಡ್ಡಿಮಾಡಿ ಒಡ್ಡಿ ಮಾಯಾಜಾಲದಿಂದ ನೆಲೆಯ ತೋರದೇ ದೊಡ್ಡ ದೊಡ್ಡವರನೆಲ್ಲ ವೆಡ್ಡೆಮಾಡಿ ಬಿಟ್ಟತನ್ನ ಅಡ್ಡ ಸುಳಿದವರ ಕೈಯ್ಯ ದುಡ್ಡನಾರ ಕೊಂಬುರೇ 2 ಚಿನ್ನ ಕೊಂಡವರ ಮೂಲವನ್ನು ಕಿತ್ತಿ ತೋರಿಸುವ ತನ್ನ ನಂಬಿದ್ದವರ ಸ್ಥಾಪನೇ ಮಾಡುವ ಯನ್ನ ಮನೆ ದೈವವಾಗಿ ಧನ್ಯಗೈಸಿದನು ಕೂಡಿ ಉನ್ನತ ಮಹಿಪತಿ ನಂದ ನೊಡಿಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೂವಾ ಕೊಟ್ಟಳು ಮಹಾದೇವಿ ಮೂಕಾಂಬಾ ಭೂಪವರ ಬಸವ ನೃಪನ ಭಾವಭಕ್ತಿಗೆ ಒಲಿದು ಪ ತನ್ನ ಮಗನೆಂಬ ತಾತ್ಪರ್ಯದಲಿ ಕೈವಿಡಿದು ಮನ್ನಿಸುವೆನೆನುತ ಮೋಹದಲಿ ಕರೆದು ಅನ್ಯ ವೈರಿಗಳ ಜಯಿಸೆಂದು ಅಭಯವನಿತ್ತು ಚೆನ್ನಾಗಿ ಸಾಮ್ರಜ್ಯ ಪದವಿಯನನುಭವಿಸೆನುತಾ 1 ದೃಢಭಕ್ತಿವಿಡಿದು ತನ್ನಡಿಗಳನು ಪೂಜಿಸಲು ಒಡನೊಡನೆ ಬಂದು ಭೂಮಿಪನ ನೋಡಿ ಪಡುಗಡಲ ಒಡೆಯ ಬಾರೆಂದು ನಂಬಿಗೆಯನ್ನು ಕೊಡುವ ತೆರದಲಿ ವಿಶ್ವದೊಡತಿ ತನ್ನಯ ಬಲದ 2 ಪರಿಯಂತ ನೃಪನೇನಿಸಿ ಚಂದದಿಂದಲಿ ವಿಮಲಾನಂದವಾಗಿ ಎಂದೆಂದು ಸ್ಥಿರದಿ ಬಾಳೆಂದು ಬಸವೇಂದ್ರನಿಗೆ ಇಂದೀವರಾಕ್ಷಿ ಕೊಲ್ಲೂರ ಮೂಕಾಂಬಾ 3
--------------
ಭಟಕಳ ಅಪ್ಪಯ್ಯ
ಹೃದಯ ವೃಂದಾವನದೊಳಿರುವ ಕೃಷ್ಣನ ಸಾಧಿಸಿ ನೋಡ್ವೆನೆಂದು ಪೋದರು ಗೋಪಾಂಗನಾ ಪ ನಾದದ ಕೊಳಲನ್ನು ಊದುವ ವೇಳ್ಯದಿ ಸದ್ಭಕ್ತಿವೆತ್ತಿಗೋಪಾಂಗನಾ ವಿನೋದದಿ ಆಧಾರ ಮಾರ್ಗದಿಂದಾ ಪೋದರು ಬೇಗದಿ ಶೋಧಿಸಿ ನೋಡಲಾಗಿ ತ್ಯಾಗಿಸಿ ಕಾಮನಾ 1 ಉಬ್ಬೇರಿ ಮೆಲ್ಭಾಗದಿಂದಾ ವಿನೋದದಿ ಅಬ್ಬರದಿಂದಲೀ ಆ ಷಟದ್ವಾರ ಭೇದದಿ ಗರ್ಭಿತನಾದ ರಾಜಹಂಸೊಹಂಸ್ವರದಿ ಮುಬ್ಬರದಿಂದಲಿ ಪಾಡುತ್ತಾ ರಂಗನ 2 ನಳಿನ ಚಂಪಕಾದಿ ನಾಗ ಪುನ್ನಾಗವು ಕುಂದ ಬಕುಲವು ಮಾಲತಿ ಜಾಜಿ ಹೂವು ಶ್ರಿಲೋಲನಾಮವೂ ಮೇಳಿತವಾಗಿ ಪೋಗಿ ಏರಿದರು ಸುಮನಾ 3 ಮೂರ್ತಿ ಸಂಗೀತ ಕೇಳುತಾ ಆ ಮಹಾ ಮಕುಟದಾ ಬೆಳಕು ನೋಡುತಾ ಶ್ರೀ ಗುರುಮಹಾದೇವನೊಳ್ ರಮಿಸಿ ಸೂಸದಾ ಪ್ರೇಮದಿ ಶಾಂತಿ ಸುಖದೊಳ್ ಬೆರತು ಸಘನಾ 4
--------------
ಶಾಂತಿಬಾಯಿ
ಹೆತ್ತವರಿಗೆರವಾಗಿ ಹೆರವರಿಗೆ ಮಗನಾಗಿ ಚಿತ್ತದೊಳು ನಲಿವವನೆ ಮತ್ತನಿವನೆ ತುಂಟತನದೊಳಗೆ ಸರಿಯುಂಟೆ ಈತಗೆ ಜಗದಿ ನಂಟರನು ಗೋಳಿಡುವ ತುಂಟನಿವನೆ ವಂಚಕರಿಗೆಲ್ಲರಿಗೆ ಸಂಚಕಾರವ ಕೊಡುವ ಚಂಚಲಾಕ್ಷಿಯರನ್ನೆ ವಂಚಿಸಿರುವ ಮಾನವರೊಳಿಂತಪ್ಪ ಮಾನಿಯಂ ನಾನರಿಯೆ ಮೀನಾಂಕ ಸಮರದೊಳ್ ಜಾಣನಿವನೆ ಜಾರರೋಳ್ ಕಡುಶೂರ ಮಾಯಕಾರ ಚೋರತನದೊಳು ವೀರ ಭಯವಿದೂರ ದಾರಿಕಾಯಲು ಧೀರ ಧೈರ್ಯಸಾರ ಮಾರಪಿತ ಶೇಷಗಿರಿವರನೆ ನೀರ
--------------
ನಂಜನಗೂಡು ತಿರುಮಲಾಂಬಾ
ಹೆದರದಿರ್ಪೇಳ್ವೆ ಹೇ ಜೀವಾ ಬ್ರಹ್ಮನಿಗಾನು ಮೊದಲು ಪೇಳಿದ ಮಾರ್ಗವ ಪಪದರವಾಗಿ ಲೋಕಗಳನೂ ಪಲವು ಜೀವರಾಶಿಗಳನೂ ಇದಿರಮಾಡಿ ತೋರಿಸಿಹೆನು ಇದಕೆ ನೀನು ಅ.ಪಏಕನಾಗಿದ್ದು ಮೊದಲು ಬಹಳವಾಗಬೇಕೆಂದು ಬುದ್ಧಿುಡಲುಈಕೆ ಮಾಯೆಯಾುದಳೆನ್ನ ುಚ್ಛೆುಂದಲಿಲ್ಲ ಮುನ್ನಸೋಕಿದಂತೀಗಿರ್ದಡಿದೇನು ಶೂನ್ಯಕೆ ನೀನು 1ರಜ್ಜು ಸರ್ಪನ ತೆರದಿ ತೋರಿದರದು ಬೆಜ್ಜರ ಭಾಂತ್ರಿ ಮೂಲದಿಸಜ್ಜಿಸಿದೆ ಮಾಯೆ ಹಾಗೆ ಭರ್ಜಿಸುವ ಬಗೆ ಹೇಗೆವರ್ಜಿತಕೆ ವಿಧಿಯೊಂದುಂಟೆ ವೋಹೋ ಕಂಗೆಟ್ಟೆ 2ಕನಸಿನ ಸಿರಿ ಕಷ್ಟವು ಎದ್ದವನಿಗೆ ನೆನಸಿದರುಂಟೆ ನಿಜವುಮನದ ಭ್ರಮೆುಂದ ಬಂದ ಮಿಥ್ಯಕುಂಟೆ ಮುಕ್ತಿ ಬಂಧಇನಿತ ನಾನೆ ತೋರಿಸಿಹೆನು ಇದಕೆ ನೀನು 3ತಿಳಿದರೂ ತಾನೆ ತೋರ್ಪುದು ಕೇಳ್ ಬಹುಕಾಲ ಬಳಸಿ ಬಂದುದು ಬಲಿದುಹೊಳೆದರೂ ತಾ ಜೀವನನ್ನು ಹೊದ್ದದುಣ್ಣುತಿದ್ದರದನುಕಳಚಿ ಹೋುತೆಂದೆ ನೀ ಕಾಣು ಕೊರತೆ ತಾನೇನು 4ಹುರಿದ ಬೀಜವ ನೋಡಲು ಆಕಾರವಾಗಿ ುರುವದು ುದ ಬಿತ್ತಲುತಿರುಗಿ ಪುಟ್ಟಿ ತೋರುವದೆ ತಿಳಿಯೆ ಮಾಯೆಯನ್ನು ಬಾಧೆಬರುವದೇನೈ ಭದ್ರವಾಗಿರು ಭೋಗಿಸುತಿರು 5ಹೋಗದೇತಕೆ ಹೋರುತಾ ಬಾಧಿಸುವದು ಯೋಗಿಗೂ ುದ್ದೆ ತೋರುತಾಸಾಗುವಂತೆ ಮುಂದೂ ತಾನು ಸಿದ್ಧವಾಗಿ ಮುಕ್ತರನ್ನುಭೋಗಿಗಳ ಮಾಡುತಿಹದು ಬಾಧಿತವಹುದು 6ತೋರಿದ ನಾನೆ ತೆಗೆವೆ ಇದಕೆ ನೀನು ಹೋರದಿರೆನ್ನ ನಿಜವೆಸೇರು ನನ್ನ ಚರಣವನು ದಾರಿದೋರ್ಪೆ ತಿರುಪತಿವಾರಿಜಾಕ್ಷ ವೆಂಕಟೇಶನು ಒಲಿವೆ ನಾನು 7ಓಂ ಪನ್ನಗಾಶನವಾಹನಾಯ ನಮಃ
--------------
ತಿಮ್ಮಪ್ಪದಾಸರು
ಹೆಮ್ಮೆಯಾ ಬಿಡು ಬಿಡು ಮನುಜಾ ಪ ಬೊಮ್ಮ ದೂರ್ವಾಸಾದಿಗಳೆಲ್ಲಾ | ಸುಮ್ಮನೆ ತಲೆವಾಗಿ ಹೋದರೆಂಬುದ ಕೇಳಿ ಅ.ಪ ಕಡಲೊಳು ಕುಳಿತಿಹ ಬಕದಾಲ್ಭ್ಯನೊಳು ಗರ್ವ | ನುಡಿಯಲಿ ತಾ ವಾಯು ವಶದಿಂದಲಿ | ತಡಿಯದೆ ಬಹುಮುಖ ಕಮಲಾಸನ ಕಂಡು | ಒಡನೆ ಲಜ್ಜಿತ ಬ್ರಹ್ಮನಾದ ನೆಂಬುದು ಕೇಳಿ 1 ತುಚ್ಛ ಮಾಡಿದ ಇಂದ್ರನೆಂಬ ಗರ್ವದಿ ಬಂದು | ಮತ್ಸರಿಸಲು ಅಂಬೃಷಿಯೊಡನೆ | ಅಚ್ಯುತನಾಯುಧ ಬೆನ್ನಟ್ಟಿ ಬರಲಾಗ | ಹುಚ್ಚಿಟ್ಟು ದೂರ್ವಾಸ ಹೋದನೆಂಬುದ ಕೇಳಿ 2 ಮೇರು ಗಿರಿಯ ಸಮವಾಗಿ ಸೂರ್ಯನ ರಥಾ | ದಾರಿ ಕಟ್ಟುವೆನೆಂದು ಬೆಳೆಯುತಲಿ | ಧೀರಗಸ್ತ್ಯನ ನುಡಿ ಕೇಳಿ ವಿಂದ್ಯಾದ್ರಿ | ಧಾರುಣಿಯೊಳಗೇ ನಾದನೆಂಬುದ ಕೇಳಿ 3 ಯಕ್ಷರಾಕ್ಷಸದೇವ ದ್ವಿಜರೊಳೆಮಗಸಮ | ಕಕ್ಷದಿ ನಿಲುವ ರರೆನುತಾ | ಭಿಕ್ಷುಕ ಯೋಗಿಯನುತಾ ಶಿವನೆಣಿಸದೆ | ದಕ್ಷ ಮನ್ಮಥರೇನಾದರೆಂಬುದ ಕೇಳಿ 4 ನಹುಷಾದಿ ರಾಯರು ಮೂಢ ಪಂಡಿತರೆಲ್ಲಾ | ಬಹುತರು ನಮ್ರವೃತ್ತಿಯ ತ್ಯಜಿಸಿ | ಮಹಿಪತಿಸುತ ಪ್ರಭು ವಲುಮೆಗೆ ದೂರಾಗಿ | ಅಹಂಕಾರ ಬಲಿಯೊಳು ಕೆಟ್ಟರೆಂಬುದ ಕೇಳಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೇ ಪಾಪಿ ಮನಸೇ ನೀ ನಾರಾಯಣೆನೆಲೋ ಅಪಾರ ಮಹಿಮನ ಮಹಿಮೆ ತಿಳಿದು ನೋಡೋ ಪ ‘ನಾ’ ಎಂಬೋ ಮಹದಾದಿಬೀಜದಕ್ಷರ ತುದಿ ನಾಲಿಗೆಯಿಂದ್ಹೊರಡುವನಿತರೊ ಳ್ಹಿಂದಿನ ನಾನಾಜನುಮದ ಪಾಪ ಪರ್ವತವೆಲ್ಲವು ನಿವೃತ್ತಿಯಾಗಿ ಮಹ ಪಾವನನೆನಿಪುದು 1 ‘ರಾ’ ಎಂದು ಮುಖದಿಂದ ಹೊರಟ ಕೂಡಲೆ ಸರ್ವ ರವರವನರಕದ ಯಾತನಳಿದು ಭವ ರೋಗವೆಲ್ಲನು ನೀಗಿ ಕಾಯಕರ್ಮವ ಕಡಿದು ರಾಜಿಪ ಪರಲೋಕ ಸದರವೆನಿಸುವುದೆಲೊ 2 ‘ಯ’ ಎಂದು ನುಡಿಯುತಲೆ ಜನುಮ ಸಫಲವಾಗಿ ಎಷ್ಟೋ ಕೋಟ್ಯಜ್ಞದ ಪುಣ್ಯ ಫಲವು ದೊರಕಿ ಯಮನ ಭೀತಿಯ ಗೆಲಿಸಿ ದಾಸರೊಲುಮೆ ಲಭಿಸಿ ಎಸೆವ ತ್ರಿಕಾಲಜ್ಞಾನ ಸ್ಥಿರವಾಹುದೆಲೊ 3 ‘ಣ’ ಎಂದು ಸಂಪೂರ್ಣ ಉಚ್ಚರಿಸಿದ ಮಾತ್ರವೆ ಕರತಲ ಮಾಗಿ ನಿತ್ಯ ನಿರ್ಗುಣನಂಘ್ರಿ ಕಂಗಳೊಳ್ಹೊಳೆಯುತ ನಿತ್ಯಾನಂದದ ಪದವಿ ಕೈವಶವಹದೆಲೊ 4 ನಿರಾಮಯ ಶ್ರೀರಾಮ ನಿಗಮಗೋಚರ ನಿರಂಜನ ನಿಜಗುಣನನುಪಮಮಹಿಮೆ ನಿಜಮತಿಯಿಂದರಿತು ನಿರ್ಮಲ ಮನಸಿನಿಂ ನೆನೆಯಲು ಘನಮುಕ್ತಿ ಸಾಮ್ರಾಜ್ಯ ಪಡೆಯುವಿ 5
--------------
ರಾಮದಾಸರು