ಒಟ್ಟು 11370 ಕಡೆಗಳಲ್ಲಿ , 137 ದಾಸರು , 5713 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲೆಂದು ಪಾಡಿರೆ ಕೋಮಲೆಯರೆಲ್ಲಾ ಅಮ್ಮಯ್ಯ ಗೋಪಾಲ ಕೃಷ್ಣಯ್ಯಗ ಶರಣಿಂದು ಕೋಲ ಪ. ಮುದ್ದು ಸುಭದ್ರ ನೀನು ಗೆದ್ದುಬರುತಿಯೆಂದುಎದ್ದ ಬೃಹಸ್ಪತಿಯು ತವಕದಿ ಕೋಲಎದ್ದ ಬೃಹಸ್ಪತಿಯು ತವಕದಿ ಅರ್ಜುನ ಸಿದ್ಧ ಮಾಡೆಂದ ರಥಗಳ ಕೋಲ 1 ಕೇಳಿರಿ ನಿಮಗೆಲ್ಲ ಭಾಳ ಬಲವದೆಕಾಳಿ ಮೊದಲಾದ ಕೆಲದೆಯರುಕಾಳಿ ಮೊದಲಾದ ಕೆಲದೆಯರು ಹರುಷದಿ ಹೇಳಿ ಬೃಹಸ್ಪತಿಯು ನುಡಿದಾನು ಕೋಲ2 ಪಾಂಡವರೆಲ್ಲರು ಉಂಡು ವೀಳ್ಯವನ್ಹಾಕಿಪುಂಡರಿಕಾಕ್ಷನ ಅರಮನೆಗೆ ಕೋಲಪುಂಡರಿಕಾಕ್ಷನ ಅರಮನೆಗೆ ಐವರುತಂಡ ತಂಡದಲೆ ನಡೆದಾರು ಕೋಲ3 ದ್ರೌಪದಿ ಸುಭದ್ರಾ ಇಬ್ಬರು ಒಂದಾಗಿಅಗಣಿತ ಒನಿತೆಯರು ಕೋಲಅಗಣಿತ ಒನಿತೆಯರು ಕೂಡಿಕೊಂಡು ತಾವುಪ್ರೇಮದಿಂದಲಿ ಬರುತಾರೆ ಕೋಲ 4 ಅರಿಷಿಣ ಕುಂಕುಮ ಗಂಧಬೆರೆಸಿ ಪರಿಮಳದಿಂದಸರಸಾದ ಸುರಭಿ ಕುಸುಮವ ಕೋಲಸರಸಾದ ಸುರಭಿ ಕುಸುಮರಾಮೇಶನ ಅರಸಿಯರಿಗೆ ಒಯ್ವೋ ಉಪಚಾರ ಕೋಲ 5
--------------
ಗಲಗಲಿಅವ್ವನವರು
ಕೋಸಲಾಧಿಪ ಶುಭವನು ದಾಶರಥೇ ಪ ದಾಸನಲ್ಲಿ ಕೃಪಾಲೇಶವ ಬೀರೆಲೊ ಅ.ಪ ಹರನ ಚಾಪವ ಮುರಿದು ಸ್ವಯಂ ಕರವ ಪಿಡಿದು ಸರಸಿಜಲೋಚನ ಕಾಯೊ ಕರುಣದಲಿ 1 ವನವ ಸೇರಿ ಮುನಿಗಳ ಶಂ ಸನವ ಪೊಂದಿದ ಜಾನಕೀಪತಿ ಮುನಿದು ದುರುಳರ ಹನನ ಮಾಡಿದ ಹನುಮನಿಗೆ ದರುಶನವಿತ್ತ 2 ವಾನರಬಲದಿಂದ ಕೂಡಿ ವನದಿ ಬಂಧಿಸಿ ಲಂಕೆ ಸೇರಿದ ಶಾನನ ಮುಖರನು ಕೊಂದು ಜಾನಕಿಯಲಿ ಪ್ರಸನ್ನನಾದ 3
--------------
ವಿದ್ಯಾಪ್ರಸನ್ನತೀರ್ಥರು
ಕೋಳಿ ಕೂಗಿತು ತಂಪು ಗಾಳಿ ಬೀಸಿತು ಏಳಯ್ಯಾ ಬೆಳಗಾಯಿತು ಪ ಧೀರ ಸೋಮಕನಿರಿದು ಮೇರು ಬೆನ್ನಲಿ ಪೊತ್ತು ಘೋರ ಹಿರಣ್ಯಾಕ್ಷ ಕಶ್ಯಪರ ಶೀಳಿ ಮಾರಿ ಬಲಿಯನ್ನೊತ್ತಿ ಕಂಸ ದಾನವರನಳಿದು ಶೇರಿ ತ್ರಿಪುರರ ದಹಿಸಿ ಕ್ರೂರ ದುಷ್ಟರ ತರಿದು ಭಾರಿ ಆಯಾಸದಲಿ ನಿದ್ರೆ ಹತ್ತಿರೆ ಸ್ವಾಮಿ1 ವೇದವನು ತಂದೆ ಸುರವೃಂದಕಮೃತವನಿತ್ತೆ ಮೇದಿನಿಯ ನೆಲಸಿ ಪ್ರಲ್ಹಾದನಾ ಪೊರೆದೆ ಮೋದಿಗಂಗೆಯ ಜನಿಸಿ ಭೂದಾನ ಮಾಡಿದೆ ಮೋದದಿಂದಜಪದವಿಯ ಆಂಜನೇಯಗಿತ್ತೆ ಪೋದ ಮಕ್ಕಳ ತಂದು ಗುರುಪತ್ನಿಗೇ ನೀಡಿ ವೇದನುತ ನಿರ್ವಸನ ಸುಹಯಾರೂಢನೇ2 ಶರಣಜನ ಬಂದು ಸುಸ್ವರದಿಂದ ಪಾಡುತಿರೆ ಪರಿ ಕಣ್ಣಮುಚ್ಚುವುದೇ ಸರಿಯೆ ಬೆನ್ಮರೆಮಾಡಿ ಮಣ್ಣನಾಡಾಡುವುದೇ ಉರಿಮೋರೆಯಿಂದ ತರಳಾಟ ಆಡುವುದೇ ಪರಶು ಶರ ಚಕ್ರಗಳ ಪಿಡಿದು ಉಡಿಗೆಯ ಮರೆತೆ ಭರದಿ ತುರಗವನೇರು ನರಸಿಂಹ ವಿಠ್ಠಲಾ 3
--------------
ನರಸಿಂಹವಿಠಲರು
ಕೌಸಲ್ಯಾಗರ್ಭಾಬ್ಧಿಸೋಮಾ ಸ್ವಾ'ು ಕೌಶಿಕ ಮಖಪಾಲ ರಾಮ ಪಆಶಯೇಶಯ ಜನಕ ಪಾಪ'ನಾಶ ತಾಪಸಹೃದಯ ಕಮಲಾವಾಸ ಭದ್ರ ಗರೀಶ ರಘುಕುಲಭೂಷ ದಶ'ಧ ವೇಷಧಾರಿ 1ತೃತಿಯರಾಮಕೋಟಿ ಕೂಡು ಭಕ್ತತತಿಗೆ ಲಭಿಸುವಂತೆಮಾಡುಪತಿತಪಾವನ ಪದ್ಮನಯನ ಶತಧೃತಿ ಶಿವಸೇವ್ಯಚರಣಾಸತತವೂ ತವಸೇವೆಗೆ ಮನ 'ತವತೋರಿಸಿ ಸಲಹೋ ಶೌರಿ 2ಭರತಪೂರ್ವಜ ದೀನಪ್ರೇಮಾ ದನುಜಹರಣಧುರೀಣ ನಿಸ್ಸೀಮಕರಿಧ್ರುವ ಪ್ರಹ್ಲಾದ ಶಬರೀ ನರಸತಿಪರಮಾರ್ಥದಾಯಕನಿರುಪಮಾನದ ರಾಮಕೋಟಿಯಾಚರಣ ಕೀರ್ತಿಯ ನಿಲಿಸು ಧೊರೆಯೆ 3ಧಾರುಣೀ ಚನ್ನಪಟ್ಣೇಶಾ ಲಕ್ಷ್ಮೀನಾರಾಯಣ ಕಾಯೊ ಶ್ರೀಶಾಮಾರಸುಂದರ ರಾಮನಾಮವ ಹಾರವಾಯಾಗಿ ಸಮರ್ಪಿಸಿದೆವುಕೋರಿಕೆ ಸಪ್ತೋತ್ಸವಂಗಳು ಪೂರ್ತಿಮಾಡುವರೆಂದು ನಂಬಿದೆ 4ಗುರುತುಲಸೀರಾಮಸ್ವರೂಪ ನಿಮ್ಮಕರುಣದಿಂದಲಿಸಾರಿಭೂಪಾಜರುಗಿಸಿದಿರೀ ಜಪಾಧ್ವರವನು ಮುರಹರೀಮದ್ದುರಿತ ಹರಣನೆನಿರತಭಕ್ತಿಯ ಕೊಟ್ಟು ಪ್ರಜಗಳುನುದ್ಧರಿಸುವ ಕರ್ತವ್ಯ ನಿನದೇ 5ಭೂ'ುಜನರ ಗರುಡುತುರಗಾ ರಂಗಸ್ವಾ'ುದಾಸೊಲ್ಲಾಸಾ ಈಗಪ್ರೇಮ ತೋರಿಸಬೇಕು ಬೇಡುವೆ ಕಾ'ುತಾರ್ಥದ ಕಲ್ಪಭೂಜಸೋಮಜಿತಮುಖ ಸಕಲ ಸುಗುಣಸ್ತೋಮ ತುಲಸೀದಾಮ ಧರಣಾ * 6* 20-8-1933 ಎಂದು ದಿನಾಂಕ ಇದೆ.(ಈ) ರಂಗಸ್ವಾ'ುದಾಸರನ್ನು ಕುರಿತ ಕೆಲವು ಕೃತಿಗಳು
--------------
ಮಳಿಗೆ ರಂಗಸ್ವಾಮಿದಾಸರು
ಕ್ಲೇಶ ಪ ಅಸ್ತಿತ್ವಕ್ಚರ್ಮಾದಿ ಮಾಂಸ | ಧಾತುಸಪ್ತಾವರಣ ಕಾಯದೊಳಗೆ ಆ ವಾಸ |ಲಿಪ್ತನಾಗದೆ ಇದ್ದು ಶ್ರೀಶ | ಜೀವರಾಪ್ತ ಸಾಧನ ಮಾಡಿ ಮಾಡಿದೆ ಅನಿಶಾ 1 ಸಪ್ತವು ದಶದ್ವಯ ಸಹಸಾ | ನಾಡಿಸಪ್ತಾಬ್ಜದೊಳು ಸನ್ನಿವಾಸ |ಭಕ್ತರಿಗೊಲಿವೆಯೊ ಮೇಶ | ನಿನ್ನಗುಪ್ತ ಮಹಿಮೆ ನೀನೆ ತಿಳಿಸೊ ಸರ್ವೇಶ 2 ಭೋಕ್ತ | ನಾಗಿಮುಕ್ತಾನಂದದಲಿದ್ದು ಮೆರೆವೆ ವಿಧಾತಾ 3 ಆರ್ತನಾಗುತ ಬೇಡ್ವೆ ಹರಿಯೇ | ನಿನ್ನವ್ಯಾಪ್ತಿ ತೋರೋ ಸರ್ವ ಲೋಕದ ಧೊರೆಯೆಮೂರ್ತಿ ನಿಲ್ಲಲಿ ಮನದಿ ಹರಿಯೇ | ನಿನ್ನಕೀರ್ತಿ ಕೊಂಡಾಡಿಸು ಸತತದಿ ಶೌರೀ 4 ತಪ್ತ ಕಾಂಚನದಂತೆ ಹೃದಯ | ದಲ್ಲಿದೀಪ್ತನಾಗಿದ್ದರು ಕಾಣದ ಪರಿಯೆ |ಸುಪ್ತಿಯ ಕಳೆ ತವ ಮೂರ್ತಿಯ | ತೋರೊಗೋಪ್ತ ಗುರು ಗೋವಿಂದ ವಿಠಲಯ್ಯ 5
--------------
ಗುರುಗೋವಿಂದವಿಠಲರು
ಕ್ಲೇಶಮಾಡಲಿ ಬೇಡ ಮನವೆ ನೀನೂ ದೇಶದೊಳಗೆ ಕೇಳು ಜ್ಞಾನಿಗಳ ಸಮ್ಮತಾ ಪ ವಸಿಷ್ಠ ಮಹಾಋಷಿಗೆ ನೂರುಮಂದಿ ಸುತರು ಅಸಮಸಾಹಸರು ಬಲು ಶೀಲಜ್ಞರು ಕಾಲ ಮೃತ್ಯುವಿನ ಕೈ ವಶವಾಗಿ ಹೋದರದು ನೋಡು ದು:ಖವ ಬಿಡು 1 ಕೃಷ್ಣ ಸೋದರಮಾವ ಮತ್ತೆ ಭೀಮಸೇನ ಜೇಷ್ಠಪಿತ, ಪಾರ್ಥನು ಪಡೆದ ಶೂರ ಇಷ್ಟು ಜನ ಇರಲಾಗಿ ಅಭಿಮನ್ಯು ದೇಹವನು ಬಿಟ್ಟು ಪೋಗಲು ಒಬ್ಬರಾದರು ಉಳುಹಿದರೆ2 ಇಂಥವರಿಗೀತ್ಯರನು ನಿನಗಾವ ಸ್ವಾತಂತ್ರ್ಯ ಸಂತೋಷವೆ ಬಡು ಧೈರ್ಯದಲ್ಲಿ ಕಂತು ಜನಕ ನಮ್ಮ ವಿಜಯವಿಟ್ಠಲನಂಘ್ರಿ ಅಂತರಂಗದಲಿಡು ಮುಂದಿನಗತಿ ಬೇಡು 3
--------------
ವಿಜಯದಾಸ
ಕ್ಷಮಾ ಪ್ರಾರ್ಥನೆ ಗುರುಹಿರಿಯರೆಡೆಯಲ್ಲಿ ಶಿರಬಾಗಿಸಿನಯದಲಿ ಎರೆವೆನೀಪರಿಯಲ್ಲಿ ಕರವಮುಗಿದು ಯತಿನಿಯಮ ಛಂದಸ್ಸು ಗತಿತಾಳಲಯಬಂಧ ನುತಶಬ್ದ ತತ್ವಾರ್ಥ ಸಂಗತಿಯನು ವರಕವಿಗಳೊರೆದಿರ್ಪ ತರತರದ ಪ್ರಾಸಗಳ ವರಲಕ್ಯಣಲಂಕಾರ ಮೆಂಬ ಪರಿಕರಂಗಳನರಿದು ಪರಿಪರೀಸಿಂಗರಿಸ ಲರಿಯೆ ಕವಿತಾಮಣಿಯ ಪರಿಯನರಿಯೆ ಸರಿಸದೋಳ್‍ನಿಂದೆ ನೆಂದರಿಯ ಬೇಡಿ ಅರಿಯದಾತರಳೆ ರಚಿಸಿದುದನುನೋಡಿ ಹಿರಿಯರೊಳುಗರುವತೋರಿದೆನೆನ್ನ ಬೇಡಿ ಸರಿದೋರಿದಂತೆಸಿಗೆ ಕೃಪೆಮಾಡಿ ಸಮರ್ಪಣೆ ತ್ವದ್ದತ್ತವಾಚಾ ತವಕಿಂಕರೇಣ ತ್ಪತ್ಪ್ರೀತಿ ಕಾಮೇನ ಮಯಾಕೃತೇನ | ಸ್ತೋತ್ರೇಣ ಲಕ್ಷ್ಮೀನೃಹರೇ ಸವಿಷ್ಣುಃ ಪ್ರೀತೋಭವತ್ಪಂ ಕರುಣಾದ್ರ್ರದೃಷ್ಟಿಃ ||
--------------
ನಂಜನಗೂಡು ತಿರುಮಲಾಂಬಾ
ಕ್ಷಮಿಸೆನ್ನ ದೋಷಗಳ ಕ್ಷಿಪ್ರದಿ ಹರಿ ಪ ಕ್ಷಮೆಯನ್ನು ಧರಿಸಿದ ಕಮಲಾನಿವಾಸನೆ ಅ.ಪ ಕರಣತ್ರಯದಿಕಾಲಹರಣವಿಲ್ಲದೆ ಪಾಪಾ ಚರಣೆಯಿಂ ದೋಷದ ಭರಣಿಯಾದೆನು ಹರಿ 1 ಮಾಡಬಾರದ ಪಾಪ ಮಾಡುವೆನನುದಿನಸ ಮೂಢನ ಸುಕೃತವನಾಡಿ ತೋರಿಸಲೇಕೆ 2 ಹರಿಗುರುಹಿರಿಯರ ಜರಿದು ಸಜ್ಜನರನು ತೊರೆದು ದುರ್ಜನರೊಳು ಬೆರೆದು ಪಾಮರನಾದೆ3 ಸರ್ವಸಹಾಧಿಪ ಸರ್ವಚೇತನದೀಪ ಸರ್ವಾಪರಾಧವ ನಿರ್ವಹಿಸುವ ಭೂಪ 4 ದುರಿತವೈರಿಯೆ ನಿನ್ನ ಮರೆಹೊಕ್ಕ ಮನುಜಗೆ ದುರಿತ ದುಃಖಗಳುಂಟೆ ವರದವಿಠಲರಾಯ 5
--------------
ವೆಂಕಟವರದಾರ್ಯರು
ಕ್ಷಮಿಸೆನ್ನ ದೋಷಗಳ-ಕ್ಷಿಪ್ರದಿ ಹರಿ ಪ ಕ್ಷಮೆಯನ್ನು ಧರಿಸಿದ ಕಮಲಾ ನಿವಾಸನೆ ಅ.ಪ. ಕರಣ ತ್ರಯದಿ ಕಾಲ-ಹರಣವಿಲ್ಲದೆ ಪಾಪಾ ಚರಣೆಯಿಂದೋಷದ ಭರಣಿಯಾದೆನು ಹರಿ 1 ಮಾಡಬಾರದ ಪಾಪ ಮಾಡುವೆನನುದಿನ ಮೂಢನ ಸುಕೃತವ ನಾಡಿ ತೋರಿಸಲೇಕೆ 2 ಹರಿಗುರುಹಿರಿಯರ-ಜರಿದು ಸಜ್ಜನರನು ತೊರೆದು ದುರ್ಜನರೊಳು ಬೆರೆದು ಪಾಮರನಾದೆ 3 ಸರ್ವಂಸಹಾಧಿಪ ಸರ್ವಚೇತನ ದೀಪ ಸರ್ವಾಪರಾಧವ ನಿರ್ವಹಿಸುವ ಭೂಪ 4 ದುರಿತ ವೈರಿಯೆ ನಿನ್ನ-ಮೊರೆಹೊಕ್ಕಮನುಜಗೆ ದುರಿತದುಃಖಗಳುಂಟೆ-ವರದ ವಿಠಲರಾಯ 5
--------------
ಸರಗೂರು ವೆಂಕಟವರದಾರ್ಯರು
ಕ್ಷಮಿಸೊ ಯೆನ್ನಪರಾಧಗಳನು ಪ ಮಾಯಾ ಭ್ರಮಿತನ ಕರುಣದೊಳೀಕ್ಷಿಸೊ ಅ.ಪ ಗಿಷ್ಟಾದರು ದಯೆಯಿಟ್ಟು ಪೊರೆಯೊ ಹರಿ 1 ಮಂದರಧರ ಸರ್ವೇಶ್ವರನೆ || ನಂದದ ಸ್ಮರಣೆಯ ಕುಂದದೆ ಪಾಲಿಸೊ 2 ಸತಿಸುತರಿಹಪರವೆನಗೆ ನೀನೆ ಸ-| ಸತತ ಮೈದೋರೊ ಸದಾನಂದ ಗುರುವರ 3
--------------
ಸದಾನಂದರು
ಕ್ಷಿತಿಭಾರ ಹರಣನೇ ಶ್ರೀಜಾನಕೀ ಪತಿಯೇ |ಶಿತಿಕಂಠ ಸಖ ಹರಿಯೇ ಪ ಅತಿ ವಿಮಲನಂತಾರ್ಕ ನಿಭ ಪದಾಗತಿ ವಹನೆ ಪೊರೆ ಶ್ರೀರಾಮಚಂದ್ರಾನೇ ಅ.ಪ. ಪರಮ ಮಂಗಳ ನಾಮ | ಪರಿಹರಿಸಿ ಸಂಸೃತಿಯನಿರುತ ಮಹದಾನಂದ | ಪ್ರದವೆನಿಪುದೋ ||ಮರುತಾಂತರಾತ್ಮ ತವ | ನಾಮ ಸುಧೆ ಸುಖ ಸವಿದುಇರುವಂತೆ ಮಾಡಯ್ಯ | ಕರುಣ ನಿಧಿಯೇ 1 ಕಮಲ ಸಂಭವನಯ್ಯ | ಸುಮನಸರಿಗತಿ ಪ್ರೀಯಕಮಲದಳ ನೇತ್ರನೇ | ಕಾಮಿತ ಪ್ರದನೇ ||ಭ್ರಮ ಮೂರ ಪರಿಹರಿಸೊ | ಕಮಲಾಪ್ತ ಕುಲಜನೇಶಮದಮಾನ್ವಿತನೆನಿಸಿ | ವಿಮಲ ಮತಿ ಈಯೋ 2 ದಶಕಂಠ ಹರ ನಿನ್ನ | ಯಶವನ್ನೆ ಪೊಗಳಲುಶೇಷ ವಿಪ ರುದ್ರಾದಿ | ಗಸದಳವು ಇಹುದೂ |ಕಸರು ಕರ್ಮಾದಿಗಳ | ಕೆಸರು ಕಳೆ ಪ್ರಾರ್ಥಿಸುವೆಅಸಮ ಮಹಿಮನೆ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಕ್ಷೀರವಾರಿಧಿಜಾತೆ ಚಾರುಸುಂದರಗಾತ್ರೆ ಪ ವೋರು ವರಮಣಿ ಪೀಠಕೆ ಬಾರೆಯ ಹಸೆಗೇ ಕರೆ 1 ಇಂದಿರಾದೇವಿ ಬಾ ಇಂದುಸೋದರಿ ಬಾ ಕುಂದಣದ ಹಸೆಗೇ ಮಂದಹಾಸವ ತೋರಿ ಬಂದೆಮ್ಮ ಮನೆಯೊಳು ಎಂದೆಂದಗು ಬಿಡದಾನಂದವತೋರೆಂದು 2 ರೂಢಿಗೊಡೆಯ ಗರುಢಾರೂಢನೆಂದೆಸಿದ ಪೊಡಮಟ್ಟು ಬೇಡುವ ದೃಢ ಭಕ್ತರ ಕೈ ಬಿಡದಾದರಿಸುತ್ತ ಬಾರೆಂದು ಹಸೆಗೆ 3 ಸುರವರಪೂಜಿತ ಚರಣಸರೋಜವ ನಿರುತ ಸೇವಿಪ ವರವ ಕರುಣೆಸೆಂದೆನುತಾನು ಕರಮುಗಿದೆರೆವೆನು ವರಶೇಷಗಿರಿವಾಸನರಸಿನೀಂ ನಲವಿಂದ ಬಾರೆಂದು4
--------------
ನಂಜನಗೂಡು ತಿರುಮಲಾಂಬಾ
ಕ್ಷೀರಶರಧಿಶಯನ ನಾರಾಯಣ ಪ ತೋರೊ ಎನ್ನಲಿ ಕರುಣ ನಾರಾಯಣ ಅ.ಪ ಕ್ಷಿತಿಯೊಳೆನಗೆ ಸ್ಥಿತಿ ಗತಿಯು ಬೇರಿಲ್ಲವೊ ಶ್ರಿತಜನ ಕಲ್ಪತರು ಶ್ರೀರಮಣ 1 ಅರಿಷಡ್ಪರ್ಗವ ಮುರಿದು ಎನಗೆ ನಿನ್ನ ವರ ಸೇವೆಯ ನೀಡೊ ಶ್ರೀ ನರಹರಿ 2 ಪಾಮರ ಭಕುತರ ಕ್ಷೇಮವಹಿಸಿ ಅವರ ಕಾಮಿತಗಳ ನೀಡೊ ಕಾಮಧೇನು 3 ಸಂತತ ಹೃದಯದಿ ನೆಲೆಸಿ ಎನಗೆ ಮನ ಶಾಂತಿಯ ದಯಮಾಡೊ ಚಿಂತಾಮಣಿ 4 ನಿನ್ನ ದಾಸರದಾಸನೆನ್ನಲಿ ದಯದಿ ಪ್ರ ಸನ್ನ ನಾಗೊ ಶ್ರೀಶ ಲಕ್ಷ್ಮೀಶ5
--------------
ವಿದ್ಯಾಪ್ರಸನ್ನತೀರ್ಥರು
ಕ್ಷೇತ್ರ ದರ್ಶನ ಉಡುಪಿಯ ಯಾತ್ರೆಯ ಮಾಡಿ - ಉಡುಪಿಯಾ ಪ ಉಡುಪಿಯ ಯಾತ್ರೆಯನ್ನೆ ಮಾಡಿ | ಭಕ್ತಿಮುಡುಪಿತ್ತು ಪ್ರಮೋದ ಬೇಡಿ | ಆಹನಡುದೇಹ ದೋಳೀಹ | ನಡುನಾಡಿ ಕಮಲದಿಒಡೆಯ ಶ್ರೀ ಕೃಷ್ಣನ್ನ | ಧೃಡ ಭಕ್ತಿಯಿಂ ಭಜಿಸಿ ಅ.ಪ. ಆನಂದ ತೀರಥ ಸರಸಿ | ಯೊಳುಮೀನನಾಗಿ ಬಹು ಈಸಿ | ಹರಿಧ್ಯಾನದಿ ಸ್ನಾನ ಪೊರೈಸಿ | ಮತ್ತೆಮೌನವೆಂಬಾಸನ ಹಾಸಿ | ಆಹಮೂಧ್ರ್ನಿ ಲಲಾಟದೋಳ್ | ಗೋಣು ಮಧ್ಯೋದರಸ್ಥಾನಾದಿಯಲಿ ಹರಿ | ಧ್ಯಾನ ನಾಮವ ಹಚ್ಚಿ 1 ಮಧ್ವ ಕಿಂಕರನೆಂಬೊ ದೊಂದು | ಹರಿವಿದ್ವೇಷಿಗಳ ಬಡಿವೊದೆಂದು | ಮತ್ತೆಸದ್ವೈಷ್ಣವರ ಸೇರ್ವೋದೊಂದು | ಇನ್ನುಬುದ್ಧಿಪೂರ್ವಕ ಹರಿ ಪರನೆಂದು | ಆಹಶ್ರದ್ಧಾಳು ವೆಂದೆನಿಪ | ಮುದ್ದು ಮುದ್ರೆಗಳೈದುತಿದ್ದಿ ವಿಸ್ತರಿಸೂತ | ಕೃದ್ದೋಲ್ಕಾದಿಯನೆನೆ 2 ಸಂಧ್ಯಾ ಮೂಡಿಹುದು ನೀ ನೋಡು | ಕಾಲಮುದ್ಹಿಂದಾಗದಲೆ ನೀ ಮಾಡು | ಯಾವದೊಂದು ಮಂತ್ರಾರ್ಥವ ನೋಡು | ಇನ್ನುಸಂಧ್ಯಾ ನಾಮಕನ ಕೊಂಡಾಡು | ಆಹಛಂದದಿ ನಿನ ಜ್ಞಾನ | ಮುಂದು ಮುಕ್ಕಿಲು ಒಪ್ಪಮಂದೇಹ ದೈತ್ಯರ | ಮಂದಿಯ ಕೊಲ್ಲುತ 3 ಕಂಟಕ ಕಳೆದು ಶರೀರ | ಮಧ್ಯಮಂಟಪ ಚಿಂತಿಸೊ ಧೀರ | ಅದಕೆಎಂಟರ್ಧ ಮತ್ತೊಂದು ದ್ವಾರ | ಕಾಯ್ವಭಂಟ ಮಾರುತನ ವ್ಯಾಪಾರ | ಆಹಎಂಟ್‍ಟಾರು ನಾಲ್ಕು ಸ್ತಂಭ ಮಧ್ಯದಿ ಲಕ್ಷ್ಮಿಮಂಟಪ ಚಿಂತಿಸಿ ಒಂಟಿಯಾಗೊ ಮನದಿ 4 ಕೆಳ ಮುಖಾಬ್ಜವನೇ ನೀ ನೋಡೀ | ಮಂತ್ರಮೂಲದಿಂದ ಮೇಲು ಮಾಡಿ | ಅಲ್ಲಿಇಳೆಯಾಣ್ಮನನ ಚಿಂತೆ ಮಾಡಿ | ಸರ್ವಅಲಂಕಾರ ದಿಂದೊಡಗೂಡೀ | ಆಹನೆಲೆಸೀಹ ಕೃಷ್ಣನ್ನ | ಒಲಿಸೆ ಭಕ್ತಿಯಿಂದಸ್ಥಳ ತನ್ನ ಅರಮನೆ | ಯೊಳು ಕೊಟ್ಟು ಸಲಹುವ 5 ನಿತ್ಯ ಸ್ತವನ | ಆಹಇಂಬಿಟ್ಟು ಸ್ತೋತ್ರದಿ | ಉಂಬುಡುವೋ ಸರ್ವಬಿಂಬನೋಳರ್ಪಿಸಿ | ಸಂಭ್ರಮದಲ್ಲಿರು 6 ಮಧ್ವ ಸರೋವರ ಸ್ನಾನ | ಭಕ್ತಿಶುದ್ಧದಿ ಶ್ರೀಕೃಷ್ಣಧ್ಯಾನ | ಮಾಡೆಹೃದ್ಯನು ಹೃದ್ಯದಿಷ್ಠಾನ | ದಲ್ಲಿಸಿದ್ಧಿಸೂವನು ಗುಣ ಪೂರ್ಣ | ಆಹಮುದ್ದು ಕೃಷ್ಣನು ಗುರು | ಗೋವಿಂದ ವಿಠಲನುಶ್ರದ್ಧೆ ಸತ್ವಕ್ಕೊಲಿವ | ಸಿದ್ಧ ಕನಕನ ನೋಡಿ 7 ತೀರ್ಥ ಕ್ಷೇತ್ರ ಮಾಲಾ 1952 ರಲ್ಲಿ ಇಡೀ ಭರತ ವರ್ಷದಲ್ಲಿ ಪ್ರದಕ್ಷಿಣಾಕಾರವಾಗಿ ಹೊರಟು ಆಸೇತು ಹಿಮಾಚಲ ಪರ್ಯಂತವಿರುವ ಅನಂತ ತೀರ್ಥ ಕ್ಷೇತ್ರಗಳಲ್ಲಿ ಈ ಅಲ್ಪಾಧಿಷ್ಠಾನದ ಯೋಗ್ಯತಾಪ್ರಕಾರ ಬಿಂಬನು ಮಾಡಿ ಮಾಡಿಸಿದ ಯಾತ್ರಾ ಪ್ರಕರಣವೂ, ಮತ್ತೆ, 1954 ರಲ್ಲಿ ಉಡುಪಿ ಇತ್ಯಾದಿ ಪಶ್ಚಿಮ ಕ್ಷೇತಗಳ ಮತ್ತು 1957 ರಲ್ಲಿ ಮಲಖೇಡದಲ್ಲಿ ಬೃಹತೀ ಸಹಸ್ರವಾದಾಗ ಆಕಡೆ ಹೋದಾಗ ನೋಡಿದ ಅನೇಕ ಕ್ಷೇತ್ರಗಳ ಮತ್ತು 1961 ರಲ್ಲಿ ಸ್ವಾದಿ, ದ್ವಾರಕ, ಪುಷ್ಕರ, ಬದರಿ (ದ್ವಿತೀಯಾವರ್ತಿ) ಹೋಗಿ ಬಂದಾಗ ನೋಡಿದ ಯಾತ್ರಾ ಪ್ರಕರಣಗಳ ಜ್ಞಾಪಕಾರ್ಥವಾಗಿ ಈ ತೀರ್ಥಕ್ಷೇತ್ರಮಾಲಾ ಅಸ್ಮದ್ಗುರ್ವಂತರ್ಗತ ಬಿಂಬ ಮೂರುತಿ ಪ್ರೇರಿಸಿದಂತೆ ಬರೆಯಲ್ಪಡುತ್ತೆ :-
--------------
ಗುರುಗೋವಿಂದವಿಠಲರು
ಕ್ಷೇತ್ರ ಮೇಲುಕೋಟೆ ಹರಿಯ ಕಂಡೆನು ಗಿರಿಯದೊರೆಯ ಕಂಡೆನು ಪ. ತರಳನನ್ನು ಪೊರೆಯಲೋಸುಗ ನರಮೃಗಾವತಾರನಾದಅ.ಪ. ತಿರುನಾರಾಯಣಪುರದ ಗಿರಿಯ ಶಿಖರದಿ ಚರಣತಲದಿ ತಿರುಕಲ್ಯಾಣಿ ಮೆರೆಯುತಿರಲು ಹರುಷದಿಂದ ಹರಿಯ 1 ದಾಸರಾದರ ಹೃದಯಾ ವಾಸನೆನಿಸುವ ವಿನುತ ಚರಣ ಭಾಸುರಾಂಗ ದೋಷಹರಣ ಹರಿಯ 2 ನಾಗವೈರಿಯ ರೂಪನಾಗೆ ಮೆರೆಯುವ ಯೋಗಪಟ್ಟಿಯಾಂತು ಪರಮ ಯೋಗನಿಷ್ಟೆಯಲ್ಲಿ ಕುಳಿತ ಹರಿಯ 3 ದುಷ್ಟದೈತ್ಯರಂ ಕುಟ್ಟಿ ಕೆಡಹಿದ ಮುಟ್ಟಿಭಜಿಪ ಭಕ್ತರೆಲ್ಲರ ಕಷ್ಟಕಳೆದು ಇಷ್ಟವೀವ ಹರಿಯ 4 ಶೇಷಗಿರಿಯೊಳು ಮತ್ತಾ ಮೇಲುಕೋಟೆಯೊಳ್ ಶೇಷಭೂತರಾಶೇಷ ಭಕ್ತರ ಪೋಷಿಸುತ್ತಿಹ ಸರ್ವೇಶನೀತನೆ ಹರಿಯ 5
--------------
ನಂಜನಗೂಡು ತಿರುಮಲಾಂಬಾ