ಒಟ್ಟು 1634 ಕಡೆಗಳಲ್ಲಿ , 98 ದಾಸರು , 1319 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಸುಕು ತೆಗೆದರೆ ಬೆನ್ನಲ ನಾಲಗೆ ಇದರಹೆಸರು ಬಲ್ಲವರುಂಟೆ ಪೇಳಿರಿ ಜನರೆ ಪ.ಸತ್ತಿಗೆ ತಲೆಯವಳು ನೆತ್ತಿಲಿ ಬಾಲದವಳುಕತ್ತಿನ ಕೆಳಗೆ ಕಪ್ಪಿನ ಕೊಪ್ಪಿನವಳುಸುತ್ತೇಳು ಮೈಗೆರಡು ಜೋಡು ಬಂಗಾರಸೃಷ್ಟಿಯೊಳಗೆ ಇದರ ಹೆಸರ ಬಲ್ಲವರುಂಟೆ 1ಜಡೆ ಮೆರಗುವ ಬಾಲೆ ಒಡಲೊಳಗೆ ಕರುಳಿಲ್ಲಬಿಡದೆ ಪಟ್ಟಾವಳಿಯುಟ್ಟು ಬಲ್ಲವಳುಅಡವಿಯೊಳಗೆ ಪುಟ್ಟಿ ಪಡೆದಳು ದೇಹವಪೊಡವಿಯೊಳಗೆ ಇದರ ಹೆಸರು ಬಲ್ಲವರುಂಟೆ 2ಬೇರಾಗಿ ಬೆರಳೈದು ಮೂರು ತಾನೊಂದಾಗಿಯಾರು ಕಂಡರು ಎಂದು ನಸುನಗುತಸೇರಿದ ಭಕುತರ ಪೊರೆವ ರಂಗಯ್ಯನಸೇರಿ ಮೆಚ್ಚಿಸಿಕೊಳ್ಳೊ ಪುರಂದರವಿಠಲ 3
--------------
ಪುರಂದರದಾಸರು
ಮೂಡ ಬಲ್ಲನೆ ಜ್ಞಾನ - ದೃಢ ಭಕುತಿಯ ?ಕಾಡ ಕಪಿ ಬಲ್ಲುದೇ ಮಾಣಿಕದ ಬೆಲೆಯ ? ಪ.ಕೋಣ ಬಲ್ಲುದೆ ವೇದಗಳನೋದಿ ಪಠಿಸಲೇಕೆಗೋಣಿ ಬಲ್ಲುದೆ ಎತ್ತಿನಾ ದುಃಖವಪ್ರಾಣ ತೊಲಗಿದ ಹೆಣವು ಕಿಚ್ಚಿಗಂಜಬಲ್ಲುದೆಕ್ಷೋಣಿಯೊಳು ಕುರುಡ ಬಲ್ಲನೆ ಹಗಲು - ಇರಳ ? 1ಬಧಿರ ಕೇಳುವನೆ ಸಂಗೀತವನು ಪಾಡಿದರೆ ?ಚದುರ ಮಾತುಗಳಾಡುವನೆ ಮೂಕನು ?ಕ್ಷುದೆಯಿಲ್ಲದವನು ಅಮೃತಾನ್ನವನು ಸವಿಯುವನೆ ?ಮಧುರ ವಚನವ ನುಡಿವನೇ ದುಷ್ಟ ಮನುಜ 2ಅಜ ಬರೆದ ಬರಹವನು ತೊಡೆಯಬಲ್ಲನೆ ಜಾಣ?ನಿಜಭಕುತಿ ಮುಕುತಿ ಸುಖವನ್ನು ಕೊಡುವಭುಜಗೇಂದ್ರಶಯನ ಶ್ರೀ ಪುರಂದರವಿಠಲನಭಜಿಸಲಕ್ಕರಿಯದವ ಕಡು ಪಾಪಿ ಮನುಜ 3
--------------
ಪುರಂದರದಾಸರು
ಮೋಕ್ಷೋಪಾಯಕಾನಂದ ಮುನೀಂದ್ರನಶಿಕ್ಷಾ ಮಾರ್ಗಹುದಯ್ಯಲಕ್ಷ್ಷ್ಯಶ:ಲಕ್ಷಣವಾರ್ಹೇಳೇನುಲಕ್ಷದಿ ಗುಣವಿಲ್ಲಯ್ಯ ಪ.ಸುಕೃತತಾನಾದರೆ ಚಿರಕಾಲಕೆ ಒಮ್ಮೆಧಿಕೃತವಾಹುದು ಭವತುಷ್ಟಿಸುಖವೆಂಬುದು ಸ್ವರೂಪಾನಂದಾನುಭವವಿಕಸವಾಗುವ ಜ್ಞಾನದೃಷ್ಟಿ ಆಸುಖವಾಪೇಕ್ಷಿಸಿ ಪ್ರಕೃತವುದಾಸಿಪದಖಿಳ ಮಹಾತ್ಮರಭೀಷ್ಟಿಸಕಳಾನಿಷ್ಟವ ಸಾಗಿಸುವ ಶ್ರೀಸುಖತೀರ್ಥರ ಶುಭಗೋಷ್ಟಿ 1ಕಿವಿಯಲಿ ಸತ್ಶಾಸ್ತ್ತ್ರವಕೇಳಿಧ್ಯಾನಮನನವ ಸಾಧಿಪುದೆ ದೇವಸಾರ್ಥಿಕುವಲಯಪ್ರಿಯಕುಲತಿಲಕನು ಮೆಚ್ಚಿಹನವಭಕುತಿಯಪಥಕೀರ್ತಿಅವಿರಳ ಎದೆಗದ್ದಿಗೆಯೊಳು ಮೆರೆವನಸವಿಗುಣ ನಿರ್ಣಯವಾರ್ತಿವಿವರಿಸಿ ವಾರಂವಾರ ವರದ ಮದ್ಧವ ಜಗದ್ಗುರು ವರಮೂರ್ತಿ 2ಈಶ್ವರ ಸಾಕ್ಷಾತ್ಕಾರದ ಭೇದರಹಸ್ಯ ವಿಚಾರವಂತಯೋಗಿನಶ್ವರಾನಶ್ವರವರಿತ ವೈರಾಗ್ಯದಐಶ್ವರ್ಯಾನ್ವಿತಭೋಗಿಶಾಶ್ವತ ಪ್ರತ್ಯಕ್ಷಾದಿ ತ್ರಿಪ್ರಮಾಣಭಾಷ್ಯಕ ಶ್ರೀಪದಯೋಗಿವಿಶ್ವದೊಡೆಯ ಪ್ರಸನ್ವೆಂಕಟಪತಿ ಪದವಿಶ್ವಾಸಿಕ ಮುನಿಯೋಗಿ 3
--------------
ಪ್ರಸನ್ನವೆಂಕಟದಾಸರು
ಯತಿಗಳು-ದಾಸರು72ವ್ಯಾಸರಾಯರ ದಿವ್ಯ ಪಾದಕಮಲವನು ಸೇವಿಸುವ ಭಕುತರಿಗೆಪನ್ನಗಶಯನನಪರಮಆಜÕದಿ ತಾನುಶಾಪಾನುಗ್ರಹ ಸಮರ್ಥಿಕೆಯುಳ್ಳ ಚೆಲುವ ನಿಜಸ್ನಾನವನು ಮಾಡಿ ಅಸಂಪ್ರಜ್ಞಾತ ಸಮಾಧಿಯಲಿನಾನಾಪರಿ ಗ್ರಂಥ ನ್ಯಾಯಾಮೃತ ಚಂದ್ರಿಕೆ-ಎರಡು ನಾಲ್ಕುಮಂದಿ ಪರಮಶಿಷ್ಯರು ಆದದಾನ ಮಾನವು ವ್ಯಾಖ್ಯಾನ ಸುಳಾದಿಗಳಮಧ್ವಮತವೆಂತೆಂಬೊ ಅಬ್ಧಿಯಲಿ ಚಂದ್ರನಂ-
--------------
ಗೋಪಾಲದಾಸರು
ಯತಿರತನತಿಮತಿಯುತನೆರÀತಿಪತಿಪಿತ ಸೇವಾರತನೆ ಮರುತಮತ ಭಕುತಿಪೂರಿತನೆನಾಥ ಸತ್ಯಾಭಿನುತ ನವ? ತೀರಥÀನೆ ಪ.ಶ್ರುತಿಸ್ಮøತಿಇತಿಹಾಸಾರ್ಥ ನೀಜ್ಞಾತತೆಗತಿ ಸಮರ್ಥಕ್ಷಿತಿಸತಿವಿತ್ತ ವಿರಹಿತನೆ ಮನ್ಮಥ ಜಿತಕಾಂತಿ ಶೋಭಿತನೆನೀತಿ ಚತುರತೆ ಸುವಿರತಿ ನಿಸ್ಸೀಮ ವಿಖ್ಯಾತ ರಘುಪತಿ ಅರ್ಚಿತ ಪಥಗಮ್ಯಸತತ ವಿದ್ವತ್ತ ಪ್ರತತಿಗೆ ವಿತ್ತರಣ ಶೂರೋನ್ಮತ್ತ ದುರ್ಮತ್ತಕಾಂತಾರಕುಠಾರ1ಧ್ಯಾನ ಮೌನ ಪೂರ್ಣ ಗಂಭೀರ ಗೀರ್ವಾಣ ವಾಣಿನಿರುತ ಉಚ್ಚಾರಜ್ಞಾನಿಜನರಿಗೆ ಘನ್ನಗುರುವೆ ನಿದಾನಗುಣಕಲ್ಪತರುವೆಮಾನಾಥನ ಪೂಜೆ ಮನ ಮನೆಯೊಳು ಮಾಡಿನೀಣ್ಯವಿನಾನೆಸದು ? ನಲಿನಲಿದಾಡಿದೀನಜನರಿಗೆ ತತ್ವಜ್ಞಾನಸುಧೆಯನುದಿನದೊಳೆರೆದೆ ಕಾಮಧೇನುವಿನಂತಯ್ಯ 2ತ್ರ್ರೇತಾ ಕ್ಷಿತಿಪರ್ಗೆ ಮಿಗಿಲೆನಿಸಿ ಶ್ರೀಸೀತಾಪತಿ ಅತಿಮುದಬಡಿಸಿಮತ್ತಮಾಯಿಮೊತ್ತಗಜಸಿಂಗ ನಿನ್ನಪ್ರತಿಎಂತೊ ಗುರುಕುಲೋತ್ತುಂಗಚಿತ್ತಜನಯ್ಯ ಪ್ರಸನ್ವೆಂಕಟೇಶ ಭಜನಶೀಲಸತ್ಯನಾಥಸುತ ಸತ್ಯಾಭಿನುತ ನವ? ತೀರಥನೆಸುತ್ತ ವಿಸ್ತರಿಸಿ ನಿನ್ನ ಕೀರ್ತಿ ದ್ಯುತಿಮಣಿಯಂತನ್ಯಥಾಗತಿಕಾಣೆನೆನ್ನ ರಕ್ಷಿಸಯ್ಯ ಪಿತನೆ3
--------------
ಪ್ರಸನ್ನವೆಂಕಟದಾಸರು
ಯಾತರ ಬಲ್ಲತನವೊ ಕೃಷ್ಣಯ್ಯ ನಿನಗ್ಯಾತರ ಬಲ್ಲತನವೊ ಪ.ಯಾತರ ಬಲ್ಲತನನಾಥರ ನಮ್ಮ ಸನಾಥರ ಮಾಡಿ ಸಂಪ್ರೀತಿಯ ಬಡಿಸದಿನ್ಯಾತರ 1ಬಿರುದಂತೆ ಭಕುತರ ಪೊರೆವುದು ಗಡ ನಿನ್ನಸ್ಮರಣೆಗೆ ಮರೆವಿತ್ತು ದುರಿತಕೊಪ್ಪಿಸುವುದಿನ್ಯಾತರ 2ಬಲ್ಲತನದ ಗುರುತೆಲ್ಲ ದೇಶದೊಳು ನನ್ನಲ್ಲಿ ಅಜ್ಞಾನದ ಬಳ್ಳಿಯ ತೊಡಕಿಸೂದ್ಯಾತರ 3ನಿಜರವಮಾನದ ಕುಜಕೆ ಪರಶುರಾಮತ್ರಿಜಗವಂದಿತ ನಿನ್ನ ಭಜಕರೊಳಿಡಲೊಲ್ಲದ್ಯಾತರ 4ದುರಿತಗಿರಿತ ಅರಿಗಿರಿಗಂಜೆ ನಾಮವಜ್ಜರವಿರೆ ಪ್ರಸನ್ವೆಂಕಟರಸ ಮನ್ನಿಸಲೊಲ್ಲದ್ಯಾತರ 5
--------------
ಪ್ರಸನ್ನವೆಂಕಟದಾಸರು
ಯಾತರಭಿಜÕತೆ ಯಾತರ ಭಕುತಿ ಶ್ರೀನಾಥಾಂಘ್ರಿ ವಿಮುಖಾದ ಸೂತಕಿಗಯ್ಯ ಪ.ಕಪಟನಾಟಕಸೂತ್ರಅನಂತಗುಣನಿತ್ಯತೃಪುತಮುಕುತನಿತ್ಯಸ್ವತಂತ್ರಗೆಉಪಾಧಿಸಗುಣನೆಂದನಾದಿ ನಿರ್ಗುಣನೆಂದುಉಪಾಸನೆವಿಡಿದ ಸೋಹಂಭಾವದವಗೆ 1ಅಪುಶಾಯಿಅಗಣಿತಆನಂದ ಬ್ರಹ್ಮಾದಿತಾಪಸರರಸ ಪುರುಷೋತ್ತಮಗೆಉಪಚಾರಕ್ಹರಿಯೆಂದು ಹರಕರ್ಮ ರವಿಗಣಾಧಿಪರೆ ಉತ್ತಮರೆಂಬ ಕಪಟಮಾನಿಸಗೆ 2ಪೂರ್ಣಪ್ರಜÕರ ಮತ ನವಭಕುತಿಗಳನಿರ್ಣಯದಲಿ ತರತಮವಿಲ್ಲದೆಅರ್ಣವಕಲಿತೇನಿನ್ನಾಕಾಶ ಚರಿಸೇನುಪೂರ್ಣ ಪ್ರಸನ್ವೆಂಕಟೇಶನೊಪ್ಪಿರದೆ 3
--------------
ಪ್ರಸನ್ನವೆಂಕಟದಾಸರು
ಯೋಗಿಬಂದ ಕಣೇ ಚಿದಾನಂದಯೋಗಿಬಂದ ಕಣೇಪೋಗಿ ಮಾಗಿಯು ವಸಂತ ಬಂದಂತೆತಾನಾಗಿ ಭಕುತ ಜನ ಹೃದಯದಾಗರಕೆಪಶಾಂತಕುಂಡಲಗಳನು ತೂಗುತಸ್ವಾಂತನಿರ್ಮಳ ಕೌಪವಸಂತಸದಲಿ ಬಗಿದಳವಡಿಸಿಯ ವಿ-ಶ್ರಾಂತ ಸುಭಸಿತವ ಪೂಸಿ ರಂಜಿಸುತಿಪ್ಪ1ನಿಷ್ಕಲ ಹೃದಯದಲಿ ಒಲೆಯುತಿಪ್ಪಪುಷ್ಕಲ ಜಪಮಾಲೆಯ ಮುಸುಕಿ ನಿಂದಲಿಮಹಾಪ್ರಳಯಂಗಳೆಣಿಸುತ್ತಪುಷ್ಕರಶತಕೋಟಿ ತೇಜನಾಚಿಸುತಿಪ್ಪಇಹಪರ ಪಾದುಕೆ ಮಾಡಿ ಮೆಟ್ಟುತಅಹಿಧರ ಬೆಳಗುತಲಿ ವಿಹಿತದಿಂದಲಿಬ್ರಹ್ಮಗಾನವ ಮಾಡಲು ವಿಷ್ಣುವಹಿಸೆ ಅಮೃತ ಕಳಶದ ಕಳೆಯಸೆಯಲು3ವಿವೇಕ ಧೈರ್ಯರೆಂಬ ಚಡಿಕಾರರುತಾನೆ ಮುಂಗಡೆಯಲಿರ್ದುಸಾವಧಾನದಿ ಪಥವಬಿಡಿಸು ತಿರಲು ಸರ್ವದೇವೆಂದು ಪೊಗಳಿದವಿಜಯಭಟ್ಟಾದೀಶಇಂತು ವೈಭವದಿಂದ ಚಿದಾನಂದನಿಂತ ನಿಜಸ್ಥಿರವಾ ಸಂತಸದಲ್ಲಿ ಕಂಡು ಸರ್ವವ ಮರೆತು ನಾನಂತು ಇಂತೆನಲೇನ ಆತ ತಾನಾಗಿರ್ದ5
--------------
ಚಿದಾನಂದ ಅವಧೂತರು
ರಂಗ ಬಾ ಮೋಹನಾಂಗ ಬಾ ದೇವೋತ್ತುಂಗ ಬಾರೆಂದು ಕರೆದಳುಗೋಪಿಪ.ಚೀರುತ ಬಂದ ಚಿನ್ನ ಹಸಿದನೆಂದುಘೃತಕ್ಷೀರವೆರೆಸಿ ಕೊಟ್ಟರೆ ಒಲ್ಲದೆಚೋರತನಕೆ ಮೆಚ್ಚಿ ಪೋಗುವೆ ನಿನ್ನನುದೂರುತ ನಿರುತ ಬಾಹರು ಗೋವಳೆಯರು 1ತುರುಗಾವೊ ನೆವದಲಿ ಪೋಗಿ ಗೋಪಾಲರಕುರುಳಿಗೆ ತುರದ ಬಾಲಕೆ ಗಂಟಿಕ್ಕಿದÀುರುಳತನಗಳನ್ನು ಮಾಡಿ ಮಾಡಿ ಮತ್ತ್ತೆಅರಿಯದಂತೆ ಬಿಕ್ಕಿ ಬಿರಿಯಬೇಡೆಲೆ ಕಂದ 2ಚೆಲ್ಲೆಗಂಗಳೆಯರ ಶಯನಕೆ ಪೊಂದಿಹನಲ್ಲರ ಬಡಿದೋಡಿ ಬರುತಲಿಹೆಸಲ್ಲದು ನಿನಗಿದು ಬಾಲಕತನದೊಳುಫುಲ್ಲಲೋಚನ ಮುದ್ದು ಗೋಪಾಲಕೃಷ್ಣ 3ಶಕಟ ಪೂತನಿತೃಣಾವರ್ತಮೊದಲಾದಶಕುತ ದನುಜರ ಮರ್ದನ ಕೃಷ್ಣಯ್ಯಭಕುತರ ಬವಣೆಯನಳಿಯದಿದ್ದರೆ ಗಡಸಕಲರುಜಾರಚೋರೆಂದು ಸಾರುವರೊ4ಎನ್ನ ಬೇಡು ನೀ ಮನದಣಿ ನೀಡುವೆಅನ್ಯರ ಮನೆಗೆ ಪೋಗಲಿ ಬೇಡವೊಚಿನ್ಮಯ ಮೂರುತಿ ಪ್ರಸನ್ವೆಂಕಟ ಕೃಷ್ಣನನ್ನಾಣೆ ಮನೆಯ ಬಿಟ್ಟಗಲದಿರೊ 5
--------------
ಪ್ರಸನ್ನವೆಂಕಟದಾಸರು
ರಥವಾನೇರಿದ ಯತಿವರನ್ಯಾರೇ ಪೇಳಮ್ಮಯ್ಯಾ ಪವಿತತ ಮಹಿಮಾ - ನತಜನರನತಿಹಿತದಿ ಪಾಲಿಸುವ - ಅತುಲ ಮಹಿಮ ಕಾಣಮ್ಮ ಅ.ಪಸ್ಮರಿಸುವ ಭಕುತರಪರಿ-ಪರಿಸಲಹುವನ್ಯಾರೇ ಪೇಳಮ್ಮಯ್ಯಾಗುರುವರ ರಾಘವೇಂದ್ರ ಕಾಣಮ್ಮಾ 1ಸ್ತುತಿಸುವ ಜನರಿಗೆ ಸತಿಸುತ ಸಂಪದ -ಮತಿರಹಿತರಿಗೆ ಸುಮತಿಯ ನೀಡುವನ -ಭೂತಳಜನನಾಥನೆನಿಸಿ ಮಹಾ -ಭೂತಿದಾಯಕ ರಾಘವೇಂದ್ರ ಕಾಣಮ್ಮಾ 2ಭೂತಪ್ರೇತ ಪಿಶಾಚ ಸುಮಹ -ಪಾತಕವನುಕುಲವೀತಿಹೋತ್ರಸುಖದೂತನೆನಿಪ ಗುರುರಾಯ ಕಾಣಮ್ಮ 3
--------------
ಗುರುಜಗನ್ನಾಥದಾಸರು
ರಾಮ ರಾಮಾಯೆಂದು ಮಾರುತಿಯು ನಡೆದು |ಸೋಮವದನೆ ಜಾನಕಿಯನು ಹುಡುಕಾ ಪಹರಿಯಿಂದ ಗುರುತು ಪಡೆದು ತನ್ನ ಶಿಖದಲಿ |ಧರಿಸಿಕೊಂಡತಿಶಯ ಭಕುತಿಯಲಿ ||ತೆರಳಿ ಮುಂದು ಮುಂದಕೆ ಕಡಲ ಸಮೀಪದಿ ವಾ- |ನರಾಧೀಶ ಮಾಡಿದ ವಾಸವನೂ1ರವಿಜನ ಭಯದಿಂದ ಕಪಿಗಳೆ- |ಲ್ಲವು ಎದೆಯನೊಡೆದು ನಗದೊಳು ಕುಳಿತಿರಲು ||ಪವನಜನು ಬಂದು ವಿಚಾರವ ಮಾಡಲು ಸಾಗ- |ರವ ದಾಟಲೊಬ್ಬಗೊಶವಲ್ಲವೆಂದರೆಲ್ಲರಲ್ಲಿ 2ನಮ್ಮನು ರಕ್ಷಿಸೋ ಕುಲಮಣಿಯೆ ವಾಸುದೇವನ |ಮೊಮ್ಮಗನೆ ಎಂದು ಕಪಿಗಳು ಯಾಚಿಸೆ ||ಗಮ್ಮನೆ ಹಾರಿ ರಕ್ಕಸಿ ಹೊಟ್ಟೆಯ ಹೊಕ್ಕು ದಾಟಿ ಮತ್ತೇ |ಒಮ್ಮೆ ಒಬ್ಬಳನ್ನು ಸೀಳಿ ಪುರಪ್ರವೇಶ ಮಾಡಿದ3ಗಿಡಗಿಡ ಚರಿಸುತ ಸ್ಥಳ ಸ್ಥಳದಲಿ ಬಲು |ಹುಡುಕುತ ಮೂಜಗ ಪೂಜಿತನ ||ಮಡದಿಯಾಕೃತಿಯನು ಕಾಣಲಾಕ್ಷಣದೊಳು |ತಡೆದನಲ್ಲಿಯೇ ಪದಗಳ ಮುಂದಕ್ಕಿಡದಲೇ4ಋಷಿಗಳಂದದಿ ಪ್ರಾಣೇಶ ವಿಠಲನೆನುತಿರೆ |ಶಶಿಮುಖಿಯಳು ಆಂಜನೇಯ ಪದ |ಬಿಸಜಾಂಘ್ರಿಗಳಿಗೆರಗಿ ಜಯ ಜಯವೆಂದು |ಉಸಿರಿದ ರಘುಪತಿಯ ಸುದ್ದಿ ವಿಸ್ತರದಲಿ 5
--------------
ಪ್ರಾಣೇಶದಾಸರು
ವಂದನೆ ಮಾಡಿರೈಗುರುವರದೇಂದ್ರರ ಪಾಡಿರೈ ಪಬಂದ ದುರಿತಗಳ ಹಿಂದೆ ಮಾಡಿ ಸುಖ |ತಂದುಕೊಡುವ ದಯಾಸಿಂಧುಯತೀಂದ್ರರ ಅ.ಪ.ಮರುತ ಮತಾಂಬುಧಿ ಸೋಮನೆನಿಪ ವಸುಧೇಂದ್ರ - ಸದ್ಗಣಸಾಂದ್ರ|ಗುರುಗಳಕರಕಮಲದಿ ಜನಿಸಿದ ಸುಕುಮಾರಾ - ಕುಜನ ಕುಠಾರಾ ||ನೆರೆನಂಬಿದ ಭಕುತರನನುದಿನದಲಿ ಪೊರೆವಾ - ದುರಿತವ ತರಿವಾ |ಧರೆಯೊಳು ತ್ಯಾಗದಿ ಕರ್ಣನ ಮರೆಸಿದ ನೋಡಿ - ವರಗಳ ಬೇಡಿ1ಕರಿಹಿಂಡೊಳುಹರಿಹೊಕ್ಕ ತೆರದಿ ವಾದಿಗಳ - ಕೀಳು ಮತಗಳ |ವರಶಾಸ್ತ್ರಗಳಲಿ ಗೆಲಿದು ಸುಬುದ್ಧಿಯ ವರದ - ಜಗದೊಳು ಮೆರೆದ ||ಶರಭಂಗವರದಚರಣಸರಸೀರುಹಭೃಂಗ- ವಿಷಯ ಅಸಂಗ |ಸ್ಮರಣೆಯ ಮಾಡೆ ಪಿಶಾಚ ರೋಗಗಳ ಭಯವೂ - ಮುಟ್ಟದಲಿಹವೂ 2ಸಾನುರಾಗದಲಿ ಶ್ರೀ ರಾಘವೇಂದ್ರರ ಸ್ತೋತ್ರ - ಮಾಳ್ಪ ಸುಪಾತ್ರ |ಜಾನಕಿಪತಿ ಆನಂದದೊಳಿವರಿಗೆ ಒಲಿವ - ಹೃದಯದಿ ಸುಳಿವ ||ದೀನ ದಯಾಳು ಅಪರಿಮಿತ ಮಹಿಮ ಗುಣಾಢ್ಯ - ವಾದದಿ ದಾಢ್ರ್ಯಾ |ಧ್ಯಾನಿಸೆ ಮನದೊಳು ಜ್ಞಾನ ಕೀರ್ತಿ ಸುಖ ಕೊಡುವ - ಅಘಗಳ ಕಡಿವ 3ವಿಷ್ಣುನ ಲೋಕ ಪ್ರವೇಶ ಮಾಡಿದ ಚರಿಯಾ - ಕೇಳಿರಿ ಪರಿಯಾ |ಶಿಷ್ಟ ಜನರು ವಿಶ್ವಾವಸು ನಾಮಕ ಅಬ್ದ - ಆಷಾಢ ಶುದ್ಧ ||ಷಷ್ಠಿಯು ಕುಜವಾಸರ ಉತ್ತರಾ ನಕ್ಷತ್ರಾ -ವರಪುಣ್ಯಕ್ಷೇತ್ರ |ನಟ್ಟ ನಡುವೆ ವೃಂದಾವನ ಮಧ್ಯದೊಳಿರುವಾ - ಸೌಖ್ಯವ ಸುರಿವಾ 4ಆನೆ ಹಂಡೆ ವಸನಗಳು ದ್ರವ್ಯವು ನಾನಾ - ಮಾಡಿದ ದಾನಾ |ಆ ನಗರದಿ ಬಹು ಮಂದಿಯು ಭಕುತಿಯಲಿಂದಾ - ಪೂಜಿಪ ಚಂದ ||ಸೂನುಪಡೆದು ಸುಖ ಪಡುವರು ಸರ್ವರುನಿತ್ಯ- ಈತನು ಸತ್ಯ |ನಾನೆಂತುಸಿರಲಿ ಪ್ರಾಣೇಶ ವಿಠಲನ ದಾಸಾ, ಮುನಿ ಉತ್ತಂಸಾ 5
--------------
ಪ್ರಾಣೇಶದಾಸರು
ವಂದಿಸಿದರ ಕಾವೆ ವರವನೀವೆ ಅಹಿಪವೀಂದ್ರಭವಸುರರಗುರುಮಧ್ವಮುನಿರಾಯಪ.ಒಂದೊಂದುಶ್ರುತಿಸ್ಮøತಿಗೆ ಬಹ್ವಾರ್ಥಗಳ ಪೇಳದೆಒಂದೆರಡು ತತ್ವವಿಸ್ತರವ ಪೇಳಿದೆಒಂದು ಮೂರವತಾರದಲ್ಲಿ ಹರಿಯನೆ ಒಲಿಸಿಒಂದು ನಾಲ್ಕರ ಭೇದ ನಿಜರಿಗರುಹಿದೆಯ 1ಒಂದೈದು ರಿಪುವರ್ಗ ನಿಗ್ರ್ರಹವ ಮಾಡಿಸಿದೆಒಂದಾರು ತ್ರಿಗುಣಿಸಿದ ಮತವ ಮುರಿದೆಒಂದೇಳು ಮದವ ಕಾಲಲಿ ಮೆಟ್ಟಿ ಹರಿಪುರಕೆಒಂದೆಂಟು ಭಕುತಿಪಥ ತೋರ್ದೆ ವೈಷ್ಣವರಿಗೆ 2ಒಂದು ಒಂಬತ್ತು ಹರಿಯವತಾರ ಕಥೆ ರಚಿಸಿಒಂದು ಹತ್ತೇಂದ್ರಿಯದ ಗೆಲವ ಕಳಿಸಿಒಂದು ಹನ್ನೊಂದು ಸ್ತೋತ್ರದಿ ಕೃಷ್ಣನ ಮೆಚ್ಚಿಸಿದೆಒಂದು ಹನ್ನೆರಡು ತತ್ವದಾಗ 3ಒಂದು ಹದಿಮೂರು ಭುವನಗಳಲ್ಲಿ ನೀ ವ್ಯಾಪ್ತಒಂದು ಹದಿನಾಲ್ಕು ದ್ವಿಗುಣಿಸಿದ ಮ್ಯಾಲೇಳೊಂದಿದ ಸದ್ಗ್ರಂಥಗಳ ನಿರ್ಮಿಸಿ ಬುಧರಿಗಿತ್ತೆಒಂದು ಹದಿನೈದು ಗುಣದ ಲಕ್ಷಣಾಂಗ 4ಒಂದು ಹದಿನಾರೆಂಟು ತತ್ವ ಸಿದ್ಧಾಂತದಲಿಒಂದು ಹದಿನೇಳು ಪರ್ವಮೋಹಕ ಬಿಡಿಸಿದೆಒಂದು ಮನದಿಂದ ಶಿರಿ ಪ್ರಸನ್ನವೆಂಕಟ ಕೃಷ್ಣನಒಂದೊಂದು ಗುಣಕೆ ಅನಂತ ವ್ಯಾಖ್ಯಾನ 5
--------------
ಪ್ರಸನ್ನವೆಂಕಟದಾಸರು
ವಂದಿಸಿದರೆ ವಂದ್ಯರು ಪೂಜಿತರು ಮುಕುಂದಗೋವಿಂದ ಶ್ರೀಹರಿಯನ್ನುಎಂದೆಂದು ಕುಂದದಾನಂದವೈದಿಸುವಇಂದಿರೆಯರಸ ಭವಬಂಧಮೋಚಕನ ಪ.ಹತ್ತಶ್ವಮೇಧಾವಭೃಥಸ್ನಾನ ಮಾಡಲುಮತ್ರ್ಯರ್ಗೆ ಪುನರ್ಜನ್ಮಗಳಿಲ್ಲವೊಸತ್ಯಭಾಮಾಧವನಿಗೆ ನಿಷ್ಕಾಮದಿ ನಮಿಸಿಮತ್ತೊಮ್ಮೆ ನಮಿಸೆ ಮುಕ್ತಿಗೆ ಸಾಧನ 1ಕೋಟಿಸಹಸ್ರ ತೀರ್ಥಗಳಲಿ ಮಿಂದುಕೋಟಿಸಹಸ್ರ ವ್ರತಗಳಾಚರಿಸೆಕೋಟಿ ಭಾಂತಕಗೆ ನಮಿಸಿದ ಫಲಕೆ ಸರಿ ಪಾಸಟಿಷೋಡಶಕಳೆಯೊಳೊಂದಲ್ಲ2ಹೇಳೆನೆ ಇಂದಾದರು ನಮಿಸಿ ಶ್ರೀಲೋಲಶಾಙ್ರ್ಗಪಾಣಿಯನಸಾಲು ಜನ್ಮದಘವ ಹಾಳುಮಾಡಿ ಮುಕ್ತಿಓಲಗಕೆ ಕರೆವ ವೈಷ್ಣವ ಜನರ 3ಉರಶಿರದೃಷ್ಟಿಲಿ ಮನವಾಚದಲಿಚರಣಕರಗಳಲಿ ಜಾನುಗಳಲಿಧರೆಯಲಿ ಅಷ್ಟಾಂಗಪ್ರಣಾಮ ಮಾಳ್ಪರ್ಗೆಹರಿದು ಹೋಗೆ ಪಾಪವರ ಮುಕ್ತಿಈವ4ಸರುವಾಂಗವ ಧರೆಗೊಂದಿಸಿ ಭಕುತಿಲಿಹೊರಳಾಡಿ ಭೂಮಿಲಿ ಪರವಶದಿಹರಿಗೆ ನಮಿಸಲು ಮೈಗೊರೆದ ಧೂಳಿಯ ಕಣಾಪರಿಮಿತ ಸಹಸ್ರಾಬ್ದ ಪರಮಾಣ ಪದವಕ್ಕು 5ಸಿರಿಅಜಭವೇಂದ್ರಸುರರುಮಹಾಮುನಿನಿಕರನೃಪಮನುಜೋತ್ತಮರೆಲ್ಲಪರಮಭಕುತಿಲಿ ನಮಿಸೆ ಹರಿವಶನಾಗುವಹರಿಜನಕೆ ಮುಕ್ತಿಪಥಕಿದೆ ಪಾಥೇಯ 6ಅರ್ಚಿತ ಕೃಷ್ಣನ ನೋಡುತಾನಂದಾಶ್ರುಹುಚ್ಚನಂತೆ ನಮಿಸಿ ನಗುತ ಸುರಿಸಿಅಚ್ಯುತಾನಂತ ಸದ್ಗುಣನಿಧಿ ಭಕ್ತಪ್ರಿಯನಿಚ್ಚಪ್ರಸನ್ವೆಂಕಟನೆಂದುಚ್ಚರಿಸಿ7
--------------
ಪ್ರಸನ್ನವೆಂಕಟದಾಸರು
ವಾಯುಕುಮಾರಗೆ ಮಂಗಳ - ರಘು - |ರಾಯಸೇವಕಗೆ ಮಂಗಳ ಪ.ಅಂಜನಿಗರ್ಭಸಂಜಾತಗೆ ಮಂಗಳ |ರಂಜಿತ ದಿವ್ಯ ಮೂರ್ತಿಗೆ ಮಂಗಳ ||ಮಂಜುಳ ಕೀರ್ತಿ ಮಾಹತ್ಮ್ಯಗೆ ಮಂಗಳ |ಸಂಜೀವರಾಯಗೆ ಮಂಗಳ 1ದನುಜನಿಕರ ಸಂಹಾರಗೆ ಮಂಗಳ |ಜಾನಕಿಶೋಕ ವಿನಾಶಗೆ ಮಂಗಳ ||ವನಧಿ ವಿರೋಧಿಗೆ ಮಂಗಳ ಜಯ |ಹನುಮವಿಲಾಸಗೆ ಮಂಗಳ 2ಸೇತುವೆಗಟ್ಟಿದಾತಗೆ ಮಂಗಳ |ಸೀತೆಯ ತಂದ ಬಂಟಗೆ ಮಂಗಳ ||ಖ್ಯಾತ ಪುರಂದರವಿಠಲನ ಕರುಣೆಗೆ |ಪಾತ್ರನಾದ ಭಕುತೆಗೆ ಮಂಗಳ 3
--------------
ಪುರಂದರದಾಸರು